Anonymous

Changes

From Karnataka Open Educational Resources
11,875 bytes added ,  07:00, 29 December 2014
Line 14: Line 14:  
}}
 
}}
 
===Workshop short report===
 
===Workshop short report===
Upload workshop short report here (in ODT format), or type it in day wise here
+
 
 +
'''1st Day.'''
 +
 
 +
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಕಮಲಾಪೂರ ಜಿಲ್ಲೆ: ಕಲಬುರಗಿಯಲ್ಲಿ, ಜಿಲ್ಲೆಯ ಪ್ರತಿ ತಾಲೂಕಿನ ಐದು ಜನ ಪ್ರೌಢ ಶಾಲಾ ಮುಖ್ಯ ಶಿಕ್ಷಕರಿಗೆ ಗಣಕ ಶಿಕ್ಷಣ ಆಧಾರಿತ ಮುಖ್ಯ ಶಿಕ್ಷಕರ ವೇದಿಕೆಗೆ ಸಂಬಂಧಿಸಿದಂತೆ ನಾಯಕತ್ವ, ಎಲ್ಲಾ ವಿಷಯಗಳ ಜ್ಞಾನಾಭಿವೃದ್ಧಿಗೆ ಪೂರಕವಾಗಲು ತಂತ್ರಜ್ಞಾನ ಬಳಕೆ ಮಾಡುವುದು, ಮುಖ್ಯ ಶಿಕ್ಷಕರ ವೇದಿಕೆಯ ಮೂಲಕ ಹಲವಾರು ಆಢಳಿತಾತ್ಮಕ, ಶೈಕ್ಷಣಿಕ, ಶಿಕ್ಷಣದ ಗುಣವರ್ಧನೆಗೆ ಬೇಕಾಗುವ ಮಾರ್ಗದರ್ಶನ, ಸಲಹೆ-ಸೂಚನೆಗಳು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಾಹಿತಿ ತಂತ್ರಜ್ಞಾನ ಬಳಕೆ ಮಾಡುವುದನ್ನು ಕಲಿಸುವ ಸಂಬಂಧ ತರಬೇತಿಯನ್ನು ಹಮ್ಮಿಕೊಳ್ಳಲಾಗಿರುತ್ತದೆ.
 +
ದಿನಾಂಕ 16ನೇ ಡಿಸೆಂಬರ್ 2014ರಂದು ಸದರಿ ತರಬೇತಿಯು ಡಯಟ್ ಕಮಲಾಪೂರನ ಕಂಪ್ಯೂಟರ್ ಕೋಣೆಯಲ್ಲಿ ಪರದೆಯ ಮೇಲೆ ಎಲ್ಲಾ ಮುಖ್ಯ ಶಿಕ್ಷಕ ಶಿಬಿರಾರ್ಥಿಗಳಿಗೆ ಸ್ವಾಗತ ಎಂಬ ಹೇಳಿಕೆ ಮೂಡಿಸುವ ಮೂಲಕ ಪ್ರಾರಂಭಿಸಲಾಯಿತು. ಡಯಟ್‍ನ ಉಪನ್ಯಾಸಕರು ಹಾಗೂ ಇ.ಟಿ. ನೋಡಲ್ ಅಧಿಕಾರಿಗಳಾದ ಶ್ರೀಯುತ ಹುಡ್ಗೆ ಗುಂಡಪ್ಪಾ ಇವರು ಆಯೋಜಿಸಲಾದ ತರಬೇತಿಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ಡಯಟ್ ಕಮಲಾಪೂರನ ಹಿರಿಯ ಉಪನ್ಯಾಸಕರು ಹಾಗೂ ಎಚ್.ಟಿ.ಎಫ್. ತರಬೇಇಯ ನೋಡಲ್ ಅಧಿಕಾರಿಗಳಾದ ಶ್ರೀಯುತ ರಾಯಪ್ಪ ರೆಡ್ಡಿ ಹಾಗೂ ತರಬೇತಿಯ ಉದ್ದೇಶ ಮತ್ತು ಅವಶ್ಯಕತೆಯ ಕುರಿತು ಮಾರ್ಗದರ್ಶನ ಮಾಡಲು ಹಿರಿಯ ಉಪನ್ಯಾಸಕರಾದ ರಾಯಪ್ಪ ರೆಡ್ಡಿ ಸರ್‍ರವರಿಗೆ ವೇದಿಕೆಯ ಮೇಲೆ ಅನುವು ಮಾಡಿಕೊಟ್ಟರು.
 +
ಮಾನ್ಯ ರಾಯಪ್ಪ ರೆಡ್ಡಿ ಸರ್‍ರವರು ಶಿಕ್ಷಣ ಇಲಾಖೆಯ ವಿವಿಧ ಸ್ಥರಗಳ ಆಢಳಿತಾತ್ಮಕ ಕರ್ತವ್ಯಗಳು ತರಬೇತಿ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ ಅನುಭವಗಳನ್ನು ಮುಖ್ಯ ಶಿಕ್ಷಕ ಶಿಬಿರಾರ್ಥಿಗಳಿಗೆ ತಿಳಿಸುತ್ತಾ ಕಂಪ್ಯೂಟರ್ ಶಿಕ್ಷಣ ಮತ್ತು ತಂತ್ರಜ್ಞಾನದ ಬಳಕೆ ಮಾಡುವ ಅವಶ್ಯಕತೆಯನ್ನು ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.
 +
ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು (ಓಅಈ-2005)ರ ಅಡಿಯಲ್ಲಿ ವಿದ್ಯಾರ್ಥಿಯ ಸರ್ವಾಂಗಿಣ ಅಭಿವೃದ್ಧಿಗಾಗಿ ಗುಣಮಟ್ಟದ ಶಿಕ್ಷಣ ನೀಡಬೇಕಾಗಿರುವ ಪ್ರಯುಕ್ತ ಪ್ರತಿಯೊಬ್ಬರು ಬದಲಾಗಿರುವ ವ್ಯವಸ್ಥೆಗೆ ಹೊಂದಿಕೊಳ್ಳಲು ತ್ವರಿತಗತಿಯಲ್ಲಿ ತಂತ್ರಜ್ಞಾನ ಬೆಳೆಯುತ್ತಿರುವ ಕಾರಣ ಈ ರೀತಿಯ ತರಬೇತಿಯನ್ನು ಪಡೆದುಕೊಂಡು ಗುಣಮಟ್ಟದ ಶಿಕ್ಷಣ ನೀಡಲು ಶಿಬಿರಾರ್ಥಿಗಳಾದ ಮುಖ್ಯ ಶಿಕ್ಷಕರು ಶಿಕ್ಷಣ ಇಲಾಖೆಯ ಅನುಷ್ಠಾನ ಹಂತದ ಅಧಿಕಾರಿಗಳಾಗಿರುವುದರಿಂದ ತರಬೇತಿಯನ್ನು ಯಶ್ವಸ್ವಿಯಾಗಿ ಪಡೆದುಕೊಳ್ಳಬೇಕೆಂಬ ಮಾರ್ಮಿಕ ಸಲಹೆಗಳನ್ನು ನೀಡುವುದರೊಂದಿಗೆ ಐದು ದಿನಗಳ ತರಬೇತಿಗೆ ಚಾಲನೆ ನೀಡಿದರು.
 +
ನಂತರದಲ್ಲಿ ಮುಖ್ಯ ಶಿಕ್ಷಕರ ವೇದಿಕೆ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಸತ್ಯಕುಮಾರ ಮುಖ್ಯಗುರುಗಳು ಸರಕಾರಿ ಪ್ರೌಢಶಾಲೆ ಮದನಾ ಸೇಡಂ ತಾಲೂಕು ಇವರು ತರಬೇತಿಯ ಅವಶ್ಯಕತೆ ಹಾಗೂ “ಗಟ್ಟಿ ಮನಸ್ಸು” ಮಾಡಿದರೆ ಪೂರ್ವಜ್ಞಾನದ ಕೊರತೆಯಿದ್ದರೂ ಸಹ ತಂತ್ರಜ್ಞಾನದ ಬಳೆ ಮಾಡುವುದನ್ನು ಕಲಿಯಲು ಸಾಧ್ಯವಿದೆ ಎಂದು ಹೇಳಿದರು. ಎರಡನೆಯದಾಗಿ ಶ್ರೀಯುತ ಆನಂದಮೂರ್ತಿ ಮುಖ್ಯ ಗುರುಗಳು ಸರಕಾರಿ ಪ್ರೌಢ ಶಾಲೆ ಕಲ್ಲೂರ ಚಿತ್ತಾಪೂರ ತಾಲೂಕು ಇವರು ಸಹ ಸದರಿ ತರಬೇತಿಯು ಎಲ್ಲಾ ಮುಖ್ಯ ಶಿಕ್ಷಕರು ಪಡೆದುಕೊಂಡು ತಂತ್ರಜ್ಞಾನ ಬಳಕೆಯಿಂದ ಶಾಲಾ ಶೈಕ್ಷಣಿಕ ಗುಣವರ್ಧನೆಗಾಗಿ ಶ್ರಮವಹಿಸಲು ಸಾಧ್ಯವಿದೆ ಎಂಬುದನ್ನು ವಿವರಿಸಿದರು. ಮೂರನೆಯದಾಗಿ ಮಲ್ಲಿನಾಥ ಸಜ್ಜನ ಮುಖ್ಯಗುರುಗಳು ಸರಕಾರಿ ಪ್ರೌಢಶಾಲೆ ಸಾಲೇಬೀರನಳ್ಳಿ ಚಿಂಚೋಳಿ ತಾಲೂಕು ಇವರು ಕಂಪ್ಯೂಟರ್ ಶಿಕ್ಷಣ ಹಾಗೂ ಬಳಕೆ ಜೀವನಕ್ಕೆ ಬೇರೆ ವಸ್ತುಗಳು ಅತ್ಯವಶ್ಯಕವಾಗಿರುವಂತೆ ಅವಶ್ಯಕ ವಸ್ತುಗಳಾಗಿರುವುದರಿಂದ ಅವುಗಳ ಬಳಕೆ ಮಾಡುವ ಜ್ಞಾನ ಪಡೆದುಕೊಳ್ಳುವುದು ಅನಿಯವಾಯವಾಗಿರುವುದರಿಂದ ತರಬೇತಿ ತೆಗೆದುಕೊಂಡು ಸದುಪಯೋಗ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಶಿಬಿರಾರ್ಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಸ್ಪರ ಪರಿಚಯದೊಂದಿಗೆ ಪೂರ್ವಾಹ್ನದ ಅವದಿಯ ತರಬೇತಿ ಮುಕ್ತಾಯಗೊಳಿಸಿ ಅಪರಾಹ್ನ 2.00 ರಿಂದ 2.45 ಗಂಟೆಯವರೆಗೆ ಊಟದ ವಿರಾಮ ನೀಡಲಾಯಿತು. ತರಬೇತಿಯಲ್ಲಿ ಭಾಗವಹಿಸಿರುವವರೆಲ್ಲರೂ ಶಿಬಿರದ ಸ್ಥಳದಲ್ಲಿಯೇ ಒದಗಿಸಲಾದ ಊಟ ಮಾಡಿದರು.
 +
ಅಪರಾಹ್ನದ ತರಬೇತಿಯು ಸರಿಯಾದ ಸಮಯಕ್ಕೆ ಪ್ರಾರಂಭಗೊಂಡು ಪ್ರಾಥಮಿಕವಾಗಿ ಸಂಪನ್ಮೂಲ ವ್ಯಕ್ತಿಗಳು ಕಂಪ್ಯೂಟರ್‍ಗಳು ಕುರಿತು ಮತ್ತು ಕಂಪ್ಯೂಟರ್ ಬಳಕೆಯ ಪೂರ್ವಜ್ಞಾನವನ್ನು ಶಿಬಿರಾರ್ಥಿಗಳಿಗೆ ಒದಗಿಸಿದರು. ಅಪರಾಹ್ನ 4.00ಗಂಟೆಗೆ ಚಹಾದ ಸೇವನೆಯ ಬಳಿಕ ಸಂಪನ್ಮೂಲ ವ್ಯಕ್ತಿಗಳು ಶಿಬಿರಾರ್ಥಿಗಳು ತಂತ್ರಜ್ಞಾನ ಬಳಕೆ ಮಾಡಲು ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಇ-ಮೇಲ್ ಐ.ಡಿ. ಅವಶ್ಯಕವಾಗಿರುವುದು. ಪ್ರತಿಯೊಬ್ಬ ಶಿಬಿರಾರ್ಥಿಗಳು ಇ-ಮೇಲೆ ಐ.ಡಿ. WWW.gmಚಿiಟ..ಛಿom ಖಾತೆಯನ್ನು ನಲ್ಲಿ ತೆರೆಯುವ ವಿಧಾನವನ್ನು ಉಪಯೋಗಿಸುವ ಖಾತೆದಾರರ ಗುರುತಿನ ಸಂಖ್ಯೆ (Pಚಿss Woಡಿಜ) ನೆನಪಿನಲ್ಲಿಟ್ಟುಕೊಂಡು ಬಳಕೆ ಮಾಡುವ ವಿಧಾನ ತಿಳಿಸಿದರು.
 +
ತೆರೆದಿರುವ ಇ-ಮೇಲ್ ಐ.ಡಿ.ಗಳ ಮೂಲಕ ಬೇರೆಯವರಿಗೆ ಸಂದೇಶ ರವಾನಿಸುವ ವಿಧಾನ ತಿಳಿಸಿಕೊಟ್ಟರು. ತಮ್ಮ ಖಾತೆಗೆ ಬೇರೆಯವರಿಂದ ಬಂದಿರುವ ಸಂದೇಶಗಳನ್ನು ತೆರೆದು ಓದುವ ಕ್ರಮವನ್ನು ತಿಳಿಸಿಕೊಡಲಾಯಿರು. ಶಿಬಿರಾರ್ಥಿಗಳೆಲ್ಲರು ತಮ್ಮ-ತಮ್ಮ ಇ-ಮೇಲ್ ಐ.ಡಿ.ಗಳ ಮೂಲಕ ಪರಸ್ಟರ ಸಂದೇಶ ರವಾನೆ ಮಾಡಿಕೊಂಡರು. ಈ ರೀತಿಯಲ್ಲಿ ಮೊದಲನೇ ದಿನದ ತರಬೇತಿಯನ್ನು ಪೂರ್ಣಗೊಂಡು ಸಾಯಂಕಾಲ 5.00ಗಂಟೆಗೆ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು. ನಡೆದ ತರಬೇತಿಯ ಸಂಕ್ಷೀಪ್ತ ವರದಿಯನ್ನು ಇಲ್ಲಿಗೆ ಅಂತಿಮಗೊಳಿಸಲಾಗುತ್ತಿದೆ.
 +
 
 +
'''2nd Day.'''
 +
 
 +
ಪ್ರಪ್ರಥಮವಾಗಿ ಶಾಲೆಯ ಮುಖ್ಯಗುರುಗಳು ಪ್ರಭಾವಿ ವಲಯ ಮತ್ತು ಕಾಳಜಿ ವಲಯ ಹೊಂದಿರಬೇಕೆಂದು ತಿಳಿಸಲಾಯಿತು.ಶಾಲಾ ಅಭಿವೃದ್ಧಿಯೋಜನೆ ತಯಾರಿಸಬೇಕು. ಯೋಜನೆಯು ಶಾಲಾ ಅಭಿವೃದ್ಧಿ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರಬೇಕು.
 +
ಸಿ.ಸಿ.ಇ. ತರಬೇತಿ ಮುಖ್ಯಶಿಕ್ಷಕರು ಹೊಂದಿದ್ದು, ಅದರ ಪ್ರಕಾರ ಎಲ್ಲಾ ಶಿಕ್ಷಕರು ಕಾರ್ಯನಿರ್ವಹಿಸಬೇಕು.ವಿದ್ಯಾರ್ಥಿಗಳ, ಶಿಕ್ಷಕರ ಶಾಲಾಕಾಳಜಿ ಹೇಗಿದೆಯೆಂದು ಮನಗಂಡು ಕಾರ್ಯಪ್ರವೃತ್ತರಾಗಬೇಕು.ಶಿಕ್ಷಕರಿಂದ ಯಶೋಗಾಥೆಗಳನ್ನು ಹೇಳಲಾಯಿತು. ಸುಮಾರು ನಾಲ್ಕು ಜನ ಮುಖ್ಯ ಗುರುಗಳು ಯಶೋಗಾಥೆ ತಿಳಿಸಿದರು ನಂತರ ಊಟಕ್ಕೆ ತೆರಳಿದೆವು.ನಂತರ ಗಣಕ ಯಂತ್ರಗಳಲ್ಲಿ ಲೋಹಿತ ಕನ್ನಡ ಟೈಪ್ ಮಾಡುವ ಬಗ್ಗೆ ತಿಳಿಸಲಾಯಿತು. ಹಾಗೂ ನಾವು ಕೂಡ ಟೈಪ್ ಮಾಡಿದೇವು.
 +
ಶಿಬಿರಾರ್ಥಿಗಳಿಗೆ ಇ-ಮೇಲ್ ಖಾತೆ ತೆರೆಯುವುದು, ಮತ್ತು ಅದರ ಸವಿಸ್ತಾರವಾದ ಬಳಕೆ ಕುರಿತು ಮಾಹಿತಿ ನೀಡಿದರು. ನಂತರ ನಾವೇಲ್ಲರೂ ನಮ್ಮ ನಮ್ಮ ಖಾತೆಗಳನ್ನು ತೆರೆದು ಒಬ್ಬರಿಂದ ಇನ್ನೊಬ್ಬರಿಗೆ ವಿಷಯಗಳನ್ನು ಹಂಚಿಕೊಂಡೇವು.
 +
 
 +
'''3rd Day.'''
 +
'''4th Day.'''
 +
'''5th Day.'''
    
==Batch 2==
 
==Batch 2==
1,287

edits