ಪರಿಸರ ಸಮತೋಲನ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪರಿಕಲ್ಪನಾ ನಕ್ಷೆ

ಹಿನ್ನೆಲೆ/ಸಂದರ್ಭ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ದಿನದಿಂದ ದಿನಕ್ಕೆ ಮಿತಿಮೀರಿ ಬೆಳೆಯುತ್ತಿರುವ ಮಾನವ ಸಂಕುಲದಿಂದ ಪರಿಸರ ಅಸಮತೋಲನವಾಗುತ್ತಿದೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಮಾನವ ಇದರ ನೇರ ಹೊಣೆಯಾಗಿದ್ದಾನೆ. ಮಾನವನು ಪರಿಸರವನ್ನು ಮಿತಿಮೀರಿ ಬಳಸಿದರ ಪರಿಣಾಮವಾಗಿ ಅನೇಕ ಜೀವಸಂಕುಲಗಳು ಅಳಿದು ಹೋಗಿವೆ, ಮತ್ತೆ ಕೆಲವು ಅಳಿವನ ಹಂಚಿನಲ್ಲಿವೆ. ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಎಳೆಯದರಲ್ಲಿಯೇ ಮಕ್ಕಳಲ್ಲಿ ಬೆಳೆಸಬೇಕೆಂಬ ಕಾಳಜಿಯಿಂದಾಗಿ ಪ್ರಸ್ತುತ ಗದ್ಯಭಾಗವನ್ನು ನೀಡಲಾಗಿದೆ. ಸಮತೋಲನ ಗದ್ಯ ಭಾಗದಲ್ಲಿ ಮುಖ್ಯವಾಗಿ ಮೊದಲ ಭಾಗದಲ್ಲಿ ಪರಿಸರದಲ್ಲಿ ಪ್ರಾಣಿಗಳು ಒಂದಕ್ಕೊಂದು ಹೇಗೆ ಅವಲಂಬನೆ ಆಗಿವೆ ಎನ್ನುವುದನ್ನು ಆನೆ ಮತ್ತು ಜಿರಾಫೆಗಳನ್ನು ಉದಾಹರಣೆಗಳನ್ನು ತೆಗೆದುಕೊಂಡು ವಿವರಿಸಿದ್ದಾರೆ ನಂತರ ಪ್ರಾಣಿ ಮತ್ತು ಪಕ್ಷಿಗಳು ನಾಶವಾಗುತ್ತಿರುವ ಪರಿಯನ್ನು ಮತ್ತು ಮಾನವನಿಂದ ಪರಿಸರ ಮಾಲಿನ್ಯ ಮಾಡುತ್ತಿರುವ ಪರಿಯನ್ನು ವಿವರಣೆ ನೀಡಿದ್ದಾರೆ.ಹಾಗು ಆಹಾರ ಸರಪಳಿ,ಪರಿಸರ ಅಸಮತೋಲನದ ದುಶ್ಪರಿಣಾಮ,ಕ್ರಮಗಳು, ಮತ್ತು ಪ್ರಾಮುಖ್ಯತೆ ಮೊದಲಾದ ಸೂಕ್ಷ್ಮ ವಿಚಾರಗಳನ್ನು ಸ್ಥೂಲವಾಗಿ ಇವರಿಸುವ ಮೂಲಕ ಪರಿಸರ ಸಂರಕ್ಷಣೆಯ ಜವಾಬ್ದಾರಿಯತ್ತ ಬೆಳಕು ಚಲ್ಲಿದ್ದಾರೆ.

ಕಲಿಕೋದ್ದೇಶಗಳು

  1. ಮಕ್ಕಳಿಗೆ ಪರಿಸರದ ಬಗ್ಗೆ ಪ್ರೀತಿಯನ್ನು ಬೆಳೆಸುವುದು.
  2. ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸಿವರು.
  3. ಪ್ರಾಣಿ ಮತ್ತು ಮಾನವ ಸ್ವಭಾವದ ಬಗ್ಗೆ ತಿಳಿಯುವುದು.
  4. ಪರಿಸರ ನಾಶದಿಂದ ಆಗಿತ್ತಿರುವ ಪರಿಣಾಮಗಳ್ನು ಹೇಳುವನು.
  5. ಆಹಾರ ಸರಪಳಿಯ ಬಗ್ಗೆ ತಿಳಿಯುವರು.
  6. ವನ್ಯ ಸಂರಕ್ಷಣೆ ಯಗಳು ಹೆಚ್ಚಾಗಲು ಕಾರಣವನ್ನು ತಿಳಿಯುವರು.

ಕವಿ ಪರಿಚಯ

ಡಾ.ಕೃಷ್ಣಾನಂದ ಕಾಮತ್‌ ಅವರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ೨೯-೦೯-೧೯೩೪ರಲ್ಲಿ ಜನಿಸಿದರು. ೧೯೫೯ರಲ್ಲಿ ಎಂ.ಎಸ್ಸಿ.ಪದವಿಯಲ್ಲಿ ಉತ್ತೀರ್ಣರಾದ ಕಾಮತ್ ಅವರು ಕರ್ನಾಟಕ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಪ್ರಾರಂಬಿಸಿದರು. ೧೯೬೧ರಲ್ಲಿ ಡಾಕ್ಟರೇಟ್ ಪದವಿ ಪಡೆದರು.ಉದಯಪುರ ಮತ್ತು ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಕಾಮನ್‌ವೆಲ್ತ್‌ ಇನ್ಸ್‌ಟೂಟ್ ಆಫ್ ಬಯಾಲಾಜಿಕಲ್ ಕಂಟ್ರೋಲ್ ಸಂಸ್ಥೆಯ ಕೀಟ ಸಂಶೋಧನಾಧಿಕಾರಿಯಾಗಿ ಸೇವೆಸಲ್ಲಿಸಿರುವರು. ಬೆಂಗಳೂರಿನಲ್ಲಿ ವೈಜ್ಞಾನಿಕ ಛಾಯಾಗ್ರಹಣ ಲ್ಯಾಬೊರೇಟರಿ ಪ್ರಾರಂಭಿಸಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಚಿತ್ರಗಳ ಛಾಯಾಗ್ರಹಣಮಾಡಿದ್ದಾರೆ.


ಕೃಷ್ಣಾನಂದ ಕಾಮತರು (೧೯೩೪-೨೦೦೨) ಬಹುಮುಖ ಪ್ರತಿಭೆಯ ಅದ್ಭುತ ವ್ಯಕ್ತಿ. ನ್ಯೂಯಾರ್ಕ ವಿಶ್ವವಿದ್ಯಾಲಯದಿಂದ ಕೀಟಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ಕಾಮತರ ಆಸಕ್ತಿಯ ವ್ಯಾಪ್ತಿ ವಿಸ್ತಾರವಾದದ್ದು. ಸಾಹಿತ್ಯ, ಚಿತ್ರಕಲೆ, ಫೋಟೊಗ್ರಾಫಿ ಇವೆಲ್ಲ ವಿಷಯಗಳಲ್ಲೂ ಅವರ ಸಾಧನೆ ಹೆಮ್ಮೆ ಪಡುವಂತಹುದು. ಸೆಪ್ಟಂಬರ್‌ 29, 1934 ಕನ್ನಡದ ಅದ್ಭುತ ಪ್ರವಾಸ ಸಾಹಿತಿ ಕೃಷ್ಣಾನಂದ ಕಾಮತರು ಹುಟ್ಟಿದ ದಿನ. ಕಾಮತರು ನಮ್ಮನ್ನಗಲಿ ಹನ್ನೊಂದು ವರ್ಷಗಳಾದರೂ, ಮಗುವಿನಂತಹ ಮನಸ್ಸಿನ, ನಿಷ್ಕಲ್ಮಶ ನಗುವಿನ ಕಾಮತರು ಸದಾ ನನ್ನ ನೆನಪಿನ ಅಂಗಳದಲ್ಲಿ ನೂರು ಚಿತ್ತಾರ ಬಿಡಿಸುತ್ತಾರೆ. ಕಾಮತರಿಂದ ನಾನು ಕಲಿತದ್ದು ಬಹಳವಿತ್ತು, ಕಲಿಯಬೇಕಾದ್ದು ಅನಂತವಿತ್ತು. ಕಾಮತರು ನನ್ನ ಬದುಕಿನ ಮೇಲೆ ಅವರು ತಿಳಿದದ್ದಕ್ಕಿಂತ ಹೆಚ್ಚು ಪ್ರಭಾವ ಬೀರಿದ್ದರು. ಅವರ ಉನ್ನತ ವ್ಯಕ್ತಿತ್ವ , ಪ್ರಶಂಸೆ-ಪ್ರಶಸ್ತಿಗಳ ತಹತಹವಾಗಲಿ, ಅತೃಪ್ತಿಯಾಗಲಿ ಇಲ್ಲದ ಶಾಂತ ಸ್ವಭಾವ, ಸರಳ ಬದುಕು, ಸದಾ ಮುಖದ ತುಂಬಾ ಹರಡಿದ ಮಗುವಿನ ನಗು, ಪುಟಿವ ಉತ್ಸಾಹ ಇವೆಲ್ಲವೂ ನನ್ನನ್ನು ಪ್ರಭಾವಿಸಿದ್ದವು. ಅದೆಲ್ಲಿಯದು ಆ ನಿರಂತರ ಹುಮ್ಮಸ್ಸು, ದಣಿಯದ ದೇಹ-ಮನಸ್ಸು. ತಮ್ಮ ಬರವಣಿಗೆ,ಚಿತ್ರಗಳ ಅದ್ಭುತ ಜಗತ್ತನ್ನು ಎಲ್ಲಿಲ್ಲದ ಉತ್ಸಾಹದಿಂದ ಹಂಚಿಕೊಳ್ಳುತ್ತಿದ್ದ ಅವರ ಪರಿ, ನನಗೆ ತತ್ ಕ್ಷಣದ ಸ್ಫೂರ್ತಿ ಒದಗಿಸುತ್ತಿತ್ತು. "ಬೇಕು'ಗಳ ಅಗತ್ಯವೇ ಇಲ್ಲದೆ ಬದುಕಿದ ಅವರ ಜೀವನ ಕ್ರಮ ನನಗೆ ಅಪ್ಯಾಯಮಾನವಾಗಿತ್ತು, ಕಾರಣ ಅವೆಲ್ಲವೂ ನನ್ನ ಆದರ್ಶವಾಗಿದ್ದವು- ನಾನು ತಲುಪಲು ಬಯಸಿದ, ತಲುಪುವ ಹಾದಿಯಲ್ಲಿ ಬಲು ದೂರ ನಿಂತ ಆದರ್ಶಗಳು. ಹಣ, ಅಧಿಕಾರ, ಆರಾಮ,ಐಷಾರಾಮ ಯಾವುದನ್ನೂ ಬಯಸದೆ, ಸಂತಸದಿಂದ ಬದುಕಿ ಬಾಳಿದ ವ್ಯಕ್ತಿ ಕಾಮತರು.

ಶಿಕ್ಷಕರಿಗೆ ಟಿಪ್ಪಣಿ

ಹೆಚ್ಚುವರಿ ಸಂಪನ್ಮೂಲ

  1. 'ಕನ್ನಡ ದೀವಿಗೆ'ಯಲ್ಲಿನ 'ಪರಿಸರ ಸಮತೋಲನ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ
  2. ಅವಸಾನದ ಅಂಚಿನಲ್ಲಿ ಪಕ್ಷಿಧಾಮಗಳು
  3. ಪರಿಸರ ಮತ್ತು ಜೀವಸಂಕುಲ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
  4. ಪರಿಸರ ಮತ್ತು ಅರಿವು ಶಾಲೆ
  5. ಪರಿಸರದ ಬಗೆಗಿನ ವಿಕಿಪಿಡಿಯ
  6. ವಾಯು_ಮಾಲಿನ್ಯ ಬಗೆಗಿನ ವಿಕಿಪಿಡಿಯ
  7. ಪರಿಸರ ಮಾಲಿನ್ಯ – ಅಪಾಯದ ಕರೆಗ೦ಟೆ
  8. ಮಾಲಿನ್ಯ ಬಗೆಗಿನ ವಿಕಿಪಿಡಿಯ
  9. ಶಬ್ದ_ಮಾಲಿನ್ಯ ಬಗೆಗಿನ ವಿಕಿಪಿಡಿಯ
  10. ಆಹಾರ ಸರಪಳಿಯ ಬಗ್ಗೆ ವಿವರಿಸುವ ವೀಡೀಯೋ
  11. ಮಾನವನು ಪರಿಸರವನ್ನು ನಾಶಮಾಡುತ್ತಿರುವ ಪರಿಯನ್ನು ತಿಳಿಯಲು ಈ ವೀಡೀಯೊವನ್ನು ಕ್ಲಿಕ್ ಮಾಡಿ
  12. ಆಹಾರ ಸರಪಳಿಯ ಮತ್ತು ಪ್ರಾಣಿಯ ಹಾರ ಕ್ರಮ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
  13. ಕರ್ವಾಲೋ ಕಾದಂಬರಿ, ಪರಿಸರದ ಕಥೆಗಳು ಮತ್ತು ಏರೋಪ್ಲೇನ್ ಚಿಟ್ಟೆ -ಪೂರ್ಣಚಂದ್ರ ತೇಜಸ್ವಿ

ಸಾರಾಂಶ

ಪರಿಕಲ್ಪನೆ ೧

ಮಾನವನಿಂದ ಪರಿಸರದಲ್ಲಿ ಆಗುವ ಬದಲಾವಣೆ ಮತ್ತು ಪ್ರಾಣಿಗಳ ನಾಶದ ಬಗ್ಗೆ ಚರ್ಚೆ ಮಾಡುವುದು.

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಶಿಕ್ಷಕರಾದ ನಮಗೆ ಒಂದು ತರಗತಿಯಲ್ಲಿ ಪಾಠ ಮಾಡುವಾಗ ಆ ತರಗತಿಯಲ್ಲಿ ವಿವಿಧ ಸಾಮರ್ಥ್ಯವುಳ್ಳ ಮಕ್ಕಳನ್ನು ನಾವು ನೋಡುತ್ತೇವೆ.ತರಗತಿ ಹಂತದಲ್ಲಿ ನಾವು ಚಟುವಟಿಕೆಗಳನ್ನು ನೀಡುವಾಗ ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ಚಟುವಟಿಕೆಗಳನ್ನು ನೀಡಲು ಸಾಧ್ಯವಾಗುವುದಿಲ್ಲ,ಐಕೆಂದರೆ ಎಲ್ಲಾ ಮಕ್ಕಳು ಒಂದೇ ಸಾಮರ್ಥ್ಯವನ್ನು ಹೊಂದಿರುವುದಿಲ್ಲ ಆ ಕಾರಣದಿಂದ ಮಕ್ಕಳ ಕಲಿಕಾ ಸಾಮರ್ಥ್ಯಗಳಿಗೆ ಅನುಗುಣವಾಗಿ ಚಟುವಟಿಕೆಗಳನ್ನು ನಿಡಬೇಕುತ್ತದೆ, ಆ ಉದ್ದೇಶದಿಂದ ತರಗತಿಯಲ್ಲಿರುವ ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಗಳಿಗೆ ಅನುಗುಣವಾಗಿ ಮೂರು ಗುಂಪುಗಳನ್ನಾಗಿ ಮಾಡಿ ಅವರ ಕಲಿಕೆಗೆ ಅನುಗುಣವಾಗುವಂತೆ ಚಟುವಟಿಕೆಗಳನ್ನು ಮಾಡಲಾಗಿದೆ, ಶಿಕ್ಷಕರು ತಮ್ಮ ತರಗತಿಯಲ್ಲಿ ಇವುಗಳನ್ನು ಬಳಸಿಕೊಳ್ಳಬಹುದು.ತರಗತಿಯಲ್ಲಿ ಮಕ್ಕಳಿಗೆ ನೀಡಬಹುದಾದ ಗುಂಪು ಚಟುವಟಿಕೆಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಚಟುಟವಟಿಕೆ-೨

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ಶಬ್ದಕೋಶ

  1. ಮಂದಗತಿ:ಆಮೆ ಮಂದಗಾತಿಯಲ್ಲಿ ನಡೆಯುತ್ತದೆ: ವಿರುದ್ಧ ಪದ: ವೇಗವಾಗಿ
  2. ಶತಮಾನ:ಸಚಿನ್ ಇಂಗ್ಲೇಡ್ ನ ವಿರುದ್ಧ ಶತಕವನ್ನು ಭರಿಸಿದನು.
  3. ಆಚ್ಛಾದನ:ಶಾಲಾ ಆರಂಭದಿನಳಲ್ಲಿ ನಮಗೆ ಸಮವಸ್ತ್ರ( ಶಾಲಾ ಸಮ ಆಚ್ಛಾದನ)ಗಳನ್ನು ಕೋಡುತ್ತಾರೆ
  4. ನಿರ್ನಾಮ:ಇಂದು ನಮ್ಮ ಪರಿಸರದಲ್ಲಿ ಗುಬ್ಬಿಗಳ ಸಂತತಿ ನಿರ್ನಾಮ ವಾಗುತ್ತಿದೆ.
  5. ಕೂಲಂಕಷ: ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಆಚರಣೆ ಮಾಡುವಾಗ ಅದಕ್ಕೂ ಮುಂಚೆ ತಯಾರಿಯ ಬಗ್ಗೆ ಶಿಕ್ಷಕರ ಜೊತೆ ಕೂಲಕುಂಷವಾಗಿ ಚರ್ಚೆ ಮಾಡುತ್ತವೆ.
  6. ಕೃತಕ: ಈಗ ಹೆಚ್ಚು ಕೃತಕ ಸಸ್ಯಗಳನ್ನು ಹೆಚ್ಚಾಗಿ ಬೆಳೆಸುತ್ತಿದ್ದೆವೆ.
  7. ಆರ್ದ್ರತೆ: ನಮ್ಮ ದೇಹದಲ್ಲಿ ಆರ್ದ್ರತೆ ಬಹಳಯಿದೆ.
  8. ಮನಸೋತೆ:ಮೆಟ್ರೋ ರೈಲನ್ನು ಮೊದಲ ಬಾರಿ ನೋಡಿದಾಗ ಅದಕ್ಕೆ ನಾನು ಮನಸೋತೆ.

ವ್ಯಾಕರಣ

  1. ಜೋಡಿ ನುಡಿ ಪದ

ಮೌಲ್ಯಮಾಪನ

ಭಾಷಾ ಚಟುವಟಿಕೆಗಳು/ ಯೋಜನೆಗಳು

  1. ಪರಿಸರ ಸಂರಕ್ಷಣೆಯಲ್ಲಿ ಮಕ್ಕಳ ಪಾತ್ರದ ಬಗ್ಗೆ ಪ್ರಬಂಧ ಬರೆಯಿರಿ.
  2. ನಿಮ್ಮ ಗ್ರಾಮದಲ್ಲಿ ದಿನದಿನಕ್ಕೂ ಹೆಚ್ಚಾಗುತ್ತಿರುವ ಮಾಲಿನ್ಯದ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿ.

ಪಠ್ಯ ಬಗ್ಗೆ ಹಿಮ್ಮಾಹಿತಿ