ಬೆಳೆ ಋತುಗಳು ಮತ್ತು ಬೆಳೆಯ ಮಾದರಿ ನಿರ್ದರಿಸುವ ಅಂಶಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೫:೩೯, ೨ ಆಗಸ್ಟ್ ೨೦೧೪ ರಂತೆ Harischandra (ಚರ್ಚೆ | ಕಾಣಿಕೆಗಳು) ಇವರಿಂದ (→‎ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search


ಚಟುವಟಿಕೆ - ಕಲಿಕಾ ನಿಲ್ದಾಣ

ಅಂದಾಜು ಸಮಯ

ಒಂದು ಅವಧಿ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  1. ಡ್ರಾಯಿಂಗ್ ಶೀಟ್
  2. ಸ್ಕೆಚ್ ಪೆನ್
  3. ಖಾಲಿ ಕಾಗದ
  4. ಪೆನ್
  5. ಲೈಬ್ರೇರಿ
  6. ಕಂಪ್ಯೂಟರ್
  7. ಹಳೆಯ ಪೇಪರ್ ಮಾಹಿತಿ

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

  1. ಶಿಕ್ಷಕರು ಮೊದಲೇ ಡ್ರಾಯಿಂಗ್ ಶೀಟ್ನಲ್ಲಿ ವಿವರವನ್ನು ಬರೆದು ಕೊಳ್ಳುವುದು.
  2. ಶಿಕ್ಷಕರು ಮಾಹಿತಿಯನ್ನು ಅನುಕೂಲಿಸುವ ಸಂದರ್ಬದಲ್ಲಿ ಸ್ಥಳೀಯ ಕೃಷಿಗೆ ಸಂಬಂದಿಸಿದ ಮಾಹಿತಿಯೊಂದಿಗೆ ಹೋಲಿಸಬೇಕು.
  3. ವಿದ್ಯಾರ್ಥಿ ಊರಿನಲ್ಲಿ ಖಾರಿಫ್ ಬೆಳೆ ಮತ್ತು ರಾಬಿ ಬೆಳೆ ಯಾವುದು ಎಂದು ತಿಳಿಸ ಬೇಕು
  4. ಸಾಮಾಜಿಕ ಅಂಶಗಳ ಬಗ್ಗೆ ಇರುವ ಕಲ್ಪನೆಯನ್ನು ವೈಜ್ಞಾನಿಕವಾಗಿ ವಿಶ್ಲೇಶಿಸಬೇಕು.
  5. ಸಾವಯವ ಕೃಷಿಯಲ್ಲಿ ಆಸಕ್ತಿ ಬರುವಂತೆ ಮಾಡುವುದು.
  6. ವ್ಯವಸಾಯದಲ್ಲಿಯೂ ಭವಿಷ್ಯ ರೂಪಿಸಬಹುದು ಎಂದು ಭರವಸೆ ಮೂಡಿಸಬೇಕು.

ಬಹುಮಾಧ್ಯಮ ಸಂಪನ್ಮೂಲಗಳ

  1. ಪೇಪರ್
  2. ಇಂಟರ್ನೆಟ್
  3. ಲೈಬ್ರೇರಿ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

  1. ಸ್ಥಳೀಯ ರೈತರಿಂದ ಮಾಹಿತಿಯನ್ನು ಕೊಡಿಸುವುದು.
  2. ಕೃಷಿ ಅಧಿಕಾರಿಯನ್ನು ಶಾಲೆಗೆ ಆಹ್ವಾನಿಸಿ ವೈಜ್ಞಾನಿಕ ಬೇಸಾಯದ ಮಾಹಿತಿ ಕೊಡುವುದು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

  1. ಕೃಷಿ ಬಗ್ಗೆ ಸಮಗ್ರ ಮಾಹಿತಿ ಇದೆ, ಕೃಷಿ ಇತಿಹಾಸವಿದೆ,ಉತ್ಪದನಾ ವಿಧಾನದ ಬಗ್ಗೆ ಮಾಹಿತಿ ಇದೆ ಇಲ್ಲಿ ಕ್ಲಿಕ್ ಮಾಡಿ


  1. ತರಕಾರಿ ಕೃಷಿ ಬಗ್ಗೆ ಮಾಹಿತಿ ಇದೆ.ಇದನ್ನು ಕ್ಲಿಕ್ ಮಾಡಿ

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  1. ಶಿಕ್ಷಕರು ಮೊದಲು ವಿದ್ಯಾರ್ಥಿಗಳ ಗುಂಪುಗಳನ್ನು ಮಾಡುವುದು.
  2. ಪ್ರತೀ ಗುಂಪಿನಿಂದ ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯನ್ನು ಪ್ರತ್ಯೇಕಿಸಿ ಮತ್ತೊಂದು ಗುಂಪು ರಚಿಸುವುದು.
  3. ಶಿಕ್ಷಕರು ಮೊದಲೇ ತಯಾರಿಸಿಟ್ಟ ಚಾರ್ಟ್ ನ್ನು ( ವಿದ್ಯಾರ್ಥಿ ಗುಂಪಿಗೆ ಸರಿಯಾಗಿ) ಕೆಲವು ದೂರದ ಅಂತರದಲ್ಲಿ ತೂಗುಹಾಕುವುದು.
  4. ಆ ತೂಗು ಹಾಕಿದ ಚಾರ್ಟ್ ಗಳೇ ಕಲಿಕಾ ನಿಲ್ದಾಣಗಳು.
  5. ವಿದ್ಯಾರ್ಥಿಗಳ ಗುಂಪುಗಳು ಪ್ರದಕ್ಷಿಣೆ ಹಾಕುತ್ತಾ ಪ್ರತೀ ನಿಲ್ದಾಣದ ಹತ್ತಿರ ಬರುವುದು.
  6. ವಿದ್ಯಾರ್ಥಿಗಳು ಪ್ರತೀ ನಿಲ್ದಾಣದಲ್ಲಿ ಬರೆದಿರುವುದನ್ನು ಓದುವುದು.ಮನನ ಮಾಡುವುದು.
  7. ಪ್ರತೀ ನಿಲ್ದಾಣದಲ್ಲಿ ನಿಲುಗಡೆಯ ಸಮಯ 5 ನಿಮಿಷ. 5 ನಿಮಿಷದಲ್ಲಿ ಚಾರ್ಟ್ ನಲ್ಲಿ ಬರೆದಿರುವುದನ್ನು ಓದಬೇಕು.
  8. ಪ್ರತಿಭಾವಂತರ ಗುಂಪು ಈ ಎಲ್ಲಾ ಚಟುವಟಿಕೆಯನ್ನು ವೀಕ್ಷಿಸುತ್ತಾ ಇರುತ್ತದೆ.
  9. ಪ್ರತಿಭಾವಂತರ ಗುಂಪು, ಇತರೇ ವಿದ್ಯಾರ್ಥಿಗಳ ಗುಂಪಿಗೆ ಸಹಾಯವನ್ನು ಮಾಡುತ್ತಿರುತ್ತದೆ. ಅವರಿಗೆ ಬರುವ ಕಲಿಕಾ ಸಮಸ್ಯೆಯನ್ನು ಪರಿಹರಿಸುತ್ತದೆ.
  10. ವಿದ್ಯಾರ್ಥಿಗಳ ಗುಂಪು ಪ್ರತೀಯಂದು ನಿಲ್ದಾಣದ ಹತ್ತಿರ ಬಂದ ಮೇಲೆ ಅವರವರ ಸ್ಥಳದಲ್ಲಿ ಕುಳಿತುಕೊಳ್ಳಲು ಹೇಳುವುದು.
  11. ನಂತರ ತಾವು ಪ್ರತೀ ನಿಲ್ದಾಣದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಶಿಸುತ್ತದೆ.
  12. ನಂತರ ಪ್ರತೀ ಗುಂಪಿನವರು ತಾವು ಸಂಗ್ರಹಿಸಿದ ಮಾಹಿತಿಯನ್ನು ಮಂಡಿಸುವರು.
  13. ಶಿಕ್ಷಕರು ಈ ಸಂದರ್ಬದಲ್ಲಿ ಚರ್ಚಿಸುವರು.ಲೈಬ್ರೇರಿಯನ್ನು ಉಪಯೋಗಿಸುವರು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ನಮ್ಮ ಕೃಷಿಯು ಹಿಂದುಳಿಯಲು ಕಾರಣ ಜನರ ನಿರಾಸಕ್ತಿ. ಈ ಹೇಳಿಕೆಯನ್ನು ಒಪ್ಪುವಿರಾ?
  2. ರೈತರ ಆತ್ಮಹತ್ಯೆಯನ್ನು ತಡೆಯಲು ನೀವು ಕೊಡುವ ಸಲಹೆಗಳು ಏನು?
  3. ವಿದ್ಯಾವಂತರು ಕೃಷಿಯಲ್ಲಿ ತೊಡಗುವುದರಿಂದ ಕೃಷಿಯಲ್ಲಿ ಬದಲಾವಣೆ ಸಾಧ್ಯವಿದೆಯೇ? ಹೇಗೆ?
  4. ಸಂಪ್ರದಾಯ, ಮೂಢನಂಬಿಕೆ, ಅನಕ್ಷರತೆ ಕೃಷಿಯ ಮೇಲೆ ಪ್ರಭಾವ ಬೀರುತ್ತಿದೆ ಎಂದು ಹೇಗೆ ಹೇಳಬಹುದು?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಪ್ರಮುಖ ಖಾರಿಫ್ ಬೆಳೆಗಳು ಯಾವುವು?
  2. ರಾಬಿ ಬೆಳೆ ಎಂದರೇನು?
  3. ಜೆಡ್ ಬೇಸಾಯ ಎಂದರೇನು?

ಪ್ರಶ್ನೆಗಳು

  1. ಬೆಳೆಯ ಮಾದರಿಯನ್ನು ನಿರ್ಧರಿಸುವ ಅಂಶ ಯಾವುದು?
  2. ವ್ಯವಸಾಯದ ಅವಧಿಗಳು ಯಾವುವು?

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಭೂ_ಬಳಕೆ_ಹಾಗೂವ್ಯವಸಾಯ