STF 2015-16 Kalburgi

From Karnataka Open Educational Resources
Jump to navigation Jump to search

Science

Batch 1

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here
1st Day
ಡಯಟ್ ಕಮಲಾಪುರ ಕಲಬುರಗಿ ಜಲ್ಲೆ
ಎಸ್ ಟಿ ಎಪ್ ತರಬೇತಿ ವಿಜ್ಞಾನ -೨೦೧೫-೧೬
ದಿನಾಂಕ ೨ -೦೮-೨೦೧೫
ವರದಿ ವಾಚನ : ಜೇವರ್ಗಿ ತಂಡ
೨೦೧೫-೧೬ ನೇ ಸಾಲಿನ ವಿಜ್ಞಾನ ವಿಷಯದ ಎಸ್ ಟಿ ಎಫ್ ತರಬೇತಿಯು ಡಯಟ್ ಕಮಲಾಪುರದಲ್ಲಿ ದಿನಾಂಕ ೨೪-೦೮-೨೦೧೫ ರಿಂದ ೨೮-೦೮-೨೦೧೫ ರ ವರೆಗೆ ನಡೆಯಲಿರುವ ತರಬೇತಿಯಲ್ಲಿ ಮೋದಲ ದಿವಸದಂದು
ಉದ್ಘಾಟನೆಯೋಂದಿಗೆ ತರಬೇತಿಯು ಪ್ರಾರಂಬಿಸಲಾಯಿತು. ಆಗಮಿಸಿದ ಶಿಕ್ಷಕರಿಗೆ ಶ್ರೀ ದುಂಡಪ್ಪ ಹುಡುಗೆ ಉಪನ್ಯಾಸಕರು ಡಯಟ್ ಕಮಲಾಪುರ ರವರಿಂದ ಸ್ವಾಗತವನ್ನು ಕೋರಲಾಯಿತು.ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ
ಹುಡುಗೆ ಸರ್ ತರಬೇತಿಲ್ಲೆಯ ಉದ್ದೇಶಗಳನ್ನು ತಿಳಿಸಿದರು
ನಂತರ ಶ್ರೀ ಶಶಿಧರ ಸಂಪನ್ಮೂಲ ವ್ಯಕ್ತಿಗಳು FOSS (Free and Open Source software) ಕುರಿತು ವಿವರವಾಗಿ ತಿಳಿಸಿದರು. ನಂತರ ಊಟದ ವಿರಾಮ ನೀಡಲಾಯಿತು. ಊಟದ ನಂತರ ಶ್ರೀ ಸಿದ್ದಪ್ಪ ಕಕ್ಕಳಮೇಲಿ
ಸಂಪನ್ಮೂಲ ವ್ಯಕ್ತಿಗಳು ಲಿಬ್ರೆ ಆಫೀಸ್, ಕನ್ನಡ ಲಿಪಿ, ಇಮೇಜ್ ಸೇವಿಂಗ್ ಹೈಪರ್ ಲಿಂಕ್ ಕೋಡುವುದರ ಕುರಿತು ವಿವರಿಸಿದರು. ನಂತರ ಹ್ಯಾಂಡ್ಸ ಆನ್ ಮಾಡಲಾಯಿತು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಜಗದೀಶ್ ಅಕ್ಕಿ
ಸಂಪನ್ಮೂಲ ವ್ಯಕ್ತಿಗಳು ಜಿ-ಮೇಲ್ ನಲ್ಲಿ ಮೇಲ್ ಮಾಡುವುದು ಹಾಗೂ ಕ್ರೀಯೇಟ್ ಮಾಡುವುದು ಹೇಳಿಕೋಟ್ಟರು. ನಾವೇಲ್ಲರು ಹ್ಯಾಂಡ್ಸ ಆನ್ ಮಾಡಿ ನಮ್ಮ ಮೇಲ್ ಐಡಿ ಗಳನ್ನು ಹೋದಿದೆವು.ಇದರೋದಿಗೆ ಮೋದಲನೆ ದಿನವು ಮುಕ್ತಾಯವಾಯಿತು
2nd Day
ಡಯಟ್ ಕಮಲಾಪುರ ಕಲಬುರಗಿ ಜಲ್ಲೆ
ಎಸ್ ಟಿ ಎಪ್ ತರಬೇತಿ ವಿಜ್ಞಾನ -೨೦೧೫-೧೬
ದಿನಾಂಕ ೨೫-೦೮-೨೦೧೫
ವರದಿ ವಾಚನ :ಜೇವರ್ಗಿ ತಂಡ
ಸರಿಯಾದ ದೃಷ್ಟಿ , ಸರಿಯಾದ ಸಂಕಲ್ಪ , ಸರಿಯಾದ ಮಾತು ,ಸರಿಯಾದ ಕೃತ್ಯ , ಸರಿಯಾದ ಜೀವನೋಪಾಯ ಸರಿಯಾದ ಪ್ರಯತ್ನ, ಸರಿಯಾದ ಜಾಗ್ರತೆ, ಸರಿಯಾದ ಮನೋಏಕಾಗ್ರತೆ!
ಈ ಎಂಟು ಮಾರ್ಗಗಳ ಜೋತೆ ಎರಡನೇ ದಿನದ ತರಬೇತಿ ಸರಿಯಾಗಿ ೯:೪೫ ಕ್ಕೆ ಪ್ರಾರಂಭವಾಯಿತು ಮೋದಲನೇಯದಾಗಿ ಪ್ರಾರ್ಥನೆ ಶ್ರೀ ಮತಿ ಸೀತಾ ಮೇಡಮ್ ಅವರಿಂದ, ಶುಭಚಿಂತನೆ ಮಾಧವಿ ಮೇಡಮ್ ಅವರಿಂದ ನೇರವೇರಿತು,ವಿಜ್ಞಾನ ವಿಷ್ಮಯದ ಕುರಿತು ಮಾತನಾಡಿದರು
ನಂತರ ದುಂಡಪ್ಪ ಹುಡುಗೆ ಸರ್ ಅವರು ಕೋಯರ್ ಕುರಿತು ಪರಿಚಯಿಸಿದರು
ನಂತರ ಶಶಿಧರ್ ಮುಚ್ಚಂಡಿಯವರು ಕೋಯರ್ ನ ಸಂಪನ್ಮೂಲಗಳನ್ನು ಹೇಗೆ ಬಳಸಿಕೋಳ್ಳಬೇಕು ಪ್ರಯೋಗಗಳು,ಪ್ರಶ್ನ ಪತ್ರಿಕೆಗಳು,ಹೀಗೆ ಹಲವಾರು ವಿಷಯಗಳನ್ನು ತಿಳಿದು ಕೋಳ್ಳಲು ಸಹಾಯಕವಾಗುತ್ತದೆ ಎಂಬುದು ತಳಿದು ಸಂತೋಷವಾಯಿತು
ನಂತರ ಹ್ಯಾಂಡ್ಸ ಆನ್ ಮಾಡಿಸಲಾಯಿತು. ಮದ್ಯಾನ ಊಟದ ಬಿಡುವು ನೀಡಲಾಯಿತು. ಊಟದ ನಂತರ ಶ್ರೀ ಸಿದ್ದಪ್ಪ ಕಕ್ಕಳಮೇಲಿ ಸಂಪನ್ಮೂಲ ವ್ಯಕ್ತಿಗಳು ವಿಜ್ಞಾನ ಶಿಕ್ಷಕರು ಪ್ರಯೋಗ ಮಾಡುವಾಗ ಪ್ರಯೋಗಾಲಯದಲ್ಲಿ ಎದರಿಸುವ ಸಮಸ್ಯಗಳ ಕುರಿತು ಚರ್ಚೆಗೆ ಎಡೆಮಾಡಿಕೋಟ್ಟರು
ಅದರಿಂದ ಪ್ರಯೋಗ ಮಾಡುವಾಗ ಬಳಸಬಹುದಾದ ವಿಧಾನ ಪ್ರಯೋಗದ ಹಂತಗಳು ,ಉಪಕರಣಗಳ ಬಳಕೆ ಹೀಗೆ ಪ್ರಯೋಗದಲ್ಲಿ ಬಳಸುವ ೧೦ ಹಂತಗಳ ಕುರಿತು ವಿವರವಾಗಿ ತಿಳಿಸಿಕೋಟ್ಟರು
ವಿವಿದ ತಂಡದಿಂದ ಪ್ರಯೋಗಗಳನ್ನು ಕೈಗೋಳ್ಳಲು ತಿಳಿಸಿದರು
ಅದರಿಂದ ನಾವು ಪ್ರಯೋಗಗಳ ಪಟ್ಟಿ ಮಾಡಿಕೋಂಡು ಪ್ರಯೋಗ ಮಾಡಲು ಹಂತಗಳನ್ನು ರಚಿಸುವಲ್ಲಿ ತೋಡಗಿದೆವು. ನಂತರ ಕನ್ನಡ ಚಪ್ಪಾಳೆ ಹಾಡಿನ ವಿಡಿಯೋ ವೀಕ್ಷಿಸಿ ಸಂತೋಷಪಟ್ಟೆವು
ನಂತರ ಜಗದೀಶ್ ಅಕ್ಕಿ ಅವರಿಂದ ಮೈಂಡ್ ಮ್ಯಾಪ್ ಕುರಿತು ವಿವರಿಸಲಾಯಿತು. ಇದು ಮಕ್ಕಳು ಜ್ಞಾನವನ್ನು ಕಟ್ಟಿಕೋಳ್ಳ ಲು ತುಂಬಾ ಸಹಾಯಕ ವಾಗಿದೆ. ನಂತರ ಹ್ಯಾಂಡ್ಸ ಆನ್ ಮಾಡಿಸಲಾಯಿತು ೫ ಗಂಟೆಗೆ ಎಲ್ಲರಿಗೂ ಮೂರನೆ ದಿನದ ಕಾರ್ಯ ಹಂಚಿಕೆ ಮಾಡಲಾಯಿತು
3rd Day
ಡಯಟ್ ಕಮಲಾಪುರ ಕಲಬುರಗಿ ಜಲ್ಲೆ
ಎಸ್ ಟಿ ಎಪ್ ತರಬೇತಿ ವಿಜ್ಞಾನ -೨೦೧೫-೧೬
ದಿನಾಂಕ ೨೭ -೦೮-೨೦೧೫
ವರದಿ ವಾಚನ : ಅಫಜಲಫೂರ ತಂಡ
STF ತರಬೇತಿ ನೀಡುತ್ತಿರುವ ಎಲ್ಲಾ ಸಂಪನ್ಮೂಲ ವ್ಯಕ್ತಿ ಗಳಿಗೆ ನನ್ನ ನಮಸ್ಕಾರಗಳು ಹಾಗೂ ಎಲ್ಲಾ ಶಕ್ಷಕ ವೃಂದದವರಿಗೂ ನನ್ನ ನಮಸ್ಕಾರಗಳು. ನಿನ್ನೆ ಅಂದರೆ ೨೬/೦೭/೨೦೧೫ ರಂದು ಬೆಳಿಗ್ಗೆ ೧೦ ಗಂಟೆಗೆ ಎಲ್ಲಾ ಶಿಕ್ಷಕರು ತಮಗೆ ಬೇಕಾದಂತಹ ವಿಜ್ಞಾನ ಸಾಮುಗ್ರಿಗಳನ್ನು ತಯಾರಿ ಮಾಡಿಟ್ಟುಕೋಂಡರು. ಆದ್ದರಿಂದ ತರಬೇತಿ ೧೦:೩೦ ಕ್ಕೆ ಪ್ರಾರಂಭವಾಯಿತು. ಮೋದಲಿಗೆ ಪ್ರಾರ್ಥನೆ ಬೆಟಗೆರಾ ಶಾಲೆಯ ಶಕ್ಷಕರಾದ ಆನಂದ ಸರ್ ಅವರಿಂದ, ಅನಂತರ ವರದಿವಾಚನ ಕಲ್ಪನಾ ಮೇಡಮ್ ಅವರು ಮಾಡಿದರು
ಯಾವ ರೀತಿ ಪ್ರಯೋಗ ಮಾಡಬೇಕು ಅವುಗಳ ವಿಧಾನಗಳು ಬಗ್ಗೆ ಜಗದೀಶ ಸರ್ ಅವರು ತಿಳಿಸಿ ಕೋಟ್ಟರು. ನಂತರ ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಸೋಮಶೇಖರ ಪ್ರಯೋಗದ ಕುರಿತು ಮಾಹಿತಿಯನ್ನು ವದಗಿಸಿದರು. ಹಾಗೂ ನಮ್ಮೆಲ್ಲರಿಗೂ ಬೇಕಾಗಿರುವಂತಹ ವಿಜ್ಞಾನ ಸಲಕರಣೆಗಳನ್ನು ಒದಗಿಸಿದ್ದಕ್ಕಾಗಿ ಅವರಿಗೆ ದನ್ಯವಾದಗಳು. ನಂತರ ಶ್ರೀ ದುಂಡಪ್ಪ ಹುಡುಗೆ ಅವರು ಸಮಯ ಪಾಲನೆ ಬಗ್ಗೆ ಮಾಹಿತಿ ನೀಡಿದರು. ಅದಾದ ನಂತರ ತಮ್ಮ ಪ್ರಯೋಗಗಳಿಗೆ ಬೇಕಾದಂತಹ ಸಾಮುಗ್ರಿಗಳನ್ನು ಜೋಡಿಸಿಟ್ಟುಕೋಂಡರು. ೧೧:೩೦ ಕ್ಕೆ ಚಹಾ ವಿರಾಮ ನಂತರ ಪ್ರಯೋಗಗಳನ್ನು ಪ್ರಾರಂಭ ಮಾಡಲಾಯಿತು
ಮೋದಲನೇಯವರಾಗಿ ಯಾಸ್ಮಿನ್ ,ಕಲ್ಪನಾ, ಸೀತಮ್ಮ ಹಾಗೂ ಜಯಶ್ರೀ ಮೇಡಮ್ ರವರು ಮುನ್ನಡೆ ಹಾಗೂ ವ್ಯತಿರಿಕ್ತ ಒಲುಮೆ ಕುರಿತು ಪ್ರಯೋಗವನ್ನು ಮಾಡಿದರು. ಎರಡನೇಯದಾಗಿ ಜೇವರ್ಗಿ ತಂಡದಿಂದ ಬೆಳಕಿನ ವಕ್ರೀಭವನದ ಪ್ರಯೋಗವನ್ನು ಮಾಡುತ್ತಿದ್ದರೆ ಜಗದೀಶ್ ಸರ್ ಹಾಗೂ ಶಶಿಧರ್ ಸಂಪನ್ಮೂಲ ವ್ಯಕ್ತಿಗಳು ವಿಡಿಯೋ ಮಾಡಿಕೋಳ್ಳುತ್ತಿದ್ದರು. ಮತ್ತು ಶ್ರೀ ಸಿದ್ದಪ್ಪ ಸಿರ್ ಅವರು ಪ್ರಯೋಗಕ್ಕೆ ಬೇಕಾದ ಮಾರ್ಗದರ್ಶನ ಮಾಡುತ್ತಿದ್ದರು. ನಂತರ ಸೇಡಂ ತಂಡದಿಂದ ಹುದುಗುವಿಕೆಯ ಪ್ರಯೋಗವನ್ನು ಪ್ರದರ್ಶಿಸಲಾಯಿತು. ನಂತರ ಚಿಂಚೋಳ್ಳಿ ತಂಡದಿಂದ ಆಹಾರದಲ್ಲಿ ಆಗುವ ಕಲಬೇರಿಕೆ ಪದಾರ್ಥಗಳನ್ನು ಪತ್ತೆ ಹಚ್ಚುವ ವಿಧಾನದ ಬಗ್ಗೆ ಪ್ರಯೋಗವನ್ನು ಕೈಗೋಂಡರು ನಂತರ ೨:೩೦ಕ್ಕೆ ಊಡದ ವಿರಾಮ ನೀಡಲಾಯಿತು.ನಂತರ ೨ನೇತಂಡದಿಂದ ಸಮಯಪಾಲನೆ ಮಾಡಲಾಯಿತು
೨:೩೦ ಕ್ಕೆ ಊಟದ ನಂತರ ಅಫಜಲಫೂರ ತಂಡದಿಂದ ವಿದ್ಯದ್ವಿಭಾಜ್ಯಗಳಾದ ಪ್ರಭಲ ಹಾಗೂ ದುರ್ಬಲ ವಿದ್ಯು ಬಾಜ್ಯಗಳ ಬಗ್ಗೆ ಪ್ರಯೋಗ ಮಾಡಿದರು. ನಂತರ ಕಲಬುರ್ಗಿ ತಂಡದಿಂದ ಲೋಹಗಳ ಮೇಲೆ ಸಾರೀಕೃತ ಹೈಡ್ರೋಜನ್ ಆಮ್ಲಗಳ ವರ್ತನೆ ಪ್ರಯೋಗವನ್ನು ಮಾಡಿದರು. ಆಳಂದ ತಂಡದಿಂದ ವಾಣಿಶ್ರೀ ಮತ್ತು ಸಫೋರಾ ನಾಜ್ರವರು ಲೋಹಗಳ ರಅಸಾಯನಿಕ ಗುಣಗಳ ಬಗ್ಗೆ ಪ್ರಯೋಗಗಳನ್ನು ತೋರಿಸಿದರು
ನಂತರ ವಿಜಯಕುಮಾರ ಮತ್ತು ಮಲ್ಲಿಕಾರ್ಜುನ್ ಸರ್ ಅವರು ಲೋಹಗಳ ರಅಸಾಯನಿಕ ಗುಣಗಳ ಪ್ರಯೋಗ ಮಾಡಬೇಕಾದರೆ ಎಚ್ಚರಿಕೆ ತೆಗೆದುಕೊಳ್ಳದೆ ಇದ್ದರೆ ಆಗುವ ಅನಾಹುತಗಳನ್ನು ಮಾಡಿ ತೋರಿಸಿದರು. ಇದೋಂದು ವಿಜ್ಞಾನದ ತರಬೇತಿ ಆಗಿದ್ದರೂ ಸಹ ಹಾಸ್ಯ ಮಾಡಿ ಎಲ್ಲರೂ ನಗುವಂತೆ ಮನೋರಂಜನೆ ನೀಡಿದರು
೩:೩೦ ಕ್ಕೆ ಚಹಾ ವಿರಾಮ ನೀಡಲಾಯಿತು ಕೋನೆಗೆ ಆಳಂದ ತಂಡದಿಂದ ಸಫೋನಿಪಿಕೇಷನ್ ಕುರಿತು ಪ್ರಯೋಗ ಮಾಡಲಾಯಿತು ನಂತರ ನಮ್ಮ ಪ್ರಯೋಗಗಳನ್ನು ಮಾಡಲು ಸಹಾಯ ಮಾಡಿದ ಶಾಲಾ ಮುಖ್ಯಶಿಕ್ಷಕರಿಗೆ ಹಾಗೂ ಸಿಬ್ಬಂದಿಗೆದನ್ಯವಾದಗಳನ್ನು ತಿಳಿಸುವದರೋಂದಿಗೆ ಇಂದಿನ ಕಾರ್ಯಕ್ರಮ ಮುಕ್ತಾಯ ಗೋಳಿಸಲಾಯಿತು
4th Day
ಡಯಟ್ ಕಮಲಾಪುರ ಕಲಬುರಗಿ ಜಲ್ಲೆ
ಎಸ್ ಟಿ ಎಪ್ ತರಬೇತಿ ವಿಜ್ಞಾನ -೨೦೧೫-೧೬
ದಿನಾಂಕ ೨೭ -೦೮-೨೦೧೫
೪ ನೇ ದಿನದ ವರದಿ
ವರದಿವಾಚನ
ನಾಲ್ಕನೇ ದಿನದ ತರಬೇತಿಯು ೧೦ ಗಂಟೆಗೆ ಪ್ರಾರ್ಥನೆಯೋಂದಿಗೆ ಪ್ರಾರಂಬವಾಯಿತು.ಪ್ರಾರ್ಥನಾ ಗೀತೆಯನ್ನು ಶ್ರೀ ಗಣಪತಿ ಸರ್ ಅವರು. ಶುಭಚಿಂತನೆಯನ್ನು ಮಾಧವಿ ಮ್ಯಾಡಮ್ ರವರು ಹಾಗೂ ವಿಜ್ಞಾನ ವಿಷ್ಮಯ ವನ್ನು ಯಾಸ್ಮಿನ್ ಮೇಡಮ್ ರವರು ನಡೆಸಿಕೋಟ್ಟರು. ಸರಿಯಾಗಿ೧೦:೩೦ಕ್ಕೆ ಹಿಂದಿನ ದಿನದMದು ಶಿಕ್ಷಕರು ಕೈಗೋಂಡ ಪ್ರಾಯೋಗಿಕ ಚಟಿವಟಿಕೆಗಳ ಕುರಿತು ೧೦ ಹಂತಗಳನ್ನು ಬಳಸಿ ರಚಿಸಿದ ಚಟುವಟಿಕೆಯ ವಿವರಣೆಯನ್ನು ತಂಡ ತಂಡವಾಗಿ ಬಂದು ಪ್ರಸ್ತುತಪಡಿಸಿದರು
ಈ ಮದ್ಯದಲ್ಲಿ ಡಯಟ್ ನ ಪ್ರಭಾರಿಪ್ರಾಂಶುಪಾಲರಾದ ಶ್ರೀ ರಾಯಪ್ಪ ರೆಡ್ಡಿ ಸರ್ ಅವರು ಬಂದು ಶಿಕ್ಷಕರೋಂದಿಗೆ,ಚಟುವಟಿಕೆಗಳನ್ನುಮಕ್ಕಳಿಗೆ ಮನಮುಟ್ಟುವಂತೆ ಹೇಗೆ ಮಾಡಬಹುದು ಎಂಬುದರ ಕುರಿತು ಸುದೀರ್ಘವಾಗಿಚರ್ಚಿಸಿದರು. ನಂತರ ೧;೩೦ಕ್ಕೆ ಊಟದ ವಿರಾಮ
ದಿನದ ಎರಡನೆ ಅವದಿಯು ೨:೩೦ ಕ್ಕೆ ಆರಂಭವಾಯಿತು. ಈ ಅವದಿಯಲ್ಲಿ ಶ್ರೀ ಶಶಿಧರ್ ಅವರು PhET Simulation ಕುರಿತು ವಿವರಿಸಿದರು. ನಂತರ ಹ್ಯಾಂಡ್ಸ ಆನ್ ನೀಡಲಾಯಿತು. ಇದರೋಂದಿಗೆನಾಲ್ಕನೆ ದಿನದ ತರಬೇತಿಯು ಮುಕ್ತಾಯವಾಯಿತು
5th Day
ಡಯಟ್ ಕಮಲಾಪುರ ಕಲಬುರಗಿ ಜಲ್ಲೆ
ಎಸ್ ಟಿ ಎಪ್ ತರಬೇತಿ ವಿಜ್ಞಾನ -೨೦೧೫-೧೬
ದಿನಾಂಕ ೨೮ ೦೮-೨೦೧೫
೫ನೇ ದಿನದ ವರದಿವಾಚನ
ದಿನಾಂಕ ೨೮-೦೮-೨೦೧೫ ರಂದು ಮುಂಜಾನೆ ೯:೪೫ ಗಂಟೆಗೆಎಲ್ಲಾ ಶಿಕ್ಷಕರು, ಹಾಗೂಸಂಪನ್ಮೂಲ ವ್ಯಕ್ತಿಗಳು ಮತ್ತು ತರಬೇತಿ ನೋಡಲ್ ಅದಿಕಾರಿಗಳಾದ ಶ್ರೀ ಹುಡುಗೆ ಗುಂಡಪ್ಪ ಉಪನ್ಯಾಸಕರು ಡಯಟ್ ಕಮಲಾಪೂರ ಅವರುಗಳು ಹಾಜರಿದ್ದರು. ಇಂದಿನ ತರಬೆತಿಯು ಸರಿಯಾಗಿ ಮುಂಜಾನೆ ೧೦ ಗಂಟೆಗೆ ಆರಂಭವಾಯಿತು. ಶ್ರೀ ಆಷಿಫ್ ಸಹ ಶಿಕ್ಷಕರು ಸರಕಾರಿ ಉರ್ದು ಪ್ರೌಡಶಾಲೆ ಆತನೂರ ತಾ: ಅಫಜಲಫುರ ಅವರಿಂದ ಪ್ರಾರ್ಥನೆ ಉತ್ತಮವಾಗಿ ಮೂಡಿಬಂತು ಅದೇ ರೀತಿಯಾಗಿ ವಿಜ್ಞಾನ ವಿಷ್ಮಯವನ್ನು ಆಷಿಫ್ ನೆರವೇರಿಸಿ ಕೋಟ್ಟರು. ಶಭ ಚಿಂತನೆಯನ್ನು ಶಭಾನಾ ಫರ್ವಿನ್ ಸ ಶಿ ಸರಕಾರಿ ಪ್ರೌಢ ಶಾಲೆ ಹುಣಶಿಹಡಗಿಲ್ ಇವರು ಮಂಡಿಸಿದರು. ತದನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಜಗದೀಶ್ ಸರ್ ಅವರು ಮೋದಲ ಅವದಿಯಲ್ಲಿ GIMP ಇಮೇಜ್ ಎಡಿಟರ್ ಬಗ್ಗೆ ವಿವರವಾಗಿ ತಿಳಿಸಿಕೋಟ್ಟರು ನಂತರ ಹ್ಯಾಂಡ್ಸ ಆನ್ ನೀಡಲಾಯಿತು
ಎರಡನೇ ಅವದಿಯಲ್ಲಿ ಇನ್ನೋಬ್ಬ ಸಂನ್ಮೂಲ ವ್ಯಕ್ತಿಗಳಾದ ಶ್ರೀ ಶಶಿಧರ್ ಅವರು ಡೆಸ್ಕಟಾಫ್ ರೆಕಾಡ್ದಿಂಗ್ ಬಗ್ಗೆ ಸವಿವರವಾಗಿ ವಿವರಿಸಿದರು. ನಂತರ ಹ್ಯಾಂಡ್ಸ ಆನ್ ನೀಡಲಾಯಿತು. ೧;೩೦ಕ್ಕೆ ಊಟದ ವಿರಾಮ
ನಂತರ ೨:೩೦ಕ್ಕೆ ಎರಡನೇ ಅವದಿಯ ಆರಂಭ. ಈ ಅವದಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಿದ್ದಪ್ಪ ಸರ್ ಅವರು ಕೋಯರ್ ನಲ್ಲಿ ಫೀಡ್ ಬ್ಯಾಕ್ ತುಂಬುವ ಬಗ್ಗೆ ಮಾಹಿತಿ ನೀಡಿದರು. ಹಾಗೂ ವಿಡಿಯೋ ಎಡಿಟಿಂಗ್ ಬಗ್ಗೆ ವಿವರವಾಗಿ ತಿಳಿಸಿಕೋಟ್ಟರು.ತದ ನಂತರ ಶ್ರೀ ಶಶಿಧರ್ ಸರ್ ಅವರು ಸ್ಟೆಲ್ಲಾರಿಯಮ್ ಬಗ್ಗೆ ವಿವರಿಸಿದರು. ಕೋನೆಯಲ್ಲಿ ಸರಳ ಸಮಾರೋಪ ಸಮಾರಂಭದೋಂದಿಗೆ ಕಾರ್ಯಕ್ರಮವನ್ನು ಮುಗಿಸಿದರು

Batch 2

1st Day
ಡಯಟ್ ಕಮಲಾಪುರ ಕಲಬುರಗಿ ಜಲ್ಲೆ
ಎಸ್ ಟಿ ಎಪ್ ತರಬೇತಿ ವಿಜ್ಞಾನ -೨೦೧೫-೧೬
೧ ನೇ ದಿನದ ವರದಿ
ವರದಿ ೨೦೧೫-೧೬ ನೇ ಸಾಲಿನ STF ತರಬೇತಿ ಯ ಎರಡನೇ ಹಂತವು ದಿನಾಂಕ ೩೧-೦೮-೨೦೧೫ ರಿಂದ ೪-೦೯-೨೦೧೫ ರವರೆಗೆ ಐದು ದಿನದ ತರಬೇತಿಯಾಗಿರುತ್ತದೆ. ವಿವಿಧ ತಾಲೂಕು ಗಳಿಂದ ಬಂದಂತಹ ವಿಜ್ಞಾನ ಶಿಕ್ಷಕರು ಬೆಳಿಗ್ಗೆ ೧೦:೦೦ ಗಂಟೆಗೆ ೧೧:೦೦ ರವರೆಗೆ ತಮ್ಮ ವಿವಿರಗಳೋಂದಿಗೆ ನೋಂದಣಿ ಮಾಡಿದರು. ನಂತರ ಕಾರ್ಯಕ್ರಮದ ಪ್ರಾರಂಭವನ್ನು ಮಾಡಲಾಯಿತು. ಕಾರ್ಯಕ್ರಮವನ್ನು ಸಿದ್ದಪ್ಪ ಕಕ್ಕಳಮೇಲಿ ನಿರುಪಿಸಿದರು ಹುಡುಗೆ ಗುಂಡಪ್ಪ ಉಪನ್ಯಾಸಕರು ಪ್ರಾಸತಾವಿಕವಾಗಿ ಮಾತನಾಡಿದರು,ಶ್ರೀ ಗೋರಲ್ ಹಿರಿಯ ಉಪನ್ಯಾಸಕರು ಡಯಟ್ ರವರು ಉದ್ಘಾಟಿಸಿದರು ಶಶಿಧರ್ ಮುಚ್ಚಂಡಿರವರು ವಂದಿಸಿದರು. ನಂತರ ಶಶಿದರರವರಿಂದ FOSS ಕುರಿತು ಧೀರ್ಘವಾಗಿದೆ ವಿವರಿಸಲಾಯಿತು. ನಂತರ ಇ-ಮೇಲ್ ಗಳನ್ನು ಕ್ರೀಯೇಟ್ ಮಾಡುವುದರೋಂದಿಗೆ ಎಲ್ಲರೂ ಇ-ಮೇಲ್ ನ ಅಕೌಂಟ ಹೋಂದಿದರು. ತದನಂತರ ಊಟದ ಬಿಡುವು ನೀಡಲಾಯಿತು.
ಮದ್ಯಾನ ಊಟದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಿದ್ದು ಕಕ್ಕಳಮೇಲಿ ಅವರು ಫೋಲ್ಡರ್ ತಯಾರಿಸುವುದು ಹೇಗೆ ಮತ್ತು ಓಡಿಟಿ ಪೈಲ್ ನಲ್ಲಿ ಕನ್ನಡ ಬರೆಯುವುದನದನು ವಿವಿರವಾಗಿ ಕಲಿಸಿಕೋಟ್ಟರು ನಂತರ ನಾವೆಲ್ಲರೂ ಹ್ಯಾಂಡ್ಸ ಆನ್ ಮಾಡಿಸಲಾಯಿತು. ನಂತರ ಜಗದೀಶ್ ಅಕ್ಕಿ ಸಂಪನ್ಮೂಲ ವ್ಯಕ್ತಿಗಳು GIMP ಮತ್ತು ಇಮೇಜ್ ಎಡಿಟರ್ ಬಗ್ಗೆ ಹೇಳಿಕೋಟ್ಟರು.ನಂತರ ನಾವೆಲ್ಲರೂ ಹ್ಯಾಂಡ್ಸ ಆನ್ ಮಾಡಿದೆವು. ಇದರೋಂದಿಗೆ ಮೋದಲನೆ ದಿನದ ತರಬೇತಿ ಮುಕ್ತಾಯವಾಯಿತು.
2nd Day
ಡಯಟ್ ಕಮಲಾಪುರ ಕಲಬುರಗಿ ಜಲ್ಲೆ
ಎಸ್ ಟಿ ಎಪ್ ತರಬೇತಿ ವಿಜ್ಞಾನ -೨೦೧೫-೧೬
೨ ನೇ ದಿನದ ವರದಿ
ವರದಿ ವಾಚನ: ಅಫ ಜಲಪೂರ ತಂಡ
ದಿನಾಂಕ ೦೧-೦೯-೨೦೧೫ ರಂದು ಬೆಳಿಗ್ಗೆ ಎಸ್ ಟಿ ಎಫ್ ತರಬೇತಿಯು ಪ್ರಾರ್ಥನೆಯೋಂದಿಗೆ ಪ್ರಾರಂಭವಾಗಿ ಚಿತ್ತಾಪೂರ ತಂಡದಿಂದ ಪ್ರಾರ್ಥನೆ, ಕಲಬುರಗಿ ತಂಡದಿಂದ ಶುಭ ಚಿಂತನೆ, ಜೇವರ್ಗಿ ತಂಡದಿಂದ ವರದಿವಾಚನ ಹಾಗೂ ಚಿತ್ತಾಪೂರ ತಂಡದಿಂದ ವಜ್ಞಾನ ವಿಷ್ಮಯ ವನ್ನು ನಡೆಸಿಕೋಟ್ಟರು. ಇದಾದ ನಂತರ ಹಿರೇಮಠ್ ಸರ್ ಅವರಿಂದ ತರಬೇತಿ ನೀಯಮಗಳನ್ನು ಕೇಳಪಟ್ಟೆವು. ನಂತರ ಶ್ರೀ ಶಶಿಧರ್ ಮುಚ್ಚಂಡಿ ಕೋಯರ್ ತಂತ್ರಾಂಶ ಕುರಿತು ತಿಳಿಸಿ ಕೋಟ್ಟರು. ಅದರಲ್ಲಿ ಬರುವ ಎಲ್ಲಾ ಭಾಗಗಳನ್ನು ವಿವರವಾಗಿ ತಿಳಿಸಿಕೋಟ್ಟರು. ಅಲ್ಲದೆ ಪ್ರಯೋಗಗಳ ಪಟ್ಟಿಯಿಂದ ಒಂದು ವಿಡಿಯೋ ನೋಡಲು ಅನುವು ಮಾಡಿ ಕೋಟ್ಟರು. ಇದಾದ ನಂತರ ಎಲ್ಲಾ ಶಿಕ್ಷಕರು ಹ್ಯಾಂಡ್ಸ ಆನ್ ಮಾಡಿದರು. ನಂತರ ಊಟದ ಕರೆ ಬಂದ ನಿಮಿತ್ಯ ಎಲ್ಲರೂ ಊಟಕ್ಕೆ ನಡೆದರು.
ಊಟ ಮುಗಿಸಿ ಬಂದ ನಂತರ ಶ್ರೀ ಸಿದ್ದು ಕಕ್ಕಳಮೇಲಿ ಗುರುಗಳು ವೆಲ್ಕಮ್ ಚಪ್ಪಾಳೆ ಹಾಕಿಸುವುದರ ಮೂಲಕ ಒಂದು ಚಟುವಟಿಕೆ ಮಾಡಿಸಿದರು.ನಂತರ ಅವರು ಪ್ರಯೋಗಶಾಲೆಗಳ ಮಹತ್ವ ಹಾಗೂ ಉಪಯೋಗದ ಕುರಿತು ಮಾರ್ಗದರ್ಶನ ಮಾಡಿದರು.ಅಲ್ಲದೆ ಅವರು ಮಾಡಿರುವ ಪ್ರಯೋಗ ತಾಮ್ರದ ವಿದ್ಯಲ್ಲೆಪನ ಕ್ರಿಯೆ ಕುರಿತ ಚಟುವಟಿಕೆ ಹಾಗೂ ವಿಡಿಯೋ ಪ್ರದರ್ಶನ ವನ್ನು ಮಾಡಿದರು. ಈ ರೀತಿಯಾಗಿ ಶಿಕ್ಷಕರು ಕೈಗೋಳ್ಳಬೇಕಾದ ಪ್ರಯೋಗದ ಕುರಿತು ತಿಳಿಸಿಕೋಟ್ಟರು. ಮತ್ತು ನಮಗೆಲ್ಲರಿಗೂ ಒಂದೋಂದು ಪ್ರಾಥಕ್ಷಿಕೆಯನ್ನು ಕೋಡಲು ತಿಳಿಸಿದರು. ನಂತರ ಜಗದೀಶ ಅಕ್ಕಿ ಅವರು ಶಿಕ್ಷಕರು ಓಡಿಟಿ ತಯಾರಿಸುವ ಕುರಿತು ಎಲ್ಲರನ್ನು ಹೇಳಿ ಅವರವರು ಮಾಡುವ ಪ್ರಯೋಗದ ಪಟ್ಟಿಯನ್ನುತಯಾರಿಸಿಕೋಂಡರು. ಇಲ್ಲಿಗೆ ಎರಡನೆ ದಿನದ ತರಬೇತಿಯು ಮುಕ್ತಾಯವಾಯಿತು.
3rd Day
ಡಯಟ್ ಕಮಲಾಪುರ ಕಲಬುರಗಿ ಜಲ್ಲೆ
ಎಸ್ ಟಿ ಎಪ್ ತರಬೇತಿ ವಿಜ್ಞಾನ -೨೦೧೫-೧೬
೩ನೇ ದಿನದ ವರದಿ
ಮೂರನೆ ದಿನದ ವರದಿವಾಚನ
ಜೇವರ್ಗಿ ತಂಡದಿಂದ:
ಪ್ರಾರ್ಥನೆ ಯನ್ನು ದೀಪಾ ಸ ಶಿ ಚಿಂಚೋಳ್ಳಿ ತಾಲ್ಲೂಕು, ಶುಭ ಚಿಂತನೆಯನ್ನು ಶ್ರೀ ಸುಧಾಕರ ಸ ಶಿ ಚಿತ್ತಾಪುರ ತಂಡ ದಿಂದ, ವಿಜ್ಞಾನ ವಿಷಯ ಕಲಬರ್ಗಿ ತಂಡ ದಿಂದ ಮಾಡಲಾಯಿತು. ನಂತರ ಶ್ರೀ ಶಶಿಧರ್ ಅವರು ಕಾರ್ಯ ಹಂಚಿಕೆ ಕುರಿತು ತಿಳಿಸಿದರು. ನಂತರ ಎಲ್ಲರೂ ಚಟುವಟಿಕೆಗೆ ಸಂಬಂದಿಸಿದಂತೆ ತಯಾರಿ ಮಾಡುವುದರಲ್ಲಿ ಮಗ್ನರಾದರು. ಎಲ್ಲಾ ಆರ್ ಪಿ ಗಳು ಶಿಕ್ಷಕರ ಸಮಸ್ಯಗಳನ್ನು ಪರಿಹರಿಸುವುದು ನಿರಂತರವಾಗಿ ನಡದೇ ಇತ್ತು. ನಂತರ ಊಟಕ್ಕೆ ಹೋರಟರು.
ಊಟ ಮುಗಿದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಜಗದೀಶ ಅಕ್ಕಿ ಅವರು. ಚಪ್ಪಾಳೆ ಚಪ್ಪಾಳೆ ಹಾಡಿನೋಂದಿಗೆ ಸ್ವಾಗತವನ್ನು ಕೋರಿದರು. ನಂತರ ಎಲ್ಲಾ ತಂಡದವರು ತಾವು ಮಾಡಿದ ಚಟುವಟಿಕೆಯನ್ನು ಒಬ್ಬೋಬ್ಬರಾಗಿಯೆ ಬಂದು ಪ್ರಸ್ತುತ ಪಡಿಸಿದರು. ಇದರಲ್ಲಿ ಪ್ರತಿ ಚಟುವಟಿಕೆಯು ವಿಶ್ಲೇಷಣೆಗೆ ಒಳಗಾಗುತ್ತಿತ್ತು.
ಮೋದಲನೇಯದಾಗಿ ಚಿಂಚೋಳ್ಳಿ ತಂಡದಿಂದ ಉಷ್ಣ ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವ ವಿಧಾನದ ಕುರಿತು ರಾಚಯ್ಯ ಅವರಿಂದ ಪ್ರಸ್ತುತ ಪಡಿಸಲಾಯಿತು.
ಕಲಬುರ್ಗಿ ದಕ್ಷಿಣ ದಿಂದ ಬೇಬಿ ಮ್ಯಾಡಮ್ರವರು ಸರಳಸಂಗತ ಚಲನೆಯ ಕುರಿತಾದ ಪ್ರಯೋಗದ ಚಟುವಟಿಕೆಯನ್ನು ಪ್ರಸ್ತುತ ಪಡಿಸಿದರು.
ಜೇವರ್ಗಿ ತಂಡದಿಂದ ಮಸೂರಗಳ ಪರಿಚಯ ಅದರಲ್ಲಿ ಬೇಳಕಿನ ಕೇಂದ್ರೀಕರಣ ಮತ್ತು ವಿಕೇಂದ್ರಿಕರಣ ದ ಕುರಿತು ಶ್ರೀ ಮಹೇಶ್ ಅವರು ಚಟುವಟಿಕೆಯೋಂದನ್ನು ಪ್ರಸ್ತುತ ಪಡಿಸಿದರು.
ಅಫಜಲಪೂರ ತಂಡದಿಂದ ನೀರಿನ ಗಾತ್ರಾನುಸಾರ ವಿಭಜನೆ ಹಾಗೂ ಹಾಲಿನ ಕಲಬೆರಿಕೆ ಕುರಿತು ಮಹಾಂತೇಶ್ ಕುರಿ ಹಾಗೂ ಪ್ರಕಾಶ್ ಅವರಿಂದ ಚಟುವಟಿಕೆಯನ್ನು ಪ್ರಸ್ತುತಪಡಿಸಲಾಯಿತು.
ಚಿತ್ತಾಪೂರ ತಂಡದಿಂದ ರಾಜು ಅಳ್ಳಗಿ ಅವರಿಂದ ಸರಳ ವಿದ್ಯತ್ ಮೋಟಾರ್ ಕುರಿತು ಚಟುವಟಿಕೆಯನ್ನು ಪ್ರಸ್ತುತ ಪಡಿಸಿಲಾಯಿತು.
ಕಲಬುರ್ಗಿ ಉತ್ತರ ದಿಂದ ಕಾಂತೀಯ ಪರಿಣಾಮದ ಕುರಿತು ಚಟುವಟಿಕೆಯನ್ನು ಪ್ರಸ್ತುತ ಪಡಿಸಿದರು.
ನಂತರ ಹುಡುಗೆ ಗುಂಡಪ್ಪ ಸರ್ ಅವರು PhET Simulation ಕುರಿ ತು ಅದರ ಉಪಯೋಗ ಶಾಲೆಗಳಲ್ಲಿ ಹೇಗಾಗುತ್ತೆ ಮತ್ತು ಪ್ರಯೋಗಶಾಲೆಯಲ್ಲಿ ಅದನ್ನು ಹೇಗೆ ಬಳಸಿಕೋಳ್ಳಬೇಕು ಎಂದು ವಿವರಿಸಿದರು. ಇದರೋಂದಿಗೆ ಮೂರನೇದಿನದ ತರಬೇತಿಯು ಮುಕ್ತಾಯವಾಯಿತು.
4th Day
ಡಯಟ್ ಕಮಲಾಪುರ ಕಲಬುರಗಿ ಜಲ್ಲೆ
ಎಸ್ ಟಿ ಎಪ್ ತರಬೇತಿ ವಿಜ್ಞಾನ -೨೦೧೫-೧೬
೪ ನೇ ದಿನದ ವರದಿ
ನಾಲ್ಕನೆ ದಿನದ ವರದಿ:

ಸಿದ್ದು ಕಕ್ಕಳಮೇಲಿ ಸರ್ ಅವರು ಬೇಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ದಿನನಿತ್ಯದ ಕಾರ್ಯಕ್ರಮಗಳನ್ನು ಪ್ರಾರಂಬಿಸಿದರು, ಅವುಗಳು ಪ್ರಾರ್ಥನೆ : ಅಫಜಲಪೂರ ತಂಡ, ಶುಭ ಚಿಂತನೆ : ಮಹಾದೇವಯ್ಯ ಹಿರೇಮಠ್ , ವರದಿ ವಾಚನ : ಜೇವರ್ಗಿ ತಂಡ , ಸಮಯ ಪಾಲನೆ: ಚಿಂಚೋಳ್ಳಿ ತಂಡ. ಹೀಗೆ ಎಲ್ಲವೂ ಮುಗಿದ ಮೇಲೆ ಇಂದಿನ ಅಥಿತಿಗಳಾದ ಶ್ರೀ ಹಿರೆಮಠ್ ಸರ್ ಮುಖ್ಯೋಪಾದ್ಯಾಯರು ಸರಕಾರಿ ಕನ್ಯಾ ಪ್ರೌಢಶಾಲೆ ಕಮಲಾಪೂರ ಇವರು ತರಬೇತಿಯ ಕುರಿತು ಮಾರ್ಗದರ್ಶನ ಮಾಡಿದರು.ನಂತರ ವಿವಿದ ತಂಡಗಳಿಂದ ತಯಾರಿ ಮಾಡಿಟ್ಟುಕೋಂಡಿದ್ದ ಪ್ರಯೋಗಗಳನ್ನು ಮಾಡಲು ಉತ್ಸುಕರಾಗಿದ್ದ ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಶಿಧರ ಹಾಗೂ ಜೈ ಜಗದೀಶ ರವರು ಕ್ಯಾಮರಾದ ಸಹಾಯ ಪಡೆದು ಶೂಟಿಂಗ್ ನ್ನು ಮಾಡಿದರು. ಆ ತಂಡಗಳು ಇಂತಿವೆ.
ಚಿಂಚೋಳ್ಳಿ ತಂಡದಿಂದ ಉಷ್ಣ ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವ ವಿಧಾನದ ಕುರಿತು ರಾಚಯ್ಯ ಅವರಿಂದ ಪ್ರಸ್ತುತ ಪಡಿಸಲಾಯಿತು.
ಕಲಬುರ್ಗಿ ದಕ್ಷಿಣ ದಿಂದ ಬೇಬಿ ಮ್ಯಾಡಮ್ರವರು ಸರಳಸಂಗತ ಚಲನೆಯ ಕುರಿತಾದ ಪ್ರಯೋಗದ ಚಟುವಟಿಕೆಯನ್ನು ಪ್ರಸ್ತುತ ಪಡಿಸಿದರು.ಜೇವರ್ಗಿ ತಂಡದಿಂದ ಮಸೂರಗಳ ಪರಿಚಯ ಅದರಲ್ಲಿ ಬೇಳಕಿನ ಕೇಂದ್ರೀಕರಣ ಮತ್ತು ವಿಕೇಂದ್ರಿಕರಣ ದ ಕುರಿತು ಶ್ರೀ ಮಹೇಶ್ ಅವರು ಚಟುವಟಿಕೆಯೋಂದನ್ನು ಪ್ರಸ್ತುತ ಪಡಿಸಿದರು. ಅಫಜಲಪೂರ ತಂಡದಿಂದ ನೀರಿನ ಗಾತ್ರಾನುಸಾರ ವಿಭಜನೆ ಹಾಗೂ ಹಾಲಿನ ಕಲಬೆರಿಕೆ ಕುರಿತು ಮಹಾಂತೇಶ್ ಕುರಿ ಹಾಗೂ ಪ್ರಕಾಶ್ ಅವರಿಂದ ಚಟುವಟಿಕೆಯನ್ನು ಪ್ರಸ್ತುತಪಡಿಸಲಾಯಿತು. ಚಿತ್ತಾಪೂರ ತಂಡದಿಂದ ರಾಜು ಅಳ್ಳಗಿ ಅವರಿಂದ ಸರಳ ವಿದ್ಯತ್ ಮೋಟಾರ್ ಕುರಿತು ಚಟುವಟಿಕೆಯನ್ನು ಪ್ರಸ್ತುತ ಪಡಿಸಿಲಾಯಿತು. ಕಲಬುರ್ಗಿ ಉತ್ತರ ದಿಂದ ಕಾಂತೀಯ ಪರಿಣಾಮದ ಕುರಿತು ಚಟುವಟಿಕೆಯನ್ನು ಪ್ರಸ್ತುತ ಪಡಿಸಿದರು. ಈ ಎಲ್ಲಪ್ರಯೋಗಗಳನ್ನು ಮಾಡಲು ಅನುವು ಮಾಡಿಕೋಟ್ಟ ಕನ್ಯಾ ಪ್ರೌಢಶಾಲೆ ವಿಜ್ಞಾನ ಶಿಕ್ಷಕರು ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸೋಮಶೇಖರ ಹಿರೇಮಠ್ ಅವರಿಗೆ ಹಾಗೂ ಎಲ್ಲಾ ಶಾಲಾ ಶಿಬ್ಬಂದಿಗೆ ನಮ್ಮ ಎಲ್ಲರ ಪರವಾಗಿ ಅಬಿನಂದನೆಗಳನ್ನು ಸಲ್ಲಿಸುತ್ತಾ ಇಂದಿನ ೪ನೇ ದಿನದ ವರದಿವಾಚನವನ್ನು ಮುಕ್ತಾಯ ಮಾಡುತ್ತೇನೆ.
5th Day
ಡಯಟ್ ಕಮಲಾಪುರ ಕಲಬುರಗಿ ಜಲ್ಲೆ
ಎಸ್ ಟಿ ಎಪ್ ತರಬೇತಿ ವಿಜ್ಞಾನ -೨೦೧೫-೧೬
೫ ನೇ ದಿನದ ವರದಿ
ಚಿತ್ತಾಪೂರ ತಂಡ
ಕರ್ಯಾಗಾರದ ಪ್ರಾರಂಭ ೧೦ ಗಂಟೆಗೆ ಪ್ರಾರಂಭವಾಯಿತು ಜೇವರ್ಗಿತಂಡದಿಂದ ಶ್ರೀ ಮತಿ ಉಮಾ ರವರು ಪ್ರಾರ್ಥನೆಯನ್ನು ಹಾಟಿದರು. ನಂತರ ಅಫಜಲಪೂರ ತಂಡದಿಂದ ಶುಭಚಿಂತನೆ ವಿಜ್ಞಾನ ವಿಷ್ಮಯ ಚಿಂಚೋಳ್ಳಿ ತಂಡದಿಂದ ವರದಿವಾಚನವನ್ನು ಕಲಬುರ್ಗಿ ತಂಡದಿಂದ ಮಾಡಲಾಯಿತು. ಸಮಯಪಾಲನೆಯನ್ನು ಕಲಬುರ್ಗಿ ತಂಡದಿಂದ ಮಾಡಲಾಯಿತು. ಮೋದಲಿಗೆ ಫೀಡ್ ಬ್ಯಾಕ್ ಹಾಗೂ ಐಸಿಟಿ ಪಾರ್ಮ ತುಂಬಲು ಸಂಪನ್ಮೂಲ ವ್ಯಕ್ತಿಗಳು ಸೂಚಿಸಿದರು ಹಾಗೆ ಎಲ್ಲಾ ಶಿಕ್ಷಕರು ಫಾರ್ಮ ನ್ನು ಗಣಕಯಂತ್ರದಲದಲಿ ದಾಖಲಿಸಿ ಸಂಬಂಧ ಪಟ್ಟ ವೀಳಾಸಕ್ಕೆ ಕಳುಹಿಸಿದರು. ನಂತರ ಶ್ರೀ ಸಿದ್ದು ಕಕ್ಕಳಮೇಲಿ ಸಂಪನ್ಮೂಲವ್ಯಕ್ತಿಗಳು ವಿಡಿಯೋ ಎಡಿಟರ್ ಕುರಿತು ಒಂದು ವಿಡಿಯೋ ಎಡಿಟ್ ಮಾಡುವ ಮೂಲಕ ತುಂಬಾ ಚನ್ನಾಗಿ ತಿಳಿಸಿಕೋಟ್ಟರು. ಅಲ್ಲದೆ ವಿಡಿಯೋಗಳಿಗೆ ದ್ವನಿ ಕೋಡುವುದರ ಕುರಿತು ಕೂಡಾ ತುಂಬಾ ಚನ್ನಾಗಿ ವಿವರಿಸಿದರು. ನಂತರ ಶ್ರೀ ಶಶಿಧರ್ ಮುಚ್ಚಂಡಿಯವರು ಸ್ರೀನ್ ಸ್ಯಾಟ್ ಕುರಿತು ಡೆಮೋ ಮಾಡಿದರು. ಇದನ್ನು ನಾವುಗಳು ಗಣಕಯಂತ್ರದಲ್ಲಿ ಹ್ಯಾಂಡ್ಸ ಆನ್ ಮಾಡುವುದಷ್ಟಕ್ಕೆ ಊಟದ ಸಮಯವಾಗಿತ್ತು
ಊಟಮಾಡಿ ಬಂದ ನಮಗೆ ಶ್ರೀ ಜಗದೀಶ ಅಕ್ಕಿಅವರು ಫೋಟೋ ಎಡಿಟರ್ ಹಾಗೂ ಆಡಿಯೋ ಸಿಟಿ ಬಗ್ಗೆ ತಿಳಿಸಿಕೋಟ್ಟರು.ಹೀಗೆ ಅನೇಕ ವಿಷಯಗಳನ್ನು ತಿಳಿಸಿಕೋಟ್ಟ ನಂತರ ಸಮಾರೋಪ ಸಮಾರಂಭಕ್ಕೆ ವೇದಿಕೆ ಸಿದ್ದವಾಗಿತ್ತು ಸಮಾರಂಭದ ಅದ್ಯಕ್ಷತೆಯನ್ನು ಶ್ರೀ ಗೋರಲ್ ಹಿರಿಯ ಉಪನ್ಯಾಸಕರು ಡಯಟ್ ಅವರು ವಹಿಸಿದ್ದರು ಐದು ದಿನದ ಕಾರ್ಯಾಗಾರದ ಕುರಿತು ಶ್ರೀ ರಾಠೂಡ್ ಸರ್ (ಚಿಂಚೋಳ್ಳಿ) ಹಾಗೂ ಶ್ರೀ ಮತಿ ಬೇಬಿ ಶಿಕ್ಷಕಿಯರು ಮಾತನಾಡಿದರು. ಅಲ್ಲದೆ ಶಿಕ್ಷಕರಾದ ಪ್ರಕಾಶ್ ಹಟ್ಟಿಯವರು ಬಾವನಾತ್ಮಕವಾಗಿ ಬಾವನೆಗಳನ್ನು ಹಂಚಿಕೋಂಡರು.ನಂತರ ಗೋರಲ್ ಸರ್ ಅವರು ತರಬೇತಿಯ ಉಪಯೋಗ ಶಾಲೆಗಳಲ್ಲಿ ಆಗಲಿ ಎಂದು ಹೇಳಿದರು. ನಂತರ ಶಿಕ್ಷಕರೆಲ್ಲರಿಗೂ ಪ್ರಯಾಣ ಹಾಗೂ ದಿನಭತ್ಯಯನ್ನು ವಿತರಿಸುವುದರೋಂದಿಗೆ ಐದು ದಿನದ ತರಭೇತಿಗೆ ವಿದಾಯ ಹೇಳಲಾಯಿತು.

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Kannada

Batch 1

Agenda

If district has prepared new agenda then it can be shared here

See us at the Workshop


Workshop short report

1st Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್ ಕಮಲಾಪೂರ
ಕಲಬುರಗಿ ಜಿಲ್ಲಾ ಎಸ್ ಟಿ ಎಫ್ ಮೊದಲ ದಿನದ ವರದಿ
ದಿನಾಂಕ :- 07.09.2015
ಇಂದಿನ ತರಬೇತಿಯು 30 ಕನ್ನಡ ಭಾಷಾ ಬಳಗದೊಂದಿಗೆ ಪ್ರಾರಂಭಗೊಂಡು ಮೊದಲಿಗೆ ಪಿ ಆರ್ ಗೊರಾಲರ ಅಧ್ಯಕ್ಷರಿಂದ ಉದ್ಘಾಟನೆಗೊಂಡು ನೊಡಲ್ ಅಧಿಕಾರಿ ವಿ ಎ ಹೀರೆಮಠರವರ ನೆತೃತ್ವದಲ್ಲಿ ತರಬೇತಿ ಆರಂಭವಾಯಿತು . ಎಸ್ ಟಿ ಎಫ್ ನ ವಿವರಣೆಯನ್ನೂ ಸಂ. ವ್ಯಕ್ತಿಗಳಾದ ಶ್ರೀ ರಾಘವೇಂದ್ರ ಕುಲಕರ್ಣಿ ಮತ್ತು ಶ್ರೀಮತಿ ಬಸವರಾಜೇಶ್ವರಿ ಅವರು ಪರಿಚಯಿಸಿದರು . ತಂಡಗಳ ರಚನೆಯನ್ನು ಶ್ರೀ ಪರಮೇಶ್ವರರವರಿಂದ ಮಾಡಲಾಯಿತು . ಪರಸ್ಪರ ಪರಿಚಯದೊಂದಿಗೆ ಎಲ್ಲಾ ಭಾಷಾ ಶಿಕ್ಷಕರ ಇಮೇಲ್ ಐಡಿಗಳನ್ನು ಶ್ರೀಮತಿ ಜಲಜಾಕ್ಷಿ ಹೀರೆಮಠರವರ ಮೂಲಕ ತೆರೆಯಲಾಯಿತು .
ಅಕ್ಷರ ಒತ್ತುವಿಕೆ ಹಾಗೂ ಗೂಗಲ್ ತೆರೆಯುವ ಪರಿ ತಿಳಿಸಿ ಕೊಡಲಾಯಿತು .
2nd Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ
ಕಮಲಾಪೂರ
ಕಲಬುರಗಿ ಜಿಲ್ಲಾ ಎರಡನೆ ದಿನದ ವರದಿ
ಇವತ್ತಿನ ದಿನದಲ್ಲಿ ಶಬಿರಾರ್ಥಿಗಳಿಗೆ ಒ.ಡಿ.ಟಿ. ಯ ಪೂರ್ಣ ಮಾಹಿತಿ ಮತ್ತು ಇ ಮೇಲ್ ನಲ್ಲಿಯ ಕಾಂಪೋಜ್ ಮತ್ತು ರಿಪ್ಲೈ ತಿಳಿಸಲಾಯಿತು
.

3rd Day

4th Day

5th Day.

Batch 2

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.

Batch 3

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.