ಬೆಡಗಿನ ತಾಣ ಜಯಪುರ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪರಿಕಲ್ಪನಾ ನಕ್ಷೆ

ಚಿತ್ರ:BeDaginatana Jayapura-೧.mm

ಹಿನ್ನೆಲೆ/ಸಂದರ್ಭ

ಕ್ಷೇತ್ರ ಪರಿಚಯ ಗ್ರಂಥಗಳಲ್ಲಿ ಶಿವರಾಮ ಕಾರಂತರ ಅಬುವಿನಿಂದ ಬರಾಮಕ್ಕೆ ಒಂದು ಅಪೂರ್ವ ಕೃತಿ. ಅಬು, ಅಜ್ಮೀರ, ಪುಷ್ಕರ, ಜಯಪುರ, ಸಿಮ್ಲಾ, ಆಗ್ರ, ಕಾಶಿ, ಡಾಲ್ಮಿಯಾ, ಕಲ್ಕತ್ತ ಮತ್ತು ಬರಾಮಗಳಲ್ಲಿ ಸಂಚರಿಸಿ ಅಲ್ಲಿನ ನಿಸರ್ಗ ಮತ್ತು ಸಂಗೀತ, ಸಾಹಿತ್ಯ, ಜನಜೀವನಾದಿಗಳನ್ನು ಈ ಗ್ರಂಥದಲ್ಲಿ ಕಂಡರಿಸಿದ್ದಾರೆ. ಡಾ.ಕೋಟ ಶಿವರಾಮ ಕಾರಂತರು ತಮ್ಮ ಸ್ನೇಹಿತರ ಜೊತೆ ರಾಜಸ್ಥಾನದ ರಾಜಧಾನಿ ಜಯಪುರದ ಐತಿಹಾಸಿಕ ಸ್ಥಳಗಳಿಗೆ ಭೇಟಿಕೊಟ್ಟು ಪಡೆದ ಅನುಭವವನ್ನು ಈ 'ಅಬೂವಿನಿಂದ ಬರಾಮಕ್ಕೆ' ಪ್ರವಾಸ ಕಥನದಲ್ಲಿ ಸವಿವರವಾಗಿ ವಿವರಿಸಿದ್ದಾರೆ

ಕಲಿಕೋದ್ದೇಶಗಳು

ನಿರ್ದಿಷ್ಟ ಉದ್ದೇಶಗಳು

  1. ಪರಿಚಿತ ಸನ್ನಿವೇಶಗಳ ಮೂಲಕ ಅಪರಿಚಿತ ಸನ್ನಿವೇಶವನ್ನು ಪರಿಚಯಿಸುವುದು
  2. ವಿಷಯವನ್ನು ಸ್ಪಷ್ಟವಾಗಿ ಆಲಿಸುವಂತೆ, ವೀಡಿಯೋ ಮೂಲಕ ವೀಕ್ಷಣೆ, ಮತ್ತು ಚರ್ಚೆ
  3. ಸನ್ನಿವೇಶ ಮತ್ತು ಕಲಿಕೆಯ ಘಟನೆಯನ್ನು ಆಲಿಸುವಂತೆ ಮಾಡುವುದು
  4. ಸನ್ನಿವೇಶದ ಸತ್ಯಾಸತ್ಯತೆಯನ್ನು ಅರಿಯುವಂತೆ ಮಾಡುವುದು
  5. ಹೊಸಹೊಸ ವಿಷಯಗಳನ್ನು ಅರಿಯುವಂತೆ ಮಾಡುವುದು
  6. ಐತಿಹಾಸಿಕ ಘಟನೆಯನ್ನು ಅರಿಯುವಂತೆ ಮಾಡುವುದು

ಸಾಮಾನ್ಯ ಉದ್ದೇಶಗಳು

  1. ಶಿವರಾಮ ಕಾರಂತರ ಪರಿಚಯ
  2. ಪುಸ್ತಕವನ್ನು ಓದುವ ಹವ್ಯಾಸವನ್ನು ಬೆಳೆಸುವುದು
  3. ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
  4. ವಾಕ್ಯ ರಚನೆಯನ್ನು ಶ್ರೀಮಂತಗೊಳಿಸಲು ಪ್ರೋತ್ಸಾಹಿಸುವುದು
  5. ಪದ ಸಂಪತ್ತನ್ನು ಹೆಚ್ಚಿಸುವುದು
  6. ಪ್ರವಾಸ ಸಾಹಿತ್ಯದ ಬಗ್ಗೆ ಅರಿವು ಮತ್ತು ಆಸಕ್ತಿ ಮೂಡಿಸುವುದು

ಕವಿ ಪರಿಚಯ

ಶಿವರಾಮ ಕಾರಂತ.jpg
  • ಪೂರ್ಣ ಹೆಸರು: ಕೋಟ ಶಿವರಾಮ ಕಾರಂತ
  • ಕಾರಂತರ ವಿವಿಧ ಚಿತ್ರಗಳನ್ನು ಇಲ್ಲಿ ವೀಕ್ಷಿಸಿರಿ
  • ಜನನ:ಅಕ್ಟೋಬರ್ ೧೦, ೧೯೦೨
  • ಜನನ ಸ್ಥಳ:ಸಾಲಿಗ್ರಾಮ, ಉಡುಪಿ ಜಿಲ್ಲೆ
  • ನಿಧನ:ಡಿಸೆಂಬರ್ ೯,೧೯೯೭ (ಮಣಿಪಾಲ, ಉಡುಪಿ)
  • ವೃತ್ತಿ:ಲೇಖಕಕರು
  • ಸಾಹಿತ್ಯ ಪ್ರಕಾರಗಳು:ಕಥೆ, ಕವನ, ಕಾದಂಬರಿ, ನಾಟಕ, ಯಕ್ಷಗಾನ
  • ಸಾಹಿತ್ಯ ಶೈಲಿ:ನವೋದಯ
  • ಆಕರ ಗ್ರಂಥ :-ಅಬೂವಿನಿಂದ ಬರಾಮಕ್ಕೆ
  • ಪ್ರಕಟಿತ ಕೃತಿಗಳು
    ಕಾರಂತರ ಉಚಿತ ಪುಸ್ತಕಗಳನ್ನು ನೋಡಲು ಮತ್ತು ಡೌನ್‌ಲೋಡ್ ಮಾಡಲು ಇಲ್ಲ ನೋಡಿರಿ

ಅಬೂವಿನಿಂದ ಬರಾಮಕ್ಕೆ
ಪಾತಾಳಕ್ಕೆ ಪಯಣ
ಅಪೂರ್ವ ಪಶ್ಚಿಮ

ಶಿವರಾಮ ಕಾರಂತ (ಅಕ್ಟೋಬರ್ ೧೦, ೧೯೦೨-ಸೆಪ್ಟೆಂಬರ್ ೧೨ ೧೯೯೭)- "ಕಡಲತೀರದ ಭಾರ್ಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೇಯೆ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ವಿಶ್ವ ವಿದ್ಯಾನಿಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿಲ್ಲದಿದ್ದರೂ, ಅವರ ಸಾಹಿತ್ಯ ಪರಿಶ್ರಮ ಅಪಾರವಾದುದು. ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ.
ಜ್ಞಾನ ಪೀಠ ಪ್ರಶಸ್ತಿ, ಪಂಪ ಪ್ರಶಸ್ತಿ, ಸಾಹಿತ್ಯ ಅಕಾಡಮಿ ಪ್ರಶಸ್ತಿ, ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಇವರನ್ನು ಅಲಂಕರಿಸಿರುವುದು ಇವರ ಬಹುಮುಖ ಪ್ರತಿಭೆಯನ್ನು ತೋರಿಸುತ್ತವೆ. ಕಾರಂತರ ಹೆಚ್ಚಿನ ಮಾಹಿತಿಯ ವೀಡಿಯೋಗಳು

ಶಿಕ್ಷಕರಿಗೆ ಟಿಪ್ಪಣಿ


  • ಕನ್ನಡ ವಿಷಯ ಸಂಪದೀಕರಣ-ಪ್ರವಾಸ ಸಾಹಿತ್ಯ-ಸಂಪನ್ಮೂಲ ವ್ಯಕ್ತಿ;ಶ್ರೀ ಚಿಕ್ಕದೇವೇಗೌಡ ಸರ್‌ ರವರು.
  • ಅಮೇರಿಕಾದಲ್ಲಿ ಗೊರೂರು ಪ್ರವಾಸ ಕಥನ,ಅಮೇರಿಕಾದಲ್ಲಿ ನಾನು ಮತ್ತು ಶಾಂತಿ, ಪ್ರವಾಸಿ ಕಂಡ ಭಾರತ ಕೃತಿಗಳನ್ನು ಓದಿರಿ.
  • ಪದಕೋಶ, ವ್ಯಾಕರಣಗಳನ್ನು ನೋಡಿರಿ.
  • ಡಿಜಿಡಲ್‌ ತಂತ್ರಜ್ಞಾನವನ್ನು ಬಳಸಿ ಮಕ್ಕಳಿಗೆ ವಿಭಿನ್ನ ಚಟುವಟಿಕೆಗಳನ್ನು ಮಾಡಿಸುವ ಸಾಧ್ಯತೆ ಇದೆ.
    • ಚಿತ್ರಗಳ ಮೂಲಕ ಭಾರತದ ನೃತ್ಯ / ಜಾನಪದ ರೀತಿನೀತಿಯ ಪರಿಚಯ -
    • ಹೊಸ ಪದ ಪಟ್ಟಿ ರಚನೆ ಮತ್ತು ಅದಕ್ಕೆ ಅರ್ಥವನ್ನು ತಿಳಿಯುವುದು
    • ನೀವು ಭೇಟಿ ನೀಡಿರುವ ಯಾವುದಾದರು ನಗರದ ವಿವರಣೆಯನ್ನು ನಿಮ್ಮ ಮಾತುಗಳಲ್ಲಿ ವಿವರಿಸಿ - ಉಳಿದವರು ಆಲಿಸುವರು ಮತ್ತು ಧ್ವನಿ ಕಥೆ ಅಥವ ಧ್ವನಿ ಪುಸ್ತಕವನ್ನು ರಚನೆಮಾಡುವರಿ, (ಮುದ್ರಣ ಮಾಡಿಕೊಂಡು ಡಿಜಿಟಲ್ ಗ್ರಂಥಾಲಯದಲ್ಲಿ ಸಂಗ್ರಹಿಸಿಡುವರು )

ಶಿಕ್ಷಕರು ನೀಡಬಹುದಾದ ಚಟುವಟಿಕೆ

  1. ಮೌಖಿಕವಾಗಿ ಓದಿಸಿ, ಕೊಟ್ಟ ಪ್ರಶ್ನೆಗಳಿಗೆ ಉತ್ತರಿಸುವಂತೆ ಮಾಡುವುದು
  2. ಆ ಗದ್ಯಭಾಗಕ್ಕೆ ಸಂಬಂಧಿಸಿದಂತೆ, ಪರಸ್ಪರ ಸಂವಾದ ನಡೆಸುವಂತೆ ಮಾಡುವುದು
  3. ಪಠ್ಯಭಾಗದ ಬಗೆಗಿನ ಮಗುವಿನ ಸಮಸ್ಯೆಗೆ ಅಧ್ಯಾಪಕರಿಂದ ವಿವರಣೆಗಳ ಮೂಲಕ ಪರಿಹಾರ ನೀಡುವುದು
  4. ನಗರ ವರ್ಣನೆ
  5. ಮಕ್ಕಳಿಗೆ ಗೊತ್ತಿರುವ ಪ್ರಮುಖ ಭಾರತದ ನಗರಗಳ ಬಗ್ಗೆ ನಾಲ್ಕು ವಾಕ್ಯಗಳನ್ನು ಬರೆಸುವುದು
  6. ಜಯಪುರ ನಗರದ ವಿಡಿಯೋ ಕ್ಲಿಪ್ ನ್ನು ತೋರಿಸುವುದು
  7. ದೃಶ್ಯವನ್ನು ನೋಡಿ ವಿದ್ಯಾರ್ಥಿಗಳೊಡನೆ ಚರ್ಚಿಸುವುದು
  8. ಪಾಠಕ್ಕೆ ಸಂಬಂಧಿಸಿದಂತೆ ಸಮಾಲೋಚನೆ (ಶಿಕ್ಷಕ- ವಿದ್ಯಾರ್ಥಿಗಳ ನಡುವೆ)
  9. ಕಲೆ ಮತ್ತು ಸಂಸ್ಕೃತಿ
  10. ಜಯಪುರದ ದವರ ಬಣ್ಣದ ಆಸೆ,ಜಾನಪದ ನೄತ್ಯ ,ವೇಷಭೂಷಣಕ್ಕೆ ಸಂಬಂಧಿಸಿದ ವಿಡಿಯೋ ಇಲ್ಲಿ ಕ್ಲಿಕ್ ಮಾಡಿ
  11. ನೃತ್ಯ ಮತ್ತು ವೇಷ ಭೂಷಣಗಳಿಗೆ ಸಂಬಂಧಿಸಿದ ಚಿತ್ರ ಪ್ರದರ್ಶಿಸುವುದು
  12. ಚಿತ್ರನೋಡಿ ನಮ್ಮ ವೇಷ ಭೂಷಣ , ನೃತ್ಯದೊಂದಿಗೆ ಸಮೀಕರಿಸುವುದು ಹಾಗೂ ವ್ಯತ್ಯಾಸ ಗಳ ಪಟ್ಟಿ ಮಾಡುವುದು
  13. ಜಯಪುರದ ವೇಷ ಭೂಷಣ ಸಂಸ್ಕೃತಿಗಳ ಬಗ್ಗೆ ತಿಳಿಯುವುದು
  14. ಗದ್ಯಭಾಗಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಗಳನ್ನು ಗುರುತಿಸುವುದು.
  15. ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳು
  16. ಜಯಪುರದ ಸ್ಥಳಗಳ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
  17. ಪ್ರಸ್ತುತ ಭಾಗವನ್ನು ಮಕ್ಕಳಿಂದ ಓದಿಸುವುದು.
  18. ಹೊಸ ಪದಗಳನ್ನು ಪಟ್ಟಿ ಮಾಡಿಸುವುದು ಹಾಗೂ ಚರ್ಚಿಸುವುದು.
  19. ಜಯಪುರದ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳ ವಿಡಿಯೋ/ಚಿತ್ರಗಳನ್ನು ತೋರಿಸುವುದು.
  20. ಗದ್ಯಭಾಗದಲ್ಲಿ ಉಲ್ಲೇಖಿಸಿದ ಸ್ಥಳಗಳ ಐತಿಹಾಸಿಕ ಮಹತ್ವವನ್ನು ತಿಳಿಸುವುದು
  21. ಮಕ್ಕಳು ತಾವು ನೋಡಿದ ಐತಿಹಾಸಿಕ, ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಟಿಪ್ಪಣಿ ರಚಿಸುವುದು

ಹೆಚ್ಚುವರಿ ಸಂಪನ್ಮೂಲ

ಸಾರಾಂಶ

ಜಯಪುರ ಭಾರತದ ಉಳಿದ ನಗರಗಳಿಗಿಂತ ಸಾಂಸ್ಕೃತಿಕ ಹಾಗೂ ರಾಜಕೀಯ ಕಾರಣಗಳಿಂದಾಗಿ ವಿಶ್ವದ ಗಮನ ಸೆಳೆದ ನಗರವಾಗಿದೆ. ಕಲೆಯ ಆಗರವಾದ ಜಯಪುರ ಪ್ರವಾಸಿಗರನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿದೆ. ಅಲ್ಲಿನ ಜನರ ಉಡುಗೆ-ತೊಡಿಗೆ,ಸಂಪ್ರದಾಯಗಳು, ಕಲಾಸಕ್ತಿ ಹಾಗೂ ಜಯಪುರದ ಪ್ರಾಕೃತಿಕ ಸೌಂದರ್ಯ ಮತ್ತು ವಾಸ್ತುಶಿಲ್ಪ, ಐತಿಹಾಸಿಕ ಮಹತ್ವವನ್ನು ತಿಳಿಸುತ್ತವೆ. ಹಾಗೆಯೇ ಜಯಪುರದ ರಾಜರ ವೈಜ್ಞಾನಿಕತೆಗೆ ಸಾಕ್ಷಿಯಾದ ಜಂತ್ರ-ಮಂತ್ರ ಬಯಲು ಪ್ರಯೋಗಾಲಯದ ಬಗ್ಗೆ ವಿಶೇಷ ಉಲ್ಲೇಖವಿದೆ. ಪ್ರವಾಸ ಸಾಹಿತ್ಯದ ಬಗ್ಗೆ ಅರಿವನ್ನು ಮೂಡಿಸುವುದು ತಿಳಿಸಿಕೊಡುವುದೇ ಪ್ರಕೃತ ಗದ್ಯ ಭಾಗದ ಮುಖ್ಯ ಉದ್ದೇಶವಾಗಿದೆ

ಪರಿಕಲ್ಪನೆ ೧

ಕವಿ ಪರಿಚಯ /ಪೂರ್ವ ಜ್ಞಾನ

ಚಟುವಟಿಕೆ-೧

  1. ಚಟುವಟಿಕೆ : ಪ್ರಸಿದ್ದ ಕವಿಗಳ ಚಿತ್ರಗಳನ್ನು ಗುರುತಿಸಿ ಮತ್ತು ಅವರ ಕೃತಿಗಳನ್ನು ಹೇಳಿ
  2. ವಿಧಾನ/ಪ್ರಕ್ರಿಯೆ : ಗುಂಪು ಚಟುವಟಿಕೆ- ಚಿತ್ರ ವೀಕ್ಷಣೆ ವೀಕ್ಷಣೆ
  3. ಸಮಯ : 15ನಿಮಿಷ
  4. ಹಂತಗಳು : ಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು, ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳು ಕವಿಗಳ ಹೆಸರನ್ನು ಹೇಳುವರು ಮತ್ತು ಕವಿಗಳ ಹೆಸರನ್ನು ಮತ್ತು ಅವರ ಕೃತಿಗಳನ್ನು ಕಪ್ಪು ಹಲಗೆಯ ಮೇಲೆ ಬರೆಯಲು ತಿಳಿಸುವುದು. ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರುಗಳನ್ನು ಆಲಿಸುವ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು. ಮತ್ತು ಕಪ್ಪು ಹಲಗೆಯ ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು.
  5. ಸಾಮಗ್ರಿಗಳು/ಸಂಪನ್ಮೂಲಗಳು ; ಭಾವಚಿತ್ರ, ಪುಸ್ತಕಗಳು
  6. ಚರ್ಚಾ ಪ್ರಶ್ನೆಗಳು;
  • ಭಾವಚಿತ್ರವನ್ನು ನೋಡಿ ಕವಿಯ ರೂಪುರೇಷೆಗಳನ್ನು ವಿವರಿಸಿ ಹೇಳಿರಿ ಮತ್ತು ಬರೆಯಿರಿ
  • ಜಯಪುರಕ್ಕೆ ಹೋಗುವಂತೆ ನಿಮ್ಮ ಅಜ್ಜಿಯ ಮನೆಗೆ ಹೋಗಲು ದಾರಿ-ವಿಳಾಸವನ್ನು ತಿಳಿಸಿರಿ

ಚಟುವಟಿಕೆ-

  1. ಚಟುವಟಿಕೆ : ಶಿವರಾಮ ಕಾರಂತರ ಪರಿಚಯ
  2. ವಿಧಾನ/ಪ್ರಕ್ರಿಯೆ : ಗುಂಪು ಚಟುವಟಿಕೆ-ವೀಡಿಯೋ ವೀಕ್ಷಣೆ
  3. ಸಮಯ : 15ನಿಮಿಷ
  4. ಹಂತಗಳು : ಮಕ್ಕಳಿಗೆ ಪ್ರಮುಖ ಜ್ಞಾನ ಪೀಠ ಪುರಸ್ಕೃತ ಕವಿಗಳ ಭಾವಚಿತ್ರವನ್ನು ತೋರಿಸುವುದು, ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳು ಕವಿಗಳ ಹೆಸರನ್ನು ಹೇಳುವರು ಮತ್ತು ಕವಿಗಳ ಹೆಸರನ್ನು ಕಪ್ಪು ಹಲಗೆಯ ಮೇಲೆ ಬರೆಯಲು ತಿಳಿಸುವುದು. ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರುಗಳನ್ನು ಆಲಿಸುವ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು. ಮತ್ತು ಕಪ್ಪು ಹಲಗೆಯ ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು. ನಂತರ ಶಿಕ್ಷಕರು ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ , ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು.
  5. ಸಾಮಗ್ರಿಗಳು/ಸಂಪನ್ಮೂಲಗಳು ; ಭಾವಚಿತ್ರ, ವೀಡಿಯೋ, ಪುಸ್ತಕಗಳು
  6. ಚರ್ಚಾ ಪ್ರಶ್ನೆಗಳು;
  • ಮಕ್ಕಳ ಸಾಹಿತ್ಯಕ್ಕೆ ಕಾರಂತರ ಕೊಡುಗೆ ಏನು?
  • ಜಾನಪದದಲ್ಲಿದ್ದ ಕಾರಂತರ ಆಸಕ್ತಿ ತಿಳಿಸಿರಿ?

ಕೆ ಅನಗ್ರಮ್ ಕೆ

ಜಯಪುರ ಪಾಠದ ಒಂದು ವಾಕ್ಯದ ರೂಪದ ಪ್ರಶ್ನೆ ರಚಿಸಬಹುದು - ಸ್ಥಳ- ಅರಮನೆ - ಇತ್ಯಾದಿ

ವರ್ಡ್ ಕ್ವಿಜ್

ಬಹು ಆಯ್ಕೆಯ ಪ್ರಶ್ನೆಗಳನ್ನು ಈ ಪಾಠಕ್ಕೆ ಸಂಬಂದಿಸಿದಂತೆ ತಯಾರಿಮಾಡಿ ಮಿಂಚುಒಡ್ಡಿಯಾಗಿಯು ಸಹ ಬಳಸಬಹುದಾಗಿದೆ.

H5P

<iframe src="https://h5p.org/h5p/embed/176051" width="1090" height="638" frameborder="0" allowfullscreen="allowfullscreen"></iframe><script src="https://h5p.org/sites/all/modules/h5p/library/js/h5p-resizer.js" charset="UTF-8"></script>

ಚಟುವಟಿಕೆ-೨

  1. ಚಟುವಟಿಕೆ; ಪ್ರವಾಸಾನುಭವದ ಪ್ರಬಂಧ ರಚನೆ
  2. ವಿಧಾನ/ಪ್ರಕ್ರಿಯೆ ; ಬರವಣಿಗೆ ಮತ್ತು ಚರ್ಚೆ
  3. ಸಮಯ ; ೨೦ ನಿಮಿಷ
  4. ಸಾಮಗ್ರಿಗಳು/ಸಂಪನ್ಮೂಲಗಳು : ಪುಸ್ತಕದಲ್ಲಿ ಬರೆಯುವುದು
  5. ಹಂತಗಳು ; ಮಕ್ಕಳಿಗೆ ಈ ಮೊದಲೇ ಭೇಟಿ ನೀಡಿರುವ ಪ್ರೇಕ್ಷಣೀಯ ಸ್ಥಳದ ಭೇಟಿ ಮತ್ತು ಅನುಭವವನ್ನು ದಾಖಲಿಸುವಂತೆ ತಿಳಿಸುವುದು .ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳು ಬರೆಯುವರು. ಮೂರನೇ ಗುಂಪಿನ ಮಕ್ಕಳಿಗೆ ಅವರಿಗೆ ತಿಳಿದಿರುವ ಕರ್ನಾಟಕದ ವಿವಿಧ ಪ್ರೇಕ್ಷಣೀಯ ಸ್ಥಳದ ಹೆಸರನ್ನು ಪುಸ್ತಕದಲ್ಲಿ ಬರೆಯಲು ತಿಳಿಸುವುದು
  6. ಚರ್ಚಾ ಪ್ರಶ್ನೆಗಳು;
  • ಪ್ರವಾಸದ ಅನುಭವವನ್ನು ಏಕೆ ಬರೆದಿದಬೇಕು?
  • ಎಷ್ಟು ದಿನದ ಪ್ರವಾಸಗಳು ಹೆಚ್ಚು ಉಪಯೋಗಕಾರಿ?

ಪರಿಕಲ್ಪನೆ ೨

ಪಠ್ಯ ವಿಷಯದ ಪರಿಕಲ್ಪನೆಗಳು

ಚಟುವಟಿಕೆ-೧

  1. ಚಟುವಟಿಕೆ ; ಪ್ರವಾಸನುಭವದ ಅನುಭವ ಹಂಚಿಕೆ
  2. ವಿಧಾನ/ಪ್ರಕ್ರಿಯೆ ; ಸಂಭಾಷಣಾ ವಿಧಾನ/ಚರ್ಚೆ
  3. ಸಮಯ ; ೨೦ ನಿಮಿಷ
  4. ಸಾಮಗ್ರಿಗಳು/ಸಂಪನ್ಮೂಲಗಳು ; ಶಿಕ್ಷಕರು ಪ್ರವಾಸದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳಬೇಕು
  5. ಹಂತಗಳು ; ಕೆಲವು ಆಯ್ದ ಮಕ್ಕಳ ಪ್ರವಾಸದ ಅನುಭವ ಮತ್ತು ಅಭಿಪ್ರಾಯವನ್ನು ತಿಳಿಸಲು ಹೇಳುವುದು. ಮೂರು ಗುಂಪಿನ ಮಕ್ಕಳು ಭಾಗವಹಿಸುತ್ತಾರೆ ಮತ್ತು ಮಾತನಾಡುತ್ತಾರೆ. ಗುಂಪಿನ ನಾಯಕರು ಪ್ರವಾಸದ ಅನುಭವವನ್ನು ಟಿಪ್ಪಣಿಮಾಡಿಕೊಳ್ಳುತ್ತಾರೆ.ನಂತರ ತಮ್ಮ ಶಾಲಾ ಪತ್ರಿಕೆಯಲ್ಲಿ ಪ್ರಕಟಿಸುತ್ತಾರೆ.
  6. ಚರ್ಚಾ ಪ್ರಶ್ನೆಗಳು;
  • ಪ್ರವಾಸ ಹೋಗಲು ಕಾರಣವೇನು ?
  • ಪ್ರವಾಸಕ್ಕೆ ಬೇಕಾದ ತಯಾರಿಗಳೇನು?
  • ಪ್ರಯಣದ ಯಾವ ಮಾದರಿ ಹೆಚ್ಚು ಸೂಕ್ತ ಮತ್ತು ಯಾಕೆ ?

ಚಟುವಟಿಕೆ-೨

  1. ಚಟುವಟಿಕೆ ; ಜಾನಪದ ಕುಣಿತಗಳನ್ನು ಪರಿಚಯಿಸುವುದು
  2. ವಿಧಾನ/ಪ್ರಕ್ರಿಯೆ ; ತರಗತಿ ಚಟುವಟಿಕೆ
  3. ಸಮಯ : ೨೦ ನಿಮಿಷ
  4. ಸಾಮಗ್ರಿಗಳು/ಸಂಪನ್ಮೂಲಗಳು ; ಪೂರ್ವ ಜ್ಞಾನ ಮತ್ತು ಪಠ್ಯ ಪುಸ್ತಕ
  5. ಹಂತಗಳು ; ಕೆಲವು ಜಾನಪದ ಕುಣಿತಗಳನ್ನು ಪಟ್ಟಿಮಾಡಲು ತಿಳಿಸುವುದು. ಪ್ರತಿ ತಂಡಕ್ಕೂ ಯಾವುದಾದರು ಒಂದು ಜಾನಪದ ಕುಣಿತವನ್ನು ನೀಡಿ ಚರ್ಚೆ ಮಾಡಿ ಪ್ರಬಂಧ ಬರೆದು ಮಂಡಿಸಲು ತಿಳಿಸುವುದು.(ಒಂದು ಕುಣಿತ ಮಾತ್ರ ನೀಡುವುದು ಹಾಗು ತಂಡದ ನಾಯಕ ಮಂಡನೆ ಮಾಡಬಹುದು ). ಮೂರನೇ ಗುಂಪಿನ ಮಕ್ಕಳಿಗೆ ಪಾಠದ ಯಾವುದಾದರು ಪುಟವನ್ನು ನೀಡಿ ಸ್ವರಾಕ್ಷರ ಪದಗಳು ಅಥವ ವ್ಯಂಜನಾಕ್ಷರ ಪದ ಗುರ್ತಿಸಿ ಬರೆಯಲು ತಿಳಿಸುವುದು. (ಪಠ್ಯಪುಸ್ತಕದ ಪರಿಚಯವಾಗುತ್ತದೆ)
  6. ಚರ್ಚಾ ಪ್ರಶ್ನೆಗಳು;
  • ಸ್ಥಳ ದಿಂದ ಸ್ಠಳಕ್ಕೆ ಜಾನಪದ ಆಚರಣೆ ಯಾಕೆ ಬದಲಾಗಿರುತ್ತದೆ?
  • ಜಾನಪದ ಆಚರಣೆಯ ಉಪಯೋಗವೇನು?

ಪರಿಕಲ್ಪನೆ ೩

ಭಾಷಾ ಚಟುವಟಿಕೆ

ಚಟುವಟಿಕೆ-೧

  1. ಚಟುವಟಿಕೆ ; ಪಠ್ಯ ಪುಸ್ತಕದಲ್ಲಿರುವ ಕಠಿಣ ಪದ ಗುರ್ತಿಸುವುದು ಮತ್ತು ಅಕ್ಷರ ಗುರ್ತಿಸುವುದು
  2. ವಿಧಾನ/ಪ್ರಕ್ರಿಯೆ ; ಗುಂಪು ಚಟುವಟಿಕೆ.
  3. ಸಮಯ ; ೧೫ ನಿಮಿಷ
  4. ಸಾಮಗ್ರಿಗಳು/ಸಂಪನ್ಮೂಲಗಳು : ಪಠ್ಯ ಪುಸ್ತಕ
  5. ಹಂತಗಳು : ಪಾಠದಲ್ಲಿ ಬಂದಿರುವ ಕಠಿಣ ಪದ ಗುರ್ತಿಸಿ ತಮ್ಮ ಪುಸ್ತಕದಲ್ಲಿ ಬರೆದುಕೊಳ್ಳುವರು ಮತ್ತು ಅದಕ್ಕೆ ಅರ್ಥ ತಿಳಿದು ಕೊಳ್ಳುವರು. ಮೂರನೇ ಗುಂಪಿನ ಮಕ್ಕಳಿಗೆ ಪಾಠದ ಯಾವುದಾದರು ಪುಟವನ್ನು ನೀಡಿ ಸ್ವರಾಕ್ಷರ ಪದಗಳು ಅಥವ ವ್ಯಂಜನಾಕ್ಷರ ಪದ ಗುರ್ತಿಸಿ ಬರೆಯಲು ತಿಳಿಸುವುದು
  6. ಚರ್ಚಾ ಪ್ರಶ್ನೆಗಳು;

ಭಾಷಾ ವೈವಿಧ್ಯತೆಗಳು

ಜೋಡಿಪದ-ಜಂತ್ರ ಮಂತ್ರ,ಅವಸರದ ಊಟ ಅವಸರದ ಓಟ

ಭಾಷಾ ಚಟುವಟಿಕೆಗಳು/ ಯೋಜನೆಗಳು

ಶಬ್ದಕೋಶ

  • ಕೃತಜ್ಞ=ಆಭಾರಿಯಾದ(ಕೃತಘ್ನ?)
  • ಚಾವಡಿ=ಪಟಸಾಲೆ,ಪಡಸಾಲೆ,ಮೊಗಸಾಲೆ,ಹಜಾರ

ವ್ಯಾಕರಣ

  1. ಶಿಕ್ಷಕರು ದ್ವಿರುಕ್ತಿ , ಅನುಕರಣಾವ್ಯಯ ಮತ್ತು ಜೋಡುನುಡಿ ಪದಗೊಂಚಲುಗಳ ಮಿಶ್ರಣ ಮಾಡಿ ಪ್ರದರ್ಶಿಸುವುದು.
  2. ವಿದ್ಯಾರ್ಥಿಗಳು ಪರಸ್ಪರ ಚರ್ಚಿಸಿ ವಿಭಾಗೀಕರಿಸುವುದು.
  3. ವಿದ್ಯಾರ್ಥಿಗಳ ಅನುಮಾನವನ್ನು ಪರಿಹರಿಸುವುದು ಮತ್ತು ತಾವೇ ಅಂತಹ ಪದಗಳನ್ನು ಪಟ್ಟಿ ಮಾಡುವಂತೆ ಪ್ರೇರೇಪಿಸುವುದು.
  4. ಕರ್ತರಿ-ಕರ್ಮಣಿ ವಾಕ್ಯವನ್ನು ಕರಿಹಲಗೆಯ ಮೇಲೆ ಬರೆದು ವಿದ್ಯಾರ್ಥಿಗಳು ಅವುಗಳ ವ್ಯತ್ಯಾಸವನ್ನು ಗುರುತಿಸುವಂತೆ ಮಾಡುವುದು. ಅವುಗಳ ಬಗ್ಗೆ ಅರಿಯುವುದು.
  5. ಬೇರೆ ಬೇರೆ ಕ್ರಿಯಾಪದಗಳನ್ನು ನೀಡಿ, ಅವುಗಳ ಅರ್ಥವ್ಯತ್ಯಾಸಗಳನ್ನು ಚರ್ಚಿಸಿ ಅರಿತುಕೊಳ್ಳುವುದು.

ಮೌಲ್ಯಮಾಪನ

  1. ಯಾವುದಾದರೂ ಒಂದು ಪ್ರವಾಸಿ ತಾಣದ ವಿಡಿಯೋ ತುಣುಕನ್ನು ತೋರಿಸಿ, ಆ ತಾಣದ ಕುರಿತು ಒಂದು ಪ್ರವಾಸ ಕಥನವನ್ನು ಬರೆಯುವಂತೆ ಮಾಡುವುದು.
  2. ಹತ್ತಿರದ ಯಾವುದಾದರೂ ಒಂದು ಪ್ರವಾಸಿ ತಾಣಕ್ಕೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ, ಪಡೆದ ಅನುಭವವನ್ನು ಕುರಿತು ಬರೆಯುವಂತೆ ಹೇಳುವುದು.
  3. ಕರ್ನಾಟಕದ ಪ್ರವಾಸಿ ತಾಣಗಳ ಪಟ್ಟಿಯನ್ನು ತಯಾರಿಸಿಕೊಂಡು ಬರುವಂತೆ ಮಾಡುವುದು.
  4. ಕೆಲವು ಐತಿಹಾಸಿಕ , ಪೌರಾಣಿಕ ಸ್ಥಳಗಳನ್ನು ಕುರಿತು ರಸಪ್ರಶ್ನೆಯನ್ನು ನಡೆಸುವುದು.
  5. ಕರ್ನಾಟಕದೊಳಗಿನ ಸ್ಥಳಗಳ ಬಗ್ಗೆ ಇರುವ ಪ್ರವಾಸಿ ಕಥನ ಗ್ರಂಥಗಳ ಪಟ್ಟಿಯನ್ನು ತಯಾರಿಸುವುದು. ಹಾಗೂ ಓದಲು ತಿಳಿಸುವುದು.


ಪಠ್ಯ ಬಗ್ಗೆ ಹಿಮ್ಮಾಹಿತಿ

ಪಠ್ಯವಿಷಯದಲ್ಲಿ,ಪಠ್ಯಕರಮದಲ್ಲಿ ಗಮನಿಸಿದ ಚರ್ಚಾಸ್ಪದ ಅಂಶಗಳು , ಅಗತ್ಯಗಳು,ಅನಿಸಿಕೆಗಳು, ಲೇಖನಗಳು ಇತ್ಯಾದಿಗಳ ಬಗ್ಗೆ ಇಲ್ಲಿ ಸೇರಿಸಬಹುದು