ಬದಲಾವಣೆಗಳು

Jump to navigation Jump to search
ಚು
೧ ನೇ ಸಾಲು: ೧ ನೇ ಸಾಲು: −
{|
+
=ಪರಿಕಲ್ಪನಾ ನಕ್ಷೆ=
|-
+
=ಹಿನ್ನೆಲೆ/ಸಂದರ್ಭ=
|style="width:10%; border:none; border-radius:5px;box-shadow: 10px 10px 10px #888888; background:#f9f9ff; vertical-align:middle; text-align:center; "|
+
ಗ್ರಾಮೀಣ ಬದುಕಿನ ಅನಕ್ಷರಸ್ಥರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ `ಜನಪದ' ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ.
[http://karnatakaeducation.org.in/KOER/index.php/ಪ್ರವೇಶದ್ವಾರ:ಸಮಾಜ_ವಿಜ್ಞಾನ ‌ಸಮಾಜವಿಜ್ನ್ಞಾನ ಪ್ರವೇಶದ್ವಾರ]
+
 
|
+
ಈ ಜಾನಪದ ಪ್ರಕಾರವನ್ನು ಸಂಸ್ಕೃತಿಯ ಒಂದು ಭಾಗವೆಂದು ಭಾವಿಸಬೇಕಾಗಿರುವುದರಿಂದ ಇದರ ಉಳಿವು ನಮ್ಮ ಕೈಲಿದೆ. ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಈ ಪ್ರಕಾರದ ಜೀವಂತಿಕೆಗೆ ಶ್ರಮಿಸಬೇಕಾದ ಅಗತ್ಯವಿದೆ. ಅನೇಕ ಗ್ರಾಮೀಣ ಕಲೆ ಮತ್ತು ಆಚರಣೆಗಳು ಸಮಾಜದ ಮುಖ್ಯವಾಹಿನಿಗೆ ಬಾರದೆ ಎಲೆಮರೆಯ ಕಾಯಾಗಿ ಮರೆಯಲ್ಲಿಯೇ ಅಳಿದು ಹೋಗುತ್ತಿವೆ. ಅದರ ಸೊಗಡನ್ನು ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಇದರ ಸವಿಯನ್ನು ಉಳಿಸಿ ಉಣಬಡಿಸುವ ಗುರುತರವಾದ ಜವಾಬ್ದಾರಿಯು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ.
|
+
 
|style="width:10%; border:none; border-radius:5px;box-shadow: 10px 10px 10px #888888; background:#f9f9ff; vertical-align:middle; text-align:center; "|
+
=ಕಲಿಕೋದ್ದೇಶಗಳು=
[http://karnatakaeducation.org.in/KOER/en/index.php/Social_Science:_Question_papers ಇಂಗ್ಲಿಷ್ನಲ್ಲಿ  ನೋಡಲು ]
+
====ಪಾಠದ ಉದ್ದೇಶ====
|
+
#ಗ್ರಾಮೀಣ ಆಚರಣೆಗಳ ಪರಿಚಯ ಮತ್ತು ಅದರ ಮಹತ್ವವನ್ನು ತಿಳಿಯುವುದು
|
+
#ಜಾನಪದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅರ್ಥೈಸುವುದು
|}
+
#ವೈವಿಧ್ಯಮಯ ಆಚರಣೆಗಳ ಹಿನ್ನಲೆ ಮತ್ತು ಪ್ರಸ್ತುತ ಸ್ಥಿತಿಯನ್ನು ತಿಳಿಯುವುದು
 +
====ಭಾಷಾ ಕಲಿಕಾ ಗುರಿಗಳು====
 +
# ಮಾತುಗಾರಿಕೆ ಮತ್ತು ಚರ್ಚೆಯ ಮೂಲಕ ಜಾನಪದ ಆಚರಣೆಯ ಮಹತ್ವವನ್ನು ತಿಳಿಯುವುದು
 +
# ಗ್ರಾಮೀಣ ಪದಗಳಿಗೆ ಅಥವ ಕಠಿಣ ಪದಕ್ಕೆ ಅರ್ಥ ಹುಡುಕುವ ಮೂಲಕ ಅದರ ಅರ್ಥವನ್ನು ತಿಳಿಯುವುದು
 +
# ತಮ್ಮ ಊರಿನ ವಿಶೇಷ ಆಚರಣೆಯನ್ನು ಸಹವರ್ತಿಗಳೊಂದಿಗೆ ಸಂವಹನ ಮಾಡುವುದು
 +
# ಗ್ರಾಮೀಣ ಸಂಪ್ರದಾಯಗಳನ್ನು ತಿಳಿಯುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
 +
# ಗ್ರಾಮೀಣ ಸಂಪ್ರದಾಯದ ವರದಿಯ ರೂಪದಲ್ಲಿ ಲೇಖನವನ್ನು ಮರುಸೃಷ್ಟಿಸುವುದು
 +
 
 +
=ಕವಿ ಪರಿಚಯ =
 +
=ಶಿಕ್ಷಕರಿಗೆ ಟಿಪ್ಪಣಿ=
 +
'''ವೀರಗಾಸೆ'''
 +
 
 +
ವೀರಗಾಸೆಯು ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್ತು ಮಂದಿ ಇದರಲ್ಲಿ ಭಾಗವಹಿಸುವರು. ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ಬಳ್ಳಾರಿ ಜಿಲ್ಲೆಗಳಲ್ಲಿ ಈ ನೃತ್ಯ ಪ್ರಚಲಿತವಿದೆ. ತಾಳ, ಶ್ರುತಿ, ಚಮಾಳ (ಸಮ್ಮೇಳ ಸಂಬಾಳ), ಓಲಗ ಅಥವಾ ಮೌರಿ, ಕರಡೆವಾದ್ಯ- ಈ ಪಂಚವಾದ್ಯಗಳು ಇಲ್ಲಿ ಬಳಕೆಯಾಗುತ್ತವೆ. ಕರಡೆ - ಈ ಕುಣಿತದಲ್ಲಿ ಅನಿವಾರ್ಯ ವಾದ್ಯ ಎನಿಸಿದೆ.
 +
 
 +
ಪೌರಾಣಿಕ ಹಿನ್ನೆಲೆ
 +
 
 +
ಈ ಕಲೆಯ ಸೃಷ್ಟಿ ಹೇಗೆ ಬಂದಿತೆನ್ನುವುದಕ್ಕೆ ಜನಪದರ ಪೌರಾಣಿಕ ಕಥೆಯಿದೆ. ತಂದೆಯ ಮಾತನ್ನು ಮೀರಿ ಪಾರ್ವತಿ ಶಿವನನ್ನು ವರಿಸುತ್ತಾಳೆ. ಇದೇ ಕಾರಣವಾಗಿ ಪಾರ್ವತಿಯ ತಂದೆ ದಕ್ಷಬ್ರಹ್ಮ ಶಿವನನ್ನು ದ್ವೇಷಿಸತೊಡಗುತ್ತಾನೆ. ಹೀಗಿರುವಾಗ ದಕ್ಷಬ್ರಹ್ಮ ಆಚರಿಸಿದ ಯಾಗಕ್ಕೆ ಶಿವನೊಬ್ಬನನ್ನು ಹೊರತುಪಡಿಸಿ ಉಳಿದೆಲ್ಲ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ. ತನ್ನ ತಂದೆ ಉದ್ದೇಶಪೂರ್ವಕವಾಗಿ ಗಂಡನನ್ನು ಅವಮಾನಿಸಿದ್ದಾನೆಂದು ಭಾವಿಸಿದ ಪಾರ್ವತಿ ಉಗ್ರಳಾಗುವಳು. ನ್ಯಾಯ ಕೇಳುವ ಸಲುವಾಗಿ ಗಂಡನ ತಡೆಯನ್ನು ಉಲ್ಲಂಘಿಸಿ ತಂದೆಯ ಬಳಿಗೆ ಬರುತ್ತಾಳೆ. ಅಳಿಯನ ಮೇಲಿನ ಕೋಪದಿಂದ ಮಗಳೆಂಬ ಮಮತೆಯನ್ನೂ ತೊರೆದು ದಕ್ಷಬ್ರಹ್ಮ ಪಾರ್ವತಿಯನ್ನು ತಿರಸ್ಕಾರದಿಂದ ನಡೆಸಿಕೊಂಡದ್ದಲ್ಲದೆ ಅವಳೆದುರಿಗೆ ಶಿವನನ್ನು ನಿಂದಿಸುತ್ತಾನೆ; ಪತಿನಿಂದೆಯನ್ನು ಸಹಿಸಲಾಗದ ಪಾರ್ವತಿ ಅಗ್ನಿಕುಂಡದಲ್ಲಿ ಬಿದ್ದು ಪ್ರಾಣಾರ್ಪಣೆ ಮಾಡಿಕೊಳ್ಳುತ್ತಾಳೆ. ಈ ದುರ್ಘಟನೆಯಿಂದ ಕುಪಿತನಾದ ಶಿವ ಉಗ್ರನಾಗಿ ತಾಂಡವ ನೃತ್ಯದಲ್ಲಿ ತೊಡಗುತ್ತಾನೆ. ಕೋಪದಿಂದ ಹಣೆಯ ಬೆವರನ್ನು ಬೆರಳುಗಳಿಂದ ಬಾಚಿ ನೆಲಕ್ಕೆ ಅಪ್ಪಳಿಸುತ್ತಾನೆ. ಆಗ ನೂರೊಂದು ಆಯುಧಗಳನ್ನು ಧರಿಸಿದ ವೀರಭದ್ರನ ಅವತಾರವಾಗುತ್ತದೆ. ಮುಂದೆ ವೀರಭದ್ರ ದಕ್ಷಬ್ರಹ್ಮನ ಯಾಗಶಾಲೆಗೆ ಬಂದು ಅದನ್ನು ಹಾಳುಗೈಯುತ್ತಾನೆ. ಹೀಗೆ ವೀರಭದ್ರ ತೋರಿದ ಪ್ರತಾಪದ ಪ್ರತೀಕವೇ ವೀರಗಾಸೆ ಕುಣಿತ ಎಂದೂ ಅಂದಿನಿಂದ ಈ ಕಲೆ ಬೆಳೆದುಬಂದಿತೆಂದೂ ಕಲಾವಿದರ ಹೇಳಿಕೆ.
 +
[[File:Mahila Veeragase.jpg|thumb|right|200px|ಮಹಿಳಾ ವೀರಗಾಸೆ]]
 +
 
 +
ಆಚರಣೆ
 +
 
 +
ಸಾಮಾನ್ಯವಾಗಿ ಜಾತ್ರೆ ದೇವರ ಮೆರವಣಿಗೆ, ಹಬ್ಬ, ಹುಣ್ಣೆಮೆ, ವೀರಶೈವರ ಮದುವೆ, ಗೃಹ ಪ್ರವೇಶ ಮೊದಲಾದ ಸಂದರ್ಭಗಳಲ್ಲಿ ವೀರಗಾಸೆ ನಡೆಯುತ್ತದೆ.ವೀರಶೈವರಲ್ಲಿ ವೀರಭದ್ರನನ್ನು ಮನೆ ದೇವರಾಗಿ ನಂಬುವವರು ವೀರಗಾಸೆ ಮಾಡಿದಾಗ ಅದನ್ನು 'ಆಡಣಿ' ಎಂದು ಕರೆಯಲಾಗುತ್ತದೆ.ಇದು ಒಂದು ರೀತಿಯ ವೈಶಿಷ್ಠ್ಯ ಪೂರ್ಣವಾದ ಆಚರಣೆಯೇ ಆಗಿರುತ್ತದೆ. ಸಾಮಾನ್ಯವಾಗಿ ವೀರಭದ್ರ ದೇವರ ಒಕ್ಕಲಿನವರು ತಮ್ಮ ಹಿರಿಯ ಮಗನ ಮದುವೆಯಲ್ಲಿ ಮಾತ್ರ ವೀರಗಾಸೆಯನ್ನು ಮಾಡುತ್ತಾರೆ. ಆ ದಿವಸ ಐದು ಜನ ಮುತ್ತೈದೆಯರು ಮತ್ತು ಐದು ಜನ ಗಂಡು ಮಕ್ಕಳು ಉಪವಾಸವಿರುತ್ತಾರೆ. ಆ ದಿವಸ ಐದು ಜನ ಹೆಣ್ಣು ಮಕ್ಕಳಿಗೆ ಮತ್ತು ಗಂಡಸರಿಗೆ ಶಸ್ತ್ರ ಹಾಕುತ್ತಾರೆ. ಇದರ ಮೇಲೆ ಮದುಮಗ ಹಾಗೂ ಮುತ್ತೈದೆಯರು ಕೊಂಬಿ ದೇವರನ್ನು ತೆಗೆದುಕೊಂಡು ನಡೆಯುತ್ತಿರುತ್ತಾರೆ. ಹಾಗೆ ಹೋಗುವಾಗ ವೀರಭದ್ರ ದೇವರ ಹಾಗೂ ಹಲವು ದೇವರುಗಳ ಒಡಬುಗಳನ್ನು ಹೇಳುತ್ತಾರೆ. ದೇವಸ್ಥಾನ ಮುಂಬಾಗದಲ್ಲಿ ಒಂದು ಅಡಿ ಆಳ. ಒಂದು ಅಡಿ ಉದ್ದ ಹಾಗೂ ಎರಡು ಅಡಿ ಅಗಲದ ಗುಂಡಿಯನ್ನು ತೆಗೆದು ಅತ್ತಿ, ಆಲ, ಶ್ರೀಗಂಧ ಮರದ (ಪ್ರಸ್ತುತದಲ್ಲಿ ಗಂಧದ ಮರ ಇರುವುದಿಲ್ಲ) ಹತ್ತು ಹೊರೆ ಕಟ್ಟಿಗೆಗಳನ್ನು ಗುಂಡಿಗೆ ಹಾಕಿ ವೀರಗಾಸೆಯವರಿಂದ ಬೆಂಕಿಯನ್ನು ಹಚ್ಚಿಸುತ್ತಾರೆ, ಈ ಯಜ್ಞಕುಂಡದಲ್ಲಿ ಹಾಲುಕ್ಕಿಸಿ ಎಡೆಕೊಡುತ್ತಾರೆ. ಸ್ವಾಮಿಗಳು, ಪುರವಂತರು, ಮದುಮಕ್ಕಳು, ಮುತ್ತೈದೆಯರು ಯಜ್ಞಕುಂಡವನ್ನು ಹಾಯ‍್ದು ದೇವಸ್ಥಾನವನ್ನು ಪ್ರವೇಶಿಸುತ್ತಾರೆ. ಕೊಂಬಿ ದೇವರು ಈ ಆಚರಣೆಯಲ್ಲಿ ಬಹುಮುಖ್ಯವಾದುದು.
 +
 
 +
[[ಚಿತ್ರ:Viragase 01.jpg|thumb|ವೀರಗಾಸೆ]]
 +
 
 +
ವೇಷಭೂಷಣ
 +
 
 +
ವೀರಗಾಸೆ ಕುಣಿತದವರ ವೇಷ ಭೂಷಣಗಳು ಕಾಲಕಾಲಕ್ಕೆ ಬದಲಾಗುತ್ತಾ ಬಂದಿವೆ, ಕನಿಷ್ಠ ಎಂಟು ಅಥವಾ ಅದಕ್ಕೆ ಮೇಲ್ಪಟ್ಟ ಸಮ ಸಂಖ್ಯೆಯ ಕಲಾವಿದರು ತಲೆಗೆ ಪೇಟ, ಕಿವಿಗೆ ಕಡಕು,ಹಣೆಗೆ ವಿಭೂತಿ, ಕೊರಳಿಗೆ ರುದ್ರಾಕ್ಷಿ ಹಾಗೂ ನಾಗಾಭರಣ, ಎದೆಗೆ ವೀರಭದ್ರ ಸ್ವಾಮಿಯ ಹಲಗೆ, ಸೊಂಟಕ್ಕೆ ದಕ್ಷಬ್ರಹ್ಮನ ಶಿರ ಕಟ್ಟಿಕೊಳ್ಳುತ್ತಾರೆ. ಕೈಯಲ್ಲಿ ಕತ್ತಿ, ಕಾಲಿಗೆ ಕಡಗ ಮತ್ತು ಗೆಜ್ಜೆ ಮೈಗೆ ಕಾವಿ ಜುಬ್ಬ ಮತ್ತು ಕಾವಿಯ ಕಾಸೆಗಳಿರುತ್ತವೆ. ವೀರಶೈವರಿಗೆ ಮಾತ್ರ ವಿಶಿಷ್ಟವಾದ ಈ ಕಲೆ ಅವರ ವೇಷಭೂಷಣದಿಂದಲೇ ಈ ಹೆಸರು ಪಡೆದುಕೊಂಡಿದೇ ಎನಿಸುತ್ತದೆ. (ವೀರ+ಕಾಸೆ=ವೀರಗಾಸೆಯಾಗಿರುತ್ತದೆ) ಕಾಸೆ ಕಟ್ಟಿದವರೇ ಈ ಕಲೆಯ ಪ್ರಮುಖ ಕಲಾವಿದರು. ವೀರಗಚ್ಚೆಯೇ, ವೀರಕಾಸೆಯಾಗಿ ನಂತರ ವೀರಗಾಸೆಯಾಗಿರಬಹುದು ಎಂಬ ಅಭಿಪ್ರಾಯವೂ ಇದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಂಡುಬರುವ ಈ ವೀರಗಾಸೆಯ ವೇಷಭೂಷಣಗಳು ಪ್ರಾದೇಶಿಕತೆಗೆ ತಕ್ಕಂತೆ ಕೆಲವು ವ್ಯತ್ಯಾಸಗಳನ್ನು ಪಡೆದುಕೊಂಡಿವೆ. ಹಲವು ಕಡೆ ತಲೆಗೆ ಕೂದಲು ಮತ್ತು ರೇಷ್ಮೆದಾರದಿಂದ ತಯಾರಿಸಿದ ಚೌಲಿಯನ್ನು ಧರಿಸಲಾಗುತ್ತದೆ. ಕಾವಿ ಬಣ್ಣದ ಗರಿ ಅಂಚಿನ ಪೇಟವನ್ನು ತಲೆಗೆ ಸುತ್ತಿ, ಅದರ ಮುಂಭಾಗಕ್ಕೆ ಜಯ ಪಟ್ಟಿಯನ್ನು ಕಟ್ಟುತ್ತಾರೆ. ಸೊಂಟಕ್ಕೆ ಕಸೂತಿಗಳಿಂದ ಕೂಡಿದ ಕೆಂಪು ಬಣ್ಣದ ಜೊಲುಗಳಿದ್ದು, ಸೊಂಟದ ಎರಡು ಕಡೆ ಕಪ್ಪು ಬಣ್ಣದ ಚವರಿ ಕುಚ್ಚುಗಳಿರುತ್ತವೆ. ಸೊಂಟಕ್ಕೆ ಬಿಳಿ ಪಂಚೆಯನ್ನು ವೀರಗಚ್ಚೆಯಾಗಿ ತೊಡುತ್ತಾರೆ. ಕೆಂಪು ಬಣ್ಣದ ಪೈಜಾಮ, ಕಾಲಿಗೆ ಗೆಜ್ಜೆ, ಬಲಗೈಯಲ್ಲಿ ಮರದ ಖಡ್ಗ, ಕೊರಳಲ್ಲಿ ಬೆಳ್ಳಿಯ ಲಿಂಗದಕಾಯಿ (ಅಡ್ಗಾಯಿ) ಎಡಗೈಯಲ್ಲಿ ಕರವಸ್ತ್ರಗಳಿರುತ್ತವೆ. ಹಾಗೆಯೇ ಕೆಲವರ ಕೈಯಲ್ಲಿ ತ್ರಿಶೂಲಾಕಾರದ ಶಸ್ತ್ರಗಳಿರುವುದು ಉಂಟು. ಸಮಾಳೆ, ಮುಖವೀಣೆ, ಕಂಚಿನ ತಾಳಗಳು ಈ ಕಲೆಗೆ ಬೇಕಾದ ಮುಖ್ಯ ವಾದ್ಯ ಪರಿಕರಗಳು, ಕಾಸೆ ಕಟ್ಟುವವರು, ಎದೆಯ ಮೇಲೆ ಲಿಂಗಧಾರಣೆ ಮಾಡಬೇಕು. ಹೀಗೆ ವೇಷ-ಭೂಷಣವನ್ನು ಕಲಾವಿದರು ಧರಿಸಿಕೊಂಡು ಸಾಮೂಹಿಕ ನೃತ್ಯವನ್ನು ಅಟ್ಟಹಾಸದಲ್ಲಿ ಕೊಡಬಲ್ಲರು, ಹೀಗಾಗಿ ಈ ಕಲೆಯನ್ನು ಜನರು ಇದೊಂದು ಗಂಡು ಕಲೆ ಎಂದು ಗುರುತಿಸಿರುವರು. ಇತ್ತೀಚಿನ ದಿನಗಳಲ್ಲಿ ರಾಜ್ಯದ ಹೆಣ್ಣುಮಕ್ಕಳೂ ಈ ಕಲೆಯನ್ನು ಕರಗತಮಾಡಿಕೊಂಡು ಪ್ರದರ್ಶನ ನೀಡುವಲ್ಲಿ ಯಶಸ್ಸನ್ನು ಸಾಧಿಸಿರುವರು.
 +
[[ಚಿತ್ರ:Viragase 02.jpg|thumb|ವೀರಗಾಸೆಯ ಒಂದು ದೃಶ್ಯ]]
 +
 
 +
'''ಪ್ರದರ್ಶನ'''
 +
 
 +
ವೀರಗಾಸೆಯ ಪ್ರಕಾರದಲ್ಲಿ ಹಿರಿಯ ಕಲಾವಿದರು ಗಂಡಕ್ಷರಗಳಿಂದ ಕೂಡಿದ ಕನ್ನಡದ ಗದ್ಯ ಸಾಹಿತ್ಯದ ನುಡಿಗಟ್ಟನ್ನು ಆವೇಶಭರಿತರಾಗಿ ನುಡಿಯುತ್ತಾರೆ, ಇಂತಹ ಆವೇಶಭರಿತ ನುಡಿಗಟ್ಟುಗಳನ್ನು 'ಒಡಪು' ಅಥವಾ 'ಒಡಬು' ಗಳೆಂದು ಕರೆಯಲಾಗಿದೆ. ಇಂತಹ ಒಡಪು ಅಥವಾ ಒಡಬು ಸಾಹಿತ್ಯ ಹೇಗಿರುತ್ತದೆ ಎಂದರೆ
 +
 
 +
ಉದಾಹರಣೆಗೆ:- ಉಲ್ಲಾಸಭರಿತರಾಗಿ ಕುಳಿತಿರುವ ಎಲ್ಲಾ ಜನಗಳು ಸುಲಲಿತವಾಗಿ ಗುಲ್ಲುಮಾಡದೆ ನೀವು ಕೇಳಿರಿ,
 +
 
 +
ಅಹಹ ರುದ್ರಾ ಅಹಹಾ ದೇವಾ....... ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ.
 +
 
 +
ಈ ಕುಣಿತದಲ್ಲಿ ವೀರಭದ್ರನ ವರ್ಣನೆಯೇ ಪ್ರಧಾನವಾಗಿರುತ್ತದೆ. ವೀರಭದ್ರ ಹುಟ್ಟಿದ ಸಂದರ್ಭದ
 +
 
 +
ಒಂದು ವರ್ಣನೆ ಹೀಗಿದೆ:  
 +
 
 +
"ವೀರಭದ್ರದೇವರು ಹುಟ್ಟಿದ ರೂಪೆಂತೆಂದೊಡೆ, ಹುಟ್ಟಿದಾಗಲೆ ಹೂವಿನಗಾಸೆ, ಮಂಜುಳಗಾಸೆ, ಬ್ರಹ್ಮಗಾಸೆ, ವಿಷ್ಣುಗಾಸೆ, ರುದ್ರಗಾಸೆ, ಮೆಟ್ಟಿದ ಹೊನ್ನಾವಿಗೆ, ಸಾವಿರ ಶಿರ, ಮೂರು ಸಾವಿರ ನಯನ, ಎರಡು ಸಾವಿರ ಭುಜ, ಕೆಕ್ಕರಿಸಿದ ಕಣ್ಣು, ಜುಂಜುಮಂಡೆ ಇಂತಪ್ಪ ಶ್ರೀ ವೀರಭದ್ರ ದೇವರು ಹೋಮದ ಕುಂಡದ ಬಳಿಗೆ ಹೇಗೆ ಬರುತ್ತಾರೆಂದರೆ .........."
 +
 
 +
ಇಂತಹ ಒಡಪು-ಒಡಬುಗಳನ್ನು ಹೇಳಿದ ಬಳಿಕ ಸಮ್ಮಾಳದ (ಚರ್ಮ ವಾದ್ಯದ) ಹಾಗೂ ಕರಡೆಯ (ಚರ್ಮ ವಾದ್ಯ) ನುಡಿತಗಳು ಕಲಾವಿದರ ಕುಣಿತಕ್ಕೆ ಸ್ಪೂರ್ತಿ ನೀಡುತ್ತವೆ. ನಾಲ್ಕೈದು ಗತಿಗಳಿರುವ ವೀರಗಾಸೆಯ ಕುಣಿತದಲ್ಲಿ ಒಂದೊಂದು ಗತಿಯ ಕುಣಿತದ ಅನಂತರ ಯಾರಾದರೊಬ್ಬ ನರ್ತಕ ಒಡಪು ಹೇಳುತ್ತಾನೆ. ಒಡಪು ಮುಗಿಯುತ್ತಿದ್ದಂತೆ ವಾದ್ಯಗಳ ಭೋರ್ಗರೆತದೊಂದಿಗೆ ಮತ್ತೆ ಮುಂದಿನ ಗತಿಯ ಕುಣಿತ ಪ್ರಾರಂಭವಾಗುತ್ತದೆ. ಗತಿಯಿಂದ ಗತಿಗೆ ಕುಣಿತ, ಬಡಿತಗಳ ವೇಗ ಹೆಚ್ಚುತ್ತಾ ಹೋಗುತ್ತದೆ.
 +
 
 +
ಉಲ್ಲೇಖ:
 +
# `ಸಂಪಾದಕರು: ಗೊ.ರು.ಚನ್ನಬಸಪ್ಪ, ಕರ್ನಾಟಕದ ಜನಪದ ಕಲೆಗಳು, ಕನ್ನಡ ಸಾಹಿತ್ಯಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು, ಪುಟ: ೭೭-೭೮.
 +
 
 +
'''ಕಂಸಾಳೆ :'''
 +
[[File:Beesu Kamsale 01.JPG|thumb|ಬೀಸು ಕಂಸಾಳೆ]]
 +
ಶಿವ ಮತ್ತು ಶರಣರ ಮಹಿಮೆಗಳನ್ನು ಕಥಾರೂಪದಲ್ಲಿ ಹಾಡುತ್ತ ಒಂದು ವಿಶಿಷ್ಟ ಜಾನಪದ ಸಂಪ್ರದಾಯವನ್ನು ಬೆಳಸಿಕೊಂಡು ಬಂದಿದೆ ಕಂಸಾಳೆ ಪ್ರಾಕಾರ. ಕಂಸಾಳೆಯ ಕಲಾವಿದರು ಪ್ರಮುಖವಾಗಿ ಮೈಸೂರು ಜಿಲ್ಲೆಯ ಮಲೆ ಮಹದೇಶ್ವರನ ಭಕ್ತರು. ಮಂಡ್ಯ-ಬೆಂಗಳೂರು ಜಿಲ್ಲೆಗಳಲ್ಲೂ ವಿರಳವಾಗಿ ಕಾಣುತ್ತಾರೆ. ಜಾನಪದ ಸತ್ವವುಳ್ಳ ಕಥನಗೀತೆ, ಕಂಚಿನ ತಾಳಗಳ ವಿಶಿಷ್ಟವಾದ ಶಬ್ದ ಹಾಗೂ ಕಲಾವಿದರ ಕೈಚಳಕಗಳ ಸುಂದರ ಸಮ್ಮಿಳನದಿಂದಾಗಿ ಈ ಕಲೆ ವಿಸ್ಮಯಕಾರಕವಾಗಿ ಜನಮನವನ್ನು ತಣಿಸಿ ಶ್ರವಣಾನಂತವುಂಟುಮಾಡುತ್ತದೆ.
 +
 
 +
`ಕಂಸಾಳೆ’ ಎನ್ನುವುದು ಕಲಾವಿದರು ಕೈಯಲ್ಲಿ ಹಿಡಿಯುವ ಒಂದು ಬಗೆಯ ವಾದ್ಯ ವಿಶೇಷ. ಭಿಕ್ಷಾಪಾತ್ರೆಯಂತಿರುವ, ಮಧ್ಯೆ ದಾರದ ಕುಚ್ಚು ಕಟ್ಟಿದ, ಅಂಗೈ ಅಗಲದ ಮಿಶ್ರಲೋಹದ ಒಂದು ಬಟ್ಟಲು ಎಡಗೈಯಲ್ಲಿದ್ದರೆ, ಬಲಗೈಯಲ್ಲಿ ಮಟ್ಟಸವಾದ ತಾಳವಿರುತ್ತದೆ. ಮುಚ್ಚಳದ ನಡುವಿನ ಹೊರಭಾಗ ಉಬ್ಬಿರುತ್ತದೆ. ಆ ಉಬ್ಬಿನ ರಂಧ್ರದಿಂದ ಬಿಗಿದ ನೀಳವಾದ ದಾರ ಗೊಂಡೆಗಳಿಂದ ಅಲಂಕೃತವಾಗಿ ಬಲಗೈ ಮೇಲಿಂದ ಇಳಿಬಿದ್ದಿರುತ್ತದೆ.ಸಾಮಾನ್ಯವಾಗಿ ಕಂಸಾಳೆಯ ಮೇಳದಲ್ಲಿ ಮೂರು ಜನರಿರುತ್ತಾರೆ. ವೃತ್ತಿ ಗಾಯಕರಾದ ಕಂಸಾಳೆಯವರಿಗೆ ವಿಶೇಷವಾದ ವೇಷಭೂಷಣಗಳೇನೂ ಇರುವುದಿಲ್ಲ. ಸಾಧಾರಣವಾಗಿ ಅಂಗಿ, ಪಂಚೆ, ಹೆಗಲಲ್ಲಿ ಜೋಳಿಗೆ, ಕೊರಳಲ್ಲಿ ರುದ್ರಾಕ್ಷಿ, ಹಣೆಯಲ್ಲಿ ವಿಭೂತಿ, ಇವರಲ್ಲಿ ಇಬ್ಬರು ಏಕತಾರಿ ಕಂಜರ ಹಿಡಿದು ಹಿಮ್ಮೇಳದವರಾಗುತ್ತಾರೆ. ಇನ್ನೊಬ್ಬ ಮುಮ್ಮೇಳದವನಾಗಿ ನಡುವೆ ಕಂಸಾಳೆ ಹಿಡಿದು ಕುಳಿತಿರುತ್ತಾನೆ. ಎಡಗೈ ಬಟ್ಟಲನ್ನು ಮೇಲುಮುಖವಾಗಿ ಅಂಗೈ ಮೇಲೆ ಇರಿಸಿಕೊಂಡು. ಬಲಗೈಯ ಮೇಲು ತಾಳವನ್ನು ಕುಟ್ಟುವುದರಿಂದ ಕಂಚಿನ ಕಣಿ ಕಣಿ ನಾದ ಉಂಟಾಗುತ್ತದೆ. ವಿವಿಧ ಧಾಟಿಯ ವಿವಿಧ ತಾಳದ ಹಾಡುಗಳಿಗೆ ಈ ನಾದ ಮಧುರ ಹಿನ್ನಲೆಯಾಗುತ್ತದೆ. ಹಬ್ಬ ಹರಿದಿನಗಳಲ್ಲಿ, ಶಿವರಾತ್ರಿ-ನವರಾತ್ರಿ ಕಾಲದಲ್ಲಿ ಮಹದೇಶ್ವರನ ಜಾತ್ರೆ ಸಂದರ್ಭದಲ್ಲಿ ಕೈಯಲ್ಲಿ ಕಂಸಾಳೆ ಹಿಡಿದು, ಮಾದಯ್ಯನ ಕೋಲ (ನಾಗಬೆತ್ತ)ನ್ನು ಕಂಕುಳಲ್ಲಿಟ್ಟು ಕೊಂಡು, ಬುತ್ತಿಯ ಗಂಟನ್ನು ತಲೆಯ ಮೇಲಿಟ್ಟುಕೊಂಡು, ಯಾತ್ರೆ ಹೊರಡುವುದು ಮೈಸೂರು ಜಿಲ್ಲೆಯಲ್ಲಿ ಸಾಮಾನ್ಯ ದೃಶ್ಯ. ಮಲೆಯ ಮಹದೇಶನ ಜಾತ್ರೆಯಲ್ಲಿ ಕಂಸಾಳೆಯ ಪ್ರದರ್ಶನ ಕೇಂದ್ರವಾಗುತ್ತದೆ ಆ ಪ್ರದೇಶ. ಬೆಳದಿಂಗಳ ರಾತ್ರಿಯಲ್ಲಿ ಕಂಸಾಳೆಯ ಕಲಾವಿದರ ಹಲವಾರು ಗುಂಪುಗಳು ಅಲ್ಲಿ ಮೇಳ ನಡೆಸುತ್ತವೆ;
 +
 
 +
“ಕೂಗೋ ಕೂಗು ಮಾದೇವನ,
    +
ಕೂಗಿದರೆ ದುಂಡು ಮಾದೇವನ,
   −
=8ನೇ ತರಗತಿ ಪ್ರಶ್ನೆಪತ್ರಿಕೆಗಳು=
+
ಕೂಗಿದರೆ ಕುಣಿಯುತ್ತ, ಬರುವನ ಮಾದೇವನ,
==ಸಿ.ಸಿ.ಇ ಮೌಲ್ಯಮಾಪನ ಮಾದರಿಗಳು==
  −
==ವೆಬ್ ಲಿಂಕ್ ಗಳು==
  −
==ಜಿಲ್ಲಾವಾರು ಪ್ರಶ್ನೆಪತ್ರಿಕೆಗಳು ಮತ್ತು ಅಧ್ಯಯನ ಸಾಮಗ್ರಿಗಳು/ಟಿಪ್ಪಣಿಗಳು:2013 - 14 ==
     −
'''ಚಿಕ್ಕಮಗಳೂರು'''
+
ಕೂಗಯ್ಯ ಮುದ್ದು ಮಾದೇವನ”
   −
ಮಹದೇವಪ್ಪ ಕುಂದರಗಿ ಸರ್,GHS ಅವಥಿ,ಚಿಕ್ಕಮಗಳೂರು ಇವರು ಹಂಚಿಕೊಂಡಿರುವ ಪ್ರಶ್ನೆಪತ್ರಿಕೆಯನ್ನು ವೀಕ್ಷಿಸಲು[http://karnatakaeducation.org.in/KOER/images1/e/ed/8ನೇ_ತರಗತಿ_ಮೊದಲನೇ_ಸೆಮಿಸ್ಟರ್_ಪ್ರಶ್ನೆ_ಪತ್ರಿಕೆ.odt ಇಲ್ಲಿ ಕ್ಲಿಕ್ಕಿಸಿ]
+
ಎಂಬತಹ ಸೊಲ್ಲುಗಳ ಹಿನ್ನಲೆಯಲ್ಲಿ ಕಂಚಿನ ತಾಳದ ಶಬ್ದ ಕರ್ಣಾನಂದವನ್ನುಂಟುಮಾಡುತ್ತದೆ.
   −
==ಜಿಲ್ಲಾವಾರು ಪ್ರಶ್ನೆಪತ್ರಿಕೆಗಳು ಮತ್ತು ಅಧ್ಯಯನ ಸಾಮಗ್ರಿಗಳು/ಟಿಪ್ಪಣಿಗಳು 2012 - 13 ==
+
ಕಂಸಾಳೆಯ ಕಲಾವಿದರಲ್ಲಿ ಮಹದೇಶ್ವರನ ಹುಟ್ಟು, ಬಾಲ್ಯ, ಬಾಲಲೀಲೆ, ಯೌವನ, ವಿನೋದ, ವಿರಸ, ಮುಪ್ಪು, ಮಹಿಮೆಗಳು ಕಂಠಸ್ಥವಾಗಿ ನಿಂತಿವೆ. ಈ ಕಾವ್ಯವನ್ನು ಇಡೀ ರಾತ್ರಿ ಹಾಡಿ ತಣಿಸುವ ಅವರ ಕಲೆಗಾರಿಕೆ ಮೆಚ್ಚುವಂತಹುದು, ಇದಲ್ಲದೆ ಕಲಾವಿದರು ಪಿರಿಯಾಪಟ್ಟಣದ ಲಾವಣಿ, ಸಾರಂಗಧರ, ಚೆನ್ನಿಗರಾಮ, ಘನಪತಿರಾಯ, ಬಾಲನಾಗಮ್ಮ, ಅರ್ಜುನ ಜೋಗಿ ಮುಂತಾದ ಜನಪದ ಕಥಾ ಪ್ರಸಂಗಗಳನ್ನೂ ಹಾಡುತ್ತಾರೆ. ಜನಪದ ಬೆಳಸಿಕೊಂಡು ಬರುತ್ತಿರುವ ಇವರ ಕಲೆ ಜಾನಪದ ಕ್ಷೇತ್ರದ ದೊಡ್ಡ ನಿಧಿಗಳಲ್ಲೊಂದಾಗಿದೆ.
'''ಹಾವೇರಿ'''
  −
# ರವಿ ಆಹೇರಿ ಸರ್,GHS ಕೊಣನಕೇರಿ,ಹಾವೇರಿ ರವರು ಹಂಚಿಕೊಂಡಿರುವ 8th 2ನೇ ಸಂಕಲನಾತ್ಮಕ ಮೌಲ್ಯಮಾಪನದ ಪ್ರಶ್ನೆ ಪತ್ರಿಕೆ ಮತ್ತು - ಬ್ಲೂ ಪ್ರಿಂಟ್ ವೀಕ್ಷಿಸಲು [http://8thcce.blogspot.com/2014/02/8-2.html  ಈ ಲಿಂಕನ್ನು ಕ್ಲಿಕ್ಕಿಸಿ]<br>
     −
=9ನೇ ತರಗತಿ ಪ್ರಶ್ನೆಪತ್ರಿಕೆಗಳು=
+
ಕಂಸಾಳೆಯ ಕಲಾಪ್ರಕಾರಗಳಲ್ಲಿ `ಬೀಸುಕಂಸಾಳೆ’ಯು ವಿಶಿಷ್ಟ ಶೈಲಿಯದು. ಚಮತ್ಕಾರ, ಶ್ರಮ ಎರಡೂ ಒಟ್ಟಿಗೆ ಸೇರಿ ಅಭಿವ್ಯಕ್ತವಾಗುವ ಈ ಪ್ರದರ್ಶನಕ್ಕೆ ನಾಲ್ಕು ಜನ ಬೇಕು, ಒಬ್ಬಾತ ಮಧ್ಯೆ ಇದ್ದು ತಾಳಕ್ಕೆ ತಕ್ಕಂತೆ ತಲೆಯ ಮೇಲೆ, ಬೆನ್ನ ಹಿಂದೆ, ಕಾಲು ಕೆಳಗೆ, ಕುಳಿತು, ನಿಂತು, ಬಾಗಿ ಬಳುಕಿ, ಉರುಳಾಡಿ, ಸುತ್ತ ನಿಂತ ಮೂವರಿಗೆ ತಾಳಗಳನ್ನು ಕೊಡುತ್ತ, ನಿರ್ದಿಷ್ಟ ಲಯದಲ್ಲಿ ಬೀಸು ಕಂಸಾಳೆಯನ್ನು ಪ್ರದರ್ಶಿಸುತ್ತಾನೆ. ಹೀಗೆ ಆರಂಭವಾದ ಪ್ರದರ್ಶನ ಪರಾಕಾಷ್ಠೆಗೆ ಹೋದಾಗ ನಾಲ್ಕು ಜೊತೆ ಕಂಸಾಳೆಗಳ ತಾಳದ ಕಂಚಿನ ಸ್ವರ, ಮಿಂಚಿನ ವೇಗದ ಕೈ ಚಳಕ ನೋಟಕರನ್ನು ಮೂಕವಿಸ್ಮಯರನ್ನಾಗಿ ಮಾಡುತ್ತದೆ. ಎಷ್ಟೇ ಚುರುಕಿನಿಂದ ಕಲೆ ನಡೆದರೂ ಎಲ್ಲೂ ತಾಳ ತಪ್ಪದಂತೆ ಎಚ್ಚರ ವಹಿಸುವ ಕಲಾವಿದರ ಪರಿಪೂರ್ಣ ಕುಶಲತೆ ನಿಜಕ್ಕೂ ಸೋಜಿಗ ಪಡುವಂಥದು. ಗಾಯಕರು `ಲಿಂಗ ಬಾ, ಮುದ್ದು ಲಿಂಗ ಬಾ, ನಮ್ಮ ಮುದ್ದು ಮಾದಯ್ಯನ ಲಿಂಗ ಬಾ’-ಎಂಬ ಹಾಡನ್ನು ಲಯಬದ್ಧವಾಗಿ ತಾಳದೊಂದಿಗೆ ಹೊಂದಿಸಿಕೊಂಡೇ ಹಾಡುತ್ತಾರೆ.
==ಸಿ.ಸಿ.ಇ ಮೌಲ್ಯಮಾಪನ ಮಾದರಿಗಳು==
+
<gallery>
 +
File:Beesu Kamsale 01.JPG|ಬೀಸು ಕಂಸಾಳೆ
 +
File:Beesu Kamsale 02.JPG|ಬೀಸು ಕಂಸಾಳೆ
 +
File:Beesu Kamsale 03.JPG|ಬೀಸು ಕಂಸಾಳೆ
 +
</gallery>
 +
ಡೊಳ್ಳುಕುಣಿತವು ಶಕ್ತಶಾಲಿಗಳ ಕಲೆ. ಅಪಾರವಾದ ದೈಹಿಕಬಲ, ಪ್ರತಿಭೆ ಮತ್ತು ಪರಿಶ್ರಮಗಳನ್ನು ಬಯಸುವ ಕಲೆಯು, ಮೊದಲಿನಿಂದಲೂ ಗಂಡಸರಿಗೆ ಮೀಸಲಾಗಿತ್ತು. (ಈಚೆಗೆ ಕೆಲವು ಮಹಿಳೆಯರು ಧಾರ್ಮಿಕ ಆಚರಣೆಯೆನ್ನುವುದಕ್ಕಿಂತ ಹೆಚ್ಚಾಗಿ, ಆಕರ್ಷಕವಾದ ಕಲೆಯೆಂದು ಇದರಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಡೊಳ್ಳುಕುಣಿತವು ಕರ್ನಾಟಕದ ಅತ್ಯಂತ ಜನಪ್ರಿಯವೂ ಪ್ರಸಿದ್ಧವೂ ಆದ ಕಲೆಗಳಲ್ಲಿ ಒಂದು. ಡೊಳ್ಳುಕುಣಿತ ಮತ್ತು ಅದರ ಸಂಗಾತಿಕಲೆಗಳು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಆಚರಣೆಯಲ್ಲಿವೆ. ಬಿಜಾಪುರ, ಬಾಗಲಕೋಟೆ, ಬೆಳಗಾಂ, ರಾಯಚೂರು, ಬಳ್ಳಾರಿ, ಗುಲ್ಬರ್ಗ, ಶಿವಮೊಗ್ಗ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಈ ಕಲೆಗಾಗಿ ಹೆಸರುವಾಸಿಯಾಗಿವೆ. ಈ ಕಲೆಯನ್ನು ಸಾಂಪ್ರದಾಯಿಕವಾಗಿ ಕುರುಬರ ಸಮುದಾಯದೊಂದಿಗೆ ಗುರುತಿಸುತ್ತಾರೆ. ಆದರೆ, ಉಪ್ಪಾರರು ಮತ್ತು ಪರಿವಾರ ನಾಯಕರು ಕೂಡ ಇದರಲ್ಲಿ ಭಾಗವಹಿಸುತ್ತಾರೆ. (ಕಡಿಮೆ ಪ್ರಮಾಣದಲ್ಲಿ) ಡೊಳ್ಳುಕುಣಿತವು ನರ್ತನ, ಸಂಗೀತ ಮತ್ತು ಕುರುಬರ ಸಮುದಾಯ ಹಾಗೂ ಅವರ ದೇವರುಗಳಿಗೆ ಸಂಬಂಧಿಸಿದ ಕಥೆಗಳ ಹಾಡುವಿಕೆಗೆ ಮೀಸಲಾದ ಸಂಯೋಜಿತ ಕಲೆ. ಡೊಳ್ಳುಗಳನ್ನು ಬಡಿಯುವುದು ಇದರ ಮುಖ್ಯವಾದ ಭಾಗ.
   −
H S ರಾಮಚಂದ್ರಪ್ಪ ಸರ್, GHS TGಹಳ್ಳಿ,ದಾವಣಗೆರೆ ಇವರು ಹಂಚಿಕೊಂಡಿರುವ ಪಾಠ ಯೋನೆಯನ್ನು ವೀಕ್ಷಿಸಲು [http://karnatakaeducation.org.in/KOER/images1/9/9f/Cce_based_9ನೇ_ತರಗತಿ_ಪಾಠ_.pdf ಈ ಲಿಂಕನ್ನು ಕ್ಲಿಕ್ಕಿಸಿ]
+
ಹಳ್ಳಿಗಳಲ್ಲಿ ಹಬ್ಬಹರಿದಿನಗಳಲ್ಲಿ ಹಾಗೂ ವಾರ್ಷಿಕ ಜಾತ್ರೆಗಳಲ್ಲಿ ಡೊಳ್ಳುಕುಣಿತವನ್ನು ಪ್ರದರ್ಶಿಸುತ್ತಾರೆ. ಇದು ಹಲವು ಪೀಳಿಗೆಗಳಿಂದ ಆಚರಣಾತ್ಮಕ ಕಲೆಯಾಗಿ ಬೆಳೆದುಬಂದಿದೆ. ಕನ್ನಡದ ಹತ್ತು ಹಲವು ಪ್ರಾಚೀನ ಸಾಹಿತ್ಯಕೃತಿಗಳು ಮತ್ತು ಇತರ ಗ್ರಂಥಗಳಲ್ಲಿ ಈ ಕಲೆಯ ಪ್ರಸ್ತಾಪವಿದೆ.
   −
==ವೆಬ್ ಲಿಂಕ್ ಗಳು==
+
'''ಡೊಳ್ಳು ಕುಣಿತ'''
==ಜಿಲ್ಲಾವಾರು ಪ್ರಶ್ನೆಪತ್ರಿಕೆಗಳು ಮತ್ತು ಅಧ್ಯಯನ ಸಾಮಗ್ರಿಗಳು/ಟಿಪ್ಪಣಿಗಳು:2013 - 14 ==
  −
==ಜಿಲ್ಲಾವಾರು ಪ್ರಶ್ನೆಪತ್ರಿಕೆಗಳು ಮತ್ತು ಅಧ್ಯಯನ ಸಾಮಗ್ರಿಗಳು/ಟಿಪ್ಪಣಿಗಳು:2012 - 13 ==
  −
'''ಚಿಕ್ಕಮಗಳೂರು'''
  −
#[http://karnatakaeducation.org.in/KOER/images1/3/3c/Social_9th_Question_paper.odt ಬಸವರಾಜ್ ನಾಯಕ್ ಸರ್,GHS ಬಗ್ಗವಲ್ಲಿ,ತರೀಕೆರೆ,ಇವರು ಹಂಚಿಕೊಂಡಿರುವ ಪ್ರಶ್ನೆಪತ್ರಿಕೆಯನ್ನು ವೀಕ್ಷಿಸಲು]
  −
'''ಕೊಪ್ಪಳ'''
  −
#ಭೀಮಪ್ಪ ಸಾವಳಗಿ ಸರ್,GHS ಮುಸ್ಟೂರು ರವರು ಹಂಚಿಕೊಂಡಿರುವ ಪ್ರಶ್ನೆಪತ್ರಿಕೆಯನ್ನು ವೀಕ್ಷಿಸಲು[http://karnatakaeducation.org.in/KOER/images1/8/82/9th_midterm_exam_13-14.odt ಈ ಲಿಂಕನ್ನು ಕ್ಲಿಕ್ಕಿಸಿ]<br>
     −
'''ಹಾವೇರಿ'''
+
ಈ ಕಲಾಪ್ರದರ್ಶನದಲ್ಲಿ ಮುಖ್ಯ ಪಾತ್ರವನ್ನು ವಹಿಸುವ ಚರ್ಮವಾದ್ಯ. ಅವುಗಳನ್ನು ಬೇರೆ ಬೇರೆ ಆಕೃತಿಗಳು ಮತ್ತು ಗಾತ್ರಗಳಲ್ಲಿ ತಯಾರಿಸುತ್ತಾರೆ. ಕುರುಬರು ಬಳಸುವ ಡೊಳ್ಳುಗಳು ಬಹಳ ದೊಡ್ಡವು. ಅದನ್ನು ತಾಳೆ, ಸುರಹೊನ್ನೆ, ಬೇವು, ಬೈನೆ, ಮಾವು ಮುಂತಾದ ಗಟ್ಟಿಯಿಲ್ಲದ ಮರಗಳ  ಕಾಂಡದಿಂದ ತಯಾರಿಸುತ್ತಾರೆ. ಕೊಳವೆಯಾಕಾರದ (ಸಿಲಿಂಡರ್) ಟೊಳ್ಳು ಕಾಂಡವನ್ನು ಸಂಪೂರ್ಣವಾಗಿ ತೆಗೆದುಕೊಂಡು ಅದರೊಳಗಿನ ಅಳಿದುಳಿದ ತಿರುಳನ್ನು ತೆಗೆದುಹಾಕುತ್ತಾರೆ. ಈ ಕೊಳವೆಯು ಸುಮಾರು 24-30 ಅಂಗುಲ ಉದ್ದ ಮತ್ತು 18 ಅಂಗುಲ ವ್ಯಾಸವನ್ನು ಹೊಂದಿರುತ್ತದೆ. ಈ ಡ್ರಮ್ಮಿನ ಎಡ ಮತ್ತು ಬಲ ಬದಿಗಳನ್ನು ಅನುಕ್ರಮವಾಗಿ ಮೇಕೆ ಮತ್ತು ಕುರಿಗಳ ಚರ್ಮದಿಂದ ಗಟ್ಟಿಯಾಗಿ ಕಣಿಕಣಿ ಎನ್ನುವಂತೆ ಮುಚ್ಚುತ್ತಾರೆ. ಈ ಡೊಳ್ಳನ್ನು ಹಗ್ಗ ಅಥವಾ ಕಂಬಳಿಗಳ ನೆರವಿನಿಂದ ಬಾರಿಸುವವನ ಸೊಂಟಕ್ಕೆ ಕಟ್ಟಲಾಗುತ್ತದೆ. ಡೊಳ್ಳಿನ ಬಲಬದಿಗೆ ಔಡಲೆಣ್ಣೆಯ ಲೇಪನವನ್ನು ಮಾಡುವುದರಿಂದ ವಿಶಿಷ್ಟವೂ ನಾದಮಯವೂ ಆದ ಧ್ವನಿ ಬರುತ್ತದೆ. ಡೊಳ್ಳಿನ ಬಲಬದಿಯನ್ನು ಬಡಿಯಲು ಗುಣಿ ಎಂಬ ಕೋಲನ್ನು ಬಳಸಿದರೆ, ಎಡಬದಿಯನ್ನು ಎಡಗೈಯಿಂದಲೇ ಬಡಿಯುತ್ತಾರೆ. ಸುಮಾರು ಹದಿನೆಂಟು ಅಂಗುಲ ಇರುವ ಗುಣಿಯನ್ನು ಸಾಮಾನ್ಯವಾಗಿ ಬಿದಿರಿನಿಂದ ಮಾಡಿರುತ್ತಾರೆ. ಕುರುಬರ ದೇವರಾದ ಬೀರೇದೇವರನ್ನು ಪೂಜಿಸುವಾಗ ಬಳಸುವ ಡೊಳ್ಳು ಇನ್ನೂ ಡೊಡ್ಡದಾಗಿರುತ್ತದೆ.  
# ರವಿಆಹೇರಿ ಸರ್,GHS ಕೊಣನಕೇರಿ,ಹಾವೇರಿ ರವರು ಹಂಚಿಕೊಂಡಿರುವ 9th 2ನೇ ಸಂಕಲನಾತ್ಮಕ ಮೌಲ್ಯಮಾಪನದ ಪ್ರಶ್ನೆ ಪತ್ರಿಕೆ ಮತ್ತು - ಬ್ಲೂ ಪ್ರಿಂಟ್ ವೀಕ್ಷಿಸಲು [http://9thcce.blogspot.in/2014/02/srchttpsonedrive.html ಈ ಲಿಂಕನ್ನು ಕ್ಲಿಕ್ಕಿಸಿ]<br>
     −
=10ನೇ ತರಗತಿ ಪ್ರಶ್ನೆಪತ್ರಿಕೆಗಳು 2015-16=
+
ಡೊಳ್ಳುಕುಣಿತದಲ್ಲಿ ಭಾಗವಹಿಸುವ ಕಲಾವಿದರ ಸಂಖ್ಯೆಯು ಹತ್ತರಿಂದ ಇಪ್ಪತ್ತರವರೆಗೆ ಇರುತ್ತದೆ. ಡೊಳ್ಳು ಬಾರಿಸುವವರ ಸಂಖ್ಯೆಗೆ ಯಾವ ಮಿತಿಯೂ ಇಲ್ಲ. ಡೊಳ್ಳುಗಳಲ್ಲದೆ ತಾಳ ಮತ್ತು ಕೊಳಲುಗಳನ್ನೂ ಬಳಸುತ್ತಾರೆ. ತಾಳ-ಕೊಳಲುಗಳನ್ನು ನುಡಿಸುವವರು ಒಟ್ಟು ಪ್ರದರ್ಶನದ ಲಯವನ್ನು ನಿಯಂತ್ರಿಸುತ್ತಾರೆ. ಪ್ರದರ್ಶನದ ಪ್ರಾರಂಭದಲ್ಲಿ ಡೊಳ್ಳುವಾದಕರು ವೃತ್ತಾಕಾರದಲ್ಲಿ ಸಮಾನವಾದ ಶೈಲಿ ಮತ್ತು ಎತ್ತರಗಳಲ್ಲಿ (ಪಿಚ್) ಬಾರಿಸತೊಡಗುತ್ತಾರೆ. ಕ್ರಮೇಣ ಡೊಳ್ಳುಬಡಿತದ ಶಬ್ದವು ತಾರಕಕ್ಕೆ ಏರುತ್ತದೆ. ಡೊಳ್ಳುವಾದಕರು ನಿಧಾನವಾಗಿ ಕುಣಿತದ ಇನ್ನೊಂದು ಹಂತವನ್ನು ತಲುಪುತ್ತಾರೆ. ಕುಣಿತದಲ್ಲಿ ವೈವಿಧ್ಯವು ಕಾಣಿಸಿಕೊಳ್ಳುತ್ತದೆ. ಕುಣಿತ-ಬಡಿತಗಳ ಬಗೆಗಳು ಮುಗಿದ ನಂತರ, ಡೊಳ್ಳುಬಡಿತವು ನಿಂತು ಹಾಡುವಿಕೆಯು ಮೊದಲಾಗುತ್ತದೆ. ತಂಡದ ನಾಯಕನು ಕೈಯಲ್ಲಿ ತಾಳಗಳನ್ನು ಹಿಡಿದು ವರ್ತುಲದ ಮಧ್ಯೆ ನಿಲ್ಲುತ್ತಾನೆ. ಅವನು ಹಾಡುವಿಕೆಯನ್ನು ನಿಯಂತ್ರಿಸುತ್ತಾನೆ.
[[:File:model question paper -1.pdf]]
     −
=10ನೇ ತರಗತಿ ಪ್ರಶ್ನೆಪತ್ರಿಕೆಗಳು 2014-15=
+
ಸಂಗೀತಗಾರರ ತಂಡದಲ್ಲಿ ಗಾಯಕನ ಸಂಗಡ ಡೊಳ್ಳು, ತಾಳ ಮತ್ತು ಚೌಗಡಿಗಳನ್ನು ನುಡಿಸುವ ವಾದಕರಿರುತ್ತಾರೆಉಳಿದವರು ಹಾಡುವಿಕೆಯಲ್ಲಿ ನೆರವಾಗುತ್ತಾರೆ. ಈ ಹಾಡುಗಳು ಪೌರಾಣಿಕವಾದ ಕಥನವೋ ಅಥವಾ ದೇವರನ್ನು ಹೊಗಳುವ ಗೀತೆಗಳೋ ಆಗಿರುತ್ತವೆ. ಅವುಗಳಲ್ಲಿ ಕೆಲವಕ್ಕೆ ನೀತಿಕಥೆಯ ನೆಲೆಗಳೂ ಇರುತ್ತವೆ. ‘ಹಾಲುಮತ ಪುರಾಣ’, ‘ಅನಸೂಯ ಪುರಾಣ’, ‘ಪಾಂಡವರ ಪದ’, ‘ಮಾರ್ಕಂಡೇಯ ಚರಿತೆ’ ಮತ್ತು ‘ನಿಂಬೆಕ್ಕನ ಪದ’ಗಳು ಈ ಗಾಯಕರು ಹಾಡುವ ಪದಗಳಲ್ಲಿ ಕೆಲವು. ಅವೆಲ್ಲವನ್ನೂ ‘ಡೊಳ್ಳಿನ ಪದಗಳು’ ಎಂದೇ ಕರೆಯುತ್ತಾರೆ. ‘ಬೀರಲಿಂಗೇಶ್ವರನ ಪದ’ವು ಬಹಳ ಜನಪ್ರಿಯವಾದ ಹಾಡು. ಈಚೆಗೆ ಡೊಳ್ಳುಕುಣಿತದ ಪ್ರದರ್ಶನಗಳನ್ನು ಸಾಕ್ಷರತಾಪ್ರಚಾರ ಮುಂತಾದ ಸರ್ಕಾರೀ ಕಾರ್ಯಕ್ರಮಗಳ ಪ್ರಚಾರಕ್ಕಾಗಿಯೂ ಬಳಸಿಕೊಳ್ಳುತ್ತಿದ್ದಾರೆ.      
#[http://karnatakaeducation.org.in/KOER/index.php/ಚಿತ್ರ:X_QP.odt  ದಾನಮ್ಮ ಝಳಕಿ  ಅವರು ಹಂಚಿಕೊಂಡಿರುವ  ಸಿ ಸಿ ಇ ಗೆ ಅನುಗುಣವಾದ 2014-15 ಸಾಲಿನ  S.S.L.C. ಮಾದರಿ  ಪ್ರಶ್ನೆ ಪತ್ರಿಕೆ]
+
[[File:Dollu-kunitha.jpg|thumb|ಡೊಳ್ಳುಕುಣಿತ]]
#[http://karnatakaeducation.org.in/KOER/index.php/ಚಿತ್ರ:Weightage.odt  ದಾನಮ್ಮಝಳಕಿ ಅವರು ಹಂಚಿಕೊಂಡಿರುವ  ಉದ್ದಿಷ್ಟಗಳಿಗನುಸಾರವಾಗಿ ಅಂಕಗಳ ಹಂಚಿಕೆ]
  −
#[http://karnatakaeducation.org.in/KOER/index.php/ಚಿತ್ರ:Lesson_wise_weightage_.odt ಪಾಠಗಳಿಗನುಸಾರವಾಗಿ ಮಾದರಿ ಚಟುವಟಿಕೆಗಳು]ಶ
  −
#[http://karnatakaeducation.org.in/KOER/index.php/ಚಿತ್ರ:Blue_print_.odt ದಾನಮ್ಮ  ಝಳಕಿ  ಅವರು ಹಂಚಿಕೊಂಡಿರುವ  SSLC ನೀಲನಕ್ಷೆ]
  −
#[http://karnatakaeducation.org.in/KOER/index.php/ಚಿತ್ರ:MODEL_QP1.odt ದಾನಮ್ಮ  ಝಳಕಿ  ಅವರು ಹಂಚಿಕೊಂಡಿರುವ  ಮಾದರಿ ಪ್ರಶ್ನೆ ಪತ್ರಿಕೆ]
  −
#[http://karnatakaeducation.org.in/KOER/index.php/ಚಿತ್ರ:MODEL_QP_2_.odt ದಾನಮ್ಮ  ಝಳಕಿ  ಅವರು ಹಂಚಿಕೊಂಡಿರುವ  ಮಾದರಿ ಪ್ರಶ್ನೆ ಪತ್ರಿಕೆ]
  −
#[http://karnatakaeducation.org.in/KOER/images1/c/c0/ಸಮಾಜ_ವಿಜ್ಞಾನ_ಮಾದರಿ_ಪ್ರಶ್ನೆ_ಪತ್ರಿಕೆ.pdf ಶರಣಬಸಪ್ಪ ಎಲ್ ಸಹಶಿಕ್ಷಕರು, ಗುಂಡಾ ಸಿಂಧನೂರು ತಾ ರಾಯಚೂರು ಜಿ ಕಳುಹಿಸಿದ ಮಾದರಿ ಪ್ರಶ್ನೆಪತ್ರಿಕೆ]
  −
#[http://karnatakaeducation.org.in/KOER/images1/3/34/ಸಮಾಜ_ವಿಜ್ಞಾನ_ಮಾದರಿ_ಪ್ರಶ್ನೆ_ಪತ್ರಿಕೆ.-2.pdf ಶರಣಬಸಪ್ಪ ಎಲ್ ಸಹಶಿಕ್ಷಕರು,ಗುಂಡಾ ಸಿಂಧನೂರು ತಾ ರಾಯಚೂರು ಜಿ ಕಳುಹಿಸಿದ ಮಾದರಿ ಪ್ರಶ್ನೆಪತ್ರಿಕೆ]
  −
#[http://karnatakaeducation.org.in/KOER/images1/b/bc/Narayana_D_16-12-2014_Passing_Package_PDF_1.pdf ನಾರಾಯಣ ಡಿ ಸಹಶಿಕ್ಷಕರು ಯರೇಚಿಕ್ಕನಹಳ್ಳಿ ದಾವಣಗೆರೆ -ಜಿ ಅವರು ಕಳುಹಿಸಿದ ಮಾದರಿ ಪ್ರಶ್ನೆಪತ್ರಿಕೆ]
  −
#[http://karnatakaeducation.org.in/KOER/index.php/ಚಿತ್ರ:Important_social_science_quesstions.odt  ೧೦ ನೇ ತರಗತಿ ಪ್ರಶ್ನಾಪತ್ರಿಕೆ ಮತ್ತು ಉತ್ತರಗಳು]
  −
#[http://karnatakaeducation.org.in/KOER/index.php/ಚಿತ್ರ:Model_question_paper_(Rachana_3_Training)_.odt ಕೆ ಎಸ್ ರಾಮಚಂದ್ರ ಸಹಶಿಕ್ಷಕರು ಗೋಪಗುಂಡನಹಳ್ಳಿ , ದಾವಣಗೆರೆ ಅವರು ಕಳುಹಿಸಿದ ಮಾದರಿ ಪ್ರಶ್ನೆ ಪತ್ರಿಕೆ]
  −
#[http://karnatakaeducation.org.in/KOER/images1/1/12/10-FA-3_%26_4_SS.pdf ಭೀಮಪ್ಪ ಎಮ್ ಎಸ್ ಸಹಶಿಕ್ಷಕರು ಸರಕಾರಿ ಪದವಿ ಪೂರ್ವ ಕಾಲೇಜ್ ಶಿಕಾರಿಪುರ ಅವರು ವೇದಿಕೆಗೆ ಹಂಚಿಕೊಂಡ ಸಾಧನ ಪರೀಕ್ಷೆ ೩ ಮತ್ತು ೪ ಪ್ರಶ್ನೆಪತ್ರಿಕೆಗಳು]
  −
#[http://karnatakaeducation.org.in/KOER/images1/c/cd/10th_SS_-FA-3_%26_4_Blue_print_2014-15.pdf ಭೀಮಪ್ಪ ಎಮ್ ಎಸ್ ಸಹಶಿಕ್ಷಕರು ಸರಕಾರಿ ಪದವಿ ಪೂರ್ವ ಕಾಲೇಜ್ ಶಿಕಾರಿಪುರ ಅವರು ವೇದಿಕೆಗೆ ಹಂಚಿಕೊಂಡ ಸಾಧನ ಪರೀಕ್ಷೆ ೩ ಮತ್ತು ೪ ಪ್ರಶ್ನೆಪತ್ರಿಕೆಯ ನೀಲಿನಕ್ಷೆ]
  −
#[http://karnatakaeducation.org.in/KOER/index.php/ಚಿತ್ರ:10_impartent_question_and_answer_blue_print_12.odt#file ಮಹಮ್ಮದ್ ರಿಯಾಜ್ ಶಿಕ್ಷಕರು ಸರಕಾರಿ ಪ್ರೌಢಶಾಲೆ,ಬೆಳ್ತಂಡಗಿ ದಕ್ಷಿಣ ಕನ್ನಡ ಅವರು ವೇದಿಕೆ ಹಂಚಿಕೆ ಮಾಡಿದ ಉತ್ತರ ಸಹಿತ ಪ್ರಶ್ನಾಕೋಠಿ]
  −
#[http://karnatakaeducation.org.in/KOER/index.php/ಚಿತ್ರ:Dk_Dist_ouestion_paper1.odt ಮಹಮ್ಮದ್ ರಿಯಾಜ್ ಶಿಕ್ಷಕರು ಸರಕಾರಿ ಪ್ರೌಢಶಾಲೆ,ಬೆಳ್ತಂಡಗಿ ದಕ್ಷಿಣ ಕನ್ನಡ ಅವರು ವೇದಿಕೆ ಹಂಚಿಕೆ ಮಾಡಿದ ಜಿಲ್ಲಾ ಹಂತದ ೧೦ ನೇ ತರಗತಿಯ ಪೂರ್ವಸಿದ್ಧಾತ ಪರೀಕ್ಷೆಯ ಪ್ರಶ್ನೆಪತ್ರಿಕೆ]
  −
#[http://karnatakaeducation.org.in/KOER/index.php/ಚಿತ್ರ:Dk_Dist_ouestion_paper1.odt ಶರಣಬಸಪ್ಪ ಎಲ್ ಗುಡೂರು  ಸಶಿ ಸರಕಾರಿ ಪ್ರೌಢ ಶಾಲೆ ಗುಂಡ,ತಾ : ಸಿಂಧನೂರು  ಜಿ : ರಾಯಚೂರು  ಅವರು ವೇದಿಕೆ ಹಂಚಿಕೆ ಮಾಡಿದ ಸಿಂಧನೂರು ತಾಲೂಕಾ ಮಟ್ಟದ ರಸಪ್ರಶ್ನೆಗಳು]
  −
#[http://karnatakaeducation.org.in/KOER/images1/f/f4/Model_question_paper_-3.pdf ರಚನಾ ತರಬೇತಿಯಲ್ಲಿ ಶಿಕ್ಷಕರು ತಯಾರಿಸಿದ ಪ್ರಶ್ನಾ ಪತ್ರಿಕೆ -  '''ಹರಿಶ್ಚಂದ್ರ. ಪಿ. ಸ.ಪ.ಪೂ.ಕಾ.ಬೆಳ್ಳಾರೆ,ಸುಳ್ಯ.ದ.ಕ]'''
  −
#[http://karnatakaeducation.org.in/KOER/images1/a/a5/Model_question_paper_-9.pdf ರಚನಾ ತರಬೇತಿಯಲ್ಲಿ ಶಿಕ್ಷಕರು ತಯಾರಿಸಿದ ಪ್ರಶ್ನಾ ಪತ್ರಿಕೆ- '''ಹರಿಶ್ಚಂದ್ರ. ಪಿ. ಸ.ಪ.ಪೂ.ಕಾ.ಬೆಳ್ಳಾರೆ,ಸುಳ್ಯ.ದ.ಕ]'''
  −
#[http://karnatakaeducation.org.in/KOER/images1/7/70/Model_question_paper_-_1.pdf ರಚನಾ ತರಬೇತಿಯಲ್ಲಿ ಶಿಕ್ಷಕರು ತಯಾರಿಸಿದ ಪ್ರಶ್ನಾ ಪತ್ರಿಕೆ- '''ಹರಿಶ್ಚಂದ್ರ. ಪಿ. ಸ..ಪೂ.ಕಾ.ಬೆಳ್ಳಾರೆ,ಸುಳ್ಯ.ದ.ಕ]'''
  −
#[http://karnatakaeducation.org.in/KOER/images1/8/80/Model_question_paper-2.pdf ರಚನಾ ತರಬೇತಿಯಲ್ಲಿ ಶಿಕ್ಷಕರು ತಯಾರಿಸಿದ ಪ್ರಶ್ನಾ ಪತ್ರಿಕೆ- '''ಹರಿಶ್ಚಂದ್ರ. ಪಿ. ಸ.ಪ.ಪೂ.ಕಾ.ಬೆಳ್ಳಾರೆ,ಸುಳ್ಯ.ದ.ಕ]'''
  −
#[http://karnatakaeducation.org.in/KOER/images1/d/dd/Model_question_paper-4.pdf ರಚನಾ ತರಬೇತಿಯಲ್ಲಿ ಶಿಕ್ಷಕರು ತಯಾರಿಸಿದ ಪ್ರಶ್ನಾ ಪತ್ರಿಕೆ- '''ಹರಿಶ್ಚಂದ್ರ. ಪಿ. ಸ.ಪ.ಪೂ.ಕಾ.ಬೆಳ್ಳಾರೆ,ಸುಳ್ಯ.ದ.ಕ]'''
  −
#[http://karnatakaeducation.org.in/KOER/images1/f/f7/Model_question_paper-5.pdf ರಚನಾ ತರಬೇತಿಯಲ್ಲಿ ಶಿಕ್ಷಕರು ತಯಾರಿಸಿದ ಪ್ರಶ್ನಾ ಪತ್ರಿಕೆ- '''ಹರಿಶ್ಚಂದ್ರ. ಪಿ. ಸ.ಪ.ಪೂ.ಕಾ.ಬೆಳ್ಳಾರೆ,ಸುಳ್ಯ.ದ.ಕ]'''
  −
#[http://karnatakaeducation.org.in/KOER/images1/4/4c/Model_question_paper-7.pdf ರಚನಾ ತರಬೇತಿಯಲ್ಲಿ ಶಿಕ್ಷಕರು ತಯಾರಿಸಿದ ಪ್ರಶ್ನಾ ಪತ್ರಿಕೆ- '''ಹರಿಶ್ಚಂದ್ರ. ಪಿ. ಸ.ಪ.ಪೂ.ಕಾ.ಬೆಳ್ಳಾರೆ,ಸುಳ್ಯ.ದ.ಕ]'''
  −
#[http://karnatakaeducation.org.in/KOER/images1/f/ff/Model_question_paper-11.pdf ರಚನಾ ತರಬೇತಿಯಲ್ಲಿ ಶಿಕ್ಷಕರು ತಯಾರಿಸಿದ ಪ್ರಶ್ನಾ ಪತ್ರಿಕೆ- '''ಹರಿಶ್ಚಂದ್ರ. ಪಿ. ಸ.ಪ.ಪೂ.ಕಾ.ಬೆಳ್ಳಾರೆ,ಸುಳ್ಯ.ದ.ಕ]'''
  −
#[http://karnatakaeducation.org.in/KOER/images1/b/ba/Model_question_paper-12.pdf ರಚನಾ ತರಬೇತಿಯಲ್ಲಿ ಶಿಕ್ಷಕರು ತಯಾರಿಸಿದ ಪ್ರಶ್ನಾ ಪತ್ರಿಕೆ- '''ಹರಿಶ್ಚಂದ್ರ. ಪಿ. ಸ.ಪ.ಪೂ.ಕಾ.ಬೆಳ್ಳಾರೆ,ಸುಳ್ಯ.ದ.ಕ]'''
  −
#[http://karnatakaeducation.org.in/KOER/images1/2/21/Model_question_paper-_8.pdf ರಚನಾ ತರಬೇತಿಯಲ್ಲಿ ಶಿಕ್ಷಕರು ತಯಾರಿಸಿದ ಪ್ರಶ್ನಾ ಪತ್ರಿಕೆ- '''ಹರಿಶ್ಚಂದ್ರ. ಪಿ. ಸ.ಪ.ಪೂ.ಕಾ.ಬೆಳ್ಳಾರೆ,ಸುಳ್ಯ.ದ.ಕ]'''
  −
#[http://kseeb.kar.nic.in/docs/2015/Social%20Science%20MQP_3_Kannada.pdf ಕೆ ಎಸ್ ಇ ಇ ಬಿ ಮಲ್ಲೇಶ್ವರಂ ಬೆಂಗಳೂರು,ಅವರು ಪ್ರಕಟಿಸಿದ ಎಸ್ ಎಸ್ ಎಲ್ ಸಿ ಮಾದರಿ ಪ್ರಶ್ನೆಪತ್ರಿಕೆ]
  −
#[http://kseeb.kar.nic.in/docs/2015/Social%20Science%20MQP_2_Kannada.pdf ಕೆ ಎಸ್ ಇ ಇ ಬಿ ಮಲ್ಲೇಶ್ವರಂ ಬೆಂಗಳೂರು,ಅವರು ಪ್ರಕಟಿಸಿದ ಎಸ್ ಎಸ್ ಎಲ್ ಸಿ ಮಾದರಿ ಪ್ರಶ್ನೆಪತ್ರಿಕೆ]
  −
#[http://kseeb.kar.nic.in/docs/2015/Social%20Science%20MQP_1_Kannada.pdf ಕೆ ಎಸ್ ಇ ಇ ಬಿ ಮಲ್ಲೇಶ್ವರಂ ಬೆಂಗಳೂರು,ಅವರು ಪ್ರಕಟಿಸಿದ ಎಸ್ ಎಸ್ ಎಲ್ ಸಿ ಮಾದರಿ ಪ್ರಶ್ನೆಪತ್ರಿಕೆ]
  −
#[http://karnatakaeducation.org.in/KOER/images1/5/5b/Rayachuru_question_paper.pdf ರಾಯಚೂರು ಜಿಲ್ಲಾ ಮಟ್ಟದ ಎಸ್ ಎಸ್ ಎಲ್ ಸಿ ಪ್ರಶ್ನೆಪತ್ರಿಕೆ]
  −
#[http://karnatakaeducation.org.in/KOER/images1/5/5b/Rayachuru_question_paper.pdf ರಾಯಚೂರು ಜಿಲ್ಲಾ ಮಟ್ಟದ ಎಸ್ ಎಸ್ ಎಲ್ ಸಿ ಪ್ರಶ್ನೆಪತ್ರಿಕೆ]
  −
#[http://karnatakaeducation.org.in/KOER/images1/5/5b/Rayachuru_question_paper.pdf ರಾಯಚೂರು ಜಿಲ್ಲಾ ಮಟ್ಟದ ಎಸ್ ಎಸ್ ಎಲ್ ಸಿ ಪ್ರಶ್ನೆಪತ್ರಿಕೆ]
  −
#[http://karnatakaeducation.org.in/KOER/images1/5/5b/Rayachuru_question_paper.pdf ಚಿಕ್ಕಮಗಳೂರು ಬಗ್ಗವಳ್ಳಿಯ ಬಸವರಾಜನಾಯ್ಕ ಹೆಚ್ ಡಿ  ಎಸ್ ಎಸ್ ಎಲ್ ಸಿ ಪ್ರಶ್ನೆಪತ್ರಿಕೆ]
  −
#[http://karnatakaeducation.org.in/KOER/index.php/ಚಿತ್ರ:Weightage.odt  ಚಿಕ್ಕಮಗಳೂರು ಬಗ್ಗವಳ್ಳಿಯ ಬಸವರಾಜನಾಯ್ಕ ಹೆಚ್ ಡಿ  ಎಸ್ ಎಸ್ ಎಲ್ ಸಿ ಉದ್ದಿಷ್ಟಗಳಿಗನುಸಾರವಾಗಿ ಅಂಕಗಳ ಹಂಚಿಕೆ]
  −
#[http://karnatakaeducation.org.in/KOER/index.php/ಚಿತ್ರ:Dk_Dist_ouestion_paper1.odt ಚಿಕ್ಕಮಗಳೂರು ಬಗ್ಗವಳ್ಳಿಯ ಬಸವರಾಜನಾಯ್ಕ ಹೆಚ್ ಡಿ  ಎಸ್ ಎಸ್ ಎಲ್ ಸಿ  ಪರೀಕ್ಷೆಯ ಪ್ರಶ್ನೆಪತ್ರಿಕೆ]
     −
=ಹಳೆಯ ಎಸ್.ಎಸ್.ಎಲ್.ಸಿ. ಪರೀಕ್ಷಾ ಪತ್ರಿಕೆಗಳು =
+
ಜನಪದ ವಾದ್ಯಸಮುದಾಯದಲ್ಲಿ ಚಕ್ರವರ್ತಿಯೆನ್ನಬಹುದಾದ ದೊಡ್ಡ ಗಾತ್ರದ ಒಂದು ಚರ್ಮವಾದ್ಯ. ಡೊಳ್ಳು ವಾದನದ ಈ ಕಲೆ ಗಂಡು ಕಲೆಯೇ ಆಗಿದೆ. ಈ ಕಲೆಯ ಆರಾಧಕರು ಬೀರ ಭಕ್ತರಾದ ಕುರುಬರು. “ಕುರಿಯ ಮೇಲೆ ಕಣ್ಣೀರಲೆಪ್ಪಾ ಡೊಳ್ಳಿನ ಮೇಲೆ ಒಂದು ಕೈಯಿರಲಿ” ಎಂದು ಹಾಡಿನಲ್ಲಿ ಹೇಳಿಕೊಂಡಿದ್ದಾರೆ. ಕುರುಬ ಕುರಿಗಳೊಂದಿಗೆ ಕಾಡಿನಲ್ಲಿರುವಾಗ ಕಾಡಿನ ಕ್ರೂರ ಮೃಗಗಳ ಕಾಟ ತಪ್ಪಿಸಿಕೊಳ್ಳುವದಕ್ಕಾಗಿ ಈ ವಾದ್ಯವನ್ನು ನಿರ್ಮಿಸಿಕೊಂಡಿದ್ದಾನೆಂದು ಹೇಳಲಾಗುತ್ತದೆ.
   −
# 2011 ನೇ ವರ್ಷದ, ರಾಜ ಶೇಖರ್ ಬಾಗೇವಾಡಿ ಸರ್, GHS Awaradi, Gokak taluk ರವರು ಹಂಚಿಕೊಂಡಿರುವ ಪ್ರಶ್ನೆಪತ್ರಿಕೆಯನ್ನು ವೀಕ್ಷಿಸಲು  [http://karnatakaeducation.org.in/KOER/images1/0/08/SST_Que.pdf ಲಿಂಕನ್ನು ಕ್ಲಿಕ್ಕಿಸಿ]<br><br>
+
ಡೊಳ್ಳಿನ ಉಗಮ ಕುರಿತು ಪೌರಾಣಿಕ ಕಥೆಯೊಂದನ್ನು ತಮ್ಮ ಹಾಡಿನಲ್ಲಿ ಹಾಡಿಕೊಳ್ಳುತ್ತಾರೆ. ಡೊಳ್ಳಾಸುರನೆಂಬ ರಾಕ್ಷಸನು ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡು ಪರಶಿವನನ್ನೇ ನುಂಗುವ ವರ ಬೇಡಿದನಂತೆ. ರಕ್ಕಸನ ಭಕ್ತಿಗೆ ಮೆಚ್ಚಿದ ಶಿವನು ತಥಾಸ್ತು ಎಂದು ಹೇಳಿ, ತನ್ನ ಬಿಡುಗಡೆಯ ಅವಧಿ ಕೇಳಿದಾಗ ಪಂಚರಾತ್ರಿಗಳು ಸಂದಿಸಿದಾಗ ನಿನ್ನ ಬಿಡುಗಡೆಯೆಂದು ಹೇಳಿ ಶಿವನನ್ನು ನುಂಗುತ್ತಾನೆ. ರಾಕ್ಷಸ ಪಂಚರಾತ್ರಿಗಳು ಸಂದಿಸಿದಾಗ ವಚನ ಕೊಟ್ಟಂತೆ ಶಿವನನ್ನು ಡೊಳ್ಳಾಸುರನು ಬಿಡುಗಡೆ ಮಾಡದಾಗುತ್ತಾನೆ. ಆಗ ಸಾಕ್ಷಾತ್ ವಿಷ್ಣು ಪರಮಾತ್ಮನೇ ಈ ದೈತ್ಯನನ್ನು ಸಂಹರಿಸಿ ಪರಶಿವನ ಬಿಡುಗಡೆ ಮಾಡುತ್ತಾನೆ. ಆಗ ಪರಶಿವನು ಯೋಗನಾದದಲ್ಲಿ ಲೀನವಾಗಿರುತ್ತಾನೆ. ಶಿವನನ್ನು ಎಚ್ಚರಿಸಲು ವಿಷ್ಣು ರಕ್ಕಸನ ಪಕ್ಕೆಲುಬುಗಳನ್ನು ಪಡಗವನ್ನಾಗಿ ಮಾಡಿ ಅದಕ್ಕೆ ಚರ್ಮವನ್ನು ಬಿಗಿದು ಅವನ ಕೋರೆ ಹಲ್ಲುಗಳಿಂದ ಈ ಚರ್ಮವಾದ್ಯವನ್ನು ಬಡಿಯಲು ಪ್ರಾರಂಭಿಸಿದಾಗ ಶಿವ ನಾಟ್ಯವಾಡುತ್ತ ಕಣ್ಣು ತೆರೆಯುತ್ತಾನಂತೆ. ಈ ಕಥೆಯ ಸಂಕೇತ ದೇವರ ಗಮನವನ್ನು ತಮ್ಮತ್ತ ಸೆಳೆದುಕೊಳ್ಳುವುದೇ ಆಗಿರಬಹುದು.
   −
==ಪರಿಹರಿಸಿದ ಎಸ್.ಎಸ್.ಎಲ್.ಸಿ. ಪ್ರಶ್ನೆ ಪತ್ರಿಕೆಗಳು==
+
ಯಾವ ಬದಲಾವಣೆಗೂ ಒಳಪಡದೇ ತನ್ನ ಮೂಲರೂಪದಲ್ಲಿಯೇ ಉಳಿದುಕೊಂಡು ಬಂದಿರುವ ಈ ವಾದ್ಯದ ರಚನೆ ಸರಳ ವಿಧಾನದಿಂದ ಕೂಡಿದೆ. ಪೊಳ್ಳಾಗಿರುವ ಸಿಲೆಂಡರ ಆಕಾರದ ಅರ್ಧ ಅಂಗುಲ ದಪ್ಪಗಿನ ಅಂಬುಳ್ಳ ಕಟ್ಟಿಗೆಯ ಪಡಗದ ಎರಡೂ ಮಗ್ಗುಲಿಗೆ ಚರ್ಮದ ಹೊದಿಕೆ ಹಾಕಿ ತಯಾರಿಸಲಾಗುತ್ತದೆ. ಪಡಗದ ಕಟ್ಟಿಗೆ ಮಾವಿನ, ಬೇವಿನ ಇಲ್ಲವೆ ಸುರಹೊನ್ನೆಯ ಮರದ್ದು ಇರುತ್ತದೆ. ಇದರ ಎಡಭಾಗಕ್ಕೆ ಆಡಿನ ಚರ್ಮ, ಬಲಭಾಗಕ್ಕೆ ಹೋತಿನ ಚರ್ಮವನ್ನು ಬಿಗಿಯುತ್ತಾರೆ. ಹೊದಿಕೆಯ ಹೊರಭಾಗದ ತುಂಬೆಲ್ಲಾ ಬಾಳೆಯ ಸೊಪ್ಪಿನ ಬೂದಿ ಹಾಗೂ ಎಣ್ಣೆಯಲ್ಲಿ ತಯಾರಿಸಿದ ಜಿಗಿಯನ್ನು ತೆಳ್ಳಗೆ ಲೇಪಿಸಲಾಗುತ್ತದೆ. ಇದರಿಂದಾಗಿ ಆ ಭಾಗ ದಪ್ಪಗಿನ “ಮಂದ್ರನಾದ” ಕೊಡುವದು. ಆಡಿನ ಚರ್ಮದ ಭಾಗ ಸಾಮಾನ್ಯವಾಗಿ ಬೆಳ್ಳಗಿರುತ್ತದೆ. ಅದು ತೆಳುವಾದ “ತಾರನಾದ” ಕೊಡುವದು. ಮಂದ್ರನಾದದ ಭಾಗವನ್ನು ಗಟ್ಟಿಗೆಯ ಗುಣಿಯಿಂದ ಬಾರಿಸಿದರೆ, ಇನ್ನೊಂದು ಭಾಗವನ್ನು ನಾಲ್ಕು ಬೆರಳು ಏಕ ಕಾಲಕ್ಕೆ ಪೆಟ್ಟು ಹಾಕುವಂತೆ ಕೈಯಿಂದ ಬಡಿಯಲಾಗುತ್ತದೆ. ಚರ್ಮದ ಹೊದಿಕೆಯನ್ನು ಪಡಗಕ್ಕೆ ಹೊಂದಿಸಿ ಗಟ್ಟಿಯಾಗಿ ಹಿಡಿದಿಟ್ಟಿರಲು ಅವುಗಳ ಮೇಲೆ ಪಡಗದ ಅಂಚಿನ ಸುತ್ತಲು ಪ್ರತಿಯೊಂದು ಹೊದಿಕೆಗೂ ಒಂದೊಂದು ಕಟ್ಟಿಗೆಯ ಉಲುಪಿಯ ಕಂಕಣವನ್ನು ಹಾಕಲಾಗುತ್ತದೆ. ಎರಡೂ ಕಂಕಣಗಳನ್ನು ನೂಲಿನ ಇಲ್ಲವೆ ನಾರಿನ ಹಗ್ಗದಿಂದ ಜಗ್ಗಿ ಕಟ್ಟಿ ಬಿಗಿಗೊಳಿಸಲಾಗುತ್ತದೆ. ಡೊಳ್ಳಿನ ಗಾತ್ರ ಉದ್ದದಲ್ಲಿ ಒಂದೂವರೆ ಅಡಿಯಿಂದ ಎರಡಡಿಯವರೆಗೆ ಮತ್ತು ವ್ಯಾಸದಲ್ಲಿ ೧೮ ಅಂಗುಲದಿಂದ ೨೪ ಅಂಗುಲದವರೆಗೆ ವಿವಿಧ ಪ್ರಮಾಣದ ನಾದ ಹೊರಡುವ ಗಾತ್ರದ್ದಿರುತ್ತದೆ. ಇಬ್ಬರು ವಾದನಕಾರರಿಂದ ಪ್ರಾರಂಭವಾಗಿ ಹತ್ತಾರು ವಾದನಕಾರರವರೆಗೂ ಸಂಖ್ಯೆ ಬೆಳೆಯುತ್ತದೆ. ಈ ಮೇಳಕ್ಕೆ ಡೊಳ್ಳಿನ ವಾಲಗ, ಬಡ್ಡಿ ವಾಲಗ ಎಂದು ಮುಂತಾಗಿ ಕರೆಯುತ್ತಾರೆ. ಬಾರಿಸುವವರು ಡೊಳ್ಳನ್ನು ಕಂಠಕ್ಕೆ ತೂಗು ಹಾಕಿಕೊಳ್ಳುತ್ತಾರೆ. ಇಲ್ಲವೇ ಸೊಂಟಕ್ಕೆ ಕಟ್ಟಿಕೊಳ್ಳುತ್ತಾರೆ. ದೇವರ ರಥೋತ್ಸವ, ಪಲ್ಲಕ್ಕೋತ್ಸವ, ಮುಂತಾದ ಸಾಂಸ್ಕೃತಿಕ ಉತ್ಸವಗಳ ಮುಂಚೂಣಿಯಲ್ಲಿ ಎರಡು ಸಾಲಾಗಿ “ಡಗಂ ಪಟದಾ” ಎಂದು ತಾಳ ಹಾಕುತ್ತ ನಡೆಯುತ್ತಾರೆ. ಮೆರವಣಿಗೆಯ ಮುಂದೆ ಡೊಳ್ಳು ಬಾರಿಸುತ್ತಾ ಮಾರ್ಗದಲ್ಲಿರುವ ದೇವಾಲಯಗಳ ಮುಂದೆ ಕೆಲ ನಿಮಿಷ ನಿಂತು ವಾದ್ಯ ಸೇವೆ ಸಲ್ಲಿಸಿ ಮುಂದುವರೆಯುವರು. ಆವೇಶಪೂರಿತರಾಗಿ ಕುಣಿಯುತ್ತಾರೆ. ಲಾಗ ಹಾಕುತ್ತಾರೆ. ಬಾರಿಸುವ ವೇಗ ಕ್ರಮೇಣ ಬೆಳೆದು ಕೊನೆಯಲ್ಲಿ ಗಂಭೀರ ಧ್ವನಿಯಿಂದ ಇಡೀ ವಾತಾವರಣವೇ ಭಾವೋನ್ಮಾದಕ್ಕೆ ಮುಟ್ಟುತ್ತದೆ. ಆಗ “ಡೊಳ್ಳು ಬಡಿದು ಸಾಕಾಯಿತು | ಹುಗ್ಗಿ ಪರಿಯಾಣ ಬೇಕಾಯಿತು” ಎಂಬಂತೆ ಹಸಿದು ಊಟಕ್ಕೆ ಕೂಕಡುತ್ತಾರೆ. ಆಮೇಲೆ ಗೀತಗೋಷ್ಠಿ ನಡೆಸುತ್ತಾರೆ. ಹಾಡುವ ಬೈಟಕಕ್ಕೆ ಮೊದಲು ಕೆಲ ನಿಮಿಷ ಬಾರಿಸುವದಕ್ಕೆ ಸರಿಪಟ್ಟವೆಂದು ಕರೆಯುವರು.
ದಯಮಾಡಿ  ಹಿಂದಿನ ವರ್ಷದ  ಎಸ್.ಎಸ್.ಎಲ್.ಸಿ. ಪ್ರಶ್ನೆಪತ್ರಿಕೆಗಳನ್ನು  ಪರಿಹರಿಸಿದ್ದರೆ , ಹಂಚಿಕೊಳ್ಳಿ.<br>
     −
==ವೆಬ್ ಲಿಂಕ್ ಗಳು==
+
ದುಮ್ ತಂಗ ತಂಗ ತಂಗ | ದುಮ್ ತಂಗ ತಂಗ ತಂಗ
   −
# ಸುನೀಲ್ ಕೃಷ್ಣ ಶೆಟ್ಟಿ ಸರ್ ರವರು,ಹಂಚಿಕೊಂಡಿರುವ Website with Question Paper ಅನ್ನುವೀಕ್ಷಿಸಲು [http://downloads.inyatrust.com/2013/09/download-hrmshuman-resources-management.html ಈ ಲಿಂಕನ್ನು ಕ್ಲಿಕ್ಕಿಸಿ]<br>
+
ದುಮ್ ತಂಗ ತಂಗ ತಂಗ | ದುಮ್ ತಂಗ ತಂಗ ತಂಗ
#  ಸುನೀಲ್ ಕೃಷ್ಣ ಶೆಟ್ಟಿ ಸರ್ ರವರು,ಹಂಚಿಕೊಂಡಿರುವ Website with Question Paper ಅನ್ನುವೀಕ್ಷಿಸಲು [http://downloads.inyatrust.com/2012/08/karnataka-sslc10th-exams-previousold.html ಈ ಲಿಂಕನ್ನು ಕ್ಲಿಕ್ಕಿಸಿ]<br>
  −
# ಸುನೀಲ್ ಕೃಷ್ಣ ಶೆಟ್ಟಿ ಸರ್ ರವರು,ಹಂಚಿಕೊಂಡಿರುವ Website with Question Paper ಅನ್ನುವೀಕ್ಷಿಸಲು [http://downloads.inyatrust.com/2012/10/ntse-previous-exam-question-papers.html ಈ ಲಿಂಕನ್ನು ಕ್ಲಿಕ್ಕಿಸಿ]<br>
  −
# ಸುನೀಲ್ ಕೃಷ್ಣ ಶೆಟ್ಟಿ ಸರ್ ರವರು,ಹಂಚಿಕೊಂಡಿರುವ Website with Question Paper ಅನ್ನುವೀಕ್ಷಿಸಲು [http://downloads.inyatrust.com/2013/09/nmma-previous-question-papers-download.html ಈ ಲಿಂಕನ್ನು ಕ್ಲಿಕ್ಕಿಸಿ]<br>
  −
#  ಸುನೀಲ್ ಕೃಷ್ಣ ಶೆಟ್ಟಿ ಸರ್ ರವರು,ಹಂಚಿಕೊಂಡಿರುವ Website with Question Paper ಅನ್ನುವೀಕ್ಷಿಸಲು [http://downloads.inyatrust.com/2013/08/nmms-previous-exam-question-papers.html ಈ ಲಿಂಕನ್ನು ಕ್ಲಿಕ್ಕಿಸಿ]<br>
  −
#  ಸುನೀಲ್ ಕೃಷ್ಣ ಶೆಟ್ಟಿ ಸರ್ ರವರು,ಹಂಚಿಕೊಂಡಿರುವ Website with Question Paper ಅನ್ನುವೀಕ್ಷಿಸಲು [http://downloads.inyatrust.com/2012/10/ntse-previous-exam-question-papers.html ಈ ಲಿಂಕನ್ನು ಕ್ಲಿಕ್ಕಿಸಿ]<br>
  −
#  ಸುನೀಲ್ ಕೃಷ್ಣ ಶೆಟ್ಟಿ ಸರ್ ರವರು,ಹಂಚಿಕೊಂಡಿರುವ Website with Question Paper ಅನ್ನುವೀಕ್ಷಿಸಲು [http://gogain.inyatrust.com/search/label/Question%20Papers  ಈ ಲಿಂಕನ್ನು ಕ್ಲಿಕ್ಕಿಸಿ]<br>
  −
# ರಾಜಶೇಖರ್ ಬಾಗೇವಾಡಿ ರವರು ಸರ್,ಹಂಚಿಕೊಂಡಿರುವ Website with Question Paper ಅನ್ನು ವೀಕ್ಷಿಸಲು [http://downloads.inyatrust.com/2012/08/karnataka-sslc10th-exams-previousold.html ಈ ಲಿಂಕನ್ನು ಕ್ಲಿಕ್ಕಿಸಿ]<br>
  −
# ಮಹಾಭಲೇಶ್ವರ್ ಭಾಗ್ವತ್ ಉಡುಪಿ,ಇವರು ಹಂಚಿಕೊಂಡಿರುವ ಪ್ರಶ್ನೆ ಪತ್ರಿಕೆ exams24x7.com ವೆಬ್ ಸೈಟ್ ಅನ್ನು ವೀಕ್ಷಿಸಲು  [http://www.exams24x7.com/prepareExams.php?c=Ng== ಈ ಲಿಂಕನ್ನು ಸಂಪರ್ಕಿಸಿ]<br>
  −
#  ಹತ್ತನೇ ತರಗತಿ ಪೂರ್ವಸಿದ್ಧತಾ ಪರೀಕ್ಷೆಗಾಗಿ E‍xam೨೪.comಇವರ ಪ್ರಶ್ನೆ ಪತ್ತಿಕೆಗಾಗಿ[http://http://www.exams24x7.com/prepareQuestionPage.php?sId=MzA=&sname=U29jaWFsIFN0dWRpZXMgKEthbm5hZGEp&mp=MQ==&c=Ng== ಇಲ್ಲಿ ಒತ್ತಿರಿ]<br>
     −
'''ಪರೀಕ್ಷೆಗೆ ಸಂಬಂಧಪಟ್ಟ ಪ್ರಜಾವಾಣಿ ಲೇಖನಗಳು'''
+
ಎಂಬುದು ಅದರ ನಾದ. ಇದಾದ ನಂತರ ಹಾಡುಗಳು ಪ್ರಾರಂಭ. “ದಿಲ್ಲಿಗೆ ಹೋದರೂ ಡೊಳ್ಳಿಗೆ ಒಂದೇ ಪೆಟ್ಟು” ಎಂಬ ಮಾತಿನ ಹಿನ್ನೆಲೆಯಲ್ಲಿ ಬಾರಿಸುವ ವಿಧಾನ ಎಲ್ಲ ಗತ್ತುಗಳಲ್ಲಿಯೂ ಒಂದೇ ರೀತಿಯಿರುತ್ತದೆ. ಒಂದು ಗುಣಿಗೆ ಮೊದಲು ಹೆಜ್ಜೆ ಎಂದು ಕರೆಯುತ್ತಾರೆ. ಅಂದರೆ ಒಂದು ಗುಣಿ ಪೆಟ್ಟ, ಬಳಿಕ ಒಂದು ಕೈಪೆಟ್ಟ – ಇದೇ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ಹೀಗೆ ಐದು ಗುಣಿ ಪೆಟ್ಟನವರೆಗೂ ಬಡಿಯುತ್ತಾರೆ. ಇದು ಹಾಡುರಹಿತ ಮತ್ತು ಹಾಡುಸಹಿತವಾದ ವಾದ್ಯ.
#  ಪರೀಕ್ಷೆ ಸಮಯದಲ್ಲಿ ದೇಹ ಹೇಗೆ ಸಿದ್ಧವಾಗಿರಬೇಕು ಎಂಬುದರ ಬಗ್ಗೆ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನವನ್ನು  ವೀಕ್ಷಿಸಲು  [http://www.prajavani.net/article/%E0%B2%AA%E0%B2%B0%E0%B3%80%E0%B2%95%E0%B3%8D%E0%B2%B7%E0%B3%86%E0%B2%A6%E0%B3%87%E0%B2%B9%E0%B2%B8%E0%B2%BF%E0%B2%A6%E0%B3%8D%E0%B2%A7%E0%B2%B5%E0%B2%BE%E0%B2%97%E0%B2%BF%E0%B2%A6%E0%B3%86%E0%B2%AF%E0%B3%87  ಈ  ಲಿಂಕನ್ನು ಕ್ಲಿಕ್ಕಿಸಿ]<br>
  −
#  S‌S‌LC ಪರೀಕ್ಷೆಯನ್ನು  ಹೇಗೆ  ಎದುರಿಸುವುದು ಎನ್ನುವದರ ಬಗ್ಗೆ  ತಿಳಿಯಲು  [http://karnatakaeducation.org.in/KOER/images1/a/a2/%E0%B2%8E%E0%B2%B8%E0%B3%8D%E2%80%8C%E0%B2%8E%E0%B2%B8%E0%B3%8D%E2%80%8C%E0%B2%8E%E0%B2%B2%E0%B3%8D%E2%80%8C%E0%B2%B8%E0%B2%BF_%E0%B2%AA%E0%B2%B0%E0%B3%80%E0%B2%95%E0%B3%8D%E0%B2%B7%E0%B3%86_%E0%B2%8E%E0%B2%A6%E0%B3%81%E0%B2%B0%E0%B2%BF%E0%B2%B8%E0%B3%81%E0%B2%B5%E0%B3%81%E0%B2%A6%E0%B3%81_%E0%B2%B9%E0%B3%87%E0%B2%97%E0%B3%86.pdf  ಈ ಲಿಂಕನ್ನು ಕ್ಲಿಕ್ಕಿಸಿ]<br>
  −
# SSLC ಪರೀಕ್ಷೆ  ಬರೆಯುವ ವಿದ್ಯಾರ್ಥಿಗಳಿಗಾಗಿ  ಕೆಲವೊಂದು ಟಿಪ್ಸ್  ತಿಳಿಯಲು    [http://karnatakaeducation.org.in/KOER/images1/6/67/%E0%B2%AA%E0%B2%B0%E0%B3%80%E0%B2%95%E0%B3%8D%E0%B2%B7%E0%B3%86_%E0%B2%AC%E0%B2%B0%E0%B3%86%E0%B2%B5_%E0%B2%AE%E0%B2%95%E0%B3%8D%E0%B2%95%E0%B2%B3%E0%B2%BF%E0%B2%97%E0%B3%86_%E0%B2%9F%E0%B2%BF%E0%B2%AA%E0%B3%8D%E0%B2%B8%E0%B3%8D.pdf ಈ ಲಿಂಕನ್ನು ಕ್ಲಿಕ್ಕಿಸಿ ]<br>
  −
#  ಪರೀಕ್ಷೆ ಯನ್ನು  ಎದುರಿಸವ  ಪ್ರತಿಯೊಬ್ಬ ವಿದ್ಯಾರ್ಥಿಯು ಅನುಸರಿಸಬೇಕಾದ ಹಂತಗಳನ್ನು  ತಿಳಿಯಲು  ಈ ಲಿಂಕನ್ನು ಕ್ಲಿಕ್ಕಿಸಿ [http://karnatakaeducation.org.in/KOER/images1/d/da/%E0%B2%AA%E0%B2%B0%E0%B3%80%E0%B2%95%E0%B3%8D%E0%B2%B7%E0%B3%86%E0%B2%AF%E0%B2%A8%E0%B3%8D%E0%B2%A8%E0%B3%81_%E0%B2%B9%E0%B3%87%E0%B2%97%E0%B3%86_%E0%B2%8E%E0%B2%A6%E0%B3%81%E0%B2%B0%E0%B2%BF%E0%B2%B8%E0%B2%AC%E0%B3%87%E0%B2%95%E0%B3%81%3F.pdf  ಈ ಲಿಂಕನ್ನು ಕ್ಲಿಕ್ಕಿಸಿ]<br>
  −
# ಪರೀಕ್ಷೆ ಯನ್ನು  ಎದುರಿಸುವ  ಪ್ರತಿಯೊಬ್ಬ ವಿದ್ಯಾರ್ಥಿಯು  ಎಚ್ಚರ ವಹಿಸಬೇಕಾದ  ಅಂಶಗಳನ್ನು  ತಿಳಿಯಲು  [http://karnatakaeducation.org.in/KOER/images1/d/d2/%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%B0%E0%B3%8D%E0%B2%A5%E0%B2%BF%E0%B2%97%E0%B2%B3%E0%B3%87_%E0%B2%87%E0%B2%B5%E0%B3%81%E0%B2%97%E0%B2%B3_%E0%B2%AC%E0%B2%97%E0%B3%8D%E0%B2%97%E0%B3%86_%E0%B2%8E%E0%B2%9A%E0%B3%8D%E0%B2%9A%E0%B2%B0%E0%B2%B5%E0%B2%B9%E0%B2%BF%E0%B2%B8%E0%B2%BF.pdf  ಈ ಲಿಂಕನ್ನು ಕ್ಲಿಕ್ಕಿಸಿ]<br>
     −
== ಪ್ರೇರಣಾ ಪ್ರಶ್ನೆಪತ್ರಿಕೆಗಳು==
+
'''ಯಕ್ಷಗಾನ'''
   −
==ಜಿಲ್ಲಾವಾರು ಪ್ರಶ್ನೆಪತ್ರಿಕೆಗಳು ಮತ್ತು ಅಧ್ಯಯನ ಸಾಮಗ್ರಿಗಳು/ಟಿಪ್ಪಣಿಗಳು 2013 - 14 ==
+
ಯಕ್ಷಗಾನ - ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ಕರಾವಳಿ ಜಿಲ್ಲೆಗಳು (ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ), ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನವು ಮನೆ ಮಾತಾಗಿದೆ.
   −
'''ಬಾಗಲಕೋಟ'''
+
'''ಯಕ್ಷಗಾನದ ಪ್ರಮುಖ ಅಂಶಗಳು'''
#ಶ್ರೀ ಅರ್ಜುನ್ ಹಂಚಿನಾಳ ಸರಕಾರಿ ಪ್ರೌಢಶಾಲೆ ಯಡಹಳ್ಳಿ,ಬೀಳಗಿ ತಾಲೂಕು ಇವರು ರಚಿಸಿದ ಹತ್ತನೇ ತರಗತಿ  ೩&ನಾಲ್ಕು ಅಂಕದ ಪ್ರಶ್ನೆಗಳಿಗಾಗಿ ಈ  [http://arjunareddyrh.blogspot.in/2014/03/blog-post_1.html  ಲಿಂಕ್ ಬಳಸಿರಿ]
     −
'''ಚಿತ್ರದುರ್ಗ'''
+
ಯಕ್ಷಗಾನದಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಕಾಣಬಹುದು.
# H S ರಾಮಚಂದ್ರಪ್ಪ ಸರ್, GHS TGಹಳ್ಳಿ,ದಾವಣಗೆರೆ ಇವರು ಹಂಚಿಕೊಂಡಿರುವ ಪ್ರಶ್ನೆಪತ್ರಿಕೆಯನ್ನು ವೀಕ್ಷಿಸಲು [http://karnatakaeducation.org.in/KOER/images1/c/cc/Ramachmdra_social_model_qst.paper.pdf ಲಿಂಕನ್ನು ಕ್ಲಿಕ್ಕಿಸಿ]<br>
+
# '''ಪ್ರಸಂಗ''': ಯಕ್ಷಗಾನದಲ್ಲಿ ಯಾವುದಾದರೊಂದು ಕಥಾನಕವನ್ನು ಆಯ್ದುಕೊಂಡು ಅದನ್ನು ಜನರಿಗೆ ಹಾಡು, ಅಭಿನಯ, ನೃತ್ಯಗಳೊಂದಿಗೆ ತೋರಿಸಲಾಗುತ್ತದೆ. ಹೀಗೆ ಆಯ್ದುಕೊಂಡ ಕಥಾನಕವನ್ನು '''ಪ್ರಸಂಗ''' ಎಂದು ಕರೆಯುತ್ತಾರೆ. ಉದಾಹರಣೆಗೆ ಮಹಾಭಾರತದಲ್ಲಿ ಭೀಮ ಮತ್ತು ದುರ್ಯೋಧನರ ನಡುವೆ ನಡೆಯುವ ಗದಾಯುದ್ಧದ ಕಥೆಯನ್ನು ಆಯ್ದುಕೊಂಡರೆ ಆಗ ಅದನ್ನು "ಗದಾಯುದ್ದ ಪ್ರಸಂಗ" ಎಂಬುದಾಗಿ ಕರೆಯುತ್ತಾರೆ. ಹೆಚ್ಚಾಗಿ ಪೌರಾಣಿಕ ಪ್ರಸಂಗಗಳನ್ನೇ ಆಯ್ದು ಕೊಳ್ಳುವುದು ಯಕ್ಷಗಾನದ ವಾಡಿಕೆಯಾದರೂ ಪ್ರಸಂಗವು ಪೌರಾಣಿಕವೇ ಆಗಬೇಕು ಎಂಬ ನಿಯಮವೇನೂ ಇಲ್ಲ. ಇದು ಐತಿಹಾಸಿಕವೂ, ಸಾಮಾಜಿಕವೂ ಆಗಿರಬಹುದು.
 +
# '''ಪಾತ್ರಧಾರಿಗಳು''':ಪ್ರಸಂಗದಲ್ಲಿ ಬರುವ ಕಥೆಯನ್ನು ಅಭಿನಯಿಸುವವರೇ ಪಾತ್ರಧಾರಿಗಳು. ಸ್ತ್ರೀ ಪಾತ್ರ, ಖಳ ನಟನ ಪಾತ್ರ, ಹಾಸ್ಯ ಕಲಾವಿದನ ಪಾತ್ರ, ನಾಯಕನ ಪತ್ರ - ಹೀಗೆ ಪ್ರಸಂಗಕ್ಕೆ ಅನುಗುಣವಾಗಿ ಪಾತ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ನೃತ್ಯ, ಅಭಿನಯ ಹಾಗೂ ಮಾತುಗಾರಿಕೆಗಳೊಂದಿಗೆ ಕಥೆಯನ್ನು ಪ್ರೇಕ್ಷಕರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಪಾತ್ರಧಾರಿಗಳ ಮೇಲಿರುತ್ತದೆ.
 +
# '''ವೇಷಭೂಷಣ''':ಯಕ್ಷಗಾನದ ಪ್ರಮುಖ ಪ್ರಭೇದವಾದ ಬಯಲಾಟಗಳಲ್ಲಿ ವೇಷಭೂಷಣಗಳು ಪ್ರಮುಖವಾದದ್ದು. ಪಾತ್ರಗಳಿಗೆ ತಕ್ಕಂತೆ ವೇಷಭೂಷಣಗಳಿರುತ್ತವೆ. ಉದಾಹರಣೆಗೆ ಪ್ರಮುಖ ಖಳನಟ ಮತ್ತು ರಾಜ (ನಾಯಕ)ನ ಪಾತ್ರಕ್ಕೆ ಬಳಸುವ ಕಿರೀಟವು ಸಾಮಾನ್ಯ ಪಾತ್ರಧಾರಿಗೆ ಬಳಸುವ ಕಿರೀಟಗಳಿಗಿಂತ ವಿಭಿನ್ನ ವಿನ್ಯಾಸ ದ್ದಾಗಿರುತ್ತದೆ. ಹಾಗೆಯೇ ಸ್ತ್ರೀ ಪಾತ್ರಗಳಿಗೆ ಬಳಸುವ ಕಿರೀಟವು ತುಂಬಾ ಚಿಕ್ಕದಾಗಿರುತ್ತದೆ. ಅಲ್ಲದೇ ತೆಂಕತಿಟ್ಟು ಶೈಲಿಯ ಯಕ್ಷಗಾನದಲ್ಲಿ ಉಪಯೋಗಿಸುವ ವೇಷಭೂಷಣ ಗಳು ಬಡಗತಿಟ್ಟಿನಲ್ಲಿ ಉಪಯೋಗಿಸುವ ವೇಷ ಭೂಷಣಗಳಿಗಿಂತ ಭಿನ್ನವಾಗಿರುತ್ತವೆ.
 +
# '''ಭಾಗವತಿಕೆ''': ಯಕ್ಷಗಾನದ ಜೀವಾಳವೇ ಭಾಗವತಿಕೆ ಅಥವಾ ಹಾಡುಗಾರಿಕೆ. ಅವರು ರಂಗ ಪ್ರಕಾರದ ನಿರ್ದೇಶಕರಿದ್ದಂತೆ. ಇಲ್ಲಿ ಪಾತ್ರಧಾರಿಗಳು ಅಭಿನಯಿಸುವ ಕಥಾನಕವನ್ನು ಕಾವ್ಯ ರೂಪದಲ್ಲಿ ಹಾಡಲಾಗುತ್ತದೆ. ಹೀಗೆ ಹಾಡುವವರನ್ನು '''ಭಾಗವತರು''' ಎಂದು ಕರೆಯುತ್ತಾರೆ. ಭಾಗವತರು ಹಾಡುವ ಪದಗಳಿಗೆ ತಕ್ಕಂತೆ ಪಾತ್ರಧಾರಿಗಳು ನೃತ್ಯದ ಮೂಲಕ ಅಭಿನಯಿಸುತ್ತಾರೆ. ನೃತ್ಯದೊಂದಿಗೆ ಹಾಡಿನಲ್ಲಿ ಬರುವ ಕಥಾನಕದ ಸಂದರ್ಭಕ್ಕನುಗುಣವಾಗಿ ಭಾವಾಭಿನಯವೂ ಸಹ ಅತ್ಯಂತ ಅಗತ್ಯವಾದುದು.
 +
# '''ಮಾತುಗಾರಿಕೆ''': ಹಾಡುವುದನ್ನು ಪೂರ್ಣಗೊಳಿಸಿದ ಕೂಡಲೇ ಆ ಹಾಡಿನ ಸಾರಾಂಶವನ್ನು ಪಾತ್ರಧಾರಿಗಳು ಚರ್ಚಿಸುತ್ತಾರೆ. ಹಾಡಿನಲ್ಲಿ ಕಥಾನಕದ ಯಾವ ಭಾಗವನ್ನು ಪ್ರಸ್ತುತ ಪಡಿಸಲಾಗುತ್ತದೋ ಅದೇ ಭಾಗದ ಅರ್ಥವನ್ನು ಜನ ಸಾಮಾನ್ಯರೆಲ್ಲರಿಗೂ ಸ್ಪಷ್ಟವಾಗುವಂತೆ ಆಡುಮಾತಿನಲ್ಲಿ ಪಾತ್ರಧಾರಿಗಳು ಸಂಭಾಷಿಸುತ್ತಾರೆ.
 +
[[Image:Yakshagana1.jpg|thumb|ಬಡಗು ತಿಟ್ಟು ಯಕ್ಷಗಾನ ವೇಷದ ಒಂದು ಮಾದರಿ]]
 +
[[Image:Yakshagana2.jpg|thumb|ತೆಂಕು ತಿಟ್ಟು ಯಕ್ಷಗಾನ ವೇಷದ ಒಂದು ಮಾದರಿ]]
   −
'''ಹಾವೇರಿ'''
+
'''ಉಗಮ'''
# ರವಿಆಹೇರಿ ಸರ್,GHS ಕೊಣನಕೇರಿ,ಹಾವೇರಿ ರವರು ಹಂಚಿಕೊಂಡಿರುವ ಅಧ್ಯಾಯವಾರು ಪ್ರಶ್ನಾವಳಿಗಳ ಮತ್ತು ಅಂಕಗಳ ಸಂಖ್ಯೆಯನ್ನು-ಬ್ಲೂ ಪ್ರಿಂಟ್ ವೀಕ್ಷಿಸಲು [http://karnatakaeducation.org.in/KOER/images1/7/79/%E0%B2%B8%E0%B2%BE%E0%B2%AE%E0%B2%BE%E0%B2%A8%E0%B3%8D%E0%B2%AF_%E0%B2%9C%E0%B3%8D%E0%B2%9E%E0%B2%BE%E0%B2%A8_%E0%B2%AA%E0%B3%8D%E0%B2%B0%E0%B2%B6%E0%B3%8D%E0%B2%A8%E0%B2%BE%E0%B2%B5%E0%B2%B3%E0%B2%BF%E0%B2%97%E0%B2%B3%E0%B3%81.pdf ಈ ಲಿಂಕನ್ನು ಕ್ಲಿಕ್ಕಿಸಿ]<br>
  −
# ರವಿಆಹೇರಿ ಸರ್, GHS ಕೊಣನಕೇರಿ,ಹಾವೇರಿ ರವರು ಹಂಚಿಕೊಂಡಿರುವ ಇತಿಹಾಸ ಪ್ರಶ್ನೆ ಪತ್ರಿಕೆಯನ್ನು ವೀಕ್ಷಿಸಲು [http://karnatakaeducation.org.in/KOER/images1/a/ae/%E0%B2%87%E0%B2%A4%E0%B2%BF%E0%B2%B9%E0%B2%BE%E0%B2%B8_50_marks.pdf ಈ ಲಿಂಕನ್ನು ಕ್ಲಿಕ್ಕಿಸಿ]<br>
  −
# ರವಿಆಹೇರಿ ಸರ್, GHS ಕೊಣನಕೇರಿ,ಹಾವೇರಿ ರವರು ಹಂಚಿಕೊಂಡಿರುವ  ಪೌರನೀತಿ  ಪ್ರಶ್ನೆ ಪತ್ರಿಕೆಯನ್ನು ವೀಕ್ಷಿಸಲು [http://karnatakaeducation.org.in/KOER/images1/7/7e/%E0%B2%AA%E0%B3%8C%E0%B2%B0%E0%B2%A8%E0%B3%80%E0%B2%A4%E0%B2%BF.pdf ಈ ಲಿಂಕನ್ನು ಕ್ಲಿಕ್ಕಿಸಿ]<br>
  −
# ರವಿಆಹೇರಿ ಸರ್, GHS ಕೊಣನಕೇರಿ,ಹಾವೇರಿ ರವರು ಹಂಚಿಕೊಂಡಿರುವ  ಭೂಗೋಳ  ಪ್ರಶ್ನೆ ಪತ್ರಿಕೆಯನ್ನು [http://karnatakaeducation.org.in/KOER/images1/d/d4/%E0%B2%AD%E0%B3%82%E0%B2%97%E0%B3%8B%E0%B2%B3_%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0.pdf ಈ ಲಿಂಕನ್ನು ಕ್ಲಿಕ್ಕಿಸಿ]<br>
     −
'''ಕೊಪ್ಪಳ'''
+
ಯಕ್ಷಗಾನದ ಮೊದಲ ಉಲ್ಲೇಖ ಸಾರ್ಣದೇವನ "ಸಂಗೀತ ರತ್ನಾಕರ"ದಲ್ಲಿ (೧೨೧೦ ಕ್ರಿಶ) "ಜಕ್ಕ" ಎಂದು ಆಗಿದ್ದು ಮುಂದೆ "ಯಕ್ಕಲಗಾನ" ಎಂದು ಕರೆಯಲ್ಪಟ್ಟಿತ್ತು ಎಂಬುದು ಒಂದು ಅಭಿಪ್ರಾಯ. ಗಂಧರ್ವ ಗ್ರಾಮ ಎಂಬ ಈಗ ನಶಿಸಿ ಹೋಗಿರುವ ಗಾನ ಪದ್ದತಿಯಿಂದ ಗಾನ ಮತ್ತು ಸ್ವತಂತ್ರ ಜಾನಪದ ಶೈಲಿಗಳಿಂದ ನೃತ್ಯ ರೂಪು ಗೊಂಡಿತೆಂದು ಶಿವರಾಮ ಕಾರಂತರ "ಯಕ್ಷಗಾನ ಬಯಲಾಟ" ಎಂಬ ಸಂಶೋಧನಾ ಪ್ರಬಂಧಗಳ ಸಂಕಲನದಲ್ಲಿ ಹೇಳಿದೆ. ೧೫೦೦ ರಷ್ಟರಲ್ಲಿ ವ್ಯವಸ್ತಿತವಾಗಿ ಯಕ್ಷಗಾನ ರೂಢಿಯಲ್ಲಿತ್ತು ಎಂಬುದು ಬಹಳ ವಿದ್ವಾಂಸರು ಒಪ್ಪುವ ವಿಚಾರ.  
# ರಮೇಶ್ ಹುನಗುಂದ ಸರ್,GHS ಸಂಗನಾಳ ರವರು ಹಂಚಿಕೊಂಡಿರುವ ಎರಡು ಅಂಕಿಯ ಪ್ರಶ್ನೆ ಪತ್ರಿಕೆಯನ್ನು ವೀಕ್ಷಿಸಲು [http://karnatakaeducation.org.in/KOER/images1/a/aa/SS_2_marks.pdf ಈ ಲಿಂಕನ್ನು ಕ್ಲಿಕ್ಕಿಸಿ]<br>
  −
# ಭೀಮಪ್ಪ ಸವಳಗಿ ಸರ್, GHS Muster-Anjuri Camp, Gangavathi,ಕೊಪ್ಪಳ್ ರವರು ಹಂಚಿಕೊಂಡಿರುವ ಇತಿಹಾಸ ಪ್ರಶ್ನೆ ಪತ್ರಿಕೆಯನ್ನುವೀಕ್ಷಿಸಲು
  −
[http://karnatakaeducation.org.in/KOER/images1/4/42/%E0%B2%87%E0%B2%A4%E0%B2%BF%E0%B2%B9%E0%B2%BE%E0%B2%B8.pdf ಈ ಲಿಂಕನ್ನು ಕ್ಲಿಕ್ಕಿಸಿ]<br>
  −
# ಭೀಮಪ್ಪ ಸವಳಗಿ ಸರ್,GHS ಮುಷ್ಟೂರು ಅಂಜೂರಿ ಕ್ಯಾಂಪ್,ಗಂಗಾವತಿ ರವರು ಹಂಚಿಕೊಂಡಿರುವ ಪ್ರಶ್ನೆ ಪತ್ರಿಕೆಯನ್ನು
  −
[http://karnatakaeducation.org.in/KOER/index.php/ಚಿತ್ರ:10th_midterm_exam_social.odt ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ]<br>
     −
ಪ್ರಹಲಾದ ಸರ್, GHS ಯಳಗೊಂಡಹಳ್ಳಿ ರವರು ಹಂಚಿಕೊಂಡಿರುವ ಪ್ರಶ್ನೆಪತ್ರಿಕೆಯನ್ನು ವೀಕ್ಷಿಸಲು [http://karnatakaeducation.org.in/KOER/images1/2/24/Pralhada_10th_std_social.odt ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ]
+
'''ಯಕ್ಷಗಾನದ ಪ್ರಭೇದಗಳು'''
 +
* ಯಕ್ಷಗಾನದಲ್ಲಿ ಅನೇಕ ರೀತಿಯ ಪ್ರಭೇದಗಳಿದ್ದು ಅವುಗಳಲ್ಲಿ '''ಯಕ್ಷಗಾನ ಬಯಲಾಟ'''ವು ಅತ್ಯಂತ ಜನಪ್ರಿಯವಾದುದು. ಬಯಲಾಟವೆಂದರೆ ವೇಷಭೂಷಣಗಳೊಂದಿಗೆ ರಂಗಭೂಮಿಯಲ್ಲಿ ಆಡುವ ಯಕ್ಷಗಾನ ಪ್ರಭೇದ. ಕುಣಿತ ಎಂಬ ಹೆಸರು ಇದಕ್ಕಿದೆ. ಮೊದ ಮೊದಲು ಹಬ್ಬ ಹರಿದಿನಗಳಂದು ಊರಿನ ಬಯಲಿನಲ್ಲಿ ರಾತ್ರಿಯಿಡೀ ಈ ಬಯಲಾಟ ಹೆಚ್ಚಾಗಿ ನಡೆಯುತ್ತಿದ್ದ ಕಾರಣ "ಬಯಲಾಟ" ಎಂಬ ಹೆಸರು ರೂಢಿಯಲ್ಲಿದೆ. ಜನರು ಇದನ್ನು ಸರಳವಾಗಿ  "ಆಟ" ಎಂದೂ ಕರೆಯುತ್ತಾರೆ. 
   −
==ಉಡುಪಿ==
+
* ಆದರೆ ಈಗೀಗ ರಾತ್ರಿಯಿಡೀ ನಡೆಯುವ ಬಯಲಾಟದೊಂದಿಗೆ ೨-೩ ಘಂಟೆಗಳ ಕಾಲ ನಡೆಯುವ ಯಕ್ಷಗಾನವೂ ಬಳಕೆಯಲ್ಲಿದೆ. ಬಯಲಾಟದಲ್ಲಿ ವೇಷಭೂಷಣ, ರಂಗಸ್ಥಳ, ಭಾಗವಂತಿಕೆ (ಹಾಡುಗಾರಿಕೆ), ಅಭಿನಯ, ಮಾತುಗಾರಿಕೆ, ನೃತ್ಯ - ಹೀಗೆ ಸಾಂಪ್ರದಾಯಿಕ ಯಕ್ಷಗಾನದ ಎಲ್ಲ ಮಜಲುಗಳನ್ನೂ ಕಾಣಬಹುದು. ಯಕ್ಷಗಾನದಲ್ಲಿ ಮೂಡಲಪಾಯ ಮತ್ತು ಪಡುವಲಪಾಯ ಎಂಬ ಎರಡು ಮ್ರಮುಖ ಪ್ರಭೇದಗಳಿವೆ. ಪಶ್ಚಿಮ ಘಟ್ಟದ ಪೂರ್ವಕ್ಕೆ  ಪ್ರಚಲಿತವಿರುವದು ಮೂಡಲಪಾಯ.
ಮಹಾಭಲೇಶ್ವರ್  ಭಗ್ವತ್ ಸರ್ ರವರು ಹಂಚಿಕೊಂಡಿರುವ  ಜಿಲ್ಲಾ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆ  ೨೦೧೪ರ ಪ್ರಶ್ನೆ ಪತ್ರಿಕೆಗಳನ್ನು ವೀಕ್ಷಿಸಲು ಕೆಳಗಿನ JPG ಲಿಂಕನ್ನು ಬಳಸಲು
+
* ಉತ್ತರ ಕರ್ನಾಟಕದಲ್ಲಿ ಬಹು ಜನಪ್ರಿಯವಾಗಿರುವ ಶ್ರೀಕೃಷ್ಣ ಪಾರಿಜಾತ ಮೂಡಲ ಪಾಯದಲ್ಲಿ ಗಮನಾರ್ಹ. ಮಲೆನಾಡು ಮತ್ತು ಕರಾವಳಿಯಲ್ಲಿ ಪ್ರಚಲಿತವಿರುವುದು ಪಡುವಲಪಾಯ. ಪಡುವಲಪಾಯದಲ್ಲಿ ೩ ವಿಭಾಗಗಳಿವೆ.ಅವು '''ತೆಂಕುತಿಟ್ಟು''','''ಬಡಗುತಿಟ್ಟು''' ಮತ್ತು ಉತ್ತರದ ತಿಟ್ಟು ('''ಬಡಾಬಡಗು''').
 +
* ಉತ್ತರ ಕನ್ನಡ, ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಉತ್ತರದ ತಿಟ್ಟು ಶೈಲಿಯ ಬಯಲಾಟಗಳು ಕಂಡು ಬಂದರೆ ಉಡುಪಿಯಲ್ಲಿ ಬಡಗುತಿಟ್ಟು ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ತೆಂಕುತಿಟ್ಟು ಶೈಲಿಯ ಯಕ್ಷಗಾನವನ್ನು ಕಾಣಬಹುದು. ವೇಷಭೂಷಣಗಳ ವಿನ್ಯಾಸ, ನೃತ್ಯದ ಶೈಲಿ, ಭಾಗವತಿಕೆ ಮತ್ತು ಹಿಮ್ಮೇಳಗಳಲ್ಲಿ ಕಂಡುಬರುವ ಕೆಲವು ವ್ಯತ್ಯಾಸಗಳ ಆಧಾರದ ಮೇಲೆ ವಿಂಗಡಣೆಯನ್ನು ಮಾಡಲಾಗಿದೆಯೇ ಹೊರತು ಯಕ್ಷಗಾನದ ಮೂಲ ತತ್ವ, ಆಶಯಗಳು ೩ ಶೈಲಿಗಳಲ್ಲಿಯೂ ಒಂದೇ ಆಗಿರುತ್ತದೆ.
   −
# [http://karnatakaeducation.org.in/KOER/images1/0/0c/Scanned_Document.jpg ಇಲ್ಲಿ ಕ್ಲಿಕ್ಕಿಸಿ]<br>
+
=ಹೆಚ್ಚುವರಿ ಸಂಪನ್ಮೂಲ=
# [http://karnatakaeducation.org.in/KOER/images1/9/95/Scanned_Document-2.jpg ಇಲ್ಲಿ ಕ್ಲಿಕ್ಕಿಸಿ]<br>
+
#[http://www.slideshare.net/KarnatakaOER/ss-58189456 ಯಕ್ಷಗಾನ ವಿಕಿಪೀಡಿಯ]
# [http://karnatakaeducation.org.in/KOER/images1/7/7f/Scanned_Document-3.jpg ಇಲ್ಲಿ ಕ್ಲಿಕ್ಕಿಸಿ]<br>
+
#[https://www.youtube.com/watch?v=a9vMrc8-J1A&nohtml5=False ಕಂಸಾಳೆ ಕೈಸಾಲೆ ಚಲನ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ]
# [http://karnatakaeducation.org.in/KOER/images1/b/b6/Scanned_Document-4.jpg ಇಲ್ಲಿ ಕ್ಲಿಕ್ಕಿಸಿ]<br>
+
#
# [http://karnatakaeducation.org.in/KOER/images1/c/cc/Scanned_Document-5.jpg ಇಲ್ಲಿ ಕ್ಲಿಕ್ಕಿಸಿ]<br>
+
{| class="wikitable"
# [http://karnatakaeducation.org.in/KOER/images1/b/b9/Scanned_Document-6.jpg ಇಲ್ಲಿ ಕ್ಲಿಕ್ಕಿಸಿ]<br>
+
!{{Youtube|ZGja0OT0Jlk}} ವೀರಗಾಸೆ
# [http://karnatakaeducation.org.in/KOER/images1/b/bb/Scanned_Document-7.jpg ಇಲ್ಲಿ ಕ್ಲಿಕ್ಕಿಸಿ]<br>
+
!{{Youtube|iv__LWOhMfA}} ಕಂಸಾಳೆ ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ
# [http://karnatakaeducation.org.in/KOER/images1/6/65/Scanned_Document-8.jpg ಇಲ್ಲಿ ಕ್ಲಿಕ್ಕಿಸಿ]<br>
+
!{{Youtube| TiBpqD9NSLs}}
# [http://karnatakaeducation.org.in/KOER/images1/b/b0/Scanned_Document-9.jpg ಇಲ್ಲಿ ಕ್ಲಿಕ್ಕಿಸಿ]<br>
+
|}
# [http://karnatakaeducation.org.in/KOER/images1/c/c9/Scanned_Document-10.jpg ಇಲ್ಲಿ ಕ್ಲಿಕ್ಕಿಸಿ]<br>
+
{{Youtube|ApcyPbN2YsE}}ಯಕ್ಷಗಾನ
# [http://karnatakaeducation.org.in/KOER/images1/a/ae/Scanned_Document-11.jpg ಇಲ್ಲಿ ಕ್ಲಿಕ್ಕಿಸಿ]<br>
+
{{Youtube|w3rptxHOI7c}}
# [http://karnatakaeducation.org.in/KOER/images1/4/46/Scanned_Document-12.jpg ಇಲ್ಲಿ ಕ್ಲಿಕ್ಕಿಸಿ]<br>
+
ನಂದಿ ಕುಣಿತ
# [http://karnatakaeducation.org.in/KOER/images1/a/ac/Scanned_Document5.jpg ಇಲ್ಲಿ ಕ್ಲಿಕ್ಕಿಸಿ]<br>
+
{{Youtube|5FCDUJVjCk4}}ಬುಡುಬುಡಿಕೆ
# [http://karnatakaeducation.org.in/KOER/images1/a/ad/Scanned_Document-14.jpg ಇಲ್ಲಿ ಕ್ಲಿಕ್ಕಿಸಿ]<br>
+
=ಸಾರಾಂಶ=
# [http://karnatakaeducation.org.in/KOER/images1/1/1e/Scanned_Document-15.jpg ಇಲ್ಲಿ ಕ್ಲಿಕ್ಕಿಸಿ]<br>
+
==ಪರಿಕಲ್ಪನೆ ೧ ==
 +
===ಚಟುಟವಟಿಕೆ-೧===
 +
#ವಿಧಾನ/ಪ್ರಕ್ರಿಯೆ
 +
#ಸಮಯ
 +
#ಸಾಮಗ್ರಿಗಳು/ಸಂಪನ್ಮೂಲಗಳು
 +
#ಹಂತಗಳು
 +
#ಚರ್ಚಾ ಪ್ರಶ್ನೆಗಳು
 +
===ಚಟುಟವಟಿಕೆ-೨===
 +
#ವಿಧಾನ/ಪ್ರಕ್ರಿಯೆ
 +
#ಸಮಯ
 +
#ಸಾಮಗ್ರಿಗಳು/ಸಂಪನ್ಮೂಲಗಳು
 +
#ಹಂತಗಳು
 +
#ಚರ್ಚಾ ಪ್ರಶ್ನೆಗಳು
 +
==ಪರಿಕಲ್ಪನೆ ೨==
 +
===ಚಟುಟವಟಿಕೆ-೧===
 +
#ವಿಧಾನ/ಪ್ರಕ್ರಿಯೆ
 +
#ಸಮಯ
 +
#ಸಾಮಗ್ರಿಗಳು/ಸಂಪನ್ಮೂಲಗಳು
 +
#ಹಂತಗಳು
 +
#ಚರ್ಚಾ ಪ್ರಶ್ನೆಗಳು
 +
=ಭಾಷಾ ವೈವಿಧ್ಯತೆಗಳು =
 +
==ಶಬ್ದಕೋಶ ==
 +
==ವ್ಯಾಕರಣ==
 +
=ಮೌಲ್ಯಮಾಪನ =
 +
'''ಚರ್ಚಾ ಕೂಟ'''
 +
# ಜಾನಪದ ಕಲೆಗಳು ಉಳಿಸುವದು ಅವಶ್ಯಕವೆ ?
 +
# ಜಾನಪದ ಕಲೆ ಉಳಿಸಲು ಏನು ಮಾಡಬೇಕು?
 +
# ಜಾನಪದ ಕಲೆಗಳಿಂದ ಕಲಿಯುವ ಪಾಠವೇನು ?
   −
==ಜಿಲ್ಲಾವಾರು ಪ್ರಶ್ನೆಪತ್ರಿಕೆಗಳು ಮತ್ತು ಅಧ್ಯಯನ ಸಾಮಗ್ರಿಗಳು/ಟಿಪ್ಪಣಿಗಳು:2012-13 ==
+
=ಭಾಷಾ ಚಟುವಟಿಕೆಗಳು/ ಯೋಜನೆಗಳು=
 +
=ಪಠ್ಯ ಬಗ್ಗೆ ಹಿಮ್ಮಾಹಿತಿ=
   −
==ಜಿಲ್ಲಾವಾರು ಪ್ರಶ್ನೆಪತ್ರಿಕೆಗಳು ಮತ್ತು ಅಧ್ಯಯನ ಸಾಮಗ್ರಿಗಳು/ಟಿಪ್ಪಣಿಗಳು:2011-12 ==
+
[[ವರ್ಗ:೯ನೇ ತರಗತಿ]]
+
[[ವರ್ಗ:ಪ್ರಥಮ ಭಾಷೆ]]
#ರವಿಆಹೇರಿ ಸರ್, GHS ಕೊಣನಕೇರಿ,ಹಾವೇರಿ ರವರು ಹಂಚಿಕೊಂಡಿರುವ ಪ್ರಶ್ನೆ ಪತ್ರಿಕೆಯನ್ನು ವೀಕ್ಷಿಸಲು [http://karnatakaeducation.org.in/KOER/images1/3/3d/SS.pdf ಈ ಲಿಂಕನ್ನು ಕ್ಲಿಕ್ಕಿಸಿ]<br>
+
[[ವರ್ಗ:ಜನಪದ ಕಲೆಗಳ ವೈಭವ]]
# ಹರಿಶ್ಚಂದ್ರ ಸ.ಪ.ಪೂ.ಕಾಲೇಜು ಬೆಳ್ಳಾರೆ ಇವರು ಹಂಚಿಕೊಂಡಿರುವ ಪ್ರಶ್ನಾ ಪತ್ರಿಕೆಗಳು [http://karnatakaeducation.org.in/KOER/index.php/%E0%B2%9A%E0%B2%BF%E0%B2%A4%E0%B3%8D%E0%B2%B0:Docx.pdf ಈ  ಲಿಂಕ್ ನ್ನು ಕ್ಲಿಕ್ಕಿಸಿ]<br>
 

ಸಂಚರಣೆ ಪಟ್ಟಿ