STF 2014-15 Udupi

From Karnataka Open Educational Resources
Revision as of 12:11, 9 March 2015 by Seema Kausar (talk | contribs) (→‎Workshop short report)
(diff) ← Older revision | Latest revision (diff) | Newer revision → (diff)
Jump to navigation Jump to search

19 districts

Mathematics

Batch 1

Agenda

If district has prepared new agenda then it can be shared here

See us at the Workshop

Workshop short report

1st Day. 29/12/2014

ಮೊದಲ ದಿನದ ಕಾರ್ಯಕ್ರಮವು ಬೆಳಿಗ್ಗೆ ಸಮಯ 9:30 ಕ್ಕೆ ಸರಿಯಾಗಿ ಆರಂಭಗೊಂಡಿತು. ಸಭಾ ಕಾರ್ಯಕ್ರಮಾದ ಆಧ್ಯಕ್ಷತೆಯನ್ನು ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯಾದ ಪ್ರಭಾರ ಪ್ರಾಂಶುಪಾಲರಾದ ಶ್ರೀಯುತ ರಾಜೇಶ ರವರು ವಹಿಸಿದ್ದರು. ಕಾರ್ಯಕ್ರಮವು ಸರಕಾರಿ ಪ್ರೌಢಶಾಲೆ ಮಣೂರಿನ ಶಿಕ್ಷಕಿ ಶ್ರೀಮತಿ ಹರ್ಷಿತಾ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಸ್ವಾಗತವನ್ನು ಶ್ರೀ ನಾಗರಾಜ, ಶಿಕ್ಷಕರು ಸರಕಾರಿ ಪ್ರೌಢಶಾಲೆ ನುಕ್ಕೂರು ನಡೆಸಿಕೊಟ್ಟರು. ಡಯಟ್ ನ ಹಿರಿಯ ಪ್ರಾಧ್ಯಾಪಕಿಯವರಾದ ಶ್ರೀಮತಿ ಜಾಹ್ನವಿ ಪ್ರಾಸ್ತಾವಿಕ ಮಾತುಗಳಲ್ಲಿ ತರಬೇತಿಯ ಮಹತ್ವ ತಿಳಿಸಿದರು. ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯಾದ ಪ್ರಭಾರ ಪ್ರಾಂಶುಪಾಲರಾದ ಶ್ರೀಯುತ ರಾಜೇಶ ರವರು ಶುಭಹಾರೈಸಿದರು. ಕೊನೆಯಲ್ಲಿ ಕುಕ್ಕಜೆ ಶಾಲೆಯ ಶಿಕ್ಷಕರಾದ ಶ್ರೀಯುತ ಜಯಪ್ರಕಾಶರವರು ಧನ್ಯವಾದವನ್ನರ್ಪಿಸಿ ಸಭಾ ಕಾರ್ಯಕ್ರಮಕ್ಕೆ ಪೂರ್ಣವಿರಾಮವಿಟ್ಟರು. ನಂತರ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕರಾದ ಮೇಶ್ ರವರು ubuntu ಸಾಫ್ಟವೇರ್ ನ ಬಗ್ಗೆ ಸವಿವರವಾಗಿ ತಿಳಿಸಿದರು. ಮಾಧ್ಯಾಹ್ನದಾವಾದಿಯಾಲ್ಲಿ ಸರಕಾರಿ ಪ.ಪೂ ಕಾಲೇಜಿನ ಶಿಕ್ಷಕರಾದ ಗಣೇಶ್ ಶೆಟ್ಟಿಗಾರರವರು GEOZEBRA ಕುರಿತು ಪ್ರಯೋಗಿಕವಾಗಿ ತಿಳಿಸಿದರು.

2nd Day. 30/12/2014

ಸಂಯೋಜಕರಾದ ಶ್ರೀಮತಿ ಜಾನ್ನವಿ & ಸಿಬ್ಬಂಧಿ ಸಮ್ಮುಖದಲ್ಲಿ ಪ್ರಾರಂಭವಾಯಿತು. ನಂತರ ದಿನದ ಕಾರ್ಯಕ್ರಮ ಹಂಚಿಕೆಯೊಂದಿಗೆ ಶ್ರೀ ಗಣೇಶ ಸರ್ ಹಾಗೂ ಶ್ರೀ ನಾಗರಾಜ ಸರ್ ರಿಂದ google ನಲ್ಲಿ ಹೋಗಿ e-mail ಅಡಿ creative ಮಾಡುವ ಬಗ್ಗೆ ತಿಳಿಸಿ ತಾವು ಸ್ವತ: ಮನನ ಮಾಡಿಸಿದರು. ಅದನ್ನು open ಮಾಡುವದು ಹಾಗೂ ವಿವಿಧ ಮಾಹಿತಿಯನ್ನು ತಯಾರಿಸಿ save ಮಾಡುವ ಬಗ್ಗೆ ತಿಳಿಸಿದರು. ಅದರಂತೆ save ಮಾಡುವ ಮಾಹಿತಿಯನ್ನು ತಮ್ಮ ತಮ್ಮ ಲ್ಲಿ ವಿನಿಮಯಮಾಡಿಕೊಳ್ಳಲು ಶ್ರೀ ಉಮೇಶ್ ಸರ್ ತಿಳಿಸಿದರು.

3rd Day. 31/12/2014

4th Day. 01/01/2014

5th Day. 02/01/2014

Batch 2

Agenda

If district has prepared new agenda then it can be shared here

See us at the Workshop

Workshop short report

1st Day

ಶ್ರೀ ಗಣೇಶ್ ಶೆಟ್ಟಿಗಾರ್, ಸಂಪನ್ಮೂಲ ಶಿಕ್ಷಕರು, ಎರಡನೇ ದಿನದಲ್ಲಿ ತಿಳಿಸಿಕೊಟ್ಟಿರುವ ಜೀಯೋಜೀಬ್ರಾ ಟೂಲ್ಸನ್ನು ಉಪಯೋಗಿಸಿ ತ್ರಿಭುಜಕ್ಕೆ ಪರಿವೃತ್ತ ರಚಿಸುವ , ಪರಿತ್ರಿಜ್ಯ ಅಳೆಯುವ ಹಾಗೂ ವೃತ್ತಕ್ಕೆ ಬಾಹ್ಯ ಬಿಂದುವಿನಿಂದ ಎರಡು ಸ್ಪರ್ಶಕಗಳನ್ನು ರಚಿಸುವ ಚಟುವಟಿಕೆಗಳನ್ನು ತಯಾರಿಸಿ ಅದನ್ನು ಇ ಮೈಲ್ ಮೂಲಕ ಕಳುಹಿಸುವ ಬಗ್ಗೆ ತಿಳಿಯಲಾಯಿತು. ನಂತರದ ಅವಧಿಯಲ್ಲಿ ಜಿಯೋಜಿಬ್ರದ ಟೂಲ್ಸ್‍ಗಳಾದ ಇನ್ಸರ್ಟ್ ಇಮೇಜ್‍ನ ಬಳಕೆ, ಹೊಸ ಟೂಲನ್ನು ರಚಿಸುವ ಹಂತಗಳನ್ನು ಚರ್ಚಿಸಿದ ನಂತರ ಅವುಗಳನ್ನು ಅಭ್ಯಾಸ ಮಾಡಲಾಯಿತು. ಅಪರಾಹ್ನದ ಅವಧಿಯಲ್ಲಿ ಪೆನ್ ಡ್ರೈವನ್ನು ಜಿಯೋಜಿಬ್ರದಲ್ಲಿ ಬಳಕೆ ಬಗ್ಗೆ ಶ್ರೀ ನಾಗರಾಜ್ ಸಂಪನ್ಮೂಲ ಶಿಕ್ಷಕರು ಮಾಹಿತಿ ನೀಡಿದರು. ಶ್ರೀ ಗಣೇಶ್ ಶೆಟ್ಟಿಗಾರ್, ಸಂಪನ್ಮೂಲ ಶಿಕ್ಷಕರು ನಂತರ ಜಿಯೋಜಿಬ್ರದ ಸ್ಲೈಡರ್ ಟೂಲ್ಸ್‍ನ ವಿಶೇಷತೆಗಳನ್ನು ಪರಿಚಯಿಸಿದರು. ಅದನ್ನು ಶಿಭಿರಾರ್ಥಿಗಳು ಬಾಹು ಮತ್ತು ಕೋನಗಳಿಗೆ ಅನ್ವಯಿಸಿ ಪ್ರಾಯೋಗಿಕವಾಗಿ ಕಲಿತರು. ಶ್ರೀ ಜಯಪ್ರಕಾಶ್ ಸಂಪನ್ಮೂಲ ಶಿಕ್ಷಕರು ಶಿಭಿರಾರ್ಥಿಗಳಿಗೆ ಸಹಕರಿಸಿದರು. ವಿರಾಮದ ಅವಧಿಯಲ್ಲಿ ಅಂತರ್ಜಾಲದಿಂದ ಗಣಿತದ ವಿವಿಧ ವೀಡಿಯೋಗಳನ್ನು ನೋಡುವ ವಿಧಾನವನ್ನು ಶ್ರೀ ಗಣೇಶ್ ಶೆಟ್ಟಿಗಾರ್, ಸಂಪನ್ಮೂಲ ಶಿಕ್ಷಕರು ತಿಳಿಸಿದರು. ಇದರೊಂದಿಗೆ ಮೂರನೇ ದಿನದ ತರಬೇತಿಯು ಸಂಪನ್ನಗೊಂಡಿತು.

2nd Day

3rd Day

4th Day

5th Day

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Kannada

Batch 1

Agenda

If district has prepared new agenda then it can be shared here

See us at the Workshop

Workshop short report

1st Day

ಎಮ್.ಐ.ಟಿ. ಇಂಜಿನಿಯರಿಂಗ್ ಕಾಲೇಜ್ ಮೂಡ್ಲಕಟ್ಟೆ- ಕುಂದಾಪುರ ಇಲ್ಲಿ ೫ ದಿನಗಳ ಕನ್ನಡ ಎಸ್.ಟಿ.ಎಫ್. ಕಾರ್ಯಗಾರ ಉದ್ಘಾಟನೆಗೊಂಡಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶೋಭಾ. ಪಿ. ಭಟ್ ಕಾರ್ಯಗಾರ ಉದ್ಘಾಟಿಸಿ ,ಶಿಕ್ಷಕರು ಆಧುನಿಕ ತಂತ್ರಜ್ಞಾನ ಉಪಯೋಗಿಸಿ ಪಾಠ-ಬೋಧನೆ ಮಾಡಲು ಕರೆ ನೀಡಿದರು. ಸಮಾರಂಭದಲ್ಲಿ ಡಯಟ್ ಉಡುಪಿ ಇಲ್ಲಿನ ಹಿರಿಯ ಉಪನ್ಯಾಸಕರಾದ ಶ್ರೀಮತಿ ಜಾಹ್ನವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಪನ್ಮೂಲ ಶಿಕ್ಷಕರಾಗಿ ಶ್ರೀ ಚಂದ್ರಶೇಖರ ಶೆಟ್ಟಿ, , ಶ್ರೀ ದತ್ತಾತ್ರೇಯ ಭಟ್, ಶ್ರೀ ವಿಶ್ವನಾಥ ಶೆಟ್ಟಿ, ಶ್ರೀ ರವೀಂದ್ರ ಪೂಜಾರಿ, ಶ್ರೀ ಫಕೀರಪ್ಪ ಉಪಸ್ಥಿತರಿದ್ದರು. ಶ್ರೀ ಚಂದ್ರಶೆಖರ್ ಶೆಟ್ಟಿ ಸ್ವಾಗತಿಸಿ, ಶ್ರೀ ಫಕೀರಪ್ಪ ವಂದಿಸಿದರು. ಶ್ರೀ ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಗಾರದಲ್ಲಿ ಬೈಂದೂರು, ಕುಂದಾಪುರ ಹಾಗೂ ಬ್ರಹ್ಮಾವರ ವಲಯದ ಶಿಕ್ಷಕರು ಭಾಗವಹಿಸಿದ್ದರು. ತಾಂತ್ರಿಕ ಸಹಾಕರಾಗಿ ಶ್ರೀ ಶಶಾಂಕ ಬೈಂದೂರು ಹಾಗೂ ಎಂ. ಐ,ಟಿ. ಮೂಡ್ಲಕಟ್ಟೆಯ ಶ್ರೀ ವಿಶ್ವನಾಥ ಮತ್ತು ಶಶಿ ಸಹಕರಿಸಿದರ

2nd Day

ಎ.ಟಿ.ಎಫ್. ತರಬೇತಿಯ ೨ ನೇಯ ದಿನ. ಶಿಬಿರಾರ್ಥಿಗಳ ಮುಖದಲ್ಲಿ ಕೌತುಕ . ಹಿಂದಿನ ದಿನ ತೆರೆದ ತಮ್ಮ ಮೇಲ್ ಗಳಿಗೆ ಯಾವ ಯಾವ/ ಯಾರಯಾರ ಸಂದೇಶಗಳು ಬಂದಿರಬಹುದೆಂಬ ಕಾತರ. ತೆರೆದು ನೋಡಿದವರ ವದನಗಳಲ್ಲಿ ಸಾರ್ಥಕಥೆಯ ಮಹಾಪೂರ. ಅಸಫಲರಾದವರ ಆನನ ಮುದುಡಿದ ತಾವರೆಯಾದಾಗ ಪುನಃ ಎಸ್.ಟಿ.ಎಫ್ ತಂಡಕ್ಕೆ ಅವರನ್ನು ಸೇರಿಸಿ ಸಾಂತ್ವನಗೊಳಿಸಿದವರು ಶ್ರೀ ಚಂದ್ರಶೇಖರ್ ಸರ್ ಅವರು. ಎಲ್ಲರ ಮೇಲ್ ಗಳಿಗೂ ಒಂದೇ ರೀತಿಯ ಸಂದೇಶಗಳು. ಇನ್ನೇನು ಮಾಡುವುದೆಂದು ಯೋಚಿಸುತ್ತಿರುವಾಗಲೇ ಮೊದಲನೆಯ ತಂಡದ ಶ್ರೀಯುತ ಸುಬ್ಬಣ್ಣ , ಸುಬ್ರಹ್ಮಣ್ಯ ರ ಸಹಭಾಗಿತ್ವದಲ್ಲಿ ಮೌಖಿಕ, ಲಿಖಿತ ಸುದೀರ್ಘ ವರದಿ ಮೂಡಿ ಬಂತು. ಅಷ್ಟರಲ್ಲಿ ಗೋಡೆಯ ಪರದೆಯಲ್ಲಿ ಎಮ್ಟಿ ಪಿಕಲ್ ಜಾರ್ ( ಖಾಲಿ ಉಪ್ಪಿನಕಾಯಿ ಭರಣಿ) ಎಂಬ ಸಾಕ್ಷ ಚಿತ್ರ ಕಾಣಿಸಿತು.. ತರಗತಿಯಲ್ಲಿ ಪಾಠ ಮಾಡಿ , ಅದರ ದಾಖಲೆ ಇಡುವ ಕಾರ್ಯಗಳಿಗೇ ಪುರುಸೊತ್ತಿಲ್ಲ ಇನ್ನು ಕಂಪ್ಯೂಟರಿನಲ್ಲಿ ಎಷ್ಟು ಹೊತ್ತಿಗೆ ಕೆಲಸ ಮಾಡುವುದೆಂದು ಯೋಚಿಸುವವರಿಗೆ ಗಾಲ್ಫ್ ಬಾಲ್ ತುಂಬಿದ ಜಾರ್ ನಲ್ಲಿಯೇ ಪುನಃ ಕಲ್ಲುಗಳು, ಮರಳು ಹಾಗೂ ಚಾಕೋಲೇಟು ದ್ರವ ಇವೆಲ್ಲವನ್ನು ತುಂಬಿಸಿ ದ್ದನ್ನು ಕಂಡು ಬುದ್ಧಿ ಬರಲೇಬೇಕು . ನಾನು ಪರಿಪೂರ್ಣ ನಾನೇನೋ ಕಲಿತಿದ್ದೇನೆ ಎಂದುಕೊಂಡರೂ ಕಲಿಯಬೇಕಾದ್ದು ಬೇಕಾದಷ್ಟಿದೆ ಎಂದು ಇದು ತಿಳಿಸಿತು. ಚಹಾ ವಿರಾಮದ ನಂತರ ತರಗತಿಯ ಪ್ರಾರಂಭಕ್ಕೂ ಮೊದಲು ಪರದೆಯಲ್ಲಿ ಮಂಗಳನ ಅಂಗಳಕ್ಕೆ ಉಪಗ್ರಹ ಉಡಾವಣೆಯ ಚಿತ್ರ ಕಾಣುತ್ತಿತ್ತು.. ಕೇವಲ ಮೂಟೆಯಂತೆ ಬಂದ ನಾವು ಇಲ್ಲಿನ ತರಬೇತಿಯ ನಂತರ ತಂತ್ರಜ್ಞಾನಿಗಳಾಗಿ ಬದಲಾಗುವ ಲಕ್ಷಣವಿದೆಯೆನಿಸಿತು . ಶ್ರೀ ಫಕೀರಪ್ಪನವರು ತಮ್ಮ ತರಗತಿಯಲ್ಲಿ ಮೇಲ್ ನ್ನು ತೆರೆದು ನೋಡುವ , ಉತ್ತರಿಸುವ, ಉಳಿಸುವ ವಿಧಾನಗಳನ್ನು ಸವಿವರವಾಗಿ ಹಂತ ಹಂತವಾಗಿ ತಿಳಿಸಿದರು. ನಂತರದ ಅವಧಿ ಪ್ರಾಯೋಗಿಕ ಕಾರ್ಯಕ್ಕಾಗಿ. ಚಹಾ ವಿರಾಮದ ನಂತರವೂ ಶಿಬಿರಾರ್ಥಿಗಳು ಅಂತರ್ಜಾಲದಲ್ಲಿರುವ ವಿವರ, ಚಿತ್ರ ಹಾಗೂ ಲಿಂಕ್ ಗಳನ್ನು ಉಳಿಸುವ, ಕಾಪಿ ಮಾಡುವ, ಪೇಸ್ಟ್ ಮಾಡುವ ಕೆಲಸದಲ್ಲಿ ಪೇಸ್ಟ್ ಆಗಿಯೇ ಹೋಗಿದ್ದರು. ಅಷ್ಟರಲ್ಲಿ ಅಂತರ್ಜಾಲದ ಬಲೆ ಹರಿದು ಹೋಗಿದ್ದು ಗಮನಕ್ಕೆ ಬಂದಾಗ ಆತಂಕ ಆಕಳಿಕೆ ಆರಂಭ ವಾದರೂ ಕೆಲವೇ ಕ್ಷಣಗಳಲ್ಲಿ ಬಲೆ ಸರಿಯಾದದ್ದು ತಂತ್ರಜ್ಞರ ಕೈಚಳಕಕ್ಕೆ ಸಾಕ್ಷಿಯಾಗಿತ್ತು. ನಂತರ ಶ್ರೀಯುತ ರಾಜು ಪೂಜಾರಿಯವರು ಬುಕ್ ಮಾರ್ಕ್ ಮತ್ತು ಇತಿಹಾಸಗಳ ಬಗ್ಗೆ ತಿಳಿಸಿಕೊಟ್ಟರು. ಕೊನೆಯಲ್ಲಿ ಕೀಲಿಮಣೆಯಲ್ಲಿ ಎಲ್ಲೆಲ್ಲಿ ಯಾವ ಬೆರಳುಗಳನ್ನು ಇಟ್ಟು ಅಕ್ಷರಗಳನ್ನು ಅಚ್ಚು ಮಾಡಬೇಕೆಂದು ತಿಳಿಸಿದರು. ತರಗತಿಯ ಕೆಲವು ವಿಷಯಗಳು ಪುನರಾವರ್ತನೆಯಾದಂತೆ ಎನಿಸಿದರೂ ವಿಷಯಗಳ ಮಂಥನ, ಮನನಗಳಿಗೆ ಇದರ ಅವಶ್ಯಕತೆಯಿದೆ ಎಂದು ಯೋಚಿಸಿದರೆ ಎರಡನೆಯ ದಿನದ ತರಬೇತಿ ಸಾರ್ಥಕವೆನಿಸುವುದರಲ್ಲಿ ಸಮದೇಹವೇ ಇಲ್ಲ. ಸಂಜೆ ಶಿಬಿರಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿತು..

3rd Day

ಎಲ್ಲರಿಗೂ ನಮಸ್ಕರಿಸುತ್ತಾ ೩ ನೇ ದಿನದ ವರದಿಯನ್ನು ತಂಡದ ಪರವಾಗಿ ವಾಚಿಸುತ್ತಿದ್ದೇನೆ. ಕಳೆದೆರಡು ದಿನಗಳಿಂದ ಅಂತರ್ಜಾಲದ ಮೋಡಿಗೆ ಮರುಳಾಗಿ ಬಹಳ ಅರ್ಥ ಪೂರ್ಣ ಗತಿಯಲ್ಲಿ ಸಾಗಿದ ಈ ಶಿಬಿರ ಮೂರನೇ ದಿನವು ಯಾವ ನಿರಾಸೆಯನ್ನು ಮೂಡಿಸದೆ ಮತ್ತಷ್ಟು ಹುರುಪನ್ನು ತುಂಬಿ ಎಲ್ಲಾ ಶಿಬಿರಾರ್ಥಿಗಳನ್ನು ನವ ಚೈತನ್ಯಗೊಳಿಸಿದುದರಲ್ಲಿ ಅನುಮಾನವಿಲ್ಲ. ಸಂಪನ್ಮೂಲವ್ಯಕ್ತಿಯಾಗಿ ದಿನದ ಮೊದಲ ಅಧಿವೇಶನವನ್ನು ನಡೆಸಿಕೊಟ್ಟ ಶ್ರೀ ಚಂದ್ರಶೇಖರ್ ಸರ್ ಇವರು ಗೂಗಲ್ ವೆಬ್ ನಲ್ಲಿ koer ವಿಳಾಸ ನೀಡಿದ್ರೆ ಯಾವೆಲ್ಲಾ ವಿಷಯದ ಮೇಲೆ ಮಾಹಿತಿಗಳ ಲಭ್ಯತೆ ಇವೆ. ಎನ್ನುವುದನ್ನು ತಿಳಿಸುತ್ತ ಉಪಯುಕ್ತ ಹಲವು ಕನ್ನಡ ವೆಬ್ ಸ್ಯೆಟ್ ಗಳನ್ನು ಪರಿಚಯಿಸಿದರು. ನಿಜಕ್ಕೂ ಆ ಗ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಣೆಯ ವಿರಾಡ್ರೂಪ ತನ್ನ ಒಂದೊಂದೇ ಮಜಲುಗಳನ್ನು ತೆರೆದು ಕೊಳ್ಳುತ್ತಾ ಹೋಗುತ್ತಿತ್ತು. ಆಗ ನನಗನ್ನಿಸಿದ್ದು ಇನ್ನು ಕೆಲವೇ ಕೆಲವು ದಶಕಗಳ ಬಳಿಕ ಭವ್ಯ ಗ್ರಂಥಾಲಯವೆಂಬೊಂದು ಕಟ್ಟಡ ಚಲಾವಣೆಯಲ್ಲಿಲ್ಲದ ನಾಣ್ಯದಷ್ಟೇ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಅವಸಾನದ ಅಂಚಿಗೆ ಸರಿಯುತ್ತದಲ್ಲ ಎನ್ನುವ ಸತ್ಯದ ವಿಚಾರ. ಮುಂದಿನ ಅವಧಿಯಲ್ಲಿ ಯಾವುದೇ ಕಿರಿಕಿರಿ ಇಲ್ಲದೇ ಟ್ಯೆಪು ಮಾಡಲು ಇರುವ ಯುನಿಕೋಡ್ ಸೌಕರ್ಯವನ್ನು ತಿಳಿಯುತ್ತಾ, ಕೀ ಬೋರ್ಡ್ ನ ಶೋರ್ಟ್ ಕಟ್ ಕೀ ನ ಮಾಹಿ ತಿಯನ್ನು ಕಲೆ ಹಾಕಿದೆವು. ಮಧ್ಯಾಹ್ನದ ಊಟದ ಬಳಿಕ ಮೇಯ್ಲ್ ನಲ್ಲಿ ಅಟ್ಯಾಚ್ ಮಾಡಿ, ಕಳುಹಿಸುವುದು.ಹಾಗೂ ಮೇಯ್ಲ್ ಐ.ಡಿಯಲ್ಲಿ ವಿಳಾಸ ನಮೂದಿಸುವುದು ಹಾಗೂ ಬ್ರೌಸ್ ಮುಖಾಂತರ ಚಿತ್ರ ಅಂಟಿಸುವುದನ್ನು ತಿಳಿದುಕೊಂಡೆವು. apps ನಲ್ಲಿ ಬರುವ ಎಲ್ಲಾ ವಿಷಯಗಳನ್ನು ಪರಿಚಯಿಸಲಾಯಿತು. ಹೆಚ್ಚಿನ ಮೆಮೊರಿಯನ್ನು ಸಂಗ್ರಹಿಸಲು ಸಹಾಯ ಮಾಡುವ ಗೂಗಲ್ ಡ್ರ್ಯೆವ್ ಅನ್ನು ಪರಿಚಯಿಸಿದರು. Appsನ ಇನ್ನೊಂದು ಅಂಶವಾದ ಗೂಗಲ್ ಮ್ಯಾಪ್ ಬಳಸಿಕೊಳ್ಳುವುದರ ಮೂಲಕ ಅಪರಿಚಿತ ಸ್ಥ ಳದ ಮಾರ್ಗ ನಕ್ಷೆಯನ್ನು ಸರಳ ರೀತಿಯಲ್ಲಿ ತಿಳಿಯಬಹುದಾದ ವಿಧಾನ ಹೇಳಿದರು. Translate ಸೌಲಭ್ಯವನ್ನು ಬಳಸಿಕೊಳ್ಳುವ ಸರಳ ತಂತ್ರವನ್ನು ತಿಳಿದೆವು. ಹೀಗೆ ಶ್ರೀ ಚಂದ್ರಶೇಖರ್ ಸರ್ ವಿಷಯ ಪ್ರಸ್ತುತಿಯೊಂದಿಗೆ ಅನುಕೂಲ ಕಲ್ಪಿಸುವ ಪೂರಕ ಮಾಹಿತಿಯನ್ನು ಒದಗಿಸಿ ಶಿಬಿರಾರ್ಥಿಗಳ ಶಿಬಿರದ ಸೆಳೆತ ವನ್ನು ಕಾಯ್ದುಕೊಂಡರು. ಚಹಾದ ಬಳಿಕ ಶ್ರೀ ರಾಜೀವ್ ಸರ್ ಅವರು ಪರಿಕಲ್ಪನಾ ನಕ್ಷೆ ಯ ಲ್ಲಿ ಪಾಠಯೋಜನೆಯ ವಿಧಾನವನ್ನು ತಿಳಿಸಿದರು. ಹೀಗೆ ಈ ಎಲ್ಲಾ ವಿಧಾನವನ್ನು ಶಿಕ್ಷಕರು ತಮ್ಮ ಸಿಸ್ಟಂನಲ್ಲಿ ಹೆಚ್ಚು ಸಮಯವನ್ನು ಪ್ರಾಯೋಗಿಕವಾಗಿ ಕಳೆದರು. ಕೊನೆಯಲ್ಲಿ ಶ್ರೀ ಫಕೀರಪ್ಪ ಸರ್ ಒಂದು ಸುಂದರವಾದ ಭಾವಗೀತೆಯನ್ನು ಹಾಡುವುದರ ಮೂಲಕ ಎಲ್ಲಾ ಶಿಕ್ಷಕರ ಮನ ತಣಿಸಿದರು. ಒಟ್ಟಿನಲ್ಲಿ ಮೂರನೆ ದಿನದ ಕಾರ್ಯಗಾರವು ಉತ್ತಮ ವಿಷಯ ಮಾಹಿತಿಯೊಂದಿಗೆ ಸೊಗಸಾಗಿತು.

4th Day

"ಕಂಪ್ಯೂಟರ್ ಕಲಿಯುವುದು ಕಷ್ಟ,ಕಲಿತ ಮೇಲೆ ಇಷ್ಟ,ಕಲಿಯದಿದ್ದರೆ ನಷ್ಟ"ಎನ್ನುವ ಪರಿಜ್ಞಾನದ ಹಿನ್ನಲೆಯಲ್ಲಿ ೧೯-೧೨-೨೦೧೪ ರ ನಾಲ್ಕನೇದಿನದ ಪ್ರಥಮ ಅವಧಿಯಲ್ಲಿ  ಶ್ರೀ ವಿಶ್ವನಾಥ ಶೆಟ್ಟಿಯವರು ತರಗತಿ ಕೋಣೆಯಲ್ಲಿ ಪರಿಣಾಮಕಾರಿಯಾದ ಬೋಧನೆಯಲ್ಲಿ ಅಂತರ್  ಜಾಲ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಗದ್ಯ ಮತ್ತು ಪದ್ಯ ಬೋಧನೆಯ ಹಂತಗಳನ್ನು ವಿವರಿಸುತ್ತಾ ಚರ್ಚೆಗೆ ಅವಕಾಶ  ನೀಡಿದರು.ಚಹಾ ವಿರಾಮದ ನಂತರ ೩ ನೇ ಅವಧಿಯಲ್ಲಿ  ಗದ್ಯಭಾಗದಲ್ಲಿ "ಎದೆಗೆ ಬಿದ್ದ ಅಕ್ಷರ" ಆಯ್ಕೆ ಮಾಡಿಕೊಂಡು ತಂತ್ರಜ್ಞಾನವನ್ನು ವಿವಿಧ ಹಂತಗಳಲ್ಲಿ  ಹೇಗೆ ಬಳಸಿಕೊಳ್ಳಬಹುದೆಂದು ವಸ್ತುನಿಷ್ಠವಾಗಿ ವಿವರಣೆ ನೀಡಿದರು. ಇದರೊಂದಿಗೆ ಶಿಬಿರಾರ್ಥಿಗಳ  ಹೊಸ ಯೋಜನೆ- ಯೋಚನೆಗಳಿಗೆ  ಅವಕಾಶವನ್ನು ಕೊಟ್ಟು ಕಲಿಸುವ ಮತ್ತು ಕಲಿಯುವ ಪ್ರಕ್ರಿಯೆಯಲ್ಲಿ ನಾವು  ಪಾಲುದಾರರಾದೆವು.ಪದ್ಯಭಾಗದಲ್ಲಿ  "ಹಕ್ಕಿ ಹಾರುತಿದೆ ನೋಡಿದಿರಾ " ಇದಕ್ಕೆ ಸಂಬಂದಿಸಿದ ಪದ್ಯಭಾಗದ ವಿವಿಧ ಹಂತವನ್ನು ತಲುಪಿದ್ದಲ್ಲದೇ ಪದಕ್ಕೆ ಬೇಕಾದ ಭಾವ ,ಅದಕ್ಕೆ ಸಂಬಂಧಿಸಿದ ಚಿತ್ತವನ್ನು  ಕ್ಷಣಾರ್ಧಾದಲ್ಲಿ ಒದಗಿಸಿ ಬೆರಗುಗಣ್ಣಿನ ಭಾವ ನಮ್ಮದಾಯಿತು ನಂತರ ಶಿಬಿರಾರ್ಥಿಗಳು ಮೊದಲೇ ಹಂಚಿಕೊಂಡಂತೆ  ಗದ್ಯ ಮತ್ತು ಪದ್ಯಕ್ಕೆ ವಿವಿಧ ಹಂತಗಳಲ್ಲಿ ತಂತ್ರಜ್ಞಾನವನ್ನು ಬಳಸಿ ೫ ನೇ  ದಿನದ ಪ್ರಾತ್ಯಕ್ಷಿತೆಗೆ ತಯಾರಿಯನ್ನು ಮಾಡುವುದರಲ್ಲಿ ತನ್ಮಯರಾದರು. ಊಟದ ವಿರಾಮದ  ನಂತರ ಮೊದಲ ಅವಧಿಯಲ್ಲಿ ಮಂಗಳೂರಿನ  ಸಿ .ಟಿ.ಇ ನ ಹಿರಿಯ ಉಪನ್ಯಾಸಕರಾದ ಡಾ,ಕುಮಾರಸ್ವಾಮಿಯವರ  ಜೊತೆ  ವಿಡಿಯೋ  ಕಾನ್ಪರೆನ್ಸನಲ್ಲಿ ಮಾತನಾಡಿ ಇಂಥಹದೊಂದುರ ತಂತ್ರಜ್ಞಾನ ಬಳಸಿ ತರಗತಿ ಕೋಣೆಯಲ್ಲಿ ಅಗತ್ಯ ಬಿದ್ದಾಗ ಸಂಬಂಧಪಟ್ಟ  ಸಂಪನ್ಮೂಲವನ್ನು ಹೇಗೆ  ಬಳಕೆಮಾಡಬಹುದು ಎನ್ನುವುದನ್ನು ಕಾಣಿಸಲಾಯಿತು. ನಂತರದ ಅವಧಿಯಲ್ಲಿ ಶಿಬಿರಾರ್ಥಿಗಳು ೫ ನೇ ದಿನದ ಅವಧಿಗೆ  ನೀಡಬೇಕಾದ ಪಾಠದ ತಯಾರಿಯಲ್ಲಿ  ಮಗ್ನರಾದಂತೆ  ಕಂಡು ಬಂದರೂ ಅದರ ಸಾರ್ಥಕತೆಯ ಭಾವ  ೫ ನೇ ದಿನಕ್ಕೆ ಎನ್ನುವ ತವಕ ಕಾಣುವಂತಿತ್ತು. ಕೊನೆಯ ಅವಧಿಯನ್ನು ಶಶಾಂಕರವರು  ಕ್ರೋಢಿಕ್ರತ ದಾಖಲೆ ನಿರ್ವಹಣೆಯ(spread sheet)ನ ಬಗೆಗೆ ಹೇಳಿದಾಗ ಪೆನ್ನು ,ಪೇಪರಿಗೆ ಎಳ್ಳುನೀರು ಬಿಡಬಹುದೆನೋ.......! ಎನಿಸಿತು.ಸಂಜೆಯ  ಸಾಂಸ್ರ್ಕತಿಕ ಕಾರ್ಯಕ್ರಮ ವಿಭಿನ್ನವಾಗಿ ಮೂಡಿಬಂತು. ಕಗ್ಗದ ಈ ಸಾಲುಗಳನ್ನು ಹೇಳಿ ನಮ್ಮ ತಂಡದ ವರದಿಯನ್ನು ಮುಗಿಸುತ್ತಿದ್ದೆವೆ.

"ಹಳೇಬೇರು ಹೊಸಚಿಗುರು ಕೂಡಿರಲು ಮರ ಸೊಬಗು

ಹಳೇತತ್ವ ಹೊಸಯುಕ್ತಿ ಒಡಗೂಡೆ ಧರ್ಮ

ಋಷಿವಾಕ್ಯದೊಡನೆ ವಿಜ್ಞಾನಮೇಳೈಸೆ

ಜಸವು ಜನಜೀವನಕ್ಕೆ ಮಂಕುತಿಮ್ಮ ||


5th Day

ಎಂಬ ಡಿ.ವಿ. ಜಿ. ಯವರ ಕಗ್ಗದ ಸಾಲು ಕೆ.ಎಸ್.ಟಿ.ಎ ಫ್ ತರಭೇತಿಗೆ ಪ್ರಸ್ತುತ ವೆನಿಸುತ್ತದೆ. ಯಾಕೆಂದರೆ ಇದುವರೆಗೆ ಪಾಠದ ಪುಸ್ತಕದ ಸುತ್ತಲು ತಿರುಗುವ ನಮ್ಮನ್ನು ಈ ತರಬೇತಿ ತಂತ್ರ ಜ್ಞಾನದತ್ತ ಮುಖ ತಿರುಗಿಸುವಂತೆ ಮಾಡಿದೆ. ಇಂತಹ ದಿಟ್ಟ ಹೆಜ್ಜೆಯ ೫ ನೇ ದಿನದ ವರದಿಯನ್ನು ತಮ್ಮ ಮುಂದೆ ಇಡುತ್ತಿದ್ದೇವೆ. ಶ್ರೀ ಪ್ರೇಮಾನಂದರವರ ೪ ನೇ ದಿನದ ವರದಿ ವಾಚನದೊಂದಿಗೆ ಈ ದಿನವು ಶುಭಾರಂಭಗೊಂಡಿ ತು. ಶಿಬಿರದ ವ್ಯವಸ್ಥಾಪಕರಾದ ಶ್ರೀ ಜಾಹ್ನವಿ ಸಿ. ಮತ್ತು ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ನಾವು ಪಡೆದ ಜ್ಞಾನವನ್ನು ಹಂಚಿಕೊಳ್ಳುವುದರೊಂದಿಗೆ ತಂತ್ರ ಜ್ಞಾನವನ್ನು ಸತತ ಅಧ್ಯಯನ ಹಾಗೂ ಅಭ್ಯಾಸದೊಂದಿಗೆ ಬಳಸಿಕೊಳ್ಳುವ ಬಗ್ಗೆ ಕಿವಿ ಮಾತು ಹೇಳಿದ್ದನ್ನು ನಾವು ೫ ತಂಡದವರು ಶಿರಸಾ ಪಾಲಿಸಿದೆವು. ಈ ಮೊದಲೇ ತಂಡಕ್ಕೆ ಹಂಚಿದ ಪಾಠ, ಪದ್ಯ ಭಾಗಗಳನ್ನು ನಾವು ಕಲಿತ ಮೈಂಡ್ ಮ್ಯಾಪ್, ಲಿಂಕ್ , ಟೆಕ್ಷ್ಟ್ ಟೈಪಿಂಗ್, ಅಂತರ್ಜಾಲ , ಗೂಗಲ್ ಮ್ಯಾಪ್, ಕೋಪಿ, ಪೇಸ್ಟ್ ಈ ಮೊದಲಾದ ತಂತ್ರ ಜ್ಞಾನವನ್ನು ಬಳಸಿಕೊಂಡು ಲಿಬ್ರ ಆಫೀಸ್ ರೈಟರ್ ನಲ್ಲಿ ಪಾಠಯೋಜನೆಯನ್ನು ತಂಡದ ಎಲ್ಲಾ ಸ್ಯರು ಸೇರಿ ಬಹಳ ಉತ್ಸುಕತೆಯಿಂದ ತಯಾರಿಸಿದೆವು. ಶ್ರೀ ವಿಶ್ವನಾಥ ಶೆಟ್ಟಿಯವರು ಹಾಕಿ ಕೊಟ್ಟ ಎಲ್ಲಾ ಹಂತಗಳನ್ನು ನಮ್ಮ ಪಾಠದಲ್ಲಿ ಸಮರ್ಪಕವಾಗಿ ಹೊಂದಿಸಿಕೊಂಡೆವು. ಎಷ್ಟುದಿನ ಬಾಳುವುದು ಕಾಗದದ ಕೋಟು ? ಎಂಬ ದಿನಕರ ದೇಸಾಯಿ ಯವರ ಚುಟಿಕಿನ ಸಾಲು ಅರ್ಥಪೂರ್ಣವೆನಿಸುವಂತೆ ಪೆನ್ನು, ಪುಸ್ತಕಗಳಿಲ್ಲದೆ ಮೊದಲ ತಂಡದಿಂದ ಹಕ್ಕಿ ಹಾರುತ್ತಿದೆ ನೋಡಿದಿರಾ ಎಂಬ ಪದ್ಯವನ್ನು, ೨ನೇ ತಂಡದಿಂದ ಅಮೇರಿಕಾದಲ್ಲಿ ಗೊರೂರು ಎಂಬ ಗದ್ಯವನ್ನು , ೩ನೇ ತಂಡದಿಂದ ಶಬರಿ ಎಂಬ ಗೀತ ನಾಟಕವನ್ನು , ೪ನೇ ತಂಡದಿಂದ ವಚನ ಸೌರಭ ಎಂಬ ಪದ್ಯವನ್ನು, ೫ನೇ ತಂಡದಿಂದ ಕೌರವೇಂದ್ರನ ಕೊಂದೆ ನೀನು ಎಂಬ ಪದ್ಯವನ್ನು ಒಬ್ಬರಿಗಿಂತ ಒಬ್ಬರು ಚೆನ್ನಾಗಿ ಮಂಡಿಸಿದರು. ಈ ನಡುವೆ ಚಹಾ ವಿರಾಮವನ್ನು ಮುಗಿಸಿದೆವು. ತದ ನಂತರ ಪ್ರತಿ ಪಾಠ ಮತ್ತು ಪದ್ಯದ ಕುರಿತು ಶಿಬಿರಾರ್ಥಿಗಳು ಚರ್ಚಿಸಿದರು. ಪ್ರತೀ ತಂಡದವರಿಗೆ ತಮ್ಮ ಯೋಜನೆಯನ್ನು ಮಿಂಚಂಚೆಯ ಮೂಲಕ ಕಳುಹಿಸಲು ಹೇಳಿದರು. ಅದರಂತೆ ಕೆಲವರು ಪಾಠವನ್ನು, ಕೆಲವರು ಮೈಂಡ್ ಮ್ಯಾಪ್ ನ್ನು ಸಂದೇಶ ರವಾನೆ ಮಾಡಿದರು. ಈ ತನ್ಮಧ್ಯೆ ಶಿಬಿರಾರ್ಥಿಗಳ ಗುಂಪು ಫೋಟೊ ವನ್ನು ಕ್ಲಿಕ್ಕಿಸಲಾಯಿತು. ಊಟದ ವಿರಾಮದ ನಂತರ ಶ್ರೀ ಚಂದ್ರಶೇಖರ್ ಶೆಟ್ಟಿಯವರು ಸ್ಕ್ರೀನ್ ಶೊಟ್ ಅಥವಾ ತೆರೆ ಚಿತ್ರದ ಬಗ್ಗೆ ತಿಳಿಸಿದರು.. ನಾವು ಕೆಲವು ಚಿತ್ರಗಳನ್ನು, ಬರಹಗಳನ್ನು ,ತೆರೆಚಿಲ್ರದ ಮೂಲಕ ಉಳಿಸಿ ಹೆಸರು ಕೊಟ್ಟೆವು. ಅನಂತರ ಅವರು ರೆಕಾರ್ಡ್ , ಮೈ ಡೆಸ್ಕ್ ಟೊಪ್ ಬಗ್ಗೆ ಕಲಿಸಿದರು. ಅನ್ವಯಕ್ಕೆ ಹೋಗಿ ವೀಡಿಯೋಗಳಿಗೆ ಬೇರೆ ಆಡಿಯೋ ಮುದ್ರಿಸುವುದನ್ನು ತಿಳಿದೆವು. ಮುಂದುವರಿಸುತ್ತಾ ಪೆನ್ ಡ್ರೈವ್ ಮತ್ತು ಮೆಮೊರಿ ಕಾರ್ಡ್ ನಲ್ಲಿರುವ ಮಾಹಿತಿಯನ್ನು ನಮ್ಮ ಕಂಪ್ಯೂಟರ್ರಮತ್ತು ಕಂಪ್ಯೂಟರ್ ನಿಂದ ಪೆನ್ ಡ್ರೈವ್ ಗೆ ವರ್ಗಾಯಿಸುವ ರೀತಿಯನ್ನು ಕಲಿಸಿ ಸಹಕರಿಸಿದರು. ಚಹಾ ವಿರಾಮದ ನಂತರ ಚಂದ್ರಶೇಖರ್ ಶೆಡ್ಡಿಯವರು ತಮ್ಮ ಅಗಾಧವಾದ ಕಂಪ್ಯೂಟರ್ ಜ್ಞಾನವನ್ನು ಹಂಚಿಕೊಳ್ಲುತ್ತಾ ಗೂಗಲ್ ಡ್ರೈವ್ ಬಗ್ಗೆ ತಿಳಿಸಿದರು. ಈ ನಡುವೆ ಜಾಹ್ನವಿ ಮೇಡಮ್ ರವರು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತದ್ದರು. ಶ್ರೀ ಫಕೀರಪ್ಪರವರು ಕೊಯರ್ ನಲ್ಲಿ ಶಿಕ್ಷಕರ ಇತ್ತೀಚಿನ ಶ್ಯೆಕ್ಷಣಿಕ ಕಾರ್ಯಕ್ರಮದಲ್ಲಿ ನಮ್ಮ ಅಭಿಪ್ರಾಯ ಅನಿಸಿಕೆಯನ್ನು ತುಂಬಲು ಮಾರ್ಗದರ್ಶನ ಮಾಡಿದರು. ಸಂಪನ್ಮೂಲ ವ್ಯಕ್ತಿಗಳ ಪಾದರಸದಂತಹ ಓಡಾಟ, ಉತ್ಸಾಹ ನಮ್ಮ ಕಲಿಕೆಯಲ್ನು ವೇಗಗೊಳಿಸಿತು. ಅನಿಸಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ತರಬೇತಿ ಮುಕ್ತಾಯವಾಯಿತು.ವಂದನೆಗಳೊಂದಿಗೆItalic text

Batch 2

Agenda

If district has prepared new agenda then it can be shared here

See us at the Workshop

05/01/2015 to 09/01/2015

2015-01-07 15.50.171.jpg

Workshop short report

1st Day. 05/01/2015

2nd Day. 06/01/2015

ಕನ್ನಡ ಸಾಹಿತ್ಯ ಲೋಕದ ಭೀಷ್ಮ ಎಂದೇ ಖ್ಯಾತರಾದ ಡಿ.ವಿ.ಜಿ. ಯವರ ಕಗ್ಗದ ಸಾಲಿನಿಂದ ಈ ವರದಿಯನ್ನು ಪ್ರಾರಂಭಿಸಲು ಹರ್ಷಿಸುತ್ತಿ ದ್ದೇನೆ.

ಹೊಸ ಬೇರು ಹಳೆ ಬೇರು ಕೂಡಿರಲು ಮರ ಸೊಬಗು

ಹೊಸಯುಕ್ತಿ ಹಳೆ ತತ್ತ್ವದೊಡಗೂಡೆ ಧರ್ಮ

ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ

ಜಸವು ಜನಜೀವನಕ್ಕೆ ಮಂಕುತಿಮ್ಮ

ಅರ್ಥ: ಹಳೆಯ ಬೇರಿನಿಂದ ಕೂಡಿದ ಮರ ಹೊಸ ಚಿಗುರಿನಿಂದ ಕೂಡಿದಾಗ ಸುಂದರವಾಗಿರುವುದು. ಹಳೆಯ ತತ್ತ್ವಗಳಿಂದ ಕೂಡಿದ ಧರ್ಮ ಹೊಸ ಯುಕ್ತಿಯಿಂದ ಕೂಡಿದರೆ ಚೆನ್ನ. ಪ್ರಾಚೀನ ಋಷಿವಾಣಿಯೊಡನೆ ವಿಜ್ಷಾನ ಕಲೆ ಕೂಡಿದರೆ ಜನಜೀವನ ಸುಂದರವಾಗುತ್ತದೆ. ಕನ್ನಡ ಎಸ್. ಟಿ. ಎಫ್. ತರಬೇತಿಯ ಎರಡನೆಯ ದಿನದ ತರಬೇತಿಯು ಡಯಟ್ ಉಪನ್ಯಾಸಕರಾದ ಶ್ರೀ ಭಾಸ್ಕರ್ ಶೇಟ್ ಅವರ ಉತ್ಸಾಹದ ಮಾತುಗಳಿಂದ ಆರಂಭವಾಯಿತು. ಮೊದಲಿಗೆ ಪ್ರಾರ್ಥನೆ ಟಿ. ಕೃಷ್ಣಶೆಟ್ಟಿ ಅವರ ಮಧುರ ಕಂಠದಿಂದ ಮೂಡಿಬಂತು. ನಾಗರಾಜ ಸರ್ ಇವರು ಮುಂದಾಲೋಚನೆಯ ಮಹತ್ವದ ಬಗ್ಗೆ ತಿಲಿಸುವ ಚಿಂತನೆಯನ್ನು ಮಂಡಿಸಿ ವೃತ್ತಿ ಬಾಂಧವರ ಗಮನ ಸೆಳೆದರು. ತದನಂತರ ಶ್ರೀಮತಿ ಮೀನಾಕ್ಷಿ ಇವರು ಮೊದಲ ದಿನದ ಸಮಗ್ರ ಮತ್ತು ಕಾವ್ಯಮಯವಾದ ವಿಸ್ತೃತ ವರದಿಯನ್ನು ಮಂಡಿಸಿದರು. ವರದಿಯ ಬಗ್ಗೆ ಮೆಚ್ಚುಗೆ ಮತ್ತು ಕಿರು ವಿಮರ್ಶೆ ನಡೆಯಿತು. ಎರಡನೇ ದಿನದ ತರಬೇತಿ ಫಕೀರಪ್ಪ ಅವರಿಂದ ಮಿಂಚಂಚೆ ಖಾತೆ ತೆರೆಯುವ ಬಗ್ಗೆ ವೃತ್ತಿ ಬಾಂಧವರಿಗೆ ಮಾರ್ಗದರ್ಶನ ಮಾಡುವ ಮೂಲಕ ಪ್ರಾರಂಭವಾಯಿತು. ನಮ್ಮೆಲ್ಲರ ಮಿಂಚಂಚೆ ಖಾತೆ ತೆರೆದ ನಂತರ ಪ್ರಾಯೋಗಿಕವಾಗಿ ತನ್ನ ಖಾತೆಗೆ ಮಿಂಚಂಚೆ ಕಳುಹಿಸುವಂತೆ ಹೇಳಿ ಅಗತ್ಯ ಮಾರ್ಗದರ್ಶನ ಒದಗಿಸಿದರು. ಈ ದಿನದ ತರಬೇತಿಯ ಬಹುತೇಕ ಅವಧಿ ಗಣಕ ಯಂತ್ರದೊಂದಿಗಿನ ಸರಸಕ್ಕೆ ಮೀಸಲಾಗಿತ್ತು. ಗಣಕ ಯಂತ್ರದಲ್ಲಿ ಕೀಲಿಮಣೆ ಬಳಕೆಯ ಬಗ್ಗೆ ಸುಬ್ರಹ್ಮಣ್ಯ ಭಟ್ ಅವರು ಉಪಯುಕ್ತ ಮಾಹಿತಿ ನೀಡಿದರು. ಕಲಿಕಾರ್ಥಿಗಳ ಕೋರಿಕೆಯ ಮೇಲೆ ಪುನಃ ಪುನಃ ಮಾಹಿತಿ ಒದಗಿಸಿ ಕಲಿಕೆ ದೃಢಗೊಳ್ಳಲು ಸಹಕರಿಸಿದರು. ಬೆಳಗ್ಗಿನ ಟೀ ವಿರಾಮದ ನಂತರ ಮತ್ತೆ ಸೇರಿದಾಗ ಶ್ರೀ ಚಂದ್ರಶೇಖರ ಶೆಟ್ಟಿ ಹಾಗೂ ಸುಬ್ರಹ್ಮಣ್ಯ ಅವರು ಜಂಟಿಯಾಗಿ ಗಣಕಯಂತ್ರವನ್ನು ಬಳಸುವ ಬಗ್ಗೆ ಪ್ರಾಯೋಗಿಕವಾದ ಮಾಹಿತಿಯನ್ನು ನೀಡಿದರು. ಗಣಕಯಂತ್ರದಲ್ಲಿ ನಮಗೆ ಉಪಯುಕ್ತವಾದ ಅಂತರ್ಜಾಲ ತಾಣಗಳನ್ನು ತಲುಪುವ ಮಾರ್ಗವನ್ನು ಎಳೆ ಎಳೆಯಾಗಿ ತಿಳಿಸಿದರು. ಊಟದ ವಿರಾಮದ ನಂತರ ಮತ್ತೆ ಈ ಹವಾನಿಯಂತ್ತಿತ ಕೊಠಡಿಯಲ್ಲಿ ಸೇರಿದೆವು. ಶ್ರೀ ನಾರಾಯಣ ಮಣೂರು ಇವರಿಂದ "ಬಿದಿರು" ಕವಿತೆಯ ಗಾಯ ನವನ್ನು ಸವಿದೆವು. ನಂತರ ಸುಬ್ರಹ್ಮಣ್ಯ ಭಟ್ ಮತ್ತು ಚಂದ್ರಶೇಖರ ಶೆಟ್ಟಿ ಅವರು ಜಂಟಿಯಾಗಿ ಅಂತರ್ಜಾಲ ಬಳಕೆಯ ವಿಧಾನವನ್ನು ತಿಳಿಸಿದರು. ಈ ನಡುವೆ ಭಾರತೀಯತೆ ಪದ್ಯದ ದೃಶ್ಯ ಸಂಯೋಜನೆ ಯೊಂದಿಗಿನ ಗಾಯನವನ್ನು ಕಂಡು ಕೇಳಿ ಸಂತಸಪಟ್ಟೆವು. ಟರ್ನೆಟ್ ನಿಂದ ನಮಗೆ ಬೇಕಾದ ಮಾಹಿತಿಯನ್ನು ಆಯ್ದುಕೊಂಡು ನಮಗೆ ಅಗತ್ಯವಿರುವಲ್ಲಿ ಉಳಿಸುವುದನ್ನು ತಿಳಿಸಿದರು. ಅದರಂತೆ ಶಿಬಿರಾರ್ಥಿಗಳು ಈ ಕಾರ್ಯದಲ್ಲಿ ಯಶಸ್ವಿಯಾದರು. ಸಂಜೆ ಚಹಾ ವಿರಾಮದ ನಂತರ ಸೇರಿದಾಗ ಅಂತರ್ಜಾಲದಲ್ಲಿ ಅಗತ್ಯವಿರುವ ಚಿತ್ರಗಳನ್ನು ಆಯ್ಕೆ ಮಾಡುವ ಮತ್ತು ಅಗತ್ಯವಿರುವಲ್ಲಿ ಬಳಸುವ ಕಲೆಯನ್ನು ತಿಳಿಸಿದರು. ಈ ದಿನದ ಕೊನೆಯ ಕಲಿಕಾಂಶವಾಗಿ ವೆಬ್ ಲಿಂಕ್ ಸೇವ್ ಮಾಡುವುದನ್ನು ಚಂದ್ರಶೇಖರ ಶೆಟ್ಟಿ ಅವರು ತಿಳಿಸುವಾಗ ಸಮಯ ಸರಿದಿದ್ದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎರಡನೇ ದಿನದ ತರಬೇತಿ ಕ್ತಾಯವಾಯಿತು. ಇಲ್ಲಿ ಗೆ ಎರಡನೇ ದಿನದ ವರದಿಗೆ ಪೂರ್ಣ ವಿರಾಮವನ್ನು ಇಡುತ್ತೇನೆ. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ"


3rd Day. 07/01/2015

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣೆ

ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ವ

ವಸ್ತು ಸಾಕ್ಷಾತ್ಕಾರವು ಅಂತರೀಕ್ಷಣೆಯಿಂದ

ಶಾಸ್ತ್ರಿತನದಿಂದಲ್ಲ ಮಂಕುತಿಮ್ಮ

ಡಿ. ವಿ. ಜಿ.ಯವರ ಕಗ್ಗದ ಈ ಸಾಲಿನೊಂದಿಗೆ ವರದಿ ನಿಮ್ಮ ಮುಂದೆಯಿಡುತ್ತಿದ್ದೇನೆ. ೩ನೇ ದಿನದ ಕಾರ್ಯಗಾರವು ಗೀತ ಶೆಟ್ಟಿಗಾರ್ ರವರ ಪ್ರಾರ್ಥನೆಯೊಂದಿಗೆ ಶುಭಾರಂಭಗೊಂಡಿತು. ಅರ್.ಟಿ.ಭಟ್ ಅವರು ಚಿಂತನವನ್ನು ಮಂಡಿಸಿದರು. ಪ್ರಶಾಂತ ಸರ್ ರವರು ೨ನೇ ದಿನದ ವರದಿಯನ್ನು ವಾಚಿಸಿದರು. ನಂತರ internet web link save ಮಾಡುವ ಬಗ್ಗೆ ಶಿಬಿರಾರ್ಥಿ ಗಳು ಆತುರದಿಂದ ಕಾರ್ಯಪ್ರವೃತ್ತರಾದರು. ನಂತರ ಪಕೀರಪ್ಪ ಸರ್ ರವರು ತಮ್ಮ ತಮ್ಮ ಐ.ಡಿ ಯನ್ನು ತೆರೆದು ನೋಡಲು ಹೇಳಿದಾಗ ಎಲ್ಲರು ಕುತೂಹಲದಿಂದ ತಮ್ಮ ಐ,ಡಿ ಯನ್ನು ತೆರೆದು ಕೊಂಡರು .ಮೇಲ್ ನ್ನು ತೆರೆಯುವ ಮತ್ತು ಕಳಿಸುವ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದರು .ಚಾ ವಿರಾಮದ ನಂತರ ಸುಬ್ರಹ್ಮಣ್ಯ ಸರ್ ರವರು text typing ಬಗ್ಗೆ ತಿಳಿಸಿದರು.ನಂತರದಲ್ಲಿ ಸುಭೀಕ್ಷಾ ಮೇಡ೦ರವರು mind mapಬಗ್ಗೆ ಮಾಹಿತಿ ನೀಡಿದಾಗ ನಾವೆಲ್ಲರೂ mind map ತಯಾರಿಸಿ ಊಟಕ್ಕೆ ತೆರಳಿದೆವು. ಮದ್ಯಾಹ್ನ ದ ತರಬೇತಿ ಯು ಮೀನಾಕ್ಷಿ ಮೇಡಂ ರವರ ಭಾವಗೀತೆ ಯೊಂದಿಗೆ ಪ್ರಾರಂಭವಾಯಿತು. ಪಕೀರಪ್ಪ ಸರ್ ರವರು mobileನಲ್ಲಿ voice searchಮಾಡುವ ವಿಧಾನವನ್ನು ತಿಳಿಸಿ ಕೊಟ್ಟರು. ಚಂದ್ರ ಶೇಖರ ಶೆಟ್ಟಿ ಯವರು google feature & koer operate ಮಾಡುವ ವಿಧಾನ ಮತ್ತು ಅದರ ಮಹತ್ವ ವನ್ನು ತಿಳಿಸಿದರು. ಚಾ ವಿರಾಮದ ನಂತರ ಗುಂಪು ಪೋಟೋ ವನ್ನು ತೆಗೆದರು.ಆಮೇಲೆ ಮೇಲ್ ನಲ್ಲಿ ಪೋಟೋವನ್ನು ಹಾಕುವುದು ಮತ್ತು address display ಬಗ್ಗೆ ಮಾಹಿತಿ ನೀಡಿ ಗೂಗಲ್ ಲೋಕಕ್ಕೆ ಕೊಂಡೊಯ್ದರು. ಹಸಿವಿನಿ೦ದ ಬಳಲುವ ಸ್ಥಿತಿಯ ಒಂದು ವೀಡಿ ಯೋ ತೋರಿಸಿ ದ್ದು ಆಹಾರದ ಮಹತ್ವ ಕುರಿತು ಅರಿವು ಮೂಡಿಸಿತು.ಬದಲಾದ ಕಾಲಘಟ್ಟದಲ್ಲಿ ಕನ್ನಡ ಶಿಕ್ಷಕರಾದ ನಾವೆಲ್ಲರು ಹೊಸ ಹೊಸ ತಂತ್ರಜ್ಞಾನ ಬಳಸಿಕೊಂಡು ನಮ್ಮ ಬೋಧನೆಯನ್ನು ಪರಿಣಾಮಕಾರಿಯಾಗಿಸೋಣ. ನಂತರ ತರಬೇತುದಾರರಿಂದ ವಿವಿಧ ಮನೋರಂಜನ ಕಾರ್ಯಕ್ರಮ ನಡೆಯಿತು.

4th Day. 08/01/2015

ಜ್ಞಾನದಿಂ ಮೇಲಿಲ್ಲ ಶ್ವಾನನಿಂ ಕೀಳಿಲ್ಲ

ಭಾನುವಿನಿಂದಧಿಕ ಬೆಳಕಿಲ್ಲ

ಜಗದೊಳಗೆ ಜ್ಞಾನವೇ ಮಿಗಿಲು ಸರ್ವಜ್ಞ.

ಎನ್ನುವ ಸರ್ವಜ್ಞನ ವಚನದಂತೆ ಜ್ಞಾನಕ್ಕಿಂತ ಮಿಗಿಲಾದುದು ಈ ಜಗತ್ತಿನಲ್ಲಿ ಯಾವುದು ಇಲ್ಲ.ಹಾಗೆಯೇ ವಿದ್ಯೆಯಿಂದ ವಿನಯವೂ, ವಿನಯದಿಂದ ಸಚ್ಚಾರಿತ್ರ್ಯವೂ, ಸಚ್ಚಾರಿತ್ರ್ಯದಿಂದ ಧನ ಧರ್ಮ, ಸುಖ,ಶಾಂತಿ,ಸಕಲ ಸಂಪದವು ಲಭಿಸುತ್ತದೆ.ಎನ್ನುವುದು ಶ್ಲೋಕೋಕ್ತಿ. ಮೊಗೆದಷ್ಟು ಮಿಗುವ ಈ ಜ್ಞಾನ ಸಂಪತ್ತನ್ನು ಪಡೆಯುವ ಮಾರ್ಗದ ಬೆಳಕಿಂಡಿ ಯೇ ಈ ಕಂಪ್ಯೂಟರ್ ಶಿಕ್ಷಣ. ಈ ನಿಟ್ಟಿನಲ್ಲಿ ಡಯಟ್ ಹಮ್ಮಿಕೊಂಡಿರುವ ತರಬೇತಿ ಕಾರ್ಯಕ್ರಮದ ನಾಲ್ಕನೇ ದಿನದ ವರದಿಯನ್ನು ಇದೀಗ ತಮ್ಮ ಮುಂದೆ ಮಂಡಿಸುತ್ತೇನೆ.ನಾಲ್ಕನೇ ದಿನದ ತರಬೇತಿ ಕಾರ್ಯಕ್ರಮವು ಶ್ರೀ ನಾರಾಯಣ ಸರ್ ಅವರು ಮಾಡಿದ ಪ್ರಾರ್ಥನೆ ಯೊಂದಿಗೆ ಶುಭಾರಂಭಗೊಂಡಿತು.ಬಳಿಕ ಹಿತಮಿತ ಮೃದುವಚನದೊಂದಿಗೆ ನಿಷ್ಟೆಯ ಕಾಯಕವೇ ಶ್ರೇಷ್ಟ ಎನ್ನುವುದನ್ನು ಶ್ರೀ ಗ್ರಹಪತಿ ಸರ್ ತಮ್ಮ ಚಿಂತನದಲ್ಲಿ ತಿಳಿಸಿದರು. ಅನಂತರ ಮೂರನೇ ದಿನದ ವರದಿಯನ್ನು ಶ್ರೀಮತಿ ಗೀತ ಮೇಡಮ್ ಅವರು ಸವಿಸ್ತಾರವಾಗಿ ಮಂಡಿಸಿದರು. ನಾಗರಾಜ ಸರ್ ಸ್ವರಚಿತ ಕವನ ವಾಚಿಸಿರು. ಅನಂತರ ಫಕೀರಪ್ಪ ಸರ್ ಅವರು ಲಿಂಕ್ ಸೇವ್ ಮಾಡುವುದರ ಮಾಡುವುದರ ಮಹತ್ವ ಮತ್ತು ಅದರ ಉಪಯೋಗವನ್ನು ತಿಳಿಸಿದರು. ಹಾಗೂ ಇ ಮೇಲ್ ಐಡಿಯಲ್ಲಿ ವಿಳಾಸವನ್ನು ದಾಖಲಿಸುವ ಕಾರ್ಯದಲ್ಲಿ ನಿರತರಾದ ಶಿಭಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ಪೂರ್ವಾಹ್ನ ೧೧ ಗಂಟೆಗೆ ಆಗಮಿಸಿದ ಉಡುಪಿ ಡಯೆಟ್ ನ ಪ್ರಾಂಶುಪಾಲರಾದ ಶ್ರೀ ಶೇಖರ್ ಸರ್ ಅವರನ್ನು ಫಕೀರಪ್ಪ ಸರ್ ಸ್ವಾಗತಿಸಿದರು.ಶೇಖರ ಸರ್ ಅವರು ತರಬೇತಿಯ ಮಹತ್ವ ಹಾಗೂ ಇಂದಿನ ಕಾಲಘಟ್ಟದಲ್ಲಿ ತಂತ್ರಜ್ಞಾನದ ಅರಿವಿನ ಅಗತ್ಯತೆಯ ಬಗ್ಗೆ ತಿಳಿಸುತ್ತ ಎಲ್ಲರೂ ಗಣಕಯಂತ್ರ ಹೊಂದಿರಲೇಬೇಕೆಂಬ ಸಲಹೆ ನೀಡಿದರು. ಸುಭಿಕ್ಷಾ ಮೆಡಂ ಅವರು ಗೂಗಲ್ ಮ್ಯಾಪ್ ಹಾಗೂ ಸೆಟಲೈಟ್ ಕುರಿತಾದ ಪ್ರಾಯೋಗಿಕ ಜ್ಞಾನವನ್ನು ಮತ್ತು ದಾಖಲೆ ನಿರ್ವಹಣೆ ಕುರಿತಾದ ಸವಿಸ್ತಾರವಾದ ಮಾಹಿತಿ, ಬುಕ್ ಮಾರ್ಕ್ ಮಾಡುವುದು ,ನೋಡುವುದು ಹಾಗೂ ಅದರ ಉಪಯೋಗಳ ಬಗ್ಗೆ ತಿಳಿಸಿದರು.ಚಾ ವಿರಾಮದ ನಂತರ ಮಿಂಚಂಚೆಗೆ ಪ್ರತಿಕ್ರಿಯೆ ಕಳುಹಿಸುವುದರ ಕುರಿತು ಮಾಹಿತಿ ನೀಡಿದರು . ಮಧ್ಯಾಹ್ನದ ಭೋಜನ ವಿರಾಮದ ತರುವಾಯ ಚಂದ್ರಶೇಖರ್ ಸರ್ ಅವರು ತೆರೆ ಚಿತ್ರ, ವಿಡಿಯೊ ಧ್ವನಿ ಮುದ್ರಣದ ಕುರಿತು ವಿವರಿಸಿದರು. ಚಾವಿರಾಮದ ನಂತರ ನಮ್ಮ ಜೀವನದ ಹಲವು ಆಯ್ಕೆಗಳಲ್ಲಿ ಯಾವುದಕ್ಕೆ ಆದ್ಯತೆಯನ್ನು ನೀಡಿದರೆ ಜೀವನ ಸುಖಮಯ ವಾಗಿರುತ್ತದೆ ಎನ್ನುದರ ಕುರಿತಾದ ಒಂದು ವಿಡಿಯೊ ಕ್ಲಿಪಿಂಗ್ ವೀಕ್ಷಿಸಿದೆವು. ಬಳಿಕ ಚಂದ್ರಶೇಖರ ಸರ್ ಅವರು ಗೂಗಲ್ ನಲ್ಲಿರುವ ಎಲ್ಲಾ ವೈವಿಧ್ಯಮಯ ನವೀನ ತಂತ್ರಜ್ಞಾನ ಗಳ ಬಗ್ಗೆ ಮಾಹಿತಿ ನೀಡಿದರು. ಬಳಿಕ ಭಾಷಾಂತರಿಸುವ ವಿಧಾನ ಹಾಗೂ ಪಾಸ್ ವರ್ಡ್ ಬದಲಾಯಿಸುವ ಕುರಿತಾದ ಅಗತ್ಯ ಮಾಹಿತಿಗಳನ್ನು ನೀಡಿದರು. ಶಿಬಿರಾರ್ಥಿಗಳು ಕುತೂಹಲದಿಂದ ಆಲಿಸಿ ದಾಖಲಿಸುತ್ತಿದ್ದಂತೆ ಸಮಯ ಸರಿಯಿತು. ಫಕೀರಪ್ಪ ಸರ್ ಅವರ ಧನ್ಯವಾದಗಳೊಂದಿಗೆ ತರಬೇತಿ ಮುಕ್ತಾಯಗೊಂಡಿತು.ಈ ತರಬೇತಿ ನೀಡಿದರು..ಮುಂದಿನ ದಿನಗಳಲ್ಲಿ ಈ ಜ್ಞಾನವನ್ನು ಇನ್ನಷ್ಟು ಪರಿಪಕ್ವಗೊಳಿಸಿಕೊಂಡು ಹಲವಾರು ಬದುಕುಗಳನ್ನು ಬೆಳಗಿಸುವ ಸುಜ್ಙಾನದ ದೀವಿಗೆಯಾಗೋಣ ಎನ್ನುವ ಸದಾಶಯದೊಂದಿಗೆ ಪೂರ್ಣ ವಿರಾಮ ಇಡುತ್ತೇನೆ.

5th Day. 09/01/2015

Batch 3

Agenda

If district has prepared new agenda then it can be shared here

See us at the Workshop

12/01/2015 to 17/01/2015

DSC002319.JPG

Workshop short report

1st Day. 12/01/2015

ಶ್ರೀ ಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯ ಬಂಟಕಲ್ಲು ಇಲ್ಲಿ ನಿಯೋಜನೆಗೊಂಡ ೫ ದಿನಗಳ ಕನ್ನಡ ವಿಷಯ ತರಬೇತಿಯ ವೇದಿಕೆ ದಿನಾಂಕ: ೧೨-೦೧-೨೦೧೫ ರಂದು ಆರಂಭಗೊಂಡಿತು. ಜನವರಿ ತಿಂಗಳು ಎಂದರೆ ಶಿಕ್ಷಕರಿಗೆ ತುಂಬಾ ಒತ್ತಡ ತರುವಂತ ಸಮಯ. ಆದರೂ ಹೆಚ್ಚಿನ ಸಂಖ್ಯೆಯಲ್ಲಿ ಹೊಸತನವನ್ನು ಅರಿತುಕೊಳ್ಲುವ ಉದ್ದೇಶದಿಂದ ಹಾಜರಾಗಿದ್ದರು. ಕಾರ್ಯಕ್ರಮವನ್ನು ಅಧ್ಯಾಪಕ ಶ್ರೀ ನಾಗರಾಜ ಮೊಗೇರರವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಈ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ರಾಧಾಕೃಷ್ಣ ಐತಾಳ್ ರವರು ಸಾಂಕೇತಿಕವಾಗಿ ಗಣಕ ಯಂತ್ರದ ಗುಂಡಿಯನ್ನು ಒತ್ತುವುದರ ಮೂಲಕ ದೀಪ ಪ್ರಜ್ವಲನಗೊಳ್ಳುವಂತೆ ಮಾಡಿ ಉದ್ಘಾಟಿಸಿದರು. ಡಯೆಟ್ ಪ್ರಾಂಶುಪಾಲರಾದ ಶ್ರೀ ಶೇಖರ್, ಕನ್ನಡ ವಿಷಯ ಪರಿವೀಕ್ಷಣಾಧಿಕಾರಿ ಶ್ರೀಮತಿ ಉಮಾ ಉಪಸ್ಥಿತರಿದ್ದರು. ಶ್ರೀ ಭಾಸ್ಕರ್ ಶೇಟ್ ಸಂಯೋಜಕರಾಗಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎಂ.ಫಕೀರಪ್ಪ ,ಚೇತನಾ ಪ್ರೌಢಶಾಲೆ ಹಂಗಾರಕಟ್ಟೆ ಕಾರ್ಯಕ್ರಮವನ್ನು ನಿರ್ವಹಿಸಿದರು ಮತ್ತು ಶ್ರೀ ಸುಬ್ರಮಣ್ಯ ಭಟ್ , ಪ್ರೌಢಶಾಲೆ ಹೈಕಾಡಿ ಇವರು ಧನ್ಯವಾದವನಿತ್ತರು. ಚಹಾ ವಿರಾಮದ ಬಳಿಕ ಶ್ರೀ ಭಾಸ್ಕರ್ ಶೇಟ್ ರವರು ಈ ತರಬೇತಿಯ ಉದ್ದೇಶಗಳನ್ನು , ಕನ್ನಡದ ಇಲಿ (ಮೌಸ್) ಭಾಷಾ ತಂತ್ರಜ್ಞಾನ , ಕೋಯರ್, ಉಬಂಟು ಸಾಫ್ಟ್ವೇರ್ (ಉಚಿತವಾಗಿ ಕೊಡಮಾಡಲ್ಪಟ್ಟ ತಂತ್ರಜ್ಞಾನ ) ಇವುಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಬಳಿಕದ ಅವಧಿಗೆ ಶ್ರೀ ಸುಬ್ರಮಣ್ಯ ಭಟ್ ರವರು ಗಣಕ ಯಂತ್ರದ ಕೀ ಗಳಾದ ಬ್ಯಾಕ್ ಸ್ಫೇಸ್, ಕರ್ಸರ್, ಡಿಲೀಟ್, ಎಂಟರ್, ಕ್ಯಾಪ್ಸ್ ಲಾಕ್, ಕೋಫಿ ಮಾಡುವುದು , ಅಂಟಿಸುವುದು, ಸೇವ್ ಮಾಡುವುದು, ಹಿಂದಿನ ಕಡತಗಳ ಮುಂದಿನ ಬದಲಾವಣೆ , ಅಕ್ಷರಗಳ ಗಾತ್ರದ ಬದಲಾವಣೆ ಹೀಗೆ ಗಣಕ ಯಂತ್ರದಲ್ಲಿ ಬರುವ ಸಂಕೇತಗಳನ್ನು ವಿದ್ಯಾರ್ಥಿಗಳಿಗೆ ವ್ಯಕ್ತಪಡಿಸುವ ರೀತಿಯಲ್ಲಿ ತಿದ್ದಿ ತೀಡಿ ತಿಳಿಯಪಡಿಸಿದರು. ಮಧ್ಯಾಹ್ನ ಊಟದ ವಿರಾಮದ ಬಳಿಕ ಶ್ರೀಮತಿ ಸುಶೀಲಾ ಟೀಚರ್ ರವರು 'ಕೌರವೇಂದ್ರನ ಕೊಂದೆ ನೀನು' ಕಾವ್ಯವನ್ನು ಸುಶ್ರಾವ್ಯವಾಗಿ ಹಾಡಿದರು.ಇಂಟರ್ ನೆಟ್ ವ್ಯವಸ್ಥೆ ಕೆಟ್ಟುದುದರಿಂದ ಎಷ್ಟೊ ತಿಳಿಸಬೇಕಾದ ವಿಚಾರಗಳನ್ನು ತಿಳಿಸುವುದಕ್ಕೆ ಸಂಪನ್ಮೂಲ ವ್ಯಕ್ತಿಗಳಿಗೆ ಅಸಾಧ್ಯವಾಯಿತು. ಆದರೂ ಶ್ರೀ .ಎಂ. ಫಕೀರಪ್ಪರವರು ಗಣಕ ಯಂತ್ರದ ಮೂಲಕ ಪಾಠ ಯೋಜನೆಯ ತಯಾರಿಯ ಮಾಹಿತಿಯನ್ನು ನೀಡಿದ್ದರಲ್ಲದೆ,ಕನ್ನಡ ಶಿಕ್ಷಕರ ವಿಷಯ ವೇದಿಕೆ ರಾಜಾದ್ಯಂತ ಯಾವ ರೀತಿ ಸಹಾಯ ಮಾಡುತ್ತದೆಂಬುದನ್ನು ತಿಳಿಸಿದರು. ಚಹಾ ವಿರಾಮದ ಬಳಿಕ ಶ್ರೀ. ಎಂ. ಫಕೀರಪ್ಪ ಸರ್ ರವರು ಆಂಡ್ರೋಯ್ಡ್ ಮೊಬೈಲ್ ನ ವಾಯ್ಸ್ ಸರ್ಚನ ಮುಖಾಂತರ ತಕ್ಷಣವೇ ಪಾಠಕ್ಕೆ ಸಂಬಂಧಿಸಿದ ವಿಷಯಗಳನ್ನು ಕಲೆ ಹಾಕುವುದನ್ನು ತಿಳಿಸಿದರು. ಪಾಠದ ಪರಿಕಲ್ಪನಾ ನಕ್ಷೆಯನ್ನು ತಯಾರಿಸುವ ರೀತಿಯನ್ನು ತಿಳಿಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಹುದುಗಿರುವ ಕೌಶಲ್ಯವನ್ನು, ಸೃಜನಶೀಲತೆಯನ್ನು ಹೊರಹೊಮ್ಮಿಸಲು ಸಾಧ್ಯ ಯೆಂಬುದನ್ನು ಮನನ ಮಾಡಿದರು. ಸನಿವಾಸ ತರಬೇತಿಯಾದುದರಿಂದ ಬಳಿಕ ಸಾಂಸ್ಕೃತಿ ಕಾರ್ಯಕ್ರಮಗಳು ನಡೆದವು.

2nd Day. 13/01/2015

ವರದಿ ಎಂದರೆ ದಿನದ ಕಾರ್ಯಕ್ರಮಗಳ ಕೈಗನ್ನಡಿ. ವೈದೇಹಿ ತಂಡದ ವತಿಯಿಂದ ದಿನಾಂಕ 13/1/15ರಂದು ನಡೆದ S.T.F ಮೂರನೇ ಹಂತದ ತರಬೇತಿಯ 2ನೇ ದಿನದ ವರದಿ. ಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ಸಹಶಿಕ್ಷಕಿಯಾದ ಶ್ರೀಮತಿ ಭಾರತಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭವಾಯಿತು.ನಮ್ಮ ತಂಡದ ಸದಸ್ಯೆಯಾದ ಶಿರ್ವ ಸೈಂಟ್ ಮೇರಿಸ್ ಶಾಲೆಯ ಶಿಕ್ಷಕಿಯಾದ ಶ್ರೀಮತಿ ಕ್ಲಾರಾರವರಿಂದ ಚಿಂತನ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ನಮಸ್ಕಾರದ ಮಹತ್ವವನ್ನುತಿಳಿಸಿದ್ರು ಫಕೀರಪ್ಪ ಸರ್ ರವರು ಸರಕಾರಿ ಪದವಿ ಪೂರ್ವ ಕಾಲೇಜು ಕಾರ್ಕಳದಿಂದ ಆಗಮಿಸಿದ ಅ ಧ್ಯಾಪಕ ರಾಜು ಪೂಜಾರಿಯವರನ್ನು ಪರಿಚಯಿಸಿದರು.ತರಬೇತಿಯ ಮೊದಲ ಾವಧಿಯಲ್ಲಿ ಸಂಪನ್ಮೂಲ ವ್ಯಕ್ತಿಯಾದ ಫಕೀರಪ್ಪರವರು ಇ-ಮೇಲ್ ಾಂದರೆ ವಿದ್ಯುನ್ಮಾನ ವಿಳಾಸವನ್ನು ರಚಿಸುವ ಕುರಿತು ತುಂಬಾ ಕಾಳಜಿಯಿಂದ ವಿವರವಾಗಿ ,ಪ್ರಾಯೋಗಿಕವಾಗಿ ತಿಳಿಸಿದರು. ಇ-ಮೇಲ್ ಿಡಿಯ ಮೂಲಕ ರಾಜ್ಯದಾದ್ಯಂತ ಿರುವ ಕನ್ನಡ ಶಿಕ್ಷಕರ ಪರಿಚಯ ಮಾಡಿ ಪಾಠದ ವಿಷಯಗಳನ್ನು ಸಂಗ್ರಹಿಸಲು ಸಾಧ್ಯವೆಂದು ದೃಶ್ಯಗಳ ಮೂಲಕ ತೋರಿಸಿ ಕೊಟ್ಟರು. ಬೆಳಗಿನ ುಪಹಾರದಲ್ಲಿ ನಾವೆಲ್ಲರೂ ರುಚಿಯಾದ ತಿಂಡಿಯನ್ನು ಸವಿದು ಬಂದೆವು.ನಂತರ ನಾವೆಲ್ಲರೂ ಸಂಪನ್ಮೂಲ ವ್ಯಕ್ತಿಯ ಮಾರ್ಗದರ್ಶದಂತೆ ವಿದ್ಯುನ್ಮಾನ ವಿಳಾಸ ರಚಿಸಿ ಸಂದೇಶವನ್ನು ಕಳಿಸುವಷ್ಟು ಪರಿಣತಿ ಪಡೆದೆವು. ಸಂಪನ್ಮೂಲ ವ್ಯಕ್ತಿಯಾದ ಫಕೀರಪ್ಪರವರಿಗೆ ಸಂದೇಶವನ್ನು ಕಳುಹಿಸಿದೆವು. ನಂತರ ಭೋಜನವನ್ನು ಸವಿದು ಬಂದೆವು. ಪರಾಹ್ನದ ಾವಧಿ ಪ್ರಾರಂಭವಾದ ಕೂಡಲೇ ಡಯಟ್ ನ ಹಿರಿಯ ುಪನ್ಯಾಸಕರಾದ ಶ್ರೀಯುತ ಭಾಸ್ಕರ ಶೇಟ್ ರವರುನೀಡಿದ ಸೂಚನೆಯಂತೆ ಪ್ರಯಾಣ ಭತ್ಯೆ ಬಿಲ್ಲನ್ನು ಭರ್ತಿಮಾಡಿ ಕೊಟ್ಟೆವು. ಮುಂದೆ ಸಂಪನ್ಮೂಲ ವ್ಯಕ್ತಿಯಾದ ರಾಜು ಪೂಜಾರಿಯವರು ಾಂತರ್ಜಾಲದ ುಪಯೋಗಗಳು,ತಾಣಗಳು ಾವುಗಳನ್ನು ುಪಯೋಗಿಸುವ ಕ್ರಮವನ್ನು ತಿಳಿಯಲು ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿಯನ್ನು ನೀಡಿದರು. ಕಂಬದಕೋಣೆ ಸರಕಾರಿ ಪದವಿ ಪೂರ್ವ ಕಾಲೇಜಿ ಪ್ರಾಧ್ಯಾಪಕ ಕಾಲೇಜಿನ ವಿಶ್ವನಾಥ ಶೆಟ್ಟಿಯವರು ಿಂದಿನ ಕಾಲವು ಬದಲಾದಂತೆ ನಾವು ಬದಲಾಗಬೇಕು ೆಂಬ ಹಿನ್ನಲೆಯಲ್ಲಿ ತಂತ್ರಜ್ಞಾನದ ಮೂಲಕ ಭಾಷಾ ಕೌಶಲಕ್ಕೆಧಕ್ಕೆ ಒಂದು ಪಾಠವನ್ನು ಕಡಿಮೆ ಾವದಿಯಲ್ಲಿ ಪರಿಣಾಮಕಾರಿಯಾಗಿ ಹೇಗೆ ಬೋಧಿಸಬಹುದೆಂದು ತಿಳಿಸಿದರು.ಪರಿಕಲ್ಪನಾ ನಕ್ಷೆಯ ಮೂಲಕ ಪಾಠವನ್ನು ಪರಿಣಾಮಕಾರಿಯಾಗಿ ಬೋಧಿಸಬೇಕೆಂಬುದನ್ನುತಿಳಿಸಿದರು. ತಾವೇ ತಯಾರಿಸಿದ ಪಾಠಯೋಜನೆಯ ಹಂತಗಳ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಿದರು. ಚಹಾ ವಿರಾಮದತರುವಾಯ ಶಿಕ್ಷಕರಾದ ಶ್ರೀಯುತ ಶಾಂತಪ್ಪ ಮೂಲಂಗಿಯವರು ಬಾಗಿಲೊಳು ಕೈ ಮುಗಿದು ೊಳಗೆ ಬಾ ಯಾತ್ರಿಕನೆ ಪದ್ಯವನ್ನು ತಮ್ಮ ಸುಮಧುರ ಕಂಠದಿಂದ ಹಾಡಿದರು ವಿಶ್ವನಾಥಶೆಟ್ಟಿಯವರು ಎದೆಗೆ ಬಿದ್ದ ಅಕ್ಷರ ಮತ್ತು ಹಕ್ಕಿ ಹಾರುತಿದೆ ನೋಡಿದಿರಾ ಪಾಠಗಳನ್ನು ಪರಿಣಾಮಕಾರಿಯಾಗಿ ಬೋಧಿಸಬಹುದೆಂದು ತಿಳಿಸಿದರು .ಇದು ನಮಗೆ ಮಾದರಿಯಾಗಿದೆ. ಕೊನೆಯ ಅವದಿಯಲ್ಲಿ ಸಂಪನ್ಮೂಲ ವ್ಯಕ್ತಿಯಾದ ರಾಜೀವ ಪೂಜಾರಿಯವರು book mark ವಿವರಣೆಯನ್ನು ಹೇಳುತ್ತಾ ಚಟುವಟಿಕೆಗಳನ್ನು ಅಳವಡಿಸಿ ಪಾಠಮಾಡಲು link ನ ಪಯೋಗವನ್ನು ತಿಳಿಸಿದರು.ವಿಕೀ ಪಿಡಿಯಾವನ್ನು ಬಳಕೆ ಮಾಡುವಾಗ ವಿಷಯ ಚಿತ್ರ ಇತ್ಯಾದಿಗಳನ್ನು ಆಯ್ಕೆಮಾಡಿ ಮತ್ತೆ ಕಚೇರಿಗೆ ಹೋಗಿ libraoffice4.3ನಲ್ಲಿ ವಿಷಯ ಆಯ್ಕೆಮಾಡಿ cut ಮತ್ತು paste ಹೇಗೆ ಮಾಡುವುದೆಂದು ತಿಳಿಸಿದರು. ಎರಡನೇ ದಿನದ ತರಬೇತಿಯಿಂದ ಆದ ಪ್ರಯೋಜನಗಳನ್ನು ಕೆಳಗಿನ ಕವನದ ಸಾಲುಗಳಲ್ಲಿ ವ್ಯಕ್ತಪಡಿಸಲು ಪ್ರಯತ್ನಿಸಿದ್ದೇನೆ.

3rd Day. 14/01/2015

ಎಲ್ಲರಿಗೂ ನಮಸ್ಕರಿಸುತ್ತಾ, 3ನೇ ದಿನದ ವರದಿಯನ್ನು ಶಿವರಾಮಕಾರಂತ ತಂಡದ ಪರವಾಗಿ ವಾಚಿಸುತ್ತಿದ್ದೇನೆ. ಎರಡು ದಿನಗಳಿಂದ ನಾವು ಅಂತರ್ಜಾಲದಲ್ಲಿ ಅರ್ಥಪೂರ್ಣವಾದ ಮಾಹಿತಿ ಕಲೆ ಹಾಕುತ್ತಿರುವಾಗ,3ನೇ ದಿನದಲ್ಲಿ ಯಾವ ಮಾಹಿತಿ ಸಿಗಬಹುದೆಂಬ ಕುತೂಹಲದಲ್ಲಿ ಶಿಬಿರಾರ್ಥಿಗಳೆಲ್ಲಾ ಕಾಯುತ್ತಿರುವಾಗ ನಮ್ಮ ನಿರೀಕ್ಷೆಗೆ ನಿರಾಶೆಯಾಗದಹಾಗೆ ನಮ್ಮನ್ನು ಅಂತರ್ಜಾಲದೊಳಗೆ ಕರೆದುಕೊಂಡು ಹೋದರು. ಪ್ರತಿದಿನದಂತೆ ದಿನದ ಮೊದಲು ರಾಜೀವ ಪೂಜಾರಿ ಸರ್ ಸಂಪನ್ಮೂಲವ್ಯಕ್ತಿ ಇವರಿಂದ ಕಾರ್ಯಕ್ರಮದ ನಿರ್ವಹಣೆ ಪರಿಚಯ ಪ್ರಾರಂಭಿಸಿದರು. ಶಿವರಾಮಕಾರಂತ ತಂಡದ ಶ್ರೀಮತಿ ಭಾರತಿಯವರಿಂದ ಗಣೇಶ ಸ್ತುತಿಯ ಮೂಲಕ ಪ್ರಾರ್ಥನೆ, ನಂತರ ಅದೇ ತಂಡದ ಶ್ರೀಮತಿ ಶಕುಂತಳ ಇವರಿಂದ ಚಿಂತನೆ ಮಾನವೀಯತೆಯ ಮನ ಮಿಡಿಯಿತು. 2ನೇದಿನದ ವರದಿ ವಾಚನ ಶ್ರೀಮತಿ ಜ್ಯೋತಿ ಯು ಇವರಿಂದ ನಡೆಯಿತು.ತದನಮತರ ನಮ್ಮ ಡಯಟ್ನ ಹಿರಿಯ ಉಪನ್ಯಾಸಕರಾದ ಭಾಸ್ಕರ ಶೇಟ್ ಸರ್ ಇವರು ಸಂಕ್ಷಿಪ್ತವಾಗಿ ಪ್ರಾಸ್ತಾವಿಕ ವಿಷಯದ ಕುರಿತು ಚರ್ಚಿಸಿ, ಸ್ವಾಗತ ಕೋರಿ, ಸರಕಾರಿ ಪ್ರೌಢಶಾಲೆ ಮರವಂತೆ ಇಲ್ಲಿಂದ ಆಗಮಿಸಿದ ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಶೇಖರ ಶೆಟ್ಟಿ ಮುಖ್ಯೋಪಾಧ್ಯಾಯರು ಇವರನ್ನು ಪರಿಚಯಿಸಿದರು. ಅಂಡ್ರಾಯಿಡ್ ಸೆಟ್ ಮೊಬೈಲ್ ಇದ್ದರೆ,ವಾಟ್ಸ್ಆ್ಯಪ್ ಮತ್ತು ವಾಯಿಸ್ ಸರ್ಚ್ ಮೂಲಕ ಅಂಗೈಯಲ್ಲಿ ವಿಶ್ವ ವೀಕ್ಷಿಸಬಹುದೆಂದು ಹಲವಾರು ನಿದರ್ಶನ ನೀಡಿದರು. ಇಮೇಲ್ಗೆ ಫೋಟೋ ಅಪ್ಲೋಡ್ ಮಾಡುವುದು,ಪಾಸ್ ವರ್ಡ್ change ಮಾಡುವುದು,ಗೂಗಲ್ map,ತೆರೆ ಚಿತ್ರ,ಗೂಗಲ್webನಲ್ಲಿ koer ವಿಳಾಸ ನೀಡಿದರೆ ಯಾವೆಲ್ಲ ವಿಷಯದ ಮೇಲೆ ಮಾಹಿತಿಗಳ ಲಭ್ಯತೆ ಯಿದೆ ಎಂಬುದನ್ನು ತಿಳಿಸಿದರು. ಮಧ್ಯಾಹ್ನದ ೂಟ ಮತ್ತು ಚಹ ವಿರಾಮದ ನಂತರ ರಾಜೀವ ಪೂಜಾರಿ ಸರ್ ರವರು ಕನ್ನಡ ಎಸ್.ಟಿ.ಎಫ್ ಅಧ್ಯಾಪಕರ ತಂಡಕ್ಕೆ ಪ್ರತಿಯೊಬ್ಬರ ಹೆಸರು ಸೇರಿಸಲು ಶ್ರಮಿಸಿದರು. ನಡುನಡುವೆ ಡಯಟ್ನ ಹಿರಿಯ ಉಪನ್ಯಾಸಕರಾದ ಭಾಸ್ಕರ ಶೇಟ್ ಸರ್ ಶಿಬಿರಾರ್ಥಿಗಳಿಗೆ ಕಲಿಯಲು ಪ್ರೋತ್ಸಾಹಿಸಿ ಸಹಾಯ ಮಾಡಿದರು. ಎಲ್ಲರಿಗೂ ವಂದಿಸುತ್ತಾ 3ನೇ ದಿನ ವರದಿಯನ್ನಸಂಪನ್ನಗೊಳಿಸುತ್ತೇನೆ.

4th Day. 16/01/2015

ಸರ್ವರಿಗೂ ನಮಸ್ಕರಿಸುತ್ತಾ, ಕನ್ನಡ ವಿಷಯದಲ್ಲಿ ತಂತ್ರಾಂಶಗಳನ್ನು ಬಳಸಿಕೊಂಡು ಪಾಠವನ್ನು ಪರಿಣಾಮಕಾರಿಯಾಗಿಂದು ಹೇಗೆ ಮಾಡಬಹುದು? ಎಂಬ ವಿಷಯಾಧಾರಿತ ಎಸ್.ಟಿ ಎಫ್ ತರಬೇತಿಯ 4ನೇ ದಿನದ ಗೋವಿಂದ ಪೈ ತಂಡದ ವರದಿಯನ್ನು ತಂಡದ ಸದಸ್ಯರ ಪರವಾಗಿ ವಾಚಿಸುತ್ತಿದ್ದೇನೆ. ಶ್ರೀ ರಾಮಕೃಷ್ಣ ಪ್ರಭು ರವರ ಸುಮಧುರ ಪ್ರಾರ್ಥನೆಯೊಂದಿಗೆ ನಾಲ್ಕನೆ ದಿನದ ಕಾರ್ಯಕ್ರಮ ಪ್ರಾರಂಭವಾಯಿತು. ಶ್ರೀಮತಿ ವಿದ್ಯಾರವರು ವ್ಯಕ್ತಿಯ ಪರಿಪೂರ್ಣ ವಿಕಸನದ ಹಂತವನ್ನು ಕುರಿತು ಚಿಂತನೆಯನ್ನು ಮಂಡಿಸಿದರು. ಮೂರನೆ ದಿನದ ವರದಿಯನ್ನು ಶಿವರಾಮ ಕಾರಂತ ತಂಡದ ಶ್ರೀಮತಿ ಶಕಿಲ ವಾಚಿಸಿದರು. ಸ.ಪ.ಪೂ.ಕಾಲೇಜಿನ ಶಿಕ್ಷಕಿ ಶ್ರೀಮತಿ ಸುಭಿಕ್ಷಾ ಶೆಟ್ಟಿಯವರು ಬಾಕಿ ಇರುವ ಕಲಿಕಾ ವಿಷಯಗಳಾದ ಲಿಬ್ರೊ ಆಫಿಸ್ ಕಾಲ್ಕ,ಸ್ಕ್ರೀನ್ ಶಾಟ್, ಪೆನ್ ಡ್ರ್ೈವ್ನಲ್ಲಿ ಮಾಹಿತಿ ಸೇರಿಸುವುದು ಮತ್ತು ಪಡೆಯುವುದು,ಬುಕ್ ಮಾರ್ಕ ಮತ್ತು ಟ್ರಾನ್ಸ್ ಲೇಷನ್ ಈ ಎಲ್ಲಾ ವಿಚಾರಗಳ ಬಗ್ಗೆ ತಿಳಿಸಿಕೊಟ್ಟರಲ್ಲದೆ ಸ್ವತ: ಶಿಬಿರಾರ್ಥಿಗಳಿಂದ ಮಾಡಿಸಿದರು. ಇನ್ನೊರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಫಕೀರಪ್ಪ ಸರ್ ರವರು ಅಂತರ್ಜಾಲದಲ್ಲಿ ಸಂದೇಶವನ್ನು ಅವಲೋಕಿಸುವುದು,ಪಾರ್ವರ್ಡ ಮಾಡುವುದು,ಪ್ರತಿಕ್ರಿಯಿಸುವುದು ಮುಂತಾದ ವಿಷಯಗಳನ್ನು ತಿಳಿಸಿಕೊಟ್ಟರು. ಕನ್ನಡದ ಉತ್ತಮ ಜಾಲ ತಾಣಗಳಾದ ಕೊಯರ್,ಕಣಜ ಮುಂತಾದವುಗಳ ಬಗ್ಗೆ ಪರಿಚಯಿಸಿಕೊಟ್ಟರು. ನಾಳಿನ ಪಾಠಯೋಜನೆಯನ್ನು ಸಿದ್ದಪಡಿಸಲು ಶಿಬಿರಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟರು. ಈ ತರಬೇತಿಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿರುವ ಡಯಟ್ನ ಹಿರಿಯ ಉಪನ್ಯಾಸಕರಾದ ಶ್ರೀ ಭಾಸ್ಕರ್ ಶೇಟ್ ರವರು ಕಾರ್ಯಕ್ರಮವನ್ನು ಸಂಯೋಜನೆಗೊಳಿಸುತ್ತಾ ಮಾರ್ಗದರ್ಶನ ನೀಡುತ್ತಿದ್ದರು.ಒಟ್ಟಾರೆ ಹೇಳಬೇಕಂದರೆ ಇಲಿ ಹಿಡಿದು ಜಾಲ ತಾಣಗಳನ್ನು ಹುಡುಕುವ ಈ ತರಬೇತಿ ಕಾರ್ಯ ಯಶಸ್ಸಿನತ್ತ ಪಯಣಿಸುತ್ತಿದೆ ಎಂದು ಹೇಳುತ್ತ ವರದಿ ವಾಚನವನ್ನು ಕೊನೆಗೊಳಿಸುತ್ತೇನೆ.


Batch 4

Agenda

If district has prepared new agenda then it can be shared here

See us at the Workshop

DSC002521.JPG

Workshop short report

2nd Day

ಗುರು ಒಲಿದು ಹರಸಿದೊಡೆ ದೊರಕುವುದು ಚಿರಮುಕ್ತಿ

ದುರಿತ ಕರ್ಮಗಳೊಂದು ಬಳಿಸುಳಿಯವು

ಗುರು ಮುನಿದೆಡೆ ಹರನಿಂದಲುಂ ಕಾಯಲಸದಳವು

ಹರಮುನಿಯೆ ಗುರು ಕಾಯ್ವ ಬೋಳುಬಸವ

ಇಂಥ ಪವಿತ್ರವಾದ ಶಿಕ್ಷಕ ವೃತ್ತಿಯನ್ನು ನಡೆಸುತ್ತಿರುವ ನಮ್ಮ ವೃತ್ತಿ ಬೆಳವಣಿಗೆಗೆ ಕಾರ್ಯಾಗಾರಗಳು ಅತೀ ಅವ ಶ್ಯಕ. ಏಕೆಂದರೆ ದೀಪವು ತಾನು ನಿರಂತರ ಉರಿಯುತ್ತಿದ್ದರೆ ಮಾತ್ರ ಇನ್ನೊಂದು ದೀಪವನ್ನು ಹೊತ್ತಿಸಲು ಸಾಧ್ಯ.. ಎಂಬ ರವೀಂದ್ರನಾಥ ಠಾಕೂರರ ಮಾತಿನಂತೆ ನಮಗೆ ಕನ್ನಡ ಶಿಕ್ಷಕರ ಅಭಿವೃದ್ಧಿಗಾಗಿ ಡಯಟ್ ಸಂಸ್ಥೆ ಹಮ್ಮಿಕೊಂಡ ಕನ್ನಡ ಭಾಷಾ ಶಿಕ್ಷಕರ ವೇದಿಕೆಯ ಕಾರ್ಯಾಗಾರದ ೨ನೇ ದಿನದ ವರದಿಯನ್ನು ನಮ್ಮ ಶರಾವತಿ ತಂಡದ ಪರವಾಗಿ ತಮ್ಮ ಮುಂದೆ ಓದಲು ಇಚ್ಚಿಸುತ್ತೇನೆ. ನಿನ್ನೆ ದಿನಾಂಕ ೨೦- ೦೧-೨೦೧೫ ರ ಮಂಗಳವಾರ ಬೆಳಿಗ್ಗೆ ೯.೩೦ ಕ್ಕೆ ಎಲ್ಲಾಕನ್ನಡ ಭಾಷಾ ಶಿಕ್ಷಕರ ಒಗ್ಗೂಡುವಿಕೆಯ ನಂತರ ತರಬೇತಿ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಫಕೀರಪ್ಪನವರು ಎಲ್ಲರನ್ನು ಸ್ವಾಗತಿಸಿ ಶರಾವತಿ ತಂಡದ ಶ್ರೀಮತಿ ಜ್ಯೋತಿಯವರು ವಿಘ್ನೇ ಶ್ವರನ ನ್ನ್ನು ಪ್ರಾರ್ಥಿಸಿದ ಬಳಿಕ ಶರಾವತಿ ತಂಡದ ಶ್ರೀವಿಷ್ಣುಗೌಡರು ಚಿಂತನೆಯನ್ನು ನಡೆಸಿಕೊಟ್ಟರು.ಬಳಿಕ ಸುಧೀರ್ಘ ವಾದ ಅಚ್ಚುಕಟ್ಟಾದ ವರದಿ ವಾಚನ ಮಾಡಿದರು. ಬಳಿಕ ೧,೧೫ಕ್ಕೆ ಫಕೀರಪ್ಪನವರು ಶಿಕ್ಷಕರು, ಶಿಕ್ಷಕರಿಗಾಗಿ, ಶಿಕ್ಷಕರಿಗೋಸ್ಕರ ತಯಾರಿಸಿದ Website KOER ನ ಪರಿಚಯ, ಬಳಕೆ ಅದರಲ್ಲಿ ನಮಗೆ ಲಭ್ಯವಾಗುವ ಕರ್ನಾಕ ಮುಕ್ತ ಶೈಕ್ಷಣಿಕ ಸಂಪನ್ಮೂಲದ ಕುರಿತು ವಿವರಿಸಿದರು. ಅಂತರ್ಜಾಲದ ಲೋಕದಲ್ಲಿ ಮುಳುಗಿದ್ದ ನಮಗೆ ಹಸಿವು ಮತ್ತು ಸಮಯದ ಅರಿವಿಲ್ಲದಿದ್ದರೂ ಊಟದ ನೆನಪು ಮಾಡಿದವರು ಫಕೀರಪ್ಪನವರು. ಊಟದ ಬಳಿಕ ಅತ್ತೂರು ಪ್ರೌಢಶಾಲೆಯ ಶ್ರೀ ಸುಬ್ರಹ್ಮಣ್ಯ ಉಪಾ ಧ್ಯರವರ ಸುಶ್ರಾವ್ಯ ಭಾವಗೀತೆ ಮತ್ತೊಮ್ಮೆ, ಇನ್ನೊಮ್ಮೆ, ಮಗದೊಮ್ಮೆ ನಮ್ಮನ್ನು ರಂಜಿಸಿತಲ್ಲದೆ ೩ನೇ ಅವಧಿಗೆ ಹೊಸಹುರುಪಿನಿಂದ ಪ್ರವೇಶಿಸಲು ಅನುವು ಮಾಡಿತು. ಮಧ್ಯಾಹ್ನ ೨ ಗಂಟೆಗೆ ೩ನೇ ಅವಧಿ ಲಘು ಹಾಸ್ಯದೊಂದಿಗೆತಮ್ಮ ತರತಿಯ ಅನುಭವಗಳನ್ನು ಹಂಚಿಕೊಂಡ ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಶ್ರೀ ವಿಶ್ವನಾಥಶೆಟ್ಟಿಯವರ ಅಗಾಧ ಜ್ಞಾನ ಮತ್ತು ಪಾಂಡಿತ್ಯಭರಿತ ಮಾತುಗಳು Android Phone ಇಲ್ಲದ ಹೆಚ್ಚಿನವರಲ್ಲಿ ಧೈರ್ಯವನ್ನು ತುಂಬಿತು ಎನ್ನಬಹುದು.ಅವರು ಭಾಷಾ ಕೌಶಲಗಳನ್ನು ಬಳಸಿಕೊಂಡು ಪಾಠಟಿಪ್ಪಣಿಯನ್ನು ತಯಾರಿಸುವುದು ಹೇಗೆ? ತಂತ್ರಜ್ಞಾನವನ್ನು ಬಳಸಿ ಪಾಠ ಮಾಡುವುದು ಹೇಗೆ? ಎಂಬ ಬಗ್ಗೆ ೧೦ನೇ ತರಗತಿಯ ಗದ್ಯಪಾಠ ಎದೆಗೆ ಬಿದ್ದ ಅಕ್ಷರ ಇದರ ಕಾಲ್ಪನಿಕ ನಕ್ಷೆಯ ಮೂಲಕ ಬಹಳ ಸೊಗಸಾಗಿ ತೋರಿಸಿಕೊಟ್ಟರು. ೩.೪೫ಕ್ಕೆ ಚಹಾವಿರಾಮದಲ್ಲಿ ಬಿಸಿಬಿಸಿ ಡ ಸೇವನೆಯ ಬಳಿಕ ೪ ಗಂಟೆಗೆ ಎಲ್ಲರ ಸಮಾಗಮ. ನಂತರ ಶ್ರೀ ವಿಶ್ವನಾಥ್ ಶೆಟ್ಟಿಯವರು ಅದೇ ಪಾಠದಲ್ಲಿ ಹಲವು ಚಿತ್ರಗಳನ್ನು ಬಳಸಿ ಜಾಗತೀಕರಣ ಮತ್ತು ವೈಚಾರಿಕತೆ ಯನ್ನು ಮಕ್ಕಳಲ್ಲಿ ಹೇಗೆ ಬೆಳೆಸಬಹುದೆಂದು,ಲಿಂಕ್ ಕೊಡುವ ಕೌಶಲ ಗಳಿಸುವುದು ಹೇಗೆ? ವ್ಯಾಕರಣಗಳನ್ನು ಹೇಗೆ ತಿಳಿಸಬಹುದೆಂದು ತೋರಿಸಿದರು. ತದನಂತರ ಪದ್ಯ ಪ್ರಾತ್ಯಕ್ಷಿಕೆ ಹಕ್ಕಿ ಹಾರುತಿದೆ ನೋಡಿದಿರಾ? ಪದ್ಯದ ಬಗ್ಗೆ ಪಾಠ ಪ್ರಾರಂಭಿಸುತ್ತಿದ್ದಂತೆ ತಂತ್ರಜ್ಞಾನ ಕೈಕೊಟ್ಟಿದ್ದು ಎಲ್ಲರಿಗೂ ಬೇಸರ ಮೂಡಿಸಿತ್ತು. ನಂತರ ಚರ್ಚೆಗೆ ಮುಕ್ತ ಅವಕಾಶ ನೀಡಲಾಯಿತು. ಕೆಲವು ಅಧ್ಯಾಪಕರು ತಮ್ಮ ಸಮಸ್ಯೆಗಳನ್ನು ಕೇಳಿ ಬಗೆಹರಿಸಿಕೊಂಡ ನಂತರ ತಂತ್ರಜ್ಞಾನ ಸ ರಿ ಹೊಂದಿ ಪದ್ಯ ಪಾಠದ ಪ್ರಾತ್ಯಕ್ಷಿಕೆ ಮುಗಿಯಿತು . ತರಬೇತಿ ಸಂಯೋಜಕರಾದ ಶ್ರೀ ಭಾಸ್ಕರ್ ಸರ್ ರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಗುತ್ತಿದ್ದಂತೆ ನಾವೆಲ್ಲರೂ ಕ್ಷಣಮಾತ್ರದಲ್ಲಿ ನಿರ್ಗಮಿಸಿ 'ಹಕ್ಕಿಗಳು ಮರಳಿ ಗೂಡು ಸೇರುವಂತೆ' ನಮ್ಮ ನಮ್ಮ ಗೂಡಿಗೆ ಸೇರಿದೆವು ."ಉತ್ತಮ ಶಿಕ್ಷಕರಾಗಿ ಯಾರು ಜನಿಸುವುದಿಲ್ಲ " ನಾವೇ ರೂಪುಗೊಳ್ಳಬೇಕು .ಇಲ್ಲ ಇಂಥ ತರಬೇತಿಗಳು ನಮ್ಮನ್ನು ರೂಪುಗೊಳಿಸುತ್ತವೆ ಎಂದು ಹೇಳುತ್ತಾ ,ಅವಕಾಶ ನೀಡಿದ ಎಲ್ಲರನ್ನು ವಂದಿಸುತ್ತಾ ,ತಪ್ಪಿದ್ದಲ್ಲಿ ಕ್ಷಮೆಯಿರಲಿ ಎಂದು ಹೇ ಳುತ್ತಾ ನನ್ನ ವರದಿಯನ್ನು ಮುಕ್ತಾಯಗೊಳಿಸುತ್ತಿದ್ದೇವೆ.

4th Day

2014-15 ನೇ ಸಾಲಿನ ಆರ್. ಎಂ.ಎಸ್. ಎ ಯೋಜನೆಯಡಿ ಎಸ್. ಟಿ. ಎಫ್ (ಭಾಷಾ ಶಿಕ್ಷಕರ ವೇದಿಕೆ) ಕನ್ನಡ ಸನಿವಾಸ ತರಬೇತಿಯು ದಿನಾಂಕ 19/01/2015 ರಿಂದ 23/01/2015ರ ವರೆಗೆ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ, ಬಂಟಕಲ್ಲು ಉ ಡುಪಿಯಲ್ಲಿ ನಡೆಯುತ್ತಿದ್ದು ಮೊದಲ ದಿನದ ವರದಿಯನ್ನು ವಾಚಿಸುತ್ತಿದ್ದೇನೆ. ಕಾರ್ಯಾಗಾರವು ಅತ್ತೂರಿನ ಸೈಂಟ್ ಲಾರೆನ್ಸ್ ಪ್ರೌಢಶಾಲೆಯ ಸಿ. ಚೇತನಾ ರವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಈ ಸಂಸ್ಥೆಯ ಕಂಪ್ಯೂಟರ ವಿಭಾಗದ ಮುಖ್ಯಸ್ಥರಾದ ಶ್ರೀಯುತ ವಾಸುದೇವ ರವರು ಉ ದ್ಘಾಟಿಸಿದರು. ಡಯಟ್ ಉ ಪನ್ಯಾಸಕರಾದ ಶ್ರೀ ಭಾಸ್ಕರ್ ಶೇಟ್ ಉ ಪಸ್ಥಿತರಿದ್ದು ಹಂಗಾರಕಟ್ಟೆ ಚೇತನಾ ಪ್ರೌಢಶಾಲೆಯ ಕನ್ನಡ ಅ ಧ್ಯಾಪಕರಾದ ಶ್ರೀ ಫಕೀರಪ್ಪ ಅ ವರು ಹಾಗೂ ಹೈಕಾಡಿ ಪ್ರೌಢಶಾಲೆಯ ಕನ್ನಡ ಅ ಧ್ಯಾಪಕರಾದ ಶ್ರೀ ಸುಬ್ರಹ್ಮಣ್ಯ ಭಟ್ ಅ ವರು ಸಭಾ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀುಯುತ ಭಾಸ್ಕರ ಸರ್ ಅ ವರು S.T.F ನ ಮುಖ್ಯ ಗುರಿಯಾದ ಗಣಕಯಂತ್ರದ ಜ್ಞಾನ ಮೂಡಿಸುವುದು , ಭಾಷಾ ಶಿಕ್ಷಕರಲ್ಲಿ ತಂತ್ರಾಂಶ ಕೌಶಲ ಬೆಳೆಸುವುದು, ಬೋಧನಾ ಹಂತದಲ್ಲಿ ಬರುವ ಸವಾಲುಗಳು ಹಾಗೂ ಪರಿಹಾರಗಳು ಇ ತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಾಗಾರದ ಉ ದ್ಘಾಟಕರಾದ ವಾಸುದೇವ ಅ ವರು "ಇ ಲಿಯನ್ನು ಹಿಡಿದು ತಂತ್ರಜ್ಞಾನದ ಬೆಟ್ಟವನ್ನು ಅ ಗೆಯುತ್ತಾ ಅ ದರ ಜ್ಞಾನವನ್ನು ಪಡೆದುಕೊಳ್ಳಿ' "ಎಂ ದರು. ಕಾರ್ಯಾಗಾರಕ್ಕೆ ಆಗಮಿಸಿದ ಎ ಲ್ಲಾ ಅ ಧ್ಯಾಪಕರಲ್ಲಿ ಆರು ಜನರ ಆರು ಗುಂಪುಗಳನ್ನು ಮಾಡಿ ಪ್ರತಿ ತಂಡಕ್ಕೆ ನದಿಯ ಹೆಸರನ್ನು ನೀಡಿ ಆಯಾ ತಂಡಕ್ಕೆ ಕೆಲಸಗಳನ್ನು ಹಂಚಿದರು. ಸುಬ್ರಹ್ಮಣ್ಯ ಭಟ್ ಅ ವರು ಗಣಕಯಂತ್ರವನ್ನು ಹೇಗೆ open ಮಾಡುವುದೆಂದು ತಿಳಿಸುತ್ತಾ backspace, delete, enter, spacebar, caps lock, shift, arrow keys, tab, home ಇ ತ್ಯಾದಿಗಳ ಉ ಪಯೋಗವೇನು ಎನ್ನುವುದನ್ನು ಮನದಟ್ಟಾಗುವಂತೆ ತಿಳಿಸುವುದರ ಮೂಲಕ ನಮ್ಮ ಕಲಿಕೆಯನ್ನು ಸುಲಭಗೊಳಿಸಿದರು ಹಾಗೂ ಡ,ಟ, ಷ, ಶ , ಅ ನುಸ್ವಾರ, ವಿಸರ್ಗ, ಳ , ಣ , ಞ,ಙ ,ಚ ಇ ತ್ಯಾದಿ ವಿಶೇಷ ಅ ಕ್ಷರಗಳ ಬಗ್ಗೆ ಮಾಹಿತಿ ನೀಡಿನಮ್ಮ ಗಣಕಯಂತ್ರದ ಕಲಿಕೆಯಲ್ಲಿರುವ ಸಮಸ್ಯೆಯನ್ನು ಬಗೆಹರಿಸಿ ನಮ್ಮ ಒ ತ್ತಡವನ್ನು ಕಡಿಮೆಗೊಳಿಸಿದರು. ಅ ಲ್ಲದೆ ಕೆಲವು ಅ ಗತ್ಯ ಅಂ ಶಗಳಾದ ಸೇವ್ ಮಾಡುವುದು, ಸೆಲೆಕ್ಟ್ ಮಾಡುವುದು, ಕಾಪಿ-ಪೇಸ್ಟ್ , ದಪ್ಪ ಅ ಕ್ಷರಗಳಲ್ಲಿ ಬರೆಯುವುದು, ಅ ಡಿಗೆರೆ ಹಾಕುವುದು ಇ ತ್ಯಾದಿ ವಿಷಯಗಳ ಬಗ್ಗೆ ಜ್ಞಾನ ನೀಡಿದರು. ಅ ಪರಾಹ್ನದ ಭೋಜನದ ನಂತರ ನಮ್ಮ ಕಾರ್ಯಾಗಾರವು ಸ.ಪ.ಪೂ.ಕಾಲೇಜು ಸಾಣೂರು ಅ ಲ್ಲಿನ ಸಂಗೀತ ಶಿಕ್ಷಕಿಯಾದ ಶ್ರೀಮತಿ ಅ ನಸುಯಾ ಅ ವರ ಸುಶ್ರಾವ್ಯ ಸಂಗೀತದೊಂದಿಗೆ ಆರಂಭವಾಯಿತು. ನಂತರ ಶ್ರೀ ಫಕೀರಪ್ಪ ಅ ವರು 21ನೇ ಶತಮಾನದಲ್ಲಿ ನಮ್ಮ ಮಕ್ಕಳು ಮತ್ತು ವಿದ್ಯಾರ್ಥಿಗಳು ಕಂಪ್ಯೂಟರ್ ಬಳಕೆಯಲ್ಲಿ ಮುಂಚೂಣಿಯಲ್ಲಿರುವಾಗ ಶಿಕ್ಷಕರಾದ ನಾವು ಹಿಂದುಳಿಯಬಾರದು; ಜೀವಂತಿಕೆಯಿಂದ ತರಗತಿ ನಡೆಸುವಂತಾಗಬೇಕು. ನಮ್ಮ ಜ್ಞಾನವನ್ನು ಪ್ರತಿನಿತ್ಯ ಅ ಪ್ಡೇಟ್ ಮಾಡಿಕೊಳ್ಳಬೇಕು ಎಂ ಬ ಮಾತನ್ನು ಹೇಳುವುದರ ಮೂಲಕ ನಮ್ಮಲ್ಲಿ ಹೊಸಚೈತನ್ಯವನ್ನು ಮೂಡಿಸಿದರು. ನಂತರ ಇ -ಮೇಲ್ ಅ ಡ್ರೆಸ್ ಹೇಗೆ ಮಾಡುವುದೆಂಬುದನ್ನು ತಿಳಿಸಿದರು. ಇ -ಮೇಲ್ ಎಂ ದರೆ ವಿದ್ಯುನ್ಮಾನ ಅಂ ಚೆ ಎ ನ್ನುವುದನ್ನು ತಿಳಿಸುತ್ತಾ ಇ -ಮೇಲ್ ಓ ಪನ್ ಮಾಡಲು ಇ ರುವ ಹಂತಗಳನ್ನು ಅ ರ್ಥವತ್ತಾಗಿ ತಿಳಿಸಿದರು. ಎ ಲ್ಲರಿಗೂ ಇ -ಮೇಲ್ ವಿಳಾಸ ಓ ಪನ್ ಮಾಡಿಸಿದರು. ಅ ದರಲ್ಲಿ ಸಂದೇಶಗಳನ್ನು ಕಳಿಸುವುದು ಹೇಗೆ, ಬಂದ ಸಂದೇಶಗಳನ್ನು ಓ ದುವುದು ಹೇಗೆ ಇ ತ್ಯಾದಿ ವಿವರಗಳನ್ನು ಅ ರ್ಥವತ್ತಾಗಿ ತಿಳಿಸಿದರು. ಮಧ್ಯಾಹ್ನದ ಚಹಾ ವಿರಾಮದ ನಂತರ ಎ ಲ್ಲಾ ಶಿಕ್ಷಕರು ಓ ಪನ್ ಮಾಡಿದ ಇ -ಮೇಲ್ ಅ ಡ್ರೆಸ್ ಮೂಲಕ ಅ ವರಿಗೆ ಸಂದೇಶ ಕಳಿಸುವಂತೆ ಹೇಳಿ ಎ ಲ್ಲರಿಗೂ ವಿಷಯ ಮನದಟ್ಟಾಗಿದೆಯೆಂಬುದನ್ನು ಖಚಿತಪಡಿಸಿಕೊಂಡರು. ಒಟ್ಟಿನಲ್ಲಿ ಮೊದಲ ದಿನದ ಕಾರ್ಯಾಗಾರವು ಎ ಲ್ಲರ ಮನದಾಳದಲ್ಲಿದ್ದ ಒ ತ್ತಡವನ್ನು ಹಾಗೂ ಗಣಕಯಂತ್ರದ ಬಗ್ಗೆ ಇ ರುವ ಭಯವನ್ನು ಹೋಗಲಾಡಿಸಲು ಸಹಕಾರಿಯಾಯಿತು. ನಾವು ಒಂ ದಿಷ್ಟು ಕಂಪ್ಯೂಟರ್ ಜ್ಞಾನ ಪಡೆದೆವು ಎಂಬ ಖುಷಿಯು ಎ ಲ್ಲಾ ಅ ಧ್ಯಾಪಕರ ಮನದಲ್ಲಿ ಮೂಡಿತು. 5.30 ಗಂಟೆಯ ಸುಮಾರಿಗೆ ಕಾರ್ಯಾಗಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು.


5th Day

ಆರ್. ಎಂ. ಎಸ್. ಎ. ವತಿಯಿಂದ ಉಡುಪಿ ಜಿಲ್ಲಾ ಕನ್ನಡ ಭಾಷಾ ಶಿಕ್ಷಕರ ಎಸ್.ಟಿ.ಎಫ್. ತರಬೇತಿಯ ೫ನೇ ದಿನದ ಕಾರ್ಯಾಗಾರವು ದಿನಾಂಕ ೨೩.೦೧.೨೦೧೫ರ ಶುಕ್ರವಾರದಂದು ಪೂರ್ವಾಹ್ನ ೯.೩೦ಕ್ಕೆ ಸರಿಯಾಗಿ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯ, ಬಂಟಕಲ್ಲು, ಉಡುಪಿ ಇಲ್ಲಿ ಜಿಲ್ಲಾ ಡಯಟ್ ಉಪನ್ಯಾಸಕರಾದ ಶ್ರೀ ಭಾಸ್ಕರ ಶೇಟ್ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಫಕೀರಪ್ಪ , ಶ್ರೀ ರಾಜೀವ ಪೂಜಾರಿಯವರ ಉಪಸ್ಥಿತಿಯಲ್ಲಿ ಪ್ರಾರಂಭವಾಯಿತು. ೬ನೇ ತಂಡದ ಶ್ರೀ ಗಣೇಶ್, ಸ.ಶಿ, ಶ್ರೀಮದ್ಭುವನೇಂದ್ರ ಪ್ರೌಢ ಶಾಲೆ, ಕಾರ್ಕಳ ಇವರು ಪ್ರಾರ್ಥನೆಗೈದರು. ಸುಂದರ್ ಪುರಾಣಿಕ ಸ್ಮಾರಕ ಪ್ರೌಢ ಶಾಲೆ, ಪೆರ್ವಾಜೆ, ಕಾರ್ಕಳ ಇಲ್ಲಿನ ಶ್ರೀಮತಿ ನಿರ್ಮಲಾ ಜಿ. ಭಟ್ ರವರು ಜ್ಞಾನದ ಮಹತ್ವದ ಕುರಿತು ಸೂಕ್ತ ಚಿಂತನೆ ನಡೆಸಿದರು. ೪ನೇ ತಂಡದ ಶ್ರೀ ವಿವೇಕಾನಂದ್, ಶಿಕ್ಷಕರು, ಎಸ್. ವಿ. ಎಸ್. ಪ್ರೌಢ ಶಾಲೆ, ಕಟಪಾಡಿ ಇವರು ೪ನೇ ದಿನದ ಕಾರ್ಯಾಗಾರದ ವರದಿ ವಾಚಿಸಿದರು. ವರದಿಯಬಗ್ಗೆ ಚರ್ಚೆಯ ಬಳಿಕ ಶಿಬಿರಾರ್ಥಿಗಳು ಪಾಠದ ಸಿದ್ಧತೆಯಲ್ಲಿ ತೊಡಗಿ ಸಿಕೊಂಡರು. ೧೦.೩೦ರ ಬಳಿಕ ಶ್ರೀ ರಾಜೀವ ಪೂಜಾರಿಯವರು ಪಾಠ ಸಿದ್ಧತೆಗೆ ಬೇಕಾದ ಚಿತ್ರಗಳನ್ನು ಚಿತ್ರ ಸಂಬಂಧಿ ತಂತ್ರಾಂಶದಿಂದ ಹೇಗೆ ಆರಿಸಿಕೊಳ್ಳಬಹುದೆಂದು ತಿಳಿಸಿಕೊಟ್ಟರು. ಶಿಬಿರಾರ್ಥಿಗಳು ಅದನ್ನು ಬಳಸಿಕೊಂಡು ಪಾಠವನ್ನು ಉತ್ತಮೀಕರಿಸಲು ಪ್ರಯತ್ನಿಸಿದರು. ಬಳಿಕ ಪುನಃ ಪಾಠದ ಸಿದ್ಧತೆಯಲ್ಲಿ ತೊಡಿಗಿಸಿಕೊಂಡರು. ೧೧.೩೦ರ ಚಾ ವಿರಾಮದ ಬಳಿಕ ಮತ್ತೆ ಶಿಬಿರಾರ್ಥಿಗಳು ಒಟ್ಟು ಸೇರಿದರು. ೧ನೇ ತಂಡದ ( ಸೀತಾನದಿ ತಂಡ ) ಶ್ರೀ ಪ್ರಭಾಕರ ಶೆಟ್ಟಿ, ವಿದ್ಯಾವರ್ಧಕ ಪ.ಪೂ. ಕಾಲೇಜು, ಮುಂಡ್ಕೂರು- ಇವರು ೮ನೇ ತರಗತಿಯ ಪದ್ಯ ಪಾಠ 'ಕನ್ನಡಿಗರ ತಾಯಿ' ಯನ್ನು ಉತ್ತಮವಾಗಿ ಪ್ರದರ್ಶಿಸಿದರು. 'ದಿನದಂತೆ ದಿನವಿಲ್ಲ- ಮನದಂತೆ ಮನವಿಲ್ಲ, ದಿನದಿನವು, ಕ್ಷಣ-ಕ್ಷಣವು, ನವ ನವ್ಯ ಸೃಷ್ಠಿ, ರಸ ರುಚಿಗೆ ಕೊನೆಯಿಲ್ಲ, ಅನುಭವಕ್ಕೆ ಮಿತಿಯಿಲ್ಲ, ಅನವರತ ಚಲಿತ ಜಗ ಮಂಕುತಿಮ್ಮ' ಎಂಬ ಕಗ್ಗದೊಂದಿಗೆ ಈ ತರಬೇತಿಯ ಮಹತ್ವವನ್ನು ಸಾರಿದ ಅವರು ಉಪಯುಕ್ತ ಚಿತ್ರಗಳು, ಹಾಡಿನ ಧ್ವನಿ ಸುರುಳಿ ಮತ್ತು ವೀಡಿಯೋದೊಂದಿಗೆ ಅತ್ಯುತ್ತಮವಾಗಿ ಪ್ರದರ್ಶಿಸಿದರು. ೫ನೇ ತಂಡ ( ಸೌಪರ್ಣಿಕಾ ತಂಡ ) ದ ಶ್ರೀ ಸುಧಾಕರ್ ಶೆಣೈರವರು 'ಅಂತರಾಳ ' ಪಾಠವನ್ನು , ಸೀತಾನದಿ ತಂಡದ ಶ್ರೀ ಆನಂದ ಮುದ್ರಾಡಿಯವರು ' ಜೀವನ ದರ್ಶನ' ದ ಕನಕದಾಸರ ಕೀರ್ತನೆ ಯನ್ನು ,೧ನೇ ತಂಡದ ಶ್ರೀ ನಾಗಪ್ಪ ನಾಯ್ಕ್, ಹೊಸ್ಮಾರು ರವರು 'ರಾಜಕುಮಾರಿಯ ಜಾಣ್ಮೆ ' ಎಂಬ ಜಾನಪದ ಗದ್ಯ ಕತೆಯನ್ನು ಆಯ್ಕೆಮಾಡಿಕೊಂಡು ಪಾಠ ಮಂಡನೆಮಾಡಿದರು. ಬಳಿಕ ಮಧ್ಯಾಹ್ನದ ಊಟಕ್ಕಾಗಿ ಶಿಬಿರಾರ್ಥಿಗಳು ತೆರಳಿದರು. ಊಟದ ವಿರಾಮದ ನಂತರ ಅಪರಾಹ್ನದ ಅವಧಿ ಶ್ರೀಮತಿ ಜ್ಯೋತಿ ಕೆ. ಪೂಜಾರಿಯವರ ಪಾಠ ಮಂಡನೆಯೊಂದಿಗೆ ಆರಂಭವಾಯಿತು. ಅವರು ' ಸರ್ವಜ್ಞನ ವಚನಗಳು ' ಎಂಬ ಪದ್ಯ ಪಾಠವನ್ನು ತಂತ್ರಜ್ಞಾನ ಬಳಸಿಕೊಂಡು ಮಂಡಿಸಿದರು. ತದನಂತರ ಶ್ರೀಮತಿ ಲಲಿತಾ, ಸ.ಶಿ, ಕಣಜಾರು ಇವರು ' ಅಜ್ಜಯ್ಯನ ಅಭ್ಯಂಜನ ' ಎಂಬ ಪಾಠವನ್ನು ತಂತ್ರಜ್ಞಾನದೊಂದಿಗೆ ನಿರ್ವಹಿಸಿದರು. ಇಲ್ಲಿ ಕೈಗೊಳ್ಳಬೇಕಾದ ಚಟುವಟಿಕೆಗಳ ಬಗ್ಗೆ ಸವಿವರವಾಗಿ ಚರ್ಚಿಸಲಾಯಿತು. ' ಸೌಪರ್ಣಿಕಾ ' ತಂಡದ ಶ್ರೀಮತಿ ನಿರ್ಮಲಾ ರವರು ' ಜೀವನ ದರ್ಶನ ' ದ ಪುರಂದರದಾಸರ ಕೀರ್ತನೆಯನ್ನು ಪಾಠಯೋಜನೆಯಾಗಿ ಮಂಡಿಸಿದರು. ತೀರ್ಥಸ್ನಾನ, ಧರ್ಮಗ್ರಂಥ, ಪಾಠದ ಹಂತಗಳ ಬಗ್ಗೆ ಚರ್ಚೆ ನಡೆಯಿತು. ಸೈಂಟ್ ಲಾರೆನ್ಸ್ ಪ್ರೌಢ ಶಾಲೆಯ ಸಿ|| ನಿವೇದಿತಾ ರವರು 'ಪರಿಸರ ಸಮತೋಲನ ' ಪಾಠಯೋಜನೆಯನ್ನು ಮಂಡಿಸಿದರು. ಪರಿಸರ, ಹಾವು ,ವೈರಿಗಳ ಬಗ್ಗೆ ಸವಿವರವಾಗಿ ಚರ್ಚಿಸಲಾಯಿತು. ತರಬೇತಿಯಲ್ಲಿ ಭಾಗವಹಿಸಿದ ಎಲ್ಲಾ ಶಿರಾರ್ಥಿಗಳು ತಮ್ಮ ಅನುಭವವನ್ನು ತಿಳಿಸಿದರು. ಸಮಾರೋಪ ಸಮಾರಂಭದಲ್ಲಿ ಶಿಬಿರ ನಿರ್ದೇಶಕರಾದ ಶ್ರೀ ಭಾಸ್ಕರ್ ಶೇಟ್ ಅಧ್ಯಕ್ಷತೆಯನ್ನು ವಹಿಸಿದ್ದರು. ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು, ಕಂಪ್ಯೂಟರ್ ವಿಭಾಗದ ಮುಖ್ಯಸ್ಥರು, ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ತರಬೇತಿಯಲ್ಲಿ ಪಡೆದ ಜ್ಞಾನವನ್ನು ತಮ್ಮ ತಮ್ಮ ತರಗತಿಗಳಲ್ಲಿ ಅಳವಡಿಸಿ,ಬೋಧನೆಯನ್ನು ಪರಿಣಾಮಕಾರಿಯಾಗಿ ಹೇಗೆ ಮಾಡಬಹುದೆಂದು ತಿಳಿಸಿದರು. ೪ ಜನ ಶಿಬಿರಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಒಟ್ಟಿನಲ್ಲಿ ೫ ದಿನಗಳ ಈ ತರಬೇತಿಯು ತುಂಬಾ ಪರಿಣಾಮಕಾರಿಯಾಗಿ ಮೂಡಿ ಬಂತು. ಧನ್ಯತಾ ಭಾವದೊಂದಿಗೆ ಎಲ್ಲಾ ಶಿಬಿರಾರ್ಥಿಗಳು ತೆರಳಲು ಅನುವಾದರು. ರಾಷ್ಟ್ರ ಗೀತೆಯೊಂದಿಗೆ ಎಸ್. ಟಿ. ಎಫ್. ತರಬೇತಿಗೆ ಪೂರ್ಣ ವಿರಾಮ ಹಾಕಲಾಯಿತು. ಬಾಳ ಬಾನಿನಲಿ ಚಂದ್ರಯಾನದಲಿ ತೇಲಿ ಬಾ.....ಎಂಬ ಕವಿವಾಣಿಯಂತೆ ಎಲ್ಲಾ ಶಿಕ್ಷಕರು ಈ ಪರಿಣಾಮಕಾರಿ ತರಬೇತಿಯ ಪ್ರಯೋಜನವನ್ನು ಪಡೆಯಲಿ , ತರಗತಿಗಳು ಸಂತಸದಾಯಕವಾಗಲಿ, ಎಲ್ಲರ ಮನೆ-ಮನಗಳು ಬೆಳಗಲೆಂದು ಸಂಪ್ರಾರ್ಥಿಸುತ್ತಾ ಈ ವರದಿಗೆ ಪೂರ್ಣವಿರಾಮವನ್ನು ಹಾಕುತ್ತಿದ್ದೇವೆ.