Difference between revisions of "STF 2015-16 Bengaluru Rural"

From Karnataka Open Educational Resources
Jump to navigation Jump to search
Line 125: Line 125:
 
===See us at the Workshop===
 
===See us at the Workshop===
 
{{#widget:Picasa
 
{{#widget:Picasa
|user=
+
|user=itfc.stfkoer@gmail.com
|album=
+
|album=6218463318077311857
 
|width=300
 
|width=300
 
|height=200
 
|height=200
Line 133: Line 133:
 
|interval=5
 
|interval=5
 
}}
 
}}
 
  
 
===Workshop short report===
 
===Workshop short report===

Revision as of 12:16, 18 November 2015

Science

Batch 1

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 2

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Kannada

Batch 1

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.

Batch 2

Agenda

If district has prepared new agenda then it can be shared here

See us at the Workshop


Workshop short report

1st Day

2nd Day ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಎರಡನೆಯ ತಂಡದ
ಕನ್ನಡ ಭಾಷಾ ಶಿಕ್ಷಕರ ವೇದಿಕೆ ತರಬೇತಿ ಕಾರ್ಯಾಗಾರ.
ಸ್ಥಳ : ಡಯಟ್, ಬೆಂಗಳೂರು ಗ್ರಾಮಾಂತರ ಜಿಲ್ಲೆ.
೨ ನೇ ದಿನದ ಕಾರ್ಯಾಗಾರದ ವರದಿ.
ದಿನಾಂಕ:- ೦೪-೧೧-೨೦೧೫
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ
ಕೂಡಲ ಸಂಗನ ಶರಣರ ಅನುಭಾವದ ಬಲದಿಂದ ಎನ್ನ ಭವದ ಕೇಡು ನೋಡಯ್ಯ
ಎಂಬಂತೆ ವಿಷಯ ಶಿಕ್ಷಕರ ವೇದಿಕೆಯಲ್ಲಿ ಭಾಗವಹಿಸಿದ ಶಿಕ್ಷಕರ ಕಂಪ್ಯೂಟರ್ ಬಳಕೆಯ ಜ್ಞಾನ ಹೆಚ್ಚಿಸಿಕೊಳ್ಳಲು ಅನುಕೂಲವಾಗುತ್ತದೆ. ದಿನಾಂಕ ೦೩-೧೧-೨೦೧೫ ರ ಎರಡನೇ ದಿನದ ಕಾರ್ಯಾಗರವನ್ನು ಬೆಳ್ಳಿಗ್ಗೆ ೧೦ ಗಂಟೆಗೆ ಶ್ರೀಮತಿ ತ್ರಿವೇಣಿ .ಎಂ G H S ಬರದಿ ಯವರ ಪ್ರಾರ್ಥ ನೆಯೊಂದಿಗೆ ಕಾರ್ಯಾಗಾರ ಪ್ರಾರಂಭವಾಯಿತು . ನಂತರ ಶ್ರೀಯುತ ಮನ್ವಾಚಾರ್‌ ಜಿ.ಹೆಚ್‌.ಎಸ್‌ ಹೊಸಹಳ್ಳಿ ರವರಿಂದ ಚಿಂತನೆ "ನಹಿ ಜ್ಞಾನೇನ ಸದೃಶಂ "ಎಂಬ ವಾಕ್ಯವನ್ನು ಕೇಳಿ
ಜ್ಞಾನದ ಮಹತ್ವವನ್ನು ತಿಳಿಸಿದರು.ನಂತರ ಮೊದಲನೆ ದಿನದ ವರದಿ ಮಂಡನೆಯನ್ನು ಶ್ರೀಯುತ ದಿನೇಶ್ ರವರು ಜಿ ಜೆ ಸಿ ದೇವನಹಳ್ಳಿ ಸಂಪೂರ್ಣವಾದ ವರದಿನ್ನು ಮಂಡಿಸಿದರು . ಆ ವೇಳೆಗಾಗಲೇ ವಿದ್ಯುತ್ತ್ ವಯತ್ಯದಿಂದಾಗಿ ಆ ಸಮಯದ ಸದುಪಯೋಗವಾಗಲೆಂದು ಸಂಪನ್ಮೂಲ ವ್ಯಕ್ತಿಗಾಳಾದ ರಾಜು ಅವಳೇಕರ್‌ರವರು ubuntu ಎಂಬ software ನಿಂದ ಆಗುವ ಅನುಕೂಲಗಳನ್ನು ಈ ಹಿಂದೆ ಇದ್ದ windows ಗೆ ಹೋಲಿಸುತ್ತ ವಿಸ್ತಾರಾವಾಗಿ ವಿವರಿಸಿದರು .ಅವರು ಹೇಳಿದ ಮಾತುಗಳನ್ನು ಕೇಳಿ ನಮಗು ubuntu ವನ್ನು ಬಳಸುವುದನ್ನು ಕಲಿಯ ಬೇಕೆಂಬ ಆಸೆ ಉಂಟಾಯಿತು.
ತದನಂತರ ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಗಂಗರಾಜು ಎಂ ರವರು STF ನ ಗುರಿ ಉದ್ದೇಶಗಳನ್ನು ಇಂದಿನ ಪರಿಸ್ಥಿತಿಗಳಿಗೆ ಹೋಲಿಕೆ ಮಾಡಿ ಸುಂದರವಾಗಿ ವಿವರಿಸಿದರು. ಅಷ್ಟರಲ್ಲಿ ವಿದ್ಯುತ್‌ ಬಂದಿತು. ಎಲ್ಲಾ ಶಿಬಿರಾರ್ಥಿಗಳು ತಮಗೆ ಹಿಂದಿನ ದಿನ ನೀಡಿದ ಪಾಠಗಳಿಗೆ ವಿಷಯ ಸಂಗ್ರಹ ಮಾಡುವುದಕ್ಕಾಗಿ ತಮಗೆ ನೀಡಿದ ಗಣಕಯಂತ್ರಗಳಲ್ಲಿ ಕಾರ್ಯಾನಿರತರಾದರು. . ಅಷ್ಟರಲ್ಲಿ 11:45 ಕ್ಕೆ ಟೀ ವಿರಾಮ ನೀಡಲಾಯಿತು. 12:00 ಗಂಟೆಗೆ ಪುನರ್‌ ಆರಂಭವಾದಾಗ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ರಾಜು ಅವಳೇಕರ್‌ರವರು libro office writer ನಲ್ಲಿ ಟೈಪ್‌ ಮಾಡುವುದು , ಉಳಿಸುವುದು , ಭಾಷೆ ಆಯ್ಕೆ , ಆಕ್ಷರಗಳ ಗಾತ್ರ ಬದಲಾವಣೆ ಮುಂತಾದ ವಿಷಯಗಳನ್ನು ತಮ್ಮ ಪ್ರೊಜೆಕ್ಟರ್ ಮುಖಾಂತರ ವಿವರಿಸಿದರು. ನಂತರ ಎಲ್ಲಾ ಶಿಬಿರಾರ್ಥಿಗಳು ಅವರು ಹೇಳಿದಂತೆ ತಮ್ಮ ಕಂಪ್ಯೂಟರ್ ಗಳಲ್ಲಿ ಅಭ್ಯಸಿಸಿದರು. ಮದ್ಯಾಹ್ನ ೧.೩೦ಕ್ಕೆ ಊಟದ ವಿರಾಮ, ೨.೧೫ಕ್ಕೆ ಪುನಃ ಅಪರಾಹ್ನದ ಕಾರ್ಯಾಗಾರ ಪ್ರಾರಂಭ. ಆದರೆ ವಿದ್ಯುತ್ ಮತ್ತೇ ಕೈಕೊಟ್ಟಿದ್ದರಿಂದ ಎಲ್ಲಾ ಶಿಬಿರಾರ್ಥಿಗಳು ತಮಗೆ ಆದ ಅನುಭವಗಳನ್ನು ತಮ್ಮಲ್ಲೇ ಚರ್ಚಿಸುತ್ತಿದ್ದರು. ೩.೧೫ಕ್ಕೆ ವಿದ್ಯುತ್ ಬಂದ ತಕ್ಷಣ ಎಲ್ಲಾ ಶಿಬಿರಾರ್ಥಿಗಳು ತಮ್ಮ ಕಂಪ್ಯೂಟರ್ ಗಳಲ್ಲಿ ಕಾರ್ಯನಿರತರಾದರು ನಂತರ ಚಹಾವಿರಾಮ ನಂತರ ಸಂಪನ್ಮೂಲ ವ್ಯಕ್ತಿಗಳು ಪ್ರೋಜೆಕ್ಟರ್ ಮೂಲಕ ಜಿ-ಮೇಲ್ ಮಾಡುವ ಅಕೌಂಟ್ ತೆಗೆಯುವಲ್ಲಿ ಅನುಸರಿಸಬೇಕಾದ ಹಂತಗಳನ್ನು, ಮೇಲ್ ಕಳುಹಿಸಬೇಕಾದ ಹಂತಗಳನ್ನು, ಹೊಸ ಐ.ಡಿ. ತೆರೆಯುವ ವಿಧಾನವನ್ನು ತಿಳಿಸಿದರು. ಅಷ್ಟು ಹೊತ್ತಿಗೆ ಸಂಜೆಯ ೫ಗಂಟೆ ಸಮಯ. ದಿನದ ಕಾರ್ಯಾಗಾರವನ್ನು ಮುಗಿಸಲಾಯಿತು.
ವರದಿ ಸಿದ್ಧತೆ :
ಶ್ರೀ. ಹರೀಶ್ ಆರ್. ಕನ್ನಡ ಭಾಷಾ ಶಿಕ್ಷಕರು,
ಸ.ಪ್ರೌ.ಶಾಲೆ, ಬೆಂಡಿಗಾನಹಳ್ಳಿ, ಹೊಸಕೋಟೆ ತಾಲ್ಲೂಕು.

3rd Day

4th Day

5th Day.

Batch 3

Agenda

If district has prepared new agenda then it can be shared here

See us at the Workshop

Workshop short report

1st Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಜಿಲ್ಲಾ ಹಂತದ ಎಸ್.ಟಿ.ಎಫ್. ತರಬೇತಿ ಬ್ಯಾಚ್ -೩.
ಕನ್ನಡಭಾಷಾ ಶಿಕ್ಷಕರ ವಿಷಯ ವೇದಿಕೆ (STF) ತರಬೇತಿ ೨೦೧೫-೧೬
-: ಮೊದಲನೇ ದಿನದ ವರದಿ :-
ದಿನಾಂಕ ೧೬-೧೧-೨೦೧೫ ರ ಸೋಮವಾರದಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ರಾಜಾಜಿನಗರ ಇಲ್ಲಿ ವಿಷಯ ಶಿಕ್ಷಕರ ವೇದಿಕೆ ೩ನೇ ಬ್ಯಾಚ್ ನ ತರಬೇತಿ ಕಾರ್ಯಾಗಾರ ಆರಂಭವಾಯಿತು. ಈ ಕಾರ್ಯಕ್ರಮಕ್ಕೆ ಹಿರಿಯ ಉಪನ್ಯಾಸಕಿಯಾದ ಶ್ರೀಮತಿ ರತ್ನಮ್ಮನವರು , ಹಿರಿಯ ಉಪನ್ಯಾಸಕರಾದ ಶ್ರೀಯುತ ಶಂಕರೇಗೌಡರು ಹಾಗೂ ಶ್ರೀಯುತ ರಮೇಶ ರವರು ಹಾಜರಿದ್ದು ತರಬೇತಿ ಕಾರ್ಯಾಗಾರಕ್ಕೆ ಚಾಲನೆಯನ್ನು ನೀಡಿ ತರಬೇತಿ ಸದುಪಯೋಗವನ್ನು ಪಡೆಯಲು ಆಶಿಸಿದರು. ಈ ಕಾರ್ಯಕ್ರಮವು ಶಿಕ್ಷಕರಾದ ಶ್ರಿ ಎಸ್.ಮೂರ್ತಿರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಜು ಅವಳೇಕರ ರವರು ತಮ್ಮ ಪರಿಚಯ ಹಾಗೂ ಎಲ್ಲ ಶಿಬಿರಾರ್ಥಿಗಳ ಪರಿಚಯ ಮಾಡಿಕೊಂಡು ಕಲಿಯುವ ಕಲಿಸುವ ಮಹತಿಯನ್ನು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ರಾಜು ಅವಳೆಕರ್ ರವರು ಉಬಂಟು, ಈಮೇಲ್ , ಪಿಪಿಟಿ, ಫೋಲ್ಡರ್, ವಿಂಡೋ ಮುಂತಾದ ವಿಚಾರಗಳ ಬಗ್ಗೆ ತಿಳಿಸಿಕೊಟ್ಟರು. ನಂತರ ಪ್ರತಿಯೊಬ್ಬ ಶಿಕ್ಷಕರಿಗೆ ಗದ್ಯ ಹಾಗೂ ಒಂದು ಪದ್ಯ ಕೊಟ್ಟು ಇವುಗಳಿಗೆ ಸಂಬಂದಿಸಿದಂತೆ ಅಂತರ್ಜಾಲ ಬಳಸಿ ಮಾಹಿತಿಗಳನ್ನು ಸಂಗ್ರಹಿಸಿ ಅದನ್ನು ದಾಖಲಿಸುವಂತೆ ತಿಳಿಸಲಾಯಿತು.
ಊಟದ ವಿರಾಮದ ನಂತರ ಇದೇ ಪ್ರಕ್ರಿಯೆ ಮುಂದುವರೆಯಿತು .ರಾಜು ಅವಳೇಕರ್ ರವರು ಎಸ್.ಟಿ.ಎಫ್. ನ ಉದ್ಧೇಶಗಳು gmail create ಮಾಡುವುದು ಹೇಗೆಂಬುದನ್ನು ಸವಿಸ್ತಾರವಾಗಿ ತಿಳಿಸಿದರು . ಹಾಗೂ ಎಲ್ಲಾ ಶಿಕ್ಷಕರ ಜಿ.ಮೇಲ್ ಐ.ಡಿ. ಗಳನ್ನು ತೆರೆಯಲಾಯಿತು. ಸಂಪನ್ಮೂಲ ವ್ಯಕ್ತಿಗಳು ಶಿಕ್ಷಕರಿಗೆ ಇದಕ್ಕೆ ಸಂಬಂದಿಸಿದಂತೆ ಮಾರ್ಗದರ್ಶನ ನೀಡಿದರು. ಡೆಸ್ಕಟಾಪ್ ಮೇಲೆ ತಮಗೆ ನೀಡಲಾದ ಗದ್ಯ ಪದ್ಯಕ್ಕೆ ಸಂಬಂಧಿಸಿದಂತೆ ಫೋಲ್ಡರ್ ಗಳನ್ನು ತಯಾರಿಸಿಕೊಳ್ಳಲಾಯಿ ಮತ್ತು ಅದರ ಒಳಗೆ ಮತ್ತೇ ಉಪಕಡತಗಳನ್ನು ನಿರ್ಮಿಸಿಕೊಂಡು ಅದರಲ್ಲಿ ಅಂತರ್ಜಾಲದಿಂದ ಸಂಗ್ರಹಿಸಲಾದ ವಿಷಯಗಳನ್ನು ಆಯಾಯ ಫೋಲ್ಡರ್ ಗಳಲ್ಲಿ ಸಂಗ್ರಹಿಸುವುದನ್ನು ಕಲಿಯುವ ಶ್ರಮದಲ್ಲಿ ನಿರತರಾದರು. ಚಹಾ ವಿರಾಮದ ನಂತರ ಇದೇ ಪ್ರಕ್ರಿಯೆ ಮುಂದುವರೆಯಿತು ನಂತರ ದಿನದ ಅಂತ್ಯದಲ್ಲಿ ಕಲಿತ ವಿಷಯಗಳ ಮೆಲುಕು ಹಾಕುತ್ತ ಸಂಜೆ ೫:೦೦ ಗಂಟೆಗೆ ಸರಿಯಾಗಿ ಕಾರ್ಯಕ್ರಮ ಮುಕ್ತಾಯವಾಯಿತು .
ವರದಿ ತಯಾರಿ ಮತ್ತು ಮಂಡನೆ :
ಶ್ರೀ. ಸಿದ್ಧರಾಜಯ್ಯ ಆರ್,
ಕನ್ನಡ ಭಾಷಾ ಶಿಕ್ಷಕರು,


2nd Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಬೆಂಗಳೂರು ಗ್ರಾಮಾಂತರ ಜಿಲ್ಲೆ.
ರಾಜಾಜಿನಗರ ಬೆಂಗಳೂರು .
ಕನ್ನಡ ಎಸ್.ಟಿ.ಎಫ್. ತರಬೇತಿ ಮೂರನೆಯ ತಂಡ.
ದಿನಾಂಕ : ೧೬-೧೧-೨೦೧೫ ರಿಂದ ೨೦-೧೧-೨೦೧೫.
ಎರಡನೆಯ ದಿನದ ಚಿಂತನ :-
ದಿನಾಂಕ : ೧೭-೧೧-೨೦೧೫.
ಉಣಲೆಂದು ಬಂದು ಸುಖಉಂಡಲ್ಲದೆ ಹರಿಯದು
ಕಾಣಲೆಂದು ಬಂದ ಸುಖಕಂಡಲ್ಲದೆ ಹರಿಯದು
ತನುವಂಗೆ ಬಂದ ಕ ಹರಿವಕಾಲಕ್ಕೆ
ಚೆನ್ನ ಮಲ್ಲಿಕಾರ್ಜನ ದೇವರು ಕಡೆಗಣ್ಣಿನಿಂದ ನೋಡಿದರು.
ಪಾತಾಳವಿತ್ತತ್ತ, ಪದಂಗಳತ್ತತ್ತ,
ದಶದಿಕ್ಕು ಇತ್ತಿತ್ತ, ದಶಭುಜಂಗಳತ್ತತ್ತ,
ಬ್ರಹ್ಮಾಂಡವಿತ್ತಿತ್ತ, ಮಣಿಮುಕುಟವತ್ತತ್ತ,
ಚೆನ್ನಮಲ್ಲಿಕಾರ್ಜುನಯ್ಯ
ನೀವೆನ್ನ ಕರಸ್ಥಳಕೆ ಬಂದು ಚುಳುಕಾದಿರಲ್ಲಾ ಲಿಂಗವೆ

ಇಂದಿನ ಈ ತರಬೇತಿಯ ಸದುದ್ದೇಶವನ್ನು ಮನಗಂಡು ಈ ಮೇಲಿನ ವಚನಕಾರರ ಸೂಳ್ನುಡಿಯ ಮಹತಿಯನ್ನು ತಿಳುಹುವ ಈ ಚಿಂತನ ನಮ್ಮ ಬದುಕಿನ ಉದ್ಧೇಶವನ್ನು ತಿಳಿಸುತ್ತದೆ. ಅದಲ್ಲದೆ ಮಾನವ ತನ್ನ ಅಹಂಕಾರದಿಂದ ಈ ಪರಿಸರವನ್ನು ತನನ್ ಮನಸೋ ಇಚ್ಛೆ ಬಳಸಿ ಹಾಳು ಮಾಡುತ್ತಿದ್ದಾನೆ, ತನ್ನ ಕಾಲ ಮೇಲೆ ಕಲ್ಲು ಚೆಲ್ಲಿಕೊಳ್ಳುತ್ತಿದ್ದಾಬೆ, ಅದರಂತೆ ಪರಿವರ್ತನೆಯ ದಿನಗಳಲ್ಲಿ ಮನುಷ್ಯ ಬದಲಾಗುವುದನ್ನು ಕಲಿಯಬೇಕು.ತಮ್ಮ ಕರ್ಮದ ಗುರಿಯನ್ನು ಮರೆಯಬಾರದು ಎಂಬುದೇ ಈ ಚಿಂತನದ ಉದ್ಧೇಶ...
ಸಿದ್ಧಪಡಿಸಿದವರು :
ಅಶ್ವತ್ತನಾರಾಯಣಪ್ಪ.ಜಿ. ಸಹ ಶಿಕ್ಷಕರು,
ಮಹಾತ್ಮ ಪ್ರೌಢಶಾಲೆ ವಿಜಯಪುರ, ದೇವನಹಳ್ಳಿ ತಾ. ಬೆಂ.ಗ್ರಾ.ಜಿ.


3rd Day
ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಮೂರನೆಯ ತಂಡದ
ಕನ್ನಡ ಭಾಷಾ ಶಿಕ್ಷಕರ ವೇದಿಕೆ ಎಸ್.ಟಿ.ಎಫ್. ತರಬೇತಿ ಕಾರ್ಯಾಗಾರ.
ಸ್ಥಳ : ಡಯಟ್, ಬೆಂಗಳೂರು ಗ್ರಾಮಾಂತರ ಜಿಲ್ಲೆ.
೨ ನೇ ದಿನದ ಕಾರ್ಯಾಗಾರದ ವರದಿ.
ದಿನಾಂಕ:- ೧೮-೧೧-೨೦೧೫
ಜೀವನದಲ್ಲಿ ಯಶಸ್ಸಿಗಿಂತ ಆತ್ಮತೃಪ್ತಿಯೆ ಮುಖ್ಯ
ಯಾಕೆಂದರೆ ಯಶಸ್ಸನ್ನು ಬೇರೆಯವರು ಅಳೆಯುತ್ತಾರೆ
ಆದರೆ ಆತ್ಮತೃಪ್ತಿಯನ್ನು ನಾವೇ ಅಳೆದುಕೊಳ್ಳಬೇಕು ".
ದಿನಾಂಕ : ೧೭-೧೧-೨೦೧೫ ರ ಎರಡನೇ ದಿನದ ಕಾರ್ಯಾಗಾರವನ್ನು ಬೆಳ್ಳಿಗ್ಗೆ ೧೦ ಗಂಟೆಗೆ ಶ್ರೀ ಕಂಬದರಂಗಯ್ಯ ಅವರ ಪ್ರಾರ್ಥನೆಯೊಂದಿಗೆ ಕಾರ್ಯಾಗಾರ ಪ್ರಾರಂಭವಾಯಿತು. ನಂತರ ಶ್ರೀಯುತ ಅಶ್ವತ್ ನಾರಾಯಣಪ್ಪನವರು ದಿನದ ಚಿಂತನೆಯಲ್ಲಿ ವಚಕಾರರ ವಚನಗಳ ಮಹತಿಯನ್ನು ತಿಳಿಸುತ್ತ ಸಕ್ರೀಯವಾಗಿ ಎಲ್ಲರೂ ಕಲಿಕೆಯಲ್ಲಿ ತೊಡಗಿ ಸಾಧನೆಯ ದಾರಿಯಲ್ಲಿ ಸಾಗಬೇಕೆಂದು ತಿಳಿಸಿದರು.ನಂತರ ಶ್ರೀ. ಸಿದ್ಧರಾಜುರವರು ಮೊದಲ ದಿನದ ತರಬೇತಿಯ ಮೆಲುಕುಹಾಕುವ ವರದಿಯನ್ನು ಮಂಡಿಸಿದರು.
ನಂತರ ಸಂಪನ್ಮೂಲ ವ್ಯಕ್ತಿಗಳಾದ ರಾಜು ಅವಳೇಕರ ರವರು ನಿಜಗುಣರ ಸೂಳ್ನುಡಿಯನ್ನು ತಿಳಿಸುತ್ತ ಜ್ಞಾನದ ಮಹತ್ವವನ್ನು ತಿಳಿಸಿದರು. libro office writer ನಲ್ಲಿ ಸಂಪನ್ಮೂಲ ರಚನೆಯ ಹಂತಗಳನನ್ನು ತಿಳಿಸಿ ಪ್ರಾಯೋಗಿಕವಾಗಿ ತಿಳಿಸುತ್ತ ಸಂದೇಹಗಳನ್ನು ಪರಿಹರಿಸುತ್ತ ಸಾಗಿದರು, ಟೈಪು ಮಾಡುವುದು ಅಕ್ಷರಗಳ ಜೋಡಣೆ, ಗಾತ್ರ ಬಲಿಸುವುದು, ಕಡತವನ್ನು ಉಳಿಸುವುದು. ಭಾಷೆ ಆಯ್ಕೆ , ಆಕ್ಷರಗಳ ಗಾತ್ರ ಬದಲಾವಣೆ ಮುಂತಾದ ವಿಷಯಗಳನ್ನು ತಮ್ಮ ಪ್ರೊಜೆಕ್ಟರ್ ಮುಖಾಂತರ ವಿವರಿಸಿದರು. ನಂತರ ಎಲ್ಲಾ ಶಿಬಿರಾರ್ಥಿಗಳು ಅವರು ಹೇಳಿದಂತೆ ತಮ್ಮ ಕಂಪ್ಯೂಟರ್ ಗಳಲ್ಲಿ ಅಭ್ಯಸಿಸಿದರು.
ಅಂತರ್ಜಾಲದಿಂದ ಪಠ್ಯವನ್ನು ಪಡೆದುಕೊಳ್ಳುವ ರೀತಿಯನ್ನು ತಿಳಿಸುವುದರೊಂದಿಗೆ ಹೈಪರ್ ಲಿಂಕ್ ಮಾಡುವುದನ್ನು ತಿಳಿಸಿದರು. ಇದನ್ನು ಪ್ರತಿಯೊಬ್ಬ ಶಿಕ್ಷಕರು ಕಲಿಯುವ ಸರ್ಕಸ್ ನಲ್ಲಿ ತೊಡಗಿದರು.
ಮದ್ಯಾಹ್ನ ೧.೩೦ಕ್ಕೆ ಊಟದ ವಿರಾಮ, ೨.೧೫ಕ್ಕೆ ಪುನಃ ಅಪರಾಹ್ನದ ಕಾರ್ಯಾಗಾರ ಪ್ರಾರಂಭ. ಶಿಬಿರಾರ್ಥಿಗಳು ತಮಗೆ ವಹಿಸಿದ ಗದ್ಯ ಪದ್ಯ ಗಳಿಗೆ ಸಂಬಂಧಿಸಿದಂತೆ ಅಂತರ್ಜಾಲದಿಂದ ಮಾಹಿತಿಗಳನ್ನು ಸಂಗ್ರಹಸಿದರು. ಮತ್ತು ತಮ್ಮಕಡತಗಳಲ್ಲಿ ಸೇವ್ ಮಾಡಿದರು. ನಂತರ ಸಂಪನ್ಮೂಲ ವ್ಯಕ್ತಿಗಳು ಜಿ.ಮೇಲ್ ಐ,ಡಿ. ಅಕೌಂಟ್ ಬಗ್ಗೆ ಮತ್ತೆ ತಿಳಿಸುತ್ತ ಅಕೌಂಟ್ ಗೆ ಸಹಿ ಅಳವಡಿಸುವುದನ್ನು ಪ್ರಾಯೋಗಿಕವಾಗಿ ತಿಳಿಸಿದರು. ನಂತರ ಚಹಾವಿರಾಮ ನಂತರ ಸಂಪನ್ಮೂಲ ವ್ಯಕ್ತಿಗಳು ಪ್ರೋಜೆಕ್ಟರ್ ಮೂಲಕ ಚಿತ್ರಗಳನ್ನು ಅಂತರ್ಜಾಲದಿಂದ ಸಂಗ್ರಹಿಸುವ ಮತ್ತು ಕಡತದಲ್ಲಿ ಅಂಟಿಸುವ ಮಾಹಿತಿಯನ್ನು ತಿಳಿಸಿದರು. ಚಿತ್ರಗಳನ್ನು ಡೌನ್ ಲೋಡ್ ಮಾಡುವ ರೀತಿಯನ್ನು ತಿಳಿಸಿದರು, ಜಿ-ಮೇಲ್ ಮಾಡುವ ಅಕೌಂಟ್ ತೆಗೆಯುವಲ್ಲಿ ಅನುಸರಿಸಬೇಕಾದ ಹಂತಗಳನ್ನು, ಮೇಲ್ ಕಳುಹಿಸಬೇಕಾದ ಹಂತಗಳನ್ನು, ಹೊಸ ಐ.ಡಿ. ತೆರೆಯುವ ವಿಧಾನವನ್ನು ತಿಳಿಸಿದರು. ಅಷ್ಟು ಹೊತ್ತಿಗೆ ಸಂಜೆಯ ೫ಗಂಟೆ ಸಮಯ. ದಿನದ ಕಾರ್ಯಾಗಾರವನ್ನು ಮುಗಿಸಲಾಯಿತು.
ವರದಿ ಸಿದ್ಧತೆ :
ಶ್ರೀ. ಕಂಬದರಂಗಯ್ಯ ಸಿ.ಆರ್. ಕನ್ನಡ ಭಾಷಾ ಶಿಕ್ಷಕರು,
ಕೊಂಗಾಡಿಯಪ್ಪ ಪ್ರೌಢಶಾಲೆ, ದೊಡ್ಡಬಳ್ಳಾಪುರ.

4th Day

5th Day.