"ಭಾರತೀಯ ಭಾಷಾ ಭೋದನೆಯ ಬಗೆಗಿನ ಎನ್.ಸಿ.ಎಪ್ ಪೊಶೀಷನ್ ಪೇಪರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(ಅದೇ ಬಳಕೆದಾರನ ೩ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ)
೧ ನೇ ಸಾಲು: ೧ ನೇ ಸಾಲು:
=ಭಾಷೆಯ ಸ್ವರೂಪ=
+
[http://karnatakaeducation.org.in/KOER/en/index.php/NCF_Position_Paper_on_Teaching_Indian_Languages#Objectives_of_Language_Teaching ''See in English'']
== ಪರಿಚಯ ==
 
ಶಿಕ್ಷಕರು , ಶಿಕ್ಷಕ-ಭೋದಕರು, ಪಠ್ಯಪುಸ್ತಕ ರಚನಾಕಾರರು , ಪಠ್ಯವಸ್ತು ವಿನ್ಯಸಗಾರರು ಮತ್ತು ಹಲವು  ಶಿಕ್ಷಣ ತಜ್ಞರ  ಪ್ರಕಾರ ಭಾಷೆಯೆಂದರೆ  ಕೇವಲ ಸಂವಹನ  ಮಾದ್ಯಮವೆಂಬುದಾಗಿದೆ. ಶಿಕ್ಷಣದಲ್ಲಿ ಭಾಷೆಯ ಪಾತ್ರವನ್ನು ಪ್ರಶಂಸಿಸುವುದಾದರೆ , ನಾವು ಭಾಷೆಯ ಬಗ್ಗೆ ಸಮಗ್ರ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಭಾಷೆಯನ್ನು  ರಚನಾತ್ಮಕ, ಸಾಹಿತ್ಯಾತ್ಮಕ, ಸಾಮಾಜಿಕ, ಸಾಂಸ್ಕೃತಿಕ, ಮನೋಸಾಮಾಜಿಕ ಮತ್ತು ಸೌಂದರ್ಯ ಪ್ರಜ್ಞೆಯಂತಹ  ವಿವಿಧ ಆಯಾಮಗಳಲ್ಲಿ  ವಿಶ್ಲೇಷಿಸಬೇಕು. ಶಬ್ದ, ಪದ ಮತ್ತು ವಾಕ್ಯಗಳು ವ್ಯವಸ್ಥಿತವಾದ ಹಂತದಲ್ಲಿ ಇರುವಾಗ  ಔಪಚಾರಿಕವಾಗಿ ಭಾಷೆಯನ್ನು  ಶಬ್ದಕೋಶಗಳ ಜೋಡಣೆಯಾಗಿ ಮತ್ತು  ವಾಕ್ಯ ರಚನೆಯ ನಿಯಮಾವಳಿಯಾಗಿ  ನೋಡುತ್ತೇವೆ. ಸಹಜವಾಗಿ ಇದೇ  ಸಾರ್ವತ್ರಿಕ ಸತ್ಯವಾದರೂ  ಇದು ಭಾಷೆಯ  ಬಗೆಗೆ  ಏಕಪಕ್ಷೀಯ ಚಿತ್ರಣವನ್ನು ನೀಡುತ್ತದೆ. 
 
==ಭಾಷಾ ಭೋದನೆ ==
 
ಮೂರು ವರ್ಷದ ಮೊದಲೇ ಎಲ್ಲಾ ಮಕ್ಕಳೂ  ತಮ್ಮ ಸಮಾಜಿಕ ಅನ್ಯೋನ್ಯಾಂಗಗಳನ್ನು ಸೇರಿದಂತೆ , ಭಾಷೆಯ ಮೂಲ ವ್ಯವಸ್ಥೆಯನ್ನು ಮತ್ತು ಉಪ ವ್ಯವಸ್ಥೆಗಳನ್ನು ಅರ್ಥೈಸಿಕೊಳ್ಳುವುದು ಬಹು ಮುಖ್ಯವಾಗಿದೆ  (ಅಂದರೆ ಅವರು ಕೇಲವ ಭಾಷಾಶಾಸ್ತ್ರವನ್ನು ಮಾತ್ರವಲ್ಲದೇ  ಅಭಿವ್ಯಕ್ತಿ ಶೀಲ ಸಾಮರ್ಥ್ಯವನ್ನು ಗಳಿಸಿಕೊಳ್ಳುವುದು) . ಇದು ಮಗುವಿಗೆ ತನ್ನ  ಜ್ಞಾನದ ವಲಯದಲ್ಲಿನ  ಯಾವುದೇ ವಿಷಯದ ಮೇಲೇ  ಅರ್ಥಪೂರ್ಣವಾದ  ಸಂಭಾಷಣೆ ನಡೆಸಲು ಸಾಧ್ಯವಾಗಿಸುತ್ತದೆ.<br>
 
ಸಾಮಾನ್ಯವಾಗಿ  ಕೆಲವು ಮಕ್ಕಳು  ಸಹಜ ಭಾಷಾ ಭೋದನೆಯಲ್ಲೇ ಬೆಳವಣಿಗೆಯಾಗಬಹುದು, ಆದ್ದರಿಂದ ಮಕ್ಕಳೆಡೆಗೆ ಹೆಚ್ಚಿನ ಕಾಳಜಿ ಮತ್ತು ಗಮನ ನೀಡಬೇಕಾಗುತ್ತದೆ (Chomsky 1957, 1965, 1986, 1988 and 1993). ಕೆಲವು ಭಾಷಾಶಾಸ್ತ್ರಜ್ಞರು ಭಾಷೆಯ ಸ್ವಾದೀನತೆಯ ಬಗ್ಗೆ ಕೆಲಸ ಮಾಡುತ್ತಿದ್ದರೂ  ಇದು ಒಂದು ದೊಡ್ಡ ವಿರೋಧಾಭಾಸವಾಗಿಯೇ ಉಳಿದಿದೆ. ಇಂತಹ ಸಂದರ್ಭದಲ್ಲಿ  ಮೂರು ವರ್ಷದ ಮಕ್ಕಳಿಗೆ ಭಾಷಾ ವ್ಯವಸ್ಥೆಯ  ಅಗಾಧ ಸಂಕೀರ್ಣತೆಗಳನ್ನು  ನಿರ್ವಹಿಸಲು ಸಾದ್ಯವೇ ?  ಸಹಜ ಭಾಷಾ ಭೋದನೆಯಲ್ಲಿ ಗಮನಿಸಬೇಕಾದ ಅಂಶವೆಂದರೆ ,  ಭಾಷಾ ಭೋದನೆಯು  ಎರಡು ರೀತಿಯ ಶೈಕ್ಷಣಿಕ ಪರಿಣಾಮಗಳನ್ನು  ಹೊಂದಿರುತ್ತದೆ. ಭಾಷಾ ಭೋದನೆಯಲ್ಲಿ  ವ್ಯಾಕರಣಕ್ಕಿಂತ ಹೆಚ್ಛಾಗಿ  ಅರ್ಥಕ್ಕೆ  ಪ್ರಾಮುಖ್ಯತೆ ನೀಡಬೇಕು. ಭಾಷಾ ಭೋದನೆಗೆ ಹೆಚ್ಚು ಗಮನವಹಿಸಿದಷ್ಟು , ಮಕ್ಕಳು ಹೊಸ ಭಾಷೆಯನ್ನು ಸರಾಗವಾಗಿ  ಕಲಿಯುತ್ತಾರೆ. 
 
==ಆಡಳಿತ ವ್ಯವಸ್ಥೆಯಾಗಿ  ಭಾಷೆ==
 
ವೈಜ್ಞಾನಿಕ ವಿಧಾನದಲ್ಲಿ ಭಾಷೆಯ ರಚನೆಯನ್ನು ಅಧ್ಯಯನ ಮಾಡಿರುವ  ಭಾಷಾ ವಿಜ್ಞಾನಿಗಳ  ಪ್ರಕಾರ ,  ಒಂದು ಭಾಷೆಯ ವ್ಯಾಕರಣವು  ಹಲವು ಉಪವ್ಯವಸ್ಥೆಗಳನ್ನು ಒಳಗೊಂಡಿರುವ ಒಂದು ದೊಡ್ಡ ಅಮೂರ್ತ ವ್ಯವಸ್ಥೆಯಾಗಿದೆ.  ಶಬ್ದಗಳ ಹಂತದಲ್ಲಿ,  ಪಠಿಸುವ ಮಾದರಿಗಳ  ದೃಷ್ಟಿಯಲ್ಲಿ ನೋಡಿದಾಗ  ವಿಶ್ವದ ಭಾಷೆಗಳು    ಸಂಗೀತ ಮತ್ತು ಲಯ ಕ್ಕೆ  ತುಂಬಾ ಹತ್ತಿರವಾಗಿ ಸಂಬಂಧೀಕರಿಸಿವೆ.  ಹಾಗೆಯೇ ವ್ಯಂಜನ ಮತ್ತು ಸ್ವರಗಳ  ಶಬ್ದಗಳು  ಎಲ್ಲಾ ಮಾನವ  ಭಾಷೆಗಳಲ್ಲಿಯೂ  ವ್ಯವಸ್ಥಿತವಾಗಿ ಆಯೋಜಿಸಲ್ಪಟ್ಟಿವೆ .  ಎಲ್ಲಾ  ಶಬ್ದದ ವಿಭಾಗಗಳನ್ನು ಹೊಂದಿದ್ದು, ಅದರ  ವ್ಯಾಪ್ತಿ ೨೫-೮೦ ಶಬ್ದಗಳ ಅಂತರದಲ್ಲಿರುತ್ತದೆ. ಸ್ವರ ಮತ್ತು  ವ್ಯಂಜನ ಶಬ್ದಗಳಿಗೆ  ಪರ್ಯಾಯವಾಗಿ ತೋರಿಸಲು  ಭಾಷಾ ವಿಜ್ಞಾನಿಗಳು  ಪದಗಳಿಗೆ  ಆದ್ಯತೆ ನೀಡಿದರು .  ಉದಾ : ಪದದ ಆರಂಭದಲ್ಲಿ ಮೂರಕ್ಕಿಂತ ಹೆಚ್ಚು ವ್ಯಂಜನ ಶಬ್ದಗಳನ್ನು  ಒಳಗೊಂಡ  ಭಾರತೀಯ ಭಾಷೆಯಿಲ್ಲ, ಇಂಗ್ಲೀಷನ್ನು  ಒಳಗೊಂಡು . ಮೂರಕ್ಕಿಂತ ಹೆಚ್ಚು ವ್ಯಂಜನ ಶಬ್ದಗಳನ್ನು  ಒಳಗೊಂಡಿದ್ದರೂ    ಆ ಆಯ್ಕೆಗಳನ್ನು  ತುಂಬಾ ಸೀಮಿತಗೊಳಿಸಲಾಗಿರುತ್ತದೆ.<br>
 
ಭಾಷೆಯಲ್ಲಿ ಧ್ವನಿಗಳಿವೆ, ಪದಗಳಿವೆ, ವಾಕ್ಯ ಮಾದರಿಗಳಿವೆ. ನಾವು ಬಳಸುವ ಭಾಷೆಯಲ್ಲಿ ಈ ಎಲ್ಲವನ್ನೂ ಸಮಪ್ರಮಾಣದಲ್ಲಿ ಬಳಸುವುದಿಲ್ಲ. ಉದಾಹರಣೆಗೆ ಝ ಎಂಬೊಂದು ಧ್ವನಿ ಕನ್ನಡದಲ್ಲಿ ಇದೆಯಾದರೂ ನಾವು ಗಂಟೆಗಟ್ಟಲೆ ಕನ್ನಡ ಮಾತಾಡಿದರೂ ಅಥವಾ ಪುಟಗಟ್ಟಲೆ ಕನ್ನಡದಲ್ಲಿ ಬರೆದರೂ ‘ಝ’ ಧ್ವನಿಯುಕ್ತ ಪದವೊಂದನ್ನು ಬಳಸದೆಯೇ ಇರಬಹುದು. ಕೆಲವು ಧ್ವನಿಗಳು ಮತ್ತೆ ಮತ್ತೆ (ಉದಾಹರಣೆಗೆ ಸ್ವರಗಳು) ಬಳಕೆಯಾಗುತ್ತವೆ. ಅವುಗಳ ಬಳಕೆಯ ಪ್ರಮಾಣ ಅತ್ಯಧಿಕವಾಗಿರುತ್ತದೆ. ಹಾಗೆಯೇ ನಾವು ಬಲ್ಲ ಪದಗಳೆಲ್ಲವನ್ನೂ ಬರೆಯುವಾಗ ಇಲ್ಲವೇ ಮಾತಾಡುವಾಗ ಒಂದೇ ಪ್ರಮಾಣದಲ್ಲಿ ಬಳಸುವುದಿಲ್ಲ. ಕೆಲವು ಪದಗಳು ಮೊದಲಿಂದ ಕೊನೆಯವರೆಗೆ ಮತ್ತೆ ಮತ್ತೆ ಬಳಕೆಯಾದರೆ ಮತ್ತೆ ಕೆಲವು ಎಲ್ಲೋ ಆಗಾಗ ಸುಳಿದು ಹೋಗುತ್ತವೆ. ನಿಘಂಟುಗಳಲ್ಲಿ ಎಲ್ಲ ಪದಗಳೂ ಪಟ್ಟಿಯಾಗಿದ್ದರೂ ಅವು ಬೇರೆ ಬೇರೆ ಪ್ರಮಾಣಕ್ಕೆ ಅನುಗುಣವಾಗಿ ಬಳಕೆಯಾಗುತ್ತಿರುತ್ತವೆ.<br>
 
ಭಾಷಾಧ್ಯಯನಕಾರರು ಹೀಗೆ ಭಾಷೆಯ ಘಟಕಗಳು ಬಳಕೆಯಲ್ಲಿ ಆವರ್ತನಗೊಳ್ಳುವಾಗ ಯಾವುದಾದರೂ ಕ್ರಮಬದ್ಧತೆ ಇದೆಯೋ ಎಂಬುದನ್ನು ಅರಿಯಲು ಯತ್ನಿಸಿದ್ದಾರೆ. ಈ ಅಧ್ಯಯನಗಳು ಭಾಷೆಯ ವಿವಿಧ ಘಟಕಗಳು ಬಹುಮಟ್ಟಿಗೆ ನಿರ್ದಿಷ್ಟವಾದ ಆವರ್ತನ ಕ್ರಮದಲ್ಲಿ ಬಳಕೆಯಾಗುವುದನ್ನು ತೋರಿಸಿಕೊಟ್ಟಿವೆ. ಭಾಷಿಕರು ಭಾಷೆಯನ್ನು ಬಳಸುವಾಗ ವ್ಯಕ್ತಿಯಿಂದ ವ್ಯಕ್ತಿಗೆ ಹಲವು ವ್ಯತ್ಯಾಸಗಳು ಕಂಡು ಬರುತ್ತವೆಯಾದರೂ ಭಾಷಾ ಘಟಕಗಳ ಆವರ್ತನ ಕ್ರಮದಲ್ಲಿ ಗಣನೀಯ ವ್ಯತ್ಯಾಸಗಳು ಕಾಣಸಿಗುವುದಿಲ್ಲ. ಅಂದರೆ ಕನ್ನಡ ಧ್ವನಿಗಳಲ್ಲಿ ಝ ಅಥವಾ ಘ ಅತಿ ಕಡಿಮೆ ಬಳಕೆಯ ಆವರ್ತನವನ್ನು ಪಡೆದಿವೆ ಎನ್ನೋಣ. ಕನ್ನಡಿಗರು ಯಾರೇ ಆಗಿರಲಿ ಅವರ ಬಳಕೆಯಲ್ಲಿ ಈ ಧ್ವನಿಗಳು ತಮ್ಮ ಆವರ್ತನವನ್ನು ಹೆಚ್ಚಿಸಿಕೊಳ್ಳಲಾರವು. ಈ ಮಾತು ಪದ ಗಳಿಗೂ ಅನ್ವಯಿಸುತ್ತದೆ. ಅಂದರೆ ಭಾಷೆಯ ಘಟಕಗಳು ಬಳಕೆಯಲ್ಲಿ ಪ್ರಯುಕ್ತವಾಗುವಾಗ, ಸಂಯೋಜಿತ ರೂಪವನ್ನು ಪಡೆಯುವಾಗ  ಗೊತ್ತಾದ  ಪ್ರಮಾಣಬದ್ಧತೆಯನ್ನು ಹೊಂದಿರುತ್ತವೆ.<br>
 
ಇಂಗ್ಲೀಷ್  ಭಾಷೆಯ ಬಳಕೆಯನ್ನು ಆಧರಿಸಿ ಭಾಷಾ ಘಟಕಗಳ ಆವರ್ತನವನ್ನು  ಲೆಕ್ಕಹಾಕುವ ಯತ್ನಗಳು ನಡೆದಿವೆ. ಆ ಭಾಷೆಯ ಬಳಕೆಯಲ್ಲಿ ಪ್ರತಿಶತ ಅರವತ್ತು ಭಾಗ ವ್ಯಂಜನ ಧ್ವನಿಗಳಿದ್ದರೆ ಉಳಿದ ಪ್ರತಿಶತ ನಲವತ್ತರಷ್ಟು ಸ್ವರಗಳು ಕಾಣ/ಕೇಳಸಿಗುತ್ತವೆ. ಬಳಕೆಯಾಗುವ ಪದಗಳಲ್ಲೂ ಏಕಾಕ್ಷರಗಳ ಪ್ರಮಾಣ ಅಧಿಕ. ಏಕಾಕ್ಷರಗಳೆಂದರೆ ವ್ಯಂಜನ, ಸ್ವರ ಮತ್ತು ವ್ಯಂಜನಗಳಿರುವ ರೂಪಗಳು. ಆ ಭಾಷೆಯ ಆಯ್ದ ಐವತ್ತು ಪದಗಳು, ಆ ಭಾಷೆಯ ಯಾವುದೇ ಬಳಕೆಯಲ್ಲಿ ಪ್ರತಿಶತ ನಲವತ್ತೈದರಷ್ಟು ಪ್ರಮಾಣದಲ್ಲಿರುತ್ತವೆ.<br>
 
ಹೀಗೆ ಯಾವುದೇ ಭಾಷಾಘಟಕವನ್ನು ಆಯ್ದು ಅದರ ಬಳಕೆಯ ಪ್ರಮಾಣವನ್ನು ನಿಯಂತ್ರಿಸುವುದು ದಿನಬಳಕೆಯಲ್ಲಿ ಅಸಾಧ್ಯ. ಅದಕ್ಕಾಗಿ ವಿಶೇಷ ಪ್ರಯತ್ನಗಳನ್ನು ಮಾಡುವುದು ಭಾಷಿಕರಿಗೆ ಆಗದ ಮಾತು. ಕೆಲವೊಮ್ಮೆ ಹಾಗೆ ವ್ಯವಸ್ಥಿತವಾಗಿ ಪ್ರಯತ್ನಿಸಿದರೂ ಅದು ಅಲ್ಪ ಕಾಲಾವಧಿಗೆ ಮಾತ್ರ ಸೀಮಿತವಾಗಿರುವುದು. ಉದಾಹರಣೆಗೆ ಸಂಸ್ಕೃತ ಭಾಷಾ ಪರಂಪರೆಯಲ್ಲಿ ಕೆಲವು ಬಗೆಯ ಜಾಣತನದ ಪದ್ಯರಚನೆಗಳಿವೆ. ಉದ್ದೇಶ ಹಾಗೂ ವ್ಯಾಪ್ತಿಯ ಇಂಥ ಪ್ರಯತ್ನಗಳನ್ನು ಬಿಟ್ಟರೆ ಧ್ವನಿಘಟಕಗಳ ಆವರ್ತನೆಯನ್ನು ಗಮನವಿಟ್ಟು ನಿಯಂತ್ರಿಸುವ ಇನ್ನೊಂದು ನೆಲೆಯೆಂದರೆ ಪ್ರಾಸ, ಅನುಪ್ರಾಸಗಳ ಅಳವಡಿಕೆ. ಇದೂ ಕೂಡ ದೀರ್ಘ ರಚನೆಗಳಲ್ಲಿ ಹಲವು ರೀತಿಯಲ್ಲಿ ಕಾಣಸಿಗುವುದೇ ಹೊರತು, ಒಂದೇ ಧ್ವನಿಯನ್ನು ಇಡೀ ರಚನೆಯ ಪ್ರಾಸಸ್ಥಾನದಲ್ಲಿ ಬಳಸುವುದಿಲ್ಲ.<br>
 
ಈ ಮೇಲಿನ ನಿದರ್ಶನಗಳನ್ನು ಹೊರತುಪಡಿಸಿದರೆ ಬಹುಮಟ್ಟಿಗೆ ಭಾಷಾ ಘಟಕಗಳ ಬಳಕೆಯಲ್ಲಿ ಪ್ರತಿ ಘಟಕದ ಆವರ್ತನ ಸಾಧ್ಯತೆ ನಿಯಂತ್ರಿತ ವಾಗಿರುತ್ತದೆ. ಇದು ಬೇರೆ ಬೇರೆ ಕಾಲಮಾನಗಳಲ್ಲಿ ಬದಲಾಗಬಹುದೇ ಎಂಬುದು ಪರಿಶೀಲನೆಗೆ ಒಳಗಾಗಬೇಕಾಗಿದೆ. ಉದಾಹರಣೆಗೆ ಧ್ವನಿ ವ್ಯತ್ಯಾಸಗಳು ನಡೆದಂತೆ ಸಹಜವಾಗಿಯೇ ಪ್ರತಿ ಧ್ವನಿಯ ಆವರ್ತನ ಸಾಧ್ಯತೆ ಬದಲಾಗುತ್ತದೆ. ಹಳಗನ್ನಡದಲ್ಲಿ ೞದ ಬದಲು ಳ ಬಳಕೆಯಾಗತೊಡಗಿತು. ಆಗ ಸಹಜವಾಗಿ ಧ್ವನಿ ಆವರ್ತನ ಸಂಖ್ಯೆ ಕೂಡ ಬದಲಾಗಿರಬೇಕು.<br>
 
ಭಾಷಾ ಘಟಕಗಳ ಆವರ್ತನ ಕ್ರಮವು ಆಡುಭಾಷೆ ಮತ್ತು ಬರಹ ಭಾಷೆಗಳಲ್ಲಿ ಬೇರೆಬೇರೆಯಾಗಿರುತ್ತದೆ. ಆಡುಭಾಷೆಯಲ್ಲಿ ಹೆಚ್ಚಿನ ಆವರ್ತನ ಶೀಲತೆಯನ್ನು ಪಡೆದಿರುವ ಭಾಷಾಘಟಕವು ಬರಹ ಭಾಷೆಯಲ್ಲಿ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬಳಕೆಯಾಗುತ್ತಿರುವುದನ್ನು ಗಮನಿಸಬಹುದು. ಮಹಾಪ್ರಾಣ ಧ್ವನಿಗಳಿಗೆ ಕನ್ನಡದ ಬರೆಹದ ಭಾಷೆಯಲ್ಲಿರುವ ಆವರ್ತನ ಶೀಲತೆಯು ಆಡುಮಾತಿನಲ್ಲಿ ಇಲ್ಲ. ಕನ್ನಡ ಪದಕೋಶದ ಬಳಕೆಯಲ್ಲಿ ಸಂಸ್ಕೃತ ಭಾಷೆಯ ಪದಗಳು ಆಡುಮಾತಿಗಿಂತ ಬರಹದ ಭಾಷೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಆವರ್ತಗೊಳ್ಳುತ್ತವೆ. ಭಾಷಾ ಉಪನ್ಯಾಸದ ಹಂತಗಳು ಈ ಮೇಲಿನ ವ್ಯವಸ್ಥೆಯ ಜೊತೆಗೆ  ಒಂದು ನಿರ್ದಿಷ್ಟ ಸಮಾಜದಲ್ಲಿ ನಡೆಯುವ, ಭಾಷಾ ಸಮಾಜಶಾಸ್ತ್ರೀಯ, ಧಾರ್ಮಿಕ, ಮತ್ತು ಸಾಂಸ್ಕೃತಿಕ ಸಂಪ್ರದಾಯಗಳನ್ನು  ಆಧಾರವಾಗಿಟ್ಟುಕೊಂಡೇ ಸಂರಚನೆಯಾಗುತ್ತದೆ.<br>
 
ಭಾರತವೂ ಅತಿ ದೊಡ್ಡ ಮತ್ತು ಬಹಳ ಶ್ರೀಮಂತ ಭಾಷಾ ಸಂಕೀರ್ಣತೆಗಳನ್ನು ಹೊಂದಿದ್ದು ಇದಕ್ಕೆ  ಪಾಣಿನಿ, ಕಾತ್ಯಾಯನಿ, ಪತಂಜಲಿ, ಭಾರ್ತ್ರಹರಿ (ಸಂಸ್ಕೃತ ಭಾಷಾ ಲೇಖಕ), ಚಂದ್ರಕೀರ್ತಿ, ಜೈನೇಂದ್ರ ಮತ್ತು ಹೇಮಚಂದ್ರ ಆಚಾರ್ಯರ ಕೊಡುಗೆ ಅಪಾರವಾದುದಾಗಿದೆ. ಆದರೆ ವಿಪರ್ಯಾಸಕರವೆಂದರೆ ಈ  ಇಷ್ಟು ಶ್ರೀಮಂತ ಭಾಷೆಯನ್ನುಳ್ಳ ನಮ್ಮ ಭಾರತೀಯ ಜ್ಞಾನವನ್ನು ನಾವುಗಳೇ ಸತತವಾಗಿ ನಿರ್ಲಕ್ಷಿಸುತ್ತಾ ಬಂದಿದ್ದೇವೆ. ಈ ವಿಷಯದಲ್ಲಿ ವೈಜ್ಞಾನಿಕ ಸಂಶೋಧನೆ ಕೈಗೊಳ್ಳಲು ಭಾಷಾ ವಿಜ್ಞಾನ ಸಂಸ್ಥೆಗಳನ್ನು ಹುಟ್ಟುಹಾಕಬಹುದಾಗಿದೆ ಹಾಗು ಈ ಮೂಲಕ ಭಾಷಾ ಭೋದನೆಯಲ್ಲಿನ ಶೈಕ್ಷಣಿಕ ಪರಿಣಾಮಗಳನ್ನು ಹೊರಹಾಕಬಹುದು.<br>
 
ಪಾಣಿನಿಯ ಅಷ್ಟಾದ್ಯಾಯಿ ಯಲ್ಲಿ ಅಡಕವಾಗಿರುವ ಭಾಷಾ ಅಂಶಗಳು ಈಗಿನ ಆಧುನಿಕ ವ್ಯಾಕರಣಗಳಿಗೆ ಸಮನಾಂತರವಾಗಿಲ್ಲ. ಅಷ್ಟಾಧ್ಯಾಯಿಯ ಪ್ರಕಾರ ನಮ್ಮ ಭಾರತದ ಸಂಪ್ರದಾಯದಲ್ಲಿ  ಭಾಷೆಯೆಂದರೆ ಮಾತನಾಡುವುದು ಬರೆಯುವುದಲ್ಲ, ಸಂವೇದನ ಮಾರ್ಗ ಕೇವಲ ಸಂವಹನ ವಲ್ಲ ಮತ್ತು ಭಾಷೆಯು ರಚನಾತ್ಮಕ ವ್ಯವಸ್ಥೆ ಕೇವಲ ಪ್ರಾತಿನಿಧಿಕ ವ್ಯವಸ್ಥೆಯಲ್ಲ.<br>
 
'''ಭಾರ್ತ್ರಹರಿ''' ಯ ಪ್ರಕಾರ ಭಾಷೆಯು ವಾಸ್ತವ ನೈಜ ಜ್ಞಾನವನ್ನು ಸಂರಚಿಸುತ್ತದೆ ಮತ್ತು ಈ ಜ್ಞಾನವನ್ನು ಪರಿಕಲ್ಪನಾತ್ಮಕ ಜೋಡಣೆಯ ಪ್ರಕ್ರಿಯೆಯಾಗಿ ನೋಡುತ್ತದೆ., ಭಾಷಯೆಲ್ಲಿನ ಈ ರೀತಿಯ ಸಮಗ್ರ ಪರಿಕಲ್ಪನೆಗಳು ಪ್ರಮುಖ ಶೈಕ್ಷಣಿಕ ಪರಿಣಾಮಗಳನ್ನು ಹೊಂದಿರಬಹುದಾಗಿದೆ.
 
==ಮಾತನಾಡುವುದು ಮತ್ತು ಬರೆಯುವುದು ==
 
ಮಾತು ಮತ್ತು ಬರವಣಿಗೆಯ ನಡುವಿನ ಮೂಲಭೂತ ವ್ಯತ್ಯಾಸವೆಂದರೆ, ಭಾಷೆಯ ಬರವಣಿಗೆಯನ್ನು ಪ್ರಜ್ಞಾಪೂರ್ವಕವಾಗಿ ಮಾರ್ಗದರ್ಶನ ಮಾಡಬೇಕಾಗುತ್ತದೆ ಮತ್ತು ಇದಕ್ಕೆ ಸಮಯ ಬೇಕಾಗುತ್ತದೆ. ಮತ್ತು ಬರವಣಿಗೆಯನ್ನು ನಾವು ಬಯಸಿದಾಗ ಮರಳಿಸಬಹುದು. ಮಾತನಾಡುವ ಭಾಷೆ ಹೆಚ್ಚು ಪ್ರಾಕೃತಿಕ ಸ್ಥಿರತೆಯನ್ನು ಹೊಂದಿರುವುದಿಲ್ಲ, ಬರವಣಿಗೆಯ ಭಾಷೆಯಲ್ಲಿ ಸುಲಭವಾಗಿ ಬದಲಾವಣೆಗಳನ್ನು ಮಾಡಬಹುದು. ಆದ್ದರಿಂದಾಗಿಯೇ ಮಾತನಾಡುವ ಭಾಷೆ ಮತ್ತು ಬರೆವಣಿಗೆಯ ಭಾಷೆಯಲ್ಲಿನ ಅಂತರ ಆಶ್ಚರ್ಯಕರವಾಗಿರುತ್ತದೆ. ಭಾಷೆ ಮತ್ತು ಲಿಪಿ ನಡುವೆ ಯಾವುದೇ ಸ್ವಾಭಾವಿಕ ಸಂಬಂಧವಿಲ್ಲ, ಇಂಗ್ಲೀಷ್ ಭಾಷೆ ಮತ್ತು ರೋಮನ್ ಸ್ಕ್ರಿಪ್ಟ್  ಅಥವಾ ಹಿಂದಿ, ಸಂಸ್ಕೃತ , ದೇವನಾಗರಿ ಲಿಪಿಗಳ ನಡುವೆ ಯಾವುದೇ ಸಂರಕ್ಷಿತ  ಸಂಪರ್ಕವೂ ಇಲ್ಲ . ವಾಸ್ತವವಾಗಿ ಯಾವುದೇ ಒಂದು ಭಾಷೆಯನ್ನು ವಿಶ್ವದ ಎಲ್ಲಾ ಲಿಪಿಗಳಲ್ಲಿ ಬರೆಯುವಂತೆಯೇ, ವಿಶ್ವದ ಎಲ್ಲಾ ಭಾಷೆಗಳನ್ನು ಸಣ್ಣ ಪುಟ್ಟ ಮಾರ್ಪಾಡುಗಳೊಂದಿಗೆ ಒಂದೇ ಲಿಪಿಯಲ್ಲಿ ಬರೆಯಬಹುದಾಗಿದೆ. ಇದರಿಂದ ಭಾಷೆ ಮತ್ತು ಲಿಪಿಯ ನಡುವಿನ ಸಂಬಂದವೂ ಪ್ರಮುಖ ಶೈಕ್ಷಣಿಕ ಒಳಾರ್ಥವನ್ನು ಹೊಂದಿದೆ ಎಂಬ ಅರಿವು ಮೂಡುತ್ತದೆ. ಈ ವಿದ್ಯಾಮಾನದ ಅರಿವು ಶಿಕ್ಷಕರಲ್ಲಿ ಮೂಡಿದರೆ ಭಾಷಾ ಜ್ಞಾನದ ಬಗೆಗಿನ ಅವರಲ್ಲಿನ ಮನೋಭಾವಗಳನ್ನು ಬದಲಾಯಿಸಿಕೊಂಡು ನವೀನ ಮಾದರಿಯ ಭೋದನಾ ವಿಧಾನವನ್ನು ಅಳವಡಿಸಿಕೊಳ್ಳಬಹುದಾಗಿದೆ.
 
==ಭಾಷೆ, ಸಾಹಿತ್ಯ ಮತ್ತು ಸೌಂದರ್ಯಶಾಸ್ತ್ರ==
 
ಭಾಷೆಯ ಬಗೆಗಿನ ಹಲವಾರು ಕಾರ್ಯಗಳು ಭಾಷಾ ಶಿಕ್ಷಣ ಯೋಜನಕರಿಗೆ ಬಾಯಿಪಾಠವಾಗಿಬಿಟ್ಟಿವೆ. ಇದರಲ್ಲಿ ವಿಶ್ವವಿಕಾಶದ ಗುಣಮಟ್ಟದಲ್ಲಿ  ಭಾಷೆಯೂ ಅನೇಕ ಕಾಲ್ಪನಿಕ ಅಂಶಗಳನ್ನು ಹೊಂದಿದೆ.  ಕಾವ್ಯ, ಗದ್ಯ, ಮತ್ತು ನಾಟಕಗಳು ಕೇವಲ ಸಾಹಿತ್ಯ ಸಂವೇದನೆಯನ್ನು ಮರುಹೊಂದಿಸುವ ಮೂಲಗಳಾಗಿರದೇ ನಮ್ಮ ಸೌಂದರ್ಯಶಾಸ್ತ್ರವನ್ನು ಸಮೃದ್ದಗೊಳಿಸುವ, ಸೌಂದರ್ಯಶಾಸ್ತ್ರ ಸಾಮಾರ್ಥ್ಯವನ್ನು ವರ್ಧಿಸುವ ಬರವಣಿಗೆಯ ಗ್ರಹಿಕೆ ಹಾಗು ಅಕ್ಷರ ಜೋಡಣೆಯ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಅಗಾಧವಾದ ಭಾಷಾ ಸಮಾರ್ಥ್ಯವನ್ನು  ಪ್ರಬಲಮೂಲಗಳಾಗಿವೆ.. ಸಾಹಿತ್ಯವು ನಮ್ಮ ದೈನಂದಿನ ಸಂವಾದಗಳಲ್ಲಿನ ವ್ಯಂಗ್ಯ, ಕಥೆ, ವಿಡಂಬನೆ, ನೀತಿಕಥೆ ಮುಂತಾದವುಗಳ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ.<br>
 
ರವೀಂದ್ರನಾಥ ಟ್ಯಾಗೋರ್ ರವರು ಶಾಂತಿನಿಕೇತನದ ವಿಶ್ವ ಭಾರತಿಯಲ್ಲಿ ಹೇಳಿರುವಂತೆ , ಒಂದು ಭಾಷಾ ಶಿಕ್ಷಣ ನೀತಿಯು ಭಾಷೆಯ ಅಲಂಕಾರಿಕ,  ಕಾಲ್ಪನಿಕ ಮತ್ತು  ನಿರೂಪಣಾತ್ಮಕ ಅಂಶಗಳನ್ನು ನಿರ್ಲಕ್ಷಿಸುವುದು ಅಸಾಧ್ಯ ಹಾಗು ಇದು ಕೇವಲ ಲೌಕಿಕ ಜ್ಞಾನದ ಲಾಭವನ್ನು ಹೊಂದುವ ಒಂದು ಸಾಧನವಾಗಿದೆ.  ಮಾನವೀಯ ಗುಣಗಳು ಕೇವಲ ಸೌಂದರ್ಯವನ್ನು ಆಸ್ವಾಧಿಸುವದಷ್ಟೇ ಅಲ್ಲದೇ ವ್ಯವಸ್ಥಿತವಾದ ಸೌಂದರ್ಯಶಾಸ್ತ್ರದ  ಆಯಾಮಗಳನ್ನು ಕ್ರೋಢೀಕರಿಸುವುದು ಆಗಿದೆ.<br>
 
ಭಾಷಾ ಸೌಂದರ್ಯಶಾಸ್ತ್ರದ ಅಂಶಗಳಲ್ಲಿ ಪರಿಗಣಿಸಬಹುದಾದ ಮೆಚ್ಚುಗೆಯೆಂದರೆ ಅನಿವಾರ್ಯವಾಗಿ ಭಾಷೆಯ ಪರಿಪೂರ್ಣತೆ ಮತ್ತು ಶುದ್ದತೆಯ ಬದಲಿಗೆ  ಭಾಷಾ ಜೀವಂತಿಕೆಗೆ ಮತ್ತು ಸೃಜನಶೀಲತೆಗೆ ಆದ್ಯತೆ ನೀಡಲಾಗುತ್ತಿದೆ. ಈ ಪ್ರಕ್ರಿಯೆಯು ಭಾಷೆಯು ಅತಿಕ್ರಮಣತೆಗೆ ಬದಲಾಗಿ ಸಂಭಾಷಣೆ ಮತ್ತು ಸಮಾಲೋಚನೆಗೆ ಅವಕಾಶಳನ್ನು ಮಾಡಿಕೊಡುತ್ತದೆ. ಇದು ಸಣ್ಣ ಮತ್ತು ಅಳಿವಿನಂಚಿನಲ್ಲಿರುವ ಭಾಷೆಗಳನ್ನು ನ್ಯಾಯ ಸಮ್ಮತವಾಗಿ ಗೌರವಿಸುವ ಭರವಸೆಯನ್ನು ಮೂಡಿಸಿದೆ.
 
==ಭಾಷೆ ಮತ್ತು ಸಮಾಜ ==
 
ಮಕ್ಕಳು ಭಾಷಾ ಕಲಿಕೆಯ ಸಾಮರ್ಥ್ಯದೊಂದಿಗೇ ಹುಟ್ಟಿದಂತೆ ಕಂಡರೂ, ಪ್ರತಿ ಭಾಷೆಯ ಕಲಿಕೆ ಕೆಲವು ನಿಶ್ಚಿತ  ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಪರಿಸರದಲ್ಲಿ ಆಗುತ್ತದೆ. ಪ್ರತಿಯೊಂದು ಮಗುವೂ ಎಲ್ಲಿ , ಏನನ್ನು, ಯಾರಿಗೆ ಹೇಳಬೇಕೆಂಬ ವಿಚಾರಗಳನ್ನು ಕಲಿಕೆಯಿಂದ ಪಡೆಯುತ್ತದೆ. ಭಾಷೆಗಳಲ್ಲಿ ಮೂಲವಾಗಿಯೇ ವ್ಯತ್ಯಾಸಗಳಿರುತ್ತವೆ ಅದರೊಂದಿಗೆ ಸನ್ನಿವೇಶ ಹಾಗೂ ವಯಸ್ಸಿಗನುಗುಣವಾಗಿ ಬಳಸುವ ಶೈಲಿಯಲ್ಲಿ ಹಲವಾರು ವಿಧಗಳನ್ನು ಕಾಣಬಹುದು(Labov 1966,1972; Trudgill 1974; Gumperz and Hymes 1972; Gumprez 1964; Habermas 1970, 1996). ಮನುಷ್ಯನ ಭಾಷಾ ಬಳಕೆಯ ಶೈಲಿ, ವಿಧಾನಗಳಲ್ಲಿರುವ ಅನೇಕತೆ ಯಾವುದೇ ನಿಯಮಕ್ಕೆ ನಿಲುಕದಂತೆ ಕಂಡರೂ, ಈ ಅನೇಕತೆಯೇ ಭಾಷೆಯ ವ್ಯವಸ್ಥೆ, ಸಂವಹನ, ಚಿಂತನೆ ಹಾಗೂ ಜ್ನಾನಗಳ ನಡುವೆ ಇರುವ ಸಂಬಂಧವನ್ನು ಸೂಚಿಸುತ್ತದೆ. ಅರೊರಿನ್ (1977) ಹೇಳುವಂತೆ ಸಮಾಜಕ್ಕೆ ಹೊರತಾಗಿ ಭಾಷೆಯ ಅಸ್ಥಿತ್ವ ಹಾಗೂ ಅಭಿವೃಧಿ ಸಾಧ್ಯವಿಲ್ಲ. ಅಂತಿಮವಾಗಿ ಭಾಷಾ ಅಭಿವ್ರುಧ್ದಿಗೆ ಉತ್ತೇಜನ ಸಮಾಜದ ಪರಂಪರೆ ಹಾಗೂ ಅಗತ್ಯಗಳಿಂದಲೇ ಬಂದರೂ ಸಹ ಸಾಮಾಜಿಕ ಅಭಿವೃದ್ದಿ ಹಾಗೂ ಪರಂಪರೆಯ ಪೋಷಣೆಯಲ್ಲಿ ಭಾಷೆಯ ಮಹತ್ವದ ಪಾತ್ರವನ್ನು ಕಡೆಗಣಿಸುವಂತಿಲ್ಲ. ಮಾನವ ಸಮಾಜ ಭಾಷೆಯಿಲ್ಲದೆ ಇರಲು ಸಾಧ್ಯವಿಲ್ಲ; ಚಿಂತನೆಗಳು ಒಂದು ರೂಪ ಪಡೆಯಲು, ಭಾವನೆಗಳನ್ನು ವ್ಯಕ್ತಪಡಿಸಲು ಹಾಗೂ ಸಂಪೂರ್ಣ ಸಂವಹನಕ್ಕೆ ಭಾಷೆಯೇ ಮೂಲ. ಅಷ್ಟೆ ಮುಖ್ಯವಾದ ಇನ್ನೊಂದು ವಿಚಾರವೆಂದರೆ ಭಾಷೆ ಒಂದು ನಿರ್ಜಿವ ವಸ್ತುವಿನಂತೆ ಸಮಯ, ಸಂದರ್ಭ, ಚಿಂತನೆಗಳಿಗೆ ಹೊರತಾಗಿ ಇದ್ದಕಡೆಯೇ ಇದ್ದಹಾಗೆಯೇ ಇರುವಂತಹುದಲ್ಲ. ವಾಸ್ತವವಾಗಿ ಭಾಷೆ ನಿರಂತರವಾಗಿ ಬದಲಾಗುವ ಹರಿಯುವ ದ್ರವ ವ್ಯವಸ್ಥೆಯಿದ್ದಂತೆ. ಇಂತಹ ಗುಣವುಳ್ಳ ಭಾಷೆಯನ್ನು ಮಾನವರು ಪಡೆದು ಮಾರ್ಪಡಿಸಿ, ತಮ್ಮನ್ನು ಹಾಗೂ ತಮ್ಮ ಸುತ್ತಲಿನ ಜಗತ್ತನ್ನು ವ್ಯಾಖ್ಯಾನಿಸಲು ಬಳಸುತ್ತಾರೆ. ಆದರೆ ಕೆಲವು ಮಂದಿ ಭಾಷೆಯನ್ನು ಒಂದು ವಸ್ತುವಿನಂತೆಯೂ ಹಾಗೂ ಅದಕ್ಕೆ ನಿರ್ದಿಷ್ಟ ಗುಣಳಿರುವಂತೆಯೂ ಕಾಣುತ್ತಾರೆ. ಈ ಬಗ್ಗೆ ನಾವು ಎಚ್ಚರವಹಿಸಬೇಕು .
 
==ಭಾಷೆ, ಮನೋಭಾವ ಮತ್ತು ಪ್ರೇರಣೆ ==
 
ಭಾಷಾ ಕಲಿಕೆಯಲ್ಲಿ  ಹಲವು ವೇಳೆ ಕಲಿಯುವವರ ಮನೋಭಾವ ಮತ್ತು ಪ್ರೇರಣೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಅಂತೆಯೇ ಶಿಕ್ಷಕರ ಹಾಗು ಪೋಷಕರ ಮನೋಭಾವ, ಮತ್ತು ಪ್ರೋತ್ಸಾಹ ಭಾಷಾ ಕಲಿಕೆಗೆ ಯಶಸ್ವಿ ಕೊಡುಗೆಯಾಗಬಹುದು. ಸಂಶೋಧಕರು  ಅನ್ಯಭಾಷಾ ಕಲಿಕೆಯ ಮೇಲೆ ಪ್ರಭಾವ ಬೀರುವ ಹಲವಾರು ಸಾಮಾಜಿಕ ಹಾಗು ಮಾನಸಿಕ ಅಂಶಗಳನ್ನು ಗುರುತಿಸಿದ್ದಾರೆ. ಅಂತಹ ಕೆಲವು ಅಂಶಗಳೆಂದರೆ 
 
#ಯೋಗ್ಯತೆ
 
#ಮನೋಭಾವ
 
#ಬುದ್ಧಿಶಕ್ತಿ
 
#ಪ್ರೇರಣೆ ಮತ್ತು ಪ್ರೇರಣೆಯ ತೀವ್ರತೆ
 
#ನಿರಂಕುಶಾಧಿಕಾರತ್ವ
 
#ಜನಾಂಗೀಯತೆ
 
ಆದರೆ ಅನ್ಯಭಾಷಾ ಕಲಿಕೆಯಲ್ಲಿ ಅಪಾರವಾದ ಪರಿಣಾಮ ಬೀರುವ ಅಂಶಗಳೆಂದರೆ ಶಿಕ್ಷಕರ ಮನೋಭಾವ ಮತ್ತು ಪೋಷಕರ ಪ್ರೋತ್ಸಾಹ. ಅನ್ಯಭಾಷೆ ಕಲಿಯಲು ಪ್ರೇರಣೆ ಸಾಮಾನ್ಯವಾಗಿ ಉದ್ದೇಶಿತ ಭಾಷೆಯ ಭಾಷಿಕರ ಭಾಷೆ ಮತ್ತು ಭಾಷೆಯೇತರ ವೈಶಿಷ್ಟ್ಯಗಳೊಂದಿಗೆ ಗುರುತಿಸಿಕೊಳ್ಳುವ ಮನೋಭಾವ ಮತ್ತು ಪ್ರೇರಣೆಯ ಮೇಲೆ ಅವಲಂಬಿತವಾಗಿದೆಯೆಂದು ಗಾರ್ಡ್ನರ್ ಮತ್ತು ಲ್ಯಾಂಬರ್ಟ್ (೧೯೭೨) ನಂಬುತ್ತಾರೆ.  ಅವರ ಪ್ರಕಾರ  ಉದ್ದೇಶಿತ  ಭಾಷೆಯು ಭಾಷಿಕರೊಂದಿಗೆ ಸಕ್ರಿಯವಾಗಿ ಬೆರೆಯಲು ಒಬ್ಬ ವ್ಯಕ್ತಿ ಆ ಭಾಷೆಯನ್ನು ಕಲಿಯುತ್ತಿದ್ದರೆ ಅಂತಹ ಪ್ರೇರಣೆಯನ್ನು  ಸುಸಂಯೋಜನಾತ್ಮಕವೆನ್ನುತ್ತಾರೆ. ಅದಲ್ಲದೇ ಅನ್ಯಭಾಷೆ ಕಲಿಕೆಯ ಉದ್ದೇಶ ಕೇವಲ ಉದ್ಯೋಗವನ್ನು ಪಡೆಯಲೋ ಅಥವಾ ಇನ್ನಾವದೋ ಪ್ರಯೋಜನವನ್ನು  ದಕ್ಕಿಸಿಕೊಳ್ಳುವುದೋ ಆದರೆ ಅಂತಹ ಪ್ರೇರಣೆಯನ್ನು ನಿಮಿತ್ತ ಮಾತ್ರವೆಂದು ಹೇಳುತ್ತಾರೆ.<br>
 
ಗಾರ್ಡ್ನರ್ ಮತ್ತು ಲ್ಯಾಂಬರ್ಟ್ ರವರ ಪ್ರಕಾರ ನಿಮಿತ್ತ ಮಾತ್ರ  ಪ್ರೇರಣೆಗಿಂತ ಸುಸಂಯೋಜನಾತ್ಮಕ ಪ್ರೇರಣೆಯಲ್ಲಿ ಅನ್ಯಭಾಷಾ ಕಲಿಕೆ ಹೆಚ್ಚು ಯಶಸ್ಸು ಕಾಣುತ್ತದೆ. <br>
 
ಭಾರತೀಯ ಸನ್ನಿವೇಶದಲ್ಲಿ ಉದ್ದೇಶಿತ ಭಾಷೆಯ ಸಮುದಾಯದೊಂದಿಗೆ ಬೆರೆಯಲು ಇರುವ ಅವಕಾಶಗಳಲ್ಲಿ ಭಾರಿ ವ್ಯತ್ಯಾಸಗಳನ್ನು ಕಾಣಬಹುದು. ಉದಾ: ಆಂಗ್ಲಭಾಷೆಯನ್ನು ತೆಗೆದುಕೊಂಡರೆ ಆ ಭಾಷೆಯ ನೈಜ ಸಮುದಾಯ ಭಾರತದಲ್ಲಿ ಇಲ್ಲದೇ ಹೋದರು ನಗರಗಳಲ್ಲಿ ಆಂಗ್ಲಭಾಷೆಯನ್ನು ಕಲಿಯಲು ಇರುವ ಅವಕಾಶಗಳೇ ಹೆಚ್ಚು , ಮತ್ತೊಂದೆಡೆ ಅನೇಕ ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಆಂಗ್ಲಭಾಷೆಯನ್ನು ಕಿಂಚಿತ್ತು ಸ್ಥಳೀಯವಲ್ಲದ ಅನ್ಯ ಅಥವಾ ವಿದೇಶಿ ಭಾಷೆಯಂತೆ ಕಾಣಬೇಕಾಗುತ್ತದೆ. ಭಾರತೀಯ ಭಾಷೆಗಳ ವಿಚಾರಕ್ಕೆ ಬಂದರೆ ಸ್ಥಳೀಯವಲ್ಲದ ಅನ್ಯ ಅಥವಾ ವಿದೇಶಿ ಭಾಷೆಯಂತೆ ಕಾಣಬೇಕಾಗುತ್ತದೆ. ಭಾರತೀಯ ಭಾಷೆಗಳ ವಿಚಾರಕ್ಕೆ ಬಂದರೆ ಸ್ಥಳೀಯ ಉದ್ದೇಶಿತ ಭಾಷಾ ಸಮುದಾಯದೊಂದಿಗೆ ಬೆರೆಯಲು ಸಾಕಷ್ಟು ಅವಕಾಶಗಳಿವೆ . ಜಗತ್ತಿನ ಹಲವಾರು ಭಾಗಗಳಲ್ಲಿ ಅನ್ಯಭಾಷ ಕಲಿಕೆಯಲ್ಲಿನ ಸಾಮಾಜಿಕ ಹಾಗು ಮಾನಸಿಕ ವಿಚಾರಗಳ ಬಗ್ಗೆ ಸಂಶೋಧನೆಗಳಾಗಿವೆ. ಈ ಸಂಶೋಧನೆಗಳ  ಪ್ರಕಾರ ಅನ್ಯಭಾಷಾ ಕಲಿಕೆಯಲ್ಲಿನ ಪ್ರಾವೀಣ್ಯತೆ ಕಲಿಯುವವರ ಮನೋಭಾವ ಮತ್ತು ಪ್ರೇರಣೆಯೊಂದಿಗೆ ಗಮನಾರ್ಹವಾದ ಸಂಬಂಧವಿರುವುದು ಕಂಡುಬಂದಿದೆ.  ಆದಾಗ್ಯು ನಿಮಿತ್ತ ಮಾತ್ರ ಪ್ರೇರಣೆಗಿಂತ ಸುಸಂಯೋಜನಾತ್ಮಕ ಪ್ರೇರಣೆ ಹೆಚ್ಚು  ಗಮನಾರ್ಹವೆಂಬ ಗಾರ್ಡ್ನರ್ ಮತ್ತು ಲ್ಯಾಂಬರ್ಟ್ ಕಲ್ಪನೆಗೆ ಬೆಂಬಲವಿರಲಿಲ್ಲ.  ಬಹಳಷ್ಟು ಸಂಶೋಧಕರು (ಖನ್ನಾ & ಅಗ್ನಿಹೋತ್ರಿ 1982, 1983 ಸೇರಿದಂತೆ) ಗಾರ್ಡ್ನರ್ ಮತ್ತು ಲ್ಯಾಂಬರ್ಟ್ ರ ಸೈದ್ದಾಂತಿಕವಾದಗಳು ಸಾರ್ವತ್ರಿಕವಲ್ಲವೆಂದು ತೋರಿಸಿದ್ದಾರೆ. ಇವರ ಪ್ರಕಾರ ಅನ್ಯಭಾಷಾ ಪ್ರಾವೀಣ್ಯತೆಯಲ್ಲಿನ ವ್ಯತ್ಯಾಸ ಕೇವಲ ಮನೋಭಾವ ಮತ್ತು ಪ್ರೇರಣೆಯಿಂದ ವಿವರಿಸಲಾಗುವುದಿಲ್ಲ. ಮನೋಭಾವ ಮತ್ತು ಪ್ರೇರಣೆಯ ಜೊತೆಗೆ ವಿಭಿನ್ನ ಸಾಮಾಜಿಕ , ಸಾಂಸ್ಕೃತಿಕ ಮತ್ತು ಜನಸಮುದಾಯ ಸೇರಿದಂತೆ ವಿವಿಧ ಭಾಷೆಗಳು ಭಾಷಾ ಬಳಕೆಯ ಮಾದರಿಗಳು, ಕುಟುಂಬದಲ್ಲಿನ ಆಂಗ್ಲ ಭಾಷೆಯ ಬಳಕೆ, ಶಾಲೆಯ ಮಾದರಿ ಮತ್ತು ಸಮುದಾಯದ ಗಾತ್ರ.. ಇತ್ಯಾದಿ ಅಂಶಗಳ ಮೇಲೆ ಅವಲಂಬಿತವಾಗಿದೆ.
 
==ಭಾಷೆ ಮತ್ತು ಗುರುತಿಸುವಿಕೆ ==
 
ಮನೋಭಾವ ಮತ್ತು ಪ್ರೇರಣೆಗಳ ರಚನೆ ಮತ್ತು ನಿರ್ಮಾಣ ಶೂನ್ಯ ಪರಿಸರದಲ್ಲಿ ಆಗುವುದಿಲ್ಲ ಎಂಬುದು ಸ್ಪಷ್ಟ. ಯಾವ ಗುಂಪು ಅಥವಾ ಸಮುದಾಯದೊಂದಿಗೆ ಗುರುತಿಸಿಕೊಳ್ಳಲು ಬಯಸುತ್ತೇವೋ ಅದರ ಮೇಲೆ ನಮ್ಮ ನಡವಳಿಕೆಗಳ ರೀತಿ ನೀತಿಗಳು ಸೃಷ್ಟಿಗೊಳ್ಳುತ್ತವೆ. ಅದರ ಸಲುವಾಗಿಯೇ ಔಪಚಾರಿಕ ಭಾಷೆಯಿಂದ ಅನೌಪಚಾರಿಕ ಭಾಷೆಯತ್ತ ಮುನ್ನಡೆಯಲು ಬೇಕಿರುವ ಅಭಿವ್ಯಕ್ತಿ ಸಾಮರ್ಥ್ಯವನ್ನು ಪಡೆಯುತ್ತಾ ಹೋಗುತ್ತೇವೆ. ನಮ್ಮನ್ನು ನಾವು ಗುರುತಿಸಿಕೊಳ್ಳಲು ಬಳಸುವ ವೈಶಿಷ್ಟ್ಯಗಳಲ್ಲಿ ಪರಸ್ಪರ ಘರ್ಷಣೆಯಿರುವುದು ಬಹಳಷ್ಟು ಸಂದರ್ಭದಲ್ಲಿ ತಿಳಿದುಬರುತ್ತದೆ. ನಮ್ಮನ್ನು ನಾವು ಗುರುತಿಸಿಕೊಳ್ಳಲು ಬಳಸುವ ವೈಶಿಷ್ಟ್ಯಗಳ ಕುರಿತ ಪ್ರಶ್ನೆ ಅಲ್ಪಸಂಖ್ಯಾತರ ಪ್ರಕರಣಗಳಲ್ಲಿ ಹೆಚ್ಚು ಪ್ರಸ್ತುತವಾಗುತ್ತದೆ. ಜಾಗತಿಕ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಅಲ್ಪಸಂಖ್ಯಾತರ ಭಾಷೆ ಮತ್ತು ಸಂಸ್ಕೃತಿಗಳನ್ನು ಕುರಿತು ಗೌರವದಿಂದ ಹಾಗು ಸಂವೇದನಶೀಲರಾಗಿ ಕಾಣುವುದು ಅತೀ ಅಗತ್ಯವಾಗಿದೆ. ಹಲವಾರು ಅಧ್ಯಯನಗಳ ಪ್ರಕಾರ ಅಲ್ಪ ಸಂಖ್ಯಾತರ ಸ್ಥಿತಿಗತಿಗಳ ಸುತ್ತಲಿನ ಸಮಸ್ಯೆಗಳು ಭಾಷಾ ನಿರ್ವಹಣೆ ಮತ್ತು ಬದಲಾವಣೆಯ ಮಾದರಿಗಳೊಂದಿಗೆ ಸಂಬಂಧ ಹೊಂದಿವೆ. ನಾವು ಭಾಷಾ ಶಿಕ್ಷಣದ ಸಂದರ್ಭದಲ್ಲಿ ನಮ್ಮನ್ನು ಗುರುತಿಸಿಕೊಳ್ಳುವ ಬಗ್ಗೆ ಚರ್ಚಿಸುವುದೇಕೆಂದರೆ ಭಾಷೆಗಳು ಬಹುವಾಗಿ ಗುರುತಿನ ರಾಜಕೀಯ ಭಾರವನ್ನು ಹೊರುತ್ತಾ ಬಂದಿವೆ. ಇದಲ್ಲದೇ ಗುರುತಿಸುವಿಕೆಯನ್ನು ನಾವೆಲ್ಲರು ಆಯ್ಕೆಯಿಂದಲೋ ಅಥವಾ ಅನಿವಾರ್ಯವಾಗಿಯೋ ತೊಡಗಿಸಿಕೊಂಡ, ಎಂದಿಗೂ ಕೊನೆಗೊಳ್ಳದ ಯಾವಾಗಲೂ ಅಪೂರ್ಣವಾಗಿಯೇ ಉಳಿಯುವ ತೆರೆದ ಚಟುವಟಿಕೆಯಂತಲೇ ಕಾಣುವುದು ಸೂಕ್ತ. ಭಾಷೆ ನಮ್ಮಲ್ಲಿ ಈಗಾಗಲೇ ಇರುವ ವೈಶಿಷ್ಟ್ಯಗಳನ್ನು ಕಂಡುಕೊಳ್ಳುವ ಅಥವಾ ನೆನಪುಗಳ ಮತ್ತು ಸಂಕೇತಗ ನಿಘಂಟಿನಂತೆ. ನಮ್ಮ ಗುರುತಿನ ನಿರ್ವಹಣೆಉ ಸಲುವಾಗಿ ಬಳಕೆಯಾಗದೇ ಅದೇ ಒಂದು ಗುರುತಿನ ವೈಶಿಷ್ಟ್ಯವಾಗಿಬಿಟ್ಟರೆ,  ಭಾಷೆ ನಮ್ಮ ಕಲ್ಪನೆಗೂ ನಿಲುಕದ ಅನೇಕ ಸಾಧ್ಯತೆಗಳ ಹುಟ್ಟಿಗೆ ಕಾರಣವಾಗುತ್ತದೆ.
 
==ಭಾಷೆ ಮತ್ತು ಅಧಿಕಾರ==
 
ಎಲ್ಲಾ ಭಾಷೆಗಳ ಅಮೂರ್ತ ವ್ಯವಸ್ಥೆಗಳು ಅಥವಾ ಉಪವ್ಯವಸ್ಥೆಗಳು ವಾಸ್ತವವಾಗಿ ಸಮಾನವೇ ಆದರೂ ಇತಿಹಾಸ, ರಾಜಕೀಯ, ಅರ್ಥಶಾಸ್ತ್ರ ಮತ್ತು ಸಮಾಜಶಾಸ್ತ್ರದ ಪರಸ್ಪರ ಪ್ರಭಾವದಿಂದಾಗಿ ಕೆಲವು ಭಾಷೆಗಳು ಇನ್ನಿತರ ಭಾಷೆಗಳಿಗಿಂತ ಪ್ರತಿಷ್ಟಿತವೂ, ಸಮಾಜಿಕ ಹಾಗು ರಾಜಕೀಯವಾಗಿ ಪ್ರಭಾವಶಾಲಿಯೂ ಆಗಿಬಿಟ್ಟಿವೆ.<br>
 
ಸಾಮಾನ್ಯವಾಗಿ ಸಮಾಜದಲ್ಲಿನ ಗಣ್ಯರು ಮತ್ತು ಅಧಿಕಾರದಲ್ಲಿರುವವರು ಬಳಸುವ ಭಾಷೆಗಳು ಪ್ರಮಾಣಿತ ಹಾಗು ಅಧಿಕಾರ ಹೊಂದಿದ ಭಾಷೆಗಳಾಗಿ ಹೊರಹೊಮ್ಮುತ್ತವೆ. ಎಲ್ಲಾ ವ್ಯಾಕರಣಗಳು, ನಿಘಂಟುಗಳು ಮತ್ತು ವಿವಿಧ ಉಲ್ಲೇಖನೆಗಳು ಏಕರೂಪವಾಗಿ ಈ ಪ್ರಮಾಣಿತ ಭಾಷೆಯ ಅಗತ್ಯಗಳನ್ನು ಪೂರೈಸುತ್ತವೆ. ಭಾಷಾ ವಿಜ್ಞಾನದ ದೃಷ್ಟಿಯಿಂದ ನೋಡಿದರೆ ಪ್ರಮಾಣಿತ ಭಾಷೆ ಶುದ್ದಭಾಷೆ, ಉಪಭಾಷೆ ಎಂಬ ವಿವಿಧ ಭಾಷೆಗಳ  ಮಧ್ಯೆ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ಸಾಮಾನ್ಯವಾಗಿ ಒಂದು ಭಾಷೆಯನ್ನು ಸೇನೆ ಮತ್ತು ನೌಕಾದಳದ ಉಪಭಾಷೆಯೆಂದು ವ್ಯಾಖ್ಯಾನಿಸಲಾಗಿದೆ. ಅಧಿಕಾರದಲ್ಲಿರುವವರು ಹಿಂದುಳಿದವರ ಭಾಷೆಗಳ ಬಗೆಗೆ ನಕಾರಾತ್ಮಕ ಭಾವನೆಗಳನ್ನು ಸೃಷ್ಟಿಸಿ ಪ್ರಚಾರಪಡಿಸುತ್ತಾರೆ. ಭಾಷಾಜ್ಞಾನಿ ಚೇಂಬರ್ಸ್ ರವರ ಪ್ರಕಾರ ಉಪಭಾಷೆಗಳ ಕುರಿತ ಪೂರ್ವಗ್ರಹಗಳು ಇನ್ನಿತರ ಚರ್ಮದ ಬಣ್ಣ, ಧರ್ಮ ಮತ್ತು ವಾಸ್ತವವಲ್ಲದ ಗುಣಲಕ್ಷಣಗಳನ್ನು ಆಧರಿಸಿದ ಪೂರ್ವಗ್ರಹಗಳಷ್ಟೆ ಕಪಟ ಮತ್ತು ಅದೇ ಪರಿಣಾಮವನ್ನು ಹೊಂದಿವೆ . ಇದಕ್ಕೂ ಮಿಗಿಲಾಗಿ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಪರಿಗಣನೆಗಳೇ ಜನರುಅಧಿಕೃತ ಭಾಷೆಯನ್ನು ಶಿಕ್ಷಣ, ಆಡಳಿತ, ನ್ಯಾಯಾಂಗ, ಸಮೂಹ ಮಾದ್ಯಮಗಳಲ್ಲಿ ಬಳಸುವ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುತ್ತದೆ. ತಾತ್ವಿಕವಾಗಿ ಯಾವುದೇ ಬಾಷೆಯನ್ನು ಬಳಸಿ ಏನನ್ನು ಬೇಕಾದರು ಮಾಡಬಹುದು. ಅಗತ್ಯ ಬೆಂಬಲವನ್ನು ನೀಡದೇ  ಹಿಂದುಳಿದವರ ಭಾಷೆಗಳನ್ನು ಸಶಕ್ತಗೊಳಿಸಲು ಸಾಧ್ಯವಿಲ್ಲ.
 
ವಿವಿಧ ಸಂದರ್ಭಗಳಲ್ಲಿ ಹಿಂದುಳಿದ ಭಾಷೆಗಳ ಬಳಕೆಗೆ ಅವಕಾಶವನ್ನು ಮತ್ತು ಬೆಂಬಲವನ್ನು ನೀಡಬೇಕಾಗಿದೆ. ಪ್ರಮಾಣಿತವಾದುದು ಎಂದಿಗೂ ಶಾಶ್ವತ ಮತ್ತು ಸ್ಥಿರವಾಗಿರುವಂತಹುದಲ್ಲವೆಂಬುದನ್ನು  ನೆನಪಿನಲ್ಲಿಡುವುದು ಅತಿ ಮುಖ್ಯ . ಅಧಿಕಾರದ ಅಡಿಯಲ್ಲೇ ಪ್ರಮಾಣಿತವಾದುದರ ಕೇಂದ್ರ ಬದಲಾಗುತ್ತಿರುತ್ತದೆ. ಉದಾಹರಣೆಗೆ , ಬ್ರಾಹ್ಮಣರ ತಮಿಳು, ಬ್ರಾಹ್ಮಣೇತರ ತಮಿಳಿಗೆ ದಾರಿ ಮಾಡಿಕೊಟ್ಟಿರುವುದು. ಹಾಗು ಮುಂಬಯಿ ಮರಾಠಿಯು ಪುಣೆ ಮಾರಾಠಿಯ ಸ್ಥಾನ ಪಡೆದಿರುವುದು.<br>
 
ಸೂಫಿ ಕಾವ್ಯ , 1857ರ ಕ್ರಾಂತಿ, ಸ್ವಾತಂತ್ರ ಹೋರಾಟ, ಭಾರತದೊಳಗೆ ವಿವಿಧ ರಾಜ್ಯಗಳ ಸ್ಥಾಪನೆ, ದಲಿತ ಸಾಹಿತ್ಯ ಹೀಗೆ ವಿವಿಧ ವಿದ್ಯಾಮಾನಗಳ ಕಡೆಗೆ ನಮ್ಮ ಗಮನವನ್ನು ಕೇಂದ್ರೀಕರಿಸಿದರೆ ಸಾಮಾನ್ಯ ಜನರ ಭಾಷೆಗಳು ಭಿನ್ನಾಭಿಪ್ರಾಯಗಳಿಗೆ ಪ್ರಬಲವಾದ ಧ್ವನಿಯಾಗಿರುವುದು ಕಂಡುಬರುತ್ತದೆ.<br>
 
==ಭಾಷೆ ಮತ್ತು ಲಿಂಗ ==
 
ಲಿಂಗತಾರತಮ್ಯದ ಪರಿಣಾಮಗಳು ಕೇವಲ ಒಂದು ಲಿಂಗಕ್ಕೆ ಸೀಮಿತವಾಗಿಲ್ಲ. ಅದರ ಪರಿಣಾಮಗಳು ಇಡೀ ಸಮಾಜವನ್ನು ಕಾಡುತ್ತಿವೆ. ಕಾಲಕ್ರಮೇಣ ಭಾಷೆ ತನ್ನ ಸ್ವರೂಪದಲ್ಲೇ ಅಗಾಧವಾದ ಲಿಂಗತಾರತಮ್ಯವನ್ನು ಶಾಶ್ವತಗೊಳಿಸುವಂತಹ ಅಂಶಗಳನ್ನು ಒಳಗೊಳ್ಳುತ್ತಾ ಬಂದಿದೆ. ಭಾಷೆ ಹಾಗು ಲಿಂಗತಾರತಮ್ಯದ ನಡುವಿನ ಸಂಬಂಧವನ್ನು ಕುರಿತು ಹಲವಾರು ಅಧ್ಯಯನಗಳಾಗಿವೆ (Cameron 1985, 1995; Lakoff 1975, 1990; Tannen 1990; Butler 1990, among others). ಬಹಳಷ್ಟು  ವಿದ್ವಾಂಸರು ,ಭಾಷಾತಜ್ಞರು ಭಾಷೆಯ ಪದಕೋಶ ಹಾಗು ವಾಕ್ಯರಚನೆಯಲ್ಲಿರುವ ಲಿಂಗತಾರತಮ್ಯದ ಸಾಂಕೇತಿತ ಅಂಶಗಳನ್ನು ದೃಢಪಡಿಸಿದ್ದಾರೆ. ಪುರುಷ ಸ್ತ್ರೀಯರ ಸಂಭಾಷಣೆಯ ವಿವರವಾದ ವಿಶ್ಲೇಷಣೆಯಿಂದ , ಪುರುಷರು ಭಾಷೆಯ ಸ್ವರೂಪದಲ್ಲೇ ಒಳಗೊಂಡಿರುವ ಲಿಂಗತಾರತಮ್ಯದ ಅಂಶಗಳನ್ನು ತಮ್ಮ ದೃಷ್ಟಿಕೋನವನ್ನು ಸ್ತ್ರೀಯರ ಮೇಲೆ ಹೇರಲು ಬಳಸುವುದು ಕಂಡುಬಂದಿದೆ.
 
ಲಿಂಗತಾರತಮ್ಯದ ಕಲ್ಪನೆಗಳು ನಿರಂತರವಾಗಿ ಹೊಸ ರೂಪ ಪಡೆಯುತ್ತಿದ್ದು  ಅರಿವಿಲ್ಲದೆಯೇ ಈ ಅಂಶಗಳು ಪಠ್ಯಪುಸ್ತಕದ ಮೂಲಕವೂ ಹರಡುತ್ತಿವೆ. ಇಂತಹ ಲಿಂಗ ಅಸಮಾನತೆಯ ಜ್ಞಾನದ ನಿರ್ಮಾಣದಿಂದ ಆಗುತ್ತಿರುವ ಹಾನಿ ಬರುಬರುತ್ತಾ ಹೆಚ್ಚು  ಸ್ಪಷ್ಟವಾಗುತ್ತಿದೆ. ಪಠ್ಯಪುಸ್ತಕದಲ್ಲಿ ಬಳಸಿದ ಭಾಷೆ ಚಿತ್ರಗಳು ಹಾಗು ತರಗತಿಯಲ್ಲಿ ಬಳಸುವ ದೃಶ್ಯ ಸಾಧನಗಳು ಲಿಂಗತಾರತಮ್ಯದ ಅಂಶಗಳನ್ನು ಒಳಗೊಂಡಿದ್ದು ಈ ಬಗ್ಗೆ ತಕ್ಷಣ ಗಮನ ಹರಿಸುವ ಅಗತ್ಯವಿದೆ. ಪಠ್ಯಪುಸ್ತಕ ಬರಹಗಾರರು ಮತ್ತು ಶಿಕ್ಷಕರು ಆದಷ್ಟು  ತ್ವರಿತವಾಗಿ ಸಾಮಾಜಿಕ ಹಾಗು ಸಾಂಸ್ಕೃತಿಕವಾಗಿ ನಿರ್ಮಾಣಗೊಂಡಿರುವ ಲಿಂಗತಾರತಮ್ಯವನ್ನು ಹೋಗಲಾಡಿಸಲು ಶ್ರಮಿಸುವುದು ಅತೀ ಮುಖ್ಯ . ಇದಕ್ಕಾಗಿ ಮಹಿಳೆಯರ ಧ್ವನಿಗೆ ನಮ್ಮ ಪಠ್ಯಪುಸ್ತಕಗಳು ಹಾಗು ಭೋಧನಾ ರೀತಿ ನೀತಿಗಳು ಪ್ರಮುಖ ಸ್ಥಾನವನ್ನು ಕೊಡಬೇಕಿದೆ.<br>
 
==ಭಾಷೆ, ಸಂಸ್ಕೃತಿ ಮತ್ತು ಯೋಚನೆಗಳು ==
 
ಸಮಾಜಶಾಸ್ತ್ರಜ್ಞರಿಗೆ, ಮಾನವಶಾಸ್ತ್ರಜ್ಞರಿಗೆ ಮತ್ತು ಭಾಷಾಶಾಸ್ತ್ರಜ್ಞರಿಗೆ ಭಾಷೆ, ಸಂಸ್ಕೃತಿ, ಮತ್ತು ಚಿಂತನೆಯ ನಡುವಿನ ಸಂಬಂಧವು ಬಹಳ ಬಾರಿಗೆ ಗಂಭೀರ ವಿಚಾರಣೆಯಾಗಿ ಪರಿಣಮಿಸಿದೆ. ಭಾಷೆ ಎಂಬುದು ಭಾವನೆಗಳನ್ನು, ಆಚರಣೆಗಳನ್ನು ಮತ್ತು ಅರೆ ಭಾಷಾ ವೈಶಿಷ್ಟ್ಯಗಳನ್ನು ಇತರರ ಜೊತೆಗೆ ವ್ಯಕ್ತಪಡಿಸುವುದಲ್ಲದೆ ವಿವಿಧ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಪಸರಿಸುವ ಮತ್ತು ಜ್ಞಾನದ ರಚನೆಗಳನ್ನು ಅರ್ಥೈಸುವ ಬಹು ಮುಖ್ಯ ಮೂಲವಾಗಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಸಾಮಾಜಿಕ ನಡಾವಳಿಕೆಗಳಾದ ಭಾಷೆ ಮತ್ತು ಸಂಸ್ಕೃತಿ ಹೆಚ್ಚಾಗಿ ಅವ್ಯಕ್ತವಾಗಿದೆ ಮತ್ತು  ಕ್ರಮೇಣ ಇವು ನಮ್ಮ ಇರುವಿಕೆಯನ್ನು ಸೂಚಿಸುವ ರಚನಾತ್ಮಕ ಗುರುತುಗಳಾಗಿವೆ. ಈ ಸಂದರ್ಭದಲ್ಲಿ ಭಾಷೆ ಮತ್ತು ಸಂಸ್ಕೃತಿ ವೈವಿಧ್ಯತೆಯ ಬಹುರೂಪ ಪಾತ್ರಕ್ಕೆ ಹೆಚ್ಚಿನ ಮಹತ್ವ  ನೀಡಬೇಕು.<br>
 
ಭಾಷೆ ಮತ್ತು ಚಿಂತನೆ ನಡುವೆ ಸಂಬಂಧ ಅರ್ಥೈಸುವುದು ನಿಜಕ್ಕೂ ಬಹಳ ಸಂಕೀರ್ಣವಾಗಿದೆ ಅದರಲ್ಲೂ ಮುಖ್ಯವಾಗಿ ಭಾಷಾ ತಜ್ಞರಿಗೆ, ಮನೋವಿಜ್ಞಾನಿಗಳಿಗೆ, ಮತ್ತು ಜ್ಞಾನ ವಿಜ್ಞಾನಿಗಳಿಗೆ ಒಂದು ಅತ್ಯಂತ ಸವಾಲಿನ ಒಗಟಾಗಿ ಉಳಿದಿದೆ. ಸಫೈರ್- ವುರ್ಫ್ ಅವರ ಪ್ರಬಲ ಆವೃತ್ತಿಯ ಊಹೆಯ ಪ್ರಕಾರ, ನಮ್ಮ ಆಲೋಚನೆಗಳು ಸಂಪೂರ್ಣವಾಗಿ ನಮ್ಮ ಭಾಷಾ ಶಾಸ್ತ್ರದ ವ್ಯವಸ್ಥೆಯ ಮೇಲೆ ನಿರ್ಮಿಸಲಾಗಿರುತ್ತದೆ; "ಪ್ರತಿಯೊಂದು ಭಾಷೆಯ ಭಾಷಾ ಶಾಸ್ತ್ರದ ವ್ಯವಸ್ಥೆಯ ಹಿನ್ನೆಲೆಯು ಸ್ವತಃ ಕಲ್ಪನೆಯ ಮೇಲಿರುತ್ತದೆ, ಅದು ವ್ಯಕ್ತಿಯ ಮಾನಸಿಕ ಚಟುವಟಿಗೆಗಳಿಗೆ ಚಟುವಟಿಕೆ ಮಾರ್ಗದರ್ಶಿಯಾಗಿರುತ್ತದೆ.” (ವುರ್ಫ್ ತನ್ನ ಸಾಹಿತ್ಯ1956; 212-14 ರಲ್ಲಿ ಉಲ್ಲೇಖಿಸಿದಂತೆ). ನಾವು ಮಾತನಾಡಲು ಬಳಸುವ ಭಾಷೆಯು ನಮಗೆ ವಿಶ್ವದ ಬಗೆಗಿನ ನಮ್ಮ ಆಡಳಿತ, ಜ್ಞಾನ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮಾದರಿಗಳ ಗ್ರಹಿಕೆಗೆ ಆಕಾರ ರೂಪಿಸಿ, ಸೂತ್ರೀಕರಿಸಿ, ಆಜ್ಞಾಪಿಸುತ್ತದೆ. ನಾವು ಸಫೈರ್- ವುರ್ಫ್ ಅವರ ಊಹೆಯಲ್ಲಿ ನಂಬಿಕೆ ಇಟ್ಟಿರಲಿ ಇಲ್ಲದಿರಲಿ ಆದರೆ ಭಾಷೆ ಮತ್ತು ಚಿಂತನೆಯ ಒಂದಕ್ಕೊಂದು ಪರಸ್ಪರ ಪೂರಕವಾಗಿವೆ.  ಭಾಷೆ ನಮ್ಮ ಚಿಂತನೆಗಳನ್ನು  ರಚನೆನಾತ್ಮಕವಾಗಿ ರೂಪಿಸುವುದು ಒಂದೆಡೆಯಾದರೆ ಭಾಷೆ ಇದುವರೆಗೆ ಅನ್ವೇಶಿಸದ ಕ್ಷೇತ್ರದಲ್ಲಿನ ಜ್ಞಾನವನ್ನು ಮತ್ತು ನಮ್ಮ ಕಲ್ಪನೆಯನ್ನು ನಿಜಗೊಳಿಸಿ ಹೊಸ ಜ್ಞಾನವನ್ನು ನೀಡಿ ನಮ್ಮನ್ನು ವಿಮುಕ್ತಿಗೊಳಿಸುವುದು ಇನ್ನೊಂದೆಡೆಯಾಗಿರುತ್ತದೆ. ಭಾರತದ ವಿಷಯದಲ್ಲಿ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ನಾವು ಭಾಷೆ, ಸಾಮಾಜಿಕ ಭಾಷಾಶಾಸ್ತ್ರ ಮತ್ತು ಸಾಂಸ್ಕೃತಿಕ ಶ್ರೇಣೀ ಹಂತಗಳನ್ನು ವ್ಯಕ್ತಪಡಿಸುತ್ತೇವೆ ಈ ರೀತಿಯಾಗಿ ಹಲವಾರು ಭಾಷೆಗಳಲ್ಲಿ ಶ್ರೇಣೀಕೃತ ಚರ್ಚೆಯು ಅಂತಿಮವಾಗಿ ಭಾಷಾ ಮತ್ತು ಸಾಂಸ್ಕೃತಿಕ ಪದ್ಧತಿಗಳನ್ನು ಮತ್ತಷ್ಟು ಬಲಪಡಿಸಲು ಕಾರಣವಾಗಬಹುದು.  ಭಾರತದಲ್ಲಿ ಇಂಗ್ಲೀಷ್ ಸಹ ಇಂತಹ ಶ್ರೇಣೀಕರಣದ ಭಾಗವಾಗುತ್ತಿದೆ. ಆದರೂ ಅದು ಅಷ್ಟೊಂದು ವೇಗವಾಗಿಲ್ಲ, ಆದರೆ ಒಟ್ಟಾರೆಯಾಗಿ ಭಾರತೀಯ ಭಾಷಾ ಮತ್ತು ಸಾಂಸ್ಕೃತಿಯ ಅನಿವಾರ್ಯ ಭಾಗವಾಗುವಲ್ಲಿ ಸ್ಪಷ್ಟ ಸೂಚನೆ ಗೋಚರಿಸುತ್ತಿದೆ.
 
==ಶಿಕ್ಷಣ, ಭಾಷೆ ಮತ್ತು ಜವಾಬ್ದಾರಿಯುತ ನಾಗರೀಕ ==
 
ಯುನೆಸ್ಕೋ ಪ್ರಕಾರ ಒಂದು ಸಮಾಜ ಶಿಕ್ಷಣದ ಉದ್ದೇಶವನ್ನು ಹೇಗೆ ವ್ಯಾಖ್ಯಾನಿಸಿದೆ ಎಂಬುದರ ಮೇಲೆ ಅಲ್ಲಿನ ಶೈಕ್ಷಣಿಕ ಗುಣಮಟ್ಟವನ್ನು ಅಳೆಯಬಹುದು. 2004ರಲ್ಲಿ ಯುನೆಸ್ಕೋ ಹೇಳಿರುವ ಪ್ರಕಾರ "ಶಿಕ್ಷಣದ ಉದ್ದೇಶ ಪ್ರತಿಯೊಬ್ಬ ವಿದ್ಯಾರ್ಥಿಯೂ ಜವಾಬ್ದಾರಿಯುತ ನಾಗರೀಕನಾಗಲು ಬೇಕಾಗಿರುವ ಜ್ಞಾನ, ಕೌಶಲ ಮತ್ತು ಮೌಲ್ಯಗಳನ್ನು ಪಡೆಯುವಂತೆ ಖಾತರಿಪಡಿಸುವುದು, ಅರಿವು, ಸೃಜನಶೀಲತೆ ಹಾಗು ಭಾವನಾತ್ಮಕ ಬೆಳವಣಿಗೆಗೆ ಅವಕಾಶ ಮಾಡಿಕೊಡುವುದು, ಯಾವುದೇ ನಿರ್ಧಿಷ್ಟ ಗುಂಪಿನ ಮೇಲೆ ಯಾವುದೇ ರೀತಿಯ ತಾರತಮ್ಯವನ್ನು ವಿರೋಧಿಸಿ ನ್ಯಾಯಸಮ್ಮತ ಸಮಾಜದ ನಿರ್ಮಾಣದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು".<br>
 
ನಮ್ಮ ಸಮಕಾಲೀನ ಯುದ್ದಪೀಡಿತ ವಿಶ್ವದಲ್ಲಿ ಜವಾಬ್ದಾರಿಯುತ ನಾಗರೀಕತ್ವದ ಪಾತ್ರ  ಹಿಂದಿಗಿಂತ ಹೆಚ್ಚಿದೆ.  ಜವಾಬ್ದಾರಿ ಎಂಬುದು ಅಭಿವೃದ್ದಿ ಅಥವಾ ವಿಕಸನಗೊಂಡ ತಿಳುವಳಿಕೆಯ ಸಾಮರ್ಥ್ಯವನ್ನು ಸೂಚಿಸುತ್ತದೆ. ಏಕೆಂದರೆ ಆ ತಿಳುವಳಿಕೆಯನ್ನು ಪಡೆಯಲು ನಾವು ತೆಗೆದುಕೊಳ್ಳುವ ಕ್ರಮಗಳೇ  ಸಾಮಾಜಿಕ ಕ್ರಮದ ಮೂಲಭೂತ ವಿಧವಾಗಿದೆ. . ಸಮಾಜವನ್ನು  ಆಳುವ ಸಲುವಾಗಿ  ಸಮಾಜವನ್ನು ತಿಳಿಯುವ ಕಾಲ ಮರೆಯಾಗಿದೆ, ಹೀಗೇನಿದ್ದರೂ  ಸಮಾಜದ ಹಲವು ವೈವಿಧ್ಯತೆಗಳ ಮದ್ಯೆಯೂ ಸಂತೋಷದಿಂದ ಹಾಗು ಸಾಮರಸ್ಯದಿಂದ ಬಾಳಲು ಬೇಕಾಗಿರುವ ತತ್ವಗಳನ್ನು ತಿಳಿಯುವತ್ತ ಸಾಗಬೇಕಿದೆ.<br>
 
ವೈವಿದ್ಯತೆಯಲ್ಲಿ ಸಂತೋಷವನ್ನು ಕಾಣಲು ಕಲಿಯುವಲ್ಲಿ ಶಾಲಾ ಶಿಕ್ಷಣ ನಿರ್ಣಾಯಕ ಪಾತ್ರವಹಿಸುತ್ತದೆ ಎಂದು ಈಗ ಎಲ್ಲೆಡೆ ಪರಿಗಣಿಸಲಾಗಿದೆ. ಸಾಮಾಜಿಕ ಕಾರ್ಯಗಳನ್ನು ಪರಸ್ಪರ ತಿಳುವಳಿಕೆಯ ಮೂಲಕ ಸಾಧಿಸುವುದಕ್ಕೆ ಬೇಕಾಗಿರುವ ಸಾರ್ವತ್ರಿಕ ಸಾಮರ್ಥ್ಯಗಳನ್ನು  ವ್ಯಾಖಾನಿಸುವತ್ತ ವಿಧ್ವಾಂಸರು, ತತ್ವಶಾಸ್ತ್ರಜ್ಞರು ಮತ್ತು  ಕಾರ್ಯನೀತಿ ರೂಪಿಸುವವರು ಬಿಡುವಿಲ್ಲದೆ ತೊಡಗಿದ್ದಾರೆ . ಹೆಬರ್ಮಾಸ್ ಎಂಬ ತತ್ವಜ್ಞಾನಿಯ ಪ್ರಕಾರ "ಪರಸ್ಪರ ತಿಳುವಳಿಕೆ ಸಾಧಿಸಲು ಸಂವಹನ ಕೌಶಲಗಳು ಅತ್ಯವಶ್ಯ, ಸಂವಹನ ಭಾಷೆಗಳ ಬಹುಮುಖ್ಯ ಕಾರ್ಯಗಳಲ್ಲೊಂದು ಏಕೆಂದರೆ  ಸಾರ್ವತ್ರಿಕ ತಿಳುವಳಿಕೆಯ ಸಾಧ್ಯತೆ ವೈಯುಕ್ತಿಕ ಅಭಿವ್ಯಕ್ತಿಯಲ್ಲೇ ಅಡಗಿದೆ ".<br>
 
ಪಠ್ಯಪುಸ್ತಕ, ಶಿಕ್ಷಕರ ತರಭೇತಿ ಹಾಗು ತರಗತಿಯ ಪ್ರವಚನಗಳಲ್ಲಿ ಭಾಷೆಯ ಪರಿಕಲ್ಪನೆಯನ್ನು ಈ ದಾಖಲೆಯಲ್ಲಿ ಹೇಳಿದಂತೆ ಅಳವಡಿಸಿಕೊಂಡರೆ ಭಾಷೆ ವಿದ್ಯಾರ್ಥಿಗಳನ್ನು ಶಿಕ್ಷಿತರನ್ನಾಗಿ ಮಾಡುವುದಷ್ಟೇ ಅಲ್ಲ ಅವರನ್ನು ಜವಾಬ್ದಾರಿಯುತ ನಾಗರೀಕನ್ನಾಗಿಯೂ ಮಾಡುತ್ತದೆ.
 
  
=ಭಾಷೆ ಕಲಿಕೆ=
+
==ಪೀಠಿಕೆ==
==ಪರಿಚಯ==
+
ಭಾಷೆಯು ಒಂದು ನಿಯಮಧಾರಿತ ಸಂವಹನ ವ್ಯವಸ್ಥೆ ಮಾತ್ರವಲ್ಲ. ಅದು ಹೆಚ್ಚಿನ ಮಟ್ಟಿಗೆ ನಮ್ಮ ಚಿಮತನೆಯನ್ನು ರೂಢಿಸುವ, ನಮ್ಮ ಸಾಮಾಜಿಕ ಸಂಬಂಧಗಳನ್ನು ಅಧಿಕಾರ ಹಾಗು ಸಮಾನತೆಯ ನೆಲೆಗಳಲ್ಲಿ ವ್ಯಾಖ್ಯಾನಿಸುವ ಗಹನವಾದ ವಿಷಯವೂ ಹೌದು. ಮೂರು ವರ್ಷ ವಯಸ್ಸಿನೊಳಗೆಯೇ ಸಾಮಾನ್ಯ ಮಕ್ಕಳು ಒಂದು ಮಾತ್ರವಲ್ಲ, ಅನೇಕ ವೇಗವಾಗಿ ಪ್ರೌಢಿಮೆ ಸಾಧಿಸುವ ಸಂಗತಿಯು ಬಹುಶಃ ನಾವೆಲ್ಲರೂ ಭಾಷೆಗೆ ಸಂಬಂಧಿಸಿದಂತೆ ಅಂತರಿಕವಾದ ಸಹಜ ಶಕ್ತಿಯನ್ನು ಹುಟ್ಟಿನಿಂದಲೇ ಪಡೆದಿದ್ದೇವೆ ಎಂಬುದನ್ನು ತೋರಿಸುತ್ತದೆ. ಎಲ್ಲಾ ನಿರ್ಧಿಷ್ಟ ಭಾಷಾ ಕಲಿಕಯೂ ಸಾಮಾಜಿಕ ಹಾಗು ಸಾಂಸ್ಕೃತಿಕ ಮಧ್ಯಸ್ಥಿಕೆಯಲ್ಲಿ ನಡೆಯುತ್ತದೆ ಹಾಗು ಪ್ರತಿ ವ್ಯಕ್ತಿಯೂ ವಿವಿಧ ಸಾಮಾಜಿಕ ಸಂದರ್ಭಗಳಲ್ಲಿ ವ್ಯವಹರಿಸಲು ಅಗತ್ಯವಾದ ಭಾಷಾ ಬಳಕೆಗಳ ಸಂಗ್ರಹವನ್ನು ತಾನೆ ಯಶಸ್ವಿಯಾಗಿ ಸೃಷ್ಟಿಸಿಕೊಳ್ಳುತ್ತಾನೆ/ಳೆ. ಶೈಕ್ಷಣಿಕ ಯೋಜನೆ ತಯಾರಿಸುವವರು ಹಾಗು ಭಾಷಾ ನೀತಿಯ ರೂಪಣೆ ಮಾಡುವವರು ಮಗುವಿನ ಆ ಆಂತರಿಕ ಸಾಮರ್ಥ್ಯವನ್ನು ಬಳಸಿಕೊಳ್ಳಲಾಗದಿರುವುದು ಒಂದು ದುಃಖದ ಸಂಗಂತಿಯೇ ಸರಿ. ಭಾರತದಂತಹ ದೇಶದಲ್ಲಿ ಹೆಚ್ಚಿನ ಮಕ್ಕಳು ಬಹುಭಾಷಾ ಸಾಮರ್ಥ್ಯದೊಂದಿಗೆ ಶಾಲೆಗೆ ಬರುತ್ತಾರೆ. ಆದರೆ ಅವರು ಶಅಲಾ ವ್ಯವಸ್ಥೆಯಿಂದ ಹೊರ ಬೀಳಲಾರಂಬಿಸುತ್ತಾರೆ. ಇದಕ್ಕೆ ಕಾರಣವಾಗಿರುವ ವಿವಿಧ ಅಂಶಗಳಲ್ಲಿ ಶಾಲೆಯ ಭಾಷೆಯೂ ಅವರ ಮನೆ ಹಾಗು ನೆರೆಹೊರೆಯ ಭಾಷೆಗೆ ಸಂಬಂಧೀಕರಿಸಿಕೊಳ್ಳುವಲ್ಲಿ ಸೋಲುತ್ತದೆ ಎನ್ನುವುದೂ ಒಂದು. ಹೆಚ್ಚಿನ ಮಕ್ಕಳು ಅವರ ಮಾತೃಭಾಷೆಯಲ್ಲಿ ಕೂಡಾ ಓದುವ ಹಾಗು ಬರೆಯುವ ಕೌಶಲಗಳಲ್ಲಿ ಅತ್ಯಂತ ನಿರಾಶಾದಾಯಕ ಮಟ್ಟದ ಸಾಮರ್ಥ್ಯದೊಂದಿಗೆ ಶಾಲೆ ಪೂರೈಸುತ್ತಾರೆ.  
ನಾವು ಈಗಾಗಲೇ ಗಮನಿಸಿರುವಂತೆ  ಮಕ್ಕಳು ಸಂಕೀರ್ಣಾ ಭಾಷಾ ವ್ಯವಸ್ಥೆಯ ಕಲೆಯನ್ನು  ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಹೇಗೆ ನಿರ್ವಹಿಸುತ್ತಾರೆ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಹಲವು ಮಕ್ಕಳು ತಮ್ಮ ಮೂರು ಅಥವಾ ನಾಲ್ಕನೇ ವಯಸ್ಸಿನಲ್ಲಿಯೇ ಎರಡು ಅಥವಾ ಮೂರು ಭಾಷೆಗಳನ್ನು ನಿರರ್ಗಳವಾಗಿ ಬಳಸುತ್ತಾರೆ.  ಇಷ್ಟೇ ಅಲ್ಲದೇ ಯಾವ ಸಂದರ್ಭದಲ್ಲಿ ಯಾವ ಭಾಷೆಯನ್ನು ಬಳಸಬೇಕು ಎಂಬುದನ್ನು ಸಹ ತಿಳಿದಿರುತ್ತಾರೆ. ಅಗತ್ಯವಿದ್ದಾಗ, ಪ್ರತ್ಯೇಕ ಅಥವಾ ಮಿಶ್ರಣ ಭಾಷಾ ವ್ಯವಸ್ಥೆಯನ್ನು ಸಮರ್ಥವಾಗಿ ಬಳಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಪಾವ್ಲೊವ್ ಮತ್ತು ಸ್ಕಿನ್ನರ್ ರವರ ವರ್ತನಾ ಕಲಿಕಾ ಸಿದ್ದಾಂತದ ಪ್ರಕಾರ "ಭಾಷಾ ಕಲಿಕೆಯೆಂದರೆ  ಅಭ್ಯಾಸ, ಅನುಕರಣೆ, ಮತ್ತು ಸ್ಮರಣೆಯ ಮೂಲಕ ಪ್ರಚೋದನೆ ಪ್ರತಿಕ್ರಿಯೆನ್ನು ಸ್ವಾದೀನ ಪಡಿಸಿಕೊಳ್ಳುವ ವಿಷಯವಾಗಿದೆ.”. ಆದರೆ ಚೋಮ್ ಸ್ಕೀ ರವರ ಲೇಖನ-  ‘Review of Skinner’s Verbal Behaviour’ (1959) ಈ ವರ್ತನಾವಾದದ ಸಿದ್ದಾಂತವನ್ನು ಪ್ರಶ್ನೆ ಮಾಡಿದೆ.  ಚೋಮ್ ಸ್ಕೀ ರವರ ವಾದದ ಪ್ರಕಾರ "ನಾವು ಒಂದು ಸಹಜ ಭಾಷಾ ಬೋದನೆಯನ್ನು ನಿರ್ಧಿಷ್ಟಪಡಿಸಿಕೊಳ್ಳದೇ ಸಂಕೀರ್ಣಾ ಭಾಷಾ ವ್ಯವಸ್ಥೆಗಳ ಸ್ವಾದಿನವನ್ನು ವಿವರಿಸಲು ಸಾಧ್ಯವಿಲ್ಲ. ವೆಗಾಟ್ಸಕಿ ಮತ್ತು ಪಿಯಾಜೆ ಎಂಬ ಮನೋವಿಜ್ಞಾನಿಗಳು ಈ ಎರಡು ವ್ಯವಸ್ಥೆಗಳ ಸ್ಥಾನಗಳ ಬಗ್ಗೆ ವಾದಿಸಿದ್ದಾರೆ. ವರ್ತನಾವಾದ ಸಿದ್ದಾಂತದ ಪ್ರಕಾರ ಮನಸ್ಸು ಖಾಲಿ  ಸ್ಲೇಟಿನಂತೆ, ಚೋಮ್ ಸ್ಕೀ ರವರ ಅರಿವಿನ ಕಲಿಕಾ ಸಿದ್ದಾಂತದ ಪ್ರಕಾರ ಭಾಷೆಯಂಬುದು ಈಗಾಗಲೇ ಮನುಷ್ಯನ ಮನಸ್ಸಿನಲ್ಲಿ ಬೇರೂರಿದ್ದು, ಸಾರ್ವತ್ರಿಕ ವ್ಯಾಖರಣ ರೂಪದಲ್ಲಿರುವ ಸಂದೇಶವಾಹಕವಾಗಿದೆ.
+
ಸಾಮಾನ್ಯವಾಗಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಋಣಾತ್ಮಕವಾಗಿ ಪ್ರಭಾವಿಸುವ ವಿವಿಧ ಸಾಮಾಜಿಕ ಹಾಗೂ ರಾಜಕೀಯ ಅಂಶಗಳೊಂದಿಗೆ ಮಕ್ಕಳ ಸಾಮರ್ಥ್ಯ ಗಳಿಕೆ ಕೆಳಮಟ್ಟದಲ್ಲಿರಲು ಕಾರಣವಾಗಿರುವ ಪ್ರಮುಖ ಅಂಶಗಳು ಕೆಳಕಂಡಂತಿವೆ :-
ಅದೇ ರೀತಿ ಪಿಯಾಜೆ ರವರ ಪ್ರಕಾರ  ಭಾಷೆ ಅರಿವಿನ ವ್ಯವಸ್ಥೆಯಲ್ಲಿ ನಡೆಯುವ ಪರಸ್ಪರರ ವರ್ತನೆಯ ಪರಿಸರದಲ್ಲಿ ಸಂರಚನೆಗೊಳ್ಳುತ್ತದೆ.<br>
+
#ಭಾಷೆಯ ಸ್ವಭಾವ ಹಾಗೂ ಸಂರಚನೆಯ ಕುರಿತು ಹಾಗು ವಿಶೇಷವಾಗಿ ಬಹುಭಾಷಾ ಸಂದರ್ಭಗಳಲ್ಲಿ ಭಾಷಾ ಬೋಧನೆ-ಕಲಿಕಾ ಪ್ರಕ್ರಿಯೆಗಳ ಅರ್ಥೈಸಿಕೊಳ್ಳುವಿಕೆಯಲ್ಲಿರುವ ಕೊರತೆ.
ಮಂತ್ತೊಂದೆಡೆ,  ಮಗುವಿನ ಮಾತು ಸಮಾಜದಲ್ಲಿ ಪರಸ್ಪರರೊಡನೆ ನಡೆಯುವ ಸಂಭಾಷಣೆಯ ಫಲಿತಾಂಶವಾಗಿರುತ್ತದೆ ಎಂದು ವೆಗಾಟ್ಸಕಿ ನಂಬುತ್ತಾರೆ. ಮಗು ತನ್ನ ಭಾಷಾ ಬೆಳವಣಿಗೆಯಲ್ಲಿ ವ್ಯಕ್ತಿ ಕೇಂದ್ರಿತ ಮತ್ತು ಸಾಮಾಜಿಕ ಎಂಬ ಎರಡು ರೀತಿಯ ಸಂಭಾಷಣೆಯನ್ನು  ಬಳಸುತ್ತದೆ . ವ್ಯಕ್ತಿ ಕೇಂದ್ರಿತ ಸಂಭಾಷಣೆ ಮಗುವನ್ನು ಆಧರಿಸಿದ್ದರೆ, ಸಮಾಜಿಕ ಸಂಭಾಷಣೆ ಸಮಾಜವನ್ನು ಆಧರಿಸಿರುತ್ತದೆ. ಇದು ಪಿಯಾಜೆ ಮತ್ತು ವೆಗಾಟ್ಸಕಿ ರವರು ಮಕ್ಕಳೊಡನೆಯೇ ಆದ್ಯಯನ ಮಾಡಿ ಅವರನ್ನು ಸೂಕ್ಷ್ಮವಾಗಿ ಗಮನಿಸಿ, ಅವರ ಭಾಷಾ ವೈಖರಿಯನ್ನು ದಾಖಲಿಸಿ, ಜ್ಞಾನದ ಬೆಳವಣಿಗೆಯನ್ನು ವಿಶ್ಲೇಷಿಸಿ ಮಾಡಿರುವ ವರಿದಿಯಾಗಿದ್ದು ಬಹಳ ಮುಖ್ಯವಾಗಿದೆ. 
+
#ಜ್ಞಾನ ರಚನೆಯಲ್ಲಿ ಭಾಷೆಯು ಸಮಗ್ರ ಪಠ್ಯಕ್ರಮಕ್ಕೆ ಸಾಮಾನ್ಯವಾಗಿ ಅನ್ವಯವಾಗುವಂತೆ ವಹಿಸುವ ಪಾತ್ರವನ್ನು ಅರ್ಥೈಸಿಕೊಳ್ಳುವಲ್ಲಿ ಶೈಕ್ಷಣಿಕ ಯೋಜನೆ ತಯಾರಿಸುವವರು ಸೋತಿರುವುದು.  
ಉದಾಹರಣೆಗೆ: ವೆಗಾಟ್ಸಕಿ ಗುರುತಿಸಿದ ಅಂಶಗಳಲ್ಲಿ ಮುಖ್ಯವಾದುದೆಂದರೆ, ಸಣ್ಣ ಮಕ್ಕಳು ಕೇವಲ ತಮ್ಮ ಸಾಮಾಜಿಕ ಮಾದ್ಯಮದ ಸಂಭಾಷಣಾ ವ್ಯವಸ್ಥೆಯನ್ನು ಮಾತ್ರವೇ ಅಭಿವೃದ್ದಿಪಡಿಸಿಕೊಳ್ಳದೇ, ಬಹುಸಂಕೀರ್ಣ ಪೂರ್ವ ಬೆಳವಣಿಗೆ ವ್ಯವಸ್ಥೆಯನ್ನು  ಸಹ ಅಭಿವೃದ್ದಿಪಡಿಸಿಕಕೊಳ್ಳುತ್ತಿದ್ದಾರೆ.ಸ್ವಲ್ಪ ಕಾಲದ ನಂತರ ವಿಶ್ವದ ಬಹುಭಾಷೆಗಳೊಡನೆ ವ್ಯವಹರಿಸಲು ಈ ಮಕ್ಕಳಿಗೆ ಸಂಕೀರ್ಣ ಮೌಖಿತ ಭಾಷಾ ಭಂಡಾರದ ಅಗತ್ಯತೆ ಇದೆ.
+
#ಭಾಷೆಯಲ್ಲಿ ಜಾತಿ, ಜನಾಂಗ, ಲಿಂಗ ಸಂಬಂಧೀ ವಿಷಯಗಳೂ ಸೇರಿದಂತೆ ಅನೇಕ ಪೂರ್ವಾಗ್ರಹಗಳು ಅಡಕಗೊಳ್ಳಲ್ಪಡುತ್ತವೆ ಎಂಬುದಕ್ಕೆ ಹೆಚ್ಚು ಗಮನ ನೀಡದಿರುವುದು.
==ಭಾಷೆಯ ಬಗೆಗೆ ಪಿಯಾಜೆ ದೃಷ್ಟಿಕೋನ ==
+
#ಭಾಷೆಯು ಕೇವಲ ಗಧ್ಯ, ಪದ್ಯ, ಪ್ರಬಂಧ ಹಾಗೂ ಕಥೆಗಳಿಗಿಂತಲೂ ಹೆಚ್ಚಿನದನ್ನು ಒಳಗೊಂಡಿದೆ ಎನ್ನುವುದನ್ನು ಗ್ರಹಿಸುವಲ್ಲಿ ಇರುವ ಅಸಮರ್ಥತೆ.
ನಾವು ಭಾಷಾ ಸ್ವಾದೀನತೆಯನ್ನು ನೋಡುವ ರೀತಿಯಲ್ಲಿ ಚೋಮ್ ಸ್ಕೀ ರವರ  ಮನೋವಾದಿ ಕಲ್ಪನೆಗಳು ಅಗಾಧವಾದ ಪರಿಣಾಮ ಬೀರಿದೆ ಎಂಬುದು ಶೈಕ್ಷಣಿಕ ಕ್ಷೇತ್ರದಲ್ಲಿ  ಬಹಳ ಪ್ರಭಾವ ಹೊಂದಿರುವ ಪಿಯಾಜೆ ರವರ ಅಭಿಪ್ರಾಯ. . ಇದರ ಒಳಾರ್ಥವೆಂದರೆ ಎಲ್ಲಾ ಮಕ್ಕಳು ಪೂರ್ವ ಕಾರ್ಯವಿಧಾನ, ಸಂರಚನ ಕಾರ್ಯವಿಧಾನ ಮತ್ತು ಔಪಚಾರಿಕ ಕಾರ್ಯವಿಧಾನ ಹಂತದ ಶೈಕ್ಷಣಿಕ ಸಂವಾದಗಳ ಮೂಲಕ ತಮ್ಮ ಜ್ಞಾನದ ಬೆಳವಣಿಗೆಯನ್ನು  ನಿರ್ದಿಷ್ಟ ಹಂತಕ್ಕೆ ಮಿತಿಗೊಳಿಸಿದ್ದಾರೆ. ದುರದೃಷ್ಟಕರ ವಿದ್ಯಾಮಾನವೆಂದರೆ ಶಿಕ್ಷಣ ತಜ್ಞರು ಮತ್ತು ಭಾಷಾ ವೃತ್ತಿಪರರು ಚೋಮ್ ಸ್ಕೀ ರವರ ಭಾಷಾ ಪ್ರಸ್ತಾವಗಳ ಪೂರ್ಣ ಸಾಮರ್ಥ್ಯಗಳನ್ನು ಬಳಸಿಕೊಳ್ಳಲು ಸಾದ್ಯವಾಗಿಲ್ಲ. ಚೋಮ್ ಸ್ಕೀ ರವರವ ಸಲಹೆಯ ಪ್ರಕಾರ ಭಾಷಾ ಸ್ವಾದೀನ ಪ್ರಕ್ರಿಯೆಗೆ ಅನಿವಾರ್ಯವಾಗಿ ಮಾಹಿತಿಗಳು, ಮಾಹಿತಿ ವರ್ಗೀಕರಣ, ಮಾಹಿತಿ ವಿಂಗಡಣೆಯಂತಹ  ವೃಜ್ಞಾನಿಕ ವಿಚಾರಣೆಯ ಪ್ರಕ್ರಿಯೆಗಳು ಇರಲೇಬೇಕು.
+
#ಜ್ಞಾನಾತ್ಮಕ ಬೆಳವಣಿಗೆಯಲ್ಲಿ ಮನೆ ಹಾಗು ನೆರೆಹೊರೆಯ ಭಾಷೆಯ ಪಾತ್ರವನ್ನು ಒಪ್ಪಿಕೊಳ್ಳಲು ಮನಸ್ಸು ಮಾಡದಿರುವುದು ಹಾಗೂ ಜ್ಞಾನಾತ್ಮಕವಾಗಿ ಅಭಿವೃದ್ದಿ ಹೊಂದಿದ ಭಾಷಾ ಸಾಮರ್ಥ್ಯವು ವಿವಿಧ ಭಾಷೆಗಳಿಗೆ ವರ್ಗಾಯಿಸಲ್ಪಡುತ್ತದೆ ಎನ್ನುವುದನ್ನು ಗುರುತಿಸುವಲ್ಲಿನ ಸೋಲು.
ಪಿಯಾಜೆರವರು ಸಹಜ ಭಾಷಾ ಭೋದನಾ ಸಿದ್ದಾಂತವನ್ನು ಒಪ್ಪಿಕೊಂಡಿರಲಿಲ್ಲ. ಪಿಯಾಜೆ ರವರವ ರಚನಾತ್ಮಕ ವಿಧಾನದ ಪ್ರಕಾರ, ಮಗುವಿನ ಹೊಂದಾಣಿಕೆಯಲ್ಲಿ ರಚನೆಯಾಗುವ ವಿವಿಧ ಯೋಜನೆಗಳ ಪ್ರಕ್ರಿಯೆಯಲ್ಲಿ ಸಂವೇದನಾ ಕಾರ್ಯವಿಧಾನಗಳ ಮೂಲಕ ಎಲ್ಲಾ ಜ್ಞಾನ ವ್ಯವಸ್ಥೆಗಳು ರಚನೆಯಾಗುತ್ತವೆ.  
+
 
==ಭಾಷೆ ಭೋದನೆಯ ಉದ್ದೇಶಗಳು ==
+
ನಮ್ಮ ಉಳಿವಿಗೆ ಭಾಷಾ ವೈವಿಧ್ಯತೆಯು ಜೀವ ವೈವಿಧ್ಯತೆಯಷ್ಟೇ ಮುಖ್ಯವಾಗಿದೆ ಎನ್ನುವುದು ಹೆಚ್ಚು ಹೆಚ್ಚಾಗಿ ಸ್ಪಷ್ಟವಾಗುತ್ತಿದೆ. ನಾವು ಮಕ್ಕಳ ಮಾತೃಭಾಷೆಗಳಲ್ಲಿ ಶಿಕ್ಷಣ ನೀಡಲು ವ್ಯವಸ್ಥೆ ಮಾಡುವುದು ಮತ್ತು ಬಹುಭಾಷಾ ಸಂದರ್ಭವನ್ನು ತರಗತಿಯಲ್ಲಿ ಲಭ್ಯವಿರುವ ಸಂಪನ್ಮೂಲವಾಗಿ ಬಳಸಿಕೊಳ್ಳುವಲ್ಲಿ ಶಿಕ್ಷಕರಿಗೆ ತರಬೇತಿ ನೀಡುವುದು ಅಗತ್ಯವೂ ಅನಿವಾರ್ಯವೂ ಆಗಿದೆಇತ್ತೀಚೆಗಿನ ಸಂಶೋಧನೆಗಳು ಕೂಡಾ ಬಹುಭಾಷಾ ಪ್ರೌಡಿಮೆ ಮತ್ತು ಶೈಕ್ಷಣಿಕ ಸಾಧನೆಗಳ ನಡುವೆ ಧನಾತ್ಮಕ ಸಹಸಂಬಂಧ ಇರುವುದನ್ನು ತೋರಿಸಿಕೊಟ್ಟಿವೆ.<br>
ಬಹಳಷ್ಟು ಮಕ್ಕಳು ಶಾಲೆಗೆ ಸೇರುವಷ್ಟರಲ್ಲಿ ಪರಿಪೂರ್ಣವಾದ ಭಾಷಾ ವ್ಯವಸ್ಥೆಯನ್ನು ಪಡೆದು ಬಂದಿರುತ್ತಾರೆ, ಆದ್ದರಿಂದ ಶಾಲಾ ಪಠ್ಯಕ್ರಮ ಭಾಷೆಗಳ ಭೋಧನೆ ಕುರಿತಂತೆ ನಿರ್ದಿಷ್ಟ ಉದ್ದೇಶಗಳನ್ನು ಹೊಂದಿರಬೇಕು. ಭಾಷಾ ಭೋದನೆಯ ಒಂದು ಪ್ರಮುಖ ಉದ್ದೇಶವೆಂದರೆ ಕಲಿಯುವವರನ್ನು ಸಾಕ್ಷರರಾಗುವಂತೆ ಸಜ್ಜುಗೊಳಿಸುವುದು ಹಾಗು ತಿಳುವಳಿಕೆಯಿಂದ ಓದಲು ಮತ್ತು ಬರೆಯಲು ಸಮರ್ಥರಾಗುವಂತೆ ಮಾಡುವುದು .ಮಕ್ಕಳು ಈಗಾಗಲೇ ಹೊಂದಿರುವ ಸಹಜ-ಭಾಷಾ ಸಾಮರ್ಥ್ಯವನ್ನು ಮತ್ತು ಭಾಷೆಯ ಬಗೆಗಿನ ಅರಿವನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಪ್ರಯತ್ನಿಸುವುದುಹಾಗೆಯೇ, ಇತರರೊಡನೆ ಸಮಾಲೋಚಿಸಲು ಮತ್ತು ವಿಶ್ವಾಸಕ್ಕೆ ತೆಗೆದುಕೊಳ್ಳಲು ಬೇಕಾಗಿರುವ ಅಭಿವ್ಯಕ್ತಿ ಸಾಮರ್ಥ್ಯಗಳೊಂದಿಗೆ ಮಕ್ಕಳನ್ನು ಸಜ್ಜುಗೊಳಿಸುವುದು ನಮ್ಮ ಪ್ರಮುಖ ಉದ್ದೇಶ. <br>
+
ಬಹುಭಾಷಿಕತೆಯು ಹೆಚ್ಚಿನ ಜ್ಞಾನಾತ್ಮಕ ನಮ್ಯತೆ ಮತ್ತು ಸಾಮಾಜಿಕ ಸಹಿಷ್ಣುತೆಗಳನ್ನು ಸಾಧ್ಯವಾಗಿಸುತ್ತದೆ ಎನ್ನುವುದನ್ನೂ ಅವು ತೋರಿಸಿವೆ. ನಾವು ಆತಂಕರಹಿತ ಸಂದರ್ಭಗಳಲ್ಲಿ ಗ್ರಹಿಸಿಕೊಳ್ಳಬಹುದಾದ ಅನುಭವಗಳನ್ನು ನೀಡಬೇಕಾಗಿದೆ ಮತ್ತು ಜಾತಿ, ಬಣ್ಣ ಹಾಗು ಲಿಂಗ ತಾರತಮ್ಯಗಳನ್ನು ನಿವಾರಿಸಲು ಎಲ್ಲ ಪ್ರಯತ್ನ ಮಾಡಬೇಕಾಗಿದೆ. ಶೈಕ್ಷಣಿಕ ಯೋಜನೆ ತಯಾರಿಸುವವರು ಪಠ್ಯಕ್ರಮದ ಎಲ್ಲಾ ಆಯಾಮಗಳನ್ನು ಒಳಗೊಳ್ಳುವ ಭಾಷೆಗೆ ಗಮನ ನೀಡದಿದ್ದಲ್ಲಿ ಸಮತೆ, ನ್ಯಾಯ, ಪ್ರಜಾಸತ್ತೀಯ ಗುರಿಗಳು ದೂರದ ಕನಸುಗಳಾಗಿಯೇ ಉಳಿದಾವು.<br>  
ಭಾಷಾ ಸಿದ್ದಾಂತ ಮತ್ತು ಅನ್ವಯಿಕ ಭಾಷಾ ಶಾಸ್ತ್ರಗಳ ನಡುವಿನ ಪರಸ್ಪರ ಸಂವಾದದಿಂದಾಗಿ ಅನೇಕ ವಿಧದ ಭೋದನಾ ವಿಧಾನ ಮತ್ತು ಸಾಮಗ್ರಿಗಳು ಬಳಕೆಗೆ ಬಂದರೂ, ತರಗತಿಯಲ್ಲಿನ ಭಾಷಾ ಶಿಕ್ಷಣ ಅತ್ಯಂತ ನೀರಸ ಹಾಗು ಸವಾಲುರಹಿತ ವಾಗಿಯೇ ಉಳಿದುಕೊಂಡಿದೆ.<br>
+
೧೦ನೇ ಅಧ್ಯಾಯದಲ್ಲಿ ಮಾಡಿರುವ ಶಿಫಾರಸ್ಸುಗಳನ್ನು ಹಾಗೂ ಶಾಲಾ ಪಠ್ಯಕ್ರಮದಲ್ಲಿ ಭಾಷೆಗಳ ಕುರಿತಂತೆ ಪ್ರಸ್ತಾಪಿಸಲಾಗಿರುವ ಅಂಶಗಳನ್ನು ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕಾಗಿದೆ. '''
ವರ್ತನಾವಾದಿ ಮಾದರಿಗಳ ಪ್ರಾಬಲ್ಯ ಮೇಲ್ಕಂಡ ಸನ್ನಿವೇಶದಲ್ಲಿ ಬಹಳವಾಗಿ ಕಂಡುಬರುತ್ತದೆ. ಮಕ್ಕಳು ಈಗಾಗಲೇ ತಿಳಿದಿರುವ ಭಾಷೆಗಳ ವಿಚಾರಕ್ಕೆ ಬಂದರೆ, ಭಾಷಾ ಸಾಮರ್ಥ್ಯದ ಪ್ರಗತಿ ಅತಿ ವಿರಳವಾಗಿದೆ. ಎರಡನೇ ಭಾಷೆಯಾಗಿ ಇಂಗ್ಲೀಷ್ ಕಲಿಯುವ  ವಿಷಯಕ್ಕೆ ಬಂಧಶರೆ, ಆರರಿಂದ ಹತ್ತು ವರುಷಗಳ ಶಾಲಾ ಕಲಿಕೆಯ ಬಳಿಕವೂ ಮೂಲಭೂತ ಕುಶಲತೆಯನ್ನು ಗಳಿಸಿರುವುದಿಲ್ಲ.  ಶಾಸ್ತ್ರೀಯ ಅಥವಾ ವಿದೇಶಿ ಭಾಷೆಗಳ ಕಲಿಕೆ ಕೇವಲ ಕೆಲವು ಆಯ್ದ ಗ್ರಂಥಗಳು, ನಾಮಪದ ಮತ್ತು ಕ್ರಿಯಾಪದಗಳ ಕಂಠಪಾಠಕ್ಕೆ ಸೀಮಿತವಾಗಿದೆ.  ಈ ಮೇಲಿನ ವಿಷಯಗಳನ್ನು ಬೆಂಬಲಿಸುವ ಪ್ರಾಯೋಗಿಕ ಅಧ್ಯಯನಗಳು ಸಾಕಷ್ಟಿವೆ.ನಾವು ನಿರ್ಧಿಷ್ಟ ಸಂದರ್ಭಗಳನ್ನು, ಗುರಿಗಳನ್ನು ಗುರುತಿಸಿ, ವಿಶ್ಲೇಷಿಸಿ ಹಾಗು ಅರ್ಥಮಾಡಿಕೊಂಡು ಸೂಕ್ತ ವಿಧಾನಗಳನ್ನು ಮತ್ತು ಕಲಿಕಾ ಸಾಮಗ್ರಿಗಳನ್ನು ಅಭಿವೃದ್ದಿಪಡಿಸುವುದು ಅನಿವಾರ್ಯವಾಗಿದೆ.<br>
+
ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್ ನ ಅಧ್ಯಾಯಗಳನ್ನು ಕೆಳಕಂಡ ಲಿಂಕ್ ಗಳಲ್ಲಿ ಓದಬಹುದಾಗಿದೆ.'''
ಬಹಳ ದೀರ್ಘಕಾಲದಿಂದ ಭಾಷಾಬೋಧನೆಯ ಉದ್ದೇಶವನ್ನು  ಕೇಳುವ, ಮಾತನಾಡುವ, ಓದುವ ಮತ್ತು ಬರೆಯುವ ವಿಚಾರದ ಸುತ್ತಲೇ ಹೆಣೆಯಲಾಗಿದೆ. ಇತ್ತೀಚೆಗೆ ಅಷ್ಟೇ ಹಾನಿಕರವಾದ ರೀತಿಯಲ್ಲಿ ಸಂವಹನ ಕೌಶಲ್ಯ, ಸ್ಪಷ್ಟ ಉಚ್ಚಾರಣೆ  ಮತ್ತು ಧ್ವನಿ ತರಭೇತಿಗಳ ಹಿಂದೆ  ಬಿದ್ದಿದ್ದೇವೆ. <br>
+
#[http://karnatakaeducation.org.in/KOER/index.php/ಎನ್.ಸಿ.ಎಪ್_ಪೊಶೀಷನ್_ಪೇಪರ್_ಭಾಷೆಯ_ಸ್ವರೂಪ ಆಧ್ಯಾಯ-೧ ಎನ್.ಸಿ.ಎಫ್ ಪೊಶೀಷನ್ ಪೇಪರ್- ಭಾಷೆಯ ಸ್ವರೂಪ]
ಭಾಷಾಬೋಧನೆಯ ಗಮನವನ್ನು ಇಂತಹ ಪ್ರತ್ಯೇಕವಾದ ಕೌಶಲ್ಯಗಳಿಗೆ ಮೀಸಲಾಗಿರಿಸಿದ್ದು ಪ್ರತಿಕೂಲ ಪರಿಣಾಮಗಳನ್ನು ಬೀರಿದೆ. <br>
+
#[http://karnatakaeducation.org.in/KOER/index.php/ಎನ್.ಸಿ.ಎಪ್_ಪೊಶೀಷನ್_ಪೇಪರ್_ಭಾಷೆ_ಕಲಿಕೆ ಅಧ್ಯಾಯ-೨ ಎನ್.ಸಿ.ಎಫ್ ಪೊಶೀಷನ್ ಪೇಪರ್-ಭಾಷೆ ಕಲಿಕೆ]
ಈ ಲೇಖನದಲ್ಲಿ ಸ್ವಲ್ಪ ಮಟ್ಟಿಗೆ ಇದೇ ಮಾದರಿಯನ್ನು ಅನುಸರಿಸಿ ಉದ್ದೇಶಗಳನ್ನು ವಿವರಿಸಲಾಗಿದೆಯಾದರೂ, ಭಾಷಾ ಪ್ರಾವೀಣ್ಯತೆಯನ್ನು ಸಮಗ್ರ ದೃಷ್ಟಿಕೋನದಿಂದ ನೋಡಲು ಹೆಚ್ಚು ಒತ್ತು ನೀಡಲಾಗಿದೆ.  ಏನೇ ಇದ್ದರೂ ನಾವು ಮಾತನಾಡುವಾಗ ಏಕಕಾಲದಲ್ಲಿ ಆಲಿಸುತ್ತಲೂ ಇರುತ್ತೇವೆ. ಹಾಗೆಯೇ ಬರೆಯುವಾಗ ವಿವಿಧ ರೀತಿಯಲ್ಲಿ ಓದುತ್ತಿರುತ್ತೇವೆ ಮತ್ತು ಎಷ್ಟೋ ಸಂದರ್ಭಗಳಲ್ಲಿ ಭಾಷಾ ಕೌಶಲಗಳನ್ನು ಅರಿವಿನ ಸಾಮರ್ಥ್ಯದೊಂದಿಗೆ ಅನೇಕ ರೀತಿಯಲ್ಲಿ ಉಪಯೋಗಿಸಿರುತ್ತೇವೆ. ಉದಾಹರಣೆಗೆ , ಸ್ನೇಹಿತರೆಲ್ಲಾ ಒಟ್ಟಾಗಿ ನಾಟಕವನ್ನು ಓದುತ್ತಾ, ನಾಟಕವಾಡಲು ಟಿಪ್ಪಣಿ ತೆಗೆದುಕೊಳ್ಳುವುದು. <br>
+
#[http://karnatakaeducation.org.in/KOER/index.php/ಎನ್.ಸಿ.ಎಪ್_ಪೊಶೀಷನ್_ಪೇಪರ್_ಸಾಂವಿಧಾನಿಕ_ಅವಕಾಶಗಳು_ಹಾಗೂ_ತ್ರೀಭಾಷಾ_ಸೂತ್ರ ಅಧ್ಯಾಯ-೩ ಎನ್.ಸಿ.ಎಫ್ ಪೊಶೀಷನ್ ಪೇಪರ್-ಸಾಂವಿಧಾನಿಕ ಅವಕಾಶಗಳು ಹಾಗು ತ್ರಿಭಾಷಾ ಸೂತ್ರ]
ನಮ್ಮ ಕೆಲವು ಉದ್ದೇಶಗಳು ಕೆಳಗಿನ ಅಂಶಗಳನ್ನು ಒಳಗೊಂಡಿವೆ :-
+
#[http://karnatakaeducation.org.in/KOER/index.php/ಎನ್.ಸಿ.ಎಪ್_ಪೊಶೀಷನ್_ಪೇಪರ್_ಶಾಲಾ_ಪಠ್ಯಕ್ರಮದಲ್ಲಿ_ಇತರೆ_ಭಾಷಾ_ಸಮಸ್ಯೆಗಳು ಅಧ್ಯಾಯ-೪ ಎನ್.ಸಿ.ಎಫ್ ಪೊಶೀಷನ್ ಪೇಪರ್ -ಶಾಲಾ ಪಠ್ಯಕ್ರಮದಲ್ಲಿ ಇತರೆ ಭಾಷಾ ಸಮಸ್ಯಗಳು]
#ಕೇಳಿದ್ದನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ :  ವಿಧ್ಯಾರ್ಥಿಯು ಹೇಳುವವರ ವಿವಿಧ ರೀತಿಯ ಅಮೌಖಿಕ ಸೂಚನೆ/ಸನ್ನೆ ಗಳನ್ನು ಅರ್ಥಮಾಡಿಕೊಳ್ಳಲು ಶಕ್ತನಾಗಿರಬೇಕು. ಕೇಳಿದ ಕ್ರಮದಲ್ಲಷ್ಟೇ ಅಲ್ಲದೇ ವಿವಿಧ ರೀತಿಯಲ್ಲಿ ಕೇಳಿದ್ದನ್ನು ಆಲಿಸಿ ಅರ್ಥ ಮಾಡಿಕೊಂಡು ಸಂಬಂಧಗಳನ್ನು ಕಲ್ಪಿಸಿ ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ನುರಿತನಾಗಿರಬೇಕು .  
+
#[http://karnatakaeducation.org.in/KOER/index.php/ಎನ್.ಸಿ.ಎಪ್_ಪೊಶೀಷನ್_ಪೇಪರ್_ಬಹು_ಭಾಷಾ_ಹಾಗೂ_ತತ್ವಶಾಸ್ತ್ರದ_ಸಾಧನೆ ಅಧ್ಯಾಯ-೫ ಎನ್.ಸಿ.ಎಫ್ ಪೊಶೀಷನ್ ಪೇಪರ್-ಬಹುಭಾಷಾ ಹಾಗು ತತ್ವಶಾಸ್ತ್ರದ ಸಾಧನೆ]
#ಕೇವಲ ಸಾಂಕೇತಿಕವಲ್ಲದ, ಗ್ರಹಿಕೆಯುಕ್ತ ಓದುವ ಸಾಮರ್ಥ್ಯ :  ಮಕ್ಕಳು ವಿವಿಧ ವಾಕ್ಯರಚನೆಯ ಶಬ್ದಾರ್ಥಗಳನ್ನು ಸಂಜ್ಙೆ ಸೂಚನೆಗಳನ್ನು ಬಳಸಿ ರೇಖೀಯವಲ್ಲದ ರೀತಿಯಲ್ಲಿ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು.  ತಮ್ಮ ಹಿಂದಿನ ಜ್ಞಾನದ ಮೂಲಕ ತರ್ಕಗಳಿಗೆ ಅರ್ಥವನ್ನು ಹುಡುಕುತ್ತಾ, ಪಠ್ಯವನ್ನು ತಮ್ಮ ಹಿಂದಿನ ಜ್ಞಾನಕ್ಕೆ ಸಂಬಂಧೀಕರಿಸಬೇಕು. ಮಕ್ಕಳು ಕ್ಲಿಷ್ಟಕರವಾದ ಮತ್ತು ಹೆಚ್ಚು ಪ್ರಶ್ನೆಗಳಿಂದ ಕೂಡಿರುವ ಪುಸ್ತಕವನ್ನು ವಿಮರ್ಶನಾತ್ಮಕವಾಗಿ ಓದುವ ಆತ್ಮವಿಶ್ವಾಸ ಬೆಳೆಸಬೇಕು.  
+
#[http://karnatakaeducation.org.in/KOER/index.php/ಎನ್.ಸಿ.ಎಫ್_ಪೊಶೀಷನ್_ಪೇಪರ್_ಭಾಷಾ_ಕಲಿಕಾ_ವಿಧಾನಗಳು ಅಧ್ಯಾಯ-೬ ಎನ್.ಸಿ.ಎಫ್ ಪೊಶೀಷನ್ ಪೇಪರ್-ಭಾಷಾ ಕಲಿಕಾ ವಿಧಾನಗಳು]
#ಸುಲಲಿತ ಅಭಿವ್ಯಕ್ತಿ : ವಿಧ್ಯಾರ್ಥಿಯು ತನ್ನ ಅಭಿವ್ಯಕ್ತಿ ಕೌಶಲಗಳನ್ನು ವಿವಿಧ ಸನ್ನಿವೇಶಗಳಲ್ಲಿ ಬಳಕೆ ಮಾಡುವುದರಲ್ಲಿ ಶಕ್ತರಾಗಬೇಕು. ಅವರ ಬತ್ತಳಿಕೆಯಲ್ಲಿ ಹಲವಾರು ಶೈಲಿಗಳಿದ್ದು ಬೇಕಾದ ಸಂದರ್ಭದಲ್ಲಿ ಅವುಗಳಿಂದ ಆಯ್ಕೆ ಮಾಡಿಕೊಳ್ಳುವ ಆಗಿರಬೇಕು. ವಿಧ್ಯಾರ್ಥಿಯು ತಾರ್ಕಿಕ, ವಿಶ್ಲೇಷಣಾತ್ಮಕ ಮತ್ತು ಸೃಜನಾತ್ಮಕವಾಗಿ ಚರ್ಚೆಯಲ್ಲಿ ತೊಡಗಿಸಿಕೊಳ್ಳಲು ಸಮರ್ಥವಾಗಿರಬೇಕು. 
+
#[http://karnatakaeducation.org.in/KOER/index.php/ಎನ್.ಸಿ.ಎಫ್_ಪೊಶೀಷನ್_ಪೇಪರ್_ಭಾಷಾ_ಕಲಿಕಾ_ಸಾಮಗ್ರಿಗಳು ಅಧ್ಯಾಯ-೭ ಎನ್.ಸಿ.ಎಫ್ ಪೊಶೀಷನ್ ಪೇಪರ್-ಭಾಷಾ ಕಲಿಕಾ ಸಾಮಗ್ರಿಗಳು]
#ಸುಸಂಬದ್ಧ ಬರವಣಿಗೆ : ಬರವಣಿಗೆ ಯಾಂತ್ರಿಕ ಕೌಶಲವಲ್ಲ, ಇದು ವ್ಯಾಕರಣ, ಶಬ್ದಕೋಶ, ವಿಷಯ ಇತ್ಯಾದಿಗಳ ನಿಯಂತ್ರಿತ ಹಾಗು ಸುಸಂಗತ ಬಳಕೆಯ ಸಾಮರ್ಥ್ಯವನ್ನು ಒಳಗೊಂಡಿದೆ. ವಿದ್ಯಾರ್ಥಿ ತನ್ನ ಆಲೋಚನೆಗಳನ್ನು ಸಲೀಸಾಗಿ ಮತ್ತು ಒಂದು ಸಂಘಟಿತ ರೀತಿಯಲ್ಲಿ ವ್ಯಕ್ತಪಡಿಸಲು ವಿಶ್ವಾಸ ಬೆಳೆಸಿಕೊಳ್ಳಬೇಕು. ತಮಗಿಷ್ಟವಾದ ವಿಷಯವನ್ನು ಆಯ್ಕೆ ಮಾಡಿ, ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಮಂಜಸವಾಗಿ ಬರೆಯಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು. ಇದು ಸಾದ್ಯವಾಗುವುದು ವಿಧ್ಯಾರ್ಥಿಗಳ ಬರವಣಿಗೆಯನ್ನು ಒಂದು ಉತ್ಪನ್ನದಂತೆ ಅಲ್ಲದೆ ಪ್ರಕ್ರಿಯೆಯಂತೆ ಕಂಡಾಗ ಮಾತ್ರ. ವಿಧ್ಯಾರ್ಥಿಗಳು ಬರವಣಿಗೆಯನ್ನು  ವಿವಿಧ ಉದ್ದೇಶ, ಸಂದರ್ಭಗಳಿಗೆ ಅನುಗುಣವಾಗಿ ಬರೆಯಲು ಸಮರ್ಥರಾಗಿರಬೇಕು.  
+
#[http://karnatakaeducation.org.in/KOER/index.php/ಎನ್.ಸಿ.ಎಫ್_ಪೊಶೀಷನ್_ಪೇಪರ್_ಭಾಷಾಬೋಧನೆಯಲ್ಲಿ_ಶಿಕ್ಷಕರು ಅಧ್ಯಾಯ-೮ ಎನ್.ಸಿ.ಎಫ್ ಪೊಶೀಷನ್ ಪೇಪರ್-ಭಾಷಾಬೋಧನೆಯಲ್ಲಿ ಶಿಕ್ಷಕರು]
#ವಿವಿಧ ಭಾಷಾ ದಾಖಲೆಪಟ್ಟಿಗಳ (ರಿಜಿಸ್ಟರ್) ಮೇಲೆ ನಿಯಂತ್ರಣ : ಭಾಷಾ ಬಳಕೆ ಎಂದಿಗೂ ಏಕರೂಪವಾದ ಶೈಲಿಯಲ್ಲಿ ಆಗುವುದಿಲ್ಲ ವಿವಿಧ ಕ್ಷೇತ್ರ ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಲೆಕ್ಕವಿಲ್ಲದಷ್ಟು ಪ್ರಭೇದಗಳು, ಛಾಯೆಗಳು ಮತ್ತು ಬಣ್ಣಗಳನ್ನು ಭಾಷೆ ಹೊಂದಿದೆ. ಇಂತಹ ವ್ಯತ್ಯಾಸಗಳನ್ನು ಭಾಷಾ ದಾಖಲೆ ಪಟ್ಟಿ (ರಿಜಿಸ್ಟರ್) ಗಳೆನ್ನುತ್ತಾರೆ. ಈ ವ್ಯತ್ಯಾಸಗಳು ವಿಧ್ಯಾರ್ಥಿಗಳ ಭಾಷಾಜ್ಞಾನದ ಅತಿ ಪರಿಚಿತ ಭಾಗವಾಗಬೇಕು. ಪಠ್ಯ ವಿಷಯಗಳ ಭಾಷಾ ದಾಖಲೆಪಟ್ಟಿಗಳ ಜೊತೆಗೆ ಸಂಗೀತ, ಕ್ರೀಡೆ, ಚಲನಚಿತ್ರಗಳು, ತೋಟಗಾರಿಕೆ ನಿರ್ಮಾಣ ಕಾರ್ಯ, ಪಾಕಶಾಸ್ತ್ರ ಹೀಗೆ ವಿವಿಧ ಕ್ಷೇತ್ರಗಳ್ಲಿ ಬಳಕೆಯಿರುವ ದಾಖಲೆಪಟ್ಟಿಗಳನ್ನು ಅರ್ಥಮಾಡಿಕೊಳ್ಲಲು ವಿಧ್ಯಾರ್ಥಿಗಳು ಸಮರ್ಥರಾಗಬೇಕು .  
+
#[http://karnatakaeducation.org.in/KOER/index.php/ಎನ್.ಸಿ.ಎಫ್_ಪೊಶೀಷನ್_ಪೇಪರ್_ಭಾಷಾಬೋಧನೆಯ_ಮೌಲ್ಯಮಾಪನ ಅಧ್ಯಾಯ-೯ ಎನ್.ಸಿ.ಎಫ್ ಪೊಶೀಷನ್ ಪೇಪರ್-ಭಾಷಾಬೋಧನೆಯ ಮೌಲ್ಯಮಾಪನ]
#ಭಾಷೆಯ ವೈಜ್ಞಾನಿಕ ಅಧ್ಯಯನ : ಭಾಷಾ ತರಗತಿಯಲ್ಲಿನ ಬೋಧನಾ ವಿಧಾನಗಳು ಮಕ್ಕಳನ್ನು ವೈಜ್ಞಾನಿಕ ರೀತಿಯಲ್ಲಿ ಮಾಹಿತಿ ಸಂಗ್ರಹಣೆ, ವಿಶ್ಲೇಷಣೆ, ವರ್ಗೀಕರಿಸುವಿಕೆ ಮತ್ತು ವಿಚಾರ ಮಾಡುವ ಹಾಗೆ ಪ್ರೇರೇಪಿಸಬೇಕು. ಹೀಗಾಗಿ ಭಾಷಾ ಸಾಧನಗಳು ಮಗುವಿನ ಅರಿವಿನ ಸಾಮರ್ಥ್ಯದ ಅಭಿವೃದ್ದಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಬೇಕು. ಈ ಬೋಧನಾ ವಿಧಾನ ಬರೀ ವ್ಯಾಕರಣದ ನಿಯಮಗಳ ಬೋಧನೆಗಿಂತ ಹೆಚ್ಚು ಉತ್ತಮ . ಇದಲ್ಲದೇ ಈ ವಿಧಾನವು ಬಹುಭಾಷಾ ತರಗತಿಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗುತ್ತದೆ.  
+
#[http://karnatakaeducation.org.in/KOER/index.php/ಎನ್.ಸಿ.ಎಫ್_ಪೊಶೀಷನ್_ಪೇಪರ್_ಭಾಷಾಬೋಧನೆಗೆ_ಶಿಫಾರಸ್ಸುಗಳು ಅಧ್ಯಾಯ-೧೦ ಎನ್.ಸಿ.ಎಫ್ ಪೊಶೀಷನ್ ಪೇಪರ್-ಭಾಷಾಬೋಧನೆಗೆ ಕೆಲವು ಶಿಫಾರಸ್ಸುಗಳು]
#ಸೃಜನಶೀಲತೆ : ಭಾಷಾ ತರಗತಿಗಳಲ್ಲಿ ವಿದ್ಯಾರ್ಥಿಗೆ ತನ್ನ ಕಲ್ಪನಾಶಕ್ತಿ ಮತ್ತು ಸೃಜನಶೀಲತೆಯನ್ನು ಅಭಿವೃದ್ದಿಪಡಿಸಿಕೊಳ್ಳಲು ಸಾಕಷ್ಟು ಅವಕಾಶಗಳು ಇರಬೇಕು ತರಗತಿಯಲ್ಲಿನ ತತ್ವಗಳು ಮತ್ತು ಶಿಕ್ಷಕರ -ವಿದ್ಯಾರ್ಥಿಗಳ ನಡುವಿನ ಸಂಬಂಧ, ಪಠ್ಯವಿಷಯ ಹಾಗು ಚಟುವಟಿಕೆಗಳಲ್ಲಿ ನಿರಾಂತಕವಾಗಿ ಸೃಜನಶೀಲತೆಯ ಉಪಯೋಗಕ್ಕೆ ಅತ್ಮಸ್ಥೈರ್ಯವನ್ನು ಕೊಡುತ್ತದೆ.
 
#ಸೂಕ್ಷ್ಮತೆ : ಭಾಷಾ ತರಗತಿಗಳು ವಿಧ್ಯಾರ್ಥಿಗಳನ್ನು ನಮ್ಮ ಶ್ರೀಮಂತ ಸಂಸ್ಕೃತಿ, ಪರಂಪರೆ ಮತ್ತು ಸಮಕಾಲೀನ ಜೀವನದ ಅಂಶಗಳೊಂದಿಗೆ ಪರಿಚಿತಗೊಳಿಸಲು ಒಂದು ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ. ಇಷ್ಟೇ ಅಲ್ಲದೇ ತಮ್ಮ ಸುತ್ತಮುತ್ತಲಿನ ಪರಿಸರ, ಸಮಾಜ ಹಾಗು ರಾಷ್ಟ್ರದ ಕುರಿತಾಗಿ ಸೂಕ್ಷ್ಮದಿಂದ ಕಾಣುವಂತೆ ಮಾಡಲು ಭಾಷಾ ತರಗತಿಗಳು ಸಹಾಯಕ್ಕೆ ಬರುತ್ತವೆ.
 
==ಕೆಲವು ಶೈಕ್ಷಣಿಕ ಪ್ರಸ್ತಾಪಗಳು==
 
ಭಾಷಾ ಸ್ವಾದೀನತೆಯ ಮೇಲಿನ ಸಮಕಾಲೀನ ಸಂಶೋಧನೆಯು ಭಾಷಾ ಕಲಿಕೆಯು ಕಲಿಕಾರ್ಥಿಯನ್ನು  ಕೇಂದ್ರೀಕರಿಸಿದೆ.  ಕಲಿಕಾರ್ಥಿಗೆ ಆತಂಕರಹಿತ ಕಲಿಕಾ ಸಂದರ್ಭವನ್ನು ಒದಗಿಸಿದಾಗ ಒತ್ತಡರಹಿತವಾಗಿ ಭಾಷೆಯ ವ್ಯಾಕರಣವನ್ನು ಸಂರಚಿಸಿಲು ಸಾಧ್ಯವಾಗುತ್ತದೆ ಎಂಬುದನ್ನು ಈ ಸಂಶೋಧನೆ ತಿಳಿಸಿದೆ.  ಕ್ರಸೇನ್ (1985)  ಎಂಬ ಭಾಷಾತಜ್ಞರ ಸಲಹೆಯ ಪ್ರಕಾರ ,  ಭಾವನಾತ್ಮಕ ಶೋಧನೆ ಕಡಿಮೆಯಿದ್ದಾಗ ಮಾತ್ರ ತಿಳಿವಳಿಕೆ ಅಥವಾ ಒಳಹರಿವು ಗಟ್ಟಿಕಲಿಕೆಯಾಗಲು ಸಾಧ್ಯ. ಉದಾ: ನಮ್ಮ ಮನೋಭಾವ ಧನಾತ್ಮಕವಾಗಿದ್ದಾಗ ನಮ್ಮ ಪ್ರೇರಣೆಗಳು ಪ್ರಬಲವಾಗಿರುತ್ತವೆ.  ಇಂಗ್ಲೀಷ್ ವಿದೇಶಿ ಭಾಷೆಯಾಗಿದ್ದರೂ ಸಹ ಕೆಲವು ಸಂದರ್ಭಗಳಲ್ಲಿ ಕಲಿಕಾರ್ಥಿಯ ವ್ಯಾಕರಣ ಮೌಲ್ಯಗಳಲ್ಲಿ ಪ್ರಜ್ಞಾಪೂರ್ವಕ ಪ್ರತಿಫಲನವನ್ನು ಪ್ರಚೋದಿಸುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಮಕ್ಕಳು ತಾವು ಬರೆದದ್ದನ್ನು ತಿದ್ದಲು ಸಾಕಷ್ಟು ಸಮಯ ಮತ್ತು ಸ್ವಾತಂತ್ರ್ಯ  ಪಡೆದಾಗ ತಮ್ಮ ಕಲಿಕೆಯನ್ನು ಹೇಗೆ ಸುಧಾರಿಸಿಕೊಳ್ಳುತ್ತಾರೆ ಎಂಬುದನ್ನು  'ಕ್ರಸೇನ್' ರವರು ತೋರಿಸಿಕೊಟ್ಟಿದ್ದಾರೆ. <br>
 
ಜ್ಞಾನದ ಬೆಳವಣಿಗೆಯ ತುಲನಾತ್ಮಕ ಆದೇಶದ ಹಂತಗಳು ಪ್ರಮುಖವಾಗಿ  ತಮ್ಮ ಕಲಿಕಾ ಪ್ರಕ್ರಿಯೆಯಲ್ಲಿನ ದೋಷಗಳನ್ನು  ಕಂಡುಕೊಳ್ಳಲು ಮತ್ತು ಬಗೆಹರಿಸಿಕೊಳ್ಳಲು ಭಾಷಾ ಶಿಕ್ಷಕರನ್ನು ಪ್ರೋತ್ಸಾಹಿಸುತ್ತವೆ.<br>
 
ಪಿಯಾಜೆ ರವರ ಸಿದ್ದಾಂತವು ಕಲಿಕಾ ಪರಿಸರದೊಡನೆ ಸಂವಾದ ನಡೆಸುವ, ಪ್ರಮುಖ ಸಂದರ್ಭದಲ್ಲಿ ಭಾಷಾ ಬೋಧನೆಯ  ಪ್ರಾಮುಖ್ಯತೆಯನ್ನು  ವಿವರಿಸಿದೆ. <br>
 
ವೆಗಾಟ್ಸ ಕೀ ಕಲ್ಪನೆಯ ಪ್ರಕಾರ ಮಗು-ಕೇಂದ್ರಿತ ಭಾಷಾ ಬೋಧನೆ  ಮಗುವಿನ ಕ್ಷಿಪ್ರ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಮೂಲಕ ಔಪಚಾರಿಕ ತರಗತಿ ವ್ಯವಸ್ಥೆಯಲ್ಲಿ ಸಹಜ ಭಾಷಾ ಕಲಿಕಾ ಸನ್ನಿವೇಶಗಳನ್ನು ಸಾಧ್ಯವಾದಲೆಲ್ಲ ಸೃಷ್ಟಿಸಬೇಕೆಂಬುದು ಇತ್ತೀಚಗೆ ಸ್ಪಷ್ಟವಾಗುತ್ತಿದೆ.
 
=ಸಾಂವಿಧಾನಿಕ ಅವಕಾಶಗಳು ಹಾಗೂ ತ್ರೀಭಾಷಾ ಸೂತ್ರ=
 
==ಪರಿಚಯ==
 
ಈ ಅಧ್ಯಾಯದಲ್ಲಿ, ಭಾರತದ ಸಂವಿಧಾನದಲ್ಲಿ ಒದಗಿಸಿರುವ ಭಾಷಾ ಅವಕಾಶಗಳ ಕುರಿತು ಹಾಗೂ ತ್ರಿಭಾಷಾ ಸೂತ್ರದ ಕುರಿತು ಚರ್ಚಿಸುತ್ತೇವೆ. ತ್ರಿಭಾಷಾ ಸೂತ್ರದ ಅನುಷ್ಠಾನದಲ್ಲಿ ಒಂದು ರಾಜ್ಯದ ಒಳಗಡೆ ಮತ್ತು ರಾಜ್ಯಗಳ ಮಧ್ಯೆ ಸಾಕಷ್ಟು ಹೊಂದಾಣಿಕೆಗೆ ಅವಕಾಶ ಇರಬೇಕೆಂಬುದು ನಮ್ಮ ಅಭಿಪ್ರಾಯ.
 
==ಸಾಂವಿಧಾನಿಕ ಅವಕಾಶಗಳು==
 
ಭಾಗ XVII ರ 343-351 ಕಲಂಗಳು ಹಾಗೂ ಭಾರತದ ಸಂವಿಧಾನದ 8ನೇ ಶೆಡ್ಯೂಲ್, ದೇಶದ ಭಾಷಾ ಸಂಬಂಧಿತ ವಿಷಯಗಳ ಕುರಿತದ್ದಾಗಿವೆಕಲಂ 343 (1) ಪ್ರಕಾರ, “ದೇವನಾಗರಿ ಲಿಪಿಯ ಹಿಂದಿ ಭಾಷೆಯು ಗಣರಾಜ್ಯದ ಅಧೀಕೃತ ಭಾಷೆಯಾಗಿರುತ್ತದೆ.”  ಹಿಂದಿ ಭಾಷೆಯ ಪ್ರೋತ್ಸಾಹಕ್ಕಾಗಿ ಹಲವಾರು ವಿಶೇಷ ನಿರ್ದೇಶನಗಳನ್ನು ಒದಗಿಸಲಾಗಿದೆ.: “ಹಿಂದಿ ಭಾಷೆಯ ಹರಡುವಿಕೆಯನ್ನು ಉತ್ತೇಜಿಸಲು, ಭಾರತದ ಸಂಕೀರ್ಣ ಸಂಸ್ಕೃತಿಯ ಎಲ್ಲಾ ಅಂಶಗಳಿಗೆ ಅಭಿವ್ಯಕ್ತಿ ಮಾಧ್ಯಮವಾಗಿ ಕಾರ್ಯನಿರ್ವಹಿಸಲು ಪೂರಕವಾಗುವಂತೆ ಅದನ್ನು ಅಭಿವೃದ್ಧಿ ಪಡಿಸುವುದು”. (ಕಲಂ 351) <br>
 
ಹಿಂದಿ ಭಾಷೆ ನಮ್ಮ ವ್ಯವಹಾರಿಕ ಭಾಷೆ ಎಂಬ ಅಂಶವನ್ನು ಗುರುತಿಸುವುದು ಮಹತ್ವದ್ದಾಗಿದೆ. ಕಲಂ343(2) ಪ್ರಕಾರ, ಹದಿನೈದು ವರ್ಷಗಳ ಕಾಲ ಎಲ್ಲಾ ವ್ಯವಹಾರಿಕ ಉದ್ದೇಶಗಳಿಗೆ ಇಂಗ್ಲೀಷ್ ಭಾಷೆಯನ್ನು ಬಳಸಲು ಸಂವಿಧಾನ ಅವಕಾಶ ಒದಗಿಸುತ್ತದೆ. ಆದರೆ, 1965 ರ ಸುಮಾರಿಗೆ ದಕ್ಷಿಣ ಭಾರತದಲ್ಲಿ ವಿಶಾಲವಾಗಿ ಹರಡಿದ ದಂಗೆಗಳು, ಹಿಂದಿ ಭಾಷೆಯ ಪ್ರಾಬಲ್ಯದ ಕುರಿತು ಇದ್ದ ಭಯ ಹಾಗೂ ಆರ್ಯನೀಕರಣ- ಅಂಶಗಳು ಇಂಗ್ಲೀಷ್ ಭಾಷೆಗೆ ಸಂಪೂರ್ಣವಾಗಿ ವ್ಯವಹಾರಿಕ ಭಾಷೆಯ ಸ್ಥಾನದಿಂದ ಹಿಂಬಡ್ತಿ ಕೊಡಬಾರದು ಎಂಬುದನ್ನು ಸ್ಪಷ್ಟಪಡಿಸಿದವು. 1965 ರಲ್ಲಿ ಅಧೀಕೃತ ಸಹ ಭಾಷೆಯ ದರ್ಜೆಯನ್ನು ಅದಕ್ಕೆ ಕೊಡಲಾಯಿತು. ಹೈ ಕೋರ್ಟ್ ಮತ್ತು ಸುಪ್ರೀo ಕೋರ್ಟ್ ಹಾಗೂ ಸಂಸತ್ತಿನ ಖಾಯ್ದೆ ಮುಂತಾದವುಗಳಲ್ಲಿ ಬಳಸುವ ಭಾಷೆಯಾಗಿ ಇಂಗ್ಲೀಷ್ ಭಾಷೆಗೆ ಸಂವಿಧಾನವೂ ಸಹ ಅವಕಾಶ ನೀಡಿದೆ. ಸಂವಿಧಾನ ತನ್ನ ನಾಗರಿಕರಿಗೆ ಯಾವುದೇ ಭಾಷೆಯ ಮೂಲಕ ಪ್ರತಿನಿಧಿಸುವ ಹಕ್ಕನ್ನು ಒದಗಿಸುತ್ತದೆ. ಭಾಷಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಮಕ್ಕಳಿಗೆ ಪ್ರಾಥಮಿಕ ಹಂತದ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಭೋದಿಸಲು ಸಾಕಷ್ಟು ಸವಲತ್ತುಗಳನ್ನು ಒದಗಿಸಲು ಕಲಂ 350 A ( 7ನೇ ತಿದ್ದುಪಡಿ,1956) ಅವಕಾಶ ಒದಗಿಸುತ್ತದೆ. ಭಾರತದ ಸಂವಿಧಾನದ 8ನೇ ಶೆಡ್ಯೂಲ್ ಕೇವಲ ಭಾಷೆಗಳು ಎಂಬ ಶಿರ್ಷಿಕೆಯನ್ನು ಹೊಂದಿದೆ ಎಂಬುದರ ಕುರಿತು ಗಮನ ಸೆಳೆಯಲು ನಾವು ಬಯಸುತ್ತೇವೆ. 50 ವರ್ಷಗಳಲ್ಲಿ ಇವುಗಳ ಸಂಖ್ಯೆ 14 ರಿಂದ 22 ಕ್ಕೆ ಏರಿರುವ  ಅಂಶವು ಇದರ ಮುಕ್ತತೆಗೆ ಸಾಕ್ಷಿಯಾಗಿದೆ.  ದೇಶದಲ್ಲಿ ಮಾತನಾಡಲ್ಪಡುವ ಯಾವುದೇ ಭಾಷೆ ಕಾನೂನು ಬದ್ಧವಾಗಿ 8ನೇ ಶೆಡ್ಯೂಲ್ ನ ಭಾಗವಾಗಲು ಸಾಧ್ಯ  ಎಂಬುದು ಕಾಣಸಿಗುತ್ತದೆ. <br>
 
ಈ ದೇಶದ ಭಾಷಾ ಬಹುತ್ವ ಮತ್ತು ವೈವಿಧ್ಯಮಯವಾಗಿರುವ, ಪ್ರಮುಖ ಕಾರ್ಯಗಳಲ್ಲಿ ಮುಂದುವರೆದ ಇಂಗ್ಲೀಷ್ ನ ಬಳಕೆಯು ಒಂದು ಅಂಶವನ್ನು ಸ್ಪಷ್ಟಪಡಿಸುತ್ತದೆ, ಅದೆಂದರೆ, ಯಾವುದೇ ನೇರ ಹಾಗೂ ಸಾಧಾರಣ ಪರಿಹಾರಕ್ಕೆ ಒಂದು ಬಹುಭಾಷಾ ಸಮಾಜದಲ್ಲಿರುವ ಪ್ರಜಾಪ್ರಭುತ್ವದಲ್ಲಿ ಭಾಗವಹಿಸುವಿಕೆಯ ಸ್ವಭಾವವನ್ನು ನಿರಂತರವಾಗಿಸಲು ಸಾಧ್ಯವಿಲ್ಲ. ಸಾಮ್ರಾಜ್ಯಶಾಹೀ ಆಡಳಿತದೊಂದಿಗೆ ಇಂಗ್ಲೀಷ್ ನ ಸಂಬಂಧ ಕಡಿತದ ಮುಂದುವರಿಕೆ, ಇಂಗ್ಲೀಷ್ ಭಾಷೆಯ ಕುರಿತಾದ ಋಣಾತ್ಮಕ ಭಾವನೆಗಳನ್ನು ಕಡಿಮೆ ಮಾಡುವಲ್ಲಿ ದೊಡ್ಡ ಹೆಜ್ಜೆಯಾಗಿದೆ. ಅವಶ್ಯಕ ಅವಕಾಶಗಳ ಹಾಗೂ ಅಂತರ್ ರಾಷ್ಟ್ರೀಯ ಸಂಪರ್ಕ ಗಳ ಭಾಷೆಯಾಗಿ ಇದರ ಮಹತ್ವದ ಸ್ಪಷ್ಟತೆ ಹೆಚ್ಚುತ್ತಿದೆ. ಇನ್ನೊಂದೆಡೆ,    ದೇಶದ ಶೈಕ್ಷಣಿಕ ಹಾಗೂ ಅಧಿಕಾರ ರಚನೆಯಲ್ಲಿ ತಮ್ಮ ಪಾಲನ್ನು ಕೇಳುತ್ತಿರುವ ಅಲ್ಪಸಂಖ್ಯಾತ ಹಾಗೂ ಬುಡಕಟ್ಟು ಭಾಷೆಗಳ ಸಂಖ್ಯೆ ಏರಿಕೆಯಿಂದ ಗುಣಿತಗೊಳ್ಳುತ್ತಿವೆ. ದೇಶದ ಸಂಪರ್ಕ ಭಾಷೆಯಾಗಿ ಅಭಿವೃದ್ಧಿ ಹೊಂದುತ್ತಿರುವ ಹಿಂದಿಯ ಪ್ರಾಮುಖ್ಯತೆಯನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.      
 
== ತ್ರಿಭಾಷಾ ಸೂತ್ರ==
 
ತ್ರಿ-ಭಾಷಾ ಸೂತ್ರವು 1961 ರಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಒಂದು ಸಭೆಯಲ್ಲಿ ಒಮ್ಮತವಾಗಿ ವಿಕಾಸಗೊಂಡಿದ್ದು ಆಶ್ಚರ್ಯವೇನಲ್ಲ. ಶ್ರೀಧರ್ (1989:22) ಹೇಳುವಂತೆ, ಗುಂಪಿನ ಗುರುತಿಸುವಿಕೆ (ಮಾತೃಭಾಷೆ  ಮತ್ತು ಪ್ರಾಂತೀಯ ಭಾಷೆಗಳು), ದೇಶಾಭಿಮಾನ ಮತ್ತು ಏಕತೆ (ಹಿಂದಿ), ಮುಂತಾದವುಗಳ ಕುರಿತಾಗಿರುವ ಆಸಕ್ತಿ, ಹಾಗೂ ಆಡಳಿತ  ದಕ್ಷತೆ ಮತ್ತು ತಾoತ್ರಿಕ ಪ್ರಗತಿಗಾಗಿ (ಇಂಗ್ಲೀಷ್) ತ್ರಿ-ಭಾಷಾ ಸೂತ್ರವು ಕೋಠಾರಿ ಆಯೋಗದಿಂದ (1964-66) ಪರಿಷ್ಕರಿಸಲ್ಪಟ್ಟಿತು. ತ್ರಿ-ಭಾಷಾ ಸೂತ್ರವು ಕೇವಲ ಒಂದು ಕಾರ್ಯತಂತ್ರವಾಗಿದ್ದು ರಾಷ್ಟ್ರೀಯ ಭಾಷಾ ನೀತಿಯಲ್ಲ ಎಂದುದು ಪಟ್ಟನಾಯಕ್ (1986) ಗುರುತಿಸುತ್ತಾರೆ. ಒಂದು ರಾಷ್ಟ್ರೀಯ ಭಾಷಾ ನೀತಿಯು ಸಂವಿಧಾನ ಮತ್ತು ತ್ರಿ-ಭಾಷಾ ಸೂತ್ರದಡಿಯಲ್ಲಿ ಬರದೇ ಇರುವಂತಹ ವೈವಿಧ್ಯಮಯ ಸಮಸ್ಯೆಗಳು ಮತ್ತು ಕ್ಷೇತ್ರಗಳನ್ನು ಪರಿಗಣಿಸಬೇಕಾಗುತ್ತದೆ. ಶಿಕ್ಷಣದಲ್ಲಿ ಮತ್ತು ಶಾಲೆಗಳಲ್ಲೂ ಸಹ ಬಳಸುವ ಭಾಷಾ ಸಂಕೀರ್ಣತೆಯನ್ನು ಅನುಬಂಧ III ರಲ್ಲಿ ಕೊಟ್ಟಿರುವ ಕೆಲವು ಚಾರ್ಟ್ ಗಳಲ್ಲಿ ಕಾಣಬಹುದು. ಗಮನ ಕೇಂದ್ರಿತ ಗುಂಪುಗಳ (Focus group) ಕೆಲವು ಸದಸ್ಯರಿಂದ ಅವರು ಪ್ರತಿನಿಧಿಸುವ ರಾಜ್ಯಗಳ ಶಾಲಾ ಶಿಕ್ಷಣದ ಪರಿಸ್ಥಿತಿಯ ವಿಶ್ಲೇಷಣೆಯ ಆಧಾರದ ಮೇಲೆ ಈ ಚಾರ್ಟ್ ಗಳು ತಯಾರಿಸಲ್ಪಟ್ಟಿರುತ್ತವೆ. ಇವುಗಳು ಭಾರತದ ರಾಜ್ಯಗಳ ಭಾಷಾ ಪರಿಸ್ಥಿತಿಯ ವೈವಿಧ್ಯತೆಯನ್ನು ಎತ್ತಿ ತೋರಿಸುತ್ತವೆ.<br>
 
1968 ರ ತ್ರಿ-ಭಾಷಾ ಸೂತ್ರವು ಈ ಪರಿಸ್ಥಿತಿಯ ಸಂಕೀರ್ಣತೆಯನ್ನು ಹಿಡಿದಿಡಲು ಪ್ರಯತ್ನಿಸಿದೆ; 1986 ರ ರಾಷ್ಟ್ರೀಯ ಶಿಕ್ಷಣ ನೀತಿ (NPE) ಯಲ್ಲಿ ಇದನ್ನು ಪುನರುಚ್ಛರಿಸಲಾಗಿದೆ ಹಾಗೂ 1992 ರ ಪ್ರೊಗ್ರಾಂ ಆಫ್ ಆಕ್ಷನ್ ನಲ್ಲಿ ಇದರ ಪರಿಷೃತ ಆವೃತ್ತಿಯನ್ನು ನಾವು ಕಾಣುತ್ತೇವೆ. 1986 ರ ರಾಷ್ಟ್ರೀಯ ಶಿಕ್ಷಣ ನೀತಿಯು (www.education.nic.in/NatPol.asp ನ್ನು ನೋಡಿರಿ) 1968 ರಲ್ಲಿ ಒದಗಿಸಲಾದ ಭಾಷಾ ಸಂಬಂಧಿತ ಅವಕಾಶಗಳನ್ನು ಬಹಳಷ್ಟು ಬೆಂಬಲಿಸಿತ್ತು. 1968 ರ ರಾಷ್ಟ್ರೀಯ ಶಿಕ್ಷಣ ನೀತಿಯು (www. languageinindia.com) ಭಾಷೆಗಳ ಅಭಿವೃದ್ಧಿಯ ಕುರಿತ ಪ್ರಶ್ನೆಯ ಸ್ವಲ್ಪಮಟ್ಟಿನ ವಿವರವನ್ನು ಪರೀಕ್ಷಿಸಿತ್ತು, ಇದನ್ನು ಸುಧಾರಿಸಲು ಹೆಚ್ಚಿನ ಅವಕಾಶವಿಲ್ಲ ಮತ್ತು ಇದು ಈ ಹಿಂದಿನಷ್ಟೇ ಹಿಂದಿಗೂ ಪ್ರಸ್ತುತ ಎಂದುನಂಬಲಾಗಿತ್ತು. ಹಿಂತಹ ಸ್ಥಿತಿಯು ಹಲವಾರು ಸಂಕೀರ್ಣ ಸಮಸ್ಯೆಗಳನ್ನು ಇಲ್ಲದಂತೆ ಮಾಡುತ್ತದೆ ಮತ್ತು 1960ರಿಂದ ಭಾಷಾ ಕ್ಷೇತ್ರದಲ್ಲಿ ಏನೂ ನಡೆದೇ ಇಲ್ಲ ಎಂದುಊಹಿಸುತ್ತದೆ. 1968 ರ ನೀತಿಯೂ ಸಹ ಅನುಷ್ಠಾನದಲ್ಲಿ ಅಸಮಾನವಾಗಿತ್ತು.<br>
 
1968 ರ ನೀತಿಯ ಪ್ರಕಾರ:<br>
 
#ಪ್ರಥಮ ಭಾಷೆಯಾಗಿ ಕಲಿಯಬೇಕಾದ ಭಾಷೆಯು ಮಾತೃಭಾಷೆ ಅಥವಾ ಪ್ರಾoತೀಯ ಭಾಷೆಯಾಗಿರಬೇಕು.
 
#ದ್ವಿತಿಯ ಭಾಷೆ : ಹಿಂದಿ ಮಾತನಾಡುವ ರಾಜ್ಯಗಳಲ್ಲಿ, ಎರಡನೆಯ ಭಾಷೆಯು ಯಾವುದೇ ಇತರೆ ಆಧುನಿಕ ಭಾರತೀಯ ಭಾಷೆ ಅಥವಾ ಹಿಂಗ್ಲೀಷ್ ಆಗಿರಬೇಕು, ಮತ್ತು ಹಿಂದಿ ಮಾತನಾಡದ ರಾಜ್ಯಗಳಲ್ಲಿ, ಎರಡನೆಯ ಭಾಷೆಯು ಹಿಂದಿ ಅಥವಾ ಹಿಂಗ್ಲೀಷ್ ಆಗಿರಬೇಕು.
 
#ತೃತೀಯ ಭಾಷೆ :  
 
ಹಿಂದಿ ಮಾತನಾಡುವ ರಾಜ್ಯಗಳಲ್ಲಿ ತೃತೀಯ ಭಾಷೆಯಾಗಿ ಇಂಗ್ಲೀಷ್ ಅಥವಾ ದ್ವಿತೀಯ ಭಾಷೆಯಾಗಿ ಅಧ್ಯಯನ ಮಾಡದೇ ಇರುವ ಒಂದು ಆಧುನಿಕ ಭಾರತೀಯ ಭಾಷೆ ಇರುತ್ತದೆ.<br>
 
ಹಿಂದಿ ಮಾತನಾಡದ ರಾಜ್ಯಗಳಲ್ಲಿ, ತೃತೀಯ ಭಾಷೆಯಾಗಿ  ಇಂಗ್ಲೀಷ್ ಅಥವಾ ದ್ವಿತೀಯ ಭಾಷೆಯಾಗಿ ಅಧ್ಯಯನ ಮಾಡದೇ ಇರುವ ಒಂದು ಆಧುನಿಕ ಭಾರತೀಯ ಭಾಷೆ ಇರುತ್ತದೆ.<br>
 
ಪ್ರಾಥಮಿಕ ಹಿಂತದಲ್ಲಿ ಬೋಧನಾ ಮಾಧ್ಯಮವಾಗಿ  ಮಾತೃಭಾಷೆ ಇರಬೇಕು ಮತ್ತು ರಾಜ್ಯ ಸರ್ಕಾರಗಳು ತ್ರಿ-ಭಾಷಾ ಸೂತ್ರವನ್ನು ಅಳವಡಿಸಬೇಕು ಹಾಗೂ ಚುರುಕಿನಂದ ಅನುಷ್ಟಾನ ಮಾಡಬೇಕು ಹಿಂಬ ಸಲಹೆಯನ್ನು ನೀಡಲಾಗಿತ್ತು. ಈ ಸೂತ್ರವು ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್ ಹೊರತುಪಡಿಸಿ ಮತ್ತು ಹಿಂದಿ ಮಾತನಾಡದ ರಾಜ್ಯಗಳಲ್ಲಿ ಹಿಂದಿಯನ್ನು ಸೇರಿದಂತೆ  ದಕ್ಷಿಣ ಭಾರತೀಯ ಭಾಷೆಗಳಲ್ಲಿ ಒಂದಕ್ಕೆ ಆದ್ಯತೆಯಿರುವಂತೆ ಆಧುನಿಕ ಭಾರತೀಯ ಭಾಷೆಯೊoದರ ಅಧ್ಯಯನವನ್ನು ಒಳಗೊಂಡಿರುತ್ತದೆ. ವಿದ್ಯಾರ್ಥಿಗಳು ಹಿಂದಿ ಮತ್ತು/ಅಥವಾ ಹಿಂಗ್ಲೀಷ್ ನಲ್ಲಿ ವಿಶ್ವವಿದ್ಯಾಲಯ ನಿಗದಿಪಡಿಸುವ ಮಟ್ಟಕ್ಕೆ ಪರಿಣಿತಿ ಹೊಂದುವ ನಿಟ್ಟಿನಲ್ಲಿ ಈ ಭಾಷೆಗಳಲ್ಲಿ ಸೂಕ್ತವಾದ ಕೋರ್ಸ್ ಗಳು ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಲಭ್ಯವಿರಬೇಕು. <br>
 
ತ್ರಿ-ಭಾಷಾ ಸೂತ್ರವು ಒಂದು ಗುರಿಯಲ್ಲ ಅಥವಾ ಭಾಷಾ ಸ್ವಾಧೀನವನ್ನು ಸೀಮಿತಗೊಳಿಸುವ ಅಂಶವಲ್ಲ, ಬದಲಾಗಿ, ಇದು ವಿಸ್ತೃತಗೊಳ್ಳುತ್ತಿರುವ ಜ್ಞಾನದ ವಿಶಾಲ ವ್ಯಾಪ್ತಿಯನ್ನು ಹುಡುಕಲು ಮತ್ತು ಭಾವನಾತ್ಮಕವಾದ ರಾಷ್ಟ್ರೀಯ ಸಮಗ್ರತೆಗೆ ಅನುಕೂಲವಾಗುವಂತಹ ಅವಕಾಶದ ವೇದಿಕೆಯಾಗಿದೆ. <br>
 
ಈ ರೀತಿಯಲ್ಲಿ ತ್ರಿ-ಭಾಷಾ ಸೂತ್ರದ ಮೂಲ ಸ್ಪೂರ್ತಿಯು ಹಿಂದಿ, ಹಿಂಗ್ಲೀಷ್ ಮತ್ತು ಭಾರತೀಯ ಭಾಷೆಗಳಿಗೆ ಅವಕಾಶ ಒದಗಿಸುತ್ತದೆ. ಇದಕ್ಕಾಗಿ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ದಕ್ಷಿಣ ಭಾರತೀಯ ಒಂದು ಭಾಷೆಗೆ ಆದ್ಯತೆ. ಅದೇ ರೀತಿಯಲ್ಲಿ ಹಿಂದಿ ಮಾತನಾಡದ ರಾಜ್ಯಗಳಲ್ಲಿ ಒಂದು ಪ್ರಾoತೀಯ ಭಾಷೆ, ಹಿಂದಿ, ಮತ್ತು ಹಿಂಗ್ಲೀಷ್ ಭಾಷೆಗಳಿಗೆ ಅವಕಾಶ. ಆದರೆ ಸಾಮಾನ್ಯವಾಗಿ ಈ ಸೂತ್ರವನ್ನು ಪಾಲಿಸುವುದಕ್ಕಿoತ ಮುರಿಯುವುದೇ ಹೆಚ್ಚಾಗಿದ್ದನ್ನು ಗಮನಿಸಲಾಗಿದೆ. ಹಿಂದಿ ಮಾತನಾಡುವ ರಾಜ್ಯಗಳು ಹೆಚ್ಚಾಗಿ ಹಿಂದಿ, ಹಿಂಗ್ಲೀಷ್ ಮತ್ತು ಸಂಸ್ಕೃತ ಭಾಷೆಯ ಮೂಲಕ ನಿರ್ವಹಿಸಲಾಗುತ್ತಿದ್ದು, ಹಿಂದಿ ಮಾತನಾಡದ ರಾಜ್ಯಗಳಲ್ಲಿ, ಅದರಲ್ಲೂ ತಮಿಳುನಾಡಿನಲ್ಲಿ,ದ್ವಿ-ಭಾಷಾ ಸೂತ್ರದ ಮೂಲಕ ಅoದರೆ ತಮಿಳು ಮತ್ತು ಹಿಂಗ್ಲೀಷ್ ಭಾಷೆಗಳ ಮೂಲಕ ಕಾರ್ಯನಿರ್ವಹಣೆಯಾಗುತ್ತದೆ. ಈಗಲೂ ಸಹ ಓಡಿಸ್ಸಾ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ರಾಜ್ಯಗಳು ದ್ವಿ-ಭಾಷಾ ಸೂತ್ರ ಹೊoದಿರುವ ರಾಜ್ಯಗಳಲ್ಲಿ ಸೇರಿರುತ್ತವೆ.
 
== ತ್ರಿ-ಭಾಷೆ ಸೂತ್ರದ ಸಾಧಕ ಮತ್ತು ಬಾಧಕಗಳು==
 
ತ್ರಿ-ಭಾಷಾ ಸೂತ್ರವನ್ನು ಒಂದು ಕಾರ್ಯತoತ್ರವಾಗಿ ಅಳವಡಿಸುವ ಮೂಲಕ, ಎಟಕುವ ಭಾಷೆಗಳು, ಶಾಸ್ತ್ರೀಯ ಭಾಷೆಗಳು ಮತ್ತು ವಿದೇಶಿ ಭಾಷೆಗಳನ್ನು ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಯಿತು. ಮಾತೃಭಾಷೆಯ ಅಧ್ಯಯನಕ್ಕೂ ಅವಕಾಶ ನೀಡಲಾಯಿತು. ತ್ರಿ-ಭಾಷಾ ಸೂತ್ರದ ಹೊರತಾಗಿ ಶಿಕ್ಷಣದಲ್ಲಿ ಇತರೆ ಭಾಷೆಗಳನ್ನು ಅಳವಡಿಸಲು ರಾಜ್ಯಗಳು ಸ್ವತoತ್ರವಾಗಿದ್ದವು. ಸಂಸ್ಕೃತವನ್ನು ಶಾಸ್ತ್ರೀಯ ಬಾಷೆಯಾಗಿ ಪರಿಚಯಿಸಬಹುದಾಗಿತ್ತು. ತ್ರಿ-ಭಾಷಾ ಸೂತ್ರದ ಆಶಯಕ್ಕೆ ಭoಗ ಬರದಂತೆ ಒಂದು ಆಧುನಿಕ ಭಾರತೀಯ ಭಾಷೆಯಾಗಿಯೂ ಸಹ ಅದನ್ನು ಅಳವಡಿಸಲು ಸಾಧ್ಯವಿತ್ತು., ಮಕ್ಕಳ ಶಿಕ್ಷಣಕ್ಕೆ ಮಾತೃಭಾಷೆ ಅತ್ಯoತ ಉತ್ತಮ ಮಾಧ್ಯಮವಾಗಿದೆ ಹಿಂಬ 1953 ರ ಯುನೆಸ್ಕೋ ಘೋಷಣೆಯ ನಂತರ, ತಮ್ಮ ಬಾಷೆಗೆ ಮಾನ್ಯತೆ ನೀಡಬೇಕೆoದು ಮತ್ತು ಸಂವಿಧಾನದ 8 ನೇ ಶೆಡ್ಯೂಲ್ ನಲ್ಲಿ ಅವುಗಳನ್ನು ಒಳಗೊಳಿಸುವಂತೆ ಮಾಡಲು ವಿವಿಧ ಭಾಷೆಗಳ ಗುಂಪುಗಳು ಒತ್ತಡ ಹೇರುವ ಕೆಲಸ ಮಾಡಿದವು. ಎಲ್ಲಿಯವರೆಗೆ ತ್ರಿ-ಭಾಷಾ ಸೂತ್ರದ ಮೂಲ ಆಶಯಗಳನ್ನು ಕಾಪಾಡಲಾಗುತ್ತದೋ, ಅಲ್ಲಿ ಹೊಸ ಭಾಷೆಗಳ ಅಧ್ಯಯನ ಮಾಡಲು ಯಾವುದೇ ತಡೆಯಿರುವುದಿಲ್ಲ. ಪ್ರಾಥಮಿಕ ಶಿಕ್ಷಣವು ದ್ವಿ-ಭಾಷಿತ್ವ ಪದ್ಧತಿಯಲ್ಲಿರಬೇಕು. ದ್ವಿ-ಭಾಷಿತ್ವದ ಪ್ರತಿ ಮುoದಿನ ಹಂತಗಳು ಸಮಗ್ರ ಬಹುಭಾಷಿತ್ವದ ನಿರ್ಮಾಣ ಮಾಡುವಂತಿರಬೇಕು. ಶಾಲೆಯ ಪ್ರಥಮ ಕೆಲಸವಂದರೆ, ಮನೆಯ ಭಾಷೆಯನ್ನು ಶಾಲೆಯ ಭಾಷೆಗೆ ಸಂಬಂಧೀಕರಿಸುವುದು. ಆನಂತರ ಪ್ರಥಮ ಭಾಷೆಯನ್ನು ಕಳೆದುಕೊಳ್ಳದೇ ಇತರೆ ಭಾಷೆಗಳಿಗೆ ಹೋಗಲು ಸಾಧ್ಯವಾಗುವಂತೆ ಒಂದು ಅಥವಾ ಹಲವು ಭಾಷೆಗಳನ್ನು ಸಮಗ್ರೀಕರಿಸುವುದು.  ಒಂದು ಭಾಷೆ ಮತ್ತೊoದಕ್ಕೆ ಪೂರಕವಾಗುವಂತೆ, ಎಲ್ಲಾ ಭಾಷೆಗಳನ್ನು ನಿರ್ವಹಿಸಲು ಇದರಿಂದ ಸಾಧ್ಯವಾಗುತ್ತದೆ.<br> 
 
ವಿವಿಧ ರಾಜ್ಯಗಳಿoದ ಭಾಗವಹಿಸಿದ ಪ್ರತಿನಿಧಿಗಳು ರಚಿಸಿದ ಐದು “ಮಾದರಿ ಚಾರ್ಟ್” ಗಳು ಮತ್ತು ನಮ್ಮ ತoಡದಿಂದ ಮoಡನೆಯಾದ ಒಂದು ಚಾರ್ಟ್ ನ್ನು ಅನುಬಂಧ III ರಲ್ಲಿ ಕಾಣಬಹುದು. ರಾಷ್ಟ್ರೀಯ ಗಮನ ಬಂದ್ರಿತ ತoಡ (National Focus Group) ದ ಚಾರ್ಟ್ ನಾವೆಲ್ಲರೂ ಒಮ್ಮತಕ್ಕೆ ಬಂದ ಅoಶಗಳನ್ನು ಪ್ರತಿಬಂಬಿಸುತ್ತದೆ. ಈ ಆರು ಚಾರ್ಟಗಳು ಪ್ರಮುಖವಾದ ಏಕರೀತಿಯತೆಯನ್ನು ತೋರಿಸುತ್ತವೆ. ಪ್ರಾಥಮಿಕ ಮಟ್ಟದಲ್ಲಿ ಮಾತೃಭಾಷೆ ಬೋಧನಾ ಮಾಧ್ಯಮವಾಗಿರಬೇಕು; ಹಿಂಗ್ಲೀಷ್ ನ್ನು ಒಂದು ಕಡ್ದಾಯ ವಿಷಯವಾಗಿ ಕಲಿಸಬೇಕು; ಹಿಂದಿಯನ್ನು ಒಂದು ಕಡ್ದಾಯ ಅಥವಾ ಐಚ್ಛಿಕ ವಿಷಯವಾಗಿ ಕಲಿಸಬೇಕು; ಮತ್ತು ಶಾಸ್ತ್ರೀಯ ಮತ್ತು ವಿದೇಶಿ ಭಾಷೆಗಳು ಶಾಲಾ ಪಠ್ಯಕ್ರಮದಲ್ಲಿ ಸ್ಥಾನ ಪಡೆಯಬೇಕು. <br>
 
ಅನುಬಂಧ III ರಲ್ಲಿ ಪ್ರಸ್ತುತಪಡಿಸಲಾಗಿರುವ ರಾಷ್ಟ್ರೀಯ ಗಮನ ಬಂದ್ರಿತ ತoಡ (National Focus Group) ದ ಚಾರ್ಟ್ ನ್ನು ನಮ್ಮ ದೇಶದಲ್ಲಿ ಸಮಾಜ ಮತ್ತು ವ್ಯಕ್ತಿಗಳು ಬೆಳೆಸಿಕೊಳ್ಳುವ ಬಹುಭಾಷಿತ್ವದ ಸಂದರ್ಭಕ್ಕನುಗುಣವಾಗಿ ಅಭಿವೃದ್ಧಿಪಡಿಸಲಾಗಿದೆ. ಹಾಗಾಗಿ ನಾವು ಮಾತೃಭಾಷೆ (ಗಳು) ಯನ್ನು ಮನೆಯ.ಬೀದಿಯ,ನೆರೆಹೊರೆಯ, ಸಹವರ್ತಿಗಳ ಹಾಗೂ ಅವಲoಬಿತ ಜಾಲಗಳ ಭಾಷೆಗಳನ್ನಾಗಿ; ರಾಜ್ಯದಲ್ಲಿ ಹೆಚ್ಚಾಗಿ ಮಾತನಾಡುವ ಭಾಷೆಯನ್ನು, ಅಥವಾ ರಾಜ್ಯದ ಹೊರಗಡೆ ಇರುವ ಅಲ್ಪಸಂಖ್ಯಾತರ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾoತೀಯ ಭಾಷೆ(ಗಳು)ಯಾಗಿ, ಆಯಾ ರಾಜ್ಯದಲ್ಲಿ ಸರ್ಕಾರದಂದ ಗುರುತಿಸಲ್ಪಟ್ಟ ಬಾಷೆ (ಗಳು) ಯನ್ನು ಸರ್ಕಾರಿ ಭಾಷೆಯನ್ನಾಗಿ ವ್ಯಾಖ್ಯಾನಿಸಿತ್ತೇವೆ. ಹಿಂದಿ ನಮ್ಮ ಅಧೀಕೃತ ಭಾಷೆ ಮತ್ತು ಸಂಪರ್ಕ ಭಾಷೆಯಾಗಿರುವ ಹಿನ್ನೆಲೆ ಮತ್ತು ಹಿಂಗ್ಲೀಷ್ ನಮ್ಮ ಸಹ-ಅಧೀಕೃತ ಭಾಷೆ ಮತ್ತು ಅoತರ್ ರಾಷ್ಟ್ರೀಯ ಸಂಪರ್ಕ ಭಾಷೆಯಾಗಿರುವ ಹಿನ್ನೆಲೆಯಲ್ಲಿ ಈ ಎಲ್ಲವುಗಳನ್ನು ನಾವು ಕಾರ್ಯರೂಪಕ್ಕೆ ತoದಿದ್ದೇವೆ. ಈ ಹಿನ್ನೆಲೆಯಲ್ಲಿ ನಾವು ಸಲಹೆ ಮಾಡುವುದೇನಂದರೆ: ಎಲ್ಲಾ ಶಾಲೆಗಳಲ್ಲಿ, ಅದರಲ್ಲೂ ಪ್ರಾಥಮಿಕ ಶಾಲೆಗಳಲ್ಲಿ    ಮಾತೃಭಾಷೆಯು (ಗಳು) ಬೋಧನಾ ಮಾಧ್ಯಮವಾಗಬೇಕು.<br>
 
1986 ರಲ್ಲಿ NCERT ಯಿoದ ರಚಿತವಾದ ಭಾಷಾ ಅಧ್ಯಯನದ ಕಾರ್ಯತoಡ ತನ್ನ ವರದಿಯಲ್ಲಿ “ಪ್ರಾರಂಭಿಕ ಶಿಕ್ಷಣದ ಮಾಧ್ಯಮ” ಕಲಿಕಾರ್ಥಿಗಳ ಮಾತೃಭಾಷೆಯೇ ಆಗಿರಬೇಕೆoದು ಶಿಫಾರಸ್ಸು ಮಾಡುತ್ತದೆ. ಭಾರತದ ಸಂದರ್ಭದಲ್ಲಿ ಇದು ಇನ್ನಷ್ಟು ಅವಶ್ಯಕವಾಗಿದೆ ಏಕೆoದರೆ: ರಾಷ್ಟ್ರೀಯ ಪುನರ್ ನಿರ್ಮಾಣದಲ್ಲಿ ಪಾಲ್ಗೊಳ್ಳುವಂತೆ ಜನರನ್ನು ಇದು ತಯಾರುಮಾಡುತ್ತದೆ. ಇದು ಜ್ಞಾನವನ್ನು ಸೀಮಿತ ಗಣ್ಯರ ಒತ್ತಡಗಳಿoದ ಮುಕ್ತಗೊಳಿಸುತ್ತದೆ; ಇದು ಪರಸ್ಪರ ಸಂವಹನ ಮಾಡುವ ಮತ್ತು ಪರಸ್ಪರ ಅವಲoಬಿತ ಸಮಾಜಗಳನ್ನು ನಿರ್ಮಿಸುತ್ತದೆ; ಬಹುಸಂಖ್ಯೆಯ ಗುoಪುಗಳ ಸಲಹೆ ಮತ್ತು ಒಪ್ಪಿಗೆಯನ್ನು ಪಡೆಯಲು ಇದು ಹೆಚ್ಚಿನ ಅವಕಾಶವನ್ನು ಕೊಡುವುದರಿಂದ ಇದು ಪ್ರಜಾಪ್ರಭುತ್ವದ ಉತ್ತಮ ರಕ್ಷಣೆಯಾಗಿದೆ;ಮಾಹಿತಿಯ ವಿಕೇಂದ್ರೀಕರಣಕ್ಕೆ ದಾರಿ ಮಾಡಿಕೊಡುತ್ತದೆ ಮತ್ತು ನಿಯoತ್ರಿತ ಮಾಧ್ಯಮಕ್ಕೆ ಬದಲಾಗಿ ಮುಕ್ತ ಮಾಧ್ಯಮವನ್ನು ಖಾತರಿಪಡಿಸುತ್ತದೆ. ಮತ್ತು ಇದು ಹೆಚ್ಚಿನ ಸಂಖ್ಯೆಯ ಜನರಿಗೆ ಶಿಕ್ಷಣಕ್ಕೆ ಸಾಕಷ್ಟು ಅವಕಾಶ ಮತ್ತು ವೈಯಕ್ತಿಕ ಅಭಿವೃದ್ಧಿಯನ್ನು ನೀಡುತ್ತದೆ. <br>
 
UNESCO ದ ಶೈಕ್ಷಣಿಕ ಪೊಸಿಶನ್ ಪೇಪರ್ (2003) ರ ಪ್ರಕಾರ, ಮಾತೃಭಾಷೆಯ ಬೋಧನೆ ಪ್ರಾರಿಂಭಿಕ ಬೋಧನೆಗೆ ಮತ್ತು ಸಾಕ್ಷರತೆಗೆ ಅತ್ಯoತ ಅವಶ್ಯಕ ಮತ್ತು ಇದನ್ನು ಶಿಕ್ಷಣದಲ್ಲಿ ಸಾಧ್ಯವಾಗುವ ಹಿಂತದವರೆಗೆ ವಿಸ್ತರಿಸಬೇಕು. ಕೆಲವು ಅಧ್ಯಯನಗಳು (ಉದಾಹರಣೆಗೆ, ಸೆಹಗಲ್ 1983) ತೋರಿಸಿಕೊಟ್ಟಿರುವ ಪ್ರಕಾರ ತಮ್ಮ ಮಾತೃ ಬಾಷೆಯ ಮೂಲಕ ಕಲಿಯುವ ಮಕ್ಕಳು ಹಿಂಗ್ಲೀಷ್ ಮಾಧ್ಯಮದಲ್ಲಿ ಕಲಿತ ಇತರೆ ಸಹಪಾಠಿಗಳೊoದಿಗೆ ಸ್ಪರ್ಧಿಸುವಾಗ ಭಾಷೆ ಅಥವಾ ವಿದ್ಯೆಗೆ ಸಂಬಂಧಿಸಿದಂತೆ ಯಾವುದೇ ಅನಾನುಕೂಲತೆಯಿoದ ಬಳಲುವುದಿಲ್ಲ. 15-17 ವಯಸ್ಸಿನ 78 ಮಕ್ಕಳಿಗೆ ನಡೆಸಿದ ಸಾಕ್ಷಿಯಾಧಾರಿತ ಅಧ್ಯಯನದ ಆಧಾರದ ಮೇಲೆ ಗುಪ್ತಾ (1995) ರವರು ಪ್ರಾರಿಂಭಿಕ ಹಿಂತದ ಎರಡು ವರ್ಷಗಳ ಕಾಲದ ಮಾತೃಭಾಷಾ ಮಾಧ್ಯಮವು ಮಗು ಮಾತೃಭಾಷೆಯಲ್ಲಿ ಮತ್ತು ದ್ವಿತೀಯ ಭಾಷೆಯಲ್ಲಿ ಭಾಷಾ ಪ್ರಾವಿಣ್ಯತೆ ಹೊoದಲು ಅಗಾಧವಾಗಿ ಸಹಾಯ ಮಾಡುತ್ತದೆ ಹಿಂಬುದಾಗಿ ವಾದ ಮಾಡಿದರು.<br>
 
ಮಾತೃಭಾಷೆಯು ಬೋಧನಾ ಮಾಧ್ಯಮವಾದಾಗ, ಶಾಲೆಯ ಬಾಷೆ ಮತ್ತು ಮನೆಯ ಬಾಷೆಯಲ್ಲಿನ ವ್ಯತ್ಯಾಸದಿಂದ ಆಗುವ ಭಾಷಾ ಮತ್ತು  ಸಾಂ ಸ್ಕೃತಿಕ ಕoದರುಗಳನ್ನು ತೆಗೆದುಹಾಕಲು ಸಾಧ್ಯ.ಅoದರೆ, ಉಲ್ಲೇಖಿತ ವಸ್ತು ವಯಸ್ಕರಲ್ಲದ ವ್ಯಕ್ತಿ ಅಥವಾ ಅಲ್ಪಸಂಖ್ಯಾತ ಅಥವಾ ಬಹುಸಂಖ್ಯಾತ ಭಾಷೆ ಆಗಿರಬಹುದು. ಆಚಾರ್ಯ (1984) ಹೇಳುವ ಪ್ರಕಾರ ಪ್ರಾಥಮಿಕ ಶಿಕ್ಷಣದ ಹಿಂತದಲ್ಲಿ 26 ಪ್ರತಿಶತ ಮಕ್ಕಳು ಶಾಲೆಯಿoದ ಹೊರಗುಳಿಯಲು ಮುಖ್ಯ ಕಾರಣ “ಶಿಕ್ಷಣದಲ್ಲಿ ನಿರಾಸಕ್ತಿ” ಆಗಿದ್ದು ಇದಕ್ಕೆ ಸ್ವಲ್ಪ ಮಟ್ಟಿಗಿನ ಕಾರಣ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ  ಸಾಂ ಸ್ಕೃತಿಕ ವಿಷಯದ ಕೊರತೆ; ಬಾಷೆ ಕೇವಲ ಒಂದು “ ಸಾಂ ಸ್ಕೃತಿಕ ಭಾಗ” ಮಾತ್ರವಲ್ಲದೇ “ಸಂಸ್ಕೃತಿಯ ವಾಹಕ” ವೂ ಆಗಿರುತ್ತದೆ.<br>
 
ಭೋಧನೆಗೆ ಸಂಬಂಧಿಸಿದಂತೆ ಮನೆಯ ಭಾಷೆಯಿoದ ಶಾಲೆಯ ಬಾಷೆಗೆ ಮೃದುವಾದ ಪರಿವರ್ತನೆ ಆಗುವಂತೆ ಮಾಡಲು ಮಾತೃಭಾಷೆಯು ಬೋಧನಾ ಮಾಧ್ಯಮವಾಗಿದ್ದಾಗ ಸಾಧ್ಯವಾಗುತ್ತದೆ.
 
ಆದರೆ, ಒಂದು ಪ್ರಾoತೀಯ ಬಾಷೆಯು, ಒಂದು ರಾಜ್ಯದ ಅಥವಾ ಒಂದು ತರಗತಿಯ ಎಲ್ಲ ಮಕ್ಕಳ ಮಾತೃ ಭಾಷೆ ಆಗಿರಲೇಬೇಕಾಗಿಲ್ಲ. ಕೋಠಾರಿ ಆಯೋಗ “ ಭಾಷಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಮಕ್ಕಳು  ಮಾತೃ ಬಾಷೆಯ ಮೂಲಕ ಪ್ರಾಥಮಿಕ ಶಿಕ್ಷಣವನ್ನು ಪಡೆಯುವ ಹಕ್ಕನ್ನು  ಸಂವಿಧಾನದಡಿಯಲ್ಲಿ ಹೊoದಿರುತ್ತಾರೆ  ” ಎಂದು ಹೇಳುತ್ತದೆಯಾದರೂ ಸಹ ಅಲ್ಪಸಂಖ್ಯಾತ ಬಾಷೆಗಳಿಗೆ ಸಂಬಂಧಿಸಿದಂತೆ ಒಂದು ಸ್ಪಷ್ಠ ನೀತಿಯನ್ನು ಹೇಳಬೇಕಾಗಿದೆ. <br>
 
1988 ಮತ್ತು 2000 ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು,  ಶಾಲಾ ಅಧ್ಯಯನ ಎಲ್ಲಾ ಹಿಂತಗಳಲ್ಲಿ ಅಥವಾ ಕನಿಷ್ಠ ಪ್ರಾಥಮಿಕ ಶಿಕ್ಷಣದ ಹಿಂತದ ಕೊನೆಯವೆರೆಗೆ (NCF 2000) ಮಾತೃ ಭಾಷೆ ಅಥವಾ ಪ್ರಾoತೀಯ ಭಾಷೆಯು ಬೋಧನಾ ಮಾಧ್ಯಮವಾಗಿರಬೇಕು ಎಂದುವಾದಿಸುತ್ತದೆ. ಆದರೆ, ಇದು ಮಾತೃಭಾಷೆ ಮತ್ತು ಪ್ರಾoತೀಯ ಭಾಷೆಯ ನಡುವಿನ ಅoತರದ ಕುರಿತು ಸಂವೇದನಶೀಲತೆಯನ್ನು ತೋರಿಸುವುದಿಲ್ಲ. ಪ್ರಾoತೀಯ ಭಾಷೆಯು ಕಲಿಕಾರ್ಥಿಯ ಮಾತೃಭಾಷೆಯಾಗಿರದಿದ್ದರೆ, ಮಗುವಿನ ಪ್ರಾರಿಂಭಿಕ ಎರಡು ವರ್ಷಗಳ ಕಾಲದ ಶಿಕ್ಷಣ ಮಾತೃಭಾಷೆಯ ಮೂಲಕ ಆಗಬಹುದು ಎಂದುಈ ಚೌಕಟ್ಟು ಸಲಹೆ ನೀಡುತ್ತದೆ. ಮೂರನೇ ತರಗತಿಯ ನಂತರ ಪ್ರಾoತೀಯ ಭಾಷೆಯನ್ನು ಮಾಧ್ಯಮವನ್ನಾಗಿ ಅಳವಡಿಸಬಹುದು (NCF 2000). ಮಕ್ಕಳು ಶಾಲೆಗೆ ಬರುವ ಸಂದರ್ಭದಲ್ಲಿ ಗುರುತಿಸಲ್ಪಟ್ಟ, ಅಧೀಕೃತ, ಕಾಯ್ದಿರಿಸಿದ, ಅಥವಾ ನೆರೆಹೊರೆಯ ಪ್ರಾoತೀಯ ಭಾಷೆಗಳಿಗೆ ಸಾಕಷ್ಟು ವಿಭಿನ್ನವಾದಂತಹ ಪೂರ್ಣಪ್ರಮಾಣದ ಮನೆಯ ಭಾಷೆ ಮತ್ತು ನೆರೆಹೊರೆಯ ಭಾಷೆಗಳೊoದಿಗೆ (ಅoದರೆ ಮಾತೃಭಾಷೆ) ಬಂದಿರಬಹುದು ಹಿಂಬುದನ್ನು ಶಿಕ್ಷಣ ತಜ್ಞರು ಮತ್ತು ಶೈಕ್ಷಣಿಕ ಯೋಜನಾಕಾರರು ಮನಗಾಣುವುದು ಅತ್ಯoತ ಮಹತ್ವದ್ದಾಗಿದೆ. ಶಿಕ್ಷಣ ಮoತ್ರಿಗಳ ಸಮಾವೇಶದಲ್ಲಿ (1949) ಮಾನ್ಯತೆ ಪಡೆದಂತೆ, ಭಾಷಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಮಕ್ಕಳು, ಅವರು ಬಯಸಿದಲ್ಲಿ ಮತ್ತು “40 ಮಕ್ಕಳ ಸಂಖ್ಯೆಯ ಶಾಲೆಯಲ್ಲಿ ಈ ರೀತಿಯ ಮಕ್ಕಳ ಕನಿಷ್ಠ ಸಂಖ್ಯೆ ತರಗತಿಯಲ್ಲಿ 10” ಇದ್ದರೆ  ತಮ್ಮ ಮಾತೃಭಾಷೆಯಲ್ಲಿ (ಗಳಲ್ಲಿ) ಶಿಕ್ಷಣ ಪಡೆಯುವ  ಸಾಂ ವಿಧಾನಿಕ ಹಕ್ಕನ್ನು ಪಡೆದಿರುತ್ತಾರೆ (ಕೋಠಾರಿ ಆಯೋಗ). ಪ್ರಾoತೀಯ ಭಾಷೆ ಈ ಹಂತದಲ್ಲಿ ಬರಬಾರದು. ಇದು ತರಗತಿಯಲ್ಲಿ ಉತ್ಕೃಷ್ಟ ಭೋಧನೆಯನ್ನು ಸುಗಮಗೊಳಿಸುತ್ತದೆ, ಕಲಿಕಾರ್ಥಿಗಳ ಹೆಚ್ಚಿನ ಭಾಗವಹಿಸುವಿಕೆಗೆ ದಾರಿ ಮಾಡುತ್ತದೆ, ಮತ್ತು ಉತ್ತಮ ಕಲಿಕಾ ಫಲಿತಾoಶಗಳನ್ನು ನೀಡುತ್ತದೆ. ಈ ಉದ್ದೇಶಕ್ಕಾಗಿ ಸಾಕಷ್ಟು ಸೌಲಭ್ಯಗಳನ್ನು ಒದಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ಮಾತೃ ಭಾಷಾ ಶಿಕ್ಷಣಕ್ಕೆ ಧನಾತ್ಮಕ ಮನೋಭಾವನೆ ಎಲ್ಲಾ ಕಡೆಗಳಲ್ಲಿ ಇರುವುದನ್ನು ಖಾತರಿಪಡಿಸುವ ಮೂಲಕ ಕಲಿಕಾರ್ಥಿಗಳು ತಮಗೆ ಅನುಕೂಲವಾಗುವ ಯಾವುದೇ ಮಾಧ್ಯಮವನ್ನು ಆಯ್ದುಕೊಳ್ಳಲು ಹಿಂಜರಿಯದಂತೆ ನೋಡಿಕೊಳ್ಳಬೇಕು. ಜಿoಗರನ್ (2005) ಗುರುತಿಸುವಂತೆ, 12 ಪ್ರತಿಶತ ಮಕ್ಕಳು ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಕಲಿಯಲು ಅವಕಾಶ ವಂಚಿತರಾಗಿರುವುದರಿಂದ ಪ್ರಬಲ ಕಲಿಕಾ ಅನಾನುಕೂಲತೆಯಿoದ ಬಳಲುತ್ತಾರೆ. ಅಂತಹ ಮಕ್ಕಳು ವಿವಿಧ ವರ್ಗಗಳಿಗೆ ಸೇರಿದವರಾಗಿದ್ದು, ಇದರಲ್ಲಿ ಪರಿಶಿಷ್ಠ ಪoಗಡದ ಮಕ್ಕಳು, ತಾವು ಮಾತನಾಡುವ ಭಾಷೆಯ ಕುರಿತಾಗಿರುವ ಕೀಳರಿಮೆ ಹೊoದಿರುವ ಮಕ್ಕಳು, ವಲಸೆ ಹೋದ ತoದೆ-ತಾಯoದಿರ ಮಕ್ಕಳು, ಸಿಂಧಿ, ಕಾಶ್ಮೀರೀ, ಡೋಗ್ರಿ, ಕೊoಕಣಿ ಭಾಷೆಯಲ್ಲಿ ಮಾತನಾಡುವ ಮಕ್ಕಳು ಸೇರಿರುತ್ತಾರೆ. ಆದರೆ, ಪಠ್ಯಪುಸ್ತಕಗಳನ್ನು ಪ್ರಕಟಿಸುವಾಗ ಅತ್ಯoತ ಹೆಚ್ಚಿನ ಕಾಳಜಿಯನ್ನು ತೆಗೆದುಕೊoಡು, ಈ ಪುಸ್ತಕಗಳು ಹಿಂಗ್ಲೀಷಿನಿಂದ ಕೆಟ್ಟದಾಗಿ ಭಾಷಾoತರಗೊoಡ ಪುಸ್ತಕಗಳಾಗಿರದೇ,  ಈ ಮಕ್ಕಳ ಭಾಷೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ವೇಗವಾಗಿ ಮಾಯವಾಗುತ್ತಿರುವ  ನಮ್ಮ ಕೆಲವು ಸಾಹಿತ್ಯಗಳನ್ನು ಮತ್ತು ಸ್ಥಳೀಯ ಜ್ಞಾನ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಮತ್ತು ಈ ಭಾಷೆಗಳಲ್ಲಿ ಹೊಸ ಜ್ಞಾನವನ್ನು ನಿರ್ಮಿಸಲು ಸ್ಥಳಾವಕಾಶ ಮಾಡಲು ಇದೊoದೇ ನಮಗಿರುವ ದಾರಿಯಾಗಿದೆ.<br>
 
ಶಾಲಾ ಶಿಕ್ಷಣದ ಮಧ್ಯದ ಅಥವಾ ಉನ್ನತ ಹಿಂತಗಳಲ್ಲಿ, ಬೋಧನಾ ಮಾಧ್ಯಮವನ್ನು ಹಿಂತಹಿಂತವಾಗಿ ಪ್ರಾoತೀಯ ಅಥವಾ ರಾಜ್ಯಭಾಷೆಗೆ ಅಥವಾ ಹಿಂದಿ ಇಲ್ಲವೇ ಹಿಂಗ್ಲೀಷ್ ಗೆ ಬದಲಾಯಿಸಬಹುದು. ಪ್ರಾಥಮಿಕ ಶಿಕ್ಷಣವು ಹೆಚ್ಚಿನ ಮಟ್ಟಿಗೆ ಭಾಷಾ ಶಿಕ್ಷಣ ಎಂದು ನಾವು ನಂಬಿರುವುದರಿಂದ, ಮಾತೃಭಾಷೆಯನ್ನು (ಗಳನ್ನು) ಅಥವಾ ಪ್ರಾoತೀಯ ಭಾಷೆಯನ್ನು (ಗಳನ್ನು) ಸಹ ಕಡ್ಡಾಯ ವಿಷಯವಾಗಿ ಬೋಧಿಸಬೇಕು.
 
ಭಾಷೆಯನ್ನು ಕಲಿಯಲು ಮನುಷ್ಯರು ಅಪಾರ ಸಾಮರ್ಥ್ಯಗಳನ್ನು ಹೊoದಿರುತ್ತಾರೆ, ಅದರಲ್ಲೂ ಚಿಕ್ಕ ವಯಸ್ಸಿನಲ್ಲಿರುವಾಗ. ಸಾಕಷ್ಟು ಸೌಲಭ್ಯಗಳು ಲಭ್ಯವಿದ್ದರೆ, ಸಂವಾದದ ಮಟ್ಟದಲ್ಲಿ ಹಿಂಗ್ಲೀಷ್ ನ್ನು ಪ್ರಾಥಮಿಕ ಶಾಲಾ ಹಿಂತದಲ್ಲಿ ಪರಿಚಯಿಸಬಹುದು. ಕೇವಲ ಹಿಂಗ್ಲೀಷ್ ನ್ನು ಕಲಿಸಲು ಇನ್ನೂ ಕೆಲವು ವರ್ಷಗಳನ್ನು ಹೆಚ್ಚಿಸುವುದರಿಂದ ಯಾವುದೇ ಫಲಿತಾoಶ ಒದಗಿಸಲು ಸಾಧ್ಯವಾಗಲಿಕ್ಕಿಲ್ಲ. ಬಹುಭಾಷಾ ತರಗತಿಯ ಬೋಧನಾ ಕಾರ್ಯತoತ್ರಗಳನ್ನು ಅಭಿವೃದ್ಧಿಪಡಿಸುವ ಪದರಿನಲ್ಲಿಯೇ ಹಿಂಗ್ಲೀಷ್ ಬೋಧನೆಯನ್ನು ಹೆಣೆಯಬೇಕು ಎಂದು  ನಾವು ಬಲವಾಗಿ ಶಿಫಾರಸ್ಸು ಮಾಡುತ್ತೇವೆ. ಸಾಮಾನ್ಯ ನಂಬಿಕೆಯ ವಿರುದ್ಧವಾಗಿ, ಭಾಷೆಗಳು ಪರಸ್ಪರರ ಒಡನಾಟದಲ್ಲಿ ಅರಳುತ್ತವೆ.<br>
 
ಮೂರು ಭಾಷೆಗಳು ಕನಿಷ್ಠವೇ ಹೊರತು ತ್ರಿ-ಭಾಷಾ ಸೂತ್ರದ ಗರಿಷ್ಠ ಮಿತಿಯoತೂ ಅಲ್ಲ ಹಿಂಬುದು ಸ್ಪಷ್ಟವಾಗಿರಬೇಕು. ಸಂಸ್ಕೃತವನ್ನು ಆಧುನಿಕ ಭಾರತೀಯ ಭಾಷೆಯಾಗಿ ಕಲಿಯಬೇಕು (ಹಿಂತಹ ಸಂದರ್ಭದಲ್ಲಿ, ಇದರ ಸ್ವರೂಪ ಶಾಸ್ತ್ರೀಯ ಸಂಸ್ಕೃತಕ್ಕಿoತ ಸಾಕಷ್ಟು ಭಿನ್ನವಾಗಿರಬೇಕು), ಆದರೆ ಯಾರೂ ಇದನ್ನು ತ್ರಿ-ಭಾಷಾ ಸೂತ್ರದ ಆಶಯದಂದ ಆಚೀಚೆ ಹೊಗಲು ಬಳಸುವ ಕವಚವಾಗಿ ಬಳಸಬಾರದು.
 
ಶಾಸ್ತ್ರೀಯ ಮತ್ತು ವಿದೇಶಿ ಭಾಷೆಗಳನ್ನು ತಮ್ಮದೇ ಆದ ರೀತಿಯಲ್ಲಿ ಕಲಿಯಬೇಕು. ಅವುಗಳು ವ್ಯಾಕರಣದ ಸಂಕೀರ್ಣತೆಯ ಹೊಸ ವಿಸ್ತಾರಗಳನ್ನು ತೆರೆಯುತ್ತವೆ; ಸಾಮಾನ್ಯವಾಗಿ ನಿಲುಕದಿರುವ ಪರಿಂಪರೆ, ಸಂಸ್ಕೃತಿ, ಮತ್ತು ಜನರೊoದಿಗೆ ಸಂಪರ್ಕ ಒದಗಿಸುತ್ತವೆ.<br>
 

೦೭:೧೨, ೧೫ ಸೆಪ್ಟೆಂಬರ್ ೨೦೧೬ ದ ಇತ್ತೀಚಿನ ಆವೃತ್ತಿ

See in English

ಪೀಠಿಕೆ

ಭಾಷೆಯು ಒಂದು ನಿಯಮಧಾರಿತ ಸಂವಹನ ವ್ಯವಸ್ಥೆ ಮಾತ್ರವಲ್ಲ. ಅದು ಹೆಚ್ಚಿನ ಮಟ್ಟಿಗೆ ನಮ್ಮ ಚಿಮತನೆಯನ್ನು ರೂಢಿಸುವ, ನಮ್ಮ ಸಾಮಾಜಿಕ ಸಂಬಂಧಗಳನ್ನು ಅಧಿಕಾರ ಹಾಗು ಸಮಾನತೆಯ ನೆಲೆಗಳಲ್ಲಿ ವ್ಯಾಖ್ಯಾನಿಸುವ ಗಹನವಾದ ವಿಷಯವೂ ಹೌದು. ಮೂರು ವರ್ಷ ವಯಸ್ಸಿನೊಳಗೆಯೇ ಸಾಮಾನ್ಯ ಮಕ್ಕಳು ಒಂದು ಮಾತ್ರವಲ್ಲ, ಅನೇಕ ವೇಗವಾಗಿ ಪ್ರೌಢಿಮೆ ಸಾಧಿಸುವ ಸಂಗತಿಯು ಬಹುಶಃ ನಾವೆಲ್ಲರೂ ಭಾಷೆಗೆ ಸಂಬಂಧಿಸಿದಂತೆ ಅಂತರಿಕವಾದ ಸಹಜ ಶಕ್ತಿಯನ್ನು ಹುಟ್ಟಿನಿಂದಲೇ ಪಡೆದಿದ್ದೇವೆ ಎಂಬುದನ್ನು ತೋರಿಸುತ್ತದೆ. ಎಲ್ಲಾ ನಿರ್ಧಿಷ್ಟ ಭಾಷಾ ಕಲಿಕಯೂ ಸಾಮಾಜಿಕ ಹಾಗು ಸಾಂಸ್ಕೃತಿಕ ಮಧ್ಯಸ್ಥಿಕೆಯಲ್ಲಿ ನಡೆಯುತ್ತದೆ ಹಾಗು ಪ್ರತಿ ವ್ಯಕ್ತಿಯೂ ವಿವಿಧ ಸಾಮಾಜಿಕ ಸಂದರ್ಭಗಳಲ್ಲಿ ವ್ಯವಹರಿಸಲು ಅಗತ್ಯವಾದ ಭಾಷಾ ಬಳಕೆಗಳ ಸಂಗ್ರಹವನ್ನು ತಾನೆ ಯಶಸ್ವಿಯಾಗಿ ಸೃಷ್ಟಿಸಿಕೊಳ್ಳುತ್ತಾನೆ/ಳೆ. ಶೈಕ್ಷಣಿಕ ಯೋಜನೆ ತಯಾರಿಸುವವರು ಹಾಗು ಭಾಷಾ ನೀತಿಯ ರೂಪಣೆ ಮಾಡುವವರು ಮಗುವಿನ ಆ ಆಂತರಿಕ ಸಾಮರ್ಥ್ಯವನ್ನು ಬಳಸಿಕೊಳ್ಳಲಾಗದಿರುವುದು ಒಂದು ದುಃಖದ ಸಂಗಂತಿಯೇ ಸರಿ. ಭಾರತದಂತಹ ದೇಶದಲ್ಲಿ ಹೆಚ್ಚಿನ ಮಕ್ಕಳು ಬಹುಭಾಷಾ ಸಾಮರ್ಥ್ಯದೊಂದಿಗೆ ಶಾಲೆಗೆ ಬರುತ್ತಾರೆ. ಆದರೆ ಅವರು ಶಅಲಾ ವ್ಯವಸ್ಥೆಯಿಂದ ಹೊರ ಬೀಳಲಾರಂಬಿಸುತ್ತಾರೆ. ಇದಕ್ಕೆ ಕಾರಣವಾಗಿರುವ ವಿವಿಧ ಅಂಶಗಳಲ್ಲಿ ಶಾಲೆಯ ಭಾಷೆಯೂ ಅವರ ಮನೆ ಹಾಗು ನೆರೆಹೊರೆಯ ಭಾಷೆಗೆ ಸಂಬಂಧೀಕರಿಸಿಕೊಳ್ಳುವಲ್ಲಿ ಸೋಲುತ್ತದೆ ಎನ್ನುವುದೂ ಒಂದು. ಹೆಚ್ಚಿನ ಮಕ್ಕಳು ಅವರ ಮಾತೃಭಾಷೆಯಲ್ಲಿ ಕೂಡಾ ಓದುವ ಹಾಗು ಬರೆಯುವ ಕೌಶಲಗಳಲ್ಲಿ ಅತ್ಯಂತ ನಿರಾಶಾದಾಯಕ ಮಟ್ಟದ ಸಾಮರ್ಥ್ಯದೊಂದಿಗೆ ಶಾಲೆ ಪೂರೈಸುತ್ತಾರೆ. ಸಾಮಾನ್ಯವಾಗಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಋಣಾತ್ಮಕವಾಗಿ ಪ್ರಭಾವಿಸುವ ವಿವಿಧ ಸಾಮಾಜಿಕ ಹಾಗೂ ರಾಜಕೀಯ ಅಂಶಗಳೊಂದಿಗೆ ಮಕ್ಕಳ ಸಾಮರ್ಥ್ಯ ಗಳಿಕೆ ಕೆಳಮಟ್ಟದಲ್ಲಿರಲು ಕಾರಣವಾಗಿರುವ ಪ್ರಮುಖ ಅಂಶಗಳು ಈ ಕೆಳಕಂಡಂತಿವೆ :-

  1. ಭಾಷೆಯ ಸ್ವಭಾವ ಹಾಗೂ ಸಂರಚನೆಯ ಕುರಿತು ಹಾಗು ವಿಶೇಷವಾಗಿ ಬಹುಭಾಷಾ ಸಂದರ್ಭಗಳಲ್ಲಿ ಭಾಷಾ ಬೋಧನೆ-ಕಲಿಕಾ ಪ್ರಕ್ರಿಯೆಗಳ ಅರ್ಥೈಸಿಕೊಳ್ಳುವಿಕೆಯಲ್ಲಿರುವ ಕೊರತೆ.
  2. ಜ್ಞಾನ ರಚನೆಯಲ್ಲಿ ಭಾಷೆಯು ಸಮಗ್ರ ಪಠ್ಯಕ್ರಮಕ್ಕೆ ಸಾಮಾನ್ಯವಾಗಿ ಅನ್ವಯವಾಗುವಂತೆ ವಹಿಸುವ ಪಾತ್ರವನ್ನು ಅರ್ಥೈಸಿಕೊಳ್ಳುವಲ್ಲಿ ಶೈಕ್ಷಣಿಕ ಯೋಜನೆ ತಯಾರಿಸುವವರು ಸೋತಿರುವುದು.
  3. ಭಾಷೆಯಲ್ಲಿ ಜಾತಿ, ಜನಾಂಗ, ಲಿಂಗ ಸಂಬಂಧೀ ವಿಷಯಗಳೂ ಸೇರಿದಂತೆ ಅನೇಕ ಪೂರ್ವಾಗ್ರಹಗಳು ಅಡಕಗೊಳ್ಳಲ್ಪಡುತ್ತವೆ ಎಂಬುದಕ್ಕೆ ಹೆಚ್ಚು ಗಮನ ನೀಡದಿರುವುದು.
  4. ಭಾಷೆಯು ಕೇವಲ ಗಧ್ಯ, ಪದ್ಯ, ಪ್ರಬಂಧ ಹಾಗೂ ಕಥೆಗಳಿಗಿಂತಲೂ ಹೆಚ್ಚಿನದನ್ನು ಒಳಗೊಂಡಿದೆ ಎನ್ನುವುದನ್ನು ಗ್ರಹಿಸುವಲ್ಲಿ ಇರುವ ಅಸಮರ್ಥತೆ.
  5. ಜ್ಞಾನಾತ್ಮಕ ಬೆಳವಣಿಗೆಯಲ್ಲಿ ಮನೆ ಹಾಗು ನೆರೆಹೊರೆಯ ಭಾಷೆಯ ಪಾತ್ರವನ್ನು ಒಪ್ಪಿಕೊಳ್ಳಲು ಮನಸ್ಸು ಮಾಡದಿರುವುದು ಹಾಗೂ ಜ್ಞಾನಾತ್ಮಕವಾಗಿ ಅಭಿವೃದ್ದಿ ಹೊಂದಿದ ಭಾಷಾ ಸಾಮರ್ಥ್ಯವು ವಿವಿಧ ಭಾಷೆಗಳಿಗೆ ವರ್ಗಾಯಿಸಲ್ಪಡುತ್ತದೆ ಎನ್ನುವುದನ್ನು ಗುರುತಿಸುವಲ್ಲಿನ ಸೋಲು.

ನಮ್ಮ ಉಳಿವಿಗೆ ಭಾಷಾ ವೈವಿಧ್ಯತೆಯು ಜೀವ ವೈವಿಧ್ಯತೆಯಷ್ಟೇ ಮುಖ್ಯವಾಗಿದೆ ಎನ್ನುವುದು ಹೆಚ್ಚು ಹೆಚ್ಚಾಗಿ ಸ್ಪಷ್ಟವಾಗುತ್ತಿದೆ. ನಾವು ಮಕ್ಕಳ ಮಾತೃಭಾಷೆಗಳಲ್ಲಿ ಶಿಕ್ಷಣ ನೀಡಲು ವ್ಯವಸ್ಥೆ ಮಾಡುವುದು ಮತ್ತು ಬಹುಭಾಷಾ ಸಂದರ್ಭವನ್ನು ತರಗತಿಯಲ್ಲಿ ಲಭ್ಯವಿರುವ ಸಂಪನ್ಮೂಲವಾಗಿ ಬಳಸಿಕೊಳ್ಳುವಲ್ಲಿ ಶಿಕ್ಷಕರಿಗೆ ತರಬೇತಿ ನೀಡುವುದು ಅಗತ್ಯವೂ ಅನಿವಾರ್ಯವೂ ಆಗಿದೆ. ಇತ್ತೀಚೆಗಿನ ಸಂಶೋಧನೆಗಳು ಕೂಡಾ ಬಹುಭಾಷಾ ಪ್ರೌಡಿಮೆ ಮತ್ತು ಶೈಕ್ಷಣಿಕ ಸಾಧನೆಗಳ ನಡುವೆ ಧನಾತ್ಮಕ ಸಹಸಂಬಂಧ ಇರುವುದನ್ನು ತೋರಿಸಿಕೊಟ್ಟಿವೆ.
ಬಹುಭಾಷಿಕತೆಯು ಹೆಚ್ಚಿನ ಜ್ಞಾನಾತ್ಮಕ ನಮ್ಯತೆ ಮತ್ತು ಸಾಮಾಜಿಕ ಸಹಿಷ್ಣುತೆಗಳನ್ನು ಸಾಧ್ಯವಾಗಿಸುತ್ತದೆ ಎನ್ನುವುದನ್ನೂ ಅವು ತೋರಿಸಿವೆ. ನಾವು ಆತಂಕರಹಿತ ಸಂದರ್ಭಗಳಲ್ಲಿ ಗ್ರಹಿಸಿಕೊಳ್ಳಬಹುದಾದ ಅನುಭವಗಳನ್ನು ನೀಡಬೇಕಾಗಿದೆ ಮತ್ತು ಜಾತಿ, ಬಣ್ಣ ಹಾಗು ಲಿಂಗ ತಾರತಮ್ಯಗಳನ್ನು ನಿವಾರಿಸಲು ಎಲ್ಲ ಪ್ರಯತ್ನ ಮಾಡಬೇಕಾಗಿದೆ. ಶೈಕ್ಷಣಿಕ ಯೋಜನೆ ತಯಾರಿಸುವವರು ಪಠ್ಯಕ್ರಮದ ಎಲ್ಲಾ ಆಯಾಮಗಳನ್ನು ಒಳಗೊಳ್ಳುವ ಭಾಷೆಗೆ ಗಮನ ನೀಡದಿದ್ದಲ್ಲಿ ಸಮತೆ, ನ್ಯಾಯ, ಪ್ರಜಾಸತ್ತೀಯ ಗುರಿಗಳು ದೂರದ ಕನಸುಗಳಾಗಿಯೇ ಉಳಿದಾವು.
೧೦ನೇ ಅಧ್ಯಾಯದಲ್ಲಿ ಮಾಡಿರುವ ಶಿಫಾರಸ್ಸುಗಳನ್ನು ಹಾಗೂ ಶಾಲಾ ಪಠ್ಯಕ್ರಮದಲ್ಲಿ ಭಾಷೆಗಳ ಕುರಿತಂತೆ ಪ್ರಸ್ತಾಪಿಸಲಾಗಿರುವ ಅಂಶಗಳನ್ನು ಈ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕಾಗಿದೆ. ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್ ನ ಅಧ್ಯಾಯಗಳನ್ನು ಈ ಕೆಳಕಂಡ ಲಿಂಕ್ ಗಳಲ್ಲಿ ಓದಬಹುದಾಗಿದೆ.

  1. ಆಧ್ಯಾಯ-೧ ಎನ್.ಸಿ.ಎಫ್ ಪೊಶೀಷನ್ ಪೇಪರ್- ಭಾಷೆಯ ಸ್ವರೂಪ
  2. ಅಧ್ಯಾಯ-೨ ಎನ್.ಸಿ.ಎಫ್ ಪೊಶೀಷನ್ ಪೇಪರ್-ಭಾಷೆ ಕಲಿಕೆ
  3. ಅಧ್ಯಾಯ-೩ ಎನ್.ಸಿ.ಎಫ್ ಪೊಶೀಷನ್ ಪೇಪರ್-ಸಾಂವಿಧಾನಿಕ ಅವಕಾಶಗಳು ಹಾಗು ತ್ರಿಭಾಷಾ ಸೂತ್ರ
  4. ಅಧ್ಯಾಯ-೪ ಎನ್.ಸಿ.ಎಫ್ ಪೊಶೀಷನ್ ಪೇಪರ್ -ಶಾಲಾ ಪಠ್ಯಕ್ರಮದಲ್ಲಿ ಇತರೆ ಭಾಷಾ ಸಮಸ್ಯಗಳು
  5. ಅಧ್ಯಾಯ-೫ ಎನ್.ಸಿ.ಎಫ್ ಪೊಶೀಷನ್ ಪೇಪರ್-ಬಹುಭಾಷಾ ಹಾಗು ತತ್ವಶಾಸ್ತ್ರದ ಸಾಧನೆ
  6. ಅಧ್ಯಾಯ-೬ ಎನ್.ಸಿ.ಎಫ್ ಪೊಶೀಷನ್ ಪೇಪರ್-ಭಾಷಾ ಕಲಿಕಾ ವಿಧಾನಗಳು
  7. ಅಧ್ಯಾಯ-೭ ಎನ್.ಸಿ.ಎಫ್ ಪೊಶೀಷನ್ ಪೇಪರ್-ಭಾಷಾ ಕಲಿಕಾ ಸಾಮಗ್ರಿಗಳು
  8. ಅಧ್ಯಾಯ-೮ ಎನ್.ಸಿ.ಎಫ್ ಪೊಶೀಷನ್ ಪೇಪರ್-ಭಾಷಾಬೋಧನೆಯಲ್ಲಿ ಶಿಕ್ಷಕರು
  9. ಅಧ್ಯಾಯ-೯ ಎನ್.ಸಿ.ಎಫ್ ಪೊಶೀಷನ್ ಪೇಪರ್-ಭಾಷಾಬೋಧನೆಯ ಮೌಲ್ಯಮಾಪನ
  10. ಅಧ್ಯಾಯ-೧೦ ಎನ್.ಸಿ.ಎಫ್ ಪೊಶೀಷನ್ ಪೇಪರ್-ಭಾಷಾಬೋಧನೆಗೆ ಕೆಲವು ಶಿಫಾರಸ್ಸುಗಳು