"ಜರ್ಮನಿಯ ಏಕೀಕರಣ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೯೯ ನೇ ಸಾಲು: ೧೯೯ ನೇ ಸಾಲು:
 
=ಯೋಜನೆಗಳು =
 
=ಯೋಜನೆಗಳು =
 
#ಜರ್ಮನಿ ಏಕೀಕರಣದ ಪರಿಣಾಮಗಳು ಈ ಬಗ್ಗೆ ಚರ್ಚಾ ಸ್ಪರ್ಧೆ   
 
#ಜರ್ಮನಿ ಏಕೀಕರಣದ ಪರಿಣಾಮಗಳು ಈ ಬಗ್ಗೆ ಚರ್ಚಾ ಸ್ಪರ್ಧೆ   
#.ಬಿಸ್ಮಾರ್ಕನ ಜೀವನ ಸಾಧನೆ  ಈ ಬಗ್ಗೆ  ಯೋಜನಾ  ಕಾರ್ಯ .
 
#.ಜರ್ಮನಿ ಏಕೀಕರಣದಲ್ಲಿ ಬಿಸ್ಮಾರ್ಕ ಮಾಡಿದ ಯುದ್ಧಗಳ ಕುರಿತು ಒಂದು ಯೋಜನೆ ರಚಿಸುವುದು.
 
 
#.ಕರ್ನಾಟಕ ಏಕೀಕರಣದ ಕುರಿತು ಮಾಹಿತಿ ಸಂಗ್ರಹಿಸುವುದು.
 
#.ಕರ್ನಾಟಕ ಏಕೀಕರಣದ ಕುರಿತು ಮಾಹಿತಿ ಸಂಗ್ರಹಿಸುವುದು.
  

೧೦:೪೩, ೯ ಫೆಬ್ರುವರಿ ೨೦೧೪ ನಂತೆ ಪರಿಷ್ಕರಣೆ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

ಡಿ.ಎಸ್.ಇ.ಆರ್.ಟಿ. 9ನೇ ತರಗತಿಗೆ ಕರ್ನಾಟಕ ರಾಜ್ಯದ ಲ್ಲಿ ನಿಗದಿ ಪಡಿಸಲಾದ ಕ್ರಾಂತಿಗಳು &ರಾಷ್ಟ್ರ ಪ್ರಭುತ್ವಗಳ ಏಳಿಗೆ ಈ ವಿಷಯದಲ್ಲಿನ ಪಠ್ಯ ಪುಸ್ತಕ ಮಾಹಿತಿಯು ಪ್ರಮುಖವಾಗಿ ಜರ್ಮನಿ ಏಕೀಕರಣವನ್ನು ಒಳಗೊಂಡಿದೆ.ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಜರ್ಮನಿಯ ಏಕೀಕರಣದ ಕಾರಣ & ಘಟನೆ,ಪರಿಣಾಮಗಳ ಜೊತೆಗೆ ಜರ್ಮನಿ ಏಕೀಕರಣದಲ್ಲಿ ಬಿಸ್ಮಾರ್ಕನ ಪಾತ್ರದ ಬಗ್ಗೆ ತಿಳಿಸುವುದು ಪ್ರಮುಖ ಉದ್ದೇಶವಾಗಿದೆ. ಅಷ್ಟೇ ಅಲ್ಲದೇ ತಮ್ಮ ದೇಶದಲ್ಲಿಯೂ , ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ನಾಯಕರ ಜೀವನ ಚರಿತ್ರೆಯನ್ನು ಓದುವಂತೆ ಮಾಡುವುದು ಹಾಗೂ ಉನ್ನತ ರಾಷ್ಟ್ರೀಯ ಭಾವನೆ ಬೆಳೆಸುವುದು ಪ್ರಮುಖ ಉದ್ಧೇಶವಾಗಿದೆ. ದೇಶದ ವಿಭಜನೆಗೆ ಕಾರಣವಾಗುವ ಅಂಶಗಳ ಬಗ್ಗೆ ಗಮನವಹಿಸಿ,ವಿಭಜನೆಯನ್ನು ತಡೆಗಟ್ಟುವ ಹಾಗೂ ದೇಶದ ಐಕ್ಯತೆಗಾಗಿ ಕೈಗೊಳ್ಳ ಬೇಕಾದ ಕ್ರಮಗಳನ್ನು ಚಿಂತಿಸುವ ಮನೋಭಾವನೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಈ ಘಟಕದ ಪ್ರಮುಖ ಉದ್ದೇಶವಾಗಿದೆ.

ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಪಠ್ಯಕ್ರಮಕ್ಕೆ ಅನುಸಾರವಾಗಿ ರಾಜ್ಯ ಶೈಕ್ಷಣಿಕ ಸಂಶೋಧನೆ & ತರಬೇತಿ ಸಂಸ್ಥೆ ಪ್ರಮುಖ ಪಾತ್ರವನ್ನು ವಹಿಸಿದ್ದು ಈ ಲಿಂಕ್ ಬಳಸಿ 9 ನೇ ತರಗತಿಯ ಸಮಾಜ ವಿಜ್ಞಾನ ಕನ್ನಡ &ಆಂಗ್ಲ ಅವತರಣಿಕೆಗಳನ್ನು ಪಡೆಯಬಹುದು) ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ])


ಮತ್ತಷ್ಟು ಮಾಹಿತಿ

ಜರ್ಮನಿ ಯುರೋಪ್ ಖಂಡದ ಮಧ್ಯಭಾಗದಲ್ಲಿರುವ ದೇಶ.ಉತ್ತರ ದಕ್ಷಿಣ ಭೂ ಪ್ರದೇಶಗಳನ್ನು ಗುರುತಿಸಲು ಸಾಧ್ಯವಾಗುವಂತೆ ದೇಶದ ಮಧ್ಯೆ ಬೆಳೆದು ನಿಂತಿರುವ ಬವೇರಿಯನ್ ಪರ್ವತ ಶ್ರೇಣಿ. ಇಲ್ಲಿ ಎರಡು ಪ್ರಮುಖ ನದಿಗಳು ರೈನ್,&ಡ್ಯಾನೂಬ್.ಪಶ್ಚಿಮದಲ್ಲಿ ಹರಿಯುವ ರೈನ್ ನದಿ ದೇಶದ ಗಡಿ .ಜರ್ಮಿನಯ ಸುತ್ತ ಒಂಭತ್ತು ಯುರೋಪಿನ ದೇಶಗಳಿವೆ. ಕ್ರಿ.ಪೂ 10ನೇ ಶತಮಾನದಿಂದ ಇಲ್ಲಿ ಜನವಸತಿಯ ಬಗ್ಗೆ ಮಾಹಿತಿ ಸಿಗುತ್ತದೆ.ಇಲ್ಲಿನ ಮೂಲ ನಿವಾಸಿಗಳು ಜರ್ಮೆನಿಕ್ &ಸೆಲ್ವಿಕ್.ಕಮ್ಯೂನಿಸ್ಟ್ ಸಿದ್ದಾಂತದ ಪ್ರತಿಪಾದಕ ಕಾರ್ಲಮಾರ್ಕ್ಸ್ ,ಸಂಗೀತಗಾರ ಬೀಥೋವೆನ್ ಇವರೇ ಮೊದಲಾದವರು ಜರ್ಮನಿಯವರು. ಎರಡು ಜಾಗತಿಕ ಯುದ್ಧಗಳಿಗೆ ಕಾರಣವಾದ ಜರ್ಮನಿ ಈಗಲೂ ಕೂಡ ಯುರೋಪಿನ ಅಗ್ರಗಣ್ಯ ರಾಷ್ಟ್ರ. ಅಂಕಿ-ಅಂಶಗಳು ವಿಸ್ತೀರ್ಣ 356910 ಚ.ಕೀ.ಮೀ(ಭೂ ಬಳಕೆ ಶೇ:34,ಕೃಷಿಯೋಗ್ಯ, ಶೇ:02 ಶಾಶ್ವತ ಬೆಳೆ,ಶೇ:17 ಹುಲ್ಲುಗಾವಲು,ಶೇ:29 ಅರಣ್ಯ, ಶೇ:18 ಇತರೆ ಜನಸಂಖ್ಯೆ 8,05,69000(ಶೇ:45 ಪ್ರಾಟೆಸ್ಟಂಟರು,ಶೇ:37 ರೋಮನ್ ಕ್ಯಾಥೊಲಿಕರು,ಶೇ:18 ಇತರೆ) ಉದ್ಯಮ ಕಬ್ಬಿಣ,ಉಕ್ಕು,ಗಣಿಗಾರಿಕೆ,ಪೆಟ್ರೋಲಿಯಂ,ರಾಸಾಯನಿಕ,ಮೋಟಾರು ವಾಹನ,ವಿಮಾನ,ಯಂತ್ರೋಪಕರಣ, ನೈಸರ್ಗಿಕ ಸಂಪನ್ಮೂಲ ಕಬ್ಬಿಣ,ಪೊಟ್ಯಾಷ್,ಬಾಕ್ಸೈಟ್,ಲಿಗ್ನೈಟ್ ಪ್ರಮುಖ ನಗರಗಳು ಬರ್ಲಿನ್(ರಾಜಧಾನಿ),ಹ್ಯಾಂಬರ್ಗ್,ಮುನ್ ಚೆನ್(ಮ್ಯೂನಿಚ್),ಕೋಲ್ನ್,ಪ್ರಾಂಕ್ ಫರ್ಟ್,ಬಾನ್ ಮುಖ್ಯ ಬೆಳೆ ಗೋಧಿ,ಬಾರ್ಲಿ,ಆಲೂಗಡ್ಡೆ,ಸಕ್ಕರೆ ಬೀಟು,ದವಸ ಧಾನ್ಯಗಳು ನಾಣ್ಯ ಡ್ಯೂಷ್ ಮಾರ್ಕ್ ವಾಯುಗುಣ ಸಮಶೀತೋಷ್ಣ ವಾಯುಗುಣ, ಕಡು ಬೇಸಿಗೆ, ಹಗುರ ಚಳಿಗಾಲ& ಕೆಲವೊಮ್ಮೆ ಹಿಮಪಾತ ಅಧಿಕೃತ ಭಾಷೆ ಜರ್ಮನ್ ಶಿಕ್ಷಣ 6-14 ವರ್ಷದ ವರೆಗಿನವರಿಗೆ ಕಡ್ಡಾಯ ಶಿಕ್ಷಣ, ಶೇ:99 ಸಾಕ್ಷರತೆ.






ಬಿಸ್ಮಾರ್ಕ

otto-bismarck.jpg


ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

ಈ ಕೆಳಗೆ ಕೆಲವು ಅಂತರ್ಜಾಲ ತಾಣಗಳ ಬಗ್ಗೆ ಲಿಂಕ್ ಗಳಿದ್ದು ಅವುಗಳ ಮೂಲಕ ಜರ್ಮನಿ ಏಕೀಕರಣದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು. ಜರ್ಮನಿ ಏಕೀಕರಣ,ಕಾರಣ. ಘಟನೆಗಳು,ಏಕೀಕರಣಕ್ಕಾಗಿ ಶ್ರಮಿಸಿದ ಬಿಸ್ಮಾರ್ಕನ ರಾಜಕೀಯ ನೀತಿ,ಅದರ,ಪರಿಣಾಮ ಇವುಗಳ ಮಾಹಿತಿಯನ್ನು ಅರ್ಥ ಪೂರ್ಣವಾಗಿ ಬೋಧಿಸಬಹುದು.

  1. ಜರ್ಮನಿ ಏಕೀಕರಣದ ಬಗ್ಗೆ ಮಾಹಿತಿಗಾಗಿ ಈ ಲಿಂಕ್ ಬಳಸಬಹದು. ಜರ್ಮನಿ ಏಕೀಕರಣದ ಹಂತಗಳು,ಏಕೀಕರಣದಲ್ಲಿ ಬಿಸ್ಮಾರ್ಕನ ಪಾತ್ರದ ಬಗ್ಗೆ ಈ ಲಿಂಕ್ ಮೂಲಕ ಆಂಗ್ಲ ಭಾಷಾ ಮಾಹಿತಿ ಪಡೆಯಬಹುದು.

ಜರ್ಮನಿ ಏಕೀಕರಣದ ಬಗ್ಗೆ ತಿಳಿಯಲು ಈ ಲಿಂಕನ್ನು ಬಳಸಿ

ಜರ್ಮನಿಯ ಏಕೀಕರಣದ ನಕಾಶೆ

ಜರ್ಮನಿಯ ಕ್ರಾಂತಿಯ ಬಗ್ಗೆ ಉಪಯುಕ್ತ ವೀಡಿಯೊ

ಜರ್ಮನಿಯ ಏಕೀಕರಣದಲ್ಲಿ ಬಿಸ್ಮಾರ್ಕನ ಪಾತ್ರದ ಬಗ್ಗೆ ತಿಳಿಯಲು ಉಪಯುಕ್ತ ವೀಡಿಯೊ

ಈ ಕೆಳಗಿನ ಲಿಂಕನ್ನು ಬಳಸಿ ಜರ್ಮನಿ ಏಕೀಕರಣದ ವಿವಿಧ ಹಂತಗಳನ್ನು ನಕಾಶೆಯ ಮೂಲಕ ತಿಳಿಯಬಹುದಾಗಿದೆ

ಸಂಬಂಧ ಪುಸ್ತಕಗಳು

1.ಆಧುನಿಕ ಯುರೋಪ್ ಇತಿಹಾಸ- ಡಾ.ಡಿ.ಟಿ.ಜೋಶಿ

2.ಆಧುನಿಕ ಯುರೋಪ್ ಇತಿಹಾಸ- ಪಾಲಾಕ್ಷ

ಬೋಧನೆಯ ರೂಪರೇಶಗಳು

4.4.1ಜರ್ಮನಿಯ ಏಕೀಕರಣ

ಆಧುನಿಕ ಯುರೋಪಿನ ಇತಿಹಾಸದಲ್ಲಿ ನಡೆದ ಮಹತ್ವದ ಘಟನೆ ಜರ್ಮನಿಯ ಏಕೀಕರಣ. ಮುಖ್ಯವಾಗಿ ಇದು ಬಿಸ್ಮಾರ್ಕನ ದೂರದೃಷ್ಟಿಯ ಫಲ. ಬಿಸ್ಮಾರ್ಕನು ಅನುಸರಿಸಿದ ವಿದೇಶಾಂಗ ನಿತಿಯಿಂದಾಗಿ ಬಲಿಷ್ಠ ದೇಶವಾಗಿ ರೂಪುಗೊಂಡ ಜರ್ಮನಿ ಮುಂದೆ ಎರಡು ಮಹಾಯುದ್ಧಗಳಿಗೆ ಕಾರಣವಾದದ್ದು 20 ನೇ ಶತಮಾನದ ದೊಡ್ಡ ದುರಂತ .

ಪ್ರಮುಖ ಪರಿಕಲ್ಪನೆಗಳು #1 ಜರ್ಮನಿ ಏಕೀಕರಣ

  • ಹಿನ್ನೆಲೆ
  • ಕಾರಣಗಳು
  • ಜರ್ಮನಿ ಏಕೀಕರಣದ ಪ್ರಧಾನ ಶಿಲ್ಪಿ ಬಿಸ್ಮಾರ್ಕ್
  • ಜರ್ಮನಿ ಏಕೀಕರಣದ ಪ್ರಧಾನ ಘಟನೆಗಳು

ಕಲಿಕೆಯ ಉದ್ದೇಶಗಳು

  1. ಜರ್ಮನಿ ಏಕೀಕರಣದ ಬಗ್ಗೆ ಮಾಹಿತಿ ಪಡೆಯುವುದು.
  2. ಜರ್ಮನಿ ಏಕೀಕರಣಕ್ಕೆ ಕಾರಣಗಳನ್ನು ಪಟ್ಟಿ ಮಾಡುವರು.
  3. ಜರ್ಮನಿ ಏಕೀಕರಣದಲ್ಲಿ ಬಿಸ್ಮಾರ್ಕನ ಪಾತ್ರ ಗುರುತಿಸುವುದು.
  4. ಬಿಸ್ಮಾರ್ಕನ ವಿದೇಶಾಂಗ ನೀತಿಯನ್ನು ತಿಳಿಯುವುದು.
  5. ಏಕೀಕರಣದ ನಂತರದಲ್ಲಿ ಯುರೋಪ್ ನಲ್ಲಿ ಸಂಭವಿಸಿದ ಮೊದಲ&ಎರಡನೇ ಮಹಾಯುದ್ಧದಲ್ಲಿ ಬಿಸ್ಮಾರ್ಕನ ಅತಿಯಾದ ರಾಷ್ಟ್ರಿಯ ನೀತಿಯ ಪಾತ್ರ ಗುರುತಿಸುವುದು.
  6. ಜರ್ಮನಿಯ ಏಕೀಕರಣಕ್ಕೆ ಕಾರಣವಾದ ಸನ್ನಿವೇಶವನ್ನು ಅರಿಯುವರು. .
  7. ಜರ್ಮನಿಯ ಏಕೀಕರಣಕ್ಕಾಗಿ ಬಿಸ್ಮಾರ್ಕನು ಮಾಡಿದ ಯುದ್ಧಗಳ ಬಗ್ಗೆ ತಿಳಿದುಕೊಳ್ಳವರು.

ಶಿಕ್ಷಕರಿಗೆ ಟಿಪ್ಪಣಿ

ಪ್ರಪಂಚ ಕಂಡ ಕೆಲವು ಪ್ರಸಿದ್ಧವಾದ ಏಕೀಕರಣ ಚಳುವಳಿಗಳಲ್ಲಿ ಜರ್ಮನಿಯ ಏಕೀಕರಣ ಚಳುವಳಿಯು ಒಂದು. ಇಟಲಿ ಏಕೀಕರಣ ಹಾಗೂ ಜರ್ಮನಿಯ ಏಕೀಕರಣವು ಜೊತೆ ಜೊತೆಯಲ್ಲಿ ಸಾಗಿದವು. ಈ ಅಧ್ಯಾಯದ ಜೊತೆ ಸ್ವಾತೊತ್ರ್ಯಾ ನಂತರ ನಡೆದ ಭಾರತದ ಏಕೀಕರಣ ಮತ್ತು ಕರ್ನಾಟಕದ ಏಕೀಕರಣಗಳನ್ನು ಸಹಸಂಬಂಧಿಸುವುದರ ಮೂಲಕ ಮಕ್ಕಳ ಕಲಿಕೆಗೆ ಪ್ರೊತ್ಸಾಹಿಸಬಹುದು. ಹೆಚ್ಚಿನ ಮಾಹಿತಿಗೆ ಮೇಲೆ ಒದಗಿಸಲಾಗಿರುವ ಲಿಂಕ್ ಗಳನ್ನು ಗಮನಿಸಬಹುದು.ಶಿಕ್ಷಕರು ಈ ಘಟಕದ ಮೂಲಕ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಮನೋಭಾವನೆ ಮೂಡಿಸುವ ಪ್ರಯತ್ನವನ್ನು ಮಾಡಬಹುದು. ಜೊತೆಗೆ ಅತಿಯಾದ ರಾಷ್ಟ್ರೀಯ ಮನೋಭಾವನೆಯಿಂದ ಉಂಟಾಗುವ ಪರಿಣಾಮ ತಿಳಿಸುವುದು.ಸಂಕುಚಿತ ರಾಷ್ಟ್ರೀಯ ಮನೋಭಾವನೆಯು ದೇಶದ ಅವನತಿಗೂ ಕಾರಣವಾಗಬಹುದು ಎನ್ನುವ ಬಗ್ಗೆ ಜಾಗೃತಿ ಮೂಡಿಸ ಬಹುದು.ಜರ್ಮನಿಯ ವಿಸ್ತರಣಾ ನೀತಿ ಮುಂದೆ ಮದಲ&ಎರಡನೇ ಮಹಾಯುದ್ಧಕ್ಕೆ ಕಾರಣ ಎನ್ನುವುದರ ಬಗ್ಗೆ ತಿಳಿಸುವುದು.

ಚಟುವಟಿಕೆ #1 ನಕಾಶೆ ರಚಿಸುವುದು

ಜರ್ಮನಿ ಏಕೀಕರಣದ ವಿವಿಧ ಹಂತಗಳ ನಕಾಶೆ ರಚಿಸುವುದು.

  • ಅಂದಾಜು ಸಮಯ : 45 ನಿಮಿ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :ಪೇಪರ್, ಪೆನ್, .ಡ್ರಾಯಿಂಗ್ ಹಾಳೆ .
  • ಪೂರ್ವಾಪೇಕ್ಷಿತ/ ಸೂಚನೆಗಳು :ವಿದ್ಯಾರ್ಥಿಗಳನ್ನು ಗುಂಪುಗಳಾಗಿ ವಿಂಗಡಿಸುವುದು.ಜರ್ಮನಿ ಏಕೀಕರಣಕ್ಕೆ ಸಂಬಂಧಿಸಿದ ವಿವಿಧ ಹಂತಗಳ ಬಗ್ಗೆ ಮಾಹಿತಿ ನೀಡುವುದು.
  • ಬಹುಮಾಧ್ಯಮ ಸಂಪನ್ಮೂಲಗಳು:---:----------
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು,ಗ್ರಂಥಾಲಯ ಬಳಕೆ
  • ಅಂತರ್ಜಾಲದ ಸಹವರ್ತನೆಗಳು: ಜರ್ಮನಿ ಏಕೀಕರಣದ ವಿವಿಧ ಹಂತಗಳ ನಕಾಶೆಯನ್ನು ಡೌನ್ ಲೋಡ್ ಮಾಡಿಕೊಳ್ಳುವುದು.
  • ವಿಧಾನ:ಗುಂಪುಗಳಲ್ಲಿ ವಿಂಗಡಣೆಯಾದ ವಿದ್ಯಾರ್ಥಿಗಳು ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸುವುದು.
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು (ವಿಷಯದ ಗ್ರಹಿಕೆ.ಗಾಗಿ)
  • .ಜರ್ಮನಿಯ ನೆರೆಯ ದೇಶಗಳನ್ನು ಹೆಸರಿಸಿರಿ 2.ಜರ್ಮನಿ ಏಕೀಕರಣ ಪೂರ್ಣಗೊಂಡ ವರ್ಷ ಯಾವುದು?

ಚಟುವಟಿಕೆ #ಬಿಸ್ಮಾರ್ಕ್ ಜರ್ಮನಿ ಏಕೀಕರಣದ ಪ್ರಧಾನ ಶಿಲ್ಪಿ

  • ಬಿಸ್ಮಾರ್ಕ್ ಜರ್ಮನಿ ಏಕೀಕರಣದ ಪ್ರಧಾನ ಶಿಲ್ಪಿ " ಎಂದು ಕರೆಯಲು ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿಸುವುದು.
  • ಅಂದಾಜು ಸಮಯ-45 ನಿಮಿ‍‍ಷ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು -ಪೇಪರ್, ಪೆನ್, ಪಠ್ಯ ಪುಸ್ತಕ.
  • ಪೂರ್ವಾಪೇಕ್ಷಿತ/ ಸೂಚನೆಗಳು -ಪ್ರತಿಯೊಬ್ಬರಿಗೂ ಒಂದೊಂದು ಕಾಗದದ ಹಾಳೆಗಳನ್ನು ನೀಡಬೇಕು. ಪಾಠಪುಸ್ತಕವನ್ನು ಹತ್ತು ನಿಮಿಷ ಓದಿಕೊಳ್ಳಲು ಹೇಳಬೇಕು. ನಂತರ ಪ್ರತಿಯೊಬ್ಬರೂ ಬಿಸ್ಮಾರ್ಕ್ ಜರ್ಮನಿ ಏಕೀಕರಣದ ಶಿಲ್ಪಿ ಎಂಬ ಮಾತನ್ನು ಸ್ಪಷ್ಟಪಡಿಸುವ ಅಂಶಗಳನ್ನು ಪಟ್ಟಿ ಮಾಡಲು ಹೇಳುವುದು. ಇದಕ್ಕಾಗಿ ಹತ್ತು ನಿಮಿಷ ಮೀಸಲಿಡುವುದು. ನಂತರ ಮಂಡನೆ ಮಾಡಲು ಹೇಳುವುದು. ದೊಡ್ಡ ಗಾತ್ರದ ತರಗತಿಯಾಗಿದ್ದರೆ ತರಗತಿಯನ್ನು ಮಕ್ಕಳ ಸಂಖ್ಯೆಗನುಗುಣವಾಗಿ ೫ ರಿಂದ ೧೦ ರವರೆಗೆ ಗುಂಪು ಮಾಡಿ ನಾಯಕನಿಂದ ಮಂಡನೆ ಮಾಡಿಸಬೇಕು.
  • ಬಹುಮಾಧ್ಯಮ ಸಂಪನ್ಮೂಲಗಳು-ಗ್ರಂಥಾಲಯ ಬಳಕೆ
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು-
  • ವಿಧಾನ-ಗುಂಪುಗಳಲ್ಲಿ ವಿಂಗಡಣೆಯಾದ ವಿದ್ಯಾರ್ಥಿಗಳು ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸುವುದು.
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು
  1. ಜರ್ಮನಿಯ ಏಕೀಕರಣದಲ್ಲಿ ಬಿಸ್ಮಾರ್ಕನ ಪಾತ್ರವೇನು?
  1. ಜರ್ಮನಿಯ ಏಕೀಕರಣಕ್ಕಾಗಿ ಬಿಸ್ಮಾರ್ಕನು ಪ್ರಾನ್ಸ್ ಜೊತೆ ಅನುಸರಿಸಿದ ನೀತಿ ಏನು?

===ಚಟುವಟಿಕೆ #4=== 04.ಬಿಸ್ಮಾರ್ಕ್ ಮತ್ತು ಸರ್ಧಾರ್ ವಲ್ಲಭಭಾಯಿ ಪಟೇಲರ ನಡುವಿನ ಸಾಮ್ಯತೆಗಳ ಒಂದು ತುಲನಾತ್ಮಕ ಅಧ್ಯಯನ

  • ಅಂದಾಜು ಸಮಯ - 45 ನಿಮಿ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು - ಪಠ್ಯ ಪುಸ್ತಕ, ಪೇಪರ್, ಪೆನ್
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ - ಬಿಸ್ಮಾರ್ಕ್ ಮತ್ತು ಸರ್ಧಾರ್ ವಲ್ಲಭಭಾಯಿ ಪಟೇಲರ ನಡುವಿನ ಸಾಮ್ಯತೆಗಳ ಎಂಬ ಮಾತನ್ನು ಸ್ಪಷ್ಟಪಡಿಸುವ ಅಂಶಗಳನ್ನು ಪಟ್ಟಿ ಮಾಡಲು ಹೇಳುವುದು. ಇದಕ್ಕಾಗಿ ಹತ್ತು ನಿಮಿಷ ಮೀಸಲಿಡುವುದು. ನಂತರ ಮಂಡನೆ ಮಾಡಲು ಹೇಳುವುದು. ದೊಡ್ಡ ಗಾತ್ರದ ತರಗತಿಯಾಗಿದ್ದರೆ ತರಗತಿಯನ್ನು ಮಕ್ಕಳ ಸಂಖ್ಯೆಗನುಗುಣವಾಗಿ ೫ ರಿಂದ ೧೦ ರವರೆಗೆ ಗುಂಪು ಮಾಡಿ ನಾಯಕನಿಂದ ಮಂಡನೆ ಮಾಡಿಸಬೇಕು.
  • ಬಹುಮಾಧ್ಯಮ ಸಂಪನ್ಮೂಲಗಳು -
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು - ಗ್ರಂಥಾಲಯ ಬಳಕೆ
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ - ಗುಂಪುಗಳಲ್ಲಿ ವಿಂಗಡಣೆಯಾದ ವಿದ್ಯಾರ್ಥಿಗಳು ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸುವುದು.
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು - 1.ಜರ್ಮನಿಯ ಏಕೀಕರಣದ ವೇಳೆ ಬಿಸ್ಮಾರ್ಕ ಎದುರಿಸಿದ ಸಮಸ್ಯೆಗಳೇನು?.

2.ವಲ್ಲಭಬಾಯಿ ಪಟೇಲರು ಭಾರತದ ಉಕ್ಕಿನ ಮನುಷ್ಯ ಎನ್ನಲು ನೀವು ಕೊಡುವ ಕಾರಣಗಳೇನು?

  • ಪ್ರಶ್ನೆಗಳು

ಯೋಜನೆಗಳು

  1. ಜರ್ಮನಿ ಏಕೀಕರಣದ ಪರಿಣಾಮಗಳು ಈ ಬಗ್ಗೆ ಚರ್ಚಾ ಸ್ಪರ್ಧೆ
  2. .ಕರ್ನಾಟಕ ಏಕೀಕರಣದ ಕುರಿತು ಮಾಹಿತಿ ಸಂಗ್ರಹಿಸುವುದು.

ಸಮುದಾಯ ಆಧಾರಿತ ಯೋಜನೆಗಳು

  1. ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ನಾಯಕರು , ಈ ಬಗ್ಗೆ ಸಮುದಾಯದಿಂದ ಮಾಹಿತಿ ಸಂಗ್ರಹ.
  2. ದೇಶದ ವಿಭಜನೆಗೆ ಕಾರಣಗಳು& ಅವುಗಳನ್ನು ತಡೆಗಟ್ಟುವಲ್ಲಿ ನಾಗರಿಕರ ಪಾತ್ರ , ಈ ಬಗ್ಗೆ ಸಮುದಾಯದ ಜೊತೆ ಸಂವಾದ.
  3. ಪ್ರಸ್ತುತ ಭಾರತದ ಸಮಸ್ಯೆ ನಿವಾರಣೆಗೆ ಸರದಾರ್ ವಲ್ಲಭಬಾಯ್ ಪಟೇಲ್ ತರದ ನಾಯಕತ್ವ ಅವಶ್ಯವಿದೆಯೇ?

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ