STF 2014-15 Chitradurga

From Karnataka Open Educational Resources

19 districts

Mathematics

Batch 1

Agenda

See us at the Workshop

15/12/2014 to 19/12/2014

Workshop short report

Batch 2

Agenda

See us at the Workshop

22/12/2014 to 26/12/2014

Workshop short report

Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Kannada

Batch 1

Agenda

If district has prepared new agenda then it can be shared here

See us at the Workshop

05/01/2015 to 09/01/2015

Workshop short report

1st Day. 05/01/2015

ದಿನಾಂಕ ೦೫-೦೧-೨೦೧೫ ರಂದು ಬೆಳಿಗ್ಗೆ ೯-೩೦ ಕ್ಕೆ ನಾವು ಚಿತ್ರದು ರ್ಗದ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯಕ್ಕೆ ಬಂದೆವು. ಈ ದಿನ ಬೆಳಗಿನ ಅವಧಿಯಲ್ಲಿ ನಮಗೆ ತರಬೇತಿ ಯ ನಿರ್ಧೇಶಕರಾದಂತಹ ಹಿರಿಯ ಉಪನ್ಯಾಸಕರಾದ ಶ್ರೀಯು ತ ವಿಜಯಕುಮಾರ್ ಅವರ ಸಮಕ್ಷಮದಲ್ಲಿ ನಾವುಗಳೆಲ್ಲರು ತಮ್ಮ ತಮ್ಮ ಹೆಸರನ್ನು ನೊಂದಾಯಿಸಿಕೊಂಡೆವು. ತದನಂತರ ಬೆಳಗಿನ ಅವಧಿಯಲ್ಲಿ ನಮಗೆ ತರಬೇತಿ ನೀಡಲು ಬಂದಂತಹ ಆರ್. ಪಿ. ಗಳ ಪರಿಚಯ ಹಾಗು ತಮ್ಮ ತಮ್ಮ ಪರಿಚಯ ಮಾಡಿಕೊಂಡೆವು. ತದನಂತರ ಉದ್ಗಾಟನಾ ಕಾರ್ಯಕ್ರಮ ನಡೆಯಿತು. ಶ್ರೀಯುತ ವಿಜಯಕುಮಾರ್ ಡಯಟ್ ಹಿರಿಯ ಉಪನ್ಯಾಸಕರು ಎಲ್ಲಾ ಕಂಪ್ಯೂಟರ್ ಗಳ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಟಿದ್ದರು ನಂತರ ಶಿಬಿರದ ನಿರ್ದೇಶಕರಾದ ವಿಜಯಕುಮಾರ್ ಅವರು ಎಸ್.ಟಿ.ಎಫ್. ತರಬೇತಿಯ ಉದ್ದೇಶ ಹಾಗು ಗು ರಿಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು ಆರ್.ಪಿ ಆಗಿ ಬಂದಂತಹ ಗಂಗಾಧರ್ ಇವರು ಎಸ್.ಟಿ.ಎಫ್. ನ ಗುರಿ ಹಾಗು ಉದ್ದೇಶಗಳ ಬಗ್ಗೆ ವಿವರವಾಗಿ ತಿಳೀಸಿದರು. ಬೆಳಗಿನ ೨ನೇ ಅವಧಿಯಲ್ಲಿ ೧೧-೨೦ ರ ತನಕ ನಮಗೆ ಕಂಪ್ಯೂ ಟರ್ ನಲ್ಲಿ ಒಬಂಟು ಸಾಪ್ಟ್ ವೇರ್ ಬಗ್ಗೆ ತಿಳಿಸಲಾಯಿತು. ಹಾಗು ಫೋಲ್ಡರ್ ರಚಿಸಿ ಅದನ್ನು ನಮ್ಮ ಹೆಸರಿನಲ್ಲಿ ರಚನೆ ಮಾಡಲು ತಿಳಿಸಲಾಯಿತು. ಲಿಬ್ರೇ ರೈಟರ್ ನಲ್ಲಿ ಫೈಲ್ ಒಂದನ್ನು ರಚಿಸಿ, ಅದನ್ನು ಸೇವ್ ಮಾಡುವ ಬಗ್ಗೆ ನಮ್ಮ ಫೋಲ್ಡರ್ನಲ್ಲಿ ಸೇವ್ ಮಾಡುವ ಬಗ್ಗೆ ತಿಳಿಸಿದರು.ವೆಬ್ ಸೈಟ್ ಫೋಲ್ಡರ್ ಬಗ್ಗೆ ತಿಳಿಸಿದರು. ಮೊಜಿಲ್ಲಾ ಫೈರ್ ಬಾಕ್ಷ್ ನಲ್ಲಿ ಗೂಗಲ್ ಸರ್ಚ್ ಇಂಜಿನ್ ಮೂ ಲಕ ಮಾಹಿತಿ ನೀಡಿದರು.. ಈಮೇಲ್ಐಡಿ ಕ್ರೀಯೇಟ್ ಮಾಡುವುದರ ಬಗ್ಗೆ ನಮ್ಮೆಲ್ಲರಿಗೂ ಮಾಹಿತಿ ನೀಡಿದರು. ಇಂದು ಹೊಸ ದಿನ ಪ್ರಾರಂಭವಾಗಿ ಮೊದ ಮೊದಲು ನಮ್ಮೆಲ್ಲರಿಗೂ ಭಯ ಎನಿಸುತ್ತಿತ್ತು. ನಂತರ ಮದ್ಯಾಹ್ನಾದ ಅವಧಿಯಲ್ಲಿ ಬೆಳಿಗ್ಗೆ ಕಲಿತ ವಿಷಯ ಪುನಾರವರ್ತನೆಯಾದಾಗ ಭಯ ದೂ ರವಾಗಿ ಕಲಿಯಬಹುದೆಂಬ ಧೈರ್ಯ ಬಂದಿತು. ಒಟ್ಟಿನಲ್ಲಿ ಈ ದಿನದ ತರಬೇತಿ ತೃಪ್ತಿಕರವಾಗಿತ್ತು.

2nd Day. 06/01/2015

3rd Day. 07/01/2015

ಕನ್ನಡ ಎಸ್.ಟಿ.ಎಫ್ ತರಬೇತಿಯ ಮೂನೆಯ ತರಬೇತಿಯು ಬೆಳಗ್ಗೆ ರವರ ಸುಮಧುರವಾದ ಪ್ರಾರ್ಥನೆ ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಈ ದಿನ ಮೊದಲಿಗೆ ಎಲ್ಲರನ್ನೂ ಹಾಡು ಮನರಂಜನೆ ನೀಡುವ ಮೂ ಲಕ ಪ್ರಾರಂಬಿಸಿ ನಂತರ ಹಿಂದಿನ ದಿನದಲ್ಲಿ ಕಲಿತ ವಿಷಯಗಳ ಬಗ್ಗೆ ಮನನ ಮಾಡಿಕೊಳ್ಳಲಾಯಿತು. ಈ ದಿನ ಎಲ್ಲ ಶಿಕ್ಷಕರು ಅತ್ಯಂತ ಸಂತೋಷದಿಂದ ಉತ್ಸಾಹದಿಂದ ಕಲಿಯಲು ಆಸಕ್ತಿ ತೋರಿಸಿದ್ದರು . ಇದು ನಿಜಕ್ಕು ನಮಗೆ ಬಹಳ ಸಂತಸದ ವಿಷಯವಾಯಿತು ನಂತರ ನಾವೆಲ್ಲರು ಕನ್ನಡ ಭಾಷಾ ವಿಷಯದಲ್ಲಿ ಈಶ್ವರಪ್ಪನವರು ಕೋಯರ್ ಬಗ್ಗೆ ತರಬೇತುದಾರರಿಗೆ ಪರಿಚಯ ಮಾಡಿಕೊಟ್ಟರು. ಮಿಂಚಂಚೆ ಖಾತೆಯಲ್ಲಿ ಪ್ರಾಯೋಗಿಕವಾಗಿ ತನ್ನ ಖಾತೆಗೆ ಮಿಂಚಂಚೆ ಕಳುಹಿಸುವಂತೆ ಹೇಳಿ ಅಗತ್ಯ ಮಾರ್ಗದರ್ಶನ ಒದಗಿಸಿದರು. ನಾವೆಲ್ಲರೂ ಮಿಂಚಂಚೆ ತೆರೆಯು ವುದು ಹೊಸ ಸಂದೇಶ ನೋಡು ವು ದು ಹಾಗೂ ನಾವು ನಮ್ಮ ಖಾತೆಯಿಂದ ನಮ್ಮ ಎಸ್.ಡಿ.ಎಪ್ ಗುಂಪಿಗೆ ಮಿಚಂಚೆ ಕಳುಹಿಸುವುದನ್ನು ಅತ್ಯಂತ ಉತ್ಸಾಹದಿಂದ ಕಲಿತೆವು. ಮಧ್ಯಾಹ್ನದ ಊಟ ಬಹಳ ಚೆನ್ನಾಗಿತ್ತು ನಂತರ ನಮಗೆ ಗೂ ಗಲ ಸರ್ಚ ಬಗ್ಗೆ ತಿಳಿಸಿದರು ಹಾಗೂ ಅಲ್ಲಿನ ಚಿತ್ರಗಳನ್ನು ಲಿಂಕ್ ಗಳನ್ನು ಬಳಸಿ ಲಿಂಕ್ ಸೇವ್ ಮಾಡುವುದನ್ನು ಹಾಗೂ ನಮಗೆ ನೀಡಿದ್ದ ಪಾಠಗಳಿಗೆ ಸಂಬಂಧಿಸಿದಂತೆ ಮಾಹಿತಿ ಚಿತ್ರ ಹಾಗೂ ವೆಬ್ ಲಿಂಕ್ ಗಳನ್ನು ಸರ್ಚ್ ಮಾಡಿ ಹುಡುಕಿದೆವು ನಂತರ ಟೀ ವಿರಾಮ,ವಿರಾಮದ ನಂತರ ಇಂದಿನ ದಿನದಲ್ಲಿ ಹೇಳಿಕೊಟ್ಟ ಎಲ್ಲ ಅಂಶಗಳನ್ನು ಚೆನ್ನಾಗಿ ಅಬ್ಯಾಸ ಮಾಡಿದೆವು ಇಮೇಲ್ ವೆಬ್ ಸರ್ಚ್ ಹಾಗೂ ಲಿಂಕ್ ಮಾಹಿತಿ ಚಿತ್ರಗಳನ್ನು ಸೇವ್ ಮಾಡುವುದನ್ನು ಕಲಿತೆವು ಈ ದಿನ ಉತ್ತಮವಾಗಿ ಕಲಿತೆವು ಬಹಳ ಚೆನ್ನಾಗಿತ್ತು ತರಬೇತಿ ಚೆನ್ನಾಗಿತ್ತು.

4th Day. 08/01/2015

ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ.

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು

ಕನ್ನಡವೇ ಸತ್ಯ ಕನ್ನಡವೇ ನಿತ್ಯ

ಕರುಣಾಳು ಬಾ ಬೆಳಕೆ ಮಬ್ಬಿದೀ ಕತ್ತಲೆಯಲಿ. . . . ಕೈ ಹಿಡಿದು ನಡೆಸೆನ್ನನು . . .

ಕವಿವಾಣಿಯೊಂದಿಗೆ ಪ್ರಾರಂಭವಾದ ಇಂದಿನ ನಮ್ಮ ಎಸ್.ಟಿ.ಎಫ್ ತರಬೇತಿಯಲ್ಲಿ ಶ್ರೀ ಸೋಮಶೇಖರ್‍ರವರ ಸುಶ್ರಾವ್ಯವಾದ ಸುಮಧುರ ಪ್ರಾರ್ಥನೆಗೀತೆಯೊಂದಿಗೆ ಪ್ರಾರಂಭವಾಯಿತು ಮೊದಲಿಗೆ ಮಂಜುನಾಥ್ ರವರು ಹಿಂದಿನ ದಿನ ನಾವೆಲ್ಲರೂ ಕಲಿತ ತರಬೇತಿಯ ಬಗ್ಗೆ ಮೆಲಕು ಹಾಕಿದರು. ಇಂದಿನ ಕಾರ್ಯ ಯೋಜನೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು. ಗಂಗಾಧರಪ್ಪನವರು ತಂತ್ರಜ್ಞಾನದ ಅಳವಡಿಕೆಯ ಮಹತ್ವವನ್ನು ತಿಳಿಸಿದರು. ನಾವೆಲ್ಲರೂ ನೆನ್ನೆ ಕಲಿತ ಅಂಶಗಳನ್ನು ಮತ್ತೋಮ್ಮೆ ನಮ್ಮ ಗಣಕ ಯಂತ್ರದ ಕಡತಗಳಲ್ಲಿ ಹುಡುಕತೊಡಗಿದೆವು. ಚಹಾ ವಿರಾಮದ ನಂತರ ಈಶ್ವರಪ್ಪನವರು ನಮಗೆ ನಮ್ಮ ಮಿಂಚಂಚೆ ಗಳಲ್ಲಿ ಗುಪ್ತಪದ ಬದಲಾಯಿಸುವುದು,ಭಾವಚಿತ್ರ ಸೇರಿಸುವುದು ಹಾಗೂ ವಿಳಾಸ ಹಾಕುವುದರ ಬಗ್ಗೆ ತಿಳಿಸಿದರು. ನಾವೆಲ್ಲರೂ ಅದನ್ನು ಅಭ್ಯಾಸ ಮಾಡಿದೆವು. ಗಂಗಾಧರಪ್ಪ, ಮಂಜುನಾಥ್ ಹಾಗೂ ಈಶ್ವರಪ್ಪನವರು ನಮ್ಮೆಲ್ಲರಿಗೂ ಕಲಿಕೆಯ ಒಪ್ಪು-ತಪ್ಪುಗಳನ್ನು ತಿದ್ದಿ ಮಕ್ಕಳಿಗೆ ಹೇಳುವಂತೆ ನಿಧಾನವಾಗಿ ಅಭ್ಯಾಸ ಮಾಡಿಸಿದರು ಗಂಗಾಧರಪ್ಪನವರು ನಂತರ ನಮ್ಮ ಶಾಲಾ ತರಗತಿ ಕೊಠಡಿಗಳಲ್ಲಿ ಈ ತಂತ್ರಜ್ಞಾನ ಬಳಸುವುದರ ಬಗ್ಗೆ ತಿಳಿಸಿದರು ನಂತರ ಊಟದ ಸಮಯ ಬಂದಿತು ಇಂದು ಮುದ್ದೆ ಸಾರು ಊಟ ತುಂಬಾ ರುಚಿಯಾಗಿತ್ತು ಕೆಲವರಿಗೆ ನಿದ್ದೆ ಬರುವ ಹಾಗಿತ್ತು ಆದರೆ ಆ ಸಮಯದಲ್ಲಿ ಮಂಜುನಾಥ ಅವರು ಹಾಡನ್ನು ಹೇಳಿ ನಮ್ಮನ್ನೆಲ್ಲ ಮತ್ತೆ ಕಲಿಕೆಯ ಕಡೆಗೆ ಗಮನ ಸೆಳೆದರು ಮದ್ಯಾನ್ಹದ ಅವಧಿಯಲ್ಲಿ ನಮಗೆ ನೀಡಿದ ಪಾಠಗಳಿಗೆ ಸಂಪನ್ಮೂಲ ಹುಡುಕಿ ಅದನ್ನು ಟಂಪ್ಲೆಟ್ಗೆ ಹೇಗೆ ಹಾಕಬೇಕು ಎಂಬುದರ ಬಗ್ಗೆ ಮಂಜುನಾಥ್ ರವರು ನಮ್ಮೆಲ್ಲರ ಮಿಂಚಂಚೆ ಒಂದು ಪಾಠದ ಪೂರ್ವ ಸಿದ್ದತೆಯ ಟೆಂಪ್ಲೆಟ್ ಅನ್ನು ಕಳಿಸಿ ಅದರಲ್ಲಿ ವಿಷಯಗಳನ್ನು ಹೇಗೆ ತುಂಬಬೇಕು ಎಂಬುದರ ಬಗ್ಗೆ ತಿಳಿಸಿದರು.ನಾವೆಲ್ಲರೂ ಅದರಂತೆ ನಮ್ಮ ನಮ್ಮ ಟೆಂಪ್ಲೆಟ್‍ಗಳನ್ನು ಮಿಂಚಂಚೆಯಲ್ಲಿ ನಕಲಿಸಿ ನಮ್ಮ ಕಡತಗಳಲ್ಲಿ ಅಂಟಿಸಿ ಅಂತರ್ಜಾದಿಂದ ಅದರಲ್ಲಿ ಸಂಪನ್ಮೂಲವನ್ನು ಸೇರಿಸುತ್ತಾ ಹೋದೆವು. ಮೂವರೂ ನಮಗೆ ಕಲಿಕೆಗೆ ಸಹಾಯ ಮಾಡಿದರು. ಟೀ ವಿರಾಮ ನಂತರ ಈಶ್ವರಪ್ಪನವರು ನಮ್ಮ ಮೊಬೈಲ್ಗಳನ್ನು ಬಳಸಿ ಹೇಗೆ ಧ್ವನಿ ಮುದ್ರಕ ಮಾಡಿ ಮಕ್ಕಳಿಗೆ ಕೇಳಿಸಬಹುದು ಎಂಬುದನ್ನು ನಮ್ಮ ಶಿಕ್ಷಕರು ಹಾಡಿದ ಹಾಡಿನ ತುಣುಕನ್ನು ಕೇಳಿಸಿದರು ನಮ್ಮಲ್ಲಿರುವ ಮೊಬೈಲ್ ಗಳಿಂದ ವಾಟ್ಸಾಪ್ ಬಳಸಿ ಬೇರೆಯವರಿಗೆ ಭಾವಚಿತ್ರ ,ಧ್ವನಿ, ಹಾಡು, ವಿಡಿಯೋಗಳನ್ನು ಬೇರೆಯವರಿಗೆ ಹೇಗೆ ಕಳಿಸುವುದು ಎಂಬುದನ್ನು ತೋರಿಸಿದರು. ಜೊತೆಗೆ ಸ್ಕೈಪ್ ಆಪ್ ಬಳಸಿ ಗಣಕಯಂತ್ರ ಹಾಗೂ ಮೋಬೈಲ್ ಗಳಲ್ಲಿ ವೀಡಿಯೋ ಸಂಭಾಷಣೆ ಮಾಡಬಹುದೆಂಬುದನ್ನು ತೋರಿಸಿದರು.ಇಂದಿನ ದಿನದ ತರಬೇತಿ ಸೊಗಸಾಗಿತ್ತು ಅರ್ಥಪೂರ್ಣವಾಗಿತ್ತು ನಾವು ಕಲಿಕೆಯಲ್ಲಿ ತೊಡಗಿದ್ದರಿಂದ ವೇಳೆ ಕಳೆದದ್ದೇ ಗೊತ್ತಾಗಲಿಲ್ಲ ಸಮಯ ಕಾಲ ಎಷ್ಟು ಬೇಗ ಹೋಯಿತಲ್ಲಾ ಎನಿಸಿತು. ಹಕ್ಕಿ ಹಾರುತಿದೆ ನೋಡಿದಿರಾ? ..ಗಾವುದ ಗಾವುದ ಗಾವುದ ಮುಂದೆ ಎವೆತೆರೆದಿಕ್ಕುವ ಹೊತ್ತಿನ ಒಳಗೆ ಹಕ್ಕಿ ಹಾರುತಿದೆ ನೋಡಿದಿರಾ? ಎನ್ನುವ ಗೀತೆಯ ಸಂದೇಶದಂತೆ ಸಮಯ ಕಳೆದಿದ್ದೇ ತಿಳಿಯದೇ ಇಂದಿನ ತರಬೇತಿ ಅಂತ್ಯಗೊಂಡಿತು

ಕನ್ನಡವೇ ಉಸಿರಾಗಿ ಕನ್ನಡವೇ ಹೆಸಾರಾಗಿ

ಕನ್ನಡವೇ ಸಾಗರದಾಚೆ ಸಾಗಿ ಸಾಗಿ

ಕನ್ನಡವೇ ಜಗದಗಲ ಬೆಳಕಾಗಿ

ಕನ್ನಡದ ಕಸ್ತೂರಿಯ ಕಂಪನು

ಕರುನಾಡ ಕೋಗಿಲೆ ಇಂಪನು

ಕಡಲಾಚೆ ಅಂತರ್ಜಾಲದಲಿ ಪಸರಿಸಲು ..

ಕನ್ನಡಿಗನ ಕೆಚ್ಚೆದೆಯ ಛಲವೊಂದೇ ಸಾಕಲ್ಲವೇ

5th Day. 09/01/2015

ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಡಕ ಹೃದಯ ಶಿವ.. ಕಾಣದ ಕಡಲಿಗೇ ಹಂಬಲಿಸಿದೇ ಮನ....

ಕಲಿಯೋಣ ಬನ್ನಿ ಹೋಸದೊಂದು ವಿಚಾರವನು ಭವ್ಯ ಭಾರತದ ನವ ಚೇತನಗಳ ನಿರ್ಮಿಸಲು ಬನ್ನಿ ಗುರುವಲ್ಲವೇ ಹೊಸಬಾಳ ರೂಪಿಸುವ ಶಿಲ್ಪಿ ಎಲ್ಲರೂ ಒಂದಾಗಿ ಕಲಿಯುತ ಕಲಿಸುವ ಬನ್ನಿ….. ದೀಪದಿಂದ ದೀಪವ ಹಚ್ಚೋಣ ಬನ್ನಿ ಕನ್ನಡದ ಬೆಳಕಿಂದ ಹೊಸ ನಾಡ ಕಟ್ಟೋಣ ಬನ್ನಿ..

ಇಂದಿನ ನಮ್ಮ ಎಸ್.ಟಿ.ಎಫ್ ತರಬೇತಿಯಲ್ಲಿ ಪೂರ್ಣಿಮಾ ರವರ ಸುಶ್ರಾವ್ಯವಾದ ಸುಮಧುರ ಪ್ರಾರ್ಥನೆಗೀತೆಯೊಂದಿಗೆ ಪ್ರಾರಂಭವಾಯಿತು ಮೊದಲಿಗೆ ಸಂಪನ್ಮೂಲ ವ್ಯಕ್ತಿಗಳಾದ ಗಂಗಾಧರಪ್ಪ ರವರು ಹಿಂದಿನ ದಿನ ನಾವೆಲ್ಲರೂ ಕಲಿತ ತರಬೇತಿಯ ಬಗ್ಗೆ ಮೆಲಕು ಹಾಕಿದರು. ಜೊತೆಗೆ ಶಿಕ್ಷಕರೂ ಸಹ ತಾವುಗಳು ಹಿಂದಿನ ದಿನ ಕಲಿತ ವಿಷಯ ಗಳನ್ನು ಮನನ ಮಾಡಿಕೊಂಡರು. ಮೊದಲನೇ ಅವಧಿಯಲ್ಲಿ ನಾವೆಲ್ಲರೂ ಇಂದಿನ ಹೊಸ ಕಲಿಕೆಗೆ ಉತ್ಸುಕರಾಗಿ ಕಾದು ಕುಳಿತಿದ್ದೆವು. ಇಂದು ಈಶ್ವರಪ್ಪನವರು ಮೊದಲಿಗೆ ನಮಗೆ ನಾವು ತಯಾರಿಸಿದ್ದ ಟೆಂಪ್ಲೆಟ್ಸ್ ನಲ್ಲಿ ನೆನ್ನೆ ದಿನ ಲಿಂಕ್ ಕೊಡುವುದನ್ನು ಹೇಳಿಕೊಟ್ಟಿದ್ದರು. ಅದನ್ನು ಪುನಃ ಹೇಳಿ ನಂತರ ಇಂದು ಅಡಿಬರಹಕ್ಕೆ ಲಿಂಕನ್ನು ಹೇಗೆ ಸೇರಿಸುವುದು ಎಂಬುದನ್ನು ಹೈಪರ್ ಲಿಂಕ್ ನಲ್ಲಿ ತಿಳಿಸಿದರು. ಗಂಗಾಧರಪ್ಪನವರು ಶಾರ್ಟಕಟ್ ಕೀಗಳನ್ನು ಪರಿಚಯ ಮಾಡಿಕೊಟ್ಟರು ಹಾಗೂ ಕೆ.ಬಿ. ಎಮ್.ಬಿ, ಜಿ.ಬಿ, ಟಿ.ಬಿ ಬಗ್ಗೆ ತಿಳಿಸಿದರು ಇದು ನಮಗೆ ತುಂಬಾ ಉಪಯುಕ್ತವಾಯಿತು ನಾವೆಲ್ಲರೂ ಅದನ್ನು ಅಭ್ಯಾಸ ಮಾಡಿದೆವು. ಗಂಗಾಧರಪ್ಪ, ಮಂಜುನಾಥ್ ಹಾಗೂ ಈಶ್ವರಪ್ಪನವರು ನಮ್ಮೆಲ್ಲರಿಗೂ ಅಭ್ಯಾಸ ಮಾಡಿಸಿದರು ಈಶ್ವರಪ್ಪನವರು ಪೋಟೋ ಮಂಜುನಾಥ್ ರವರು ನಮಗೆ ಗೂಗಲ್ ನ ಪ್ಯೂಚರ್ ಬಗ್ಗೆ ಒಂದೊಂದಾಗಿ ತಿಳಿಸಿದರು ಗೂಗಲ್+, ಗೂಗಲ್ ಮ್ಯಾಪ್, ಜಿಮೇಲ್, ಗೂಗಲ್‍ಸರ್ಚ, ಗೂಗಲ್‍ಪ್ಲೇ, ಪಿಕಾಸಾದಲ್ಲಿ ಪೋಟೋ ಅಪ್ ಲೋಡ್ ಮಾಡುವುದು ,ಯುಟೂಬ್‍ನಲ್ಲಿ ವೀಡಿಯೋ ನೋಡುವುದನ್ನು ಕಲಿಸಿದರು.ಹಾಗೆಯೇ ವೀಡಿಯೋಗಳನ್ನು ಅಪ್ ಲೋಡ್ ಮಾಡುವುದನ್ನು ಕಲಿಸಿದರು ನಾವೆಲ್ಲರೂ ಅಭ್ಯಾಸ ಮಾಡಿದೆವು ನಂತರ ನಮಗೆ ನೀಡಿದ್ದ ಪಾಠಗಳಿಗೆ ಗುಂಪಿನಲ್ಲಿ ಪಾಠದ ಸಿದ್ದತೆ ನಡೆಸಿದೆವು ಕಡೆಯಲ್ಲಿ ಸಿದ್ದಗೊಂಡ ಪಾಠಗಳನ್ನು ನಮ್ಮ ಎಸ್.ಟಿ.ಎಪ್ ಗುಂಪಿಗೆ ಹೇಗೆ ಸೇರಿಸಬೇಕು ಎಂಬುದನ್ನು ಈಶ್ವರಪ್ಪನವರು ತಿಳಿಸಿದರು ಅದರಂತೆ ನಾವೆಲ್ಲರೂ ಪಾಠಗಳನ್ನು ಮಿಂಚಂಚೆಯಲ್ಲಿ ಕಳಿಸಿದೆವು. ನಂತರ ನಮ್ಮ ಐದು ದಿನ ತರಬೇತಿಯಲ್ಲಿ ಕಲಿತ ವಿಷಯಗಳ ಹಿಮ್ಮಾಹಿತಿ ಯನ್ನು ದಾಖಲಿಸಿ ಅದನ್ನೂ ಸಹ ಕಳಿಸಿದೆವು. ಆಮೇಲೆ ಎಲ್ಲರಿಗೂ ಸಮಯ ಹೋಗಿದ್ದೇ ತಿಳಿಯಲಿಲ್ಲ ಸಂಜೆ ಸಮಾರೋಪ ಬೀಳ್ಕೊಡುಗೆ ಸಮಾರಂಭ ಪ್ರಾರಂಭಗೊಂಡಿತು ಸೋಮಶೇಖರ್ ರವರು ಮಧುರವಾಗಿ ವಚನವನ್ನು ಹಾಡಿದರು ಮಂಜುಳಾರವರು ಎಸ್.ಟಿ.ಎಪ್ ತರಬೇತಿ ಕುರಿತು ಕವನ ರಚಿಸಿ ಹಾಡಿದರು. ಅದರಂತೆ ಸೋಮಶೇಖರ್ ಸಹಾ ಕವನ ವಾಚಿಸಿದರು. ಜೊತೆಗೆ ತರಬೇತಿ ತೃಪ್ತಿಕರವಾಗಿತ್ತು.ಎಂದು ತಿಳಿಸಿದರು. ಸವಿತಾರವರು ತರಬೇತಿಯಲ್ಲಿ ಮೋದಲನೇ ದಿನ ಭಯ ಎನ್ನಿಸುತ್ತಿತ್ತು ಆದರೆ ಐದನೇ ದಿನ ಇನ್ನೂ ಕಲಿಯಬೇಕು ಎಂಬ ಉತ್ಸಾಹ ಹೆಚ್ಚುತ್ತಿರುವಾಗಲೇ ಈ ತರಬೇತಿ ಮುಗಿದಿದ್ದು ಬೇಸರವಾಯಿತು ಇನ್ನೂ ಸ್ವಲ್ಪದಿನ ಈ ತರಬೇತಿ ಬೇಕಾಗಿತ್ತು ಎಂಬ ಅನಿಸಿಕೆ ವ್ಯಕ್ತ ಪಡಿಸಿದರು.ನಮ್ಮ ಸಂಪನ್ಮೂಲ ವ್ಯಕ್ತಿಗಳಾದ ಈಶ್ವರಪ್ಪನವರು ಮುಂದಿನ ದಿನಗಳಲ್ಲಿ ನಾವೆಲ್ಲರೂ ನಿರ್ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು ನಮ್ಮ ನೋಡಲ್ ಅಧಿಕಾರಿಗಳಾಗಿದ್ದಂತಹ ವಿಜಯಕುಮಾರ್ ರವರು ಶಿಕ್ಷಕರನ್ನು ಉದ್ದೇಶಿಸಿ ನಿಮ್ಮ ಶಾಲಾ ತರಗತಿಗಳಲ್ಲಿ ಹೇಗೆ ಈ ಸಂಪನ್ಮೂಲ ಬಳಸಬೇಕು ಹಾಗೆಯೇ ಕೋಯರ್ ಗೆ ಮುಂದಿನ ದಿನಗಳಲ್ಲಿ ನಾವು ಹೇಗೆ ಸಂಪನ್ಮೂಲ ಕ್ರೂಢೀಕರಿಸಬೇಕು ಎಂಬುದರ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಮಂಜುನಾಥ್ ನಡೆಸಿದರು ಎಲ್ಲರನ್ನೂ ಗಂಗಾಧರಪ್ಪನವರು ಸ್ವಾಗತಿಸಿದರು. ಈಶ್ವರಪ್ಪನವರು ವಂದಿಸಿದರು. ಕಾರ್ಯಕ್ರಮ ಚೆನ್ನಾಗಿ ಮುಕ್ತಾಯಗೊಂಡಿತು ಎಲ್ಲರೂ ಹೊಸದೊಂದು ವಿಷಯ ಕಲಿತ ಹುಮ್ಮಸ್ಸಿನಿಂದಲೇ ಪರಸ್ಪರರಿಗೆ ಶುಭಾಷಯ ತಿಳಿಸಿ ಬೀಳ್ಕೊಂಡೆವು.

Batch 2

Agenda

If district has prepared new agenda then it can be shared here

See us at the Workshop

 

Workshop short report

1st Day.

ಕಂಪ್ಯೂಟರ್ ಆಧು ನಿಕ ವಿಜ್ಞಾನದ ಅಪೂ ರ್ವ ಕೊಡುಗೆ. ಇಂತಹ ತಂತ್ರಜ್ಞಾನ ಶೈಕ್ಷಣಿಕ ಕ್ಷೇತ್ರದಲ್ಲಿ ಉಪಯುಕ್ತ ಕಣಜವಾಗಿದೆ. ತರಬೇತಿ ಮೊದಲದಿನದಲ್ಲಿ ಕಂಪ್ಯೂಟರ್ ತರಬೇತಿ ಪಡೆಯಲಿಚ್ಛಿಸುತ್ತೇನೆ. ಚಿತ್ರದುರ್ಗದ ಸಿ.ಟಿ.ಇ ಇಲ್ಲಿ ತರಬೇತಿ ಆರಂಭವಾಯಿತು. ನೋಂದಣಿ ಮತ್ತು ಶಿಕ್ಷಕರ ಪರಿಚಯದ ನಂತರ ತರಬೇತಿ ನೋಡಲ್ ಅಧಿಕಾರಿಗಳಾದ ಶ್ರೀ ವಿಜಯಕುಮಾರ್ ಸರ್ ಇವರು ತರಬೇತಿಯ ಉದ್ದೇಶ , ಎಸ್.ಟಿ.ಎಫ್ ನ ಗುರಿ ಮತ್ತು ಉದ್ದೇಶಗಳನ್ನು ಕುರಿತು ಶಿಬಿರಾರ್ಥಿಗಳಿಗೆ ಮಾಹಿತಿ ನೀಡುವ ಮೂಲಕ ತರಬೇತಿಗೆ ಚಾಲನೆ ನೀಡಿದರು. ಸಂ.ವ್ಯಕ್ತಿ ಈಶ್ವರಪ್ಪನವರು ಲಿಬ್ರೆ ಆಫೀಸ್ ಇದನ್ನು ಫೋಲ್ಡರ್ ಇಲ್ಲಿ ಹೇಗೆ ಸೇವೆ ಉಳಿಸಿ ಟೈಪ್ ಮಾಡಬಹುದೆಂದು ತಿಳಿಸಿದರು. ತರಬೇತಿಯ ಆರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮಂಜುನಾಥ್ ಇವರು ಕನ್ನಡ ವಿಷಯ ಶಿಕ್ಷಕರ ವೇದಿಕೆಯ ಗುರಿ ಮತ್ತು ಉದ್ದೇಶಗಳನ್ನು ವಿವರವಾಗಿ ತಿಳಿಸಿದರು. ಕನ್ನಡ ಭಾಷಾ ವಿಷಯದಲ್ಲಿ ಕಂಪ್ಯೂಟರ್ ಬಳಕೆಯ ಅಗತ್ಯ ಮತ್ತು ಇಂದಿನ ಸವಾಲುಗಳ ಬಗ್ಗೆ ತಿಳಿಸಿದರು. ಉಬುಂಟು ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಸಿದರು. ಕಂಪ್ಯೂಟರ್ ಇದರ ಸಾಮಾನ್ಯ ಬಳಕೆಯ ಬಗ್ಗೆ ಅದನ್ನು ಉಪಯೋಗಿಸುವ ಬಗ್ಗೆ ವಿವರಿಸಿದರು. ತರಬೇತಿಯ ನಂತರದ ಅವಧಿಯಲ್ಲಿ ಸಂ.ವ್ಯ.ಶ್ರೀ ಪ್ರದೀಪ್ ಇವರು ಕಂಪ್ಯೂಟರ್ ಎಂದರೇನು? ಅದರ ವಿವಿಧ ಹಾರ್ಡ್ವೇರ್ ಮತ್ತು ಸಾಪ್ಟ್ವೇರ್ ಗಳ ಪರಿಚಯ ಮಾಡಿಕೊಟ್ಟರು. ಕಂಪ್ಯೂಟರ್ ಭಾಷೆಯಲ್ಲಿ ಟೈಪ್ ಮಾಡುವ ಕ್ರಮ ತಿಳಿಸಿ ದರು ನಂತರ ಕನ್ನಡ ಮತ್ತು ಇಂಗ್ಲೀಷ್ ಅಕ್ಷರಗಳ ಬಳಕೆ ಬಗ್ಗೆ ಪ್ರಾಯೋಗಿಕವಾಗಿ ಟೈಪ್ ಮಾಡಲು ಪ್ರಾರಂಭಿಸಿದೆವು. ನಮಗೆ ಸಂ.ವ್ಯಕ್ತಿಗಳು ಕಲಿಕೆಯಲ್ಲಿ ಸಹಕರಿಸಿದರು. ಊಟದ ನಂತರ ಕಲಿಕೆಯನ್ನು ಮುಂದುವರೆಸಿದೆವು. ನಂತರ ಪ್ರದೀಪ್ ಗೂಗಲ್ ಸರ್ಚ್ ಬಗ್ಗೆ ತಿಳಿಸಿದರು. ಗೂಗಲ್ ಇಲ್ಲಿ ಅಂತರ್ಜಾಲದಲ್ಲಿ ಗೂಗಲ್ ಸರ್ಚ್ ಮಾಡುವ ಕ್ರಮವನ್ನು ಕಲಿತೆವು. ಒಟ್ಟಾರೆ ಮೊದಲ ದಿನದ ತರಬೇತಿ ಒಳ್ಳೆಯ ಅನುಭವ ಆಗಿದೆ.

2nd Day.

ತರಬೇತಿಯು ೨೦-೦೧-೨೦೧೫ ರಿಂದ ೨೪-೦೧-೨೦೧೫ ರವರೆಗೆ ನಡೆಯು ತ್ತಿದ್ದು ನಮಗೆ ಎರಡನೇ ದಿನದ ವರದಿಯ ಜವಾಬ್ದಾರಿ ನಮಗೆ ನೀಡಿರು ತ್ತಾರೆ ಇಂದು ಬೆಳಗ್ಗೆ ರು ಚಿ ರು ಚಿಯಾದ ಪೂ ರಿಸಾಗು ತಿಂದೆವು. ಬೆಳಗ್ಗೆ ೯.೩೦ ಕ್ಕೆ ತರಬೇತಿಯು ಪ್ರಾರಂಭವಾಯಿತು ಮೊದಲಿಗೆ ನೋಡಲ್ ಆಫೀಸರ್ ಆದ ಡಯಟ್ ನ ಹಿರಿಯ ಉಪನ್ಯಾಸಕರಾದ ವಿಜಯ್ ಕು ಮಾರ್ ಸರ್ ರವರು ಉತ್ತಮವಾಗಿ ಆಯೋಜಿಸಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಈಶ್ವರಪ್ಪ, ಮಂಜು ನಾಥ್, ಪ್ರದೀಪ್ ಸರ್ ರವರು ಇದ್ದರು. ಇಂದು ದಿನದ ಮೊದಲನೇ ಅವಧಿಯಲ್ಲಿ ಮಂಜು ನಾಥ್ ರವರು ಶಿಕ್ಷಕರನ್ನು ೭ ತಂಡಗಳಾಗಿ ಮಾಡಿ ೯ ನೇ ತರಗತಿಯ ಪಾಠಗಳನ್ನು ಹಂಚಿಕೆ ಮಾಡಿದರು. ಜೊತೆಗೆ ಒಂದು ಪಾಠ ಹಾಗೂ ಒಂದು ಪದ್ಯ ನೀಡಿ ಮಾದರಿ ಪಾಠ ತಯಾರಿಸಿ ಕೊಡಲು ಸೂಚನೆ ನೀಡಿದರು. ನಮಗೆ ನೀಡಿದ ಪಾಠಗಳಿಗೆ ಸಂಬಂಧಿಸಿದಂತೆ ಅಂತರ್ಜಾಲದಲ್ಲಿ ಹೇಗೆ ಮಾಹಿತಿ ಕಲೆಹಾಕಬೇಕೆಂಬು ದನ್ನು ಅಲ್ಲಿನ ಪೋಟೋಗಳನ್ನು,ವೀಡಿಯೋಗಳನ್ನು, ಹಾಗೂ ಟೆಸ್ಟ್ ಡಾಕು ಮೆಂಟ್ ಹೇಗೆ ಕಾಪಿ ಮಾಡಬೇಕು ಹೇಗೆ ನಮ್ಮ ಫೂ ಲ್ಡರ್ ಗೆ ಸೇವ್ ಮಾಡಬೇಕು ಎಂಬು ದನ್ನು ಪ್ರದೀಪ್ ಸರ್ ರವರು ನಮಗೆ ಚನ್ನಾಗಿ ತಿಳಿಸಿ ಕೊಟ್ಟರು . ನಂತರ ನಮಗೆ ಮಂಜು ನಾಥ್ ಹಾಗೂ ಈಶ್ವರಪ್ಪನವರು ನಮಗೆ ಕಲಿಯಲು ಸಹಾಯ ಮಾಡಿದರು. ಮಧ್ಯಾನ್ಹದ ಅವದಿಯಲ್ಲಿ ನಮ್ಮೆಲ್ಲರಿಗೂ ಇ-ಮೇಲ್ ಕ್ರಿಯೇಟ್ ಮಾಡು ವುದನ್ನು ಕಲಿಸಿಕೊಟ್ಟರು. ಜೊತೆಗೆ ಇ-ಮೆಲ್ ನಲ್ಲಿ ಹೇಗೆ ಸಂದೇಶ ನೋಡಬೇಕು ಹಾಗೂ ಮತ್ತೋ ಬ್ಬರಿಗೆ ಸಂದೇಶ ಕಳು ಹಿಸಬೇಕು ಎಂಬು ದನ್ನು ಕಲಿಸಿದರು . ನಾವೆಲ್ಲರೂ ಆಸಕ್ತಿಯಿಂದ ಕಲಿತೆವು ಉಳಿದ ಸಂಪನ್ಮೂಲ ವ್ಯಕ್ತಿಗಳಾದ ಮಂಜು ನಾಥ್ ಹಾಗೂ ಪ್ರದೀಪ್ ರವರು ನಮಗೆ ಸಹಾಯ ಮಾಡಿದರು ಇಂದಿನ ತರಬೇತಿ ಉತ್ತಮವಾಗಿತ್ತು. ದನ್ಯವಾದಗಳು

4th Day

ದಿನಾಂಕ:23/01/2015ರ ತರಬೇತಿ ವರದಿಯನ್ನು ಮಂಡಿಸುವ ಜವಾಬ್ದಾರಿಯನ್ನು ನಾವು ವಹಿಸಿಕೊಂಡು ರಚಿಸಿ ಮಂಡಿಸುತ್ತಿದ್ದೇವೆ. ಬೆಳಗ್ಗೆ ಶ್ರೀ ಮಂಜುನಾಥ್, ಲಿಂಗಯ್ಯ ಇವರ ಸುಶ್ರಾವ್ಯ ಗೀತೆಗಳೊಂದಿಗೆ ತರಬೇತಿಗೆ ಚಾಲನೆ ದೊರೆಯಿತು. ಆರಂಭದಲ್ಲಿ ನಾವು ಮಿಂಚಂಚೆಗಳನ್ನು ನೋಡಿದೆವು. ಮೂರು ದಿನಗಳ ಕಾಲ ಕಲಿತ ವಿಷಯಗಳನ್ನು ಚರ್ಚಿಸಿದೆವು. ಕೋಯರ್ ಇದರಲ್ಲಿ ವಿವಿಧ ಪುಟಗಳನ್ನು ಅಂತರ್ಜಾಲದಲ್ಲಿ ವೀಕ್ಷಿಸಿದೆವು. ಸಂ.ವ್ಯಕ್ತಿಗಳು ವಿವರವಾದ ಕೋಯರ್ ಇದರ ಪರಿಚಯ ಮಾಡಿಸಿಕೊಟ್ಟರು. ಗೂಗಲ್ ಸರ್ಚ್ ಇಲ್ಲಿ ಚಿತ್ರ ಮತ್ತು ಲಿಂಕ್ ಗಳನ್ನು ಹೇಗೆ ಕಾಪಿ ಮಾಡಿ ಲಿಬ್ರೆ ಆಫೀಸ್ ಪುಟಕ್ಕೆ ಪೇಸ್ಟ್ ಮಾಡುವುದೆಂಬುಯದನ್ನು ಕಲಿತ ನಾವು ಆ ಕಾರ್ಯವನ್ನು ಮಾಡತೊಡಗಿದೆವು. ಸಂಪನ್ಮೂಲ ವ್ಯಕ್ತಿ ಪ್ರದೀಪ್ ಇವರು ಪೆನ್ ಡ್ರೈವ್ ಗೆ ಹೇಗೆ ವಿವಿಧ ದಾಖಲೆ, ವೀಡಿಯೋ ಹಾಗೂ ಚಿತ್ರಗಳನ್ನು ಕಾಪಿ ಮಾಡುವುದು ಎಂಬುದನ್ನು ತಿಳಿಸಿದರು. ನಮ್ಮ ಕಲಿಕೆಗೆ ಪೂರಕ ದಾಖಲೆಗಳನ್ನು ಕಾಪಿ ಮಾಡಿಕೊಂಡೆವು. ಸಂಪನ್ಮೂಲ ವ್ಯಕ್ತಿ ಈಶ್ವರಪ್ಪ ಇವರು ಮೈಂಡ್ ಮ್ಯಾಪ್ ತಯಾರಿಕೆಯ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು. ನಾವು ಅದರಂತೆ ಅಭ್ಯಾಸ ಮಾಡಿದೆವು. ಮಧ್ಯಾಹ್ನದ ಅವದಿಯಲ್ಲಿ ಲಿಬ್ರೆ ಆಫೀಸ್ ಕ್ಯಾಲ್ಕ್ ಇದರ ಬಳಕೆಯ ಬಗ್ಗೆ ಸಂಪನ್ಮೂಲ ವ್ಯಕ್ತಿ ಮಂಜುನಾಥ್ ಇವರು ತಿಳಿಸಿಕೊಟ್ಟರು.. ಫಲಿತಾಂಶಗಳನ್ನು ಹೇಗೆ ದಾಖಲೆ ಮಾಡಬೇಕೆಂದು ತಿಳಿಸಿದರು .ಅಭ್ಯಾಸ ಮಾಡಿದೆವು. ಕೊನೆಯ ಅವದಿಯಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀ ವಿಜಯಕುಮಾರ್ ಸರ್ ಇವರು ಕಲಿಕೆಯಲ್ಲಿ ತಂತ್ರಜ್ಞಾನದ ಬಳಕೆ ಕುರಿತು ತಿಳಿಸಿದರು. ಈ ಅವದಿಯಲ್ಲಿ ಟೆಂಪ್ಲೆಟ್ ಹೇದೆ ತಯಾರಿಸುವುದೆಂದು ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು. ಒಟ್ಟಾರೆಯಾಗಿ ಈ ತರಬೇತಿ ತುಂಬಾ ಯಶಸ್ವಿಯಾಗಿ ಈ ದಿನ ನಡೆಯಿತು.

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4