STF 2014-15 Chikkballapur

From Karnataka Open Educational Resources

19 districts

Mathematics

Batch 1

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 2

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Kannada

Batch 1

Agenda

If district has prepared new agenda then it can be shared here

See us at the Workshop

16/12/2014 to 20/12/2014

 

Workshop short report

2nd Day.

2ನೇ ದಿನದಂದು ಸರಸ್ವತಿ ದೇವಿಯ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಡಯಟ್ ನ ಹಿರಿಯ ಉಪನ್ಯಾಸಕರಾದ ಶ್ರೀ ರಾಧಾಕೃಷ್ಣರವರು ಈ ತರಬೇತಿಯ ಉದ್ದೇಶ ಹಾಗೂ ರಾಜ್ಯದ ಆಯ್ದ 10 ಜಿಲ್ಲೆಗಳಲ್ಲಿ ಈ ಸಾಲಿನಲ್ಲಿ ತರಬೇತಿ ಆರಂಭವಾದ ಬಗ್ಗೆ ತಿಳಿಸಿದರು. ಅದರೊಂದಿಗೆ ಅನೇಕ ಕಷ್ಟದ ವಿಚಾರಗಳನ್ನು ರಾಜ್ಯದ ಶಿಕ್ಷಕರೊಂದಿಗೆ ಹಂಚಿಕೊಂಡು ಪರಿಹಾರ ಕಂಡುಕೊಳ್ಳಲು ಹೇಗೆ ಸಹಾಯವಾಗಿಎಂದು ತಿಳಿಸಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಆರ್. ಸುಧಾಕರ್ ರವರು ಮೊದಲ ದಿನ ಕಲಿತ ಅಂಶಗಳಲ್ಲಿನ ಸಂದೇಹಗಳನ್ನು ಪರಿಹರಿಸಿ, ಇಂದಿನ ಪಾಠದೆಡೆಎ ಸಾಗಿದರು. ಅಂತರ್ಜಾಲದಲ್ಲಿ ಸಂಪನ್ಮೂಲಗಳನ್ನು ಹುಡುಕುವ ಬಗೆ ತಿಳಿಸಿ, ಟibಡಿe oಜಿಜಿiಛಿe ತಿಡಿiಣeಡಿ ಬಗ್ಗೆ ತಿಳಿಸಿ ಶಿಬಿರಾರ್ಥಿಗಳಿಗೆ 10ನೇ ವರ್ಗದ ಒಂದೊಂದು ಪಾಠ ಆಯ್ಕೆ ಮಾಡಿಕೊಂಡು ಇಕಿಪೀಡಿಯಾದಲ್ಲಿ ಅಗತ್ಯ ಮಾಹಿತಿ, ಚಿತ್ರಗಳು, ವಿಮರ್ಶೆ ಗಳನ್ನು ಸಂಗ್ರಹಿಸಿ, ಹೇಗೆ ಉಳೀಸುವುದು, ಬೇರಡೆ ಲಗತ್ತಿಸುವುದು, ಫೈಲ್ ಮಾಡಿ ಳಿಸುವುದನ್ನ ಕಲಿಸಿದರು. ಶಿಬಿರಾರ್ಥಿಗಳು ವಚನಸೌರಭ, ಧರ್ಮಸಮದೃಷ್ಟಿ, ಶಬರಿ, ಕೌರವೇಂದ್ರನ ಕೊಂದೆ ನೀನು ಪಾಠಗಳಿಗೆ ಮಾಹಿತಿ ಹುಡುಕಿ ಸಂಗ್ರಹಿಸುವ ಕೆಲಸದಲ್ಲಿ ಊಟದ ವಿರಾಮದವರೆಗೂ ತೊಡಗಿಸಿಕೊಂಡಿದ್ದರು. ಮಧ್ಯಾಹ್ನದ ಅವಧಿಯಲ್ಲಿ ವಿಂಡೊಸ್ ಮತ್ತು ಉಬಂಟುಗಳಿಗಿರುವ ವ್ಯತ್ಯಾಸ ತಿಳಿಸಿ, ಉಬಂಟು ಸಾಫ್ಟವೇರ್ ಉಚಿತವಾಗಿ ಹಾಕಿಸಿಕೊಳ್ಳಬಹುದಲ್ಲದೆ, ಯಾವುದೇ ವೈರಸ್ ಗಳ ತೊಂದರೆಯಿರುವುದಿಲ್ಲವೆಂದೂ ತಿಳಿಸಿದರು. ಉಬಂಟುನಲ್ಲಿ ಕನ್ನಡ-ಇಂಗ್ಲೀಷ ಪದರಚನೆ ಮಾಹಿತಿ ಇರುತ್ತದೆಂದು ಕಲಿತೆವು. ಲಿಬೆರೊ ಆಫೀಸ್ ರೈಟರ್ ನಲ್ಲಿ ಲೋಹಿತ್ ಕನ್ನಡ ಟೈಪ್ ಮಾಡುವದನ್ನು ಕಲಿಯಲಾಯ್ತು ವಂದನೆಗಳೊಂದಿಗೆ.

3rd Day.

ಈ ದಿನದ ತರಬೇತಿಯನ್ನು ವಿಘ್ನನಿವಾರಕ ಗಣೇಶನ ಸ್ತು ತಿಯೊ೦ದಿಗೆ ಪ್ರಾರ೦ಭಿಸಲಾಯಿತು ನ೦ತರ ಹಿ೦ದಿನ ದಿನ ಕಲಿತ ವಿಷಯಗಳನ್ನು ವರದಿವಾಚನದೊ೦ದಿಗೆ ಪುನರ್ ಮನನ ಮಾಡಿಕೊಳ್ಳಲಾಯಿತು . ಈ ದಿನದ ತರಬೇತಿಯ ಭಾಗವಾಗಿ ಸ೦ಪನ್ಮೂಲ ವ್ಯಕ್ತಿಗಳಾದ ಆರ್. ಸು ಧಾಕರ್ ರವರು ಶಿಬಿರಾರ್ಥಿಗಳಿಗೆ libre writer ನಲ್ಲಿ ಅಡ್ಡಸಾಲು ಮತ್ತು ಉದ್ದ ಸಾಲು ಗಳನ್ನು ಹಾಕಿಕೊ೦ಡು ಪಟ್ಟಿತಯಾರಿಸು ವ ಬಗೆಯನ್ನು ಹಾಗೂ ಅಕ್ಷರಗಳನ್ನುDTP ಮಾಡು ವಾಗ ಸು ಲಭವಾಗಲು , ಟೈಪಿ೦ಗ್ ಕಲಿಯಲು ಸಹಾಯಕ ವಾಗು ವ೦ತೆ text typing lesson ನ್ನು ತಿಳಿಸಿಕೊಟ್ಟು ಶಿಬಿರಾರ್ಥಿಗಳನ್ನು ಅಭ್ಯಾಸ ಮಾಡಲು ಬಿಟ್ಟರು . ಶಿಬಿರಾರ್ಥಿಗಳು ಪಟ್ಟಿ ತಯಾರಿಸು ವು ದನ್ನು ಅಭ್ಯಾಸ ಮಾಡಿ, ಕಲಿತು ತರಗತಿಯಲ್ಲಿ ಸಿ,ಸಿ,ಇ ದಾಖಲೆಗಳ ನಿರ್ವಹಣೆಗೆ ಸಹಕಾರಿಯಾಗು ತ್ತದೆಂಬ ಸಂತೋಷದೊಂದಿಗೆ ಊಟಕ್ಕೆ ತೆರಳಿದರು ಮಧ್ಯಾಹ್ನನದ ಅವಧಿಯಲ್ಲಿ email ಸೆಟ್ಟಿಂಗ್ ಮಾಡು ವುದು , ನಮಗೆ ಬಂದ ಮಿಂಚಂಚೆ ಪತ್ರವನ್ನು ಓದಿ ಪ್ರತಿಕ್ರಿಯೆ ನೀಡು ವಬಗೆphotos ಕಟ್ಟಿಂಗ್ ಮಾಡು ವು ದನ್ನು ತಿಳಿಸಿಕೊಟ್ಟು ಶಿಬಿರಾರ್ಥಿಗಳನ್ನು ಅಭ್ಯಾಸ ಮಾಡಲು ಬಿಟ್ಟರು . ಆಗ ಶಿಬಿರಾರ್ಥಿಗಳು ಸಂಕ್ರಾಂತಿ ಹಬ್ಬದ ಶು ಭಾಶಯಗಳನ್ನು ಮಿಂಚಂಚೆಯ ಮೂ ಲಕ ವಿನಿಮಯ ಮಾಡಿಕೊಂಡು ಇ ಮೇಲ್ ಕಳುಹಿಸು ವುದನ್ನು ಕರಗತ ಮಾಡಿಕೊಂಡರು .

ಒಟ್ಟಾರೆ ಈದಿನದ ಕಲಿಕೆ ನಮಗೆ ಬೋಧನೆ ಯಲ್ಲಿ ತಂತ್ರಜ್ಞಾನ ವನ್ನು ಪರಿಣಾಮ ಕಾರಿಯಾಗಿ ಬಲಸಿಕೊಳ್ಳಲು ಹಾಗು ಬಹಳ ಸು ಲಭ ವಾಗಿ format ಗಳನ್ನು ರಚಿಸಿಕೊ೦ಡು CCE ದಾಖಲೆಗಳನ್ನು ನಿರ್ವಹಿಸಲು ಮತ್ತು ಬೋಧನಾ ಪ್ರಕ್ರಿಯೆಯಲ್ಲಿ ಎದು ರಾಗು ವ ತೊಡಕು ಗಳನ್ನು ಇತರರೊಂದಿಗೆ ಹ೦ಚಿಕೊ೦ಡು ಸಮಸ್ಯೆಗಳನ್ನು ಪರಿಹರಿಸಿಕೊಳ್ಳು ವ ಬಗೆಯನ್ನು ಕಲಿತು ಕೊಳ್ಳಲು ಸಹಕಾರಿಯಾಯಿತು

Batch 2

Agenda

If district has prepared new agenda then it can be shared here

See us at the Workshop

29th Dec 2014 to 02 Jan 2015

 

Workshop short report

1st Day. 29/12/2014

ದಿನಾಂಕ:- ೨೯-೧೨-೨೦೧೪ ರಂದು ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಚಿಕ್ಕಬಳ್ಳಾಪುರ ಇವರ ವತಿಯಿಂದ ಕನ್ನಡ ಭಾಷಾ ಶಿಕ್ಷಕರ {ಎಸ್.ಟಿ.ಎಫ್} ತರಬೇತಿಯನ್ನು ಸರ್ಕಾರಿ ಪ್ರೌಢಶಾಲೆ ಚಿಕ್ಕಬಳ್ಳಾಪುರ ಇಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಭವ್ಯ ಸ.ಶಿ ರವರು ಪ್ರಾರ್ಥನೆ ಮಾಡು ವುದರೊಂದಿಗೆ ಚಾಲನೆ ನೀಡಿದರು , ಡಯಟ್ ಹಿರಿಯ ಉಪನ್ಯಾಸಕರಾದ ಶ್ರೀ. ರಾಧಾಕೃಷ್ಣನ್ ರವರು ಉದ್ಘಾಟಿಸಿದರು. ಕನ್ನಡ ಭಾಷಾ ಬೋಧನೆಯಲ್ಲಿ ಕಂಪ್ಯೂ ಟರ್ ಬಳಕೆಯ ಮಹತ್ವವನ್ನು ಕುರಿತು ಹೇಳಿದರು. ನಂತರ ಶಿಬಿರಾರ್ಥಿಗಳು ಪರಸ್ಪರ ತಮ್ಮ ಸ್ವಪರಿಚಯ ಮಾಡಿಕೊಂಡರು . ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಾಣಾ ಪ್ರತಾಪ್. ಮತ್ತು ಶ್ರೀ ಸುಧಾಕರ್. ಇವರು ಎಸ್.ಟಿ.ಎಫ್ ನ ಮಹತ್ವ & ಉದ್ದೇಶಗಳನ್ನು ಕು ರಿತು ಹೇಳುವುದಲ್ಲದೆ .ಅಂತರ್ಜಾಲ , ತಂತ್ರಾಂಶದ ಮಹತ್ವವನ್ನು ವಿವರವಾಗಿ ತಿಳಿಸಿದರು , ನಂತರ ಪೂ ರ್ವಾಹ್ನ ಇಂಟರ್ನೆಟ್ ಬಳಕೆಯ ಬಗ್ಗೆ ಮತ್ತು ಓಡಿಟಿ ಬಗ್ಗೆ ತಿಳಿಸಿದರು ,ನೆಟ್ ನಲ್ಲಿ ಚಿತ್ರ ಹು ಡು ಕು ವು ದು ಕತ್ತರಿಸು ವುದು ಅಂಟಿಸು ವುದರ ಬಗ್ಗೆ ತಿಳಿಸಿದರು . ಮೊದಲನೇ ದಿನದ ತರಬೇತಿ ಅರ್ಥಪೂ ರ್ಣ ವಾಗಿ ಮು ಕ್ತಾಯ ವಾಯಿತು. .

2nd Day. 30/12/2014

ಪ್ರಾರ್ಥನೆಯೊಂದಿಗೆ ಎರಡನೆ ದಿನದ ತರಬೇತಿ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರಾರ್ಥನೆಯನ್ನು ಶ್ರೀಮತಿ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ಚೀಮಂಗಲ ಶಿಡ್ಲಘಟ್ಟ ತಾಲ್ಲೂ ಕಿ ನವರು ನಡೆಸಿಕೊಟ್ಟರು ಸಂಪನ್ಮೂಲ ವ್ಯಕ್ತಿಗಳಾದ ಶ್ರೀಸುಧಾಕರ್ ರವರು ಸ್ವಾಗತವನ್ನು ಕೋರಿದರು. ನಂತರ ಹಿಂದಿನ ದಿನ ತರಬೇತಿ ನೀಡಿದ ವಿಷಯಗಳನ್ನು ಚರ್ಚಿಸಲಯಿತು. ಹಿಂದಿನ ದಿನದ ತರಬೇತಿಯಲ್ಲಿ ಗೊತ್ತಾಗದೆ ಇರುವ ಅಂಶಗಳನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀಸುಧಾಕರ್ ರವರು ಪರಿಹರಿಸಿದರು. ಆಮೇಲೆ ಟೇಬಲ್ಸ್ ಗಳನ್ನು ಯಾವ ರೀತಿ ಹಾಕಿಕೊಂಡು ಡಿ. ಟಿ.ಪಿ. ಮಾಡಬೇಕೆಂಬುದರ ಬಗ್ಗೆ ವಿವರಿಸಿದರು. ನಂತರ ಎಂ. ಎಸ್. ಎಕ್ಸಲ್ ನಲ್ಲಿ ಯಾವ ರೀತಿ ಡಿ. ಟಿ. ಪಿ. ಮಾಡಬೇಕೆಂಬುದರ ಬಗ್ಗೆ ವಿವರಿಸಿದರು. ಅಪರಾಹ್ನದ ಅವಧಿ ವಿದ್ಯುನ್ಮಾನ ಅಂಚೆ ( ಇಮೇಲ್) ಖಾತೆಯನ್ನು ತೆರೆಯುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಣ ಪ್ರತಾಪ್ ರವರು ವಿವರಿಸಿದರು . ಇಮೇಲ್ ನಲ್ಲಿ ಇರುವ ಆಯ್ಕೆಗಳ ಬಗ್ಗೆ ವಿವರಿಸಿದರು ಹಾಗೂ ಇಮೇಲ್ ಮೂ ಲಕ ನಮ್ಮ ಇಮೇಲ್ ವಿಳಾಸಕ್ಕೆ ಮಾಹಿತಿ ಹಾಗೂ ಸಂದೇಶಗಳನ್ನು ಬೇರೆಯವರಿಂದ ಪಡೆಯುವುದು ಹಾಗೂ ನಾವು ಬೇರೆಯವರ ವಿಳಾಸಕ್ಕೆ ಇಮೇಲ್ ಮೂ ಲಕ ಮಾಹಿತಿ ಹಾಗೂ ಕಳುಹಿಸುವುದರ ಬಗ್ಗೆ ಹೇಳಿದರು ನಂತರ ಶಿಬಿರಾರ್ಥಿಗಳಿಗೆ ತಮ್ಮ ಇಮೇಲ್ ಖಾತೆಯನ್ನು ತೆರೆಯುವಂತೆ ಹೇಳಿದರು . ಶಿಬಿರಾರ್ಥಿಗಳು ತಮ್ಮ ಇಮೇಲ್ ಖಾತೆಗಳನ್ನು ತೆರೆದರು ನಂತರ ಬಿ. ಆರ್. ಪಿ. ಸುರೇಶ ರವರು ಇಮೇಲ್ ನಲ್ಲಿರುವ ಆಯ್ಕೆಗಳ ಬಗ್ಗೆ ಸವಿವರವಾದ ವಿವರಣೆಯನ್ನು ನೀಡುವುದರೊಂದಿಗೆ ಎರಡನೇ ದಿನದ ತರಬೇತಿ ಕಾರ್ಯಕ್ರಮ ಮುಕ್ತಾಯವಾಯಿತು.

3rd Day. 31/12/2014

STFನ ಮೂ ರನೇ ದಿನದ ತರಬೇತಿಯು ಸ್ವಾಗತದೊಂದಿಗೆ ಪ್ರಾರಂಭವಾಯಿತು.. ನಂತರ ಶರಣಮ್ಮ ಶಿಕ್ಷಕಿಯವರಿಂದ ಪ್ರಾರ್ಥನೆ ಮೂ ಡಿ ಬಂತು . ಡಯಟ್ ಉಪನ್ಯಾಸಕರಾದ ರಾಧಾಕೃಷ್ಣರವರು ಮತ್ತು ಹರೀಶ್ ರವರು ಶಿಬಿರದಲ್ಲಿ ಭಾಗವಹಿಸಿದ್ದರು. ಇಂದು ಮಾನವ ಜನ್ಮಕೆ ಹು ಟ್ಟಿಬಂದ ಬಳಿಕ ಕಂಪ್ಯೂ ಟರ್ ಜ್ಞಾನವಿರಬೇಕಯ್ಯ ಕಂಪ್ಯೂ ಟರ್ ಜ್ಞಾನ ಪಡೆಯಲು ಕಂಪ್ಯೂ ಟರ್ ಸದಾ ಬಳಸಬೇಕಯ್ಯ ಕಂಪ್ಯೂ ಟರ್ ಜ್ಞಾನ ಪಡೆಯದ ನರ ಜನ್ಮ ವ್ಯರ್ಥವಯ್ಯ. ಎಂಬಂತೆ STFನ ಉದ್ದೇಶ ಮತ್ತು ಗು ರಿಗಳ ಬಗ್ಗೆ ಹರೀಶ್‌ರವರು ಸವಿವರವಾಗಿ ತಿಳಿಸಿದರು. ಹಾಗೆ ರಾಧಾಕೃಷ್ಣರವರು STFಶಿಕ್ಷಕರಿಗೆ ಸಿಕ್ಕಿರು ವ ಸು ವರ್ಣಾವಕಾಶ. ಶಿಕ್ಷಕರು ನಮ್ಮ ಸಂಸ್ಕೃತಿಯನ್ನು ಅಳವಡಿಸಿಕೊಂಡು ಬೆಳೆಸು ವುದು ಅವರ ಜವಾಬ್ದಾರಿ ಎಂಬ ಮಹತ್ವದ ಅಂಶವನ್ನು ತಿಳಿಸಿದರು. ನಂತರ ಸಂಪನ್ಮೂ ಲ ವ್ಯಕ್ತಿಗಳಾದ ಸು ಧಾಕರ್ ರವರು ಇ-ಮೇಲ್ ತೆರೆಯು ವು ದು ಮತ್ತು ಮಾಹಿತಿಯನ್ನು ನೋಡು ವುದು ಮತ್ತು ಬೇರೆಯವರಿಗೆ ಇ-ಮೇಲ್ ಕಳು ಹಿಸು ವುದು ಅಲ್ಲದೇ ಕಂಪೋಸ್ ಇತರೆ ವಿಷಯಗಳನ್ನು ತಿಳಿಸಿಕೊಟ್ಟರು. ಊಟದ ವಿರಾಮ ತದನಂತರ ಎಲ್ಲಾ ಶಿಕ್ಷಕರು ಕಾರ್ಯೋನ್ಮುಖರಾದರು ನಾಗರಾಜ್‌ರವರು ಕೆಲವೊಂದು ಆರೋಗ್ಯ ಸಲಹೆಗಳನ್ನು ನೀಡಿದರು. RPರಾಣಾಪ್ರತಾಪ್‌ರವರು ಕೀಲಿಮಣೆ ಬಳಕೆಯ ಕು ರಿತು ತಿಳಿಸಿದರು ಫ್ರೀ ಮೈಂಡ್ ಬಳಕೆಯ ಬಗ್ಗೆ ತಿಳಿಸಿದರು. ಬದು ಕಿನಲ್ಲಿ ಸಜ್ಜನರ ಸ್ನೇಹ ಪಡೆಯಬೇಕು. ಮಲೆನಾಡಿನ ಮೋಡವಾಗಿ ಹನಿಯ ಚೆಲ್ಲಬೇಕು ಹುಣ್ಣಿಮೆಯ ಚಂದ್ರನಾಗಿ ಬೆಳಕು ನೀಡಬೇಕು. ಆದರ್ಶ ಶಿಕ್ಷಕರಾಗಿ ಭಾಷಾ ಬೋದನೆ ಮಾಡಲು ಕಂಪ್ಯೂ ಟರ್ ಜ್ಞಾನ ಬೇಕು ಎಂಬು ದನ್ನು ನಾವೆಲ್ಲ ತಿಳಿದಿರಬೇಕು ಎಂಬ ಅಂಶದೊಂದಿಗೆ ಮೂ ರನೇ ದಿನದ ವರದಿ ಸಮಾಪ್ತಿಯಾಗುವುದು ..

4th Day. 01/01/2015

ರಸಿಕನಾಡಿದ ಮಾತು ಶಶಿಯು ದಿಸಿ ಬಂದಂತೆ

ರಸಿಕನಲ್ಲದವನ ಬರಿ ಮಾತು ಕಿವಿಗೆ ಕೂ ರ್ದಸಿಯ ಬಡಿದಂತೆ ಸರ್ವಜ್ಞ.

ಈ ದಿನದ ಕಾರ್ಯಾಗಾರವು ಶಿಕ್ಷಕಿಯರಾದ ಶ್ರೀಮತಿ ಶರಣಮ್ಮ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು . ಶಿವಕು ಮಾರ್‌ರವರು ಹಿಂದಿನ ದಿನದ ವರದಿಯನ್ನು ವಾಚಿಸಿದರು . ಸಂಪನ್ಮೂಲ ವ್ಯಕ್ತಿಗಳು ಹೊಸ ವರ್ಷದ ಶುಭಾಷಯ ಕೋರಿದರು. ನಂತರ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಾಣಾಪ್ರತಾಪ್‌ರವರು ಚಿತ್ರಗಳ ಮೇಲೆ ಹೆಸರು ಹಾಕು ವ ವಿಧಾನವನ್ನು ತಿಳಿಸಿದರು . Application-Graphics-GIMP Image Editior Tool Box ಬಳಕೆ ತಿಳಿಸಿದರು. ಪ್ರಶಿಕ್ಷಣಾರ್ಥಿಗಳು ಅಭ್ಯಾಸ ಮಾಡಿದರು. ಚಹಾ ವಿರಾಮ ಶ್ರೀ ಎಲ್ಲಪ್ಪ ರವರು ಕೇಕ್ ತರಿಸಿ ಶಿಬಿರದ ನಿರ್ದೇಶಕರಾದ ಶ್ರೀ ರಾಧಾಕೃಷ್ಣನ್‌ರವರಿಂದ ಕೇಕ್ ಕತ್ತರಿಸಿ ಎಲ್ಲರಿಗೂ ಶು ಭಾಷಯ ಕೋರಿದರು. ಮೊಣಕಾಲು ನೋವಿಗೆ ಪರಿಹಾರವನ್ನು ಶ್ರೀ ನಾಗರಾಜ್‌ರವರು ತಿಳಿಸಿದರು. ಊಟದ ವಿರಾಮ KOER ಬಗ್ಗೆ ರಾಣಾಪ್ರತಾಪ್‌ರವರು ತಿಳಿಸಿದರು . ಇಬ್ಬರು ಸಂಪನ್ಮೂ ಲ ವ್ಯಕ್ತಿಗಳು ಎಲ್ಲಾ ಪ್ರಶಿಕ್ಷಣಾರ್ಥಿಗಳ ಬಳಿಗೆ ಹೋಗಿ ಮಾರ್ಗದರ್ಶನ ನೀಡಿದರು. ಶಿಬಿರಾರ್ಥಿಗಳು ಮಾಹಿತಿ ಸಂಗ್ರಹಣೆಯಲ್ಲಿ ನಿರತರಾಗಿದ್ದರು. ಚಹಾ ವಿರಾಮ ಎಲ್ಲಾ ಶಿಬಿರಾರ್ಥಿಗಳು ಅಂತರ್ಜಾಲ ಲೋಕಕ್ಕೆ ಜಾರಿದರು . ಎಲ್ಲರೂ ಆ ಲೋಕದಿಂದ ಹೊರಬಂದದ್ದು ಸಂಜೆ 5:30 ಕ್ಕೆ. ಇಲ್ಲಿಗೆ ಇಂದಿನ ಕಾರ್ಯಕ್ರಮ ಮು ಕ್ತಾಯವಾಯಿತು.

5th Day. 02/01/2015

ಗಣಕಯಂತ್ರವನರಿಯದವ ಏನಗಳಿಸಿದರೇನಯ್ಯಾ.

ಗಣಕಯಂತ್ರದ ಮಂತ್ರಗಳಿಗೊಲಿಯದವ ಗಣಕಕಿಲ್ಲವಯ್ಯಾ.

ಗಣಕಯಂತ್ರದ ಜಾಲದಲ್ಲಿ ತೇಲದವ ಗಣನೆಗೆ ಬಾರನಯ್ಯಾ.

ಗಣಕಯಂತ್ರದ ಸಾಗರದೊಳು ಈಜು ವವ ಶಿವಗಣಾದಿಗಳಿಂದ ಮಾನ್ಯನಯ್ಯಾ..

ಎನ್ನುವ ಗಣಕಯಂತ್ರದ ಉಕ್ತಿಯೊಂದಿಗೆ ಐದನೇ ದಿನದ ವರದಿಯ ವಾಚನ ಆರಂಭವಾಗುತ್ತದೆ. ಮೊದಲಿಗೆ, ಸಂಪನ್ಮೂ ಲ ವ್ಯಕ್ತಿಗಳಾದ ಸು ಧಾಕರ್‌ರವರು ಐದನೇ ದಿನದ ತರಬೇತಿಗೆ ಚಾಲನೆ ನೀಡಿದರು.. ನಂತರ ಸರ್ಕಾರಿ ಪ್ರೌಢಶಾಲೆ ನ್ಯಾಮಗೊಂಡ್ಲು ಶಾಲೆಯ ಶಿಕ್ಷಕರಾದ ಎನ್.ರವೀಂದ್ರನಾಥ್‌ರವರು ಹರಿಭಕ್ತಸಾರದ ತುಣುಕನ್ನು ಪ್ರಾರ್ಥನೆಯನ್ನಾಗಿ ಹಾಡಿದರು. ನಂತರ ರಾಣಾಪ್ರತಾಪ್‌ರವರ ನೇತೃತ್ವದಲ್ಲಿ ಹಿಂದಿನ ನಾಲ್ಕು ದಿನಗಳ ತರಗತಿಗಳ ಕಲಿಕೆಯ ಬಗ್ಗೆ ಹಿಮ್ಮಾಹಿತಿ ಪಡೆಯುತ್ತಾ ತರಬೇತಿ ಆರಂಭವಾಯಿತು. ಮೊದಲ ಅವಧಿಯಲ್ಲಿ KOERನಲ್ಲಿ ಪಾಠಗಳಿಗೆ ಸಂಬಂಧಿಸಿದ ಕಲಿಕೋಪಕರಣಗಳ ಸಂಗ್ರಹಣೆ, ಅದರ ಜೊತೆಗೆ ಸಂಬಂಧಿಸಿದ ಅಂಶಗಳ ಸೇರಿಸು ವಿಕೆ ಬಗ್ಗೆ ಪ್ರಾಯೋಗಿಕ ತರಗತಿಗಳನ್ನು ಹಮ್ಮಿಕೊಳ್ಳಲು ತಿಳಿಸಲಾಯಿತು. ಜೊತೆಗೆ ವರದಿ ವಾಚನವು ಚಿಕ್ಕಬಳ್ಳಾಪುರ ತಾಲ್ಲೂ ಕಿನ ಪರವಾಗಿ ಎನ್.ರವೀಂದ್ರನಾಥ್ ರವರಿಂದ ವಾಚಿಸಲ್ಪಟ್ಟಿತು. ನಂತರ ಹೈಪರ್‌ಲಿಂಕ್ ಬಗ್ಗೆ ಮಾಹಿತಿ ತಿಳಿಸಲಾಯಿತು ನಂತರ ಶಿಕ್ಷಕರು ಇದನ್ನು ಪ್ರಾಯೋಗಿಕವಾಗಿ ಅಭ್ಯಾಸ ಮಾಡಿದರು ಚಹಾ ವಿರಾಮ ನಂತರ ಟೆಂಪ್ಲೆಟ್ಸ್ ಗಳ ಬಗ್ಗೆ ರಾಣಾಪ್ರತಾಪ್‌ರವರು ಮಾಹಿತಿ ನೀಡಿದರು ಹಾಗೂ ಇದನ್ನು ಬಳಕೆ ಮಾಡುವ ವಿಧಾನದ ಬಗ್ಗೆ ಶಿಕ್ಷಕರು ಅಭ್ಯಾಸ ಮಾಡಿದರು. ಊಟದ ವಿರಾಮ ಎ.ವಿ.ಕ್ಲಿಪ್ಸ್ ರಂಜನೆಯ ಮೂ ಲಕ ಮಧ್ಯಾಹ್ನದ ಅವಧಿ ಪ್ರಾರಂಭವಾಯಿತು. ನಂತರ ರಾಣಾಪ್ರತಾಪ್‌ರವರು ಹಾಗೂ ಸುಧಾಕರ್‌ರವರು ಗೂಗಲ್ ಮ್ಯಾಪ್ ಬಗ್ಗೆ ಸವಿವರವಾಗಿ ತಿಳಿಸಿದರು ಚಹಾ ವಿರಾಮ ನಂತರ ಬಿ.ಆರ್.ಪಿ ಸು ರೇಶ್‌ರವರಿಂದ ಆನ್‌ಲೈನ್ ಬ್ಯಾಂಕಿಂಗ್ ಹಾಗೂ ಇನ್ನಿತರೇ ಉಪಯು ಕ್ತ ಮಾಹಿತಿಗಳನ್ನು ನೀಡಿದರು. ನಂತರ ಫೋಟೋ ಸೆಷನ್ ನಡೆಯಿತು ಜೊತೆಗೆ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಯಿತು ಹಾಗೂ ಹಿಮ್ಮಾಹಿತಿ ಹಾಳೆಗಳನ್ನು ತು 0ಬಲಾಯಿತು . ಇಲ್ಲಿಗೆ ಈ ದಿನದ ವರದಿ ಮು ಕ್ತಾಯವಾಯಿತು.

Batch 3

Agenda

If district has prepared new agenda then it can be shared here

See us at the Workshop

Workshop short report

1st Day

ದಿ; ೧೨-೦೧-೨೦೧೫ ರ ಮೊದಲ ದಿನದ ತರಬೇತಿಯು ಗಣನಾಥನ ಆರಾಧನೆಯೊಂದಿಗೆ ಆರಂಭವಾಯಿತು.. ಸ೦ಪನ್ಮೂ ಲ ವ್ಯಕ್ತಿಗಳಾದ ಶ್ರೀ ಸು ಧಾಕರ ಹಾಗೂ ಶ್ರೀರಾಣಾಪ್ರತಾಪರವರು ಎಸ್ ಟಿ ಎಫ್ ಅರ್ಥ, ಗು ರಿ ಉದ್ದೇಶಗಳನ್ನು ತಿಳಿಸಿದರು. ಕಲಿಕಾ - ಬೋಧನಾ ಪ್ರಕ್ರಿಯೆಯಲ್ಲಿ ತ೦ತ್ರಜ್ಞಾನದ ಅವಶ್ಯಕತೆ, ಆಧು ನಿಕ ದಿನಗಳಲ್ಲಿ ಯು ವ ತಲೆಮಾರಿಗೆ ಅಗತ್ಯ ಮಾರ್ಗದಲ್ಲಿ ವಿಷಯ ತಲು ಪಿಸು ವಿಕೆಗೆ ತಕ್ಕ೦ತೆ ನಾವು ಬದಲಾಗಬೇಕಾದರೆ ಎಸ್ ಟಿ ಎಫ್ ಕಲಿಯಬೇಕಾದ ಅನಿವಾರ್ಯತೆ ಬಗ್ಗೆ ವಿವರಿಸಿದರು. ಅ೦ತರ್ಜಾಲ ತಾಣಗಳಲ್ಲಿ ಮಾಹಿತಿ ಹು ಡು ಕಾಟ, ಅದನ್ನು ಬೇಕಾದ ಕಡೆ ಉಳಿಸಿಕೊಳ್ಳುವುದು, ಬೇಕಾದವರಿಗೆ ಕಳು ಹಿಸು ವುದು ಮೊದಲಾದ ಉಪಯುಕ್ತ ವಿಷಯಗಳನ್ನು ಬೆಳಗಿನ ಅವಧಿಯಲ್ಲಿ ಕಲಿಯಲಾಯ್ತು. ಮಧ್ಯಾಹ್ನದ ಅವದಿಯಲ್ಲಿ ಇ ಅ೦ಚೆ ವಿಳಾಸವನ್ನು ಹೊಸದಾಗಿ ರಚಿಸು ವ ಕ್ರಮ, ಮೇಲ್ ಪರಿಶೀಲನೆ , ನಾವು ಬೇರೆಯವರಿಗೆ ಮೇಲ್ ಕಳು ಹಿಸು ವ ಬಗ್ಗೆ ಕಲಿಸಿದರು. ಪ್ರತಿ ಅವಧಿಯಲ್ಲಿ ನಾವೇ ಸ್ವ ತಃ ಮಾಡಿ ಕಲಿಯಲು ಸಾಕಷ್ಟು ಸಮಯಾವಕಾಶವನ್ನು ಒದಗಿಸಿದರು. ಕಲಿಕಾರ್ಥಿಗಳು ಹೊಸ ಕಲಿಕೆಯ ಹು ಮ್ಮಸ್ಸಿನಲ್ಲಿ ಆ ದಿನ ಕಳೆದರು.

2nd Day

2ನೇ ದಿನದಂದು ಸರಸ್ವತಿ ದೇವಿಯ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಡಯಟ್‍ನ ಹಿರಿಯ ಉಪನ್ಯಾಸಕರಾದ ಶ್ರೀ ರಾಧಾಕೃಷ್ಣರವರು ಈ ತರಬೇತಿಯ ಉದ್ದೇಶ ಹಾಗೂ ರಾಜ್ಯದ ಆಯ್ದ 10 ಜಿಲ್ಲೆಗಳಲ್ಲಿ ಈ ಸಾಲಿನಲ್ಲಿ ತರಬೇತಿ ಆರಂಭವಾದ ಬಗ್ಗೆ ತಿಳಿಸಿದರು. ಅದರೊಂದಿಗೆ ಅನೇಕ ಕಷ್ಟದ ವಿಚಾರಗಳನ್ನು ರಾಜ್ಯದ ಶಿಕ್ಷಕರೊಂದಿಗೆ ಹಂಚಿಕೊಂಡು ಪರಿಹಾರ ಕಂಡುಕೊಳ್ಳಲು ಹೇಗೆ ಹಾಯವಾಗಿಎಂದು ತಿಳಿಸಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಆರ್. ಸುಧಾಕರ್ ರವರು ಮೊದಲ ದಿನ ಕಲಿತ ಅಂಶಗಳಲ್ಲಿನ ಸಂದೇಹಗಳನ್ನು ಪರಿಹರಿಸಿ, ಇಂದಿನ ಪಾಠದೆಡೆ ಸಾಗಿದರು. ಅಂತರ್ಜಾಲದಲ್ಲಿ ಪನ್ಮೂಲಗಳನ್ನು ಹುಡುಕುವ ಬಗೆ ತಿಳಿಸಿ, ಟibಡಿe oಜಿಜಿiಛಿe ತಿಡಿiಣeಡಿ ಬಗ್ಗೆ ತಿಳಿಸಿ ಶಿಬಿರಾರ್ಥಿಗಳಿಗೆ 10ನೇ ವರ್ಗದ ಒಂದೊಂದು ಪಾಠ ಆಯ್ಕೆ ಮಾಡಿಕೊಂಡು ಇಕಿಪೀಡಿಯಾದಲ್ಲಿ ಅಗತ್ಯ ಮಾಹಿತಿ, ಚಿತ್ರಗಳು, ವಿಮರ್ಶೆ ಗಳನ್ನು ಸಂಗ್ರಹಿಸಿ, ಹೇಗೆ ಉಳೀಸುವುದು, ಬೇರಡೆ ಲಗತ್ತಿಸುವುದು, ಫೈಲ್ ಮಾಡಿ ಳಿಸುವುದನ್ನ ಕಲಿಸಿದರು. ಶಿಬಿರಾರ್ಥಿಗಳು ವಚನಸೌರಭ, ಧರ್ಮಸಮದೃಷ್ಟಿ, ಶಬರಿ, ಕೌರವೇಂದ್ರನ ಕೊಂದೆ ನೀನು ಪಾಠಗಳಿಗೆ ಮಾಹಿತಿ ಹುಡುಕಿ ಸಂಗ್ರಹಿಸುವ ಕೆಲಸದಲ್ಲಿ ಊಟದ ವಿರಾಮದವರೆಗೂ ತೊಡಗಿಸಿಕೊಂಡಿದ್ದರು. ಮಧ್ಯಾಹ್ನದ ಅವಧಿಯಲ್ಲಿ ವಿಂಡೊಸ್ ಮತ್ತು ಉಬಂಟುಗಳಿಗಿರುವ ವ್ಯತ್ಯಾಸ ತಿಳಿಸಿ, ಉಬಂಟು ಸಾಫ್ಟವೇರ್ ಉಚಿತವಾಗಿ ಹಾಕಿಸಿಕೊಳ್ಳಬಹುದಲ್ಲದೆ, ಯಾವುದೇ ವೈರಸ್ ಗಳ ತೊಂದರೆಯಿರುವುದಿಲ್ಲವೆಂದೂ ತಿಳಿಸಿದರು. ಉಬಂಟುನಲ್ಲಿ ಕನ್ನಡ-ಇಂಗ್ಲೀಷ ಪದರಚನೆ ಮಾಹಿತಿ ಇರುತ್ತದೆಂದು ಕಲಿತೆವು. ಲಿಬೆರೊ ಆಫೀಸ್ ರೈಟರ್ ನಲ್ಲಿ ಲೋಹಿತ್ ಕನ್ನಡ ಟೈಪ್ ಮಾಡುವದನ್ನುಕಲಿಯಲಾಯ್ತು.

4th Day

ಎಸ್.ಟಿ.ಎಫ್.ತರಬೇತಿಯ ಸ೦ಪನ್ಮೂ ಲ ವ್ಯಕ್ತಿಗಳಾದ ಸು ಧಾಕರ್ ರವರಿಗೆ ಹಾಗೂ ನನ್ನ ಎಲ್ಲಾ ವೃತ್ತಿ ಬಾ೦ಧವರಿಗೆ ಆತ್ಮೀಯ ನಮಸ್ಕಾರಗಳು ನಿನ್ನೆಯ ತರಬೇತಿಯು ಕೃಷ್ಣ ರವರು ಹಾಡಿದ ಪ್ರಾರ್ಥನೆಯೊ೦ದಿಗೆ ಪ್ರಾರ೦ಭವಾಯಿತು .ನ೦ತರ ಮೂ ರು ದಿನಗಳಲ್ಲಿ ನಡೆದ ತರಬೇತಿಯ ವಿವರವನ್ನು ಪುನರ್ ಮನನ ಮಾಡಿಕೊ೦ಡೆವು. ಮು೦ದು ವರೆಸಿ KOER ಅ೦ದರೆ ಕರ್ನಾಟಕ ಮು ಕ್ತ ಶೈ ಕ್ಷಣಿಕ ಸ೦ಪನ್ಮೂ ಲವನ್ನು internet ಮೂ ಲಕ ಹೇಗೆ ಹು ಡು ಕು ವು ದು ಹಾಗು ಅದಕ್ಕೆ ಅನು ಸರಿಸಬೇಕಾದ ಕ್ರಮಗಳನ್ನು ಸುಧಾಕರ್ ರವರು ಸ್ಪಷ್ಟ ಪಡಿಸಿದರು. ಆ ಮೂಲಕ ಎಲ್ಲಾ ಶಿಬಿರಾರ್ಥಿಗಳು ಶಿಕ್ಷಣ ಕಾರ್ಯಕ್ರಮಗಳ ಸವಿಸ್ತಾರ ಅಧ್ಯಯನವನ್ನು ನಡೆಸಿದರು . ಹಾಗು ಮಹೇಶ್ ರವರ ಬ್ಲಾಗ್ ನಲ್ಲಿ ದಶದೀವಿಗೆಯ ಜ್ಞಾನವನ್ನು ಪಡೆದುಕೊ೦ಡರು. ಊಟದ ಅವಧಿಯ ನ೦ತರ computer ನಲ್ಲಿ you tube ಬಳಸಿ ಬೇ೦ದ್ರೆಯವರ ಹಕ್ಕಿ ಹಾರು ತಿದೆ ನೋಡಿದಿರಾ ಕವನದ ಆಡಿಯೋ ಮತ್ತು ವೀಡಿಯೋ ಕೇಳಿ , ನೋಡಿದ ಮೇಲೆ ತ೦ತ್ರಜ್ಞಾನವನ್ನು ಭಾಷಾ ಕಲಿಕೆಯಲ್ಲಿ ಹೇಗೆ ಬಳಸಬಹು ದು ಎ೦ದು ತಿಳಿದು ಕೊಳ್ಳಲಾಯಿತು. ಹಾಗೆಯೇ ಬೇ೦ದ್ರೆಯವರ ಸಾಕ್ಷ್ಯ ಚತ್ರಗಳನ್ನು ನೋಡಿದೆವು . ಆನ೦ತರ pendrive ನಿ೦ದ systemಗೆ, system ನಿ೦ದ pendrive ಗೆ, ಹೇಗೆ copy ಮಾಡಬಹು ದು ಎ೦ಬು ದನ್ನು ತೋರಿಸಿ Freemind ಅನ್ನು ಹೇಗೆ ಮಾಡಬಹು ದೆ೦ದು ತಿಳಿಸಿದರು .. ಅ೦ತೆಯೇ ಎಲ್ಲಾ ಶಿಬಿರಾರ್ಥಿಗಳು ಪ್ರಾಯೋಗಿಕವಾಗಿ ಅಭ್ಯಾಸ ಮಾಡಿ ಸ೦ಜೆ 5 ಗ೦ಟೆಗೆ 4ನೇ ದಿನದ ತರಬೇತಿಯನ್ನು ಮು ಕ್ತಾಯಗೊಳಿಸಲಾಯಿತು . .

5th Day

ಎಸ್.ಟಿ.ಎಫ್.ತರಬೇತಿಯ ಸ೦ಪನ್ಮೂ ಲ ವ್ಯಕ್ತಿಗಳಾದ ಸು ಧಾಕರ್ ರವರಿಗೆ ಹಾಗೂ ನನ್ನ ಎಲ್ಲಾ ವೃತ್ತಿ ಬಾ೦ಧವರಿಗೆ ಆತ್ಮೀಯ ನಮಸ್ಕಾರಗಳು ಇ೦ದಿನ ತರಬೇತಿಯು ಪ್ರಾರ್ಥನೆಯೊ೦ದಿಗೆ ಪ್ರಾರ೦ಭವಾಯಿತು. ನ೦ತರ ನಾದಿನಗಳಲ್ಲಿ ನಡೆದ ತರಬೇತಿಯ ವಿವರವನ್ನು ಪುನರ್ ಮನನ ಮಾಡಿಕೊ೦ಡೆವು. ಮು೦ದು ವರೆಸಿ ಶಿಬಿರಾರ್ಥಿಗಳು ಹಿ೦ದೆ ಕಲಿತ ವಿಷಯಗಳಲ್ಲಿ ಇದ್ದ ಅನು ಮಾನಗಳನ್ನು ಪರಿಹರಿಸಿ ಕೊ೦ಡರು. Google tranlater ನಲ್ಲಿ ವಿಷಯಗಳನ್ನು ಭಾಷಾ೦ತರಿಸುವುದನ್ನು ಕಲಿತರು. ಊಟದ ಅವಧಿಯ ನ೦ತರ computer ನಲ್ಲಿgoogle map ಬಳಸು ವು ದನ್ನು ಹೇಳಿಕೊಟ್ಟರು. ಶಿಬಿರಾರ್ಥಿಗಳು ಪ್ರಾಯೋಗಿಕವಾಗಿ ಅಭ್ಯಾಸ ಮಾಡಿದರು. ಆನ೦ತರ ಹಿಮ್ಮಾಹಿತಿ ಹಾಳೆಯನ್ನು ತು ೦ಬಿ ವ೦ದನಾರ್ಪಣೆ ಕಾರ್ಯಕ್ರಮ ಮಾಡಿ 5ದಿನದ ತರಬೇತಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು