STF 2015-16 Uttara Kannada

From Karnataka Open Educational Resources

Science

Batch 1

Agenda

If district has prepared new agenda then it can be shared here

See us at the Workshop

Workshop short report

1st Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕುಮಟಾ
ಎಸ್.ಟಿ.ಎಫ್ ತರಬೇತಿ
ವಿಷಯ:ವಿಜ್ಞಾನ ದಿನಾಂಕ : 29-09-2015 ರಿಂದ 3-10-2015
ಮೊದಲನೇ ದಿನದ ವರದಿ
ದಿನಾಂಕ ೨೯-೦೯-೨೦೧೫ ರಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕುಮಟಾದಲ್ಲಿ ವಿಷಯ ಶಿಕ್ಷಕರ ವೇದಿಕೆಯ ಅಡಿಯಲ್ಲಿ ವಿಜ್ಜಾನ ವಿಷಯದ ತರಬೇತಿಯು ಬೆಳಿಗ್ಗೆ ೧೦.೦೦ ಘಂಟೆ ಸಭಾಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು.ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಲ್ಲರನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀಸದಾನಂದ ದಬಗಾರ ರವರು ಸ್ವಾಗತಿಸಿದರು.ಡಯಟ್ ಪ್ರಾಂಶುಪಾಲರಾದ ಶ್ರೀ ಈಶ್ವರ ನಾಯ್ಕರವರು ಪ್ರಾಸ್ತಾವಿಕ ನುಡಿಗಳಿಂದ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಜ್ಜಾನ ವಿಷಯದಲ್ಲಿ ಕಂಪ್ಯೂಟರ್ ತಂತ್ರಜ್ಞಾನದ ಅನ್ವಯ ಮತ್ತು ಅವಶ್ಯಕತೆಯನ್ನು ತಿಳಿಸಿ ತರಬೇತಿಗೆ ಶುಭ ತಿಳಿಸಿದರು.

ಡಯಟ್ ಉಪನ್ಯಾಸಕರಾದ ರುಶ್ರೀ ಮತಿ ತ್ರೀವೇಣಿ ಮೇಡಂರವರು ಎಸ್.ಟಿ.ಎಫ್ ತರಬೇತಿಯ ಅವಶ್ಯಕತೆ ಮತ್ತು ಐದು ದಿನದ ತರಬೇತಿಯ ನಾರ್ಮಗಳ ಕುರಿತು ತಿಳಿಸಿ ಸಮಯದ ಅಪವ್ಯಯವಾಗದಂತೆ ತರಬೇತಿ ಯಶಸ್ವಿಗೊಳಿಸಲು ತಿಳಿಸಿದರು.ಡಯಟ್ ಉಪನ್ಯಾಸಕರಾದ ಶ್ರೀ ಬಾಲಚಂದ್ರ ಗುಣಿ, ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಟಿ.ಎನ್.ಗೌಡ ಹಾಗೂ ಶ್ರೀ ಗಜಾನನ ಭಟ್ಟ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಲ್ಲರನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀಸದಾನಂದ ದಬಗಾರ ರವರು ವಂದಿಸಿದರು.

ನಂತರ ಹೊನ್ನಾವರ.ಕುಮಟಾ,ಕಾರವಾರ,ಅಂಕೋಲಾ ಮತ್ತು ಭಟ್ಕಳ ತಾಲೂಕನಿಂದ ಆಗಮಿಸಿರುವ ಶಿಕ್ಷಕರ ನೊಂದಣಿ ಮಾಡಿ ಪಟ್ಟಿ ಹಾಗೂ ಪೆನ್ನು ನೀಡಲಾಯಿತು.ಎಲ್ಲಾ ಶಿಕ್ಷಕರನ್ನು ನಾಲ್ಕು ಜನರ ಒಂದು ಗುಂಪುಗಳನ್ನಾಗಿ ಮಾಡಿ ಪ್ರತಿ ಗುಂಪಿಗೆ ಒಂದೊಂದು ಕಂಪ್ಯೂಟರ ನೀಡಲಾಯಿತು. ಶ್ರೀಸದಾನಂದ ದಬಗಾರ ಸರ್ ರವರು ubuntu ತಂತ್ರಾಂಶ ಮತ್ತು ಎಮ್.ಎಸ್.ತಂತ್ರಾಂಶದ ವ್ಯತ್ಯಾಸ ,ವಿವಿಧ ತಂತ್ರಾಂಶಗಳು ಹಾಗೂubuntu ತಂತ್ರಾಂಶದ ಪ್ರಾಮುಖ್ಯತೆ ಹಾಗೂ ಉಪಯೋಗಿಸುವ ವಿಧಾನಗಳ ಕುರಿತು ಮಾಹಿತಿ ನೀಡಿದರು.

ನಂತರ ಎಲ್ಲಾ ಶಿಕ್ಷಕರಿಗೆ ಕಂಪ್ಯೂಟರನಲ್ಲಿಯೇ joining report ಬರೆಯಲು ತಿಳಿಸಲಾಯಿತು.ಐದು ದಿನದ ಅಜೆಂಡಾವನ್ನು ಪರಿಚಯಿಸಿದರು.೧ ರಿಂದ ೨ ಗಂಟೆಯವರೆಗೆ ಊಟದ ವಿರಾಮ ನೀಡಲಾಯಿತು.ಊಟದ ನಂತರ koer (karnatak open education resources)ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿದರು.ಇದರ ಮೂಲಕ ವಿವಿಧ ಮಾಹಿತಿ ಹಾಗೂ ಸಂಪನ್ಮೂಲಗಳನ್ನು ಪಡೆಯುವುದನ್ನು ತಿಳಿಸಿದರು.

ನಂತರ Email-id ಮಾಡುವ ವಿಧಾನ ತಿಳಿಸಿ ಪ್ರತಿ ಶಿಕ್ಷಕರಿಗೆ Email-id ಮಾಡಲಾಯಿತು.ಇದನ್ನು S.T.F ಗೆ ಸೇರಿಸಲಾಯಿತು.ಹಾಗೂ ಎಲ್ಲಾ ಶಿಕ್ಷಕರನ್ನು ಇದಕ್ಕೆ ಸೇರಿಸಿ ಅದರಿಂದ ಮಾಹಿತಿ ಪಡೆಯಲು ಅನಕೂಲಿಸಲಾಯಿತು.ನಂತರ ೫.೦೦ಗಂಟೆಗೆ ಮೊದಲನೇ ದಿನದ ತರಬೇತಿ ಮುಗಿಸಲಾಯಿತು.

2nd Day
ಎರಡನೇ ದಿನದ ವರದಿ
ದಿನಾಂಕ ೩೦-೦೯-೨೦೧೫ ರಂದು ಬೆಳಿ ೯.೩೦ಕ್ಕೆ ಎರಡನೇ ದಿನದ ತರಬೇತಿ ಪ್ರಾರಂಭವಾಯಿತು.ಮೊದಲು ಸಂಪನ್ಮೂಲವ್ಯಕ್ತಿಗಳು ಮತ್ತು ಇತರ ವಿಜ್ಞಾನಶಿಕ್ಷಕರು ನೀಡಿರುವ ಪ್ರಾಯೋಗಿಕ ಪಾಠಗಳ ವಿಡಿಯೋಗಳನ್ನು ತೋರಿಸಲಾಯಿತು.ಪ್ರತಿ ತಂಡದದವರಿಗೆ ಒಂದೊಂದು ಪ್ರಾಯೋಗಿಕ ಚಟುವಟಿಕೆಗಳನ್ನು ನೀಡಿ ಹತ್ತು ಹಂ ತಗಳಲ್ಲಿ ಸಾಹಿತ್ಯ ರಚಿಸಲು ಮತ್ತು ಪ್ರಯೋಗದ ವಿಡಿಯೋ ಮಾಡುವುದನ್ನು ಸಂಪನ್ಮೂಲವ್ಯಕ್ತಿಗಳು ತಿಳಿಸಿದರು. ಅದರಂತೇ ಪ್ರತಿ ಗುಂಪಿನವರು ಒಂದೊಂದು ವಿಷಯವನ್ನು ಆಯ್ದುಕೊಂಡು ಸಂಬದಪಟ್ಟ ಪ್ರಯೋಗಕ್ಕೆ ಬೇಕಾಗುವ ಸಾಮಾಗ್ರಿಗಳ ಪಟ್ಟಿಯನ್ನು ತಯಾರಿಸಿದ.ನಂತರ ಪ್ರತಿ ತಂಡದವರು ತಮ್ಮ ಪ್ರಯೋಗಕ್ಕೆ ಅನುಗುಣವಾಗಿ ಹತ್ತು ಹಂತಗಳಲ್ಲಿ ಸಾಹಿತ್ಯವನ್ನು ರಚಿಸಿದರು.ಊಟದ ವಿರಾಮದ ನಂತರ audio & video ಸೇರಿಸುವು ಹಂತಗಳನ್ನು ತಿಳಿಸಿ ಪ್ರತಿ ಶಿಕ್ಷರಿಗೆ ರೂಢಿ ಮಾಡಿಸಲಾಯಿತು. ಹಾಗೂ ಮಾಹಿತಿಗಳನ್ನು download ಮಾಡಿ ಸೇರಿಸುವುದನ್ನು ತಿಳಿಸಿದರು.ನಂತರ ೫.೦೦ಗಂಟೆಗೆ ಎರಡನೇ ದಿನದ ತರಬೇತಿ ಮುಗಿಸಲಾಯಿತು.
3rd Day
ಮೂರನೇ ದಿನದ ವರದಿ
ದಿನಾಂಕ 1-10-2015 ರಂದು ಬೆಳಿಗ್ಗೆ ೯.೩೦ಕ್ಕೆ ಎರಡನೇ ದಿನದ ತರಬೇತಿ ಪ್ರಾರಂಭವಾಯಿತು.ಸಂಪನ್ಮೂಲವ್ಯಕ್ತಿಗಳಾಗಿ ಶ್ರೀ ಸಂತೋಷ ಶೆಟ್ಟಿ ಮತ್ತು ಶ್ರೀ ಉದಯ ಮೇಸ್ತ ರವರು ಆಗಮಿಸಿದರು.ಎರಡನೇ ದಿನ ಆಯ್ದುಕೊಂಡ ಪ್ರಯೋಗವನ್ನು ಪ್ರತಿ ಗುಂಪಿನವರು ಮಾಡಿದರು.ಮೊದಲನೇ ಗುಂಪು ಉಷ್ಣ ಎಂಜಿನ ಕಾರ್ಯವಿಧಾನ,ಎರಡನೇ ಗುಂಪು ಸಂತೃಪ್ತ ದ್ರಾವಣ ತಯಾರಿಕೆ,ಮೂರನೇ ಗುಂಪು ನಿತ್ಯ ಜೀವನದಲ್ಲಿ ಬಳಕೆಯ ವಸ್ತುಗಳ ಆಮ್ಲ&ಪ್ರತ್ಯಾಮತೆ ಪರೀಕ್ಷಿಸುವುದು,ನಾಲ್ಕನೇ ಗುಂಪು ಪೊಟ್ಯಾಸಿಯಂ ಪರಮಾಂಗನೇಟನಿಂದ ಆಮ್ಲಜನಕ ತಯಾರಿಕೆ, ಐದನೇ ಗುಂಪು ಉಷ್ಣ ವಾಹಕ ಮತ್ತು ಉಷ್ಣ ಅವಾಹಕಗಳನ್ನು ಗುರುತಿಸುವುದು , ಆರನೇ ಗುಂಪು ವಿದ್ಯುತ್ ಪ್ಯೂಸನ ಕಾರ್ಯವಿಧಾನ ಹಾಗೂ ಎಳನೇ ಗುಂಪು ಎಲೆಯಲ್ಲಿ ಪತ್ರರಂದ್ರ ವೀಕ್ಷಿಸಿಸುವ ಪ್ರಯೋಗ ಮಾಡಿ ವಿಡಿಯೋ ಮಾಡಿದರು.ಊಟದ ವಿರಾಮದ ನಂತರ ಊಟದ ವಿರಾಮದ ನಂತರ audio & video ಸೇರಿಸುವು ಹಂತಗಳನ್ನು ತಿಳಿಸಿ ಪ್ರತಿ ಶಿಕ್ಷರಿಗೆ ರೂಢಿ ಮಾಡಿಸಲಾಯಿತು.koer page ಅಲ್ಲಿನ ಮಾಹಿತಿ ಸಂಗ್ರಹಿಸುವ ವಿಧಾನಗಳನ್ನು ತಿಳಿಸಿ ರೂಢಿ ಮಾಡಿಸಲಾಯಿತು.ನಂತರ ೫.೦೦ಗಂಟೆಗೆ ಮೂರನೇ ದಿನದ ತರಬೇತಿ ಮುಗಿಸಲಾಯಿತು.

4th Day
ನಾಲ್ಕನೇ ದಿನದ ವರದಿ ದಿನಾಂಕ 2-10-2015ರಂದು ಬೆಳಿಗ್ಗೆ ೯.೩೦ಕ್ಕೆ ಎರಡನೇ ದಿನದ ತರಬೇತಿ ಪ್ರಾರಂಭವಾಯಿತು.ಡಯಟ್ ಪ್ರಾಂಶುಪಾಲರು ಮತ್ತ ಉ ಪನ್ಯಾಸಕರು ಹಾಗೂ ಎಲ್ಲಾ ಶಿಕ್ಷಕರು ಸೇರಿ ಗಾಂಧಿ ಜಯಂತಿ ಮತ್ತು ಲಾಲಬಹುದ್ದುರ ಶಾಸ್ರ್ತಿಯವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.ನಂತರ PhET ಪೇಜ ನಲ್ಲಿ ವಿವಿಧ ಪ್ರಯೋಗಗಳ ಹಾಗೂ ಚಟುವಟಿಕೆಗಶ್ರೀಳನ್ನು ವೀಕ್ಷಿಸುವುದನ್ನು ಸಂಪನ್ಮೂಲವ್ಯಕ್ತಿಗಳಾಗದ ಶ್ರೀ ಸಂತೋಷ ಶೆಟ್ಟಿ ತಿಳಿಸಿದರು. ಹಾಗೂ ಎಲ್ಲಾ ಶಿಕ್ಷಕರು ಅದನ್ನು ರೂಢಿ ಮಾಡಿಸಿ ಸಾಹಿತ್ಯ ರಚಿಸಲಾಯಿತು.ಊಟದ ವಿರಾಮದ ನಂತರ stellerium ಪೇಜನಲ್ಲಿ ನೋಡಿ ಗ್ರಹಣಗಳು,ಗ್ಯಾಲಕ್ಸಿಗಳ ಮತ್ತು ನಕ್ಷತ್ರಗಳನ್ನು ವೀಕ್ಷಿಸುವುದನ್ು ತಿಳಿಸಿ ರೂಢಿಮಾಡಲಾಯಿತು.ನಂತರ ೫.೦೦ಗಂಟೆಗೆ ನಾಲ್ಕನೇ ದಿನದ ತರಬೇತಿ ಮುಗಿಸಲಾಯಿತು.

5th Day
ಐದನೇ ದಿನದ ವರದಿ
ದಿನಾಂಕ 3-10-2015 ರಂದು ಬೆಳಿಗ್ಗೆ ೯.೩೦ಕ್ಕೆ ಎರಡನೇ ದಿನದ ತರಬೇತಿ ಪ್ರಾರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರಿಮತಿ ರೇಖಾ ಆಗಮಿಸಿದರು.ಸಂಪನ್ಮೂಲವ್ಯಕ್ತಿಗಳಾಗದ ಶ್ರೀ ಸಂತೋಷ ಶೆಟ್ಟಿ ರವರು ಪ್ರಯೋಗಗಳನ್ನು ಚಟುವಟಿಕೆಗಳನನ್ನಾ ಗಿ ಮಾಡುದನ್ನು ಹೇಳಿದರು. ನಂತರ kalizium ನಲ್ಲಿ ಆವರ್ತಕಕೋಷ್ಟಕದಲ್ಲಿ ವಿವಿಧ ದಾತುಗಳ ಮಾಹಿತಿ ತಿಳಿಯುವುದನ್ನು ಹೇಳಿದರು. ಊಟದ ವಿರಾಮದ ನಂತರ mindmap ರಚನೆಯನ್ನು ತಿಳಿಸಿ ರೂಢಿಮಾಡಿಸಿದರು.ನಂತರ ದಿನಭತ್ಯೆ ಹಾಗೂ ಪ್ರಯಾಣ ಭತ್ಯೆಯನ್ನು ನೀಡಿ ಎಲ್ಲರನ್ನು ಅಭಿನಂದಿಸಲಾಯಿತು.ಐದು ದಿನಗಳ ತರಭೇತಿಯಲ್ಲಿ ಡಯಟ್ ಉಪನ್ಯಾಸಕರಾದ ಶ್ರೀಮತಿ ತ್ರಿವೇಣಿ ಮೇಡಂರವರು ಸಂಪನ್ಮೂಲವ್ಯಕ್ತಿಗಳ ಜೊತೆ ಸೂಕ್ತ ಮಾರ್ಗದರ್ಶನ ನೀಡಿದರು.ಪ್ರತಿ ಶಿಕ್ಷಕರಿಂದ ತರಬೇತಿಯ ಹಿಮ್ಮಾಯಿತಿಯನ್ನು ಪಡೆಯಲಾಯಿತು.ನಂತರ ೫.೦೦ಗಂಟೆಗೆ ಕೊನೆಯ ದಿನದ ತರಬೇತಿ ಮುಗಿಸಲಾಯಿತು.
ಧನ್ಯವಾದಗಳು

Batch 2

Agenda

If district has prepared new agenda then it can be shared here

See us at the Workshop

Workshop short report

1st Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕುಮಟಾ
ಎಸ್.ಟಿ.ಎಫ್ ತರಬೇತಿ
ವಿಷಯ:ವಿಜ್ಞಾನ
ದಿನಾಂಕ : 2-11-2015 ರಿಂದ 6-11-2015
ಮೊದಲನೇ ದಿನದ ವರದಿ
ದಿನಾಂಕ 2-11-2015 ರಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕುಮಟಾದಲ್ಲಿ ವಿಷಯ ಶಿಕ್ಷಕರ ವೇದಿಕೆಯ ಅಡಿಯಲ್ಲಿ ವಿಜ್ಜಾನ ವಿಷಯದ ತರಬೇತಿಯು ಬೆಳಿಗ್ಗೆ ೧೦.೦೦ ಘಂಟೆ ಸಭಾಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು.ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಲ್ಲರನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಟಿ.ಎನ್.ಗೌಡ ರವರು ಸ್ವಾಗತಿಸಿದರು. ಡಯಟ್ ಉಪನ್ಯಾಸಕರಾದ ಶ್ರೀಮತಿ ತ್ರೀವೇಣಿ ಮೇಡಂರವರು ಪ್ರಾಸ್ತಾವಿಕ ನುಡಿಗಳಿಂದ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಜ್ಜಾನ ವಿಷಯದಲ್ಲಿ ಕಂಪ್ಯೂಟರ್ ತಂತ್ರಜ್ಞಾನದ ಅನ್ವಯ ಮತ್ತು ಅವಶ್ಯಕತೆಯನ್ನು ತಿಳಿಸಿ ತರಬೇತಿಗೆ ಶುಭ ತಿಳಿಸಿದರು. ಎಸ್.ಟಿ.ಎಫ್ ತರಬೇತಿಯ ಅವಶ್ಯಕತೆ ಮತ್ತು ಐದು ದಿನದ ತರಬೇತಿಯ ನಾರ್ಮಗಳ ಕುರಿತು ತಿಳಿಸಿ ಸಮಯದ ಅಪವ್ಯಯವಾಗದಂತೆ ತರಬೇತಿ ಯಶಸ್ವಿಗೊಳಿಸಲು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಟಿ.ಎನ್.ಗೌಡ ಹಾಗೂ ಶ್ರಿಮತಿ ರೇಖಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಲ್ಲರನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ರೇಖಾ ರವರು ವಂದಿಸಿದರು. ಶ್ರೀ ಟಿ.ಎನ್.ಗೌಡ ರವರು ubuntu ತಂತ್ರಾಂಶ ಮತ್ತು ಎಮ್.ಎಸ್.ತಂತ್ರಾಂಶದ ವ್ಯತ್ಯಾಸ ,ವಿವಿಧ ತಂತ್ರಾಂಶಗಳು ಹಾಗೂubuntu ತಂತ್ರಾಂಶದ ಪ್ರಾಮುಖ್ಯತೆ ಹಾಗೂ ಉಪಯೋಗಿಸುವ ವಿಧಾನಗಳ ಕುರಿತು ಮಾಹಿತಿ ನೀಡಿದರು. ನಂತರ ಎಲ್ಲಾ ಶಿಕ್ಷಕರಿಗೆ ಕಂಪ್ಯೂಟರನಲ್ಲಿಯೇ joining report ಬರೆಯಲು ತಿಳಿಸಲಾಯಿತು.ಐದು ದಿನದ ಅಜೆಂಡಾವನ್ನು ಪರಿಚಯಿಸಿದರು.೧ ರಿಂದ ೨ ಗಂಟೆಯವರೆಗೆ ಊಟದ ವಿರಾಮ ನೀಡಲಾಯಿತು.ಊಟದ ನಂತರ koer (karnatak open education resources)ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿದರು.ಇದರ ಮೂಲಕ ವಿವಿಧ ಮಾಹಿತಿ ಹಾಗೂ ಸಂಪನ್ಮೂಲಗಳನ್ನು ಪಡೆಯುವುದನ್ನು ತಿಳಿಸಿದರು. ನಂತರ Email-id ಮಾಡುವ ವಿಧಾನ ತಿಳಿಸಿ ಪ್ರತಿ ಶಿಕ್ಷಕರಿಗೆ Email-id ಮಾಡಲಾಯಿತು.ಇದನ್ನು S.T.F ಗೆ ಸೇರಿಸಲಾಯಿತು.ಹಾಗೂ ಎಲ್ಲಾ ಶಿಕ್ಷಕರನ್ನು ಇದಕ್ಕೆ ಸೇರಿಸಿ ಅದರಿಂದ ಮಾಹಿತಿ ಪಡೆಯಲು ಅನಕೂಲಿಸಲಾಯಿತು.ನಂತರ ೫.೦೦ಗಂಟೆಗೆ ಮೊದಲನೇ ದಿನದ ತರಬೇತಿ ಮುಗಿಸಲಾಯಿತು.

2nd Day
ಎರಡನೇ ದಿನದ ವರದಿ
ದಿನಾಂಕ 3-11-2015ರಂದು ಬೆಳಿ ೯.೩೦ಕ್ಕೆ ಎರಡನೇ ದಿನದ ತರಬೇತಿ ಪ್ರಾರಂಭವಾಯಿತು.ಮೊದಲು ಸಂಪನ್ಮೂಲವ್ಯಕ್ತಿಗಳಾ ಶ್ರಿಮತಿ ರೇಖಾ ವಿಜ್ಞಾನಶಿಕ್ಷಕರು ನೀಡಿರುವ ಪ್ರಾಯೋಗಿಕ ಪಾಠಗಳ ವಿಡಿಯೋಗಳನ್ನು ತೋರಿಸಲಾಯಿತು.ಪ್ರತಿ ತಂಡದದವರಿಗೆ ಒಂದೊಂದು ಪ್ರಾಯೋಗಿಕ ಚಟುವಟಿಕೆಗಳನ್ನು ನೀಡಿ ಹತ್ತು ಹಂ ತಗಳಲ್ಲಿ ಸಾಹಿತ್ಯ ರಚಿಸಲು ಮತ್ತು ಪ್ರಯೋಗದ ವಿಡಿಯೋ ಮಾಡುವುದನ್ನು ಸಂಪನ್ಮೂಲವ್ಯಕ್ತಿಗಳು ತಿಳಿಸಿದರು. ಅದರಂತೇ ಪ್ರತಿ ಗುಂಪಿನವರು ಒಂದೊಂದು ವಿಷಯವನ್ನು ಆಯ್ದುಕೊಂಡು ಸಂಬದಪಟ್ಟ ಪ್ರಯೋಗಕ್ಕೆ ಬೇಕಾಗುವ ಸಾಮಾಗ್ರಿಗಳ ಪಟ್ಟಿಯನ್ನು ತಯಾರಿಸಿದ.ನಂತರ ಪ್ರತಿ ತಂಡದವರು ತಮ್ಮ ಪ್ರಯೋಗಕ್ಕೆ ಅನುಗುಣವಾಗಿ ಹತ್ತು ಹಂತಗಳಲ್ಲಿ ಸಾಹಿತ್ಯವನ್ನು ರಚಿಸಿದರು.ಊಟದ ವಿರಾಮದ ನಂತರ audio & video ಸೇರಿಸುವು ಹಂತಗಳನ್ನು ತಿಳಿಸಿ ಪ್ರತಿ ಶಿಕ್ಷರಿಗೆ ರೂಢಿ ಮಾಡಿಸಲಾಯಿತು. ಹಾಗೂ ಮಾಹಿತಿಗಳನ್ನು download ಮಾಡಿ ಸೇರಿಸುವುದನ್ನು ತಿಳಿಸಿದರು.ನಂತರ ೫.೦೦ಗಂಟೆಗೆ ಎರಡನೇ ದಿನದ ತರಬೇತಿ ಮುಗಿಸಲಾಯಿತು.

3rd Day
ಮೂರನೇ ದಿನದ ವರದಿ
ದಿನಾಂಕ 4-11-2015 ರಂದು ಬೆಳಿಗ್ಗೆ ೯.೩೦ಕ್ಕೆ ಮೂನೇ ದಿನದ ತರಬೇತಿ ಪ್ರಾರಂಭವಾಯಿತು.ಸಂಪನ್ಮೂಲವ್ಯಕ್ತಿಗಳಾಗಿ ಶ್ರೀ ಸಂತೋಷ ಶೆಟ್ಟಿ ಮತ್ತು ಶ್ರೀ ಉದಯ ಮೇಸ್ತ ರವರು ಆಗಮಿಸಿದರು.ಎರಡನೇ ದಿನ ಆಯ್ದುಕೊಂಡ ಪ್ರಯೋಗವನ್ನು ಪ್ರತಿ ಗುಂಪಿನವರು ಮಾಡಿದರು.ಮೊದಲನೇ ಗುಂಪು ಉಷ್ಣ ಎಂಜಿನ ಕಾರ್ಯವಿಧಾನ,ಎರಡನೇ ಗುಂಪು ಸಂತೃಪ್ತ ದ್ರಾವಣ ತಯಾರಿಕೆ,ಮೂರನೇ ಗುಂಪು ನಿತ್ಯ ಜೀವನದಲ್ಲಿ ಬಳಕೆಯ ವಸ್ತುಗಳ ಆಮ್ಲ&ಪ್ರತ್ಯಾಮತೆ ಪರೀಕ್ಷಿಸುವುದು,ನಾಲ್ಕನೇ ಗುಂಪು ಪೊಟ್ಯಾಸಿಯಂ ಪರಮಾಂಗನೇಟನಿಂದ ಆಮ್ಲಜನಕ ತಯಾರಿಕೆ, ಐದನೇ ಗುಂಪು ಉಷ್ಣ ವಾಹಕ ಮತ್ತು ಉಷ್ಣ ಅವಾಹಕಗಳನ್ನು ಗುರುತಿಸುವುದು , ಆರನೇ ಗುಂಪು ವಿದ್ಯುತ್ ಪ್ಯೂಸನ ಕಾರ್ಯವಿಧಾನ ಹಾಗೂ ಎಳನೇ ಗುಂಪು ಎಲೆಯಲ್ಲಿ ಪತ್ರರಂದ್ರ ವೀಕ್ಷಿಸಿಸುವ ಪ್ರಯೋಗ ಮಾಡಿ ವಿಡಿಯೋ ಮಾಡಿದರು.ಊಟದ ವಿರಾಮದ ನಂತರ ಊಟದ ವಿರಾಮದ ನಂತರ audio & video ಸೇರಿಸುವು ಹಂತಗಳನ್ನು ತಿಳಿಸಿ ಪ್ರತಿ ಶಿಕ್ಷರಿಗೆ ರೂಢಿ ಮಾಡಿಸಲಾಯಿತು.koer page ಅಲ್ಲಿನ ಮಾಹಿತಿ ಸಂಗ್ರಹಿಸುವ ವಿಧಾನಗಳನ್ನು ತಿಳಿಸಿ ರೂಢಿ ಮಾಡಿಸಲಾಯಿತು.ನಂತರ ೫.೦೦ಗಂಟೆಗೆ ಮೂರನೇ ದಿನದ ತರಬೇತಿ ಮುಗಿಸಲಾಯಿತು.

4th Day
ನಾಲ್ಕನೇ ದಿನದ ವರದಿ
ದಿನಾಂಕ 5-11-2015ರಂದು ಬೆಳಿಗ್ಗೆ ೯.೩೦ಕ್ಕೆ ನಾಲ್ಕ ದಿನದ ತರಬೇತಿ ಪ್ರಾರಂಭವಾಯಿತು..ನಂ PhET ಪೇಜ ನಲ್ಲಿ ವಿವಿಧ ಪ್ರಯೋಗಗಳ ಹಾಗೂ ಚಟುವಟಿಕೆಗಶ್ರೀಳನ್ನು ವೀಕ್ಷಿಸುವುದನ್ನು ಸಂಪನ್ಮೂಲವ್ಯಕ್ತಿಗಳಾಗದ ಶ್ರೀ ಸಂತೋಷ ಶೆಟ್ಟಿ ತಿಳಿಸಿದರು. ಹಾಗೂ ಎಲ್ಲಾ ಶಿಕ್ಷಕರು ಅದನ್ನು ರೂಢಿ ಮಾಡಿಸಿ ಸಾಹಿತ್ಯ ರಚಿಸಲಾಯಿತು.ಊಟದ ವಿರಾಮದ ನಂತರ stellerium ಪೇಜನಲ್ಲಿ ನೋಡಿ ಗ್ರಹಣಗಳು,ಗ್ಯಾಲಕ್ಸಿಗಳ ಮತ್ತು ನಕ್ಷತ್ರಗಳನ್ನು ವೀಕ್ಷಿಸುವುದನ್ು ತಿಳಿಸಿ ರೂಢಿಮಾಡಲಾಯಿತು.ನಂತರ ೫.೦೦ಗಂಟೆಗೆ ನಾಲ್ಕನೇ ದಿನದ ತರಬೇತಿ ಮುಗಿಸಲಾಯಿತು.

5th Day
ಐದನೇ ದಿನದ ವರದಿ
ದಿನಾಂಕ 6-11-2015 ರಂದು ಬೆಳಿಗ್ಗೆ ೯.೩೦ಕ್ಕೆ ಐನೇ ದಿನದ ತರಬೇತಿ ಪ್ರಾರಂಭವಾಯಿತು. ಸಂಪನ್ಮೂಲವ್ಯಕ್ತಿಗಳಾಗದ ಶ್ರೀ ಸಂತೋಷ ಶೆಟ್ಟಿ ರವರು ಪ್ರಯೋಗಗಳನ್ನು ಚಟುವಟಿಕೆಗಳನನ್ನಾ ಗಿ ಮಾಡುದನ್ನು ಹೇಳಿದರು. ನಂತರ kalizium ನಲ್ಲಿ ಆವರ್ತಕಕೋಷ್ಟಕದಲ್ಲಿ ವಿವಿಧ ದಾತುಗಳ ಮಾಹಿತಿ ತಿಳಿಯುವುದನ್ನು ಹೇಳಿದರು. ಊಟದ ವಿರಾಮದ ನಂತರ mindmap ರಚನೆಯನ್ನು ತಿಳಿಸಿ ರೂಢಿಮಾಡಿಸಿದರು.ನಂತರ ದಿನಭತ್ಯೆ ಹಾಗೂ ಪ್ರಯಾಣ ಭತ್ಯೆಯನ್ನು ನೀಡಿ ಎಲ್ಲರನ್ನು ಅಭಿನಂದಿಸಲಾಯಿತು.ಐದು ದಿನಗಳ ತರಭೇತಿಯಲ್ಲಿ ಡಯಟ್ ಉಪನ್ಯಾಸಕರಾದ ಶ್ರೀಮತಿ ತ್ರಿವೇಣಿ ಮೇಡಂರವರು ಸಂಪನ್ಮೂಲವ್ಯಕ್ತಿಗಳ ಜೊತೆ ಸೂಕ್ತ ಮಾರ್ಗದರ್ಶನ ನೀಡಿದರು.ಪ್ರತಿ ಶಿಕ್ಷಕರಿಂದ ತರಬೇತಿಯ ಹಿಮ್ಮಾಯಿತಿಯನ್ನು ಪಡೆಯಲಾಯಿತು.ನಂತರ ೫.೦೦ಗಂಟೆಗೆ ಕೊನೆಯ ದಿನದ ತರಬೇತಿ ಮುಗಿಸಲಾಯಿತು.
ಧನ್ಯವಾದಗಳು

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Kannada

Batch 1

Agenda

If district has prepared new agenda then it can be shared here

See us at the Workshop


Workshop short report

1st Day
2nd Day
 


3rd Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕುಮಟಾ

ದಿನಕರ ದೇಸಾಯಿ ತಂಡ
ಎಸ್.ಟಿ.ಎಫ್. ತರಬೇತಿ ಕಾರ್ಯಾಗಾರದ 3ನೇ ದಿನದ ವರದಿ

ಉರುಳುವವು ಗಳಿಗೆಗಳು
ಹೊರಳುವವು ದಿವಸಗಳು
ತುದಿ ಮೊದಲ ಹೊಂದಿರದ ಅನಂತತೆಯ ಮರೆಗೆ
ಇಂದುಗಳು ನಾಳೆಗಳು ಹಿಂದಿಂದೋಡುವವು
ಎಣಿಕೆಗಳ ನೆನೆವುಗಳ ಮರೆಸುತ್ತ ಹಿಂದೆ

ಎಂದು ಶಂಕರ ಭಟ್ಟರ ಕವನವನ್ನು ವಾಚಿಸುತ್ತ 3ನೇ ದಿನದ ವರದಿಯನ್ನು ದಿನಕರ ದೇಸಾಯಿ ತಂಡದವರು ತಮ್ಮ ಮುಂದೆ ಸಾದರಪಡಿಸುತ್ತಿದ್ದೇವೆ.
ಎಂದಿನಂತೆ ಶುಭ ಮುಂಜಾನೆ ಬಿ.ಎಂ. ಭಟ್ಟರು ಸರ್ವರಿಗೂ ಸ್ವಾಗತ ಕೋರಿದರು. ನಂತರ ಜನ್ನ ತಂಡದವರು ಎರಡನೇ ದಿನದ ವರದಿಯನ್ನು ಸಾದರಪಡಿಸಿದರು. ನಂತರ ಬಿ.ಎಂ. ಭಟ್ಟರವರು ನಮ್ಮೆಲ್ಲರನ್ನು ಪರಿಕಲ್ಪನಾ ನಕ್ಷೆಗೆ ಒiಟಿಜ mಚಿಠಿ ಕೊಂಡೊಯ್ದರು. ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಕವಿಗಳ ಹಾಗೂ ವ್ಯಾಕರಣಗಳ ಚಾರ್ಟನ್ನು ತಂತ್ರಜ್ಞಾನದಲ್ಲಿ ಹೇಗೆ ಅಳವಡಿಸಿ ವಿದ್ಯಾರ್ಥಿಗಳಿಗೆ ಮನಮುಟ್ಟಿಸುವಂತೆ ಹೇಳಬೇಕೆಂದು ತಿಳಿಸಿಕೊಟ್ಟರು. ಸಮಯವೆಂಬುದು ಹರಿಯುವ ನೀರಿದ್ದಂತೆ. ಆದ್ದರಿಂದ ಕೂಡಲೇ ನಾವೆಲ್ಲರೂ ಅದನ್ನು ಪ್ರಾಯೋಗಿಕವಾಗಿ ಅಳವಡಿಸಲು ಪ್ರಾರಂಭಿಸಿದೆವು. ನಂತರ 11.30ಕ್ಕೆ ನವೀನಕುಮಾರ ಸರ್‍ರವರು ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ ಕೋಯರ್ ಏಔಇಖ ಕುರಿತು ಅದರ ಉದ್ದೇಶ ಹಾಗೂ ತತ್ವಗಳನ್ನು ತಿಳಿಸಿ ಶಿಕ್ಷಕರಿಗೆ ಎಷ್ಟು ಅವಶ್ಯಕವೋ ಅಷ್ಟನ್ನೇ ಇದರಿಂದ ಪಡೆಯಲು ಸಾಧ್ಯ ಎಂದು ಅದರ ಮಹತ್ವವನ್ನು ತಿಳಿಸಿ ನಾವೆಲ್ಲರೂ ಕಂಪ್ಯೂಟರ್‍ನಲ್ಲಿ ಕೋಯರ್ ಲೋಕಕ್ಕೆ ಇಳಿದೆವು. ನಂತರ 12.30ಕ್ಕೆ ಸರಿಯಾಗಿ ಶ್ರೀ ಗಣೇಶ ಭಟ್ ಸರ್‍ರವರು ಡೌನ್‍ಲೋಡ್ ಮಾಡಿ ಪಾಠಕ್ಕೆ ಸಂಬಂಧಪಟ್ಟ ಅಂದರೆ ಇಂಟರನೆಟ್ ಲೋಕಕ್ಕೆ ಹೋಗಿ ಕವಿಗಳ ಭಾವಚಿತ್ರ ಹಾಗೂ ವಿಷಯ ಸಂಗ್ರಹಿಸಿ ಅವುಗಳನ್ನು ಪೇಸ್ಟ್ ಮಾಡಿಕೊಳ್ಳುವ ವಿಧಾನವನ್ನು ಮನಮುಟ್ಟುವಂತೆ ಹೇಳಿ ಆ ಕ್ಷಣವನ್ನು ಚೆನ್ನಾಗಿ ಪ್ರಾಯೋಗಿಕವಾಗಿ ಇಳಿಸಲು ಅವಕಾಶ ಮಾಡಿಕೊಟ್ಟರು. ನಂತರ ಗುಣಿ ಸರ್‍ರವರು ಕಂಪ್ಯೂಟರ್ ಲೋಕದಲ್ಲಿದ್ದ ನಮ್ಮೆಲ್ಲರನ್ನು ಕರೆದು ಊಟಕ್ಕೆ ಹೋಗಲು ಸೂಚಿಸಿದರು.
ಮಧ್ಯಾಹ್ನದ ಅವಧಿ ಪ್ರಾರಂಭವಾದಂತೆ ಈ ಮೊದಲೇ ಆಯಾ ಗುಂಪುಗಳಿಗೆ ನೀಡಿದ ಪಾಠದ ಸಿದ್ಧತೆಗಳಲ್ಲಿ ಸಂಪೂರ್ಣವಾಗಿ ತೊಡಗಿಕೊಂಡೆವು. ಕೊನೆಯಲ್ಲಿ ಬಿ.ಎಂ. ಭಟ್‍ರವರು ಹಾಗೂ ಗಣೇಶ ಭಟ್‍ರವರು ಇಮೇಲ್ ಐಡಿಯಲ್ಲಿ ಏನೋನು ಸೌಲಭ್ಯಗಳಿವೆ ಎಂಬುದರ ಕುರಿತು ಮಾಹಿತಿ ನೀಡಿದರು. ಕೊನೆಯಲ್ಲಿ ಗುಣಿ ಸರ್‍ರವರು ಉಪಯುಕ್ತ ಮಾಹಿತಿ ನೀಡಿ ಅಂದಿನ ತರಬೇತಿಯನ್ನು ಮುಕ್ತಾಯ ಮಾಡಿದರು. ವಂದನೆಗಳೊಂದಿಗೆ
ತಂಡದ ಸದಸ್ಯರು :
ಶ್ರೀಮತಿ ಬೇಬಿ ನಾಯಕ
ಶ್ರೀಮತಿ ಮಂಗಲಾ ನಾಯಕ
ಶ್ರೀಮತಿ ನಯನಾ ನಾಯಕ
ಶ್ರೀಮತಿ ವಿಜಯಲಕ್ಷ್ಮೀ ಹೆಗಡೆ
ಶ್ರೀ ಚನ್ನಕೇಶವ ಹೆಗಡೆ

4th Day
ತ೦ಡ_ ಡಾ.ಶಿವರಾಮ ಕಾರಂತ.
ಬದಲಾವಣೆ ಜಗದ ನಿಯಮ; ಅದಕ್ಕೆ ಹೊಂದಿಕೊಡು ಬಾಳುವುದು ಮಾನವ ಧರ್ಮ
ಅಂದರೆ ಬೇಂದ್ರೆಯವರ ನುಡಿ 'ಹಕ್ಕಿ ಹಾರುತಿದೆ ನೋಡಿದಿರಾ' ಎಂಬ ಪದ್ಯದ ಸಾಲುಗಳನ್ನು ನೆನಪಿಸುವಂತೆ ಹೊಸ ಬದಲಾಣೆಗಳೊಂದಿಗೆ ಕಾಲ ಸರಿಯುತ್ತಿದೆ. ಅನಾಗರಿಕತೆಯಿಂದ ನಾಗರಿಕತೆಯೆಡೆಗೆ ಸಾಗಿದ ಮಾನವ ಇಂದು ಆಧುನಿಕ ಮಾನವನಾಗಿ ತಂತ್ರಜ್ಙಾನದ ಹೆಬ್ಬಾಗಿಲಿನಲ್ಲಿ ಮು೦ದೆ ಸಾಗಿದ್ದಾನೆ. ಈ ಬದಲಾವಣೆಗೆ ಹೊಂದಿಕೊಳ್ಳುವಂತೆ ಶಿಕ್ಷಣ ವ್ಯವಸ್ಥೆಯೂ ಬದಲಾಗುತ್ತಿದೆ. ಈ ದಿಶೆಯಲ್ಲಿ ಕನ್ನಡ ಭಾಷಾ ಶಿಕ್ಷಕರೂ ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಜ್ಞಾನಸಂಪಾದನೆಯೊ೦ದಿಗೆ ನಾವೀವ್ಯ ತ೦ತ್ರಜ್ಞಾನವನ್ನು ತರಗತಿಯಲ್ಲಿ ಅಳವಡಿಸಿಕೊಳ್ಳುವ ಸಲುವಾಗಿ ನೀಡಲಾಗುತ್ತಿರುವ S.T.F. ತರಬೇತಿಯ ೪ ನೇ ದಿನದ ಸಂಪೂರ್ಣ ಚಿತ್ರಣವನ್ನು "ವರದಿ" ಎಂಬ ಮೂರಕ್ಷರದ ತಲೆಬರಹದಡಿಯಲ್ಲಿ ತಮ್ಮೆದುರು ತೆರೆದಿಡುತ್ತಿದ್ದೇನೆ
ದಿನಾಂಕ_೧೦-೦೯-೨೦೧೫ ರ ಗುರುವಾರ ಮುಂಜಾನೆ ಸರಿಯಾಗಿ ೯.೩೦ ಕ್ಕೆ ನಮ್ಮ ೪ನೇ ದಿನದ ತರಬೇತಿಯು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮಹೇಶ ಭಟ್ಟ ರ ಆತ್ಮೀಯ ಸ್ವಾಗತದೊಂದಿಗೆ ತೆರೆದುಕೊಂಡಿತು. ಎಲ್ಲರನ್ನೂ ಆ ದಿನದ ತರಬೇ ತಿಗೆ ಸ್ವಾಗತಿಸುವುದರೊ೦ದಿಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ೪ನೇದಿನದ ತರಬೇತಿಯಲ್ಲಿ ಶಿಕ್ಷಕರು ಕಟ್ಟಿಕೊಳ್ಳಲಿರುವ ಮಾಹಿತಿಗಳ ಕಿರುನೋಟ ನೀಡಿದರು
ನ೦ತರ ಶಿಕ್ಷರರನ್ನುದ್ದೇಶಿಶಿ ಮಾತನಾಡಿದ ತರಬೇತಿಯ ಸ೦ಘಟಕರಾದ ಶ್ರೀ ಬಾಲಚಂದ್ರ ಗುಣಿಯವರು ಕಳೆದ ಮೂರು ದಿನಗಳ ತರಬೇತಿಯನ್ನು ಮತ್ತೊಮ್ಮೆ ಮೆಲುಕು ಹಾಕಿ ಭಾಷಾ ಶಿಕ್ಷಕರೂ ಸಹ ತ೦ತ್ರಾ೦ಶ ಬಳಕೆಯಲ್ಲಿ ಹಿಂದುಳಿಯದೆ ಯಾವೆಲ್ಲಾ ಮಾರ್ಗಗಳಿಂದ ಜ್ಞಾನವನ್ನು ಪದೆದುಕೊಳ್ಳಲು ಸಾಧ್ಯವೊ ಅವಕಾಶ ವಂಚಿತರಾಗದೆ ಅವೆಲ್ಲವನ್ನೂ ಪದೆದುಕೊಂಡು ಎಲ್ಲ ಶಿಕ್ಷಕರು ಜ್ಞಾನವೆಂಬ ಸಂಪತ್ತನ್ನು ಗಳಿಸಿಕೊಳ್ಳಲಿ ಎಂಬ ಸದಾಶಯವನ್ನು ವ್ಯಕ್ತಪಡಿಸಿದರು. ಮು೦ದಿನ ಹಂತ ಹಿನ್ನೋಟದೆಡೆಗೆ. ಅಂದರೆ ಸಾಗಿಬಂದ ಹಾದಿಯ ವೀಕ್ಷಣೆ ಯೆಡೆಗೆ. ಈ ಹಂತದಲ್ಲಿ ದಿನಕರ ದೇಸಾಯಿ ತಂಡದ ಸದಸ್ಯರಾದ ಶ್ರೀಮತಿ ಬಿ.ಬಿ ನಾಯಕ ರವರು ಮೂರನೇ ದಿನದ ಸಮಗ್ರ ವರದಿಯನ್ನು ವಾಚಿಸಿ ಮತ್ತೊಮ್ಮೆ ಶಿಕ್ಷಕರನ್ನು ಮೂರನೇ ದಿನದ ಕಲಿಕೆಗೆ ಹಿಮ್ಮರಳಿಸಿದರು. ವರದಿಯ ಕುರಿತು ಸ೦ಕ್ಷಿಪ್ತ ಚರ್ಚೆಯ ನಂತರ ತರಬೇತಿಗೆ ಮುಂದಡಿಯಿಟ್ಟವರು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಅಲಚಂದ್ರ ಭಟ್ ರವರು. ತ೦ತ್ರಜ್ಞಾನ ಕ್ಷೇತ್ರದಲ್ಲಿ ಭದ್ರವಾಗಿ ಹೆಜ್ಜೆಯಿಡಲು ಉತ್ಸುಕರಾಗಿರುವ ಶಿಕ್ಷಕರ ಇಂಗಿತವನ್ನು ಅರಿತವರಂತೆ ಶ್ರೀ ಬಾಲಚಂದ್ರ ಭಟ್ ರವರು ಪ್ರಾರಂಭದಲ್ಲಿಯೇ ತಾವು ಅದ್ಭುತ ವಿಷಯಗಳನ್ನು ಪಡೆಯಲಿದ್ದೀರಿ ಎಂದು ತಿಳಿಸುವುದರೊಂದಿಗೆ ನಮ್ಮಲ್ಲಿ ಕುತೂಹಲವನ್ನು ಕೆರಳಿಸಿದರು.ಈ ಹಂತದಲ್ಲಿ ಇವರು ತೆಗೆದುಕೊಂಡ ವಿಷಯ "ಸ್ಕ್ರೀನ್ ಶಾಟ್" ಪರಿಚಯ. ಸ್ಕ್ರೀನ್ ಶಾಟ್ ಗೆ ಹೋಗುವ ವಿಧಾನ , ನಮಗೆ ಬೇಕಾದ ವಿಷಯ/ ಚಿತ್ರಗಳ ಆಯ್ಕೆ , ಅದನ್ನು ನಮಗೆ ಬೇಕಾದಲ್ಲಿ ಅಳವಡಿಸಿಕೊಳ್ಳಬೇಕಾದ ಹಂತಗಳ ಸಂಪೂರ್ಣ ಮಾಹಿತಿಯನ್ನು ಲ್ಯಾಪ್ ಟಾಪ್ ಮೂಲಕ ಪ್ರತ್ಯಕ್ಷವಾಗಿ ತೋರಿಸಿ ನ೦ತರ ಶಿಕ್ಷಕರಿಗೆ 'ಮಾಡಿಕಲಿ' ವಿಧಾನಕ್ಕೆ ಅವಕಾಶ ಮಾಡಿಕೊಟ್ಟರು. ಶಿಕ್ಷಕರು 'ಸ್ಕ್ರೀನ್ ಶಾಟ್' ವಿಧಾನದಲ್ಲಿ ತಮಗೆ ಬೇಕಾದ ಮಾಹಿತಿಯನ್ನು ಬೇಕಾದಲ್ಲಿ ಪಡೆದು ಏನನ್ನೋ ಸಾಧಿಸಿದವರಂತೆ ಸಂಭ್ರಮಿಸಿದರು
ಮುಂದಿನ ಅವಧಿಯಲ್ಲಿ HYPER LINK ವಿಷಯವನ್ನು ತರಬೇತಿಗೆ ಲಿ೦ಕ್ ಮಾಡಿದವರು ಸ೦ಪನ್ಮೂಲ ವ್ಯಕ್ತಿಗಳಾದ ಶ್ರೀ ಗಣೇಶ ಭಟ್ ರವರು. ಇವರು ಈ ಸ೦ದರ್ಭದಲ್ಲಿ ಅ೦ತರ್ಜಾಲ ಲಭ್ಯವಿಲ್ಲದೆಯೂ ನಾವು ಲಭ್ಯವಿರುವ ವಿಷಯಾ೦ಶಗಳನ್ನು ಹೇಗೆ HYPER LINK ವಿಧಾನದಿ೦ದ libra writer ಗೆ ಅಳವಡಿಸಬಹುದೆಂಬ ವಿಷಯವನ್ನು ಪ್ರಾಯೋಗಿಕವಾಗಿ ತೋರಿಸಿ ನಂತರ ಶಿಕ್ಷಕರಿಂದಲೂ ಮಾಡಿಸಿ ತಮ್ಮ ಅವಧಿಯ ಸಾರ್ಥಕತೆಯನ್ನು ಕಂಡುಕೊಂಡರು

ಮುಂದಿನ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಪರಿನಣಾಮಕಾರಿಯಾಗಿ ಬಳಕೆಯಾಗುತ್ತಿರುವ libre office caic. ಬಗ್ಗೆ ಸಮಗ್ರ ಮಾಹಿತಿ ನೀದಿದವರು ಶ್ರೀ ಗಣೇಶ ಭಟ್ ರವರು. ತರಗತಿಯಲ್ಲಿ ವಿದ್ಯಾರ್ಥಿಗಳ ದಾಖಲಾತಿ, ಹಾಜರಾತಿ, ಅಂಕವಹಿಗಳನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ libre office calc.ನ ಮಹತ್ವವನ್ನು ತಿಳಿಸಿ ವಿದ್ಯಾರ್ಥಿಗಳ ಮಾಹಿತಿಯನ್ನು ಸುಲಭವಾಗಿ ದಾಖಲಿಸಲು formet ರಚಿಸುವ ವಿಧಾನ , ಸುಲಭ ಲೆಕ್ಕಾಚಾರಕ್ಕಾಗಿ formula ಗಳ ಬಳಕೆಯ ಬಗ್ಗೆ ಸಂಪೂರ್ಣ ಸಮರ್ಪಕ ಮಾಹಿತಿಯನ್ನು ಪ್ರತ್ಯಕ್ಷವಾಗಿ ನೀಡಿ ಪರೀಕ್ಷಿಸಲು ಶಿಕ್ಷಕರಿಗೆ ಅವಕಾಶ ನೀಡಿದರು. ಅರಿವಿಲ್ಲದೆ ಸರಿಯುತ್ತಿರುವ ಸಮಯ ಊಟದ ವಿರಾಮವನ್ನು ಮೀರುತ್ತಿರುವುದನ್ನು ಅರಿತು ಒ೦ದು ಗಂಟೆಯ ವಿರಾಮ ನೀಡಲಾಯಿತು
ಮುಂದಿನ ಹಂತದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮಹೇಶ ಭಟ್ ರವರು ಅಂತರ್ಜಾಲವನ್ನು ಜಾಲಾಡುವತ್ತ ಶಿಕ್ಷಕರನ್ನು ಕರೆದೊಯ್ಯರು. ಇ_ಮೇಲ್ ಮೂಲಕ ಮಾಹಿತಿ /ಸ೦ದೇಶವನ್ನು ಕಳುಹಿಸುವ ಮತ್ತು ಪದೆಯುವ ವಿಧಾನವನ್ನು ಪ್ರತ್ಯಕ್ಷವಾಗಿ ತೋರಿಸಿ S.T.F group ನಲ್ಲಿ ನಮ್ಮ ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಈ ರೀತಿಯಲ್ಲಿ ಇ-ಮೇಲ್ ಮಾಹಿತಿಯನ್ನು ಪಡೆಯಲು ಸಾಕಷ್ಟು ಅವಕಾಶವಿದ್ದು ಶಿಕ್ಷಕರು ಇದರ ಸದ್ಬಳಕೆಮಾಡಿಕೊಳ್ಳಬೇಕೆಂದು ತಿಳಿಸಿದರು. ಅಲ್ಲದೆ ಇ-ಮೇಲ್ ನಲ್ಲಿ ನಮ್ಮ ಸಿಗ್ನೇಚರ್ ಮತ್ತು ಫೋಟೊವನ್ನು ಅಳವಡಿಸಿಕೊಳ್ಳುವ ವಿಧಾನವನ್ನು ಪ್ರತ್ಯಕ್ಷವಾಗಿ ವಿವರಿಸಿದರು

ಕೊನೆಯಲ್ಲಿ ಸಂಘಟಕರಾದ ಶ್ರೀ ಗುಣಿ ಯವರು ೫ ತಂಡದವರಿಗೂ ಭಾರತೀಯ ಭಾಷಾ ಬಗೆಗಿನ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಪೊಶಿಷನ್ ಪೇಪರ್ ಕುರಿತು ೫ ವಿಷಯಗಳನ್ನು ನೀಡಿ ಚರ್ಚಿಸಲು ಅವಕಾಶ ನೀಡಿ ಪ್ರತಿ ತ೦ಡದಿಂದ ವರದಿ ನೀಡಲು ತಿಳಿಸಿ ಎಲ್ಲರನ್ನೂ ವಂದಿಸಿ ಅ೦ದಿನ ತರಬೇತಿಗೆ ತೆರೆಎಳೆದರು
ವ೦ದನೆಗಳು
5th Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕುಮಟಾ
ಎಸ್. ಟಿ. ಎಪ್. ತರಬೇತಿ ಕಾರ್ಯಗಾರ
ಕುವೆಂಪು ತಂಡ
ಮುಚ್ಚು ಮರೆಯಿಲ್ಲದೆಯೆ
ನಿಮ್ಮ ಮುಂದೆಲ್ಲವನು
ಬಿಚ್ಚಿಡುವೆ ಓ ಗುರುವೆ ಅಂತರಾತ್ಮ
ಪಾಪವಿದೆ ಪುಣ್ಯವಿದೆ
ನರಕವಿದೆ ನಾಕವಿದೆ
ಸ್ವೀಕರಿಸು ಓ ಗುರುವೆ ಅಂತರಾತ್ಮ
ಎನ್ನುವ ಕುವೆಂಪುರವರ ನುಡಿಯೊಂದಿಗೆ ಐದನೇ ದಿನದ ವರದಿಯನ್ನು ತಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ
11/09/2015 ರಂದು ಶುಭ ಮುಂಜಾನೆ 9.30ಕ್ಕೆ ಸರಿಯಾಗಿ ಶ್ರೀ ಬಾಲಚಂದ್ರ ಗುಣಿ ಯವರು ಕಂಪ್ಯುಟರ್ ದುರಸ್ತಿಯೊಂದಿಗೆ ಅದರ ಉಪಯೊಗ ಮಾಡಿಕೊಂಡ ಬಗೆಗೆ ಶ್ಲಾಘಿಸಿ,ಮಾತಿಗಿಂತ ಪ್ರಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂಬ ಅಭಿಲಾಷೆಯೊಂದಿಗೆ,ಕಂಪ್ಯೊಟರ್ ಜ್ಞಾನವನ್ನು ಧಾರೆ ಎರೆದ ಸಂಪನ್ಮೂಲ ವ್ಯಕ್ತಿಗಳನ್ನು ಹಾಗೂ ಶಿಭಿರಾರ್ಥಿಗಳನ್ನು ಸ್ವಾಗತಿಸಿ 5ನೆ ದಿನದ ತರಬೇತಿಗೆ ಚಾಲನೆ ನೀಡಿದರು
ಶಿವರಾಮಕಾರಂತ ತಂಡದಸದಸ್ಯರಾದ ಶ್ರೀಮತಿ ಗೀತಾ ಪಟಗಾರ ಅವರು 4ನೇ ದಿನದ ತರಬೇತಿಯ ವರದಿಯನ್ನು ಸುದೀರ್ಘವಾಗಿ ನಮ್ಮೆದುರು ತೆರೆದಿಟ್ಟರು

ಶ್ರೀ ಬಾಲಚಂದ್ರ ಭಟ್ಟರವರು ವಯಕ್ತಿಕ ಮಾಹಿತಿಯನ್ನು sಣಜಿ ಗುಂಪಿಗೆ ಕಳುಹಿಸದಂತೆ ಸಲಹೆ ನೀಡಿದರು.ಜೊತೆಗೆ ಎಸ್.ಟಿ.ಎಪ್ ನ emಚಿiಟ ವಿಳಾಸವನ್ನು ತಿಳಿಸಿ ಅದರ ಉಪಯೊಗ ಪಡೆದುಕೊಳ್ಳುವಂತೆ ಸೂಚಿಸಿದರು.ಅದರೊಂದಿಗೆ ಐibಡಿe oಜಿಜಿiಛಿe imಠಿಡಿess ನ ಮಾಹಿತಿ ನೀಡಿದರು.ಅದರಲ್ಲಿ ನಮಗೆ ಬೇಕಾದ ಶೈಲಿಯಲ್ಲಿ ಅಕ್ಷರವನ್ನು ಬರೆಯುವ ವಿಧಾನದೊಂದಿಗೆ ನಮಗೆ ಅವಶ್ಯವಿರುವ ಪೋಟೊವನ್ನು ಒಂದೆಡೆ ಸಂಗ್ರಹಿಸಿ ಬಣ್ಣ ನೀಡುವ ಕೌಶಲವನ್ನು ಆಕರ್ಷಕವಾಗಿ ತಿಳಿಸಿ,ಪ್ರಾಯೋಗಿಕ ಅಭ್ಯಾ¸ಕ್ಕೆ ಶಿಬಿರಾರ್ಥಿಗಳನ್ನು ಅಣಿಗೊಳಿಸಿದರು
ಶ್ರೀ ಭಾಸ್ಕರ ನಾಯ್ಕ ರವರು ಉimಠಿ ಇಜiಣoಡಿ ನ ಉಪಯೋಗ ಮತ್ತು ಹಂತ ಹಾಗೂ ಖeಛಿoಡಿಜ miಟಿಜ ಜesಞಣoಠಿನಲ್ಲಿ viಜeo eಜiಣiಟಿg ಚಿಟಿಜ souಟಿಜ eಜiಣiಟಿg ¨ಗ್ಗೆ ಮನಮುಟ್ಟುವಂತೆ ಸವಿಸ್ತಾರವಗಿ ವಿವರಿಸಿದರು. ಪ್ರಾಯೋಗಿಕವಾಗಿ ಜಯಪುರದ ಬೆಡಗಿನ ತಾಣಗಳ ವಿಡಿಯೋವನ್ನು ಪ್ರದರ್ಶಿಸಿದರು. ತದನಂತರದಲ್ಲಿ ಶ್ರೀ ಗಣೇಶ ಭಟ್ಟ ರವರು souಟಿಜ ರೆಕೊರ್ಡಿgಗ್ ನ ವಿಧಾನದೊಂದಿಗೆ ನಾವು ಮಾಡಿದ ರೆಕೊರ್ಡನಲ್ಲಿ ಖಾಲಿ ಇರುವ ಅನವಶ್ಯಕವಾದ ಭಾಗಗಳನ್ನು ತೆಗೆಯುವ ವಿಚಾರವನ್ನು ನೇರವಾಗಿ ಪ್ರದರ್ಶಿಸುತ್ತಾ ಪರದೆಯೆಡೆಗೆ ನಮ್ಮ ಗಮನ ಸೆಳೆದರು.ಊಟದ ಸಮಯವಾದ್ದರಿಂದ ಎಲ್ಲರ ಚಿತ್ತ ಊಟದತ್ತ ನಡೆಯಿತು

ಲಘುಬಗೆಯಿಂದ ಊಟ ಮುಗಿಸಿ ಬಂದ ನಾವು ಮತ್ತೆ ಶಿಬಿರದಲ್ಲಿ ಒಂದಾದೆವು.ಮೇಲ್ ಗೆ ಅಟೇಚ್ ಮಾಡಿದ ಫೈಲನ್ನು ಡೌನ್ಲೋಡ್ ಮಾಡುವ ವಿಧಾನವನ್ನು ಶ್ರೀ ಮಹೇಶ ಭಟ್ ರವರು ಸುಂದರವಾಗಿ ತಿಳಿಸಿದರು. ನಂತರ ಸಾಫಲ್ಯ ಪರೀಕ್ಷೆ ಎದುರಿಸಲು ನಾವೆಲ್ಲರು ಸಿದ್ದರಾದೆವು
ಪೂರ್ವದಿನ ನೀಡಿದ ಚರ್ಚಾ ವಿಷಯವನ್ನು 5 ಗುಂಪಿನವರಿಗೆÀ ಮಂಡಿಸಲು ಸದವಕಾಶ ನಿಡಲಾಯಿತು
“ಋಷಿ ವಾಕ್ಯದೊಡನೆÀ ವಿಜ್ಞಾನ ಕಲೆ ಮೇಳೈಸೆ ಜಸವು ಜನ ಜೀವನಕೆ ಮಂಕುತಿಮ್ಮ” ಎನ್ನುವ ಡಿ.ವಿ.ಜಿ ಯವರ ನುಡಿಯಂತೆ ವಿಜ್ಞಾನ ಮತ್ತು ತಂತ್ರಜ್ಞಾ£ವು ಭಾಷೆಯ ಕಲಿಕೆಗೆ ಪೂರಕವಾಗಬಲ್ಲದು ಎಂಬುದನ್ನು ಎಲ್ಲ ಸಂಪನ್ಮೂಲ ವ್ಯಕ್ತಿಗಳು ನಮ್ಮ ಮನಮುಟ್ಟುವಂತೆ ಸುಮಸುಂದರವಾಗಿÉ ತಿಳಿಸಿದರು
ಇಲ್ಲದ ಸಲ್ಲದ ಆಸೆಯ ಭಾಷೆಯ
ಸರ್ಕಸ್ ಮಾಡಲಿಕ್ಕುಂಟೆ ಜಗ
ಒಳಿತೋ ಕೆಡುಕೋ ನಿಮಿಷದೊಳೆ
ನೋಡುವ ಮಾಡುವ ವಿಜ್ಷಾನ ಯುಗ ತಂತ್ರಜ್ಞಾನ ಯುಗ’
' ಎನ್ನುವ ಕವಿವಾಣಿಯಂತೆÀ ಭಾಷಾ ಶಿಕ್ಷಕರಾದ ನಾವು ನಮ್ಮ ಬೋಧನೆಯಲ್ಲಿ ತಂತ್ರಜ್ಞಾನವನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಂಡು ವಿದ್ಯಾರ್ಥಿಗಳ ಕಲಿಕಾ ಪ್ರಗತಿಗೆ ಪೂರಕ ವಾತಾವರಣವನ್ನು ಕಲ್ಪಿಸೋಣ ಎಂಬ ಆಶಾಭಾವನೆಯೊಂದಿಗೆ ಇಂದಿನ ವರದಿಯನ್ನು ಸಂಪನ್ನಗೊಳಿಸುತ್ತಿದ್ದೆವೆ.
ಧನ್ಯವಾದಗಳು
ತಂಡದ ಸದಸ್ಯರು:
ಭಾರತಿ ಹೆಗಡೆ , ಸÀವಿತಾ ಗೌಡ, ರವಿ ಸವದಿ, ಗಣಪತಿ ಗೌಡ, ರತೀಶ ನಾಯಕ , ರಾಮಕೃಷ್ಣ ಜಿ ಗಾಯತ್ರಿ

Batch 2

Agenda

If district has prepared new agenda then it can be shared here

See us at the Workshop


Workshop short report

1st Day
ದಿನಾಂಕ 05~10~2015 ರಂದು ಡಯಟ್ ಕುಮಟಾದಲ್ಲಿ ಕನ್ನಡ ಎಸ್.ಟಿ.ಎಫ್. ತರಬೇತಿಯು 10:30 ಕ್ಕೆ ಸರಿಯಾಗಿ ಪ್ರಾರಂಭವಯಿತು. ಸರಳ ಉದ್ಘಾಟನಾ ಕಾರ್ಯಕ್ರಮವನ್ನು ಡಯಟ್ ಪ್ರಾಚಾಂiÀರ್iರಾದ ಶ್ರೀ ಈಶ್ವರ ನಾಯ್ಕರವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಬಾಲಚಂದ್ರ ಗುಣಿ ಸರ್‍ರವರು ಕನ್ನಡ ಭಾಷಾ ಶಿಕ್ಷರಿಗೆ ಈ ತರಬೇತಿ ಎಷ್ಟು ಅಗತ್ಯ ಎಂಬ ಬಗ್ಗೆ ಮಾತನಾಡಿದರು. ಉದ್ಘಾಟನಾ ಭಾಷಣದಲ್ಲಿ ಶ್ರೀ ಈಶ್ವರ ನಾಯ್ಕರವರು "ಮುಂದುವರಿದ ತಂತ್ರಜ್ಞಾನ ಇಂದು ತರಗತಿಗಳಿಗೆ ಎಷ್ಟು ಮುಖ್ಯ ಹಾಗೂ ಪ್ರಪಂಚಕ್ಕೆ ತಂತ್ರಜ್ಞಾನದ ಮುಖಾಂತರ ನಾವು ತೆರೆದುಕೊಳ್ಳಬೇಕಾದ ಅವಶ್ಯಕತೆ"ಯ ಕುರಿತಾಗಿ ಮನಮುಟ್ಟುವಂತೆ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ.ಎಮ್.ಭಟ್ಟ, ಶ್ರೀ ಗಣೇಶ ಭಟ್ಟ, ಶ್ರೀ ಮಹೇಶ ಭಟ್ಟರವರ ಉಪಸ್ತಿತಿಯಲ್ಲಿ ಶ್ರೀ ಭಾಸ್ಕರ ನಾಯ್ಕರವರು ಎಲ್ಲರನ್ನೂ ವಂದಿಸುವುದರೊಂದಿಗೆ ಈ ಕಾರ್ಯಕ್ರಮವು ಮುಕ್ತಾಯವಾಯಿತು.
ಪ್ರಾರಂಭದಲ್ಲಿ ಪೂರ್ವ ಪರೀಕ್ಷೆಯನ್ನು ಮಾಡಲಾಯಿತು. ಆ ನಂತರ ಮೊದಲ ಅವಧಿಯಲ್ಲಿ ಶ್ರೀ ಬಿ.ಎಂ.ಭಟ್ಟರವರು ಎಸ್ ಟಿ ಎಫ್ ನ ಮಹತ್ವದ ಕುರಿತು ಸೊಗಸಾಗಿ ಮಾತನಾಡಿದರು. ಶ್ರೀ ಭಾಸ್ಕರ ನಾಯ್ಕರವರು ಟೆಕ್ಸ್ಟ ಟೈಪಿಂಗ್ ಕುರಿತು ಮಾರ್ಗದರ್ಶನ ನೀಡಿದರು. ಅಕ್ಷರ ಟೈಪ್ ಮಾಡಲು ನಾವು ಅಭ್ಯಾಸ ಮಾಡಿದೆವು. ನಂತರ ಗುಂಪು ರಚನೆಯೊಂದಿಗೆ ಬೆಳಗಿನ ಕಾರ್ಯಕ್ರಮ ಮುಕ್ತಾಯವಾಯಿತು. ಮಧ್ಯಾಹ್ನ 2:30ಕ್ಕೆ ಸರಿಯಾಗಿ ತರಬೇತಿಯು ಪುನಃ ಪ್ರಾರಂಭವಾಯಿತು. ಶ್ರೀ ಮಹೇಶ ಭಟ್ಟರವರು ಇ ಮೇಲ್ ರಚನೆಯ ಕುರಿತು ತುಂಬ ಸ್ಪಷ್ಟವಾಗಿ ನಿರೂಪಿಸಿದರು. ತದನಂತರದಲ್ಲಿ ಎಲ್ಲ ಸಂಪನ್ಮೂಲ ವ್ಯಕ್ತಿಗಳೂ ಇ ಮೆಲ್ ಖಾತೆ ತೆರೆಯಲು ವಯಕ್ತಿಕವಾಗಿ ಮಾರ್ಗದರ್ಶನ ಮಾಡಿದರು. ನಾಳೆ ಎಲ್ಲರೂ 9:30ಕ್ಕೆನೇ ಸೇರೊಣ ಎಂಬ ಸೂಚನೆಯೊಂದಿಗೆ ಇಂದಿನ ಕಾರ್ಯಕ್ರಮ ಮುಕ್ತಾಯವಾಯಿತು.
2nd Day
Click Here for 2nd Day Report

3rd Day
Click Here for 3rd Day Report

4th Day
Click Here for 4th Day Report

5th Day

Batch 3

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day
ದಿನಕರ ದೇಸಾಯಿ ತಂಡ: ಎಸ್. ಟಿ.ಎಪ್ ಕನ್ನಡ ತರಬೇತಿ ಡಯಟ ಕುಮಟ (ಉ.ಕ)
ದಿನಾಂಕ 19-11-2015 ರಂದು ನಾಲ್ಕನೇ ದಿನದ ಎಸ್.ಟಿ.ಎಪ್ ಕನ್ನಡ ತರಬೇತಿ ಕಾರ್ಯಕ್ರಮವು ಎಲ್ಲಾ ಶಿಬಿರಾರ್ಥಿಗ ಹಾಜರಾತಿಯೊಂದಿಗೆ ಪ್ರಾರಂಭಗೊಂಡಿತು.
ಸಂಯೋಜಕರಾದ ಶ್ರೀಯುತ ಬಿ. ಜಿ ಗುಣಿಯವರು ಪ್ರಾಸ್ತಾವಿಕ ಮಾತನಾಡುತ್ತಾ, ಸರ್ವರನ್ನು ಸ್ವಾಗತಿಸಿ ಶಿಕ್ಷಕರಲ್ಲಿ ಜ್ಞಾನಶಕ್ತಿ ,ಇಚ್ಚಾಶಕ್ತಿ ಮತ್ತು ಕ್ರಿಯಾಶಕ್ತಿಯಿಂದ ಕಾ ಪೂರ್ಣಗೊಳ್ಳುತ್ತದೆಂದರು.
ಮಾಸ್ತಿ ವೆಂಕಟೇಶ ಅಯ್ಯಂಗಾರ ತಂಡದ ನಾಯಕರಾದ ಶ್ರೀ ರಾಘವೇಂದ್ರ ಭಟ್ಟ ರವರು ಹಿಂದಿನ ದಿನದ ವರದಿಯನ್ನು ವಾಚಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ. ಎಮ್. ಭಟ್ಟ ರವರು ಇಂದಿನ ಮೊದಲನೇ ಅವಧಿಯ " ಪರಿಕಲ್ಪನಾ ನ ಕ್ಷೆಯನ್ನು"ರಚಿಸುವ ಕ್ರಮವನ್ನು ಶಿಭಿರಾರ್ಥಿಗಳಿಗೆ ಪ್ರಾಯೋಗಿಕವಾಗಿ ಮನವರಿಕೆ ಮಾಡಿಕೊಟ್ಟರು.
ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮಹೇಶ ಭಟ್ಟ ರವರು ಮೇಲ್ ಸಿಗ್ನೇಚರನಲ್ಲಿ ವಿಳಾಸ,ಪೋಟೋ ಸೇರಿಸುವ ಹಾಗೂ ಬದಲಾಯಿಸುವ ಹಂತವನ್ನು ಮತ್ತು ಭಾಷೆಯನ್ನು ಬದಲಾಯಿಸುವ, ಗೂಗಲ್ ಡ್ರ್ವೆವ್ ಬಳಸಿ ಸಂಗ್ರಹಿಸುವುದು, ಓದುವ ತಂತ್ರಾಂಶ,ಇತರೆ ಎಪ್ಲಿಕೇಶನಗಳ ಬಳಕೆಯನ್ನು ಮನವರಿಕೆ ಮಾಡಿದರು.
ಭೋಜನ ವಿರಾಮ.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಭಾಸ್ಕರ ನಾಯ್ಕ ರವರು ಯು ಟ್ಯೂಬ್ ದಿಂದ ಆಡಿಯೋ,ವಿಡಿಯೋ ಡೌನ್ ಲೋಡ್ ಮಾಡಿ ಉಳಿಸುವ ತಂತ್ರಾಂಶವನ್ನು ತಿಳಿಸಿದರು.
ಮುಂದುವರಿದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿ ಶ್ರೀ ಗಣೇಶ ಭಟ್ಟ ರವರಿಂದ ಲಿಬ್ರಾ ಆಫೀಸ್ ಕೆಲ್ಕ ತಂತ್ರಾಂಶವನ್ನು ಉಪಯೋಗಿಸಿ ಅಂಕ ವಹಿ ನಿರ್ವಹಿಸುವ ಮಾಹಿತಿಯನ್ನು ನೀಡಿದರು. ನಂತರ ಪ್ರಾಯೋಗಿಕ ಚಟುವಟಿಕೆಗೆ ಅವಕಾಶ ಮಾಡಿ ಮಾರ್ಗದರ್ಶನ ನೀಡಿದರು.
ಕೊನೆಯ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ. ಎಮ್. ಭಟ್ಟ ರವರು ಅಡಾಸಿಟಿ ತಂತ್ರಾಂಶದಲ್ಲಿ ಎಕ್ಸಪೋರ್ಟ, ಇಂಪೋರ್ಟ ಬಗ್ಗೆ ಮಾಹಿತಿ ನೀಡಿ ಪ್ರಾಯೋಗಿಕ ಚಟುವಟಿಕೆಗೆ ಅವಕಾಶ ನೀಡಿದರು. ಧನ್ಯವಾದಗಳೊಂದಿಗೆ,

5th Day
ದಿನಾಂಕ 18-11-2015 ರಂದು ಕುಮಟಾ ಡಯಟ್ ನಲ್ಲಿ ನಡೆದ STF ತರಬೇತಿಯ
ಸಾರಾಂಶದ ವರದಿಯನ್ನು ಮಂಡಿಸಲು ಮಾಸ್ತಿ ತಂಡಕ್ಕೆ ಸಂತಸವೆನಿಸುತ್ತದೆ.
ಶ್ರೀB.M.Bhatರವರ ಸ್ವಾಗತ ಹಾಗೂ ದ.ರಾ.ಬೇಂದ್ರೆ ತಂಡದ ವರದಿವಾಚನದೊಂದಿಗೆ ತರಬೇತಿ ಪ್ರಾರಂಭವಾಯಿತು.
ಶ್ರೀGanesh Bhatರವರು ವಿಷಯಗಳನ್ನು ಡೌನ್ಲೋಡ್ ಮಾಡಿ, ಬಳಕೆಮಾಡುವುದು ಹೇಗೆಂಬುದನ್ನುತಿಳಿಸಿ ಶಿಬಿರಾರ್ಥಿಗಳಿಗೆ ಗಣಕಯಂತ್ರ ಬಳಕೆಗೆ ಸಮಯ ನೀಡಿದರು.
ಶ್ರೀBhaskar Naikರವರು koer ತಂತ್ರಜ್ಞಾನ ಬಳಕೆ ಮಾಡುವುದು ಹೇಗೆಂಬುದನ್ನುತಿಳಿಸಿ ಶಿಬಿರಾರ್ಥಿಗಳಿಗೆ ಗಣಕಯಂತ್ರ ಬಳಕೆಗೆ ಸಮಯ ನೀಡಿದರು.
ಶ್ರೀB.M.Bhatರವರು ತೆರೆಚಿತ್ರ ಡೌನ್ಲೋಡ್ ಮಾಡಿ, ಬಳಕೆ ಮಾಡುವುದು ಹೇಗೆಂಬುದನ್ನುತಿಳಿಸಿ ಶಿಬಿರಾರ್ಥಿಗಳಿಗೆ ಗಣಕಯಂತ್ರ ಬಳಕೆಗೆ ಸಮಯ ನೀಡಿದರು.ನಂತರ ಭೋಜನ ವಿರಾಮ.
ಶ್ರೀMahesh Bhatರವರು emailನಲ್ಲಿಸಂದೇಶವನ್ನು ನೋಡುವುದು ಹಾಗೂ ಸಂದೇಶವನ್ನು ಕಳುಹಿಸುವುದು ,ಬಳಕೆ ಮಾಡುವುದು ಹೇಗೆಂಬುದನ್ನುತಿಳಿಸಿ ಶಿಬಿರಾರ್ಥಿಗಳಿಗೆ ಗಣಕಯಂತ್ರ ಬಳಕೆಗೆ ಸಮಯ ನೀಡಿದರು. ಶ್ರೀBhaskar Naikರವರು Record my desktop ಕುರಿತು ತಿಳಿಸಿ ಶಿಬಿರಾರ್ಥಿಗಳಿಗೆ ಗಣಕಯಂತ್ರ ಬಳಕೆಗೆ ಸಮಯ ನೀಡಿದರು.
ವಂದನೆಗಳು