ಒಳ್ನುಡಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೫:೫೭, ೨೪ ಆಗಸ್ಟ್ ೨೦೨೦ ರಂತೆ Kishor (ಚರ್ಚೆ | ಕಾಣಿಕೆಗಳು) ಇವರಿಂದ (removed Category:ಪದ್ಯ using HotCat)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಪರಿಕಲ್ಪನಾ ನಕ್ಷೆ

ಚಿತ್ರ:Olnudi.mm

ಹಿನ್ನೆಲೆ/ಸಂದರ್ಭ

ಇಂದಿನ ತಾಂತ್ರಿಕ ಯುಗದಲ್ಲಿ ಸಂಸ್ಕಾರ, ಸಂಸ್ಕೃತಿ, ಉತ್ತಮ ನಡೆ-ನುಡಿಗಳು ಕಣ್ಮರೆಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮುಂದಿನ ಪೀಳಿಗೆಗೆ ಮೌಲ್ಯಗಳನ್ನು, ಸನ್ನಡತೆ -ಸದ್ಭಾವಗಳ ಸಂದೇಶವನ್ನು ಸಾರುವಮೂಲಕ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುವುದು. ಮೌಲ್ಯಗಳನ್ನು ಪುನರ್ಮನನ ಮಾಡಿಸುವುದು.

ಕಲಿಕೋದ್ದೇಶಗಳು

  • ಸಾಹಿತ್ಯಪ್ರಕಾರಗಳಲ್ಲಿ ಒಂದಾದ ತ್ರಿಪದಿಯನ್ನು ಪರಿಚಯಿಸುವುದು.
  • ತಂದೆ,ತಾಯಿ, ಗುರುಗಳ ಮಹತ್ವವನ್ನು ತಿಳಿಸುವುದು.
  • ಉತ್ತಮಸಂಸ್ಕೃತಿ ಹಾಗೂ ಸದ್ಭಾವನೆಗಳನ್ನು ಮಕ್ಕಳಲ್ಲಿ ಮೂಡಿಸುವುದು.
  • ಉತ್ತಮ ಮೌಲ್ಯಗಳನ್ನು ತನ್ನ ನಿಜಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಡುವುದು.
  • ತ್ರಿಪದಿಗಳ ಮೂಲಕ ಸರ್ವಕಾಲಿಕ ಸತ್ಯದರ್ಶನವನ್ನು ಮಾಡಿಸುವುದು.

ಕವಿ ಪರಿಚಯ

  • ಕಾಲ: ೧೭ನೇ ಶತಮಾನದ ಆದಿ ಭಾಗ
  • ಸ್ಥಳ:ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕು ಅಬಲೂರು
  • ಕೃತಿಗಳು:ತ್ರಿಪದಿಗಳು
  • ಬಿರುದು:ತ್ರಿಪದಿಯ ಜನಕ

1.ವಿಕಿಪೀಡಿಯದಲ್ಲಿರುವ ಸರ್ವಜ್ಞನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ
2.ಕಣಜದಲ್ಲಿನ ಸರ್ವಜ್ಞನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ
3.ಸರ್ವಜ್ಞ ನ ಮಾಹಿತಿಗಾಗಿ tv9 ಇಲ್ಲಿ ಕ್ಲಿಕ್ಕಿಸಿರಿ
3.ಕನ್ನಡ ಕಣ್ಮಣಿ-ಸರ್ವಜ್ಞ ಭಾಗ ‌1
3.ಕನ್ನಡ ಕಣ್ಮಣಿ-ಸರ್ವಜ್ಞ ಭಾಗ ‌2
3.ಕನ್ನಡ ಕಣ್ಮಣಿ-ಸರ್ವಜ್ಞ ಭಾಗ ‌3
3.ಕನ್ನಡ ಕಣ್ಮಣಿ-ಸರ್ವಜ್ಞ ಭಾಗ ‌4
3.ಕನ್ನಡ ಕಣ್ಮಣಿ-ಸರ್ವಜ್ಞ ಭಾಗ ‌5
2014 Kannada Full Movie Sarvagna Mathomme Huttiba Trailer

ಶಿಕ್ಷಕರಿಗೆ ಟಿಪ್ಪಣಿ

ತ್ರಿಪದಿಯ ಪ್ರಕಾರದ ಬಗ್ಗೆ ಸಂಕ್ಷಿಪ್ತವಾಗಿ ಪರಿಚಯಿಸುವುದು.ಕವಿಯ ಆಶಯಗಳನ್ನು ಅರ್ಥಮಾಡಿಕೊಂಡು ತ್ರಿಪದಿಯ ಭಾವವನ್ನು ಮಕ್ಕಳಿಗೆ ಅರ್ಥಮಾಡಿಸುವುದು. ಅದೊಂದು ದೇಶೀಯ ಛಂದೋಪ್ರಕಾರವೆಂಬುದನ್ನು ತಿಳಿಸುವುದು. ಶಾಸನದ ರಚನಾಕಾಲದಲ್ಲಿ ಅಂಶಗಣಾತ್ಮಕವಾಗಿದ್ದ ಛಂದಸ್ಸು ಈತನ ಕಾಲಕ್ಕೆ ಮಾತ್ರಾಗಣ ಸ್ವರೂಪವನ್ನು ಪಡೆದುಕೊಂಡ ಬಗೆಯನ್ನು ತಿಳಿಸುವುದು. ಪ್ರಸ್ತುತ ಸಂದರ್ಭಕ್ಕೆ ಇವುಗಳ ಅಗತ್ಯತೆಯ ಬಗ್ಗೆ ತಿಳಿಸುತ್ತಾ ಅವುಗಳಲ್ಲಿರುವ ಸರ್ವಕಾಲಿಕ ಸತ್ಯ ಸಂಗತಿಗಳನ್ನು ಮನದಟ್ಟು ಮಾಡಿಸುವುದು. ಮಕ್ಕಳು ಪ್ರತೀ ಸಾಲಿನಲ್ಲಿರುವ ಭಾವವನ್ನು ಹೇಳುವಂತೆ ಪ್ರೇರೇಪಿಸುವುದು. ಇದಕ್ಕೆ ಪೂರಕವಾದ ಇತರೆ ಸರ್ವಜ್ಞನ ತ್ರಿಪದಿಗಳನ್ನು ಸಂಗ್ರಹಿಸುವಂತೆ ಪ್ರೇರೇಪಿಸುವುದು. ಕೆಲವು ತ್ರಿಪದಿಯ ಭಾವಾರ್ಥವನ್ನು ಬರೆದು ತರುವಂತೆ ಹೇಳುವುದ ಸಾರಾಂಶ :-

ತಂದೆ,ತಾಯಿ, ಗುರುಗಳು ಪ್ರತ್ಯಕ್ಷ ದೇವರುಗಳು.ಇವರಿಗೆ ವಿಧೇಯರಾಗಿದ್ದು, ಅವರಿಗೆ ನಮಸ್ಕರಿಸಿದರೆ ಒಳಿತಾಗುವುದು. ಎಂತಹ ಕಷ್ಟಗಳೇ ಎದುರಾದರೂ ನಮ್ಮನ್ನು ಬಾಧಿಸದೇ ಬಯಲಾಗಿ ಹೋಗುವವು. ವಿದ್ಯೆ ತಾಯಿ-ತಂದೆಯಾದರೆ, ಬುದ್ಧಿ ಸೋದರಮಾವನಿದ್ದಂತೆ, ನಮಗೆ ಕಷ್ಟಕಾಲದಲ್ಲಿ ಸಹಾಯ ಮಾಡುವವನೇ ನಿಜವಾದ ನಂಟ ಹಾಗೂ ಹಿತೈಸಿ. ಒಳ್ಳೆಯವರ ಸಹವಾಸ ಮಾಡಬೇಕು ದುಷ್ಟರ ಒಡನಾಟ ಅಪಯಾಕಾರಿ ಮತ್ತು ಮಾನಹಾನಿಗೂ ಕಾರಣವಾಗುತ್ತದೆ. ಕಲ್ಲು ಹಾದಂತೆ ಕಠೋರವಾಗಿದ್ದು ಅಪಕೀರ್ತಿಯನ್ನು ಅಪಯಶಸ್ಸನ್ನು ತರುತ್ತದೆ.

ಮೋಡ ಮಳೆಯನ್ನು ಸುರಿಸುವ ಮುನ್ನ ಚಂದ್ರ ತನ್ನ ಸುತ್ತಲೂ ಗುಡಿಯನ್ನು ಕಟ್ಟಿಕೊಳ್ಳುತ್ತಾನೆ . ಆಗ ಅದು ಮಳೆ ಬರುವ ಸೂಚನೆಯಾಗುತ್ತದೆ. ಇದಕ್ಕೆ ಕಾರಣ ಶಿವ ಎಂಬುದು ಈತನ ಅಭಿಪ್ರಾಯ. ಸೃಷ್ಟಿಯ ಎಲ್ಲ ಪವಾಡಗಳಿಗೂ ಆ ಭಗವಂತನೇ ಕಾರಣ. ಅವನ ಅನುಮತಿ ಇಲ್ಲದೆ ಒಂದು ಹುಲ್ಲು ಕಡ್ಡಿಯೂ ಜರುಗಲಾರದು ಎಂಬುದು ಇದರ ಅರ್ಥ. ಕೊನೆಯ ವಚನದಲ್ಲಿ ಉತ್ತಮ ಆಹಾರದ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.ಊಟದಲ್ಲೂ ರುಚಿ, ಶುಚಿ ಹಾಗೂ ಹಿತ ಮಿತತ್ವವನ್ನು ಕಾಯ್ದುಕೊಳ್ಳಬೇಕೆಂದು ಅಭಿಪ್ರಾಯಪಡುತ್ತಾನೆ.

ಹೆಚ್ಚುವರಿ ಸಂಪನ್ಮೂಲ

'ಸರ್ವಜ್ಞ ಸಂಚಯ'ದಲ್ಲಿನ 'ಸರ್ವಜ್ಞ ತ್ರಿಪದಿ'ಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ

ಸಾರಾಂಶ

ಪರಿಕಲ್ಪನೆ ೧

ಚಟುವಟಿಕೆ-೧

ತ್ರಿಪದಿಗಳನ್ನು ಹಾಡಿಸುವುದು

  1. ವಿಧಾನ/ಪ್ರಕ್ರಿಯೆ:ಪಠ್ಯದಲ್ಲಿರುವ ತ್ರಿಪದಿಗಳನ್ನು ಉತ್ತಮವಾಗಿ ವಾಚಿಸುವಂತೆ ಮಕ್ಕಳನ್ನು ಪ್ರೇರೇಪಿಸುವುದು.

ತ್ರಿಪದಿಯ ಭಾವಾರ್ಥವನ್ನು ಹೇಳಿಸುವುದು,

  1. ಸಮಯ: ೧೫ ನಿಮಿಷಗಳು
  2. ಸಾಮಗ್ರಿಗಳು/ಸಂಪನ್ಮೂಲಗಳು:ಪಠ್ಯಪುಸ್ತಕಗಳು. ಸಂಗ್ರಹ ಬರೆಹ,ಧ್ವನಿಸುರುಳಿಗಳ ಮೂಲಕ ವಚನ/ತ್ರಿಪದಗಳನ್ನು ಕೇಳಿಸುವುದು
  3. ಹಂತಗಳು
  4. ಚರ್ಚಾ ಪ್ರಶ್ನೆಗಳು:ತ್ರಿಪದಿಗಳನ್ನು ಸ್ವರಭಾರಯುಕ್ತವಾಗಿ ವಾಚನ ಮಾಡಿ. ಸರ್ವಜ್ಞನ ತ್ರಿಪದಿಗಳ ಭಾವವನ್ನು ವಿವರಿಸಿರಿ.

ಚಟುವಟಿಕೆ-೨

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುವಟಿಕೆ-೧

ಸರ್ವಜ್ಞನ ಇತರೆ ತ್ರಿಪದಿಗಳನ್ನು ಸಂಗ್ರಹಿಸಿ ಅವುಗಳ ಭಾವಾರ್ಥವನ್ನು ಬರೆಯುವುದು .

  1. ವಿಧಾನ/ಪ್ರಕ್ರಿಯೆ:ವಿದ್ಯಾರ್ಥಿಗಳಿಗೆ ತ್ರಿಪದಿ ಸಂಗಹಕಾರ್ಯಕ್ಕೆ ಸಹಕರಿಸುವುದು ಮತ್ತು ಮಾರ್ಗದರ್ಶನ ನೀಡುವುದು.

ನಮ್ಮಲ್ಲೇ ಇರುವ ಸಂಪನ್ನೂಲಗಳಾದ ಗ್ರಂಥಾಲಯದಿಂದ ಅಥವ ಶಿಕ್ಷಕರ ಬಳಿ ಇರುವ ಸಾಹಿತ್ಯವನ್ನು ಒದಗಿಸುವುದು.

  1. ಸಮಯ:೨೫ ನಿಮಿಷಗಳು
  2. ಸಾಮಗ್ರಿಗಳು/ಸಂಪನ್ಮೂಲಗಳು:ಇತರೆ ಪುಸ್ತಕಗಳು. ಸಿ.ಡಿ. ವೀಡಿಯೋಗಳು ಇತ್ಯಾದಿ.
  1. ಹಂತಗಳು:
  2. ಚರ್ಚಾ ಪ್ರಶ್ನೆಗಳು:

ನೀವು ಸಂಗ್ರಹಿಸಿರುವ ತ್ರಿಪದಿಗಳಲ್ಲಿ ನಿಮಗೆ ಮೆಚ್ಚುಗೆಯಾದ ತ್ರಿಪದಿಗಳನ್ನು ತಿಳಿಸಿ.
ಆ ತ್ರಿಪದಿಗಳನ್ನು ಮೆಚ್ಚಿಕೊಳ್ಳಲು ಕಾರಣವೇನು?
ತ್ರಿಪದಿಗಳ ಶೈಲಿ ಗೂ ಇತರೆ ಆಧುನಿಕ ಸಾಹಿತ್ಯ ಶೈಲಿಗೂ ಇರುವ ವ್ಯತ್ಯಾಸವನ್ನು ತಿಳಿಸುವುದು.

ಭಾಷಾ ವೈವಿಧ್ಯತೆಗಳು

ಶಬ್ದಕೋಶ

  • ಭೋಂಕನೆ - ಭೋರ್ಗರೆಯುವ
  • ಅದ್ವಾನ - ಆಪತ್ತು
  • ಬಿಮ್ಮಗೆ - ಹೆಚ್ಚುಬಾರಿ
  • ಕುತ್ತು - ಸಂಕಟ

ವ್ಯಾಕರಣ/ಅಲಂಕಾರ/ಛಂದಸ್ಸು

  • ಬಲ್ಲವರ ಒಡನಾಟ ಬೆಲ್ಲವನು ಮೆದ್ದಂತೆ.
  • ಅಜ್ಞಾನಿಗಳ ಒಡನಾಟ ಕಲ್ಲ ಹಾದಂತೆ.

ಇಲ್ಲಿರುವ ಅಲಂಕಾರಗಳನ್ನು ಹೆಸರಿಸಿ, ಸಮನ್ವಯಗೊಳಿಸಿ .

ಮೌಲ್ಯಮಾಪನ

  • ಸರ್ವಜ್ಞನ ತ್ರಿಪದಿಗಳಲ್ಲಿ ಕಂಡುಬರುವ ಮೌಲ್ಯಗಳನ್ನು ಕುರಿತು ಸಂಕ್ಷಿಪ್ತವಾಗಿ ಬರೆಯಿರಿ.

ಭಾಷಾ ಚಟುವಟಿಕೆಗಳು/ ಯೋಜನೆಗಳು

ಪಠ್ಯ ಬಗ್ಗೆ ಹಿಮ್ಮಾಹಿತಿ