ಬದಲಾವಣೆಗಳು

Jump to navigation Jump to search
ಹೊಸ ಪುಟ: 'ನುಡಿ ಸಂಪದ' ಕಾರ್ಯಕ್ರಮ ಬೆಂಗಳೂರು ದಕ್ಷಿಣ ವಲಯ-3 ರಲ್ಲಿನ ಸರ್ಕಾರಿ ಶಾಲೆಗಳ...
'ನುಡಿ ಸಂಪದ' ಕಾರ್ಯಕ್ರಮ

ಬೆಂಗಳೂರು ದಕ್ಷಿಣ ವಲಯ-3 ರಲ್ಲಿನ ಸರ್ಕಾರಿ ಶಾಲೆಗಳು ಕಳೆದ ಮೂರು ವರ್ಷಗಳಿಂದ ಶಿಕ್ಷಕರ ಕಲಿಕಾ ವೇದಿಕೆಯನ್ನು ರೂಪಿಸಿಕೊಂಡು ಭಾಷಾ ಕಲಿಕೆ ,ವಿಜ್ಞಾನ ಮತ್ತು ಗಣಿತ ವಿಷಯಗಳ ಬೋಧನೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಕಲಿಕೆ ಮತ್ತು ಬೋಧನೆಗೆ ನೆರವಾಗುವಂತೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಮುನ್ನಡೆಯುತ್ತಿವೆ. ಇದರಲ್ಲಿ ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನ, ಸ್ಥಳೀಯ ಸಂಸ್ಥೆಗಳ ಭೇಟಿ ಮತ್ತು ಅದರ ವಿದ್ಯುನ್ಮಾನ ಕಥಾ ಪ್ರಸ್ತುತಿ,ತರಗತಿ ಬೋಧನೆಯಲ್ಲಿ ಶಿಕ್ಷಕರಿಗೆ ನೆರವು ಮುಂತಾದ ಕಾರ್ಯಕ್ರಮಗಳ ಮೂಲಕ ಪರಸ್ಪರ ಕಲಿಕೆ, ಸಂಪನ್ಮೂಲ ಸೃಷ್ಟಿ ಮತ್ತು ಹಂಚಿಕೆ,ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ಮೊದಲಾದವುಗಳ ಮೂಲಕ ಬೋಧನೆ ಮತ್ತು ಕಲಿಕೆಯು ಪರಿಣಾಮಕಾರಿಯಾಗಿಸುವಲ್ಲಿ ಪ್ರಯತ್ನಿಸ ಲಾಗುತ್ತಿದೆ.
ಇದರ ಮುಂದುವರಿದ ಚಟುವಟಿಕೆಯಾಗಿ ಮಕ್ಕಳಲ್ಲಿ ಕಲಿಕೆಯು ಆನಂದದಾಯಕವಾಗಿ ಮಾಡಿ,ಶಿಕ್ಷಕರಲ್ಲಿ ಹೊಸ ಸ್ಪೂರ್ತಿಯನ್ನು ತುಂಬಿ ಉತ್ತೇಜಿಸಲು 'ನುಡಿ ಸಂಪದ' ಎಂಬ ಹೆಸರಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದಾಗಿದ್ದು ಅದರಂತೆ, ಅಂತರಶಾಲಾ ಮಟ್ಟದಲ್ಲಿ ವಿವಿಧ ಭಾಷಾ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ.ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಅನೇಕ ರೀತಿಯ ಪ್ರತಿಭೆಗಳು ಹುದುಗಿದ್ದು, ಅದು ಎಲೆ ಮರೆಯ ಕಾಯಿ ಆಗದೆ ಈ ಪ್ರತಿಭೆಗಳ ಪ್ರದರ್ಶನಕ್ಕೆ ವೇದಿಕೆಯನ್ನು ಕಲ್ಪಿಸಿ ಇದರ ಮೂಲಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯವನ್ನು ತುಂಬುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.

ಉದ್ದೇಶ
1. ಕಾವ್ಯವಾಚನ ಮತ್ತು ನಾಟಕ ಅಭಿನಯಗಳಲ್ಲಿ ಭಾಗವಹಿಸುವಾಗ ಮಕ್ಕಳಲ್ಲಿ ಕಾವ್ಯಾತ್ಮಕ ಭಾವನೆ,ನೆನಪಿನ ಶಕ್ತಿಯ ವೃದ್ಧಿ,ಸಭಾ ನಿರ್ವಹಣೆ ಮತ್ತು ಅಭಿನಯ ಪ್ರವೃತ್ತಿ, ಮಕ್ಕಳಲ್ಲಿ ಭಾಷಾ ಪ್ರೌಢಿಮೆ, ಸೌಂದರ್ಯಪ್ರಜ್ಞೆ , ಮೊದಲಾದವುಗಳು ವೃದ್ದಿಯಾಗಿ ಆಧುನಿಕ ಜಗತ್ತಿಗೆ ತಮ್ಮನ್ನು ತಾವು ತೆರೆದುಕೊಳ್ಳುವಂತೆ ಮಾಡುತ್ತದೆ ಮತ್ತು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬೇರೆ ಶಾಲೆಗಳಿಗೆ ಭೇಟಿ ನೀಡುವುದರಿಂದ ಹೊಸ ಪರಿಸರದ ಪರಿಚಯ ಮತ್ತು ಸಾಮಾಜಿಕ ಹೊಂದಾಣಿಕೆ ನಿರ್ಮಾಣವಾಗಬಹುದು.
2. ಮಕ್ಕಳಲ್ಲಿ ತಮ್ಮ ಕವನ ಮತ್ತು ನಾಟಕದ ಮೂಲಕ ತಮ್ಮ ಅಂತರಾಳದ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮುಕ್ತ ಅವಕಾಶವಿರುವುದರಿಂದ ವಿವಿಧ ರೀತಿಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ.
3. ಶಿಕ್ಷಕರು ಪರಸ್ಪರ ಒಂದೆಡೆ ಸೇರುವುದರಿಂದ ಪರಸ್ಪರ ಉತ್ತಮ ಬಾಂಧವ್ಯ ,ಚರ್ಚೆ, ಸಹವರ್ತಿ ಕಲಿಕೆ ಏರ್ಪಡಬಹುದು

ಪ್ರಕ್ರಿಯೆ
ಈ ನುಡಿ ಸಂಪದ ಕಾರ್ಯಕ್ರಮವನ್ನು ಎರಡು ಹಂತದಲ್ಲಿ ದಕ್ಷಿಣ ವಲಯ-3 ಶಾಲೆಗಳಲ್ಲಿ ಮೂರು ಹಂತಗಳಲ್ಲಿ ಆಯೋಜಿಸಬಹುದಾಗಿದೆ.
ಮೊದಲನೇ ಹಂತ ;
ಸ್ಥಳ : ವಿಲ್ಸನ್ ಗಾರ್ಡೆನ್ ಶಾಲೆ;
ಭಾಗವಹಿಸಬಹುದಾದ ಶಾಲೆಗಳು ; ಯಡಿಯೂರು,ಟ್ಯಾ ಗಾರ್ಡೆನ್ , ಜಯನಗರ(ಪುಟ್ಟೇನಹಳ್ಳಿ)
ಉದ್ದೇಶಿತ ದಿನಾಂಕ ; ಜನವರಿ ತಿಂಗಳ ಮೊದಲನೇ ಶನಿವಾರ

ಎರಡನೇ ಹಂತ ;
ಸ್ಥಳ : ದೊಮ್ಮಲೂರು ಶಾಲೆ
ಭಾಗವಹಿಸಬಹುದಾದ ಶಾಲೆಗಳು - ಈಜೀಪುರ, ಆಡುಗೋಡಿ , (ಅಗರ, ಮಡಿವಾಳ) ಗೊಟ್ಟಿಗೆರೆ, ಬೆರಟನ ಅಗ್ರಹಾರ; ಬೇಗೂರು, ಗೊಟ್ಟಿಗೆರೆ, ಬೆರಟನ ಅಗ್ರಹಾರ ಕೊನಪ್ಪನ ಅಗ್ರಹಾರ
ಉದ್ದೇಶಿತ ದಿನಾಂಕ ; ಫೆಬ್ರವರಿ ತಿಂಗಳ ಮೊದಲ ವಾರ




ಮೂರನೇ ಹಂತ ;
ಸ್ಥಳ :ಕೋನಪ್ಪನ ಅಗ್ರಹಾರ
ಭಾಗವಹಿಸಬಹುದಾದ ಶಾಲೆಗಳು ; ಬೇಗೂರು, ಗೊಟ್ಟಿಗೆರೆ, ಬೆರಟನ ಅಗ್ರಹಾರ; ಬೇಗೂರು, ಗೊಟ್ಟಿಗೆರೆ, ಬೆರಟನ ಅಗ್ರಹಾರ
ಉದ್ದೇಶಿತ ದಿನಾಂಕ; ಫೆಬ್ರವರಿ ತಿಂಗಳ ಮೊದಲ ವಾರ

ಈ ನುಡಿ ಸಂಪದ ಕಾರ್ಯಕ್ರಮವು ಒಂದು ದಿನದ ಕಾರ್ಯಕ್ರಮವಾಗಿ ಶನಿವಾರದಂದು ಉದ್ದೇಶಿತ ಶಾಲೆಗಳಲ್ಲಿ ಬೆಳಗ್ಗೆ 09.30. ರಿಂದ ಸಂಜೆ 03.30ರ ವರೆಗೆ ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಶನಿವಾರದಂದು ಹಮ್ಮಿಕೊಂಡರೆ ಶಾಲೆಯಿಂದ ಶಾಲೆಗೆ ಮಕ್ಕಳ ಸಾರಿಗೆ ವ್ಯವಸ್ಥೆಗಾಗಿ ಉಚಿತ ವಾಹನ ಸೌಲಭ್ಯವನ್ನು ಧಾನಿಗಳು ಕಾಗ್ನಿಜೆಂಟ್ ಮಾಡಿಕೊಡಲು ಒಪ್ಪಿರುವುದರಿಂದ ಈ ದಿನವನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ.

ಈ ಶಾಲೆಗಳ 9 ನೇ ತರಗತಿಯ ಮಕ್ಕಳುಗಳು ಮತ್ತು ಆ ಶಾಲೆಗಳ ಕನ್ನಡ ಭಾಷಾ ಶಿಕ್ಷಕರು ಮತ್ತು ಆಸಕ್ತ ಶಿಕ್ಷಕರೊಬ್ಬರು ಭಾಗವಹಿಸಬಹುದಾಗಿದೆ.



ಮೊದಲು ಶಾಲಾಮಟ್ಟದಲ್ಲಿ ಪೂರ್ವಾಭ್ಯಾಸದ ಮಾದರಿಯಲ್ಲಿ ಅವರವರ ಶಾಲೆಯಲ್ಲಿ ತಯಾರಿಮಾಡಿಕೊಂಡು ನಂತರ ಅವರವರ ಸೂಚಿತ ವಿಭಾಗಗಳಲ್ಲಿ ನಡೆಸಬಹುದಾಗಿದೆ.

ಉದ್ದೇಶಿತ ಚಟುಡುವಟಿಕೆಗಳು;

1. ಡಿಜಿಟಲ್ ಕಥಾ ಪ್ರಸ್ತುತಿ ;(ಶಾಲೆಯಲ್ಲಿಯೇ ತಯಾರು ಮಾಡಿ ನಂತರ ಪ್ರಸ್ತುತಿ) 9 ನೇ ತರಗತಿಯಲ್ಲಿ ಇರುವ ಯಾವುದಾದರು ಪಠ್ಯವನ್ನು ಅಥವ ತಮಗೆ ಇಷ್ಡವಾದ ವಿಷಯವನ್ನು ಆಯ್ಕೆಮಾಡಿಕೊಂಡು ಅವರವರ ಇಷ್ಟಾನುಸಾರ ಡಿಜಿಟಲ್ ಕಥೆ ಮಾಡುವುದು.ಇದರಲ್ಲಿ ಚಿತ್ರ,ವೀಡಿಯೋ ತುಣುಕು ಧ್ವನಿ ಸೇರಿಸುವುದು ಮಾಡಬಹುದು. ನಂತರ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಬೇಕು. 10-15 ನಿಮಿಷ ಕಾಲಾವಕಾಶ ಇದರಲ್ಲಿ ಪ್ರತಿ ಶಾಲೆಯಿಂದ 5 ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಇದನ್ನು ಅವರವರ ಪ್ರತಿಭೆಗೆ ತಕ್ಕಂತೆ ಮಾರ್ಗದರ್ಶಕ ಶಿಕ್ಷಕರ ಸಹಾಯದಿಂದ ಪ್ರಸ್ತುತ ಪಡಿಸಬಹುದು.

2. ಸ್ವ ರಚಿತ ಕವನಕಾವ್ಯವಾಚನ ;
ಮೊದಲ ವಿಷಯವೆಂದರೆ- ಭಾಗವಹಿಸಿರುವ ಶಾಲೆಯ ಶಿಕ್ಷಕರು ತಮಗೆ ಇಷ್ಟವಾದ ವಿಷಯದ ಮೇಲೆ 15 ನಿಮಿಷದ ಕವನ ವಾಚನಮಾಡಿ ನಂತರ ಅದರ ತಾತ್ಪರ್ಯವನ್ನು ಸಭೆಗೆ ಮಂಡಿಸುವುದು.
ಎರಡನೆಯದು ಮಕ್ಕಳು ತಮಗೆ ಇಷ್ಟವಾದ – ವಿಷಯದ ಮೇಲೆ ಕವನ ರಚಿಸಿ ವಾಚಿಸಬಹುದು. ಹಾಗು ತಾತ್ಪರ್ಯವನ್ನು ಸಭೆಯಲ್ಲಿ ಮಂಡಿಸಬೇಕು. ಪ್ರತಿ ಶಾಲೆಗೆ, 1 ಹುಡುಗ ಮತ್ತು 1 ಹುಡುಗಿ ಬಾಗವಹಿಸಬಹುದು. ನಂತರ ಶಾಲೆಯ ಪಕ್ಕದಲ್ಲಿ ವಾಸವಿರುವ ಮಕ್ಕಳಿಗೆ ಕಲಿಸಲು ಆಸಕ್ತಿ ಇರುವ ಯಾರಾದರು ಸಾಹಿತಿಯ ಅಧ್ಯಕ್ಷತೆಯಲ್ಲಿ ನುಡಿ ಸಂಪದ ಕಾರ್ಯಕ್ರಮವನ್ನು ಹಮ್ಮಿಕೊಂಡು ಕವನ ವಾಚಿಸಿ ವಿಜೇತರಿಗೆ ಬಹುಮಾನ ವಿತರಣೆ ನೆರವೇರಿಸಬಹುದಾಗಿದೆ.
3. ನಾಟಕ ಅಭಿನಯ , ಸಾಮಾಜಿಕ ವಿಷಯದ ಮೇಲೆ ಅಥವ ಉತ್ತಮ ಸಂದೇಶವಿರುವ ನಾಟಕವನ್ನು ಕಲಿತು ಅಭಿನಯಿಸುವುದು. 20 ನಿಮಿಷಗಳ ಕಾಲಾವಕಾಶ. ಎಲ್ಲಾ ಅಗತ್ಯ ಪರಿಕರಗಳನ್ನು ಶಾಲೆಯವರೇ ಒದಗಿಸಿಕೊಳ್ಳಬೇಕು. ಐದಕ್ಕಿಂತ ಹೆಚ್ಚು ಮಕ್ಕಳು ಭಾಗವಹಿಸಬಹುದಾಗಿದೆ.
4. ರಸಪ್ರಶ್ನೆ ; ಪ್ರತಿ ಶಾಲೆಯಿಂದ ಮೂರು ಜನ ಭಾಗಿಗಳು, ರಸಪ್ರಶ್ನೆಯು ನಾಲ್ಕು ಸುತ್ತು ಮಾಡಬಹುದು - 1 ಸುತ್ತಿಗೆ 2 ಪ್ರಶ್ನೆಗಳು - ಕಾಲಾವಧಿ-1.30 ಗಂಟೆಗಳನ್ನು ನಿಗದಿ ಮಾಡಬಹುದು
1. ಚಿತ್ರ ಗುರುತಿಸಿ ಉತ್ತರಿಸುವುದು ; ಪರದೆಯ ಮೇಲೆ ಕಾಣುವ ಚಿತ್ರವನ್ನು ಗುರುತಿಸಿ ತಮ್ಮ ತಂಡದ ಜೊತೆ ಚರ್ಚಿಸಿ ಹೇಳಬೇಕು.
2. ಪದಮಾಲೆ ; ಆಯೋಜಕರು ತಿಳಿಸಿದ ಪದದ ಕೊನೆ ಅಕ್ಷರದಿಂದ ಆರಂಭವಾಗುವ 2ಅಕ್ಷರದ 5 ಪದ ಮೊದಲ ಸುತ್ತಿನಲ್ಲಿ ನಂತರ 3 ಅಕ್ಷರದ 5 ಪದ ಪ್ರತಿ ಉತ್ತರಕ್ಕೆ 2 ಅಂಕಗಳನ್ನು ನಿಗಧಿ ಪಡಿಸಲಾಗಿದೆ. ಪ್ರತಿ ಪದಕ್ಕೆ 2 ಅಂಕಗಳು
3. ಶಬ್ಧವನ್ನು ಆಲಿಸಿ ಪ್ರಶ್ನೆಗಳಿಗೆ ಉತ್ತರಿಸುವುದು ; ಪ್ರತಿ ತಂಡಕ್ಕೂ 2 ಪ್ರಶ್ನೆಗಳು ಉದಾ; ನೀರಹನಿ ತೊಟ್ಟಿಕ್ಕುವುದು,ನೀರು ಹರಿಯುವುದು ಇತ್ಯಾದಿ
4. ವೀಡಿಯೋ ವೀಕ್ಷಣೆ; ಈ ವಿಭಾಗದಲ್ಲಿ 30 ಸೆಕೆಂಡ್ ನ ವೀಡಿಯೋ ವೀಕ್ಷಿಸಿ ನಂತರ ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಾರೆ. ಉದಾ; ಜಲಪಾತವನ್ನು ತೋರಿಸಿ ಇದು ಯಾವ ಜಲಪಾತ?, ದೇವಾಲಯವನ್ನು ತೋರಿಸಿ ಇದು ಯಾವ ದೇವಾಲಯ?. ಎಂದು ಗುರುತಿಸಿ ಹೇಳಬೇಕು. ಪ್ರಶ್ನೆಗಳನ್ನು ಸಾಧ್ಯವಾದಷ್ಟು ಸರಾಸರಿಯ ಮಟ್ಟದಲ್ಲಿ ಕೇಳಬಹುದಾಗಿದೆ.


ಈ ಎಲ್ಲಾ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಮತ್ತು ಶಿಕ್ಷಕರಲ್ಲಿ ಹೊಸ ಅನುಭವವನ್ನು ತುಂಬ ಬಹುದಾಗಿದೆ.ಇದಕ್ಕೆ ಮುಖ್ಯ ಶಿಕ್ಷಕರ ಮತ್ತು ವಿಷಯ ಶಿಕ್ಷಕರ ಸಹಕಾರ ಮತ್ತು ಭಾಗವಹಿಸುವಿಕೆ ಅತಿ ಮುಖ್ಯವಾಗಿರುತ್ತದೆ.
ಇದಕ್ಕೆ ಸಂಬಂದಿಸಿದಂತೆ ಕೆಲವು ಉದ್ದೇಶಿತ ಚಟುವಟಿಕೆಗಳ ಹೆಸರನ್ನು ತಮ್ಮೊಂದಿಗೆ ಹಂಚಿಕೊಂಡಿದ್ದು ಇದಕ್ಕೆ ಸಂಬಂಧಿಸಿದಂತೆ ವಲಯದ ಕೆಲವು ಶಾಲೆಗಳ ಶಿಕ್ಷಕರ ಜೊತೆ ಈ ಪ್ರಕ್ರಿಯೆಯ ಬಗ್ಗೆ ಚರ್ಚಿಸಲಾಗಿದ್ದು ಅವರ ಸಲಹೆ ಮತ್ತು ಮಾರ್ಗದರ್ಶನವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಇದರ ಸಾಧಕ ಬಾಧಕಗಳನ್ನು ಚರ್ಚಿಸಲು ಮತ್ತು ಅವರವರ ಅನಿಸಿಕೆ ಅಭಿಪ್ರಾಯಗಳನ್ನು ಈ ವೇದಿಕೆಯಲ್ಲಿ ಹಂಚಿಕೊಳ್ಳಲು ತಮ್ಮನ್ನು ಪ್ರೀತಿಪೂರ್ವಕವಾಗಿ ಆಹ್ವಾನಿಸುತ್ತೇವೆ.

ಸಂಚರಣೆ ಪಟ್ಟಿ