ನಾಲ್ಕನೇ ದಿನ ವರದ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೫:೧೧, ೧೯ ಜುಲೈ ೨೦೧೪ ರಂತೆ Naganna sahabad (ಚರ್ಚೆ | ಕಾಣಿಕೆಗಳು) ಇವರಿಂದ
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search
  1. “ಮತ್ತಿಗೆಟ್ಟು ಅನ್ಯರ ಹೊಗಳದಂತೆ |
  2. ದೃತಿಗೆಟ್ಟು ಅನ್ಯರ ಬೇಡದಂತೆ ||
  3. ಎನ್ನನ್ನು ಪ್ರತಿಪಾದಿಸು ಕೂಡಲಸಂಗಮದೇವ ||
  4. ಎಂಬ ಶರಣೋಕ್ತಿಯನ್ನು ನೆನಪಿಸಿಕೊಳ್ಳುತ್ತ ...”
  1. ಪುಸ್ತಕದಿದೊರೆತರಿವು
  2. ಮಸ್ತಕದಿತಳೆದ ಮಣಿ
  3. ಚಿತ್ತದೊಳ್ ಬೇಳದರಿವು
  4. ತರು ತೊಳೆದ ಪುಷ್ಪ
  5. ವಸ್ತುಸಾಕ್ಷಾತ್ಕಾರ ಅಂತರಿಕ್ಷಣಿಂದ ಶಾಸ್ತ್ರಿತನದಿಂದಲೋ ಮಂಕುತಿಮ್ಮ
  6. ಎಂಬ ಕಗ್ಗದ ನುಡಿಯನ್ನು ನೆನಪಿಸಿಕೊಳ್ಳುತ್ತ
  1. “ಬಲ್ಲವರ ಒಡೆನಾಟ ಬೆಲ್ಲವ ಮೆದ್ದಂತೆ..” ಎಂಬ ಸರ್ವಜ್ಞನ ವಚನದಂತೆ
  2. ಕಳೆದ ನಾಲ್ಕು ದಿನದ ಬಲ್ಲಿದವರ ಒಡೆನಾಟದಲ್ಲಿ ಒಡೆಮೂಡಿದ ಎಸ್.ಟಿ.ಎಫ್. ಕೋಯರ್‍ನ ದಿನಾಂಕ 18-07-2014 ರ ನಾಲ್ಕನೇ ದಿನದ ಕಾರ್ಯಗಾರದ ವರದಿಯ್ನು ನಾನು ನಾಗಣ್ಣ ಶಾಹಾಬಾದ ಸಹಶಿಕ್ಷಕರು ಸರಕಾರಿ ಪ್ರೌಢಶಾಲೆ ಮದ್ದರಕಿ ತಾ. ಶಹಾಪೂರ ಜಿ.ಯಾದಗಿರ ಮಂಡಿಸುತ್ತಿದ್ದೆನೆ.

# ದಿನದ ಬೆಳಗಿನ ಅವಧಿ ಎಂದಿನಂತೆ 9.30 ಕ್ಕೆ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಹಾಗೂ ಶಿಬಿರಾರ್ಥಿಗಳ ಸಕಾಲಿಕ ಹಾಜರಾತಿಯೊಂದಿಗೆ ಪ್ರಾರಂಭವಾಯಿತು.

  1. 9.30 ರಿಂದ 11 ರವರಗೆ ಕೋಯರ ಸಂಪನ್ಮೂಲವನ್ನು ಸಂಪಾದಿಸುವ ಕಾರ್ಯ ಜರುಗಿತು.
  2. ಪೂರ್ವ ನಿಗಧಿತ ಕಾರ್ಯ ಹಂಚಿಕೆಯಂತೆ ತಂಡವಾರು ಎನ್.ಸಿ.ಆರ್.ಟಿ ಮತ್ತು ರಾಜ್ಯ ಪಠ್ಯವಸ್ತುವಿನ ತೌಲನಿಕ ಅಂಶಗಳ ವಿಷಯ ಮಂಡನೆ ಮಾಡಿದರು
  1. ಮೊದಲನೇ ತಂಡ - ಪ್ರಾನ್ಸ ಕಾಂತಿ ಅಧ್ಯಾಯವನ್ನು -ಭೀಮಸೇನ ಜೋಲಾಪೂರೆ ತಂಡದವರು ವಿಷಯ ಮಂಡನೆ ಮಾಡಿದರು.
  1. ಎರಡನೇ ತಂಡದ ವತಿಯಿಂದ ಬಸವರಾಜ ನಾಯ್ಕ್ ಮತ್ತು ಸುಂದರೇಶಮೂರ್ತಿ, ಪ್ರೇಮನಗೌಡ ಇವರುಗಳು “ಹಗಲು ಗನಸು” ಪುಸ್ತಕದಲ್ಲಿನ ಶೈಕ್ಷಣಿಕ ಚಿಂತೆನೆಗಳನ್ನು ಮತ್ತು ಮೌಲ್ಯಗಳ ನ್ನು ಪ್ರಸ್ತುತ ಪಡಿಸಿದರು.
  1. ಮೂರನೇ ತಂಡದ ವತಿಯಿಂದ ಭೀಮಪ್ಪ ಸಾವಳಗಿ, ಸತೀಶ ಮತ್ತು ವಿನಯಕುಮಾರ ನಾಯ್ಕ್ ರವರುಗಳು ಅರ್ಥಶಾಸ್ತ್ರದ ಭಾತರದ ಆರ್ಥಿಕ ವ್ಯವಸ್ಥೆಯ ವಲಯಗಳು ವಿಷಯ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದರು.
  1. ನಾಲ್ಕನೇ ತಂಡದ ವತಿಯಿಂದ ಜಯಶ್ರೀ ಮೆಡಂ , ರಾಧಾ ಕುಲ್ಕರ್ಣಿ ಮೇಡಂ , ಧಾನಮ್ಮ ಮೆಡಂ ಸೌಮ್ಯ ಮೇಡಂ ಇವರುಗಳು ಎನ್.ಸಿ.ಎಫ್ ಪೋಜಿಸಿಯನ್ ಪೇಪರ ಅಂಶಗಳನ್ನು ಕುರಿತು ವಿಸ್ತೃತವಾಗಿ ತಮ್ಮ ವಿಚಾರಗಳನ್ನು ಮಂಡಿಸಿದರು.
  1. ಈ ಸಮಯದಲ್ಲಿ ನಮಗೆ ಪ್ರೇರಕರು ಮಾರ್ಗದರ್ಶಕರು ಆದ ಗುರು ಸರ್, ರಾಧಾ ಮೆಡಂ ಹಾಗೂ ತಾಂತ್ರಿಕ ಸಹಾಯಕರಾಗಿ ರಾಕೇಶ ಸರ್ ಇವರುಗಳು ತಮ್ಮ ಅಮೂಲ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು
  2. ಚಾಹದ ವಿರಾಮದ ನಂತರ ಗುರು ಸರ್‍ರವರು ಕೋಯರ್ ಸಂಪನ್ಮೂಲ ಸಂಪಾಧನೆಯಲ್ಲಿ ಪ್ರಮುಖ ಅಂಶಗಳನ್ನು ತಿಳಿಸಿದರು
  3. ನಂತರ ಸಮಯ 1.30 ರುಚಿಕಟ್ಟಾದ ಊಟವನ್ನು ಸವಿದೇವು
  1. 2 ಗಂಟೆಯಿಂದ 6ಗಂಟೆಯವರೆಗೆ ಕಾರ್ಯಾಗಾರದಲ್ಲಿ ಕೋಯರ್ ಸಂಪನ್ಮೂಲ ಸಂಪಾಧನೆಯಲ್ಲಿ ತೊಡಗಿದೆವು ಆಗ ರಾಧಾ ಮೇಡಂರವರು ನಾವುಗಳು ಕೇಳುವ ಸಲಹೆಗಳಿಗೆ ಸ್ವಲ್ಪವು ಬೇಸರ ಮಾಡಿಕೊಳ್ಳದೇ ನಮ್ಮ ತಪ್ಪುಗಳನ್ನು ತಿದ್ದುತ್ತಾ ಸಲಹೆಗಳನ್ನು ನೀಡಿದರು ಮತ್ತು ನಾಳೆ ದಿನದ ಮನೆಕೆಲಸಗಳನ್ನು ಹಂಚಿಕೆಮಾಡುವುದರೊಂದಿಗೆ ನಾಲ್ಕನೇ ದಿನದ ಕಾರ್ಯಾಗಾರ ಮುಕ್ತಾಯಗೊಂಡಿತ್ತು.

ವರದಿಯನ್ನು ತಯಾರಿಸಿದವರು - ನಾಗಣ್ಣ ಶಾಹಾಬಾದ ಸಹಶಿಕ್ಷಕರು ಸರಕಾರಿ ಪ್ರೌಢಶಾಲೆ ಮದ್ದರಕಿ ತಾ. ಶಹಾಪೂರ ಜಿ.ಯಾದಗಿರ