ಭಾರತದ ಮಣ್ಣುಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

  1. ಕರ್ನಾಟಕ ಪಠ್ಯಪುಸ್ತಕ ಭಾರತದ ಮಣ್ಣುಗಳು

ಮತ್ತಷ್ಟು ಮಾಹಿತಿ

ನೈರ್ಸಗಿಕ, ಮಾನವ ನಿರ್ಮಿತ ಹಾಗೂ ಮಾನವ ಸಂನ್ಮೂಲಗಳಲ್ಲಿ ನೈರ್ಸಗಿಕ ಸಂಪನ್ಮೂಲಗಳಲ್ಲೊಂದಾದ ಮಣ್ಣು ಅತ್ಯಂತ ಮಹತ್ವದ ಸಂಪನ್ಮೂಲವಾಗಿದೆ. ಮಣ್ಣಿನ ಅಸ್ಥಿತ್ವತ್ವವಿಲ್ಲದೆ ಜೀವಿಗಳ ಅಸ್ಥಿತ್ವವಿಲ್ಲ . ಅತ್ಯಂತ ಕ್ರಿಯಾಶೀಲ ಪ್ರಾಣಿಯಾದ ಮಾನವನು ತನ್ನ ಅಗತ್ಯವನ್ನು ಪೂರೈಸುವುದಕ್ಕಾಗಿ ಮಣ್ಣನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಮಣ್ಣಿನ ಮಾಲಿನ್ಯ ಹಾಗೂ ಸವೆತಕ್ಕೂ ಕಾರಣೀಭೂತನಾಗುತ್ತಿದ್ದಾನೆ. ಮಣ್ಣನ್ನು ಸಂರಕ್ಷಿಸುವುದು ಹಾಗೂ ಸರಿಯಾಗಿ ನಿರ್ವಹಿಸುವುದು ಮಾನವ ಜನಾಂಗದ ಆದ್ಯ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾಗಿದೆ. 
      ಯಾವುದೇ ಒಂದು ವಸ್ತುವನ್ನುಮಾನವನು ಉಪಯೋಗಿಸಿದಾಗ ಮಾತ್ರ ಆ ವಸ್ತು ಸಂಪನ್ಮೂಲವೆನಿಸುವುದು. ಹಾಗೆಯೇ ಮಣ್ಣು ಕೂಡಾ. ಮಣ್ಣಿನ ಸವೆತ ಹಾಗೂ ಮಣ್ಣಿನ ಮಾಲಿನ್ಯ ತಡೆಗಟ್ಟಿ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೋಳ್ಳಬೇಕು.  ಮಣ್ಣು ಮುಗಿದುಹೋಗಲಾರದ, ಸರ್ವವ್ಯಾಪಿಯಾದ, ಭೌತ ಹಾಗೂ ಭೂ ಸಂಪನ್ಮೂಲವಾಗಿದೆ. ಮಾನವನ ಉಳಿವು & ಅಳಿವು  ಮಣ್ಣನ್ನೆ ಅವಲಂಬಿಸಿದೆ. 
  1. ೧೦ ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಭಾರತದ ಮಣ್ಣುಗಳ ಬಗ್ಗೆ ಸಂಕ್ಷೀಪ್ತವಾಗಿ ವಿವರಿಸಲಾಗಿದೆ.
  2. ಮಣ್ಣು ನಮ್ಮ ರಾಷ್ಟ್ರೀಯ ಪ್ರಮುಖ ಸಂಪತ್ತಾಗಿದ್ದು ,ಇದರ ಸೂಕ್ತ ಬಳಕೆ ಮತ್ತು ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.
  3. ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಬೇಕಾಗಿದೆ .
  4. ಕಾಡು ಕೃಷಿ ಇತ್ತೀಚೆಗೆ ಹೆಚ್ಚು ಪ್ರಚಲಿತದಲ್ಲಿದ್ದು,ಅದನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ.
  5. ಕೇರಳದಲ್ಲಿ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧಿಸಿದೆ.ಆ ಮಾದರಿ ನಾವು ಅಳವಡಿಸಿಕೊಳ್ಳಬೇಕಾಗಿದೆ.
  6. ಭಾರತ ಪ್ರಪಂಚದಲ್ಲಿ ೭ನೇ ಪ್ರಮುಖ ರಾಷ್ಟ್ರವಾಗಿದ್ದು,ಪ್ರಪಂಚದ ಒಟ್ಟು ಭೂ ಕ್ಷೇತ್ರದಲ್ಲಿ ೨.೪ ರಷ್ಟು ಮಾತ್ರ ಭೂಮಿಯನ್ನು ಹೊಂದಿದೆ.
  7. ಜಪಾನ್ ಮಾದರಿಯ ಮೆಟ್ಟಿಲು ಕೃಷಿ ಮತ್ತು ಇಸ್ರೇಲ್ ಮಾದರಿಯ ಹನಿ ನೀರಾವರಿ ಮತ್ತು ತಂ ತು ರು ನೀರಾವರಿಯ ಬಗ್ಗೆ ಅರಿವು ಮೂ ಡಿಸಬೇಕಿದೆ.
  8. ಸಾವಯವ ಕೃಷಿಯಲ್ಲಿನ ಮಹತ್ವ ಮತ್ತು ಭೂ ಮಿಯ ಫಲವತ್ತತೆ ಬಗ್ಗೆ ಮನವರಿಕೆ ಮಾಡಬೇಕಿದೆ.

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

'==ಉಪಯುಕ್ತ ವೆಬ್ ಸೈಟ್ ಗಳು==

ಸಂಬಂಧ ಪುಸ್ತಕಗಳು

  1. ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಯ 10 ನೇ ಯ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ
  2. ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಯ 9 ನೇ ಯ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ
  3. ಭೂಗೋಳ ಸಂಗಾತಿ, ಸಂಪುಟ ೩ [ಡಿ,ಎಸ್.ಆರ್.ಟಿ.ಸಿ.] ಅಧ್ಯಾಯ 1.4 ಮಣ್ಣು ಸಂಪನ್ಮೂಲಗಳು ಪುಟ ಸಂಖ್ಯೆ: 13-28
  4. ಪ್ರಾಕೃತಿಕ ಭೂಗೋಳಶಾಸ್ತ್ರ [ಪಿ. ಮಲ್ಲಪ್ಪ] ಅಧ್ಯಾಯ 12. ಮಣ್ಣು. ಪುಟ ಸಂಖ್ಯೆ: 125-131
  5. NCERT ಪಠ್ಯಪುಸ್ತಕ 8 ನೇ ತರಗತಿ Land,Soil, Water,Natural Vegetation and Wildlife Resources
  6. NCERT ಪಠ್ಯಪುಸ್ತಕ 10 ನೇ ತರಗತಿ Lesson 1 Resources and Development – Land Resources
  7. Tamilnadu-10th Social Science Text book( Engish medium), INDIA-NATURAL RESOURCES, Page no. 139-143
  8. ತಮಿಳುನಾಡಿನ 10ನೇ ತರಗತಿ ಸಮಾಜ ವಿಜ್ಞಾನ(ಕನ್ನಡ ಮಾಧ್ಯಮ)-ಭೂಗೋಳಶಾಸ್ತ್ರ-ಸ್ವಾಭಾವಿಕ ಸಂಪನ್ಮೂಲಗಳು ಪುಟ ಸಂಖ್ಯೆ 156-162
  9. ಏಕಲವ್ಯ ಪಠ್ಯ ಪುಸ್ತಕಗಳು
  10. ಭಾರತದ ಪ್ರಾಕೃತಿಕ ಭೂಗೋಳಶಾಸ್ತ್ರ. _ ಡಾ|| ರಂಗನಾಥ

ಬೋಧನೆಯ ರೂಪರೇಶಗಳು

ಪರಿಕಲ್ಪನೆ 1.ಮಣ್ಣಿನ ಉಗಮ(ಉತ್ಪತ್ತಿ)

ಕಲಿಕೆಯ ಉದ್ದೇಶಗಳು

  • ಮಣ್ಣು ಹೇಗೆ ಉಗಮವಾಗಿದೆ ಎಂಬುದನ್ನು ತಿಳಿಸಬೇಕಾಗಿದೆ
  • ತಮ್ಮ ಸುತ್ತಮುತ್ತಲಿನ ಮಣ್ಣಿನ ಮನವರಿಕೆ ಮಾಡಿಸಬೇಕಾಗಿದೆ

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಭೌತಿಕ ಶೀಥಿಲೀಕರಣದಿಂದ ಮಣ್ಣುಗಳ ಉತ್ಪತ್ತಿ
  2. ಚಟುವಟಿಕೆ ಸಂ 2,ರಾಸಾಯನಿಕ ಶೀಥಿಲೀಕರಣದಿಂದ ಮಣ್ಣುಗಳ ಉತ್ಪತ್ತಿ
  3. ಚಟುವಟಿಕೆ ಸಂ 3,ಜೈವಿಕ ಶೀಥಿಲೀಕರಣದಿಂದ ಮಣ್ಣುಗಳ ಉತ್ಪತ್ತಿ

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಯೋಜನೆಗಳು

  • ವಿವಿಧ ಮಾದರಿಯ ಮಣ್ಣುನ್ನು ಸಂಗ್ರಹಿಸಿ.
  • ಮಣ್ಣಿನ ವಿಧಗಳನ್ನು ಪಟ್ಟಿಮಾಡಿ.
  • ನಿಮ್ಮ ತೋಟ/ಹೊಲದ ಮಣ್ಣಿನಲ್ಲಿ ಯಾವ ಬೆಳೆಗಳನ್ನು ಬೆಳೆಯುತ್ತಾರೆ.ಪಟ್ಟಿ ಮಾಡಿ.

ಸಮುದಾಯ ಆಧಾರಿತ ಯೋಜನೆಗಳು

  • ತಾಲ್ಲೂಕಿನ ಮಣ್ಣು ಪರೀಕ್ಷಾ ಕೇಂದ್ರಕ್ಕೆ ಭೇಟಿನೀಡಿ ನಿಮ್ಮ ತೋಟ/ಹೊಲದ ಮಣ್ಣುನ್ನು ಪರೀಕ್ಷೆ ಮಾಡಿಸಿ ಅದರಲ್ಲಿ ಬೆಳೆಯುವ ಬೆಳೆಗಳ ಬಗ್ಗೆ ನಿಮ್ಮ ತಂದೆ/ಹಿರಿಯರೊಂದಿಗೆ ಚರ್ಚಿಸಿ.
  • ನಿಮ್ಮ ಸುತ್ತಲಿನ ಪರಿಚಿತ ರೈತರೊಂದಿ ಮೆಕ್ಕಲು ಮಣ್ಣು,ಕಪ್ಪು ಮಣ್ಣು,ಕೆಂಪು ಮಣ್ಣು,ಪವಱತ ಮಣ್ಣಿನಲ್ಲಿ ಬೆಳೆಯುವ ಬೆಳೆಗಳನ್ನು ತಿಳಿದುಕೊಳ್ಳಿ

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಹಳೆಯ ಪಠ್ಯಪುಸ್ತಕದ 'ಮಣ್ಣು ಸಂಪನ್ಮೂ ಲಗಳು ' (ನಮ್ಮ ಸಂಪನ್ಮೂ ಲಗಳು ಅಧ್ಯಾಯ) ವಿಷಯಕ್ಕೆ ಹೊಲಿಸಿದಾಗ ಈ ಅಧ್ಯಾಯದಲ್ಲಿ ವಿಷಯವನ್ನು ಸರಳೀಕರಿಸಲಾಗಿದೆ. ಜಂಬಿಟ್ಟಿಗೆ ಮಣ್ಣಿನ ಕೆಂಪು ಬಣ್ಣಕ್ಕೆ ಕಾರಣ ಹಾಗೂ ಮಣ್ಣಿನ ಸವೆತದ ಬಗೆಗಿನ ಮಾಹಿತಿ - ಅರ್ಥ, ಕಾರಣಗಳು, ಪರಿಣಾಮಗಳು , ಮಣ್ಣಿನ ಸಂರಕ್ಷಣೆ ಮತ್ತು ನಿರ್ವಹಣೆಯ ಅರ್ಥ, ವಿಧಾನಗಳನ್ನು ಚೆನ್ನಾಗಿ ನಿಡಲಾಗಿದೆ. ಅದರ ಜೊತೆಗೆ ಈ ಕೆಳಗಿನ ಅಂಶಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸೇರಿಸಬೇಕಾಗಿದೆ ಅಥವಾ ಬದಲಾಯಿಸಬೇಕಾಗಿದೆ .

  1. ಕಪ್ಪು ಮಣ್ಣನ್ನು 'ರೇಗೂರ್ ಮಣ್ಣು' ಹಾಗೂ ಕಪ್ಪು ಮಣ್ಣಿನ ಪ್ರದೇಶವನ್ನು 'ಡೆಕ್ಕನ್ ಟ್ರಾಪ್' ಎಂದು ಕರೆಯಲು ಕಾರಣ
  2. ಕಪ್ಪು ಮಣ್ಣಿನ ಉತ್ಪತ್ತಿ ಹಾಗೂ ಅದರ ಬಣ್ಣಕ್ಕೆ ಕಾರಣ (೯ನೇ ತರಗತಿ ಪಠ್ಯಪುಸ್ತಕದಲ್ಲಿ ಬಸಾಲ್ಟ್ ಶಿಲೆಗಳ ಶಿಥಲೀಕರಣ ಎಂದಿದ್ದರೆ ಈ ಅಧ್ಯಾಯದಲ್ಲಿ ಅಗ್ನಿ ಶಿಲೆಗಳ ಶಿಥಲೀಕರಣದಿಂದ ಉತ್ಪತ್ತಿಯಾಗಿದೆ ಎಂದು ಹೇಳಲಾಗಿದೆ.)
  3. ಕಪ್ಪು ಮಣ್ಣು ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಕಾರಣ
  4. ಪರ್ವತದ ಮಣ್ಣು ಹೆಚ್ಚು ಕೊಳೆತ ಜೈವಿಕಾಂಶ ಹೊಂದಲು ಕಾರಣ .
  5. ಕೆಂಪು ಮಣ್ಣು ಕಂಡುಬರುವ ಪ್ರದೇಶವನ್ನು ಸ್ಪಷ್ಟವಾಗಿ ತಿಳಿಸಬೇಕಿತ್ತು. ಕಾರಣ ಈ ಅಧ್ಯಾಯದಲ್ಲಿ ತಿಳಿಸಿದ ಬಹುತೇಕ ಪ್ರದೇಶದಲ್ಲಿ ಕಪ್ಪು ಮಣ್ಣು ಕಂಡುಬರುತ್ತದೆ.
  6. ಜಂಬಿಟ್ಟಿಗೆ ಮಣ್ಣನ್ನು ಲ್ಯಾಟರೈಟ್ ಮಣ್ಣು ಎಂದು ಕರೆಯಲು ಕಾರಣ [ಲ್ಯಾಟರೈಟ್ (Laterite) ಎಂಬ ಪದವು ಲ್ಯಾಟಿನ್ ಭಾಷೆಯ ಲ್ಯಾಟರ್ (Later) ಎಂಬ ಪದದಿಂದ ಬಂದಿದ್ದು ಲ್ಯಾಟರ್ ಎಂದರೆ ಇಟ್ಟಿಗೆ (Brick) ಎಂದರ್ಥ .]
  7. ಜಂಬಿಟ್ಟಿಗೆ ಮಣ್ಣಿನ ಬಗ್ಗೆ ಕೊಟ್ಟಿರುವ ಮಾಹಿತಿಯಲ್ಲಿ ೨ ಮತ್ತು ೪ನೇ ವಾಕ್ಯಗಳು ಹೆಚ್ಚು ಕಡಿಮೆ ಪುನರಾವರ್ತನೆಯಾದಂತಿದೆ.
  8. ಮಣ್ಣಿನ ಸವೆತಕ್ಕೆ ೪ ಕಾರಣಗಳನ್ನು ಕೊಟ್ಟಿದ್ದು ಕೊನೆಗೆ ಉದಾ: ಕೊಟ್ಟಿದ್ದಾರೆ. ಆದರೆ ಆ ಉದಾ: ಯಾವ ಕಾರಣಕ್ಕೆ(ಅಂಶಕ್ಕೆ) ಎಂಬುದು ಗೊಂದಲವನ್ನುಂಟು ಮಾಡಿದೆ.
  9. ಅನೇಕ ಕಡೆಗಳಲ್ಲಿ ಲೇಖನ ಚಿಹ್ನೆಗಳ (. , ಇತ್ಯಾದಿ) ಕೊರತೆ ಕಂಡುಬಂದಿದೆ .
  10. ಅವಶ್ಯವಿರುವ ಕಡೆಗಳಲ್ಲಿ ವಾಕ್ಯಗಳ ಮಧ್ಯೆ ಇರಬೇಕಾದ ಇಲ್ಲಿ ,ಇದು, ಈ ಕಾರಣಕ್ಕಾಗಿ , ಹೀಗೆ.........ಎಂಬಂತಹ ಸಂಬಂಧ ಕಲ್ಪಿಸುವಂತಹ ಪದಗಳು ಇರಬೇಕಿತ್ತು.
  11. ಅಭ್ಯಾಸಗಳು: ಇದರಲ್ಲಿ III ಪ್ರಶ್ನೆ ಹೊಂದಿಸಿ ಬರೆಯಿರಿ . ಅದರಲ್ಲಿ 'ಅ' ಪಟ್ಟಿಯಲ್ಲಿ ಜಂಬಿಟ್ಟಿಗೆ ಮಣ್ಣಿಗೆ ಸಂಬಂಧಿಸಿದಂತೆ 'ಬಿ' ಪಟ್ಟಿಯಲ್ಲಿ ಎರಡು ಉತ್ತರಗಳನ್ನು ಕೊಡಲಾಗಿದೆ.
  12. ಅಧ್ಯಾಯದ ಕೊನೆಯಲ್ಲಿ ( ಪಠ್ಯಪುಸ್ತಕದ ಎಲ್ಲಾ ಅಧ್ಯಾಯಗಳಿಗೂ ಸಂಬಂಧಸಿದಂತೆ )ಹೆಚ್ಚು ಕಡಿಮೆ ಎಲ್ಲ ಪ್ರಶ್ನೆಗಳು ಜ್ಞಾನಾತ್ಮಕ ವಲಯಕ್ಕೆ ಸಂಬಂಧಿಸಿವೆ.ಸೃಜನಶೀಲತೆಯನ್ನು ಹೊರಹಾಕುವ,ವಿದ್ಯಾರ್ಥಿ ತನ್ನನ್ನು ತೊಡಗಿಸಿಕೊಳ್ಳುವ ಅಂದರೆ ಸಿ.ಸಿ.ಇ. ಆಧಾರಿತ ಪ್ರಶ್ನೆಗಳನ್ನು ಹೆಚ್ಚಾಗಿ ಕೇಳಬೇಕಿತ್ತು.