GHS Dommaluru

From Karnataka Open Educational Resources

ನಮ್ಮ ಶಾಲೆಯ ಬಗ್ಗೆ / About GHS Dommaluru

ನಮ್ಮ ಶಾಲೆಯು ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ದೊಮ್ಮಲೂರಿನಲ್ಲಿ ನೆಲೆಗೊಂಡಿದೆ. ಇದು 01-07-1982 ರಲ್ಲಿ ಪ್ರೌಢಶಾಲೆಯಾಗಿ ಆರಂಭವಾಗಿ 21-06-1996ರಲ್ಲಿ ಪದವಿ ಪೂರ್ವ ಕಾಲೇಜು ಸಹ ಇದೇ ಸಮುಚ್ಚಯದಲ್ಲಿ ಆರಂಭವಾಗಿ ಸಂಯುಕ್ತ ಪದವಿ ಪೂರ್ವ ಕಾಲೇಜಾಯಿತು.ನಂತರ 22-03-2010ರಲ್ಲಿ ಪ್ರತ್ಯೇಕವಾಗಿ ಸ್ವತಂತ್ರ ವಿಭಾಗಗಳಾಗಿ ಕಾರ್ಯನಿರ್ವಹಿಸುತ್ತಿದೆ.ವಿಶಾಲವಾದ ಮೈದಾನದ ಸೌಲಭ್ಯವನ್ನು ಹೊಂದಿದ್ದು ಮಕ್ಕಳ ಸಹ ಪಠ್ಯ ಚಟುವಟಿಕೆಗಳಿಗೂ ಪೂರಕವಾಗಿದೆ.ಮುಖ್ಯರಸ್ತೆಗೆ ಹತ್ತಿರದಲ್ಲಿದ್ದು (Outer Ring Road) ಸಾರಿಗೆ ವ್ಯವಸ್ತೆಯೂ ಸಹ ಮಕ್ಕಳ ಪ್ರಯಾಣಕ್ಕೆ ಅನುಕೂಲವಾಗಿದೆ.ಇಲ್ಲಿ ಕನ್ನಡ ಮತ್ತು ಆಂಗ್ಲ ಎರಡೂ ಮಾಧ್ಯಮದಲ್ಲಿ ಕಲಿಸಲಾಗುತ್ತಿದೆ. ಜೊತೆಗೆ ತೋಟಗಾರಿಕೆ, ಕ್ರಾಫ್ಟ್‌,ಯಂತಹ ವಿಶೇಷ ಕಲಿಕೆಗಳನ್ನು ಪಠ್ಯಕ್ರಮದ ಜೊತೆ ಕಲಿಸಲಾಗುತ್ತಿದೆ. ಬೆಂಗಳೂರಿನ ದಕ್ಷಿಣ ವಿಭಾಗದಲ್ಲಿ SSLC ಫಲಿತಾಂಶದಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಿರುವ ಸರ್ಕಾರಿ ಶಾಲೆಗಳಲ್ಲಿ ಇದು ಸಹ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.,
 


ದೊಮ್ಮಲೂರು ಶಾಲೆ ನೆಲೆಸಿರುವ ನಕ್ಷೆ / School Location Map

Loading map...

ವಿದ್ಯಾರ್ಥಿಗಳ ನುಡಿ / Student speak

ಶಿಕ್ಷಕರುಗಳ ನುಡಿ / Teacher speak

ಕಲಾವತಿ
ಕಳೆದ 2 ವರ್ಷಗಳಿಂದ IT For Change ನವರು ನಮ್ಮ ಶಾಲೆಯಲ್ಲಿ ಶಿಕ್ಷಕರ ಕಲಿಕಾ ಸಮುದಾಯದಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ೮ ಮತ್ತು ೯ ನೇ ತರಗತಿಗೆ ಕನ್ನಡ ಮತ್ತು ಗಣಿತ ವಿಷಯದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ತರಗತಿಯಲ್ಲಿ ಬೋಧಿಸುವ ಪ್ರಕ್ರಿಯೆಯಲ್ಲಿ ಸಹಾಯಮಾಡುತ್ತಿದ್ದಾರೆ. ವಾರದಲ್ಲಿ ೧ ದಿವಸ ೨ ಅವದಿಗಳನ್ನು ನಮ್ಮ ಜೊತೆಯಲ್ಲಿ ಕೈ ಜೋಡಿಸುತ್ತಿದ್ದಾರೆ.
ಕಳೆದ ವರ್ಷ ಕನ್ನಡದಲ್ಲಿ ಹೊಸ- ಹೊಸ ಚಟುವಟಿಕೆಯನ್ನು ಬಳಸಲಾಗಿದೆ.
ಉದಾ;

  1. ಕೆಲವು ವಿಶೇಷ ಚಿತ್ರಗಳನ್ನು ತೋರಿಸುವ ಮೂಲಕ ಮಕ್ಕಳ ಚಿಂತನಾ ಸಾಮರ್ಥ್ಯವನ್ನು ಹೆಚ್ಚಿಸುವುದು
  2. ಪ್ರತಿ ದಿನ ಯಾವುದಾದರು ಒಂದು ವಿಷಯದ ಬಗ್ಗೆ ಒಬ್ಬ ವಿದ್ಯಾರ್ಥಿ ಮಾತನಾಡಿವುದು. ಈ ಮೂಲಕ ಮಾತನಾಡಿವ ಕೌಶಲವನ್ನು ವೃದ್ದಿಸುವುದು
  3. ಶಾಲಾ ಭಿತ್ತಿ ಪತ್ರಿಕೆ- ಈ ಮೂಲಕ ಮಕ್ಕಳಲ್ಲಿ ಯಾವವಿಷಯದಲ್ಲಿ ಆಸಕ್ತಿ ಇದೆಯೋ ಆ ವಿಷಯವನ್ನು ಈ ಗೋಡೆ ಪತ್ರಿಕೆಯ ಮೂಲಕ ಪ್ರಕಟಿಸುವುದು (ವಿದ್ಯಾರ್ಥಿಗಳೇ ಸಂಪಾದಕರು ಮತ್ತು ಉಪ ಸಂಪಾದಕರು)
  4. ಪತ್ರಿಕೆಗಳನ್ನು ಓದುವ ಸಾಮರ್ಥ್ಯವನ್ನು ವೃದ್ದಿಸುವುದು ಪತ್ರಿಗಳಲ್ಲಿನ ವಿಷೇಶ ವಿಷಯಗಳನ್ನು ಮಕ್ಕಳಿಂದ ಸಾದರ ಪಡಿಸುವುದು
  5. ಹಾಡುಗಾರಿಕಾ ಕೌಶಲ ವೃದ್ಧಿಸುವುದು- ಪದ್ಯಗಳನ್ನು ತಂತ್ರಜ್ಞಾನವನ್ನು ಬಳಸಿ ಆಲಿಸುವುದು. ನಂತರ ಮಕ್ಕಳಿಂದ ಹಾಡಿಸುವುದು. ಈ ಮೂಲಕ ಆಲಿಸುವ ಮತ್ತು ಹಾಡುವ ಕೌಶಲಗಳನ್ನು ವೃದ್ಧಿಸುವುದು
  6. ಕನ್ನಡದಲ್ಲಿ ಸುಡುಕು ಮಾದರಿಗಳು,ಪದಬಂಧಗಳು ತುಂಬುವುದು ಈ ಮೂಲಕ ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ವೃದ್ದಿಸುವುದು.
  7. ಮಕ್ಕಳಲ್ಲಿ ಓದುಗಾರಿಕೆ,ಮಾತುಗಾರಿಕೆ ಆಲಿಸುವಿಕೆ ಮೂಲಕೌಶಲದ ಜೊತೆಗೆ ಚಿಂತನಾ ಶೀಲ,ಕ್ರಿಯಾಶೀಲ,ಸೃಜನಾತ್ಮಕ ಕೌಶಲಗಳನ್ನು ಹೊರಸೆಳೆಯುವಲ್ಲಿ ಪ್ರಯತ್ನಿಸಲಾಗುತ್ತಿದೆ

ಕಲಾವತಿ
ಸಹಶಿಕ್ಷಕರು
ದೊಮ್ಮಲೂರು ಶಾಲೆ

ಶಿವ ಪ್ರಕಾಶ್
೨೦೧೬-೧೭ ನೇ ಸಾಲಿನಲ್ಲಿ IT For Change ಸ್ವಯಂ ಸೇವಾ ಸಂಸ್ಥೆ ೯ ನೇ ತರಗತಿ ಪ್ರಥಮ ಭಾಷೆ ಕನ್ನಡದಲ್ಲಿ ಗದ್ಯ ಪದ್ಯ ವ್ಯಾಕರಣಕ್ಕೆ ಸಂಬಂದಿಸಿದಂತೆ ಚಟುವಟಿಕೆಗಳನ್ನು ರೂಪಿಸಿ ವಾರದಲ್ಲಿ ಒಂದು ದಿನ ತರಗತಿಯಲ್ಲಿ ವಿಷತ ಶಿಕ್ಷಕರ ನೇತೃತ್ವದಲ್ಲಿ ಇದನ್ನು ನಡೆಸುತ್ತಿದ್ದು ಕಲಿಕೆ ವಿದ್ಯಾರ್ಥಿಗಳಿಗೆ ಆಸಕ್ತಿದಾಯಕವು,ಕುತೂಹಲಕಾರಿಯೂ ಆಗಿದ್ದು ಕಲಿಕಾ ಪ್ರಗತಿಗೆ ಉತ್ತಮ ಮಾರ್ಗದರ್ಶನವಾಗಿದೆ. ದೃಕ್ ಮತ್ತು ಶ್ರವಣ ಮಾದ್ಯಮದ ಹಿನ್ನಲೆಯಲ್ಲಿ ಕಲಿಸಉತ್ತಿರುವುದರಿಂದ ಕಲಿಕೆಯು ಸುಗಮವಾಗಿದೆ

ಮುಖ್ಯ ಶಿಕ್ಷಕರ ನುಡಿ / Head Teacher speak

ಶಾಲಾ ಪ್ರೊಫೈಲ್ / School Profile

ವಿದ್ಯಾರ್ಥಿಗಳ ಸಂಖ್ಯಾಬಲ / Student Strength

Class Medium Girls Boys Total!
8 A English 16 13 29
8 B Kannada 6 18 24
9 A English 10 15 25
9 B Kannada 11 13 24
10 A English 12 13 25
10 B Kannada 12 10 22

ಶಿಕ್ಷಕರ ಮಾಹಿತಿ / Teacher Profile

ಹೆಸರು
Name
ಹುದ್ದೆ
Designation
ಬೋಧನಾ ಅನುಭವ
Teaching Experience
ಶ್ರೀ ಅವಧಾನಿ ಎಂ.ಜಿ
Sri Avadhani M G
ಮುಖ್ಯ ಶಿಕ್ಷಕರು
Head Teacher
ಬಿ ಎ,ಬಿ ಎಡ್
B A B.Ed
21ವರ್ಷ
21 year
ಶ್ರೀಮತಿ ಆಸ್ಮಾ ಮುಬೀನಾ
Smt Asma Mubeena
ಸಹಶಿಕ್ಷಕರು (ಇಂಗ್ಲೀಷ್)
Assistant Teacher (English)
ಎಂ ಎ,ಬಿ ಎಡ್
MA,Bed
19ವರ್ಷ
19 year
ಶ್ರೀಮತಿ ಶೀಲಾ ಭಟ್
Smt Sheela Bhat
ಸಹಶಿಕ್ಷಕರು (ಗಣಿತ)
Assistant Teacher (Maths)
ಎಂ ಎಸ್ಸಿ ,ಬಿ ಎಡ್
Msc Bed
18ವರ್ಷ
18 year
ಶ್ರೀಮತಿ ಜಯಂತಿ ಎನ್.
Smt Jayanti N
ಸಹಶಿಕ್ಷಕರು (ಗಣಿತ)
Assistant Teacher (Maths)
ಎಂ ಎಸ್ಸಿ ,ಬಿ ಎಡ್
Msc Bed
18ವರ್ಷ
18 year
ಶ್ರೀಮತಿ ಕಲಾವತಿ ಬಿ
Smt Kalavati B
ಸಹಶಿಕ್ಷಕರು (ಸಮಾಜ ವಿಜ್ಞಾನ)
Assistant Teacher (Social science)
ಎಂ ಎ ,ಬಿ ಎಡ್
MA Bed
10ವರ್ಷ
10 year
ಶ್ರೀಮತಿ ರತ್ನಾ ಟಿ,ಎಸ್.
Smt Ratna T S
ಸಹಶಿಕ್ಷಕರು (ವಿಜ್ಞಾನ)
Assistant Teacher (science)
ಎಂ ಎಸ್ಸಿ ಬಿ ಎಡ್
Msc Bed
21ವರ್ಷ
21 year
ಶ್ರೀ ಶಿವಪ್ರಕಾಶ
Sri Shivaprakash
ಸಹಶಿಕ್ಷಕರು (ಕನ್ನಡ)
Assistant Teacher (Kannada)
ಎಂ ಎ,ಬಿ ಎಡ್
MA,Bed
19ವರ್ಷ
19 year
ಶ್ರೀಮತಿ ಉಮಾ ಕೆ.ಎನ್
Smt UMA K N
ಸಹಶಿಕ್ಷಕರು (ಹಿಂದಿ)
Assistant Teacher (Hindi)
ಎಂ ಎ,ಬಿ ಎಡ್
MA,Bed
21 ವರ್ಷ
21 year
ಶ್ರೀ ಭಕ್ತಪ್ಪ ಸುಮಮಾಲಾ
Sri Baktappa Sumamala
ಸಹಶಿಕ್ಷಕರು (ದೈ.ಶಿ)
Assistant Teacher (P.E)
ಬಿ ಎ,ಬಿಪಿ ಎಡ್
BA Bped
21 ವರ್ಷ
21 year
ಶ್ರೀ ಶರಣಪ್ಪ ಜಿ.
Sri Sharanappa G
ಸಹಶಿಕ್ಷಕರು (ಕ್ರಾಫ್ಟ್‌)
Assistant Teacher (Craft)

ನಮ್ಮ ಸಮುದಾಯ/ My Community

ಎಸ್‌ಡಿ‌ಎಮ್‌ಸಿ ಸದಸ್ಯರು /SDMC Members

SDMC ಸದಸ್ಯರ ಹೆಸರು ಪದನಾಮ
ರಮೇಶ್ ಅಧ್ಯಕ್ಷರು
ಅಲಮೇಲಮ್ಮ ಸದಸ್ಯರು
ಚಿಕ್ಕಪ್ಪ ಸದಸ್ಯರು
ನಾಗರಾಜು ಸದಸ್ಯರು
ನಿರ್ಮಲ ಸದಸ್ಯರು
ಮಹಾಲಿಂಗ್ವ ಸದಸ್ಯರು
ಮಂಜುಳ ಸದಸ್ಯರು
ಮೇರಿ ಸದಸ್ಯರು
ಕವಿತ ಸದಸ್ಯರು
ಕೃಷ್ಣಪ್ಪ ಸದಸ್ಯರು
ಉಷಾ ಸದಸ್ಯರು
ರಾಮು ಸದಸ್ಯರು
ಶ್ರೀನಿವಾಸ ಸದಸ್ಯರು
ಬಸಪ್ಪ ಸದಸ್ಯರು
ಫಯಾಜ್ ಸದಸ್ಯರು
ರೆಡ್ದಪ್ಪ ಸದಸ್ಯರು
ಗಂಗಾವತಿ ಸದಸ್ಯರು
ಹೆಸರು ಹುದ್ದೆ ಪದನಾಮ
ಲಕ್ಷ್ಮೀ ನಾರಾಯಣ ಕಾರ್ಪೋರೇಟರ್ ಪದನಿಮಿತ್ತ
ಎಮ್ ಜಿ ಅವಧಾನಿ ಮುಖ್ಯ ಶಿಕ್ಷಕರು ಪದನಿಮಿತ್ತ
ಸುಮಿತ್ರ ಅಂಗನವಾಡಿ ಶಿಕ್ಷಕಿ ಆರೋಗ್ಯ
ಪರಂಜ್ಯೋತಿ ಸೀನಿಯರ್ ಸಿಟಿಜನ್ ಯೋಗ
ಕೆ ಎನ್ ಉಮಾ ಶಿಕ್ಷಕಿ ಪದನಿಮಿತ್ತ
ಖಾದರ್ ವಿದ್ಯಾರ್ಥಿ ಪದನಿಮಿತ್ತ

ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು / Non Governmental organizations supporting the school

  • ಸೀನಿಯರ್ ಸಿಟಿಜನ್,ಇಂದಿರಾನಗರ್,ಬೆಂಗಳೂರು
    Senior Citizens - Indira Nagara,Bengaluru
  • ಸಿಎಮ್‌ಸಿಎ ದೊಮ್ಮಲೂರು, ಬೆಂಗಳೂರು
    CMCA Dommaluru,Bengaluru
  • ದೊಮ್ಮಲೂರು ಲೇಔಟ್ ಅಸೋಷಿಯೇಷನ್‌,ಬೆಂಗಳೂರು
    Dommaluru layout associations,Bengaluru
  • ಸಿ ಹೆಚ್ ಇ ಕಂಪನಿ,ಬೆಂಗಳೂರು
    C.H.E Company Bengaluru
  • ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್,ಬೆಂಗಳೂರು
    Swamy Vivekananda Youth Movement,Bengaluru
  • ರೋಟರಿ,ಇಂದಿರಾನಗರ,ಬೆಂಗಳೂರು
    Rotary Indiranagar,Bengaluru
  • ಆರ್ಟ್ ಆಫ್ ಲೀವಿಂಗ್,ಬೆಂಗಳೂರು
    Art of Living,Bengaluru
  • ಟಾರ್ಗೆಟ್ ರೋಟರಿ,ಬೆಂಗಳೂರು
    Target Rotary,Bengaluru

ಶಾಲಾ ಮೂಲಭೂತ ವ್ಯವಸ್ಥೆ / Educational Infrastructure

ಶಾಲಾ ಕಟ್ಟಡ ಮತ್ತು ತರಗತಿ ಕೊಠಡಿ / School building and classrooms ‌‌

ಆಟದ ಮೈದಾನ / Playground

ಗ್ರಂಥಾಲಯ / Library ‌‌‌‌‌‌‌‌‌‌‌‌‌‌‌

ವಿಜ್ಞಾನ ಪ್ರಯೋಗಾಲಯ / Science Lab

ICT ಪ್ರಯೋಗಾಲಯ / ICT Lab

This school has implemented IVRS and Fedena.

ಶಾಲಾ ಅಭಿವೃದ್ಧಿ ಯೋಜನೆ / School Development Plan

GHS Dommaluru/School Admission Banner 2015-16

ಶಾಲಾ ಶೈಕ್ಷಣಿಕ ಕಾರ್ಯಕ್ರಮ /School academic programme

ಕನ್ನಡ /Kannada

ಕಳೆದ ಎರಡು ವರ್ಷಗಳಿಂದ ಕನ್ನಡ ಭಾಷಾ ಬೋಧನೆಯ ವಿಷಯದಲ್ಲಿ ICT ಯನ್ನು ಬಳಸಿ ಪರಿಣಾಮಕಾರಿ ಬೋಧನೆಯನ್ನು ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ.ಇದಕ್ಕೆ ಪೂರಕವಾಗಿ ಶ್ರೀಯುತ ಅವಧಾನಿಯವರು,ಶ್ರೀಮತಿ ಕಲಾವತಿಯವರು,ಶ್ರೀಯುತ ಶಿವಪ್ರಕಾಶ್‌ರವರು ಕಾರ್ಯೋನ್ಮುಖರಾಗಿದ್ದಾರೆ.ಬಹುಭಾಷಾ ಪರಿಸರದ ಶಾಲೆಯಾದ್ದರಿಂದ ಇಲ್ಲಿ ICTಯು ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು ಕಲಿಕೆಗೆ ಪೂರಕವಾಗಿದೆ. ವಿವಿಧ ರೀತಿಯ ಕನ್ನಡ ಪಠ್ಯ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ.'ಭಿತ್ತಿ' ಎಂಬ ಹೆಸರಿನ ಗೋಡೆಪತ್ರಿಕೆಯನ್ನು ಆರಂಭಿಸಿದ್ದು, ಇದು ಮಕ್ಕಳ ಸಾಹಿತ್ಯಕ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ಪತ್ರಿಕೆ ಪ್ರಸ್ತುತ ಮಾಸಿಕವಾಗಿ ಪ್ರಕಟವಾಗುತ್ತಿದ್ದು ಇದನ್ನು ಪಾಕ್ಷಿಕವಾಗಿ ರೂಪಿಸುವ ಯೋಜನೆಯನ್ನು ಹೊಂದಲಾಗಿದೆ.

ಸೇತುಬಂಧ_ಕಾರ್ಯಕ್ರಮ ಸೇತುಬಂಧಕ್ಕೆ ಕಾರ್ಯಕ್ರಮಕ್ಕೆ ಸಂಭದಿಸಿದ ಕಲಿಕಾ ಸಾಮಗ್ರಿಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿರಿ

ನುಡಿ ಸಂಪದ 2017

ನುಡಿ ಸಂಪದ ಕಾರ್ಯಕ್ರಮದ ವರದಿ 08-03-2017 ರ ಬುಧವಾರದಂದು ನಮ್ಮ ಶಾಲೆಯ 9 ನೇ ತರಗತಿಯ ಎ ಮತ್ತು ಬಿ ವಿಭಾಗದ ಮಕ್ಕಳಿಗೆ ಕನ್ನಡ ಭಾಷಾ ಚಟುವಟಿಕೆಯಲ್ಲಿ ನುಡಿ ಸಂಪದ 2017 ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ

  • ಕವನವಾಚನ
  • ವಿದ್ಯುನ್ಮಾನ ಕಥಾ ಪ್ರಸ್ತುತಿ
  • ರಸಪ್ರಶ್ನೆ ಕಾರ್ಯಕ್ರಮ
  • ಸಾಂಸ್ಕೃತಿಕ ಕಾರ್ಯಕ್ರಮ (ನಾಟಕ,ಹಾಡುಗಾರಿಕೆ,ಜಾನಪದ ನೃತ್ಯ)

ಮೊದಲಾದ ಕಾರ್ಯಕ್ರಮಗಳನ್ನು ಕಮ್ಮಿ ಕೊಳ್ಳಲಾಗಿತ್ತು. ಇದಕ್ಕೆ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ ಜೆ ಅವಧಾನಿ ರವರು ಸಂಪೂರ್ಣ ಬೆಂಬಲ ನೀಡಿದರು.ಹೆಚ್ಚಿನ ಮಾಹಿತಿಗಾಗಿ ನುಡಿ ಸಂಪದ-2017 ಅನ್ನು ಕ್ಲಿಕ್ಕಿಸಿರಿ
ಕಾರ್ಯಕ್ರಮವು ಸುಮಾರು ಬೆಳಗ್ಗೆ 11.30 ಕ್ಕೆ ಆರಂಭವಾಗಿ ಅಪರಾಹ್ನ 3.45ರ ವರೆಗೂ ನೆರವೇರಿತು.ಇದರಲ್ಲಿ ಶ್ರೀಮತಿ ಶೀಲಾ,ಶ್ರೀ ಶರಣಪ್ಪ,ಶ್ರೀಮತಿ ಸುಮಾ ,ಶ್ರೀ ಮುಬಾರಕ್ ಮುಂತಾದವರು ಭಾಗವಹಿಸಿದ್ದರು ಉಳಿದವರು 8 ಮತ್ತು 10 ನೇ ತರಗತಿಯ ಪಾಠದಲ್ಲಿ ನಿರತರಾಗಿದ್ದರು, ಸಾಂಕೇತಿಕವಾಗಿ ಉದ್ಘಾಟನೆಯೊಂದಿಗೆ ಆರಂಭವಾಗಿ ಮು.ಶಿ ಬಿ ಟಿ ಶಿವಪ್ರಕಾಶ್ ರವರು ಕೆಲವು ಸಲಹೆಗಳನ್ನು ನೀಡಿದರು.
8 ಮತ್ತು 10 ನೇ ತರಗತಿ ತರಗತಿ ಇಲ್ಲದೆ ವಿರಾಮವಾಗಿದ್ದ ಶಿಕ್ಷಕರು ವೀಕ್ಷಕರಾಗಿ ಭಾಗವಹಿಸುತ್ತಿದ್ದರು. ಮಕ್ಕಳು ಸಹ ಬಹಳ ಆಸಕ್ತಿಯಿಂದ ಭಾಗವಹಿಸುದ್ದರು. ಕಾರ್ಯಕ್ರಮದ ಮಧ್ಯದಲ್ಲಿ ಎಲ್ಲೂ ಕಹಿ ಅನುಭವವಾಗಲಿಲ್ಲ. ಸುಮಾರು 2.15ಕ್ಕೆ ಮೊದಲರ್ಧದ ಕಾರ್ಯಕ್ರಮ ಮುಗಿಯಿತು ನಂತರ ಊಟದ ವಿರಾಮದ ನಂತರ ಮಕ್ಕಳು ನೃತ್ಯ ,ನಾಟಕ,ಅನುಕರಣೆ,ಜಾನಪದ ಹಾಡು ಮೊದಲಾದವನ್ನು ಮಾಡಿದರು. 3.45 ರ ಸುಮಾರಿಗೆ ಕಾರ್ಯಕ್ರಮವನ್ನು ನಿಲ್ಲಿಸಿ ಎಲ್ಲರಿಗೂ ವಂದನೆ ತಿಳಿಸಲಾಯಿತು.

ಇಂಗ್ಲೀಷ್ / English

ಹಿಂದಿ / Hindi

ಗಣಿತ / Mathematics

ಕಳೆದ ಎರಡು ವರ್ಷಗಳಿಂದ ಗಣಿತ ವಿಷಯ ಬೋಧನೆಯಲ್ಲಿ ICT ಯನ್ನು ಬಳಸಿ ಪರಿಣಾಮಕಾರಿ ಬೋಧನೆಯನ್ನು ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ.ಇದಕ್ಕೆ ಪೂರಕವಾಗಿ .ಶ್ರೀಮತಿ ಜಯಂತಿಯವರು, ಶ್ರೀಮತಿ ಶೀಲಾ ಭಟ್‌ರವರು ಕಾರ್ಯೋನ್ಮುಖರಾಗಿದ್ದಾರೆ.KAlgebra ನಂತಹ ಅನೇಕ ಗಣಿತ ಬೋಧನೆಗೆ ಉಪಯೋಗವಾಗುವ ಟೂಲ್‌ಗಳನ್ನು ಬಳಸಿ ಬೋಧಿಸಲಾಗುತ್ತಿದೆ.

ವಿಜ್ಞಾನ / Science

ದಿನಾಂಕ 01.12.2015 ರಂದು ಶ್ರೀಮತಿ ರತ್ನಾ ಟಿ.ಎಸ್ ಮತ್ತು ಶೀಲಾ ಭಟ್ ರವರು ಜೋತೆಯಲ್ಲಿ ಮಕ್ಕಳಿಗೆ ವಿಜ್ಞಾನ ಉಪಕರಣಗಳ ಪರಿಚಯ ಮಾಡಿಕೊಡಲಾಯಿತು . ಇಲ್ಲಿ ಮಕ್ಕಳು ತುಂಬಾ ಆಸಕ್ತಿಯಿಂದ ಭಾಗವಹಿಸಿ ವಿಜ್ಞಾನ ಉಪಕರಣಗಳ ಹೆಸರು ಮತ್ತು ಅವುಗಳ ಉಪಯೋಗವನ್ನು ತಿಳಿದುಕೊಂಡರು .



ಶ್ರೀಮತಿ ರತ್ನಾ ರವರಿಗೆ ವಿಜ್ಞಾನ ಪಾಠಕ್ಕೆ ಸಂಬಂದಪಟ್ಟಂತೆ ಅವರು ಕೇಳಿರುವ ವಿಜ್ಞಾನದ ವಿಡೀಯೋಗಳನ್ನು ಕೋಡಲಾಗಿದೆ ಅದನ್ನು ಬಳಸಿಕೊಂಡು ತರಗತಿ ಕೋಣೆಯಲ್ಲಿ ಉಪಯೋಗಿಸಿಕೊಂಡಿದ್ದಾರೆ .

ಸಮಾಜ ವಿಜ್ಞಾನ / Social Science

ಐ‌ಟಿಸಿ ತರಗತಿ / ICT Classes

School events

2016-17ನೇ ವರ್ಷದ ಶಾಲಾ ಕಾರ್ಯಕ್ರಮಗಳು

1. ವನಮೊಹತ್ಸವ ೨೦೧೬
2. ವ್ಯಕ್ತಿತ್ವ ವಿಕಸನ ಶಿಬಿರ-2016

  1. ಶಾಲೆಯ ಬಗೆಗಿನ ಕಿರುಚಿತ್ರವನ್ನು ವೀಕ್ಷಿಸಲು
  2. ಮುಖ್ಯ ಶಿಕ್ಷಕರಾರ ಶ್ರೀ ಅವಧಾನಿಯವರ ಅನಿಸಿಕಿಗಳನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿರಿ
  3. ಗಣಿತ ಶಿಕ್ಷಕಿಯಾದ ಶ್ರೀಮತಿ ಜಯಂತಿ ಮೇಡಮ್ ರವರ ಅನಿಸಿಕಿಗಳನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿರಿ
  4. ಸಮಾಜ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ಕಲಾವತಿ ಮೇಡಮ್ ರವರ ಅನಿಸಿಕಿಗಳನ್ನು ತಿಳಿಯಲುಇಲ್ಲಿ ಕ್ಲಿಕ್ಕಿಸಿರಿ
  5. ವಿದ್ಯಾರ್ಥಿಗಳಾದ ಜಯಶ್ರೀ ಮತ್ತು ಲಕ್ಷ್ಮೀ ಯವರುಗಳ ಅನಿಸಿಕಿಗಳನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿರಿ
  6. ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ಸುಮಾ ಮೇಡಮ್ ರವರ ಅನಿಸಿಕಿಗಳನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿರಿ

ವ್ಯಕ್ತಿತ್ವ ವಿಕಸನ ಶಿಬಿರದ ಬಗ್ಗೆ ಮು.ಶಿ.ರಾದ ಅವಧಾನಿ ಸರ್ ನುಡಿಗಳು
2016 ಜನವರಿ 16 ಮತ್ತು 17 ರಂದು ನಮ್ಮ ಸುತ್ತಲಿನ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆಯ 7ನೇ ತರಗತಿ ಮಕ್ಕಳಿಗಾಗಿ ನಮ್ಮ ಶಾಲೆಯ ಪ್ರೌಢಶಾಲೆಯಿಂದ ಎರಡು ದಿನಗಳ ವ್ಯಕ್ತಿತ್ವ ವಿಕಸನ ಶಿಬಿರವನ್ನು ಏರ್ಪಡಿಸಿದ್ದೆವು.ಸುಮಾರು ಏಳು ಶಾಲೆಗಳ 78 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದಕ್ಕೆ ಇದೇ ಶಾಲೆಯಲ್ಲಿ ಮತ್ತು ನಿಕಟ ಪೂರ್ವದಲ್ಲಿ ಕೆಲಸಮಾಡಿದ್ದ ಹೊಸಕೋಟೆ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಮೇಲ್ವಿಚಾರಕರಾಗಿ ಭಾಗವಹಿಸಿದ್ದರು. ಊಟ ಮತ್ತು ವಸತಿ ವ್ಯವಸ್ಥೆಗಾಗಿ ಸೀನಿಯರ್ ಸಿಟಿಜನ್ಸ್ ಸಂಸ್ಥೆಯವರು ಸಹಾಯ ಮಾಡಿದರು.ನನ್ನ ಈ ಕನಸಿನ ಕಾರ್ಯಕ್ರಮಕ್ಕೆ ಎಸ್‌ ಡಿ ಎಂ ಸಿ ಸದಸ್ಯರು ಸಹ ಬೆನ್ನೆಲಿಬಾಗಿ ನಿಂತಿದ್ದರು. ನನ್ನ ದೃಷ್ಟಿಕೋನದಂತೆ ಈ ಶಿಬಿರದ ಉದ್ದೇಶ ಸರ್ಕಾರಿ ಶಾಲೆಗಳಿಗೆ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಿದ್ದಾಗಿಯೂ ಸಹ 8ನೇ ತರಗತಿಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಇಳಿಕೆ ಕಂಡಿರುವುದು. ಮತ್ತು ಕನ್ನಡ ಮಾದ್ಯಮ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಇಳಿಕೆಯಾಗಿರುವುದರಿಂದ ಸಾಧ್ಯವಾದಷ್ಟು ದಾಖಲಾತಿ ಪ್ರಮಾಣವನ್ನು ಹೆಚ್ಚಿಸುವುದು. ಮತ್ತು ನಮ್ಮ ಶಾಲೆಯ ಕಲಿಕಾ ಪರಿಸರದ ಪರಿಚಯ ಮಾಡಿಕೊಡುವ ಮೂಲಕ ನಮ್ಮ ಶಾಲೆಯ ಬಗ್ಗೆ ಮಕ್ಕಳಿಗೆ ಮತ್ತು ಪೋಷಕರಿಗೆ ಉತ್ತಮ ಅಭಿಪ್ರಾಯ ಮೂಡುವಂತೆ ಮಾಡುವುದೇ ಆಗಿತ್ತು. ಈ ನಿಟ್ಟಿನಲ್ಲಿ ಯೋಗ ತರಗತಿ,ಮಕ್ಕಳಿಗಾಗಿ ಕ್ವಿಜ್,ವ್ಯಕ್ತಿತ್ವ ವಿಕಸನ ಉಪನ್ಯಾಸ, ಪ್ರಾರ್ಥನೆ, ಆಟ, ಕಲಿಕಾ ಚಟುವಟಿಕೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸಲಾಯಿತು. ಎಲ್ಲಾ ಮಕ್ಕಳು ಒಂದು ರಾತ್ರಿ ಶಾಲೆಯಲ್ಲಿಯೇ ತಂಗಿದ್ದದ್ದು ವಿಷೇಶವಾಗಿತ್ತು. ಇದಕ್ಕೆ ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ಸಹಕಾರ ನೀಡಿದ್ದಕ್ಕಾಗಿ ಧನ್ಯವಾದಗಳು. ೨೦೧೬-೧೭ ನೇ ಸಾಲಿಗೆ ಭಾಗವಹಿಸಿದ ಈ ೭೮ ಮಕ್ಕಳಜೊತೆಗೆ ಮತ್ತಷ್ಟನ್ನು ಸೇರಿಸಿ ೧೦೦ ಶಾಲೆಯ 8ನೇ ತರಗತಿಯ ದಾಖಲಾತಿಯನ್ನು ಗಡಿದಾಟಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ಶಿಬಿರದ ಪ್ರತಿಪಲವನ್ನು ನಿರೀಕ್ಷಿಸಲು ಮುಂದಿನ ಶೈಕ್ಷಣಿಕ ಸಾಲಿನ ಆರಂಭದವರೆಗೂ ಕಾದು ನೋಡಬೇಕಾಗಿದೆ ಹಾಗು ಈ ಪ್ರಕ್ರಿಯೆಯಲ್ಲಿ ಸಫಲತೆಯನ್ನು ಕಾಣುವ ನಂಬಿಕೆಯನ್ನು ಇಟ್ಟಿದ್ದೇನೆ.
#Teachers day celebration and Aptha salaha samithi

  1. Prathiba Karanji-2015 (cluster level)
  2. Swachcha baratha abhiyana
  3. Plantation
  4. Makkala suraksha sapthaha
  5. CCE Workshop for aided and unaided School Teachers.
  6. SDMC Meeting SDP and Hand wash day
  7. Shala samshathu
  8. Health check up-Bosch
  9. Big celebrations and SSLC Topper 2014-15
  10. Importance of milk and Lab
  11. Vikasa Shibira

IVRS Implementation

IVRS ಎಂಬುದು ಧ್ವನಿ ಕರೆಗಳನ್ನು ಕಳುಹಿಸುವ ಒಂದು ತಂತ್ರಾಂಶವಾಗಿದೆ. ಮಕ್ಕಳ ಕಲಿಕೆ, ಪ್ರಗತಿ, ಹಾಜರಾತಿ ಇತ್ಯಾದಿಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲು ಇದು ಸಹಕಾರಿಯಾಗುತ್ತದೆ. ಈ ತಂತ್ರಾಂಶದ ಮೂಲಕ ಶಾಲೆಯ ಸಿಬ್ಬಂದಿ ಪೋಷಕರಿಗೆ ತಿಳಿಸಬೇಕಿರುವ ಮಾಹಿತಿಯನ್ನು ಧ್ವನಿಮುದ್ರಣ ಮಾಡಿಕೊಂಡು ನಂತರ ಪೋಷಕರ ಮೊಬೈಲ್ ಸಂಖ್ಯೆಗಳನ್ನು IVRS ನಲ್ಲಿ ದಾಖಲಿಸಿ ಕರೆ ಕಳುಹಿಸಬಹುದು. ಪೋಷಕರ ಮೊಬೈಲ್‌ಗಳಿಗೆ ಕರೆ ರವಾನೆಯಾಗುತ್ತದೆ ಹಾಗು ಕರೆ ಸ್ವೀಕರಿಸಿದ ನಂತರ ಶಾಲೆಯವರು ಕಳುಹಿಸಿರುವ ಧ್ವನಿಮುದ್ರಣ ಪ್ರಸಾರಗೊಳ್ಳುತ್ತದೆ. ಈ ಮೂಲಕ ಸುಲಭವಾಗಿ ಪೋಷಕರನ್ನು ತಲುಪಲು ಸಾಧ್ಯವಾಗುತ್ತಿದೆ. ಪ್ರತ್ಯೇಕವಾಗಿ ಒಬ್ಬೊಬ್ಬ ವಿದ್ಯಾರ್ಥಿ ಪೋಷಕರಿಗೂ ಧ್ವನಿಕರೆ ಕಳುಹಿಸಬಹುದು ಹಾಗೆಯೇ ಸಾಮೂಹಿಕವಾಗಿ ಒಟ್ಟಿಗೆ ಒಂದಷ್ಟು ಪೋಷಕರಿಗೂ ಒಂದೇ ಸಂದೇಶವುಳ್ಳ ಧ್ವನಿಕರೆ ಕಳುಹಿಸಬಹುದು

ಶಾಲೆಯಿಂದ ಕಳುಹಿಸಿರುವ ಧ್ವನಿ ಸಂದೇಶಗಳು

  1. ಮನೆಯಲ್ಲಿ ಪೋಷಕರು ಮಕ್ಕಳನ್ನು ಪರೀಕ್ಷೆಗೆ ಸಿದ್ದಗೊಳಿಸುವಂತೆ ಪೋಷಕರಿಗೆ ಧ್ವನಿ ಸಂದೇಶ ಕಳುಹಿಸಿರುವುದನ್ನು ಇಲ್ಲಿ ಕೇಳಬಹುದು
  2. ಪರೀಕ್ಷೆ ಸಮೀಪಿಸುತ್ತಿದ್ದು, ಮನೆಯಲ್ಲಿ ಮಕ್ಕಳನ್ನು ಓದಿನಲ್ಲಿ ತೊಡಗಿಸುವಂತೆ ಹೇಳಿ ಪೋಷಕರಿಗೆ ಧ್ವನಿ ಸಂದೇಶ ಕಳುಹಿಸಿರುವುದನ್ನು ಇಲ್ಲಿ ಕೇಳಬಹುದು
  3. ಶಾಲೆಯ ದಾಖಲಾತಿ ಹೆಚ್ಚಿಸುವ ಉದ್ದೇಶದಿಂದ, ನೆರೆಹೊರೆಯ ಪ್ರಾಥಮಿಕ ಶಾಲೆಯ ಮಕ್ಕಳ ಪೋಷಕರಿಗೆ ತಮ್ಮ ಶಾಲೆಯ ಬಗ್ಗೆ ಮಾಹಿತಿ ನಿಡುವ ಧ್ವನಿ ಸಂದೇಶ ಕಳುಹಿಸಿರುವುದನ್ನು ಇಲ್ಲಿ ಕೇಳಬಹುದು