ನುಡಿ ಸಂಪದ ಕನ್ನಡ ಕಾರ್ಯಕ್ರಮ

From Karnataka Open Educational Resources

ನುಡಿ ಸಂಪದ 2017

ನುಡಿ ಸಂಪದ ಕಾರ್ಯಕ್ರಮದ ವರದಿ ದಿನಾಂಕ 08-03-2017 ರ ಬುಧವಾರದಂದು ದೊಮ್ಮಲೂರು ಶಾಲೆಯ 9 ನೇ ತರಗತಿಯ ಎ ಮತ್ತು ಬಿ ವಿಭಾಗದ ಮಕ್ಕಳಿಗೆ ಕನ್ನಡ ಭಾಷಾ ಚಟುವಟಿಕೆಯಲ್ಲಿ ನುಡಿ ಸಂಪದ 2017 ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ

  • ಕವನವಾಚನ
  • ವಿದ್ಯುನ್ಮಾನ ಕಥಾ ಪ್ರಸ್ತುತಿ
  • ರಸಪ್ರಶ್ನೆ ಕಾರ್ಯಕ್ರಮ
  • ಸಾಂಸ್ಕೃತಿಕ ಕಾರ್ಯಕ್ರಮ (ನಾಟಕ,ಹಾಡುಗಾರಿಕೆ,ಜಾನಪದ ನೃತ್ಯ)

ಮೊದಲಾದ ಕಾರ್ಯಕ್ರಮಗಳನ್ನು ಕಮ್ಮಿ ಕೊಳ್ಳಲಾಗಿತ್ತು. ಇದಕ್ಕೆ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ ಜೆ ಅವಧಾನಿ ರವರು ಸಂಪೂರ್ಣ ಬೆಂಬಲ ನೀಡಿದರು. ಕಾರ್ಯಕ್ರಮವು ಸುಮಾರು ಬೆಳಗ್ಗೆ 11.30 ಕ್ಕೆ ಆರಂಭವಾಗಿ ಅಪರಾಹ್ನ 3.45ರ ವರೆಗೂ ನೆರವೇರಿತು.ಇದರಲ್ಲಿ ಶ್ರೀಮತಿ ಶೀಲಾ,ಶ್ರೀ ಶರಣಪ್ಪ,ಶ್ರೀಮತಿ ಸುಮಾ ,ಶ್ರೀ ಮುಬಾರಕ್ ಮುಂತಾದವರು ಭಾಗವಹಿಸಿದ್ದರು ಉಳಿದವರು 8 ಮತ್ತು 10 ನೇ ತರಗತಿಯ ಪಾಠದಲ್ಲಿ ನಿರತರಾಗಿದ್ದರು, ಸಾಂಕೇತಿಕವಾಗಿ ಉದ್ಘಾಟನೆಯೊಂದಿಗೆ ಆರಂಭವಾಗಿ ಮು.ಶಿ ಬಿ ಟಿ ಶಿವಪ್ರಕಾಶ್ ರವರು ಕೆಲವು ಸಲಹೆಗಳನ್ನು ನೀಡಿದರು.

ಕವನವಾಚನ

ಇದರಲ್ಲಿ 6 ಮಕ್ಕಳು ಭಾಗವಹಿಸಿದ್ದರು ಅವರ ವಿಚಾರಗಳು ಪ್ರಸ್ತುತ ರಾಜಕೀಯ,ಅಮ್ಮ,ವರದಕ್ಷಣೆ ಮೊದಲಾದ ವಿಷಯಗಳಿದ್ದವು. ಇದರ ತೀರ್ಪುಗಾರರಾಗಿ ಮು.ಶಿ ಶ್ರೀ ಎಂ ಜೆ ಅವಧಾನಿಯವರು ಮತ್ತು ಶರಣಪ್ಪರವರು ತೀರ್ಪುಗಾರರಾಗಿದ್ದರು. ಹರೀಶ ಮತ್ತು ನವ್ಯಾ ಕವನಗಳು ಉತ್ತಮವೆಂದು ಆಯ್ಕೆಮಾಡಿದರು ಭಾಗವಹಿಸಿದ 6 ಮಕ್ಕಳಿಗೂ ಕಿರು ಕಾಣಿಕೆ ನೀಡಲಾಯಿತು. ಮಕ್ಕಳಿಂದ ವಾಚಿತವಾದ ಪದ್ಯಗಳನ್ನು ಸಂಗ್ರಹಿಸಲಾಗಿದೆ.

ವಿದ್ಯುನ್ಮಾನ ಕಥಾ ಪ್ರಸ್ತುತಿ

ಮಕ್ಕಳು ಇಡೀ ವರ್ಷ ಮಾಡಿದ ಕಥೆಯಲ್ಲಿ ಯಾವುದಾದರೊಂದು ಮತ್ತು ಅವರಿಗೆ ಇಷ್ಟವಾದ ಡಿಜಿಟಲ್ ಕಥೆಯನ್ನು ಕಂಪ್ಯೂಟರ್ ಬಳಸಿ ಪ್ರಸತ್ತ ಪಡಿಸಲು ತಿಳಿಸಲಾಗಿತ್ತು. ಸಮಾಗಮ ದಶಾವತಾರಗಳು ಚಿಟ್ಟೆಗಳ ಜೀವನಕ್ರಮ ಪಾರಿವಾಳ ಮೊದಲಾದ ವಿಷಯದ ಪ್ರಸ್ತುತಿ ಮಾಡಲಾಯಿತು. ರಾಕೇಶ್ ಮತ್ತು ಸುಬ್ರಮಣಿಯವರು ತೀರ್ಪುಗಾರರಾಗಿದ್ದರು. ಪಾರಿವಾಳ ವಿಷಯವನ್ನು ಇಂಗ್ಲೀಷ್ ಭಾಷೆಯಲ್ಲಿ ಪ್ರಸ್ತುತ ಪಡಿಸಿದ ಜಾನ್ ಪಾಲ್ ಮತ್ತು ಹರೀಶ್ ಜೆಕೆ ಪ್ರಸ್ತುತಿಗಳು ಉತ್ತಮವೆಂದು ನಿರ್ಧರಿಸಲಾಯಿತು. ಇದರಲ್ಲೂ ಸಹ ಭಾಗವಹಿಸಿ ಎಲ್ಲರಿಗೂ ಸಮಾನವಾಗಿ ನೆನಪಿನ ಕಾಣಿಕೆಯಾಗಿ ಪುಸ್ತಕವನ್ನು ನೀಡಲಾಯಿತು.

ರಸಪ್ರಶ್ನೆ ಕಾರ್ಯಕ್ರಮ

ಈ ಆವೃತ್ತಿಯಲ್ಲಿ ಒಟ್ಟು 5ಪ್ರಕಾರಗಳಿದ್ದವು. ಸಾಮಾನ್ಯಜ್ಞಾನ ಪ್ರಶ್ನೆ ಪದ ಸರಿಪಡಿಸಿ ಬರೆಯಿರಿ ಒಂದು ಅಕ್ಷರದಿಂದ 10 ಪದ ರಚನೆ ಚಿತ್ರ ನೋಡಿ ಉತ್ತರಿಸುವುದು ಆಡಿಯೋ ಸುತ್ತು (ತಯಾರಿಸ ಬೇಕು) ರಸಪ್ರಶ್ನೆ ಕಾರ್ಯಕ್ರಮದ ಸಾಮಾನ್ಯ ನಿಯಮಗಳು 1. ಈ ಸ್ಪರ್ಧೆಯಲ್ಲಿ ನಾಲ್ಕು ಅವೃತ್ತಿಯ ಸ್ಪರ್ದೆಗಳಿದ್ದು 2 ಸುತ್ತುಗಳಿರುತ್ತದೆ. ಪ್ರತಿ ಸರಿ ಉತ್ತರಕ್ಕೆ 10 ಅಂಕಗಳು 2. ಪ್ರತಿ ತಂಡಕ್ಕೆ 10 ಸೆಕೆಂಡುಗಳ ಕಾಲಾವಕಾಶ ಮತ್ತು ಪಾಸ್ ಆದ ಪ್ರಶ್ನೆಗಳ ಉತ್ತರಕ್ಕೆ 5 ಅಂಕಗಳು 3. ಪ್ರತಿ ತಂಡದಲ್ಲಿ 4 ಸ್ಪರ್ಧಿಗಳು ಮಾತ್ರ ಭಾಗವಹಿಸುವುದು 4. ತೀರ್ಪುಗಾರರ ನಿರ್ಧಾರವೇ ಅಂತಿಮ 5. ಪ್ರೇಕ್ಷಕರು ಕೇವಲ ವೀಕ್ಷಕರೇ ವಿನಹ ಸ್ಪರ್ಧಿಗಳಲ್ಲ . ಯಾರ ಪರವಾಗಿಯಾದರು ಹೇಳಿಕೊಡುವ ಪ್ರಯತ್ನ ಮಾಡಿದರೆ ಅಂತಹ ತಂಡದ ಅಂಕಗಳನ್ನು ಮುಲಾಜಿಲ್ಲದೆ ಕಳಿಯಲಾಗುವುದು 6. ಸ್ಪರ್ಧಿಗಳಾರು ಉತ್ತರಿಸದ ಪ್ರಶ್ನೆಯು ಪ್ರೇಕ್ಷಕರಿಗೆ ರವಾನೆಯಾದಗ ಉತ್ತರ ನೀಡಬಹುದು

ಸಾಮಾನ್ಯಜ್ಞಾನ ಪ್ರಶ್ನೆ ಈ ಸುತ್ತನ್ನು ಸುಬ್ರಮಣಿಯವರು ನಡೆಸಿಕೊಟ್ಟರು. ಕೇಳಿದ ಪ್ರಶ್ನೆಗಳೆಂದರೆ . ಕರ್ನಾಟಕದ ಈಗಿನ ರಾಜ್ಯಪಾಲರು ಯಾರು? 2. ಭಾರತದ ಕ್ರಿಕೆಟ್ ತಂಟಡ ನಾಯಕ ಯಾರು ? 3. ಗಗನಚುಕ್ಕಿ ಬರ ಚುಕ್ಕಿ ಯಾವ ನದಿಯ ಜಲಪಾತಗಳು? 4. ನೀರಿನ ರಾಸಾಯನಿಕ ಸೂತ್ರವೇನು? 5. ಸರ್ಕಾರಿ ಶಾಲೆಗಳಲ್ಲಿ ಹಾಲು ನೀಡಿತ್ತಿರುವ ಯೋಜನೆ ಯಾವುದು? 6. ನಮ್ಮ ರಾಷ್ಟ್ರೀಯ ವೃಕ್ಷ ಯಾವುದು? 7. ಭಾರತದ ಪೂರ್ವಭಾಗಕ್ಕಿರುವ ಸಮುದ್ರಯಾವುದು? 8. ಭಾರತದ ರಾಷ್ಟ್ರಪತಿಯಾಗಿದ್ದ ಪ್ರಸಿದ್ದ ವಿಜ್ಞಾನಿ ಯಾರು ? 9. ಕಾವೇರಿನದಿಯ ಉಗಮಸ್ಥಾನ ಯಾವುದು? 10.ಎಲ್ಲಾ ಬಾಹುಗಳು ಸಮಾನವಾಗಿರುವ ಚತುರ್ಭುಜ ಯಾವುದು? ಚೌಕ ಅಥವ ವರ್ಗ 11.ಕೈ ಕೆಸರಾದರೆ ---------- 12. ಕರ್ನಾಟಕದ ರತ್ನ ಎಂದು ಬಿರುದು ಪಡೆದ ನಟ ಯಾರು ?

ಪದ ಸರಿಪಡಿಸಿ ಬರೆಯಿರಿ ಈ ಸುತ್ತನ್ನು ಶಿವಪ್ರಕಾಶ್ ಸರ್ ನಡೆಸಿಕೊಟ್ಟರು . ಇದರಲ್ಲಿ ಕನ್ನಡದ ಪ್ರಸಿದ್ದ ಗಾದೆಗಳ ಅಕ್ಷರ ಬದಲಿ ಮಾಡಿ ನೀಡಲಾಗಿತ್ತು. ಕಾಲಾವಕಾಶ ಕಡಿಮೆಇದ್ದ ಕಾರಣ ಒಂದೇ ಸುತ್ತು ಮಾಡಲಾಯಿತು.

ಈ ಸುತ್ತಿನಲ್ಲಿ ಕೇಳಲಾದ ಪ್ರಶ್ನೆಗಳು 

1. ಅತಿ ಆಸೆ ಗತಿ ಕೇಡು 2. ಮಾತುಬಲ್ಲವನಿಗೆ ಜಗಳವಿಲ್ಲ 3. ಮಾಡಿದುಣ್ಣೋ ಮಹಾರಾಯ 4. ಕಾಯಕವೇ ಕೈಲಾಸ 5. ನುಡಿದಂತೆ ನೆಡೆ 6. ತಾಯಿಯೇ ಮೊದಲ ಗುರು 7.ಹಾಸಿಗೆ ಇದ್ದಷ್ಟು ಕಾಲು ಚಾಚು 8. ಗುರು ಹಿರಿಯರನ್ನು ಗೌರವಿಸು

ಪದಗಳು ಆರಂಭವಾಗುವ ಪದ (ಪ್ರತಿ ತಂಡಕ್ಕೆ ಒಂದು ಅಕ್ಷರ ) ಈ ಸುತ್ತನ್ನು ಶಿವಪ್ರಕಾಶ್ ಸರ್ ನಡೆಸಿಕೊಟ್ಟರು ಕೇಳಿದ್ದ ಅಕ್ಷರಗಳೆಂದರೆ( ನ ಪ ಸ ಕ ಅ ಗ ಮ ಯ ರ ) ಇದರಲ್ಲು ಸಹ ಒಂದೇ ಒಂದು ಸುತ್ತನ್ನು ಮಾಡಲಾಯಿತು. ಮಕ್ಕಳು ನೀರೀಕ್ಷಿಸಿದಂತೆ ಸಮಯ ತೆಗೆದುಕೊಳ್ಳದೆ ಬೇಗನೇ ಉತ್ರಿಸಿದ ಕಾರಣ ಈ ಸುತ್ತು ಬೇಗನೇ ಮುಗಿಯಿತು. ಚಿತ್ರ ನೋಡಿ ಉತ್ತರಿಸುವುದು ಈ ಸುತ್ತನ್ನು ಶಿವಪ್ರಕಾಶ್ ಸರ್ ನಡೆಸಿಕೊಟ್ಟರು. ಸ್ವತಂತ್ರ ಹೋರಾಟಗಾರರು,ಸ್ಥಳಗಳು,ಆಟಗಾರರು ಪ್ರಾಣಿಗಳು. ಹೂ ಹೀಗೆ ಸುಮಾರು 20 ಚಿತ್ರಗಳನ್ನು ಸಂಗ್ರಹಿಸಲಾಗಿತ್ತು. 12 ಚಿತ್ರಗಳನ್ನು ಮಾತ್ರ ಬಳಸಿಕೊಳ್ಳಲಾಯಿತು. ಚಿತ್ರಗಳು(ಪೋಲ್ಡರ್ ನಲ್ಲಿದೆ)

ಆಡಿಯೋ ಸುತ್ತು ಈ ಸುತ್ತನ್ನು ರಾಕೇಶ್ ರವರ ಸಹಾಯದಿಂದ ಮಕ್ಕಳಿಗೆ ಕೆಲವು ಪ್ರಭಾವಿ ವ್ಯಕ್ತಿಗಳ ಧ್ವನಿಯನ್ನು ಕೇಳಿಸಿ ಗುರುತಿಸಲು ತಿಳಿಸಲಾಯಿತು. ಮೋದಿ,ಕಲಾಂ,ಸಚಿನ್,ಯಡಿಯೂರಪ್ಪ ನೇತಾಜಿ , ಸಿ ಅಶ್ವಥ್ ಗಾಯನ ಕೇಳಿಸಿ ಗುರುತಿಸಲು ತಿಳಿಸಲಾಗಿತ್ತು.

ಮುಖ್ಯ ಶಿಕ್ಷಕರ ಮತ್ತು ಶಿಕ್ಷಕರ ಸಹಕಾರ ಚನ್ನಾಗಿತ್ತು. ಪಿ ಯು ವಿಭಾಗದವರನ್ನು ಕೇಳಿಕೊಂಡ ಕಾರಣ ಕೊಠಡಿಯನ್ನು ತೆರವುಮಾಡಿಕೊಟ್ಟಿದ್ದರು. 8 ಮತ್ತು 10 ನೇ ತರಗತಿ ತರಗತಿ ಇಲ್ಲದೆ ವಿರಾಮವಾಗಿದ್ದ ಶಿಕ್ಷಕರು ವೀಕ್ಷಕರಾಗಿ ಭಾಗವಹಿಸುತ್ತಿದ್ದರು. ಮಕ್ಕಳು ಸಹ ಬಹಳ ಆಸಕ್ತಿಯಿಂದ ಭಾಗವಹಿಸುದ್ದರು. ಕಾರ್ಯಕ್ರಮದ ಮಧ್ಯದಲ್ಲಿ ಎಲ್ಲೂ ಕಹಿ ಅನುಭವವಾಗಲಿಲ್ಲ. ಸುಮಾರು 2.15ಕ್ಕೆ ಮೊದಲರ್ಧದ ಕಾರ್ಯಕ್ರಮ ಮುಗಿಯಿತು ನಂತರ ಊಟದ ವಿರಾಮದ ನಂತರ ಮಕ್ಕಳು ನೃತ್ಯ ,ನಾಟಕ,ಅನುಕರಣೆ,ಜಾನಪದ ಹಾಡು ಮೊದಲಾದವನ್ನು ಮಾಡಿದರು. 3.45 ರ ಸುಮಾರಿಗೆ ಕಾರ್ಯಕ್ರಮವನ್ನು ನಿಲ್ಲಿಸಿ ಎಲ್ಲರಿಗೂ ವಂದನೆತಿಳಿಸಲಾಯಿತು.

   ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಕೆಲವು ವೀಡಿಯೋ ತುಣುಕುಗಳು ಮತ್ತು ಭಾವಚಿತ್ರಗಳನ್ನು ಹರೀಶ್ ಮತ್ತು ರಾಕೇಶ್ ರವರು ತೆಗೆದುಕೊಂಡಿರುತ್ತಾರೆ.