ಅಂಬೇಡ್ಕರ್ ರವರ ಕಾಲಕ್ಕೆ ತರಗತಿಯ ಮೂಲೆಯಲ್ಲಿ ಕೂರಿಸಿ ಕೂಡಿಯಲು ನೀರನ್ನು ಲೋಟದಲ್ಲಿ ಕೊಡದೆ ಕೈಗೆ ಬಿಡುತ್ತಿದ್ದರು. ಆದರೆ ಈಗ ಕಾಲ ಸ್ವಲ್ಪ ಸುಧಾರಿಸಿದೆ. ಜಾತಿಪದ್ದತಿಯ ನಿರ್ಮೂಲನೆಗೆ ಅನೇಕ ಕ್ರಮಗಳನ್ನು ತೆಗೆದು ಕೊಳ್ಳಲಾಗಿದೆ. ದೇಶದ ಎಲ್ಲಾ ಪ್ರಜೆಗೂ ಸಮಾನ ಅವಕಾಶ ಮತ್ತು ಸಮಾನ ಆಧ್ಯತೆ ನೀಡಲಾಗುತ್ತಿದೆ. ಆದರೂ ಬುಡ ಸಮೇತ ಕಿತ್ತೊಗೆಯದಿದ್ದರು ನಿಯಂತ್ರಣದಲ್ಲಿದೆ. ಸಿದ್ದಲಿಂಗಯ್ಯ,ದೇವನೂರು ಮಹಾದೇವ.ಕೆ .ಶಿವರಾಮ್ ನಂತಹ ಅನೇಕ ವ್ಯಕ್ತಿಗಳು ಉನ್ನತ ಹುದ್ದೆಯನ್ನು ಅಲಂಕರಿಸಿದವರೇ ಆಗಿದ್ದಾರೆ.ಮಾಲಗತ್ತಿಯವರಂತೆ ಅನೇಕ ಸಾಧಕರು ತಮ್ಮ ತಮ್ಮ ಭಾಲ್ಯದಲ್ಲಿ ಕಹಿಯನ್ನ ಉಂಡು ನಂತರ ಜೀವನವನ್ನು ಸಿಹಿಯಾಗಿಸಿಕೊಂಡಿದ್ದಾರೆ.