STF 2014-15 KALBURGI

From Karnataka Open Educational Resources
Jump to navigation Jump to search
The printable version is no longer supported and may have rendering errors. Please update your browser bookmarks and please use the default browser print function instead.

Head Teachers

Batch 1

Agenda

If district has prepared new agenda then it can be shared here

See us at the Workshop

05/01/2015 to 09/01/2015

Workshop short report

1st Day. 16/12/2014

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಕಮಲಾಪೂರ ಜಿಲ್ಲೆ: ಕಲಬುರಗಿಯಲ್ಲಿ, ಜಿಲ್ಲೆಯ ಪ್ರತಿ ತಾಲೂಕಿನ ಐದು ಜನ ಪ್ರೌಢ ಶಾಲಾ ಮುಖ್ಯ ಶಿಕ್ಷಕರಿಗೆ ಗಣಕ ಶಿಕ್ಷಣ ಆಧಾರಿತ ಮುಖ್ಯ ಶಿಕ್ಷಕರ ವೇದಿಕೆಗೆ ಸಂಬಂಧಿಸಿದಂತೆ ನಾಯಕತ್ವ, ಎಲ್ಲಾ ವಿಷಯಗಳ ಜ್ಞಾನಾಭಿವೃದ್ಧಿಗೆ ಪೂರಕವಾಗಲು ತಂತ್ರಜ್ಞಾನ ಬಳಕೆ ಮಾಡುವುದು, ಮುಖ್ಯ ಶಿಕ್ಷಕರ ವೇದಿಕೆಯ ಮೂಲಕ ಹಲವಾರು ಆಢಳಿತಾತ್ಮಕ, ಶೈಕ್ಷಣಿಕ, ಶಿಕ್ಷಣದ ಗುಣವರ್ಧನೆಗೆ ಬೇಕಾಗುವ ಮಾರ್ಗದರ್ಶನ, ಸಲಹೆ-ಸೂಚನೆಗಳು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಾಹಿತಿ ತಂತ್ರಜ್ಞಾನ ಬಳಕೆ ಮಾಡುವುದನ್ನು ಕಲಿಸುವ ಸಂಬಂಧ ತರಬೇತಿಯನ್ನು ಹಮ್ಮಿಕೊಳ್ಳಲಾಗಿರುತ್ತದೆ. ದಿನಾಂಕ 16ನೇ ಡಿಸೆಂಬರ್ 2014ರಂದು ಸದರಿ ತರಬೇತಿಯು ಡಯಟ್ ಕಮಲಾಪೂರನ ಕಂಪ್ಯೂಟರ್ ಕೋಣೆಯಲ್ಲಿ ಪರದೆಯ ಮೇಲೆ ಎಲ್ಲಾ ಮುಖ್ಯ ಶಿಕ್ಷಕ ಶಿಬಿರಾರ್ಥಿಗಳಿಗೆ ಸ್ವಾಗತ ಎಂಬ ಹೇಳಿಕೆ ಮೂಡಿಸುವ ಮೂಲಕ ಪ್ರಾರಂಭಿಸಲಾಯಿತು. ಡಯಟ್‍ನ ಉಪನ್ಯಾಸಕರು ಹಾಗೂ ಇ.ಟಿ. ನೋಡಲ್ ಅಧಿಕಾರಿಗಳಾದ ಶ್ರೀಯುತ ಹುಡ್ಗೆ ಗುಂಡಪ್ಪಾ ಇವರು ಆಯೋಜಿಸಲಾದ ತರಬೇತಿಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ಡಯಟ್ ಕಮಲಾಪೂರನ ಹಿರಿಯ ಉಪನ್ಯಾಸಕರು ಹಾಗೂ ಎಚ್.ಟಿ.ಎಫ್. ತರಬೇಇಯ ನೋಡಲ್ ಅಧಿಕಾರಿಗಳಾದ ಶ್ರೀಯುತ ರಾಯಪ್ಪ ರೆಡ್ಡಿ ಹಾಗೂ ತರಬೇತಿಯ ಉದ್ದೇಶ ಮತ್ತು ಅವಶ್ಯಕತೆಯ ಕುರಿತು ಮಾರ್ಗದರ್ಶನ ಮಾಡಲು ಹಿರಿಯ ಉಪನ್ಯಾಸಕರಾದ ರಾಯಪ್ಪ ರೆಡ್ಡಿ ಸರ್‍ರವರಿಗೆ ವೇದಿಕೆಯ ಮೇಲೆ ಅನುವು ಮಾಡಿಕೊಟ್ಟರು. ಮಾನ್ಯ ರಾಯಪ್ಪ ರೆಡ್ಡಿ ಸರ್‍ರವರು ಶಿಕ್ಷಣ ಇಲಾಖೆಯ ವಿವಿಧ ಸ್ಥರಗಳ ಆಢಳಿತಾತ್ಮಕ ಕರ್ತವ್ಯಗಳು ತರಬೇತಿ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ ಅನುಭವಗಳನ್ನು ಮುಖ್ಯ ಶಿಕ್ಷಕ ಶಿಬಿರಾರ್ಥಿಗಳಿಗೆ ತಿಳಿಸುತ್ತಾ ಕಂಪ್ಯೂಟರ್ ಶಿಕ್ಷಣ ಮತ್ತು ತಂತ್ರಜ್ಞಾನದ ಬಳಕೆ ಮಾಡುವ ಅವಶ್ಯಕತೆಯನ್ನು ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು (ಓಅಈ-2005)ರ ಅಡಿಯಲ್ಲಿ ವಿದ್ಯಾರ್ಥಿಯ ಸರ್ವಾಂಗಿಣ ಅಭಿವೃದ್ಧಿಗಾಗಿ ಗುಣಮಟ್ಟದ ಶಿಕ್ಷಣ ನೀಡಬೇಕಾಗಿರುವ ಪ್ರಯುಕ್ತ ಪ್ರತಿಯೊಬ್ಬರು ಬದಲಾಗಿರುವ ವ್ಯವಸ್ಥೆಗೆ ಹೊಂದಿಕೊಳ್ಳಲು ತ್ವರಿತಗತಿಯಲ್ಲಿ ತಂತ್ರಜ್ಞಾನ ಬೆಳೆಯುತ್ತಿರುವ ಕಾರಣ ಈ ರೀತಿಯ ತರಬೇತಿಯನ್ನು ಪಡೆದುಕೊಂಡು ಗುಣಮಟ್ಟದ ಶಿಕ್ಷಣ ನೀಡಲು ಶಿಬಿರಾರ್ಥಿಗಳಾದ ಮುಖ್ಯ ಶಿಕ್ಷಕರು ಶಿಕ್ಷಣ ಇಲಾಖೆಯ ಅನುಷ್ಠಾನ ಹಂತದ ಅಧಿಕಾರಿಗಳಾಗಿರುವುದರಿಂದ ತರಬೇತಿಯನ್ನು ಯಶ್ವಸ್ವಿಯಾಗಿ ಪಡೆದುಕೊಳ್ಳಬೇಕೆಂಬ ಮಾರ್ಮಿಕ ಸಲಹೆಗಳನ್ನು ನೀಡುವುದರೊಂದಿಗೆ ಐದು ದಿನಗಳ ತರಬೇತಿಗೆ ಚಾಲನೆ ನೀಡಿದರು. ನಂತರದಲ್ಲಿ ಮುಖ್ಯ ಶಿಕ್ಷಕರ ವೇದಿಕೆ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಸತ್ಯಕುಮಾರ ಮುಖ್ಯಗುರುಗಳು ಸರಕಾರಿ ಪ್ರೌಢಶಾಲೆ ಮದನಾ ಸೇಡಂ ತಾಲೂಕು ಇವರು ತರಬೇತಿಯ ಅವಶ್ಯಕತೆ ಹಾಗೂ “ಗಟ್ಟಿ ಮನಸ್ಸು” ಮಾಡಿದರೆ ಪೂರ್ವಜ್ಞಾನದ ಕೊರತೆಯಿದ್ದರೂ ಸಹ ತಂತ್ರಜ್ಞಾನದ ಬಳೆ ಮಾಡುವುದನ್ನು ಕಲಿಯಲು ಸಾಧ್ಯವಿದೆ ಎಂದು ಹೇಳಿದರು. ಎರಡನೆಯದಾಗಿ ಶ್ರೀಯುತ ಆನಂದಮೂರ್ತಿ ಮುಖ್ಯ ಗುರುಗಳು ಸರಕಾರಿ ಪ್ರೌಢ ಶಾಲೆ ಕಲ್ಲೂರ ಚಿತ್ತಾಪೂರ ತಾಲೂಕು ಇವರು ಸಹ ಸದರಿ ತರಬೇತಿಯು ಎಲ್ಲಾ ಮುಖ್ಯ ಶಿಕ್ಷಕರು ಪಡೆದುಕೊಂಡು ತಂತ್ರಜ್ಞಾನ ಬಳಕೆಯಿಂದ ಶಾಲಾ ಶೈಕ್ಷಣಿಕ ಗುಣವರ್ಧನೆಗಾಗಿ ಶ್ರಮವಹಿಸಲು ಸಾಧ್ಯವಿದೆ ಎಂಬುದನ್ನು ವಿವರಿಸಿದರು. ಮೂರನೆಯದಾಗಿ ಮಲ್ಲಿನಾಥ ಸಜ್ಜನ ಮುಖ್ಯಗುರುಗಳು ಸರಕಾರಿ ಪ್ರೌಢಶಾಲೆ ಸಾಲೇಬೀರನಳ್ಳಿ ಚಿಂಚೋಳಿ ತಾಲೂಕು ಇವರು ಕಂಪ್ಯೂಟರ್ ಶಿಕ್ಷಣ ಹಾಗೂ ಬಳಕೆ ಜೀವನಕ್ಕೆ ಬೇರೆ ವಸ್ತುಗಳು ಅತ್ಯವಶ್ಯಕವಾಗಿರುವಂತೆ ಅವಶ್ಯಕ ವಸ್ತುಗಳಾಗಿರುವುದರಿಂದ ಅವುಗಳ ಬಳಕೆ ಮಾಡುವ ಜ್ಞಾನ ಪಡೆದುಕೊಳ್ಳುವುದು ಅನಿಯವಾಯವಾಗಿರುವುದರಿಂದ ತರಬೇತಿ ತೆಗೆದುಕೊಂಡು ಸದುಪಯೋಗ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಶಿಬಿರಾರ್ಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಸ್ಪರ ಪರಿಚಯದೊಂದಿಗೆ ಪೂರ್ವಾಹ್ನದ ಅವದಿಯ ತರಬೇತಿ ಮುಕ್ತಾಯಗೊಳಿಸಿ ಅಪರಾಹ್ನ 2.00 ರಿಂದ 2.45 ಗಂಟೆಯವರೆಗೆ ಊಟದ ವಿರಾಮ ನೀಡಲಾಯಿತು. ತರಬೇತಿಯಲ್ಲಿ ಭಾಗವಹಿಸಿರುವವರೆಲ್ಲರೂ ಶಿಬಿರದ ಸ್ಥಳದಲ್ಲಿಯೇ ಒದಗಿಸಲಾದ ಊಟ ಮಾಡಿದರು. ಅಪರಾಹ್ನದ ತರಬೇತಿಯು ಸರಿಯಾದ ಸಮಯಕ್ಕೆ ಪ್ರಾರಂಭಗೊಂಡು ಪ್ರಾಥಮಿಕವಾಗಿ ಸಂಪನ್ಮೂಲ ವ್ಯಕ್ತಿಗಳು ಕಂಪ್ಯೂಟರ್‍ಗಳು ಕುರಿತು ಮತ್ತು ಕಂಪ್ಯೂಟರ್ ಬಳಕೆಯ ಪೂರ್ವಜ್ಞಾನವನ್ನು ಶಿಬಿರಾರ್ಥಿಗಳಿಗೆ ಒದಗಿಸಿದರು. ಅಪರಾಹ್ನ 4.00ಗಂಟೆಗೆ ಚಹಾದ ಸೇವನೆಯ ಬಳಿಕ ಸಂಪನ್ಮೂಲ ವ್ಯಕ್ತಿಗಳು ಶಿಬಿರಾರ್ಥಿಗಳು ತಂತ್ರಜ್ಞಾನ ಬಳಕೆ ಮಾಡಲು ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಇ-ಮೇಲ್ ಐ.ಡಿ. ಅವಶ್ಯಕವಾಗಿರುವುದು. ಪ್ರತಿಯೊಬ್ಬ ಶಿಬಿರಾರ್ಥಿಗಳು ಇ-ಮೇಲೆ ಐ.ಡಿ. WWW.gmಚಿiಟ..ಛಿom ಖಾತೆಯನ್ನು ನಲ್ಲಿ ತೆರೆಯುವ ವಿಧಾನವನ್ನು ಉಪಯೋಗಿಸುವ ಖಾತೆದಾರರ ಗುರುತಿನ ಸಂಖ್ಯೆ (Pಚಿss Woಡಿಜ) ನೆನಪಿನಲ್ಲಿಟ್ಟುಕೊಂಡು ಬಳಕೆ ಮಾಡುವ ವಿಧಾನ ತಿಳಿಸಿದರು. ತೆರೆದಿರುವ ಇ-ಮೇಲ್ ಐ.ಡಿ.ಗಳ ಮೂಲಕ ಬೇರೆಯವರಿಗೆ ಸಂದೇಶ ರವಾನಿಸುವ ವಿಧಾನ ತಿಳಿಸಿಕೊಟ್ಟರು. ತಮ್ಮ ಖಾತೆಗೆ ಬೇರೆಯವರಿಂದ ಬಂದಿರುವ ಸಂದೇಶಗಳನ್ನು ತೆರೆದು ಓದುವ ಕ್ರಮವನ್ನು ತಿಳಿಸಿಕೊಡಲಾಯಿರು. ಶಿಬಿರಾರ್ಥಿಗಳೆಲ್ಲರು ತಮ್ಮ-ತಮ್ಮ ಇ-ಮೇಲ್ ಐ.ಡಿ.ಗಳ ಮೂಲಕ ಪರಸ್ಟರ ಸಂದೇಶ ರವಾನೆ ಮಾಡಿಕೊಂಡರು. ಈ ರೀತಿಯಲ್ಲಿ ಮೊದಲನೇ ದಿನದ ತರಬೇತಿಯನ್ನು ಪೂರ್ಣಗೊಂಡು ಸಾಯಂಕಾಲ 5.00ಗಂಟೆಗೆ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು. ನಡೆದ ತರಬೇತಿಯ ಸಂಕ್ಷೀಪ್ತ ವರದಿಯನ್ನು ಇಲ್ಲಿಗೆ ಅಂತಿಮಗೊಳಿಸಲಾಗುತ್ತಿದೆ.

2nd Day. 17/12/2014'

ಪ್ರಪ್ರಥಮವಾಗಿ ಶಾಲೆಯ ಮುಖ್ಯಗುರುಗಳು ಪ್ರಭಾವಿ ವಲಯ ಮತ್ತು ಕಾಳಜಿ ವಲಯ ಹೊಂದಿರಬೇಕೆಂದು ತಿಳಿಸಲಾಯಿತು.ಶಾಲಾ ಅಭಿವೃದ್ಧಿಯೋಜನೆ ತಯಾರಿಸಬೇಕು. ಯೋಜನೆಯು ಶಾಲಾ ಅಭಿವೃದ್ಧಿ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರಬೇಕು. ಸಿ.ಸಿ.ಇ. ತರಬೇತಿ ಮುಖ್ಯಶಿಕ್ಷಕರು ಹೊಂದಿದ್ದು, ಅದರ ಪ್ರಕಾರ ಎಲ್ಲಾ ಶಿಕ್ಷಕರು ಕಾರ್ಯನಿರ್ವಹಿಸಬೇಕು.ವಿದ್ಯಾರ್ಥಿಗಳ, ಶಿಕ್ಷಕರ ಶಾಲಾಕಾಳಜಿ ಹೇಗಿದೆಯೆಂದು ಮನಗಂಡು ಕಾರ್ಯಪ್ರವೃತ್ತರಾಗಬೇಕು.ಶಿಕ್ಷಕರಿಂದ ಯಶೋಗಾಥೆಗಳನ್ನು ಹೇಳಲಾಯಿತು. ಸುಮಾರು ನಾಲ್ಕು ಜನ ಮುಖ್ಯ ಗುರುಗಳು ಯಶೋಗಾಥೆ ತಿಳಿಸಿದರು ನಂತರ ಊಟಕ್ಕೆ ತೆರಳಿದೆವು.ನಂತರ ಗಣಕ ಯಂತ್ರಗಳಲ್ಲಿ ಲೋಹಿತ ಕನ್ನಡ ಟೈಪ್ ಮಾಡುವ ಬಗ್ಗೆ ತಿಳಿಸಲಾಯಿತು. ಹಾಗೂ ನಾವು ಕೂಡ ಟೈಪ್ ಮಾಡಿದೇವು. ಶಿಬಿರಾರ್ಥಿಗಳಿಗೆ ಇ-ಮೇಲ್ ಖಾತೆ ತೆರೆಯುವುದು, ಮತ್ತು ಅದರ ಸವಿಸ್ತಾರವಾದ ಬಳಕೆ ಕುರಿತು ಮಾಹಿತಿ ನೀಡಿದರು. ನಂತರ ನಾವೇಲ್ಲರೂ ನಮ್ಮ ನಮ್ಮ ಖಾತೆಗಳನ್ನು ತೆರೆದು ಒಬ್ಬರಿಂದ ಇನ್ನೊಬ್ಬರಿಗೆ ವಿಷಯಗಳನ್ನು ಹಂಚಿಕೊಂಡೇವು.

3rd Day. 18/12/2014'

ಇಂದು ದಿನಾಂಕ 18/12/2014 ರಂದು 3ನೇ ದಿನದ ತರಬೇತಿಗಾಗಿ ಕೋಣೆಯೋಳಗೆ ಪ್ರವೇಶಿಸಿದಂತೆ ಶ್ರೀ.ಸತ್ಯಕುಮಾರ ಅವರು ಎಲ್ಲರನ್ನೂ ಸ್ವಾಗತಿಸಿಕೋಳ್ಳುತ್ತ ಪ್ರಾಥನೆ, ಶುಭಾಶಯ ಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ದಿನದ ಮೊದಲ ಅವಧಿಯಲ್ಲಿ ಹೆಚ್ಚ್.ಆರ್.ಎಮ್.ಎಸ್. ಕುರಿತು ಪ್ರೋಜಕ್ಟರ್ ಬಳಸಿ ಯಾವ ಕ್ರಮದಲ್ಲಿ ವೇತನಬಿಲ್ಲು ತಯಾರಿಸುವುದು ,ಜನರೇಟ ಹೇಗೆ ಮಾಡುವುದು ,ಬಿಲ್ ರದ್ದುಗೊಳಿಸುವುದು, ಹೊಸ ಸೇಪಡೆ,ತಿದ್ದುವಿಕೆ ಇತ್ಯಾದಿ ವಿಷಯಗಳನ್ನು ಸವಿಸ್ತಾರ ವಾಗಿ ತಿಳಿಸಿ ಕೊಟ್ಟರು .ನಂತರ ಸ್ವತ ಮು.ಗು.ಗಳು ಗಣಕಯಂತ್ರದ ಮೂಲಕ ಪ್ರಾಯೋಗಿಕವಾಗಿ ಅರಿತು ಕೊಂಡರು ಅಲ್ಲಿಗೆ ಭೋಜನ ಸಮಯ, ಶುಚಿಯಾದ,ರುಚಿಯಾದ ಭೋಜನ ಸೇವಿಸಿ ಎರಡನೇ ಅವಧಿಗಾಗಿಮತ್ತೆ ಕೋಣೆಯೊಳಗೆ ಪ್ರವೇಶಿಸಿದಂತೆ ಶ್ರೀ. ಮಲ್ಲಿನಾಥ.ಸಜ್ಜನ ಅವರು ಕನಾFಟಕ ಮುಕ್ತ ಶೈಷಣಿಕ ಸಂಪನ್ಮೂಲ "ಕೋಯರ್" ಹೇಗೆ ಕಲಿಕಾ ಪ್ರಯಲ್ಲಿ ಸಹಾಯಕಾರಿ ಮತ್ತು ಕೋಯರ್ ಸಂಪೂಣ ಮಾಹಿತಿಯನ್ನು ವೆಬ್ ಮೂಲಕ ಸವಿಸ್ತಾರವಾಗಿ ತಿಳಿಸಿ ಕೊಟ್ಟರು ಮತ್ತು ಎಲ್ಲಾ ಮು.ಗು. ಅವರು ನೇಟ್ ನಲ್ಲಿ ಕೊಯರ ವೆಬ್ ತೆರೆದು ಅದರಲ್ಲಿ ಅಡಕವಾಗಿ ರುವ ಸಂಪನ್ಮೂಲಗಳನ್ನು ವೀಕ್ಷಿಸಿದರು ಶ್ರೀ. ಆನಂದಮೂತಿ ಅವರು ನಮ್ಮ ಸಂಶಯಾತ್ಮಕ ಪ್ರಶ್ನೆಗಳಿಗೆ ಪರಿಹಾರಾ ತ್ಮಕ ಉತ್ತರಗಳನ್ನು ನೀಡುವುದರೋಂದಿಗೆ ಸಮಯ 5:00 ಗಂಟೆ .ಆಯಿತು ಹೀಗಾಗಿ 3ನೇ ದಿನದ ತರಬೇತಿ ಮುಕ್ತಾಯ ಮಾಡಲಾಯಿತು

4th Day. 19/12/2014

3ನೇ ದಿನದ ವರದಿ ವಾಚನದ ನಂತರ ಅದನ್ನು hಣಜಿ gಡಿouಠಿs ಗೆ ಮೇಲ ಮಾಡಲು ಸಂಪನ್ಮೂಲ ವ್ಯಕ್ತಿಗಳು ತಿಳ್ಳಿಸಿದರು. ನಂತರ ಎಲ್ಲಾ ಶಿಬಿರಾರ್ಥಿಗಳು ತಮ್ಮ ಜಿಮೇಲ್ ತಗೆದು, ಬೆರೆಯವರಿಗೆ ಮೇಲ್ ಮಾಡಿದರು. ಮೇಲ್ನಲ್ಲಿ ಬೇರೆ ಫೈಲ್ ಅಟ್ಯಾಚ ಮಾಡಿ ಮೇಲ್ ಮಾಡಿಸಿದರು. ಸಂಪೂರ್ಣ ಮೇಲ್ ಬಗ್ಗೆ ಮಾಹಿತಿ ಪಡೆದೇವು. ಊಡಿms ಸಮಸ್ಯಗಳು ಸಂಪನ್ಮೂಲ ವ್ಯಕ್ತಿಗಳು ವಿವರವಾಗಿ ತಿಳ್ಳಿಸಿದರು. ಅಂತರ ಜಾಲದಿಂದ ವಿಷಯಗಳು,ಪೋಟೊಗಳು ಪಡೆಯುವುದು,ಸಂಗ್ರಯಿಸುವದರ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ; ಮಲ್ಲಿನಾಥ ಸಜ್ಜನ,ಆನಂದಮೂರ್ತಿ ಮತ್ತು ಸತ್ಯಕುಮಾರ ಭಾಗೋಡಿ ರವರು ಎಲ್.ಸಿ.ಡಿ.ಫ್ರೋಜೇಕ್ಟರ್ ಮೂಲಕ ವಿವರಣೆ ಮಾಡಿದರು.ನಂತರ ಎಲ್ಲಾ ಶಿಬಿರಾರ್ಥಿಗಳು ಕಂಪ್ಯೂಟರನಲ್ಲಿ ಮಾಡತೋಡಗಿದೇವು,ಅಷ್ಟರಲ್ಲಿ ಊಟದ ಸಮಯವಾಯಿತ್ತು.ಮಧ್ಯಾನ್ಹದ ಅವದಿಯಲ್ಲಿ ಗುಂಪು ರಚಿಸಿ ಶಾಲಾ ನಾಯಕತ್ವದಲ್ಲಿ ತಮ್ಮ ಶಾಲೆಯ ಸಮಸ್ಸೆ ತೆಗೆದುಕೊಂಡು ಗುಂಪಿನವರು ಚರ್ಚಿಸಿ ವರದಿ ಮಂಡನೆ ಮಾಡಲು ತಿಳಿಸಿದರು.ನಮ್ಮ ಗುಂಪಿನವರಲ್ಲಿ ಸ.ಪ್ರೌಡ ಶಾಲೆ ರಿಬ್ಬನಪಲ್ಲಿ ತಾ;ಸೇಡಂ ಜಿಲ್ಲೆ ಕಲಬುರಗಿ ಸಮಸ್ಯೆ ತೆಗೆದುಕೊಂಡು ನಮ್ಮ ತಂಡದ ಸದಸ್ಯರಾದ ಬಾಬು ಎಮ್.ಜನವಾಡರವರು ವಿಷಯ ಮಂಡಿಸಿದರು. ಚಹಾ ವಿರಾಮದ ನಂತರ ಟಕ್ಸ ಟೈಪಿಂಗ ಹೇಳಿಕೊಟ್ಟರು.ಎಲ್ಲರು ಟೆಕ್ಸ ಟೈಪಿಂಗ ಪಾಠಗಳನ್ನು ಬಳಸಿ ಪ್ರಾಕ್ಟಿಸ್ ಮಾಡತೊಡಗಿದೇವು. ಸಮಯ 5.30ಠಿmಆಗಿತ್ತು,ಸಂಪನ್ಮೂಲ ವ್ಯಕ್ತಿಗಳು ಎಲ್ಲಾ ಶಿಬಿರಾರ್ಥಿಗಳಿಗೆ ನಾಳೆ ಮುಂಜಾನೆ 9.30ಕ್ಕೆ ಬರಲು ತಿಳ್ಳಿಸಿದರು.


5th Day. 20/12/2014

Batch 2

Agenda

If district has prepared new agenda then it can be shared here

See us at the Workshop

05/01/2015 to 09/01/2015

Workshop short report

1st Day. 05/01/2015

ಎಚ್.ಟಿ.ಎಫ್. 2 ನೇ ಹಂತದ ಮೋದಲ ದಿನದ ವರದಿ ಮೊದಲ ದಿನದ ಚಿಂಚೋಳಿ ಮತ್ತು ಸೇಡಂ ತಾಲೂಕಿನ ಮುಖ್ಯಶಿಕ್ಷಕರ ತರಬೇತಿ ಕಾರ್ಯಕ್ರಮ ಬೆಳಿಗ್ಗೆ 10-00 ಗಂಟೆಗೆ ಪ್ರಾರಂಭವಾಯಿತು. ಕಾರ್ಯಕ್ರಮದಲ್ಲಿ ಡಯಟ್ ನ ನೋಡಲ್ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ಒಳಗೊಂಡು ಕಾರ್ಯಕ್ರಮದ ರೂಪುರೇಷಗಳನ್ನು, ಉದ್ಘಾಟನೆಯ ನಂತರ ತಿಳಿಸಿಕೊಡಲಾಯಿತು.

1. ಇಂಟರನೇಟ್ ಮೂಲಕ ಶಾಲೆಯಲ್ಲಿ ಕೈಗೊಳ್ಳಬೇಕಾದ ಕಾರ್ಯಗಳನ್ನು ಯಾವ ರೀತಿಯಾಗಿ ಮಾಡಬೇಕು ಮತ್ತು ಶೈಕ್ಷಣಿಕ ಮತ್ತು ಅಡಳಿತಾತ್ಮಕ ವಿಷಯಗಳನ್ನು ಕಾಗದರಹಿತವಾಗಿ ಬಳಸಲು ತಿಳಿಸಿಕೊಡಲಾಯಿತು.

2. ಟೈಪಿಂಗ್ ಮಾಡುವ ಬಗೆಯನ್ನು ಹೇಳಿಕೊಡಲಾಯಿತು.

3. ಮುಖ್ಯಶಿಕ್ಷಕರ ವೇದಿಕೆಯ ಮಹತ್ವ ಕೊಯರ್‍ನ ಮಹತ್ವ ಇತ್ಯಾದಿಗಳನ್ನು ತಿಳಿಸಿಕೊಡಲಾಯಿತು.

4. ಒಬಂಟು ಸಾಫ್ಟವೇರ್ ಬಳಸುವ ಮಾಹಿತಿ ನೀಡಿ ಅದರ ಲಾಭ ತಿಳಿಸಿಕೊಡಲಾಯಿತು.

2nd Day. 06/01/2015

3rd Day. 07/01/2015

4th Day. 08/01/2015

5th Day. 09/01/2015

Batch 3

Agenda

If district has prepared new agenda then it can be shared here

See us at the Workshop

12/01/2015 to 16/01/2015'

Workshop short report

1st Day. 12/01/2015

2nd Day. 13/01/2015

ಇಂದು ದಿನಾಂಕ 13-01-2015 ರ ಮಂಗಳವಾರದಂದು ಬೆಳಿಗ್ಗೆ 10:30 ಗಂಟೆಗೆ ತರಬೇತಿಯು ಆರಂಭವಾಯಿತು. ತರಬೇತಿಯನ್ನು ಪ್ರಾರ್ಥನೆ ಗೀತೆ ಹಾಡುವ ಮೂಲಕ ಚಾಲನೆ ನೀಡಲಾಯಿತು. ತರಬೇತಿಯ ಆರಂಭವಾದ ನಂತರ ನಿನ್ನೆ ದಿನ ನಡೆದ ತರಬೇತಿ ವಿಷಯಗಳ ಕುರಿತು ಹಿಮ್ಮಾಹಿತಿ ಪಡೆಯಲಾಯಿತು. ನಿನ್ನೆ ನಮಗೆಲ್ಲಾ ಹೇಳಿಕೊಡಲಾದ ವಿಷಯಗಳ ಕುರಿತು ಮನನ ಮಾಡಿಕೊಳ್ಳಲಾಯಿತು. ಇಂದಿನ ದಿನದ ತರಬೇತಿಯಲ್ಲಿ ನಮಗೆ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಗಳು ಹಾಜರಿರಲಿಲ್ಲ ಕಾರಣ ಅವರು ಚುನಾವಣಾ ತರಬೇತಿಯ ಪ್ರಯುಕ್ತ ಕಲಬುರಗಿಗೆ ತೆರಳಿದ್ದರು. ಇಂದಿನ ದಿನ ನಾವು ಡಯಟ್ ಕಮಲಾಪೂರದ ಉಪನ್ಯಾಸಕರಾದ ಶ್ರೀ ರಾಯಪ್ಪರೆಡ್ಡಿ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದುಕೊಂಡೆವು. ಇಂದಿನ ದಿನದ ತರಬೇತಿಯಲ್ಲಿ ನಾವು ನಮ್ಮ ಈ ಮೇಲ್ ಖಾತೆಗಳಿಗೆ ಬಂದಿರುವ ಮೇಲ್ ಗಳನ್ನು ತೆರೆಯುವುದು ಮತ್ತು ಬಂದಿರುವ ಮೇಲ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವುದನ್ನು ಜೊತೆಗೆ ಮೇಲ್ ಗಳಿಗೆ ರಿಪ್ಲೇ ಮಾಡುವುದನ್ನು ಕಲಿತುಕೊಂಡೆವು. ತದನಂತರ ತರಬೇತಿಯಲ್ಲಿ ಮುಂದುವರೆದು ಕೊಯರ್ ನ ಬಗ್ಗೆ ಮಾಹಿತಿಯನ್ನು ಪಡೆದುಕೊಂಡೆವು. ಇಲ್ಲಿಗೆ ತರಬೇತಿಯಲ್ಲಿ ಊಟದ ವಿರಾಮ ನೀಡಲಾಯಿತು. ಊಟದ ನಂತರ ತರಬೇತಿ ಮತ್ತೆ ಮುಂದುವರೆಯಿತು ಈ ಅವಧಿಯಲ್ಲಿ ತರಬೇತಿಯಲ್ಲಿ ನೆರೆದ ಎಲ್ಲಾ ಶಿಬಿರಾರ್ಥಿಗಳಿಗೆ ಇನ್ನು ಈ ಮೇಲ್ ಖಾತೆಯನ್ನು ತೆರೆಯದೆ ಇರುವವರಿಗೆ ಈ ಮೇಲ್ ಖಾತೆ ತೆರೆಯುವ ಕುರಿತು ತಿಳಿಸಲಾಯಿತು. ಎಲ್ಲಾ ಶಿಬಿರಾರ್ಥಿಗಳಿಗೆ ಈ ಅವಧಿಯಲ್ಲಿ ಪ್ರಾಯೋಗಿಕವಾಗಿ ಕಂಪ್ಯೂಟರ್ ಗಳನ್ನು ಕೊಟ್ಟು ಅವರಿಂದಲೇ ಅವರ ಈ ಮೇಲ್ ಖಾತೆಗಳನ್ನು ತೆರೆಸಲಾಯಿತು.

3rd Day. 14/01/2015

4th Day. 16/01/2015

ಎಚ್ ಟಿ ಎಪ್ ತರಬೇತಿಯ 3ನೇ ತಂಡದ 4ನೇ ದಿನದ ತರಬೇತಿಯಲ್ಲಿ ಮೊದಲಿಗೆ 3 ನೇ ದಿನದ ತರಬೇತಿಯಲ್ಲಿ ತಿಳಿದಿಕೊಂಡದ ವಿಷಯಗಳಿಗೆ ಸಂಬಂಧಿಸಿದ ಹಿಮ್ಮಾಹಿತಿ ಪಡೆದು 4ನೇ ದಿನದ ತರಬೇತಿ ಪ್ರಾರಂಭಿಸಲಾಯಿತು. ಇಂದಿನ ತರಬೇತಿಯಲ್ಲಿ ಮೊದಲಿಗೆ ಉಬಂಟು ಕಾರ್ಯ ನಿರ್ವಾಹಣೆ ಬಗ್ಗೆ ಮಾಹಿತಿ ನೀಡಲಾಯಿತು. ನಂತರ ಉಬಂಟುನ್ನು ನಮ್ಮ ಕಂಪ್ಯೂಟರ ನಲ್ಲಿ ಅಳವಡಿಸುವ ಕುರಿತು ಮಾಹಿತಿ ನೀಡಲಾಯಿತು. ನಂತರ ಅದನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಲಾಯಿತು. ಚಹಾ ವಿರಾಮದ ನಂತರ ಎಚ್ ಆರ್ ಎಮ್ ಎಸ್. ಬಗ್ಗೆ ತರಬೇತಿ ಪ್ರಾರಂಭಿಸಿ ಅದರಲ್ಲಿನ ಪ್ರತಿಯೊಂದು ಮುಖ್ಯ ವಿಷಯಗಳನ್ನು ನೇರವಾಗಿ ಇಂಟರನೆಟ ಮೂಲಕ ಪರಿಚಯಿಸಿ ಸೇವಾ ಪುಸ್ತಕ, ವೇತನ ಬಿಲ್ಲು ತಯಾರಿಗೆ ಹಿಂಬಾಕಿ ವೇತನ ಬಡ್ತಿ ಶಿಸ್ತು ಕ್ರಮ ಅಳವಡಿಕೆ ಎನ್ ಪಿ ಎಸ್ ಹೀಗೆ ಮಂತಾದ ವಿಷಯಗಳ ಬಗ್ಗೆ ತಿಳಿಸಲಾಯಿತು.

5th Day. 16/01/2015

Batch 4

Agenda

If district has prepared new agenda then it can be shared here

See us at the Workshop

10/02/2015 to 14/02/2015

Workshop short report

1st Day. 10/02/2015

ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ಇವರ ಆದೇಶದಂತೆ ಕಮಲಾಪೂರ ಡಯಟ್ನಲ್ಲಿ ಅಫಜಲಪೂರ ತಾಲೂಕಿನ ಎಲ್ಲಾ ಸರಕಾರಿ ಪ್ರೌಢ ಶಾಲೆಗಳ ಮುಖ್ಯ ಗುರುಗಳಿಗೆ ಹೆಚ್ ಟಿ ಎಪ್ ತರಬೇತಿ ಯಶಸ್ವಿಯಾಗಿ ನಡೆಯುತ್ತಿದೆ.

ತರಬೇತಿಯ ಮೊದಲನೆಯ ದಿನದ ವರದಿ ಈ ರೀತಿಯಾಗಿದೆ, ಅಫಜಲಪೂರ ತಾಲೂಕಿನ ಮುಖ್ಯ ಗುರುಗಳು ೧೦-೩೦ ಗಂಟೆಗೆ ತರಬೇತಿಯ ಕೋಣೆಗೆ ಹಾಜರಾಗಿದ್ದರು. ನಂತರ ತರಬೇತಿಯ ಉದ್ಘಾಟನೆಯನ್ನು ಶ್ರೀ ರಾಯಪ್ಪ ರೆಡ್ಡಿ ಸರ್ ನೊಡಲ್ ಅಧಿಕಾರಿಗಳು ನಡೆಸಿಕೊಟ್ಟರು ಅವರು ಈ ತರಬೇತಿಯ ಗುರಿ ಹಾಗೂ ಉದ್ದೇಶಗಳನ್ನು ಕುರಿತು ಮಾತನಾಡಿದರು. ಅದೇ ರೀತಿ ಶ್ರೀ ಗುಂಡಪ್ಪ ಸರ್ ಕಿರಿಯ ಉಪನ್ಯಾಸಕರು ಡಯಟ್ ಕಮಲಾಪೂರ ಇವರು ತರಬೇತಿಯನ್ನು ಉದ್ದೇಶಿಸಿ ಮಾತನಾಡಿದರು. ನಂತರ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾದ ಮಲ್ಲಿನಾಥ ಸಜ್ಜನ ಇವರು ಐದು ದಿನದ ತರಬೇತಿಯ ಸಂಪೂರ್ಣ ಮಾಹಿತಿ ನೀಡಿದರು ಹಾಗೂ ಅಬೊಂಟು ತಂತ್ರಜ್ಞಾನದ ಬಗ್ಗೆ ವಿವರಿಸಿದರು .

ಪ್ರಥಮವಾಗಿ ನಮಗೆ ಇ-ಮೇಲ್ ಅಕೌಂಟ್ ಯಾವ ರೀತಿ ರಚಿಸಬೇಕು ಎಂಬುದನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿದರು ಜೊತೆಗೆ ಎಲ್ಲರೂ ತಮ್ಮ ತಮ್ಮ ಇ-ಮೇಲ್ ರಚಿಸಲು ತಿಳಿಸಿದರು. ಚಹಾ ವಿರಾಮದ ನಂತರ ನಮಗೆ ಪ್ರತ್ಯೇಕವಾಗಿ ಸಿಸ್ಟಮ್ ನೀಡಿ ನಮ್ಮ ಶಾಲೆಯ ಜಿ-ಮೇಲ್ ರಚಿಸಲು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು ಅದೇ ರೀತಿಯಾಗಿ ಜಿ-ಮೇಲ್ ರಚಿಸಲು ಎಲ್ಲಾ ಸಿಬ್ಬಂದಿ ಜಿವೈಯಕ್ತಿಕವಾಗಿ ಮಾರ್ಗದರ್ಶನ ನೀಡಿದರು. ಹಾಗೂ ಕಂಪ್ಯೂಟರ್ ನಲ್ಲಿ ಪಠ್ಯ ರಚಿಸುವ ಬಗ್ಗೆ ನಮಗೆ ಕೀ ಬೋರ್ಡ ಮಾಹಿತಿ ನೀಡಿದರು.

ಊಟದ ವಿರಾಮದ ನಂತರ ಜಿ-ಮೆಲ್ ನಲ್ಲಿರುವ ಎಲ್ಲಾ ಆಯ್ಕೆಗಳನ್ನು ಪ್ರಾಯೋಗಿಕವಾಗಿ ಪರಿಚಯಿಸಿ ಮಾಹಿತಿ ನೀಡಿದರು. ನಾವು ತಯಾರಿಸಿದ ಎಲ್ಲಾ ಶಾಲೆಗಳ ಜಿ- ಮೆಲ್ ಗಳನ್ನು ಅವರು ಪಡೆದರು. ನಾವು ಎಲ್ಲಾ ಮಾಹಿತಿಯನ್ನು ಯಶಸ್ವಿಯಾಗಿ ಪಡೆದು ೫-೦೦ ಗಂಟೆಗೆ ತರಬೇತಿಯ ಹಾಲಿನಿಂದ ನಿರ್ಗಮಿಸಿದೆವು.

2nd Day. 11/02/2015

ದಿನಾಂಕ 11-02-15 ರಂದು ಎರಡನೇಯ ದಿನದ ವರದಿಯನ್ನು ಸಲ್ಲಿಸುತ್ತಿದ್ದೆನೆ. ಇಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ತರಬೇತಿ ಪ್ರಾರಂಭವಾಯಿತು ಮೊದಲಿಗೆ ನಾನು ಪ್ರಥಮ ದಿನದ ವರದಿಯನ್ನು ಡಿಟಿಪಿ ಮಾಡಿ ಅದನ್ನು ಇ-ಮೇಲ್ ಮುಖಾಂತರ ನಮ್ಮ ಹೆಚ್ ಟಿ ಎಪ್ ಗ್ರೂಪ್ ಗೆ ಕಳುಹಿಸಿದೆ.ಎಲ್ಲರಿಂದಲೂ ಪ್ರತಿಕ್ರಿಯೆ ಬಂತು. ನಂತರ ಸಂಪನ್ಮೂಲ ವ್ಯಕ್ತಿಯಾದ ಸತ್ಯಕುಮಾರ ಸರ್ ರವರು ಎಲ್ಲರ ಇ-ಮೇಲ್ ಗಳನ್ನು ಹೆಚ್ ಟಿ ಎಪ್ ಗ್ರೂಪ್ ಗೆ ಸೇರ್ಪಡೆಯಾಗಿವೆ ಇಲ್ಲವೆ ಎಂಬುದನ್ನು ಚೆಕ್ಕ ಮಾಡಿದರು ನಂತರ ಪ್ರಾಯೋಗಿಕವಾಗಿ ಇ-ಮೇಲ್ ತೆಗೆದು ಅದರಲ್ಲಿ ಇನ್ನೊಬ್ಬರಿಗೆ ಮೇಲ್ ಕಳುಹಿಸುವುದು ಬಂದ ಮೇಲ್ ನ್ನ ನೋಡಿ ಅವರಿಗೆ ಮರಳಿ ಉತ್ತರಿಸುವುದು ಯಾವ ರೀತಿ ಎಂಬುದನ್ನು ತುಂಬಾ ವಿವರವಾಗಿ ತಿಳಿಸಿಕೊಟ್ಟರು. ನಂತರ ಚಹಾ ವಿರಾಮ ಅದಾದನಂತರ ಇ-ಮೇಲ್ ಪಾಸವರ್ಡ ಹೇಗೆ ಬದಲಾಯಿಸುವುದನ್ನು ಕಲಿಸಿಕೊಟ್ಟರು. ಆವಾಗ ಎಲ್ಲರೂ ತಮ್ಮ ಮೇಲ್ ಗಳನ್ನು ಓಪನ್ ಮಾಡಿ ಒಂದು ಮೇಲ್‍ನಿಂದ ಇನ್ನೊಂದು ಮೇಲ್‍ಗೆ ಮೆಸೆಜ್ ಕಳುಹಿಸುವುದನ್ನು ಪ್ರಾಯೋಗಿಕವಾಗಿ ಮಾಡಿದರು. ನಂತರ ಒಂದು ಮೆಸೆಜ್ ನ್ನು ಹಲವು ಜನರಿಗೆ ಕಳುಹಿಸುವುದನ್ನು ಕಲಿತರು. ಜೊತೆಗೆ ಪೈಲ್ ನ್ನು ಅಟ್ಯಾಚ್ ಮಾಡುವುದನ್ನು ಹೇಳಿಕೊಟ್ಟರು. ಇದರಿಂದ ನಮಗೆ ನೆಟ್ ಜ್ಞಾನ ತುಂಭಾ ಪ್ರಾಯೊಗಿಕವಾಗಿ ಕಲಿತೆವು ನಂತರ ಊಟದ ಸಮಯ ಎಲ್ಲರೂ ಊಟಕ್ಕೆ ಹೋದೆವು ಊಟ ತುಂಬಾ ರುಚಿಕರವಾಗಿತ್ತು. ಊಟದ ನಂತರ ಹೊಸ ವಿಷಯ ಪ್ರಸ್ತಾಪ ಮಾಡಿದರು ಅದೇನೆಂದರೆ ನಮ್ಮಲ್ಲಿ ನಾಲ್ಕು ತಂಡಗಳಾಗಿ ಮಾಡಿ ಪ್ರತಿಯೊಂದು ತಂಡಕ್ಕೆ ಒಂದೊಂದು ಕ್ರೀಯಾಯೋಜನೆಯನ್ನು ತಯಾರಿಸಲು ಹೇಳಿದರು, ಇದನ್ನು ಸತ್ಯಕುಮಾರ ಸರ್ ರವರು ತಮ್ಮ ವೃತ್ತಿ ಜೀವನದ ನೈಜ ಚಿತ್ರಣದೊಂದಿಗೆ ಹೊಲಿಸಿ ತಿಳಿಸಿದರು. ಕ್ರೀಯಾ ಯೋಜನೆ ರಚಿಸುವಾಗ ಅನುಸರಿಸುವ ಹಂತಗಳ ಬಗ್ಗೆ ತುಂಬಾ ವಿವರವಾಗಿ ಸಜ್ಜನ್ ರವರು ತಿಳಿಸಿದರು ಉದಾ:- 1) ಸಮಸ್ಯಯನ್ನು ಗುರುತಿಸುವುದು. 2) ಉದ್ದೇಶಗಳನ್ನು ಹಾಕಿಕೊಳ್ಳುವುದು. 3) ವಿಶ್ಲೇಷಣೆ ಮಾಡುವುದು. 4) ಸಂಶ್ಲೇಷಣೆ ಮಾಡುವುದು. 5) ಉಪಸ್ಥಿತಿ ಅಂತಿಮ ಹಂತ. ಹೀಗೆ ಹಂತಗಳ ಮುಖಾಂತರ ಕ್ರೀಯಾ ಯೋಜನೆಯನ್ನು ರಚಿಸಲು ಐದು ತಂಡಗಳಿಗೆ ತಿಳಿಸಿದರು ಇದಾದನಂತರ ಎಲ್ಲರೂ ಅದರಲ್ಲಿ ತಲ್ಲಿನರಾದರು. ಚಹಾ ವಿರಾಮ, ಚಹಾ ಕುಡಿದು ಮತ್ತೆ ಚರ್ಚೆ ಮುಂದುವರಿಸಿದರು. ಚರ್ಚೆ ಮುಂದಿನ ದಿನಕ್ಕೆ ಮುಂದುವರಿಯಿತು. ಸರಿಯಾಗಿ 5 ಗಂಟೆಗೆ ತರಬೇತಿ ಕೋಣೆಯಿಂದ ನಿರ್ಗಮಿಸಿದೆವು.


3rd Day. 12/02/2015


4th Day. 13/02/2015


5th Day. 14/02/2015

Mathematics

Batch 1

Agenda

If district has prepared new agenda then it can be shared here

See us at the Workshop

Workshop short report

1st Day. 19/01/2015

2nd Day. 20/01/2015

3rd Day. 21/01/2015

ತರಬೇತಿಯ ಪ್ರತಿ ದಿನದಂತೆ ದಿನಾಂಕ 21-01-2015 ರ ಬೆಳಿಗ್ಗೆ 10 ಕ್ಕೆ ಎಲ್ಲಾ ಶಿಕ್ಷಕರು ತರಬೇತಿ ಕೋಣೆ ಯಲ್ಲಿ ಹಾಜರಾಗಿದ್ದರು . ಇಂದು ತರಬೇತಿಯ ಮೊದಲ ಅವದಿಯಲ್ಲಿ ಸಂಪನ್ಮೂ ಲ ವ್ಯಕ್ತಿಗಳಾದ ಶಿವಲಿಂಗಪ್ಪ ಕೊಡ್ಲಿ ರವರು geogebra application ನಲ್ಲಿ slider ನ ಬಳಕೆ ಹಾಗೂ ಅದರ ಉಪಯೋಗದಿಂದ ಹಲವಾರು ಪರಿಕಲ್ಪನೆ ಗಳನ್ನು ಹೇಗೆ ಬೋಧಿಸಬಹು ದೆಂದು ತಿಳಿಸಿದರು . ಚಹಾ ವಿರಾಮದ ನಂತರ ನಾವೆಲ್ಲರು ಹಲವಾರು ಪರಿಕಲ್ಪನೆಗಳ ಕಡತಗಳನ್ನು ತಯಾರಿಸಿದೆವು. ಊಟದ ವಿರಾಮದ ನಂತರ DSERT ರವರ ವತಿಯಿಂದ ನೆಡೆದ teleconference ನಲ್ಲಿ ಬಾಗವಹಿಸಿ, ನಂತರ ಮತ್ತೆ ನಮಗೆ mathematical formlua ಗಳನ್ನು ಹೇಗೆ libre office writer ಸುಲಭವಾಗಿ type ಮಾಡಬಹು ದು ಎಂದು ತಿಳಿಸಿಕೊಟ್ಟರು .. ನಂತರ ನಾವು ಹಲವಾರು ಸೂ ತ್ರಗಳನ್ನು type ಮಾಡಲು ಕಲಿತೆವು

4th Day. 22/01/2015

5th Day. 23/01/2015

Batch 2

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4