ಗ್ರಾಮೀಣಾಭಿವೃದ್ಧಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಚಿತ್ರ:Rural Development.mm

ಪಠ್ಯಪುಸ್ತಕ

  1. ಕರ್ನಾಟಕ ಪಠ್ಯಪುಸ್ತಕ ಗ್ರಾಮೀಣಾಭಿವೃದ್ಧಿ

ಮತ್ತಷ್ಟು ಮಾಹಿತಿ

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

Rural Development, NCERT Text Book Class 12, Chapter 6ಹೆಚ್ಚು ವಿವರವಾಗಿ ಮತ್ತು ಉತ್ಕೃಷ್ಟ ಮತ್ತು ಓದಲು ಯೋಗ್ಯವಾಗಿದೆ.

ಗ್ರಾಮೀಣಾಭಿವೃದ್ಧಿಯ ಬಗ್ಗೆ ಕೆಳಗಿನ ವಿವರಣೆಗಳನ್ನು ನೀಡಲಾಗಿದೆ

  1. ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ಒಳಗೊಂಡಿದೆ.
    1. ಸಾಕ್ಷರತೆ, ಮುಖ್ಯವಾಗಿ ಮಹಿಳಾ ಸಾಕ್ಷರತೆ,ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ
    2. ಆರೋಗ್ಯ- ನಿರ್ಮಲೀಕರಣ ಮತ್ತು ಸಾರ್ವಜನಿಕ ಆರೋಗ್ಯದ ಬಗ್ಗೆ ಪತ್ತೆ ಹಚ್ಚುವುದು.
  2. ಭೂಸುಧಾರಣೆಗಳು
  3. ಪ್ರತಿಯೊಂದು ಪ್ರದೇಶದಲ್ಲೂ ಉತ್ಪಾದಕ ಸಂಪನ್ಮೂಲಗಳ ಅಭಿವೃದ್ಧಿ
  4. ವಿದ್ಯುತ್, ನೀರಾವರಿ, ಸಾಲ, ಮಾರುಕಟ್ಟೆ, ಸಾರಿಗೆ ಸೌಲಭ್ಯಗಳಾದ ರಸ್ತೆಗಳ ನಿರ್ಮಾಣ- ಗ್ರಾಮದ ರಸ್ತೆಗಳು ಮತ್ತು ಉಪ ರಸ್ತೆಗಳ ನಿರ್ಮಾಣ ಸೇರಿದಂತೆ ಹೆದ್ದಾರಿಗಳು,ಕೃಷಿ ಸಂಶೋಧನೆ ಮತ್ತು ವಿಸ್ತರಣೆ, ಮತ್ತು ಮಾಹಿತಿ ಪ್ರಸಾರಕ್ಕೆ ಈ ತರಹದ ಮೂಲಭೂತ ಸೌಲಭ್ಯಗಳನ್ನು ಒದಗಿಸಿವುದು.
  5. ಬಡತನ ನಿವಾರಣೆ ಮತ್ತು ದುರ್ಬಲ ವರ್ಗದ ಜೀವನಮಟ್ಟವನ್ನು ಸುಧಾರಿಸಲು ಉತ್ಪಾದಕತೆಯನ್ನು ಹೆಚ್ಚು ಮಾಡಿ ಅವರಿಗೆ ಉದ್ಯೋಗಾವಕಾಶ ನೀಡುವ ವಿಶೇಷ ಕ್ರಮಗಳನ್ನು ಮಾಡುವುದು.

ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದ ಹಲವು ವಿವರಣೆ ಇದೆ.

Rural Development, NCERT Text Book Class 12, Chapter 6ಗ್ರಾಮೀಣ ಅಭಿವೃದ್ಧಿ ಭಾರತದ ದೇಶದ ಒಟ್ಟಾರೆ ಅಭಿವೃದ್ಧಿಗೆ ಹೇಗೆ ನಿರ್ಣಾಯಕವಾಗಿದೆ ಎಂಬುದನ್ನು ವಿವಿರಿಸಲಾಗಿದೆ.ಅದೇ ರೀತಿ ಗ್ರಾಮೀಣ ಅಭಿವೃದ್ಧಿಯಲ್ಲಿ ಸಾಲ ಮತ್ತು ಮಾರುಕಟ್ಟೆ ವ್ಯವಸ್ಥೆಗಳು ಹೇಗೆ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ವಿವರಿಸುತ್ತದೆ,ಮುಖ್ಯವಾಗಿ ಉತ್ಪಾದಕ ಚಟುವಟಿಕೆಗಳಲ್ಲಿ ವಿಭಿನ್ನತೆಯನ್ನು ಪೋಷಿಸಲು ಜೀವನೋಪಾಯ ಮತ್ತು ಸುಸ್ಥಿರ ಅಭಿವೃದ್ಧಿ,ಸಾವಯವ ಕೃಷಿಗೆ ಮಹತ್ವವನ್ನು ನೀಡಲಾಗುತ್ತಿದೆ, ಇವುಗಳ ಕರ್ನಾಟಕ ಪಠ್ಯಪುಸ್ತಕದ ಘಟಕದಲ್ಲಿ ಒಳಗೊಂಡಿಲ್ಲ.

ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳಾದ ಬ್ಯಾಂಕಿಂಗ್,ಮಾರ್ಕೆಟಿಂಗ್,ಶೇಖರಣೆ,ಸಾರಿಗೆ ಮತ್ತು ಸಂಪರ್ಕ ಮಾಹಿತಿಗಳ ಪ್ರಮಾಣ ಮತ್ತು ಗುಣಮಟ್ಟ ಉತ್ತಮಗೊಳಿಸುವ ಅಗತ್ಯವಿದೆ,ತನ್ನ ನಿಜವಾದ ಸಾಮರ್ಥ್ಯವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ,ವೈವಿಧ್ಯೀಕರಣ ಹೊಸ ಕ್ಷೇತ್ರಗಳಾದ ಜಾನುವಾರು, ಮೀನುಗಾರಿಕೆ ಮತ್ತು ಕೃಷಿ ಇತರೆ ಚಟುವಟಿಕೆಗಳಿಗೆ, ಕೃಷಿ ಚಟುವಟಿಕೆಗಳಿಗೆ ಅಪಾಯವನ್ನು ಕಡಿಮೆ ಮಾಡುವುದಲ್ಲದೆ ಗ್ರಾಮೀಣ ಜನರಿಗೆ ಸಮರ್ಥನೀಯ ಜೀವನಾಧಾರ ಆಯ್ಕೆಗಳನ್ನು ಒದಗಿಸುವ ಅಗತ್ಯವಿದೆ.ಈ ಹೆಚ್ಚುವರಿ ಚರ್ಚೆ ಗ್ರಾಮೀಣಾಭಿವೃದ್ಧಿಯ ಉಪ ವಿಷಯಗಳ ಬಗ್ಗೆ ವಿಸ್ತರವಾಗಿ ತಿಳುವಳಿಕೆ ಪಡೆಯಲು ಸಹಾಯ ಮಾಡುತ್ತದೆ,

ಉಪಯುಕ್ತ ವೆಬ್ ಸೈಟ್ ಗಳು

  1. Government of India website on rural development
  2. ಕರ್ನಾಟಕ ಸರಕಾರ-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
  3. ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ವಿಕಿಪಿಡಿಯ ಪುಟಗಳು

  1. ಗ್ರಾಮೀಣಾಭಿವೃದ್ಧಿ ವಿಕಿಪಿಡಿಯ
  2. ವಿಕೇಂದ್ರೀಕರಣ ವಿಕಿಪಿಡಿಯ
  3. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಿಪಿಡಿಯ
  4. ಮತ್ತು ಗ್ರಾಮೀಣ ಬಡತನ ವಿಕಿಪಿಡಿಯ

ಗ್ರಾಮೀಣಾಭಿವೃದ್ಧಿ ಬಗೆಗಿನ ನಿಯತಕಾಲಿಕೆ ಪತ್ರಿಕೆ

  1. National Institute of Rural Development

ಗ್ರಾಮೀಣಾಭಿವೃದ್ಧಿಗಾಗಿ ಯೋಜನೆಗಳು

  1. ಕರ್ನಾಟಕ ಸರಕಾರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತ್ ರಾಜ್ಯ ಇಲಾಖೆ
  2. ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೊಗ ಖಾತ್ರಿ ಯೋಜನೆ (MGNREGA)
  3. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ
  4. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ
  5. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ ಸರ್ಕಾರ
  6. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಒಂದು ಸಮೀಕ್ಷೆ
  1. ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ ಮುಖ್ಯವಾಗಿ ಗ್ರಾಮೀಣಾಭಿವೃದ್ಧಿಗಾಗಿ ಆರಂಭಿಸಲಾದ ಬ್ಯಾಂಕ್.ಭಾರತೀಯ ರಿಸರ್ವ್ ಬ್ಯಾಂಕ್ ಗ್ರಾಮೀಣ ಅಭಿವೃದ್ಧಿಯನ್ನು ಕೇಂದ್ರೀಕರಿಸಿಕೊಂಡು ಗ್ರಾಮೀಣ ಬ್ಯಾಂಕ್ ಗಳಿಗೆ ಸಹಾಯ ಮಾಡುತ್ತದೆ.

ಮೇಲಿನ ಕಾರ್ಯಕ್ರಮಗಳು ಯೋಜನೆಗಳ ಬಗ್ಗೆ ಒಂದು ಕಲ್ಪನೆಯನ್ನು ನೀಡುತ್ತವೆ,ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರವು ಕೈಗೊಳ್ಳುತ್ತದೆ. ಅನೇಕ ಸರ್ಕಾರೇತರ ಸಂಸ್ಥೆಗಳು ಗ್ರಾಮೀಣ ಅಭಿವೃದ್ಧಿಗಾಗಿ ಕೆಲಸ ಮಾಡುತ್ತವೆ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಬಗ್ಗೆ ಲೇಖನಮೈರಾಡ ಸಂಸ್ಥೆಈ ಸಂಸ್ಥೆಗಳು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಸಂಬಂಧ ಪುಸ್ತಕಗಳು

  1. ಪ್ರೊ ಕೆ ಭೈರಪ್ಪ ಅವರ ಗ್ರಾಮೀಣ ಅಭಿವೃದ್ದಿ ಪುಸ್ತಕ

ಬೋಧನೆಯ ರೂಪರೇಶಗಳು

ಪರಿಕಲ್ಪನೆ 1 ಗ್ರಾಮೀಣಾಭಿವೃದ್ಧಿ= ಭಾರತದಲ್ಲಿ ವೇಗವಾಗಿ ಜನರು ನಗರಕ್ಕೆ ಬದಲಾವಣೆ ಆಗುತ್ತಿದ್ದರೆ(ವಿಶ್ವದ ಇತರೆ ಪ್ರದೇಶಗಳನ್ನು ಹೊರತು ಪಡಿಸಿ)ಆದರೆ ಭಾರತದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಗಳನ್ನು ಕಾಣುತ್ತಿದ್ದೇವೆ. ಕಳೆದ ಎರಡು ದಶಕಗಳಿಂದ ಭಾರತದಲ್ಲಿ ನಗರ ಪ್ರದೇಶಗಳು ಬೆಳವಣಿಗೆ ಆಗುತ್ತಾ ಬರುತ್ತಿವೆ,ಆದರೆ ಭಾರತದ ಗ್ರಾಮೀಣ ಪ್ರದೇಶ ಇನ್ನು ಹಿಂದುಳಿದಿದೆ,ಗ್ರಾಮೀಣ ಪ್ರದೇಶದಲ್ಲಿ ಕೃಷಿ ಪ್ರಧಾನ ಉದ್ಯೋಗವಾಗಿದೆ ಮತ್ತು ಪ್ರಸ್ತ್ರತ ಸಂದರ್ಭದಲ್ಲಿ ಕೃಷಿ ಮಾಡುವುದು ಕೂಡ ಕಠಿಣವಾಗಿದೆ, ಆದರೂ ಕೂಡ ಗ್ರಾಮೀಣ ಪ್ರದೇಶದಲ್ಲಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ,ಅದ್ದರಿಂದ ಭಾರತದಲ್ಲಿ ಗ್ರಾಮೀಣಾಭಿವೃದ್ಧಿಯ ಕಡೆ ಹೆಚ್ಚು ಅದ್ಯತೆ ನೀಡಲಾಗುತ್ತಿದೆ,ಅದಕ್ಕಾಗಿ ವಿವಿಧ ವಿಧಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ.

ಕಲಿಕೆಯ ಉದ್ದೇಶಗಳು

  1. ಭಾರತದ ಪ್ರಗತಿಯಲ್ಲಿ ಗ್ರಾಮೀಣಾಭಿವೃದ್ಧಿಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವುದು.
  2. ಗ್ರಾಮೀಣಾಭಿವೃದ್ಧಿಯಲ್ಲಿ ಎದುರಾಗುವ ಸವಾಲುಗಳು ಮತ್ತು ಅದಕ್ಕೆ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು.
  3. ಗ್ರಾಮೀಣಾಭಿವೃದ್ಧಿಗೆ ಬೆಂಬಲ ಮಾಡುವ ವಿಧಾನಗಳನ್ನು ಅರ್ಥಮಾಡಿಕೊಳ್ಳುವುದು.


ಶಿಕ್ಷಕರಿಗೆ ಟಿಪ್ಪಣಿ

ಕಳೆದ ನೂರು ವರ್ಷಗಳಲ್ಲಿ ಭಾರತ ಮತ್ತು ಕರ್ನಾಟಕದಲ್ಲಿ ನಗರೀಕರಣಕ್ಕೆ ಪ್ರವೃತ್ತಿಯನ್ನು ತೋರಿಸಬಹುದು(ಕಳೆದ ಹತ್ತು ಜನಗಣತಿ ಅಂಕಿಗಳನ್ನು ಬಳಸಿ).ಈ ಚಿತ್ರಣ ನಮಗೆ ಭಾರತ ಮತ್ತು ಕರ್ನಾಟಕದಲ್ಲಿ ನಗರೀಕರಣದ ಹೆಚ್ಚಾಳವನ್ನು ತೋರಿಸುತ್ತದೆ.


ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನಸಂಖ್ಯೆಯ ಬೆಳವಣಿಗೆಯ ಹೋಲಿಕೆ. Cities.png g-oped-28-web.jpg ಕೃಷಿಯಲ್ಲಿ ಕೆಲಸ ಮಾಡುವ ವ್ಯಕ್ಇಗಳಿಂದ ದೇಶದ ರಾಷ್ಟ್ರೀಯ ಆಧಾಯವನ್ನು ಹೋಲಿಕೆ ಮಾಡಿದರೆ, ಹೆಚ್ಚು ಜನ ಇನ್ನು ಕೃಷಿಯಲ್ಲಿ ತೊಡಗಿಸಿಕೊಂಡಿರುವುದನ್ನು ನೋಡಬಹುದು,ರಾಷ್ಟೀಯ ಆಧಾಯದಲ್ಲಿ ಹೆಚ್ಚಿನ ಶೆಕಾಡ ಹೆಚ್ಚು ಭಾಗ ಕೃಷಿಯಿಂದ ಕುಸಿತವನ್ನು ಕಾಣಬಹುದು.ಈ ಕೃಷಿ ಅವಲಂಬಿಸಿ ಜನರನ್ನು ಉತ್ಪಾದನಾ ಮತ್ತು ಸೇವಾ ಕ್ಷೇತ್ರಗಳಲ್ಲಿ ಜನರಿಗೆ ಹೋಲಿಸಿದರೆ,ತುಲನಾತ್ಮಕವಾಗಿ ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಅರ್ಥ. http://vbnewsonline.com/specialNews/72235/ ಗ್ರಾಮೀಣಾಭಿವೃದ್ಧಿ ದೃಷ್ಠಿಯಿಂದ ನೋಡಿದರೆ ರೈತರ ಆತ್ಮಹತ್ಯೆ ಪ್ರಕರಣೆಯ ಬಗ್ಗೆ ಚರ್ಚೆ ಮಾಡುವ ಅಗತ್ಯವಿದೆ.ಅನೇಕ ರೈತರಿಗೆ ಕೃಷಿಯೇತರ ಚಟುವಟಿಕೆಗಳ ಬಗ್ಗೆ ಗೊತ್ತಲ್ಲ ಮತ್ತು ಕೃಷಿ ಕಡಿಮೆ ಲಾಭದಾಯಕವಾಗಿದೆ ಎಂದು.ಉತ್ಪಾದನೆಯ ವೆಚ್ಚ ಹೆಚ್ಚಾಗುತ್ತಿದೆ, ಬೆಲೆಗಳು ಕೂಡ ಲಾಭದಾಯಕವಾಗಿಲ್ಲ,ವಿವಿಧ ಕಾರಣಗಳಿಂದ ಬೆಳೆ ವೈಫಲ್ಯಗಳು ಆಗುತ್ತಿರುವುದರಿಂದ ಬಡತನ ರಚನೆ ಆಗುತ್ತಿದೆ,ಬೆಳೆಯುತ್ತಿರುವ ಆರೋಗ್ಯ ವೆಚ್ಚ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸೂಕ್ತ ಆರೋಗ್ಯ ಸೌಲಭ್ಯಗಳ ಕೊರತೆಯಿಂದಾಗಿ ಗ್ರಾಮದಲ್ಲಿ ಬಡತನ ಹೆಚ್ಚಾಗುತ್ತಿದೆ.ಗ್ರಾಮೀಣ ಪ್ರದೇಶದಲ್ಲಿ,ಸೌಲಭ್ಯಗಳನ್ನು ಮತ್ತು ಮೂಲಸೌಕರ್ಯಗಳನ್ನು ಒದಗಿಸುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಬಡತನ ಕಡಿಮೆ ಆಗುತ್ತದೆ ಮತ್ತು ನಗರ ಪ್ರದೇಶಕ್ಕೆ ಗ್ರಾಮದಿಂದ ವಲಸೆ ಹೋಗುವುದು ಕಡಿಮೆ ಆಗಿ ನಗರದಲ್ಲಿ ಜನಸಂಖ್ಯೆ ಕಡಿಮೆ ಆಗುತ್ತದೆ, ಇದು ಡಾ||ಎ ಪಿ ಜೆ ಅಬ್ದುಲ್ ಕಲಾಂ http://kn.wikipedia.org/wiki/ಅಬ್ದುಲ್_ಕಲಾಮ್ ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶಗಳಿಗೆ ಸೌಲಭ್ಯಗಳನ್ನು ಒದಗಿಸುವುದು PURA ಅವರ ಆಲೋಚನೆಯಾಗಿದೆ.

ಚಟುವಟಿಕೆಗಳು

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಗ್ರಾಮೀಣಾಭಿವೃದ್ಧಿ ಚಟುವಟಿಕೆ ಸಂ 1
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಗ್ರಾಮೀಣಾಭಿವೃದ್ಧಿ ಚಟುವಟಿಕೆ ಸಂಖ್ಯೆ 2

ಪರಿಕಲ್ಪನೆ #2 ವಿಕೇಂದ್ರೀಕರಣ

ಗ್ರಾಮೀಣ ಅಭಿವೃದ್ಧಿಯ ಒಂದು ಪ್ರಮುಖ ಅಂಶ ವಿಕೇಂದ್ರೀಕರಣವಾಗಿದೆ,ಅಧಿಕಾರ ಕೇಂದ್ರ ನಗರ ಪ್ರದೇಶದಲ್ಲಿರುತ್ತದೆ,ರಾಷ್ಟ್ರೀಯ, ರಾಜ್ಯ, ಜಿಲ್ಲೆಯ ರಾಜಧಾನಿಗಳು ಇವುಗಳೆಲ್ಲಾ ನಗರದ ಕೇಂದ್ರ ಭಾಗಗಳು.ಅಧಿಕಾರ ಸಂಯೋಜನೆಯು ನಗರದಿಂದ ಗ್ರಾಮೀಣ ಭಾಗಕ್ಕೆ ವರ್ಗಾವಣೆ ಆಗುತ್ತದೆ, ಇದು ಗ್ರಾಮೀಣಾಭಿವೃದ್ಧಿ ಆಗುವಲ್ಲಿ ಕಠಿಣವಾಗುತ್ತದೆ.ಈ ಗ್ರಾಮೀಣ ಪ್ರದೇಶದಲ್ಲಿನ ಆದ್ಯತೆಗಳನ್ನು ಅಲ್ಲಿನ ಅಧಿಕಾರಿಗಳು ಮತ್ತು ನೀತಿಯನ್ನು ರೂಪಿಸಿ ನಿರ್ಧಾರಗಳನ್ನು ತೆಗೆದುಕೊಂಡರೆ ಹೆಚ್ಚಿನ ಮಟ್ಟಿಗೆ ಉಪಯುಕ್ತವಾಗುತ್ತದೆ.

ಕಲಿಕೆಯ ಉದ್ದೇಶಗಳು

  1. ವಿಕೇಂದ್ರೀಕರಣದ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ವಿಕೇಂದ್ರಕರಣದ ವಿವಿಧ ವಿಧಾನಗಳನ್ನು ತಿಳಿಯುವುದು-ರಾಜಕೀಯ, ಆರ್ಥಿಕ, ಆಡಳಿತಾತ್ಮಕ ಇತ್ಯಾದಿ
  2. ಭಾರತದಲ್ಲಿ ವಿಕೇಂದ್ರೀಕರಣದ ಅವಶ್ಯತೆಯನ್ನು ಅರ್ಥಮಾಡಿಕೊಳ್ಳುವುದು-ಸಾಮಾಜಿಕ,ರಾಜಕೀಯ ಮತ್ತು ಆರ್ಥಿಕ
  3. ಭಾರತದಲ್ಲಿ ವಿಕೇಂದ್ರೀಕರಣದ ಪ್ರಕ್ರಿಯೆ ಮತ್ತು ಹಂತಗಳ ಬಗ್ಗೆ ಅರಿವು ಅಗತ್ಯ-ಸಾಮಾಜಿಕ,ರಾಜಕೀಯ ಮತ್ತು ಆರ್ಥಿಕ
  4. ರಾಜಕೀಯ ವಿಕೇಂದ್ರೀಕರಣದಲ್ಲಿ PRI ಕಾನೂನಿಕ ವಿಶೇಷವಾದ ಪಾತ್ರ.

ಶಿಕ್ಷಕರಿಗೆ ಟಿಪ್ಪಣಿ

ಚಟುವಟಿಕೆಗಳು

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಗ್ರಾಮೀಣಾಭಿವೃದ್ಧಿ ವಿಕೇಂದ್ರೀಕರಣ ಚಟುವಟಿಕೆ ಸಂ 1
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಗ್ರಾಮೀಣಾಭಿವೃದ್ಧಿ ವಿಕೇಂದ್ರೀಕರಣ ಚಟುವಟಿಕೆ ಸಂ 2

ಪರಿಕಲ್ಪನೆ #3 ಮಹಿಳೆ ಮತ್ತು ಗ್ರಾಮೀಣಾಭಿವೃದ್ಧಿ

ಸಾಂಪ್ರದಾಯಿಕ ಪದ್ಧತಿಯಿಂದ ಹಿಡಿದು ಸಮಾಜ ಇಲ್ಲಿಯವರೆಗೂ ಮಹಿಳೆಯರಿಗೆ ಸಿಗಬೇಕಾದ ಬೆಲೆಯು ಸಿಗುತ್ತಿಲ್ಲ.ಇಂದಿಗೂ ರಾಷ್ಟ್ರೀಯ GDP ಯಲ್ಲಿ ಮಹಿಳಾ ಕಾರ್ಮಿಕರನ್ನು ದೇಶಿಯ ಕಾರ್ಮಿಕರು ಎಂದು ಗಣನೆಗೆ ತೆಗೆದುಕೊಂಡಿಲ್ಲ.ಅನೇಕ ವಿಧಗಳಲ್ಲಿ ಮಹಿಳೆಯರು ಅಗಾಧವಾದ ಕೊಡುಗೆಯನ್ನು ಅವರ ಅಭಿವೃದ್ಧಿ ಹೊಂದುವ ಮೂಲಕ ನೀಡುತ್ತಿದ್ದಾರೆ.ಉದಾಹರಣೆ: ಪಶುಸಂಗೋಪನೆ, ರೇಷ್ಮೆ ಕೃಷಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯನ್ನು ನಾವು ಕಾಣುತ್ತಿದ್ದೇವೆ. ಎರಡನೇಯದಾಗಿ ಸಾಕ್ಷರತೆಯ ಪ್ರಮಾಣದಲ್ಲಿ ಪೌಷ್ಟಿಕ/ಆರೋಗ್ಯ ಸ್ಥಿತಿ ಮಾಹಿತಿ ಅಂತಹ ಅನೇಕ ಕ್ಷೇತ್ರಗಳಲ್ಲಿ ಮಹಿಳೆಯು ಇನ್ನು ಹಿಂದೆ ಇದ್ದಾಳೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಕಾರ್ಮಿಕರದು ಒಂದು ಬಲವಾದ ಘಟಕವಾಗಿದೆ ಮತ್ತು ಇಂದಿಗೂ ಕೂಡ ಪುರುಷರ ಕೊಡು ಕೂಲಿಗಿಂತ ಮಹಿಳೆಯರ ಕೂಲಿ ಕಡಿಮೆ ಇದೆ ಆದರೆ ಇಬ್ಬರದು ಕಾರ್ಯ ಫಲ ಒಂದೆಯಾಗಿದೆ.ಹಲವು ವಿಧದ ನಿಬಂಧನೆಗಳನ್ನು ಜಾರಿಗೆ ತರುವುದು ಮತ್ತು ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಈ ತಾರತಮ್ಯವನ್ನು ಕಡಿಮೆ ಮಾಡಬಹುದು. ಮಹಿಳೆಯರ ಸಬಲಿಕರಣಕ್ಕಾಗಿ ಅನೇಕ ಯೊಜನೆಗಳು ಮತ್ತು ಕಾರ್ಯಕ್ರಮಗಳನ್ನು ಜಾರಿಗೆ ಗೊಳಿಸಿದೆ ಮತ್ತು ಅವರು ಅಭಿವೃದ್ಧಿಯಲ್ಲಿ ಅತ್ಯಂತ ಪ್ರಾತ್ರವನ್ನು ವಹಿಸಬೇಕಾದ ಅಗತ್ಯವಿದೆ. Mahila Samkhya ಭಾರತ ಸರ್ಕಾರದ "ಶಿಕ್ಷಣ ಮೂಲಕ ಸಬಲಿಕರಣ" ಕಾರ್ಯಕ್ರಮ.ಈಗ ಕರ್ನಾಟಕದಲ್ಲಿ ಕೂಡ ಜಾರಿಯಲ್ಲಿದೆ.Karnataka.

ಕಲಿಕಾ ಉದ್ದೇಶಗಳು

  1. ಅಭಿವೃದ್ಧಿಯಲ್ಲಿ ಮಹಿಳೆಯು ವಹಿಸುತ್ತಿರುವ ಕ್ಲಿಷ್ಠ ಪಾತ್ರವನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿ ಗ್ರಾಮೀಣಾಭಿವೃದ್ಧಿಯಲ್ಲಿ.
  2. ಮಹಿಳೆಯರು ಹೇಗೆ ಅನೇಕ ವಿಧಗಳಲ್ಲಿ ತಾರತಮ್ಯಗೊಳಗಾಗುತ್ತಿದ್ದರೆ ಎಂದು ಅರ್ಥಮಾಡಿಕೊಳ್ಳುವುದು.
  3. ಮಹಿಳೆಯರು ವೇಗವಾಗಿ ಪುರುಷ ಪ್ರಧಾನ ವೃತ್ತಿಗಳಲ್ಲಿ ಪ್ರವೇಶಿಸುತ್ತಿದ್ದಾರೆ ಮತ್ತು ಅಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುತಿರುವ ಬಗ್ಗೆ ತಿಳಿಯುವುದು.

ಶಿಕ್ಷಕರಿಗೆ ಟಿಪ್ಪಣಿ

ಈ ವಿಭಾಗ ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಮುಖವಾಗಿದೆ ಮತ್ತು ಲಿಂಗ ಆಧಾರಿತವಾಗಿ ತನ್ನನು ತಾನು ಆತಂರಿಕವಾಗಿ ಪ್ರತಿಫಲಿಸಿಕೊಳ್ಳಲು ಸಹಾಯ ಮಾಡುತ್ತದೆ.ಇಂದಿಗೂ ಕೂಡ ಮಹಿಳೆಯರನ್ನು ಅವರ ಪಾತ್ರವನ್ನು ಕಡೆಗಣಿಸುತ್ತಿದ್ದಾರೆ.ಇಂದಿಗೂ ಕೂಡ ಅವರ ಅನೇಕ ವಿಚಾರಗಳನ್ನು ಗೃಹಿಣಿ ಎಂಬ ಕಾರಣದಿಂದ ನಿರ್ಬಂಧಕ್ಕೆ ಒಳಪಡಿಸುತ್ತಿದ್ದಾರೆ.ಆದಾಗ್ಯೂ ಭಾರತದ_ಸಂವಿಧಾನ ಮಹಿಳೆಯರು ಹೊಂದಿರುವ ಹಕ್ಕುಗಳನ್ನು ಪುರುಷರಿಗೆ ಸಮಾನಾಗಿ article 15ಭಾರತದ ಸಂವಿಧಾನ ಹೇಳುತ್ತದೆ.article 15 ಭಾರತದ_ಸಂವಿಧಾನ

  1. ರಾಜ್ಯದಲ್ಲಿ ಧರ್ಮ,ಜನಾಂಗ,ಜಾತಿ,ಲಿಂಗ,ಹುಟ್ಟಿದ ಸ್ಥಳ ಅಥವಾ ಯಾವುದೇ ಆಧಾರದ ಮೇಲೆ ಯಾವುದೇ ನಾಗರಿಕರನ್ನು ಭೇದಭಾವವನ್ನು ಮಾಡುವ ಆಗಿಲ್ಲ.ಮಹಿಳೆಯರಿಗೆ ರಾಜಕೀಯ, ಸಾಮಾಜಿಕ,ಆರ್ಥಿಕವಾಗಿ ನಡೆಯುತ್ತಿರುವ ಭೇಧಭಾವದ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ನಾವು ಈಗ ನೋಡುತ್ತಿದ್ದೇವೆ.ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ನೀಡುರುವುದು ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಲಿಂಗ ನ್ಯಾದ ಕಡೆಗೆ ಹೆಜ್ಜೆ ಹಾಕಿದಂತೆ.ರಾಷ್ಟ್ರೀಯ ಕಾನೂನು ವ್ಯವಸ್ಥೆಯಲ್ಲಿ ಶೇಕಾಡ 33% ರಷ್ಟು ಮೀಸಲಾತಿ ನೀಡುವುದು ಅಗತ್ಯವಿದೆ,ಕರ್ನಾಟಕದಂತ ರಾಜ್ಯಗಳಲ್ಲಿ ಮಹಿಳಿಯರಿಗೆ ಪಂಚಾಯಿತಿಯಲ್ಲಿ ಶೇಕಾಡ 50% ಮೀಸಲಾತಿಯನ್ನು ನೀಡಲಾಗಿದೆ.

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಮಹಿಳೆ ಮತ್ತು ಗ್ರಾಮೀಣಾಭಿವೃದ್ಧಿ ಚಟುವಟಿಕೆ ಸಂ 1
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಮಹಿಳೆ ಮತ್ತು ಗ್ರಾಮೀಣಾಭಿವೃದ್ಧಿ ಚಟುವಟಿಕೆ ಸಂ 2

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಗ್ರಾಮೀಣ ಭಾರತದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಖಾತ್ರಿಗೊಳಿಸಿ ಅಭಿವೃದ್ಧಿಪಡಿಸುವು ಅಗತ್ಯವನ್ನು ಅರ್ಥಮಾಡಿಕೊಳ್ಳುವುದು.ಗ್ರಾಮೀಣ ಭಾರತದ ಅಭಿವೃದ್ಧಿಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ನೀಡಬೇಕಾದ ಬೆಂಬಲವನ್ನು ಅರ್ಥಮಾಡಿಕೊಳ್ಳುವುದು.

ಯೋಜನೆಗಳು

ಭಾರತದಲ್ಲಿ ಈಗಲೂ ಕೂಡ ನಾವು ಹುಡುಗಿ ಮತ್ತು ಮಹಿಳೆಯರಲ್ಲಿ ತಾರತಮ್ಯವನ್ನು ಕಾಣುತ್ತಿದ್ದೇವೆ.ಇಂತಹ ತಾರತಮ್ಯ ವಿಷಯಗಳು ಬಂದಿರುವ ಪತ್ರಿಕೆಗಳನ್ನು ಮತ್ತು ವಿಷಯಗಳನ್ನು ಸಂಗ್ರಹಮಾಡಿ.ಭಾರತದಲ್ಲಿ ಮಹಿಳೆ ಮತ್ತು ಹುಡುಗಿಯರ ಇರುವ ತಾರತಮ್ಯವನ್ನು ಆಧಾರವಾಗಿಟ್ಟುಕೊಂಡು ಚಿತ್ರ ಪ್ರಬಂಧವನ್ನು ಬರೆಯಿರಿ.ಮಹಿಳಾ ಸಬಲೀಕರಣ ಕಾರ್ಯಕ್ರಮದ ಬಗ್ಗೆ ವಿಮರ್ಶೆ ಮಾಡಿ ಮತ್ತು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಿಮ್ಮ ಅಭಿಪ್ರಾಯವನ್ನು ಬರೆಯಿರಿ.

ಸಮುದಾಯ ಆಧಾರಿತ ಯೋಜನೆಗಳು

ಸ್ಥಳೀಯ ಸಮೂದಾಯದವರ ಜೊತೆ ಮಾತಾನಾಡುವ ಮೂಲಕ ಕಳೆದ 3-4 ದಶಕಗಳಲ್ಲಿ ಆದ ಬದಲಾವಣೆಗಳನ್ನು ಸಂಗ್ರಹಿಸಿ ಮತ್ತು ನೀವು ಯಾವ ಬದಲಾವಣೆಗಳನ್ನು ಅಭಿವೃದ್ಧಿ ಎಂದು ಪರಿಗಣಿಸುತ್ತಿರಾ? ಅಭಿವೃದ್ಧಿಯ ಬಗ್ಗೆ ಒಂದು ಚಿತ್ರ ಪ್ರಬಂಧವನ್ನು ಬರೆಯಿರಿ.

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು