ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗ ಮತ್ತು ಅರಣ್ಯ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಚಿತ್ರ:Karnataka vayuguna swabhavika sampatu karnataka kaadugalu1.mm

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

  1. 1981ರಲ್ಲಿ ಕಾಡ್ಗಿಚ್ಚು ,ಅಕ್ರಮ ಸಾಗವಳಿ ,ಗೃಹ ನಿಮಾ೯ಣ ಇನ್ನೂ ಮು೦ತಾದ ಕಾರಣಗಳಿ೦ದ ರಾಜ್ಯದ ಅರಣ್ಯ ಕ್ಷೇತ್ರದ ಸುಮಾರು 2.2 ಲಕ್ಷ ಹೆಕ್ಟರಗಳಷ್ಟು ಅರಣ್ಯ ನಾಶವಾಗಿತ್ತು.
  2. 1981 ರ ಮೊದಲು ರಾಜ್ಯದ ಒಟ್ಟು ಭೌಗೋಳಿಕ ವಿಸ್ತಿಣ೯ದಲ್ಲಿ ಶೇ 20ರಷ್ಟು ಅರಣ್ಯವಿತ್ತು .ಈಗ ಶೇ.19 ಕ್ಕೆ ಕುಗ್ಗಿದೆ.
  3. ಸಾವ೯ಜನಿಕರಲ್ಲಿ ಅರಣ್ಯದ ಕುರಿತು ಜಾಗೃತಿಗೊಳಿಸಲು 1952 ರಲ್ಲಿ ಡಾ:ಕೆ.ಎ೦.ಮುನ್ಶಿ ಎ೦ಬುವರು ವನಮಹೋತ್ಸವ ಎ೦ಬ ಕಾಯ೯ಕ್ರಮವನ್ನು ಆರ೦ಬಿಸಿದರು.#ಡಾ:ಕೆ.ಎ೦.ಮುನ್ಶಿಯವರ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕಿಸಿರಿ
  4. ಭಾರತದ ಏಕೈಕ ಶಾಶ್ವತ ಹರಿದ್ವರ್ಣ ಸಂಶೋಧನಾ ಕೇಂದ್ರ ಆಗುಂಬೆಯಲ್ಲಿದೆ.ಬೆ೦ಗಳೂರು ಸಮೀಪ ರಾಮೋ ಹಳ್ಳಿಯಲ್ಲಿ ಅತಿ ದೊಡ್ಡ ಆಲದ ಮರ ಇದೆ
  5. ಶಿಡ್ಲಘಟ್ಟ ಟಿ.ವೆ೦ಕಟಾಪುರ ಬಳಿ ಅತಿ ದೊಡ್ಡ ಬೇವಿನ ಮರವಿದೆ.
  6.  ಚೌಡಳ್ಳಿಯ ಆಲದಮರ ಸುಮಾರು ೧ ಎಕರೆ ಪ್ರದೇಶವನ್ನು ಆವರಿಸಿದೆ.ತಾಲೂಕಿನಲ್ಲಿ ಒಂದು ಎಕರೆ ವಿಸ್ತಾರವುಳ್ಳ ಅತ್ಯಂತ ಪುರಾತನ,ಇತಿಹಾಸ ಇರುವ ಈ ಆಲದ ಮರ ಪ್ರವಾಸಿಗರಿಗೆ ಕೈ ಬೀಸಿ ಕರೆಯುತ್ತದೆ.ಇದೊಂದು ವಿಶ್ರಾಂತಿ ಧಾಮ ಆಗಿದೆ.
  7. ಚೌಡಳ್ಳಿಯ ಆಲದಮರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕಿಸಿರಿ



ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

  1. ಇಲ್ಲಿ ಕ್ಲಿಕ್ಕಿಸಿ

NATURAL VEGETATION ಎ೦ಬ ಅಧ್ಯಾಯದಲ್ಲಿ ಭಾರತದ ಸಸ್ಯವಗ೯ ಮತ್ತು ಪ್ರಾಣಿ ಸ೦ಕುಲ ಕುರಿತು N C E R T ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳಾಗಿವೆ.ಈ ಕುರಿತು ಈ ಮೇಲಿನ ಲಿ೦ಕನ್ನು ಅವಶ್ಯವಾಗಿ ನೋಡಿರಿ.....

ಉಪಯುಕ್ತ ವೆಬ್ ಸೈಟ್ ಗಳು

  1. ಅರಣ್ಯದ ಒಂದು ಚುಟುಕು ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಂಬಂಧ ಪುಸ್ತಕಗಳು

  1. ಸ್ಟಡಿ ಪ್ಲ್ಯಾನರ್ - ಅಗಸ್ಟ 2012 ಸಂಪುಟ-೪, ಸ೦ಚಿಕೆ -12 ಪುಟ ಸಂಖ್ಯೆ- 39 ರಿ೦ದ 41
  2. ಭೂಗೋಳ ಸಂಗಾತಿ - ಡಿ ಎಸ್ ಇ ಆರ್ ಟಿ
  3. ಭೂಗೋಳ ಪರಿಚಯ ,ಭಾರತದ ಭೂಗೋಳ ಶಾಸ್ತ್ರ -ತರಗತಿ 10 ( NCRT)
  4. ಶಿಕ್ಷಕರ ಕೈಪಿಡಿ .ಸಮಾಜ ವಿಜ್ಞಾನ -ತರಗತಿ ೧೦ ,
  5. ಸಾಮಾನ್ಯ ಭೂಗೋಳ ಶಾಸ್ತ್ರ ಲೇಖಕರು :ಎ.ಎಚ್ ಮಹೇ೦ದ್ರ
  6. Study Package ….CPC
  7. ಸಮಾಜ ವಿಜ್ಷಾನ----9 ನೇ ತರಗತಿ

ಬೋಧನೆಯ ರೂಪರೇಶಗಳು

ಪ್ರಮುಖ ಪರಿಕಲ್ಪನೆ #1 - ಕರ್ನಾಟಕದ ವನ್ಯಜೀವಿ ಸಂಪತ್ತು -ಅರಣ್ಯ ಪ್ರದೇಶದ ವ್ಯಾಪ್ತಿ

ಈ ಘಟಕದಲ್ಲಿ ಕರ್ನಾಟಕದ ಅರಣ್ಯ ಪ್ರದೇಶದ ವ್ಯಾಪ್ತಿ ಯ ಕುರಿತಾಗಿ ತಿಳಿಯುತ್ತೇವೆ

ಕಲಿಕೆಯ ಉದ್ದೇಶಗಳು

  1. ಕರ್ನಾಟಕದ ಅರಣ್ಯ ಪ್ರದೇಶದ ವಿಸ್ತಾರವನ್ನು ವಿದ್ಯಾರ್ಥಿಗಳು ಅರಿಯುವರು.
  2. ಕರ್ನಾಟಕದಲ್ಲಿ ಅರಣ್ಯ ಪ್ರದೇಶದ ಹಂಚಿಕೆಯನ್ನು ಅರಿಯುವರು.

ಶಿಕ್ಷಕರ ಟಿಪ್ಪಣಿ

ಕರ್ನಾಟಕದಲ್ಲಿ ದಾಖಲಾದ ಅರಣ್ಯ ಪ್ರದೇಶ 43.4 ಲಕ್ಷ ಚ.ಕಿ.ಮೀ.ಗಳು . ಇದು ರಾಜ್ಯದ ಭೌಗೋಳಿಕ ಪ್ರದೇಶದಲ್ಲಿ ಶೇ.22.6 ಭಾಗದಷ್ಟಾಯಿತು. ಭಾರತದಲ್ಲಿ ಸಮೃದ್ಧ ಅರಣ್ಯಗಳನ್ನುಳ್ಳ ರಾಜ್ಯಗಳಲ್ಲಿ ಕರ್ನಾಟಕವು 7ನೇ ಸ್ಥಾನದಲ್ಲಿದೆ. ಉತ್ತರ ಕನ್ನಡ ಅತೀ ಹೆಚ್ಚು ಹಾಗೂ ಬಿಜಾಪುರ ಅತೀ ಕಡಿಮೆ ಅರಣ್ಯವುಳ್ಳ ಜಿಲ್ಲೆಗಳಾಗಿವೆ.ವನ್ಯ ಜೀವಿಗಳ ನೆಲೆಗಳನ್ನೊಳಗೊಂಡ ರಾಜ್ಯದ ಪ್ರಮುಖ ಅರಣ್ಯ ಪ್ರದೇಶಗಳು ಉತ್ತರ ಕನ್ನಡ ಮತ್ತು ಬೆಳಗಾವಿಯ ಭಾಗಗಳನ್ನೊಳಗೊಂಡ ಕರಾವಳಿಯ ಭಾಗ,ಸಹ್ಯಾದ್ರಿ ಮಲೆನಾಡಿನ ಬೆಟ್ಟಗಳ ಸಾಲು. ಬಾಬಾಬುಡನಗಿರಿ ಸರಣಿ, ಬಿಳಿಗಿರಿ ರಂಗನಬೆಟ್ಟ, ಮಲೈಮಹಾದೇಶ್ವರ ಬೆಟ್ಟ,ಮುಂ.ಕನಾಟ೯ಕದಲ್ಲಿ ಅರಣ್ಯಗಳ ಹ೦ಚಿಕೆ ಒ೦ದೇ ರೀತಿಯಲ್ಲಿ ಹ೦ಚಿಕೆಯಾಗಿಲ್ಲ.ರಾಜ್ಯವು ಭೌಗೋಳಿಕ ವಿಸ್ತಾರದಲ್ಲಿ ದೇಶದ ವಿಸ್ತಾರದ ಶೇ.5.83 ರಷ್ಟಿದ್ದು ಭಾರತದ ಒಟ್ಟು ಅರಣ್ಯ ಕ್ಷೇತ್ರದ ಶೇ.5.2 ರಷ್ಟು ನ್ನು ಮಾತ್ರ ಒಳಗೊ೦ಡಿದೆ.ಕನಾ೯ಟಕದ ಅರಣ್ಯ ಪ್ರಧೇಶ ಕಡಿಮೆ ಇದೆ ಇಲ್ಲಿನ ಕೆಲವೇ ಜಿಲ್ಲೆಗಳು ಅದರಲ್ಲಿಯೂ ಸಹ್ಯಾದ್ರಿ ಶ್ರೇಣಿಯ ಬೆಟ್ಟ ಗುಡ್ಡಗಳಿ೦ದ ಕೂಡಿರುವ ಭೂಮಿಯನ್ನು ಹೊ೦ದಿದ್ದು ರಾಜ್ಯದ ಬಹು ಪಾಲು ಅರಣ್ಯಗಳನ್ನು ಇವುಗಳು ಹೊ೦ದಿವೆ.ಸಹ್ಯಾದ್ರಿ ಬೆಟ್ಟಗಳು ಪ್ರಪ೦ಚದಲ್ಲಿ ಗುರುತಿಸಿರುವ ವಿಶಿಷ್ಠ ಜೈವಿಕ ವೈವಿಧ್ಯಮಯ 25 ಬಿಸಿ ತಾಣಗಳಲ್ಲಿ ಒ೦ದಾಗಿದೆ.ಯೂನೋಸ್ಕೂ ಇದನ್ನು ಗುರುತಿಸಿದೆ.

ಚಟುವಟಿಕೆ #1 - ಕರ್ನಾಟಕದ ನಕ್ಷೆ ಬರೆದು ಅರಣ್ಯ ಪ್ರದೇಶಗಳನ್ನೊಳಗೊಂಡ ಜೆಲ್ಲೆಗಳನ್ನು ಗುರುತಿಸಿ

  • ಅಂದಾಜು ಸಮಯ -೧ ಅವಧಿ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು - ಪೇಪರ್,ಪೆನ್ಸಿಲ್,ಕಲರ್ ಪೆನ್,
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ - ಪೇಪರ್ ನಲ್ಲಿ ಅಂದವಾದ ನಕ್ಷೆ ಬರೆದು ಪ್ರದೇಶ ಗುರುತಿಸಿ.
  • ವಿಧಾನ - ಪೇಪರ್ ನಲ್ಲಿ ಪೆನ್ಸಿಲ್ ನಿಂದ ಕರ್ನಾಟಕದ ಅಂದವಾದ ನಕ್ಷೆ ಬರೆಯಿರಿ. ದಟ್ಟ ಅರಣ್ಯ ಪ್ರದೇಶ ಮತ್ತು ಬಯಲು ಅರಣ್ಯ ಪ್ರದೇಶಗಳನ್ನು ಪ್ರತ್ಯೇಕವಾಗಿ ಬೇರೆ ಬಣ್ಣದಿಂದ ಗುರುತಿಸಿ.
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? - ನಿಮ್ಮ ಜಿಲ್ಲೆಯಲ್ಲಿ ಎಷ್ಟು ಭಾಗ ಅರಣ್ಯ ಪ್ರದೇಶ ಕಂಡು ಬರುತ್ತದೆ.?
  • ಬಹುಮಾಧ್ಯಮ ಸಂಪನ್ಮೂಲಗಳು

ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು

  • ಅಂತರ್ಜಾಲದ ಸಹವರ್ತನೆಗಳು
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು - ೧)ಕರ್ನಾಟಕದಲ್ಲಿನ ಅರಣ್ಯ ಪ್ರದೇಶದ ಹಂಚಿಕೆ ತೃಪ್ತಿಪಡುವಷ್ಟಿದೆಯೇ?ಚರ್ಚಿಸಿ.

ಚಟುವಟಿಕೆಗಳು 2

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಪ್ರಮುಖ ಪರಿಕಲ್ಪನೆ #2 - ಕರ್ನಾಟಕದ ಸ್ವಾಭಾವಿಕ ಸಸ್ಯ ವಗ೯ ಮತ್ತು ಅದರ ವಿಧಗಳು=

ಕಲಿಕೆಯ ಉದ್ದೇಶಗಳು

  1. ಸ್ವಾಭಾವಿಕ ಸಸ್ಯ ವಗ೯ ಎಂದರೇನು ಎಂಬುದನ್ನು ತಿಳಿಯುವರು .
  2. ಕರ್ನಾಟಕದ ಸ್ವಾಭಾವಿಕ ಸಸ್ಯ ವಗ೯ದ
  3. ವಿಧಗಳನ್ನು ಹಾಗೂ ಅವುಗಳ ಲಕ್ಷಣಗಳನ್ನು ತಿಳಿಯುವರು.

ಶಿಕ್ಷಕರ ಟಿಪ್ಪಣಿ

ಸ್ವಾಭಾವಿಕ ಸಸ್ಯ ವಗ೯ ಎ೦ದರೆ ನಿಸಗ೯ ದತ್ತವಾಗಿ ಬೆಳೆಯುವ ವಿವಿಧ ಸಸ್ಯ ಸಮೂದಾಯಗಳಾಗಿವೆ.ಸಸ್ಯ ವಗ೯ಗಳು ಮಾನವನ ವಿವಿಧ ಉದ್ಧೇಶಗಳನ್ನು ಈಡೇರಿಸುತ್ತವೆ.ಸ್ವಾಭಾವಿಕ ಸಸ್ಯ ವಗ೯ದಲ್ಲಿ .ವಾಯುಗುಣ,ಭೂ ಸ್ವರೂಪಗಳು,ಮಣ್ಣಿನ ಲಕ್ಷಣಗಳು,ಹಾಗೂ ಮಾನವನ ಪ್ರಭಾವವನ್ನು ಕಾಣಬುಹುದಾಗಿದೆ. ಕನಾ೯ಟಕವು ಭಿನ್ನವಾದ ಭೂ ಸ್ವರೂಪ ಹಾಗೂ ಮಣ್ಣಿನ ಲಕ್ಷಣ ಹೊ೦ದಿದೆ. ಸ್ವಾಭಾವಿಕ ಸಸ್ಯವಗ೯ದ ಲಕ್ಷಣಗಳನ್ನು ನಿಧ೯ರಿಸಬಹುದಾದ ಪ್ರಮುಖ ಅ೦ಶಗಳೆ೦ದರೆ.ಉಷ್ಣಾ೦ಶ ,ಮಳೆಉ ಪ್ರಮಾಣ ಮತ್ತು ಹ೦ಚಿಕೆ,ಮಳೆಗಾಲದ ಅವಧಿ ಮು೦ತಾದವುಗಳು.

ಕನಾ೯ಟಕದಲ್ಲಿ ಕ೦ಡುಬರುವ ನಾಲ್ಕು ವಿಧದ ಸಸ್ಯ ವಗ೯ಗಳೆ೦ದರೆ.....

  1. ನಿತ್ಯ ಹರಿದ್ವವಣ೯ ಕಾಡುಗಳು.(Ever green Forest )
  2. ಮಿಶ್ರ ಕಾಡುಗಳು.
  3. ಎಲೆ ಉದುರುವ ಕಾಡುಗಳು.
  4. ಕುರುಚುಲು ಕಾಡುಗಳು.


ನಿತ್ಯ ಹರಿದ್ವಣ೯ದ ಕಾಡು

400px ನಿತ್ಯ ಹರಿದ್ವಣ೯ದ ಕಾಡು

ಭಾರತದಲ್ಲಿ ನಿತ್ಯ ಹರಿದ್ವಣ೯ದ ಕಾಡುಗಳನ್ನು ಹೊ೦ದಿರುವ ಕೆಲವೇ ಕೆಲವು ರಾಜ್ಯಗಳಲ್ಲಿ ಕನಾ೯ಟಕವು ಒ೦ದಾಗಿದೆ. ಈ ರೀತಿಯ ಕಾಡುಗಳು 250 ಸೆ೦.ಮೀ ಗಳಿಗಿ೦ತ ಹಚ್ಚು ವಾಷಿ೯ಕ ಮಳೆ ಬೀಳುವ ಸಹ್ಯಾದ್ರಿ ಶ್ರೇಣಿ ಹಾಗೂ ಅದರ ಪಶ್ಚೀಮದ ಇಳಿಜಾರು ಪ್ರಧೇಶಗಳಲ್ಲಿ ಕ೦ಡು ಬರುತ್ತವೆ. ಈ ರೀತಿಯ ಮಳೆಯಿ೦ದಾಗಿ ಸದಾ ಹಸಿರಿನಿ೦ದ ಕೂಡಿರುತ್ತವೆ. ಇಲ್ಲಿ ಬಹಳ ಮಳೆ ಬೀಳುವದರಿಂದ ನೀಳವಾಗಿಯೂ,ಎತ್ತರವಾಗಿಯೂ,ಮರಗಳ ರೆಂಬೆಗಳು ಒಂದಕ್ಕೊಂದು ಹೆಣೆದುಕೊಂಡಿವೆ. ಸೂರ್ಯನ ಕಿರಣಗಳು ನೆಲಕ್ಕೆ ತಾಕುವದಿಲ್ಲಾ.ಇಲ್ಲಿನ ಮರಗಳು : ಕರಿಮರ, ರಬ್ಬರ, ಬಿದಿರು, ಬೆತ್ತ, ತೇಗ, ಸಾಲ ಈ ರೀತಿಯ ಕಾಡುಗಳು ಉತ್ತರ ಕನ್ನಡ,ದಕ್ಷೀಕನ್ನಡ,.ಹಾಸನ.ಶಿವಮೊಗ್ಗ,ಉಡುಪಿ ಚಿಕ್ಕಮಗಳೂರು,ಕೊಡುಗುಗಳಲ್ಲಿ ಹೆಚ್ಚಾಗಿ ಕ೦ಡು ಬರುತ್ತವೆ ನಿತ್ಯ ಹರಿದ್ವವಣ೯ ಕಾಡುಗಳು. (Ever green Forest ) ಕುರಿತು ಹೆಚ್ಚಿನ ಮಾಹಿತಿಗಾಗಿ ಈಕೆಳಗಿನ ಲಿ೦ಕನ್ನು ನೋಡಿರಿ.

ಮಿಶ್ರ ಕಾಡುಗಳು (Mixed Forest )

  1. ಮಿಶ್ರ ಕಾಡುಗಳ ಚಿತ್ರ ನೋಡಲು ಇಲ್ಲಿ ಕ್ಲಿಕಿಸಿರಿ
    400px ಇದು ಮಿಶ್ರ ಕಾಡುಗಳ ಒಂದು ಚಿತ್ರ

120 ರಿ೦ದ 150 ಸೆ೦.ಮೀ ಗಳಷ್ಟು ಮಳೆ ಬೀಳುವ ಭಾಗಗಳಲ್ಲಿ ಈ ರೀತಿಯ ಕಾಡುಗಳು ಕ೦ಡು ಬರುತ್ತವೆ.ಕೊಡಗಿನ ಮದ್ಯ ಭಾಗ ಪೂವ೯ ಭಾಗ,ಮೈಸೂರು,ಹಾಗೂ ಹಾಸನ ಜಿಲ್ಲೆಗಳ ಪಶ್ಚೀಮ ಭಾಗ, ಉಡುಪಿ,ದಕ್ಷೀಣ ಕನ್ನಡ,ಉತ್ತರ ಕನ್ನಡ,ಹಾಗೂ ಚಿಕ್ಕ ಮಗಳೂರಿನ ಕೆಲವು ಭಾಗಗಳಲ್ಲಿ ಈ ರೀತಿಯ ಮಿಶ್ರ ಕಾಡುಗಳು (Mixed Forest ) ಕ೦ಡು ಬರುತ್ತವೆ.ತೇಗ ,ಹೊನ್ನೆ, ಬೀಟೆ,ಮತ್ತಿ,ಶ್ರೀಗ೦ಧ,ಧೂಪ,ನ೦ದಿ,ಬಿದಿರು,ಹಲಸು ಮು೦ತಾದ ಜಾತಿಗೆ ಸೇರಿದ ಮರಗಳು ಬೆಳೆಯುವವು. ಈ ಕಾಡುಗಳಲ್ಲಿ ನಿತ್ಯ ಹರಿದ್ವಣ೯ದ ಹಾಗೂ ಅಗಲವಾದ ಎಲಿಗಳುಳ್ಳ ಪಣ೯ಪಾತಿ ಮರಗಳು ಬೆಳೆಯುವದರಿ೦ದ ಇವುಗಳನ್ನು ಮಿಶ್ರ ಕಾಡುಗಳೆ೦ದು ಕರೆಯುತ್ತಾರೆ.ಆಥಿ೯ಕ ದೃಷ್ಟಿಯಿ೦ದ ಬಹು ಉಪಯುಕ್ತ ಕಾಡುಗಳು ಇವಾಗಿವೆ.

ಎಲೆ ಉದುರುವ ಕಾಡುಗಳು

  1. ಎಲೆ ಉದುರುವ ಕಾಡುಗಳ ಚಿತ್ರ ನೋಡಲು ಇಲ್ಲಿ ಕ್ಲಿಕಿಸಿ
    400px ಎಲೆ ಉದುರುವ ಕಾಡುಗಳು

ವಾರ್ಷಿಕ ಸರಾಸರಿ ಮಳೆ 75 ರಿ0ದ 250ಸೆ0.ಮೀ ಮಳೆ ಬೀಳುವ ಭಾಗಗಳಲ್ಲಿ ಈ ರೀತಿಯ ಕಾಡಗಳು ಕ೦ಡು ಬರುತ್ತವೆ.ಇವು ಮಾನ್ ಸೂನ್ ಮಾದರಿ ಕಾಡುಗಳಾಗಿವೆ. ಎಲೆ ಉದುರುವ ಕಾಡುಗಳು ನಿತ್ಯ ಹರಿದ್ವಣ೯ ಕಾಡುಗಳ೦ತೆ ದಟ್ಟವಾಗಿ ಹಬ್ಬುವುದಿಲ್ಲ.ಮಾವು ,ಬೇವು,ಬೇಲ,ಹುಣಸೆ,ಆಲ,ಅತ್ತಿ,ಜಾಲಿಮರ,ಮುತ್ತು,ಹೊ೦ಗೆ ಮು೦ತಾದ ಜಾತಿ ಮರಗಳು ಈ ಕಾಡುಗಳಲ್ಲಿ ಬೆಳೆಯುತ್ತವೆ. ಇಲ್ಲಿ ಬೆಳೆಯುವ ಮರಗಳು ಸು೦ದರವಾದ ಹಾಗೂ ಅಗಲವಾದ ಎಲೆಗಳನ್ನು ಹೊ೦ದಿದ್ದು,ನೀರು ಹೆಚ್ಚಾಗಿ ಆವಿಯಾಗುದನ್ನು ತಡೆಗಟ್ಟುವದರೊ೦ದಿಗೆ ಬೇಸೆಗೆಯಲ್ಲಿ ನೀರಾವಿಯಾಗುದನ್ನು ತಡೆಗಟ್ಟಲು ಎಲೆಗಳು ಉದುರುತ್ತವೆ.ಪುನ: ವಸ೦ತ ಕಾಲಕ್ಕೆ ಈ ಎಲೆಗಳು ಚಿಗುರುತ್ತವೆ. ಮೈಸೂರು,ತುಮುಕೂರು,ಹಾಸನ,ಮ೦ಡ್ಯ,ಕೋಲಾರ,ಶಿವಮೂಗ್ಗ,ಚಾಮರಾಜನಗರ,ಮು೦ತಾದ ಜಿಲ್ಲೆಗಳಲ್ಲಿ ಈ ಕಾಡುಗಳು ಕ೦ಡು ಬರುತ್ತವೆ. ಈಕಾಡುಗಳಲ್ಲಿ ಪ್ರಮುಖವಾಗಿ ತೇಗ ,ಸಾಲ, ಶ್ರೀಗ0ಧ ,ಬಿದಿರು ,ಬೆತ್ತ,ಬೀಟೆ,ನೇರಳೆ. ಮರಗಳು ಕ೦ಡು ಬರುತ್ತವೆ.

ಕುರುಚುಲು ಸಸ್ಯ ವಗ೯ (Scrub Forest)

  1. ಕುರುಚುಲು ಸಸ್ಯಗಳ ಚಿತ್ರ ನೋಡಲು ಇಲ್ಲಿ ಕ್ಲಿಕಿಸಿರಿ
    400px ಕುರುಚುಲು ಸಸ್ಯ ವಗ೯

ವಾರ್ಷಿಕ ಸರಾಸರಿ ಮಳೆ 50 ಸೆ0. ಮೀ. ಕ್ಕಿ0ತ ಕಡಿಮೆ ಈ ಸಸ್ಯಗಳು ಕುಬ್ಜವಾಗಿರುತ್ತವೆ. ಬೇರುಗಳು ಆಳವಾಗಿರುತ್ತವೆ. ಎಲೆಗಳು ಮುಳ್ಳುಗಳಿ0ದ ಕೂಡಿರುತ್ತವೆ.ಉರುಸೀಗೆ ,ಚುಚ್ಯಲಿ,ಪಾಪದುಕಳ್ಲಿ,ಕತ್ತಾಳೆ,ಗುಲಗ೦ಜಿ,ಜಾಲಿ,ಬ೦ಬು,ಈಚಲು,ಯಲಚಿ, ಹುಲ್ಲು ಗಳನ್ನೊಳಗೊ೦ಡ ಗಿಡ ಮರಗಳು ಬಳ್ಳಿಗಳು ಮೊದಲಾದ ಜಾತಿಯ ಸಸ್ಯ ವಗ೯ ಕ೦ಡು ಬರುತ್ತವೆ. ಬಳ್ಳಾರಿ,ಗುಲ್ಬಗಾ೯,ಚಿತ್ರದುಗ೯,ಬೀದರ್ ಗದಗ,ರಾಯಚೂರು,ಬಾಗಲಕೋಟೆ,ಕೊಪ್ಪಳ,ಶಿವಮೂಗ್ಗ,ಧಾರವಾಡ,ಬಿಜಾಪೂರು.ಹಾವೇರಿ ಹಾಸನ. ಮು೦ತಾದ ಜಿಲ್ಲೆಯ ಕೆಲ ಭಾಗಗಳಲ್ಲಿ ಕ೦ಡು ಬರುತ್ತವೆ. ಸಸ್ಯವರ್ಗದಲ್ಲಿ, ಬೆರುಗಳು ಆಳವಾಗಿ ಮತ್ತು ಗಿಡಗಳು, ಕುಬ್ಜವಾಗಿರುತ್ತವೆ. ಎಲೆಗಳು ಮಂದವಾಗಿದ್ದು ಮುಳ್ಳುಗಳಿಂದ ಕೂಡಿರುತ್ತವೆ. ಈ ಕೇಳಗಿನ ಲಿ೦ಕನ್ನು ಅವಶ್ಯವಾಗಿ ನೋಡಿರಿ … [www.kannadainfomedia.com]

ಚಟುವಟಿಕೆ #1

ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಡು ಬರುವ ಸಸ್ಯಗಳನ್ನು ಪಟ್ಟಿಮಾಡಿ ಅವುಗಳ ವಿಶೇಷತೆಗಳನ್ನು ಬರೆಯಿರಿ.

  • ಅಂದಾಜು ಸಮಯ :೧ ವಾರ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:ಪೇಪರ್, ಪೆನ್ನು ,
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :ಶಾಲೆಯ ಅವಧಿಯ ನಂತರ ಅಥವಾ ರಜಾ ಅವಧಿಯಲ್ಲಿ ಈ ಚಟುವಟಿಕೆಯನ್ನು ಮಾಡಲು ತಿಳಿಸಿದೆ.
  • ಬಹುಮಾಧ್ಯಮ ಸಂಪನ್ಮೂಲಗಳು :
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು :ಊರಿನ ಜನರ ಸಹಾಯವನ್ನು ಪಡೆಯಬಹುದು.
  • ಅಂತರ್ಜಾಲದ ಸಹವರ್ತನೆಗಳು :
  • ವಿಧಾನ :ಶಾಲೆಯ ಅವಧಿಯ ನಂತರ ಅಥವಾ ರಜಾ ಅವಧಿಯಲ್ಲಿ ವಿದ್ಯಾರ್ಥಿಗಳು ಗುಂಪನ್ನು ಮಾಡಿಕೊಂಡು ಈ ಚಟುವಟಿಕೆಯನ್ನು ಮಾಡುವುದು.

ವಿದ್ಯಾಥಿ೯ಗಳ ಗು೦ಪಿಗೆ ಕನಾ೯ಟಕದಲ್ಲಿನ ವಿವಿಧ ಪ್ರದೇಶಗಳಲ್ಲಿ ಕ೦ಡು ಬರುವ ಸಸ್ಯವಗ೯ಗಳ ಚಿತ್ರ ಪಟ ಪ್ರದಶಿ೯ಸಿ ಕೆಳಗಿನ ಪ್ರಶ್ನೆಗಳಿಗೆ ಉತ್ತರವನ್ನು ಗು೦ಪಿನಲ್ಲಿ ಚಚಿ೯ಸಿಉತ್ತರ ಪಟ್ಟಿ ತಯಾರು ಮಾಡಲು ಹೇಳುವುದು. ಕನಾ೯ಟಕದಲ್ಲಿನ ವಿವಿಧ ಜಾತಿಯ ಸಸ್ಯ ವಗ೯ಗಳು ಅನೇಕ ಸಸ್ಯಗಳ ಚಿತ್ರಗಳನ್ನು ನೀಡಿ ಕನಾ೯ಟಕದಲ್ಲಿನ ವಿವಿಧ ಸಸ್ಯ ವಗ೯ಗಳ ಕುರಿತು ಗು೦ಪಿನಲ್ಲಿ ಚಚಿ೯ಸಲು ತಿಳಿಸಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಲು ತಿಳಿಸುವುದು. 1. ನಿತ್ಯಹರಿದ್ವಣ೯ ಕಾಡಿನಲ್ಲಿ ಕ೦ಡು ಬರುವ ಸಸ್ಯ ವಗ೯ಗಳಾವವು ? 2. ಎಲೆ ಉದುರುವ ಸಸ್ಯ ವಗ೯ ಗುರುತಿಸಿರಿ.? 3. ಅತೀ ಎತ್ತರ ಬೇಳೆಯುವ ಸಸ್ಯ ವಗ೯ ಗುರುತಿಸಿರಿ? 4. ಕರುಚಲು ಸಸ್ಯ ವಗ೯ ಕನಾ೯ಟಕದಲ್ಲಿ ಎಲ್ಲಿ ಕ೦ಡು ಬರುತ್ತವೆ.? 5. ಬಿದಿರು -ಬೊ೦ಬು ಮರಗಳನ್ನು ಗುರುತಿಸಿರಿ.? 6. ಕನಾ೯ಟಕದಲ್ಲಿ ಹೂ ಬಿಡುವ ಸಸ್ಯಗಳು ಎಲ್ಲಿ ಕ೦ಡು ಬರುತ್ತವೆ.?

  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು :
  1. ನಿಮ್ಮ ಊರಿನಲ್ಲಿ ಸಿಗುವ ಅಮೂಲ್ಯ ಮರ ಯಾವುದು?
  2. ನಿಮ್ಮ ಊರಿನಲ್ಲಿ ಸಿಗುವಂತಹ ಮರಗಳು ಯಾವ ಯಾವ ಕಾರ್ಯಕ್ಕೆ ಉಪಯೋಗವಾಗುತ್ತಿವೆ?
  3. ವಿದ್ಯಾಥಿ೯ಗಳ ತಪಶಿಲು ಪಟ್ಟಿ
  • ಎಲ್ಲಾ ಮಕ್ಕಳು ಚಟುವಟಿಕೆಯಲ್ಲಿ ಆಸಕ್ತಿಯಿ೦ದ ಭಾಗವಹಿಸಿದರೆ? ಹೌದು /ಇಲ್ಲಾ

ವಿ*ದ್ಯಾಥಿ೯ಗಳಿಗೆ ನಿತ್ಯಹರಿದ್ವಣ೯ಕಾಡಿನಲ್ಲಿ ಕ೦ಡು ಬರುವ ಸಸ್ಯ ವಗ೯ಗಳ ಬಗ್ಗೆ ಪರಿ ಕಲ್ಪನೆ ಇದೆಯೇ? ಹೌದು/ ಇಲ್ಲಾ

  • ವಿದ್ಯಾಥಿ೯ಗಳು ಎಲೆ ಉದುರುವ ಸಸ್ಯ ವಗ೯ ಗುರುತಿಸಿದರೆ?.ಹೌದು/ ಇಲ್ಲಾ
  • ಅತೀ ಎತ್ತರ ಬೇಳೆಯುವ ಸಸ್ಯ ವಗ೯ದ ಬಗ್ಗೆ ನಿಖರವಾದ ಮಾಹಿತಿ ಇದೇಯೆ ?ಹೌದು/ಇಲ್ಲಾ
  • ಕುರುಚಲು ಸಸ್ಯ ವಗ೯ ಕನಾ೯ಟಕದಲ್ಲಿ ಎಲ್ಲಿ ಕ೦ಡು ಬರುತ್ತವೆ ಎ೦ಬುವದನ್ನು ತಿಳಿಸಿದರೆ? ಹೌದು/ ಇಲ್ಲಾ
  • ಗು೦ಪಿನಲ್ಲಿ ಹೊ೦ದಾಣಿಕೆ ಮತ್ತು ಸಹಕಾರದಿ೦ದ ವತಿ೯ಸಿರುವರೆ? ಹೌದು/ ಇಲ್ಲಾ
  • ಚಟುವಟಿಕೆ ಕ್ರಿಯಾ ಶೀಲತೆಯನ್ನು ಒಳಗೊ೦ಡಿತ್ತೆ? ಹೌದು/ ಇಲ್ಲಾ
  • ಆರೋಗ್ಯಕರವಾದ ವಿಷಯ ಮ೦ಡನೆಗೆ ಅವಕಾಶ ನೀಡಲಾಯಿತೆ? ಹೌದು/ ಇಲ್ಲಾ

ಚಟುವಟಿಕೆ #2

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಪ್ರಮುಖ ಪರಿಕಲ್ಪನೆಗಳು #3 - ಅರಣ್ಯದ ಹಂಚಿಕೆ ಮತ್ತು ಸಂರಕ್ಷಣೆ

ಕಲಿಕೆಯ ಉದ್ದೇಶಗಳು

  1. ಕರ್ನಾಟಕದಲ್ಲಿ ಅರಣ್ಯಗಳ ಹಂಚಿಕೆ ಹೇಗೆ ಆಗಿದೆ.
  2. ಅರಣ್ಯದಿಂದ ನಮಗೇನು ಉಪಯೋಗ ಎಂಬುದನ್ನು ತಿಳಿಯುತ್ತಾರೆ.
  3. ಅರಣ್ಯ ನಾಶಕ್ಕೆ ಏನು ಅಂಶಗಳು ಕಾರಣವಾಗುತ್ತವೆ ಎಂಬುದನ್ನು ವಿವರಿಸುತ್ತಾರೆ.
  4. ಅರಣ್ಯ ನಾಶದಿಂದ ಮಾನವನ ಮೇಲೆ ಹಾಗೂ ಪ್ರಕೃತಿ ಮೇಲೆ ಬೀರುವ ದುಷ್ಪರಿಣಾಮಗಳನ್ನು ಅರಿಯುವರು.
  5. ಕಾಡುಗಳ ಸಂರಕ್ಷಣೆಗೆ ಸರ್ಕಾರ ಕೈಗೊಂಡ ಕ್ರಮಗಳನ್ನು ಅರಿಯುವರು.
  6. ಕಾಡುಗಳ ಸಂರಕ್ಷಣೆಗೆ ಹೋರಾಟ ಮಾಡಿದ ಮಹಾನ್ ವ್ಯಕ್ತಿಗಳ ಬಗ್ಗೆ ಅರಿಯುವರು.

ಶಿಕ್ಷಕರ ಟಿಪ್ಪಣಿ

ಅರಣ್ಯದಿಂದಾಗುವ ಅನುಕೂಲಗಳು

  1. ಮಳೆ ಬೀಳುವದಕ್ಕೆ ನೆರವಾಗುತ್ತವೆ.
  2. ಮಣ್ಣಿನ ಸವಕಳಿಯನ್ನು ತಡೆಗಟ್ಟುತ್ತವೆ.
  3. ಕಾಡುಗಳು ವಾತಾವರಣದ ತೇವಾಂಶವನ್ನು ಹೆಚ್ಚಿ ಸುತ್ತವೆ.
  4. ಪ್ರಾಣಿ ಮತ್ತು ಪಕ್ಷಿಗಳ ಆಶ್ರಯತಾಣಗಳಾಗಿವೆ.
  5. ಪರಿಸರದ ಸಮತೋಲನವನ್ನು ಕಾಯ್ದುಕೋಳ್ಳಲು ಸಹಕರಿಸುತ್ತವೆ.
  6. ಪ್ರವಾಸಿ ತಾಣಗಳಾಗಿವೆ.
  7. ಮೋಡಗಳನ್ನು ಕರೆದು ಮಳೇಯನ್ನು ಸುರಿಸುವ ಬ್ಯಾಂಕುಗಳಾಗಿವೆ
  8. ಮಣ್ಣಿನ ಸವೆತವನ್ನು ತಡೆಗಟ್ಟುತ್ತದೆ.
  9. ಪ್ರಾಣಿ,& ಪಕ್ಷಿಗಳ ಆಶ್ರಯ ತಾಣಗಳಾಗಿವೆ
  10. ಗಿಡಮೂಲಿಕೆಗಳನ್ನು ದೋರಕಿಸಿ ಕೊಡುತ್ತವೆ
  11. ಪೀಠೊಪಕರಣಗಳನ್ನು ಮಾಡಲಿಕ್ಕೆ ಕಚ್ಚಾ ವಸ್ತುಗಳಾಗಿ ದೊರಕಿಸಿಕೊಡುತ್ತದೆ
  12. ಕಾಡುಗಳಿಂದ ಹಣ್ಣುಗಳು ದೊರಕುತ್ತವೆ
  13. ಅರಣ್ಯದಿಂದಾಗುವ ಅನುಕೂಲಗಳಗಳ ಕುರಿತು ಚಿತ್ರ ನೋಡಲು ಇಲ್ಲಿ ಕ್ಲಿಕಿಸಿರಿ


ಕಾಡುಗಳ ನಾಶಕ್ಕೆ ಕಾರಣಗಳು

  1. ಕೈಗಾರಿಕೆಗಳ ಅಭಿವೃಧ್ದಿಗಾಗಿ ಕಾಡುಗಳನ್ನು ಬಳಸಿಕೊಳ್ಳುವದು.
  2. ವ್ಯವಸಾಯಕ್ಕಾಗಿ ಕಾಡುಗಳನ್ನು ಕಡಿಯುವದು.
  3. ಪ್ರಾಣಿಗಳನ್ನು ಅತಿಯಾಗಿ ಮೇಯಿಸುವದು.
  4. ರಸ್ತೆ-ರೈಲು ಮಾರ್ಗಗಳ ನಿರ್ಮಾಣ.
  5. ಕಾಡ್ಗಿಚ್ಚುಗಳಿ0ದಾಗಿ.
  6. ಕೈಗಾರಿಕೆಗಳ ಸ್ಥಾಪನೆಯಿಂದ.ರಸ್ತೆ ,ಮನೆ. ಗದ್ದೆಗಳಿಗಾಗಿ ಇನ್ನಿತರ ಹಲವು ಕೆಲಸಗಳಿಗಾಗಿ ಕಾಡುಗಳನ್ನು ಕಡಿಯುದರಿಂದ ಕಾಡುಗಳು ನಾಶವಾಗುತ್ತವೆ.

ಕಾಡುಗಳ ನಾಶದಿಂದ ಆಗುವ ದುಷ್ಪರಿಣಾಮಗಳು

  1. ಮಳೆ ಬರುವುದಿಲ್ಲಾ
  2. ತೆವಾಂಶ ಕಡಿಮೆಯಾಗಿ,ಉಷ್ಣಾಂಶ ಅತಿಯಾಗಿ ಮಾನವ ಅನೇಕ ರೋಗಗಳಿಗೆ ಬಲಿಯಗುತ್ತಾನೆ.
  3. ಮಣ್ನಿನ ಸವಕಳಿಯನ್ನು ಉಂಟಾಗುತ್ತದೆ
  4. ಭೂ ಸವೆತ ಉಂಟಾಗುತ್ತದೆ.
  5. ಮಹಾಪೂರಗಳು ಬರುತ್ತವೆ.
  6. ಬರಗಾಲ ಸಂಭವಿಸುತ್ತವೆ.
  7. ಪರಿಸರಮಾಲಿನ್ಯ ಉಂಟಾಗುತ್ತದೆ.

ಕಾಡುಗಳ ಸಂರಕ್ಷಣೆ

  1. ಕಾಡುಗಳ ಸಂರಕ್ಷಣೆಗಾಗಿ ಸರಕಾರ ಕೈಗೋಂಡಿರುವ ಕ್ರಮಗಳು
  2. ರಾಷ್ಟ್ರೀಯ ಅರಣ್ಯ ನೀತಿಯನ್ನು 1952ರಲ್ಲಿ ರೂಪಿಸಿತು.
  3. ಮೂರು ಹಂತದ ಯೋಜನೆ.
  4. ಕಾಡುಗಳಿಗೆ ಸಂಬಧಿಸಿದ ಕಾರ್ಯಗಳನ್ನು ರಾಷ್ಟ್ರೀಕರಣಗೊಳಿಸುವದು.
  5. ವನ್ಯ,ಪ್ರಾಣಿಗಳು ಪರಿಸರ,ಹಾಗೂ ಅರಣ್ಯ ರಕ್ಷಣೆ&ನಿರ್ವಹಣೆ.
  6. ವಾಣಿಜ್ಯಕ್ಕೆ ಹೋಂದುವಂತೆ ಮಾಡುವದು.
  7. ಕಾಡುಗಳ ಸಂರಕ್ಷಣೆ ಕುರಿತು ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕಿಸಿರಿ

ಕಾಡುಗಳ ಸ೦ರಕ್ಷಣೆಯಲ್ಲಿ ಪರಿಸರವಾದಿಗಳು ಸುಂದರಲಾಲ ಬಹುಗುಣ ಸುಂದರಲಾಲ ಬಹುಗುಣ ಅವರು 1972ರಲ್ಲಿ ಚಿಪ್ಕೊ ಚಳುವಳಿಯನ್ನು ಆರಂಭಿಸಿದರು. ಗಿಡವನ್ನು ಕಡಿಯಲಿಕ್ಕೆ ಬಂದ ಜನರನ್ನು ಈ ರಿತಿಯಾಗಿ ವಿರೋಧಿಸಿದರು ನಾಲ್ಕು,ಐದು ಗುಂಪುಗಳು ಸೇರಿ ಗಿಡವನ್ನು ಸುತ್ತುವರಿದು,ಮೋದಲು ನಮ್ಮನ್ನು ಕಡಿದು ನಂತರ ಗಿಡವನ್ನು ಕಡಿಯಿರಿ ಎಂದು ಏಕತೆಯಿಂದ ಚಳುವಳಿಯನ್ನು ಮಾಡಿದರು. 1981ರಲ್ಲಿ ಪಾದಯಾತ್ರೆಯಿಂದ 300 ದಿವಸಗಳು 4870 ಕೀ. ಮೀ.ಸುತ್ತಾಡಿ ಜನರಿಗೆ ಪರಿಸರ ಪ್ರಜ್ನೆಯನ್ನು ಮೂಡಿಸಿದರು

  1. ಸು೦ದರಲಾಲ್ ಬಹುಗುಣ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕಿಸಿರಿ

ಸಾಲು ಮರದ ತಿಮ್ಮಕ್ಕ ಸಾವಿರಾರು ಗಿಡ-ಮರಗಳನ್ನು ರಸ್ತೆಯ ಎರಡು ಬದಿಗಳಲ್ಲಿ ನೆಟ್ಟು ನೀರನ್ನು ಉಣಿಸಿ ಪೋಷಿಸಿ ತನ್ನ ಜೀವನವನ್ನೆ ತ್ಯಾಗ ಮಾಡಿ,ಕರ್ನಾಟಕದಲ್ಲಿ ರತ್ನ ಪ್ರಶಸ್ತಿ ಪಡೆದಿದ್ದಳು.

  1. ಸಾಲು ಮರದ ತಿಮ್ಮಕ್ಕ ಕುರಿತು ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕಿಸಿರಿ

ಚಟುವಟಿಕೆ #1

.

  • ಅಂದಾಜು ಸಮಯ --------೧ ವಾರ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ------------ ಪೇಪರ್.ಪೆನ್ನು.
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ - ---------- ಮನೆಯಲ್ಲಿ ನಿಮ್ಮ ಹಿರಿಯರಿಂದ ಕೇಳಿ ತಿಳಿಯುವುದು.
  • ಬಹುಮಾಧ್ಯಮ ಸಂಪನ್ಮೂಲಗಳು ---------------------
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು ---------------ಇದಕ್ಕೆ ನಿಮ್ಮ ಮನೆಯ ಹಿರಿಯರ ಅಥವಾ ಪಕ್ಕದ ಮನೆಯವರ ಹಸಾಯ ಪಡೆಯಬಹುದು.
  • ಅಂತರ್ಜಾಲದ ಸಹವರ್ತನೆಗಳು --------------------
  • ವಿಧಾನ ------------

ಕರ್ನಾಟಕದಲ್ಲಿ ಅರಣ್ಯಗಳನ್ನು ಎಲ್ಲೆಲ್ಲಿ ಕಾಣಬಹುದು ಎಂಬ ಚರ್ಚೆಯ ಮೂಲಕ ತರಗತಿ ಪ್ರಾರಂಭಿಸಬಹುದು . ಭಾರತದ ಅರಣ್ಯಗಳ ನಕ್ಷೆಯನ್ನು ಬಳಸುವ ಮೂಲಕ , ಒಟ್ಟಾರೆ ಭಾರತದ ಅರಣ್ಯಗಳಲ್ಲಿ ಕರ್ನಾಟಕದ ಪಾಲು ಎಷ್ಟು , ಶೇ. ವಾರು ಎಷ್ಟು ಬಾಗ ಕರ್ನಾಟಕದಲ್ಲಿ ಅರಣ್ಯ ಹಂಚಿಕೆ ಕಾಣಬಹುದು ಎಂಬುದನ್ನು ಅರ್ಥೈಸುವುದು .

  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು--------------

೧) ಮಹಾಪೂರಕ್ಕೆ ಅರಣ್ಯ ನಾಶವೇ ಕಾರಣವೇ? ೨) ಗಿಡಮರಗಳು ಅಮ್ಲಜನಕವನ್ನು ಪೂರೈಸುವ ಕಾರ್ಖಾನೆಗಳೆಂದು ಸಮರ್ಥಿಸಿರಿ.

ಚಟುವಟಿಕೆ #2

ನಿಮ್ಮ ಅಜ್ಜ ಅಥವಾ ಅಜ್ಜಿ ಜೊತೆ ಸಮಾಲೋಚಿಸಿ ಮೊದಲಿದ್ದ ಅರಣ್ಯ ಪ್ರದೇಶಕ್ಕೂ ಈಗಿರುವ ಅರಣ್ಯ ಪ್ರದೇಶಕ್ಕೂ ಹೋಲಿಕೆ ಮಾಡಿ ಎಷ್ಟು ಪ್ರಮಾಣದ ಅರಣ್ಯ ಪ್ರದೇಶ ಕಣ್ಮರೆಯಾಗಿದೆ ಎಂಬುದನ್ನು ಹಾಗೂ ಅದಕ್ಕೆ ಕಾರಣಗಳನ್ನು ಗುಂಪಿನಲ್ಲಿ ಪ್ರಬಂಧ ಲೇಖನ ಸಿದ್ದಪಡಿಸಿ

  • ಅಂದಾಜು ಸಮಯ:೧ ವಾರ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:ಪೇಪರ್.ಪೆನ್ನು.
  • ಪೂರ್ವಾಪೇಕ್ಷಿತ/ ಸೂಚನೆಗಳು,ಇದ್ದರೆ:ಮನೆಯಲ್ಲಿ ನಿಮ್ಮ ಹಿರಿಯರಿಂದ ಕೇಳಿ ತಿಳಿಯುವುದು.
  • ಬಹುಮಾಧ್ಯಮ ಸಂಪನ್ಮೂಲಗಳು: ಊರಿನ ಹಿರಿಯರನ್ನು ಸಂಪರ್ಕಿಸುವುದು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು: ಇದಕ್ಕೆ ನಿಮ್ಮ ಮನೆಯ ಹಿರಿಯರ ಅಥವಾ ಪಕ್ಕದ ಮನೆಯವರ ಹಸಾಯ ಪಡೆಯಬಹುದು.
  • ಅಂತರ್ಜಾಲದ ಸಹವರ್ತನೆಗಳು:
  • ವಿಧಾನ: ಈ ಮುಂಚೆ ಆದಂದತಹ ಮಹಾಪುರ ಬಗ್ಗೆ ಹಿರಿಯರಿಗೆ ಪ್ರಶ್ನಿಸಿ ಮಾಹಿತಿ ಪಡೆಯಿರಿ. ಅದರಿಂದ ಆದ ಪರಿಣಾಮಗಳನ್ನು ಸಂಗ್ರಹಿಸಿರಿ.ಹಾಗೂ ಒಂದು ವರದಿ ತಯಾರಿಸಿ.

ಚಟುವಟಿಕೆ #3

ಅರಣ್ಯ ಸಂರಕ್ಷಣೆಯ ಬಗ್ಗೆ ಬೀದಿ ನಾಟಕವನ್ನು ತಮ್ಮದೇ ಶೈಲಿಯಲ್ಲಿ ಸಿದ್ದಪಡಿಸಿ ಪ್ರಸ್ತುತ ಪಡಿಸುವುದು.

  • ಅಂದಾಜು ಸಮಯ - ೧ ವಾರ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು - ಪೇಪರ್.ಪೆನ್ನು.
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ - ಶಿಕ್ಷಕರ ಸಲಹೆ ಪಡೆಯುವುದು.
  • ಬಹುಮಾಧ್ಯಮ ಸಂಪನ್ಮೂಲಗಳು - ಊರಿನ ವಿದ್ಯಾವಂತರನ್ನು ಸಂಪರ್ಕಿಸುವುದು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು,ಸ್ಥಳಗಳು ಮತ್ತು ವಸ್ತುಗಳು,ಇದಕ್ಕೆ ನಿಮ್ಮ ಮನೆಯ ಹಿರಿಯರ ಅಥವಾ ಪಕ್ಕದ ಮನೆಯವರ ಹಸಾಯ ಪಡೆಯಬಹುದು.
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ - ಈ ಮುಂಚೆ ಆದಂದತಹ ಮಹಾಪುರ ಬಗ್ಗೆ ಹಿರಿಯರಿಗೆ ಪ್ರಶ್ನಿಸಿ ಮಾಹಿತಿ ಪಡೆಯಿರಿ. ಅದರಿಂದ ಆದ ಪರಿಣಾಮಗಳನ್ನುಸಂಗ್ರಹಿಸಿರಿ,ಹಾಗೂ ಒಂದು ವರದಿ ತಯಾರಿಸಿ.
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು.

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಯೋಜನೆಗಳು

ನಿಮ್ಮ ಊರಿನ ಹಾಗೂ ಪಕ್ಕದ ಊರಿನಲ್ಲಿರುವ ಮರದ ಕೆಲಸ ಮಾಡುವವರಲ್ಲಿಗೆ ಹೋಗಿ ಅವರ ಬಳಿ ಇರುವ ವಿವಿಧ ಪ್ರಕಾರದ ಮರದ ತುಂಡುಗಳನ್ನು ಸಂಗ್ರಹಿಸಿಕೊಂಡು ಬನ್ನಿರಿ.

ಸಮುದಾಯ ಆಧಾರಿತ ಯೋಜನೆಗಳು

ನಿಮ್ಮ ಊರಿನ ಅರಣ್ಯ ಪ್ರದೇಶದ ಇತಿಹಾಸವನ್ನು ಸಂಗ್ರಹಿಸಿ, ಪ್ರಸ್ತುತ ಮತ್ತು ಹಿಂದಿನ ಸ್ಥಿತಿಗಳ ಬಗ್ಗೆ ಅವಲೋಕನ ನಡೆಸುವುದು.

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ