Anonymous

Changes

From Karnataka Open Educational Resources
13,199 bytes added ,  07:44, 19 December 2013
Line 138: Line 138:  
}}
 
}}
   −
==Workshop short report==
+
 
Upload workshop short report here (in ODT format)
+
ಸಮಾಜ ವಿಜ್ಞಾನ ವಿಷಯ ಶಿಕ್ಷಕರ ತರಬೇತಿ ಕಾರ್ಯಕ್ರಮ.ಡಯಟ್,ಶಿವಮೊಗ್ಗ.ದಿನಾಂಕ : 16-12-2013 ರಿಂದ 20-12-2013 ( 1st Batch )
 +
ಪ್ರಥಮ ದಿನದ ವರದಿ:- ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ , ಶಿವಮೊಗ್ಗ  ಇಲ್ಲಿ ದಿನಾಂಕ :16-12-2013 ರಿಂದ 20-12-2013 ರವರೆಗೆ 5 ದಿನಗಳಕಾಲ  ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದು , ಅದರ ಪ್ರಾರಂಭದ ದಿನದ ವರದಿ ಹೀಗಿದೆ:-
 +
ವರದಿಯನ್ನು ವಿದ್ಯಾದೇವತೆಯಾದ ಸರಸ್ವತಿಯ ಸ್ತುತಿಯೊಂದಿಗೆ ಪ್ರಾರಂಭಿಸುತ್ತಿದ್ದೇನೆ.“ ಸರಸ್ವತೀ ಸಮಸ್ತುಭ್ಯುಂ, ವರದೇ ಕಾಮರೂಪಿಣಿ ವಿದ್ಯಾರಂಭಂ ಕರಿಷ್ಟಾಮಿ, ಸಿದ್ಧಿ ರ್ ಭವತು ಮೇ ಸದಾ ".ಸಕಲ ವಿದ್ಯಾರ್ಥಿಗಳು ಮತ್ತು ಶಿಬಿರಾರ್ಥಿಗಳಿಗೆ ವಿದ್ಯೆಯನ್ನು ಸಿದ್ಧಿ ಸುವಂತೆ ಮಾಡುವವಳೇ ಸರಸ್ವತಿ ಮಾತೆ.ಅಂತಹ ಮಾತೆಯ ಮೂರ್ತಿಯನ್ನು  ಪ್ರವೇಶ ದ್ವಾ ರದಲ್ಲೇ ಹೊಂದಿರುವ ಭವ್ಯ  ಕಟ್ಟಡ ಶಿವಮೊಗ್ಗದ ಜಿಲ್ಲಾ ಮತ್ತು  ಶಿವಮೊಗ್ಗದ ಜಿಲ್ಲಾ ಮತ್ತು ಶಿಕ್ಷಣ ತರಬೇತಿ ಸಂಸ್ಥೆ. ಇಲ್ಲಿನ ಕಂಪ್ಯೂ ಟರ್ ಲ್ಯಾಬ್ ನಲ್ಲಿ ದಿನಾಂಕ:16-12-2013  ರಂದು ಔಪಚಾರಿಕ ರೀತಿಯಲ್ಲಿ ಬೆಳಿಗ್ಗೆ 10  ಗಂಟೆಗೆ ಕಂಪ್ಯೂ ಟರ್ ಸನಿವಾಸ ತರಬೇತಿಯ ಉದ್ಘಾ ಟನೆ ನಡೆಯಿತು. ಶ್ರೀಮತಿ.ಚಂದ್ರಮ್ಮ ಪ್ರಾಂಶುಪಾಲರು, ಡಯಟ್, ಶಿವಮೊಗ್ಗ ಇವರು ಕಾರಣಾಂತರದಿಂದ ಭಾಗವಹಿಸಲು ಸಾಧ್ಯವಾಗದ ಕಾರಣ ಶಿಬಿರದ ಸಂಯೋಜಕರಾದ ಶ್ರೀ.ನಾಗರಾಜ್,ಉಪನ್ಯಾಸಕರು, ಡಯಟ್, ಶಿವಮೊಗ್ಗ  ಇವರು ಕಾರ್ಯಕ್ರಮವನ್ನು  ಉದ್ಘಾಟಿಸಿ , ಪ್ರಾಸ್ತಾವಿಕ ಮಾತುಗಳನ್ನಾಡುವುದರ ಮೂಲಕ 5 ದಿನಗಳ ಸನಿವಾಸ ತರಬೇತಿಯ ಉದ್ದೇಶಗಳನ್ನು  ತಿಳಿಸಿಕೊಟ್ಟರು ಮತ್ತು ಸಂಪನ್ಮೂ ಲ ವ್ಯಕ್ತಿಗಳ  ಹಾಗೂ ಶಿಕ್ಷಕರ ಪರಿಚಯ ಕಾರ್ಯಕ್ರಮವೂ  ನಡೆಯಿತು . ಮೂರು ತಾಲ್ಲೂ ಕುಗಳ 30 ಜನ  ಶಿಕ್ಷಕರಿಗೆ ತರಬೇತಿಯ ಉದ್ದೇಶಗಳನ್ನು  ತಿಳಿಸಿಕೊಡುವುದರ ಜೊತೆಗೆ ಸನಿವಾಸ ತರಬೇತಿಗೆ ಡಯಟ್ ಒದಗಿಸಿರುವ ಎಲ್ಲಾ ಸೌಕರ್ಯಗಳ ಬಗ್ಗೆ ಯೂ ಮಾಹಿತಿ ನೀಡಿದರು.ಹಿಂದೆ  ಪಡೆದ ಒಬಂಟು ತರಬೇತಿ ಮತ್ತು ಇಂದಿನ  ತರಬೇತಿ ಒಳಗೊಂಡಿರುವ ಅಂಶದ ಬಗ್ಗೆಯೂ ಚರ್ಚಿಸಲಾಯಿತು.ತರಬೇತಿಗೆ ಹಾಜರಾದ 30 ಶಿಬಿರಾರ್ಥಿಗಳನ್ನು  ತಲಾ 3  ಶಿಕ್ಷಕರಂತೆ 10 ತಂಡಗಳ ರಚನೆ ಮಾಡಲಾಯಿತು. ಪ್ರತಿಯೊಬ್ಬ ಶಿಬಿರಾರ್ಥಿಯೂ ಒಂದು ಕಂಪ್ಯೂ ಟರ್ ಹೊಂದುವಂತೆ ಸೌಕರ್ಯ ಕಲ್ಪಿ ಸಿಕೊಡಲಾಯಿತು. ಶ್ರೀಯುತ. ನಾಗರಾಜ್ ಸರ್ ರವರು  ಕಂಪ್ಯೂ ಟರ್ ಬಗ್ಗೆ ಶಿಬಿರಾರ್ಥಿಗಳು ಹೊಂದಿದ ಪೂರ್ವಜ್ಞಾನ ಎಷ್ಟಿದೆ? ಹಿಂದಿನ ವರ್ಷದತರಬೇತಿಯ ಪೂರ್ವಜ್ಞಾನ ವನ್ನು  ತಿಳಿಯಲು, ನಿರ್ಧರಿಸಲು ಒಂದು  ಪೂರ್ವಪರೀಕ್ಷೆಯನ್ನು  ನಡೆಸಿದರು. ನಂತರ ಆ ದಿನದ ವೇಳಾಪಟ್ಟಿ ಯ ಪರಿಚಯವನ್ನು ಶ್ರೀಯುತ.ಶೇಖರ್ ಸಂಪನ್ಮೂ ಲ ವ್ಯ ಕ್ತಿಗಳು ನೀಡಿದರು. ಪ್ರತಿ ಅವಧಿಯಲ್ಲಿಯೂ ಶಿಕ್ಷಕರಿಗೆ ಉಪಯುಕ್ತವಾದ ಮಾಹಿತಿ ಮತ್ತು ಕಂಪ್ಯೂ ಟರ್ ಜ್ಞಾನವನ್ನು  ಹೆಚ್ಚಿ ಸಲು ಬೇಕಾದ ಅಂಶಗಳನ್ನೇ ಅಳವಡಿಸಿಕೊಳ್ಳಲಾಗಿತ್ತು. ಹೀಗಾಗಿ ಎಲ್ಲಾ ಶಿಬಿರಾರ್ಥಿಗಳು ಸಂಪನ್ಮೂ ಲ ವ್ಯಕ್ತಿಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳು ತ್ತಾ ಹೆಚ್ಚಿ ನ
 +
ಜ್ಞಾನವನ್ನು  ಪಡೆಯಬೇಕೆಂಬ ಆಶಯ ವ್ಯಕ್ತಪಡಿಸಿದರು.ಚಹಾ ವಿರಾಮದ ನಂತರ ಶ್ರಿಯುತ.ಪರಶುರಾಮ್ ಭಜಂತ್ರಿ ಇವರು ಪ್ರತಿಯೊಬ್ಬ ಶಿಕ್ಷಕರು ಕಂಪ್ಯೂ ಟರ್  ಮೂಲಕ ವೈಯಕ್ತಿಕ ವಿವರವನ್ನು ಸಲ್ಲಿಸುವ ಬಗ್ಗೆ ತಿಳಿಸಿಕೊಟ್ಟರು. How to open a gmail ID and Submission of messages  ವಿಚಾರದ ಬಗ್ಗೆ  ತಿಳಿಸಿಕೊಡಲಾಯಿತು. ಈ ಹಿಂದೆ  Email ID  ಹೊಂದಿದವರು ಜೊತೆಗೆ , ಹೊಸದಾಗಿ ಬಂದ ಶಿಬಿರಾರ್ಥಿಗಳಿಗೂ ಸಹ  account creat ಮಾಡಲು ಬೇಕಾದ ಹಂತಗಳ ಬಗೆಗೆ ಪ್ರಾಯೋಗಿಕವಾಗಿ ಶಿಬಿರಾರ್ಥಿಗಳಿಂದಲೇ ಕಾರ್ಯ ಮಾಡಿಸಿದರು. Gmail ಖಾತೆಯನ್ನು ಪಡೆದು ತಮ್ಮ – ತಮ್ಮ ಮೇಲ್ ನಿಂದ ಮತ್ತೊಬ್ಬರಿಗೆ ಸಂದೇಶಗಳನ್ನು  ಕಳುಹಿಸುವುದು, ತಮಗೆ ಬಂದ ಸಂದೇಶಗಳನ್ನು  ಓದುವುದು, ಎಂಬುದನ್ನು ತೋರಿಸಿಕೊಟ್ಟರು. ಹಾಗೆಯೇ ಒಮ್ಮೆ  sign in ಆದ ಮೇಲೆ  ಮರೆಯದೆ sign out ಮಾಡುವ ಬಗೆಗೆ ತಿಳಿಸಿಕೊಡಲಾಯಿತು. ಶ್ರೀಯುತ.ನರಸಿಂಹಮೂರ್ತಿ ಇವರು ಶಿಬಿರಾರ್ಥಿಗಳ ಸಂದೇಹಗಳ ನಿವಾರಣೆ ಮಾಡಿದರು.ಶಿಬಿರಾರ್ಥಿಗಳು ಮಧ್ಯಾ ಹ್ನ ರುಚಿಕರವಾದ ಊಟ ಮಾಡುವಾಗಲೂ  ತಾವು ಕಲಿತ ವಿಷಯಗಳನ್ನು ಅಲ್ಲಲ್ಲಿ ಚರ್ಚಿಸುತ್ತಿದ್ದರು.ಮಧ್ಯಾ ಹ್ನ ದ ಅವಧಿಯಲ್ಲಿ ಮೊದಲು How to create a new folder? ಎಂಬ ವಿಷಯವನ್ನು  ಕುರಿತಂತೆ ಆಶಾ ಮೇಡಂ ಇವರು ವಿವರಣೆ ನೀಡಿದರು. Desktop ನಲ್ಲಿ ಹೊಸ ಫೋಲ್ಡರ್ ತೆರೆಯಲು ಮೌಸ್ ನ ಬಲಗಡೆ ಕ್ಲಿಕ್ ಮಾಡಬೇಕು. ಹೊಸದಾಗಿ ರಚನೆಗೊಂಡ folder ಗೆ ಹೆಸರು ನೀಡುವುದು, ಫೋಲ್ಡರ್ ಗೆ ಪ್ರತಿಯೊಬ್ಬರು ಚಿತ್ತಗಳನ್ನು  ನಕಲು ಮಾಡಿ ಅಂಟಿಸುವುದು ಹೇಗೆ? libre offfice ನಲ್ಲಿನ ಮಾಹಿತಿ, calc, impress, videos, ಹೀಗೆ ವಿವಿಧ file ನ್ನು ಹೇಗೆ folder ಗೆ ಹಾಕುವುದು ಎಂಬ ಬಗೆಗೆ ತಿಳಿಸಿಕೊಟ್ಟರು.ಮಧ್ಯಾಹ್ನ  ಚಹಾ ವಿರಾಮದ  ನಂತರ  ಶ್ರೀಯುತ ಶೇಖರ್ ರವರು ಹಾಗೂ ಇತರೆ ಸಂಪನ್ಮೂಲ ವ್ಯಕ್ತಿಗಳನ್ನು ತೊಡಗೆಸಿಕೊಂಡು ಶಿಬಿರಾರ್ಥಿಗಳಿಗೆ ಇಂಟರ್ನೆಟ್ ನಿಂದ ಮಾಹಿತೆ ಪಡೆಯುವುದು ಹೇಗೆ? How to download images and videos from internet? ಎಂಬ  ವಿಚಾರದ ಬಗ್ಗೆ ಸುದೀರ್ಘವಾಗಿ ತಿಳಿಸಿಕೊಟ್ಟರು. ಇಂಟರ್ ನೆಟ್ ಎಂಬುದು  ಜಗತ್ತಿನ  ಎಲ್ಲ ಕಂಪ್ಯೂ ಟರ್ ಗಳನ್ನು ಸಂಪರ್ಕಿಸಬಹುದಾದ  ಒಂದು ಜಾಲ ಎಂದು ವಿವರಿಸಿದರು. ಕಂಪ್ಯೂ ಟರ್ ನಿಂದ  ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಭಾಷಣೆ, ಪತ್ರ ವ್ಯವಹಾರ ಕೂಡ ಸಾಧ್ಯವೆಂದರು.ಮಧ್ಯೆ ಶಿಬಿರದ ಸಂಯೋಜಕರಾದ ಶ್ರೀಯುತ.ನಾಗರಾಜ್ ಸರ್ ರವರು ಇಂಟರ್ ನೆಟ್ ನಿಂದ ಪಡೆದ ಹೊಯ್ಸ ಳ ದೇವಾಲಯದ ಚಿತ್ರವನ್ನು  ಮಕ್ಕಳ  ಕಲಿಕೆಯಲ್ಲಿ  ಹೇಗೆ  ಉಪಯೋಗಿಸಬಹುದು  ಎಂದು  ಅನೇಕ  ಶಿಬಿರಾರ್ಥಿ ಮಿತ್ರರು ತೋರಿಸಿ ಕೊಟ್ಟ ರು. ಹಾಗೆಯೇ you tube downloader install ಮಾಡುವ  ಬಗ್ಗೆ ಹೇಳಿಕೊಟ್ಟರು.  ಪ್ರತಿಯೊಬ್ಬರು ಒಂದೊಂದು ವಿಡಿಯೋಗಳನ್ನು ಡೌನ್ ಲೋಡ್ ಮಾಡಿ ತಮ್ಮ ತಮ್ಮ ಫೋಲ್ಡ ರ್ ನಲ್ಲಿ ದಾಖಲಿಸುವ ಮೂಲಕ ಪ್ರಾಯೋಗಿಕವಾಗಿ ಕಂಪ್ಯೂ ಟರ್ ಜ್ಞಾನವನ್ನು ಪಡೆದರು.ಅಭಿಪ್ರಾಯ:- ಮೊದಲನೇ ದಿನದ ತರಬೇತಿ ಆಕರ್ಷಣೀಯವಾಗಿತ್ತು. ನಿಜಕ್ಕೂ ಡಯಟ್ ಕಂಪ್ಯೂ ಟರ್ ಲ್ಯಾಬ್ ಒಂದು ಜ್ಞಾನ ಮತ್ತು ಕೌಶಲ್ಯಗಳ ಭಂಡಾರವೇ ಸರಿ. ಎಲ್ಲಾ ಕಂಪ್ಯೂ ಟರ್ ಗಳು ಅತ್ಯು ತ್ತಮ ಸ್ಥಿ ತಿಯಲ್ಲಿದ್ದು , ಎಲ್ಲರಿಗೂ ಬಳಸಿಕೊಳ್ಳಲು ಅನುಕೂಲವಾಯಿತು. ಇಲ್ಲಿ ಸೇವಾ ಹಿರಿತನ ಅಥವಾ ಕಿರಿತನ , ವಯಸ್ಸಿನ ಹಿರಿತನ ಅಥವಾ  ಕಿರಿತನ ಎಂಬುದು ಎಲ್ಲಿಯೂ ಕಂಡುಬರಲ್ಲಿಲ್ಲ. ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ವಯಸ್ಸಿನ ಅಂತರ ಕಂಡುಬರಲ್ಲಿಲ್ಲ. ಪ್ರತಿಯೊಬ್ಬರು ಪೂರ್ಣ ಪ್ರಮಾಣದಲ್ಲಿ ಕಂಪ್ಯೂ ಟರ್ ನಲ್ಲಿ ತಲ್ಲೀನರಾಗಿ  ತೊಡಗಿಸಿಕೊಂಡಿರುವುದು ಕಂಡುಬರುತ್ತಿತ್ತು. ಶಿಬಿರಾಧಿಕಾರಿಗಳ ಮೇಲುಸ್ತಾವಾರಿಯಲ್ಲಿ ಜೊತೆಗೆ ನಾಲ್ವರು ಸಂಪನ್ಮೂ ಲ ವ್ಯಕ್ತಿಗಳು ಪ್ರತಿಯೊಬ್ಬರಿಗೂ ತಮಗೆ ತಿಳಿದ ವಿಚಾರಗಳನ್ನು ತಿಳಿಸಿಕೊಡುವಲ್ಲಿ ಅತೀವ ಉತ್ಸಾಹದಿಂದ ಪಾಲ್ಗೊಂಡರು.ಮೊದಲ ದಿನದ ತರಬೇತಿಯು "ವಿದ್ಯೆ ಸಾಧಕನ ಸ್ಷತ್ತೇ ಹೊರತು ಸೋಮಾರಿಯ ಸ್ವತ್ತಲ್ಲ" ಎನ್ನು ವ ನುಡಿಯನ್ನು  ಒರೆಗೆ ಹಚ್ಚಿ ದಂತೆ ಕಂಡುಬರುತ್ತಿತ್ತು. ಏಕಾಗ್ರತೆ  ಮತ್ತು ಆಸ ಕ್ತಿ  ಇದ್ದರೆ ಯಾರು ಬೇಕಾದರೂ ಸಾಧಿಸ ಬಹುದು ಎಂಬ ನಿಜವನ್ನು ಇಲ್ಲಿ ಕಾಣಬಹುದಾಗಿದೆ. ಒಟ್ಟಿನಲ್ಲಿ ಈ ದಿನದ ಕಂಪ್ಯೂ ಟರ್ ತರಬೇತಿ ಆಸಕ್ತಿದಾಯಕ, ಕುತೂಹಲಕಾರಿಯಾಗಿತ್ತು ಎಂದು ಹೇಳುತ್ತ, ಮುಂದಿನ ನಾಲ್ಕು ದಿನಗಳಲ್ಲಿ ಇನ್ನೆಷ್ಟು  ಕುತೂಹಲಕಾರಿ ವಿಷಯಗಳಿವೆಯೋ ಎಂಬ ನಿರೀಕ್ಷೆಯಲ್ಲಿ ಈ ದಿನದ ವರದಿಯನ್ನು ಮುಕ್ತಾಯಗೊಳಿಸುತ್ತಿದ್ದೇನೆ.ಜೈಹಿಂದ್,ಜೈಕರ್ನಾಟಕ ಮಾತೆ.ಧನ್ಯವಾದಗಳೊಂದಿಗೆ,ವರದಿ ಮಂಡಸಿದವರು,ಭಾಸ್ಕರ್.ಎನ್,ಸಹಶಿಕ್ಷಕರು,ಸರ್ಕಾರಿ ಪ್ರೌಢಶಾಲೆ,ಹುಲಿದೇವರಬನ,ಸಾಗರ ತಾ,ಶಿವಮೊಗ್ಗ.