Upload workshop short report here (in ODT format), or type it in day wise here
+
+
'''1st Day'''
+
+
ಆರ್,ಎಮ್, ಎಸ್ ,ಎ ಅಡಿಯಲ್ಲಿ ಕನ್ನಡಭಾಷಾಭೋದಕರಿಗೆ ಎಸ್, ಟಿ,ಎಫ್ ತರಬೇತಿ ದಿನಾಂಕ: ೨೭/೧/೧೫ ರಂದು ಬೆಳಿಗ್ಗೆ ೧೧;೩೦ಕ್ಕೆ ಆರಂಭವಅಯಿತು. ಡಯಟ್ ಪ್ರಾಂಶುಪಾಲರಾದ ಚಂದ್ರಶೇಖರ ಸರ್ ಅವರು ಅತಿಥಿಗಳಾಗಿ ಆಗಮಿಸಿದ್ದರು. ಮತ್ತು ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶಂಕರ ಎ,ಬಿ ಯವರು ಕಾರ್ಯಕ್ರಮಕ್ಕೆ ಅಧ್ಯಕ್ಷ ರಾಗಿ ಆಗಮಿಸಿದ್ದರು. ಸಂಪನ್ಮೂಲ ವ್ಯ ಕ್ತಿ ಗಳಾದ ಶೇಖರಪ್ಪ ಸರ್ , ಪಂಡಿತ ಸರ್ ಮತ್ತು ಜಾಪರ್ ಸರ್ ಅವರ ಜೊತೆ ಗೂಡಿ ಕಾರ್ಯ ಕ್ರಮ ಆರಂಭಿಸಿದರು . ಸಿದ್ದಪ್ಪ ಆವಂಟಿ ಸರ್ ಅವರು ನಿರೂಪಣೆ ಮಾಡಿದರು. ನಂತರ ಸವಿ ಭೋಜನ ಮಾಡಿಯೇ ಕಂಪ್ಯೂಟರ್ ಲ್ಯಾಬ್ ಗೆ ಹೊರಟೆವು. ಕಂಪ್ಯೂಟರ್ ಲ್ಯಾಬ್ ನಲ್ಲಿ ಎಲ್ಲರೂ ಒಂದು ಕ್ಷಣ ಕಕ್ಕಾಬಿಕ್ಕಿಗೆ ಒಳಗಾದೆವು. ಏಕೆಂದರೆ ಅದರ ಮಾಹಿತಿ ಇನ್ನು ನಮಗೆ ಗೊತ್ತಿರಲಾರದ ಕಾರಣ . ಮುಂದೆ ಹಿರೇಮಠ ಸರ್ ಅವರು ಎಸ್,ಟಿ, ಎಫ್ ಮೂಲ ಉದ್ದೇಶ ಮತ್ತು ತತ್ವಗಳನ್ನು ಹೇಳಿದರು. ಜಾಫರ್ ಸರ್ ಅವರು ಕಂಪ್ಯೂಟರ್ ಹೇಗೆ ಆನ್ ಮಾಡಬೇಕು ಮತ್ತು ಕನ್ನಡ ಕೀಲಿಮಣೆ ವಿನ್ಯಾಸವನ್ನು ತಿಳಿಸಿಕೊಟ್ಟರು. ಇಲ್ಲಿಗೆ ಒಂದನೇ ದಿನದ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು.