ರಚನಾ ಸಮಾಜ ವಿಜ್ಞಾನ 9 ಅರ್ಥಶಾಸ್ತ್ರ ವಿಭಾಗ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೧:೦೨, ೧೧ ನವೆಂಬರ್ ೨೦೧೩ ರಂತೆ Hvvenkatesh (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: =12. (ಇ) ಅರ್ಥಶಾಸ್ತ್ರ ವಿಭಾಗ = ==ಉದಾಹರಣೆ- 1 == 1) ಪಾಠದ ಹೆಸರು : ಆಕ ರಚನೆ 2) ಜ್ಞಾನ ರಚ...)
Jump to navigation Jump to search

12. (ಇ) ಅರ್ಥಶಾಸ್ತ್ರ ವಿಭಾಗ

ಉದಾಹರಣೆ- 1

1) ಪಾಠದ ಹೆಸರು : ಆಕ ರಚನೆ

2) ಜ್ಞಾನ ರಚನೆಗೆ ಇರುವ ಅವಕಾಶಗಳು:

  • ಆಕ ಪರಿಕಲ್ಪನೆ ಅರಿಯುವುದು
  • ಪುರಾತನ ಅರ್ಥವ್ಯವಸ್ಥೆ, ಲಕ್ಷಣಗಳು
  • ಸಾಂಪ್ರದಾಯಿಕ ಅರ್ಥವ್ಯವಸ್ಥೆ ಲಕ್ಷಣಗಳು
  • ವರಮಾನ ಮತ್ತು ಉದ್ಯೋಗ ಇವುಗಳ ಮೌಲ್ಯವನ್ನು ಅರ್ಥೈಸಿಕೊಳ್ಳುವುದು.
  • ಆಕತೆಯ ಲಕ್ಷಣಗಳನ್ನು ಗ್ರಹಿಸಿಕೊಳ್ಳುವುದು.
  • ಸ್ವಾವಲಂಬಿ ಅರ್ಥವ್ಯವಸ್ಥೆ ಹಿನ್ನಲೆಯಲ್ಲಿ ಭಾರತವನ್ನು ತಿಳಿದುಕೊಳ್ಳುವುದು.
  • ಪುರಾತನ ಮತ್ತು ಆಧುನಿಕ ಅರ್ಥವ್ಯವಸ್ಥೆ ನಡುವಿನ ವ್ಯತ್ಯಾಸವನ್ನು ಅರಿಯುವುದು.

3) ವಿಮರ್ಶಾತ್ಮಕ ಶಿಕ್ಷಣಕ್ರಮ ಅಳವಡಿಕೆಗೆ ಇರುವ ಅವಕಾಶಗಳು

  • ಮಾನವ ಜೀವನ ಶೈಲಿ ಆತನ ಆಕ ವ್ಯವಸ್ಥೆಯನ್ನು ಅವಲಂಬಿಸಿರುತ್ತದೆ ಎಂಬುದನ್ನು ಆತನ ಹಣಕಾಸಿನ ಆದಾಯದ ಹಿನ್ನಲೆಯಲ್ಲಿ ವಿಶ್ಲೇಶಿಸುವುದು.
  • ಮಾನವ ವಿವಿಧ ಬಗೆಯ ಆಕ ಚಟುವಟಿಕೆಗಳು ಯಾವುವು ಎಂಬುದನ್ನು ಉದ್ಯೋಗ ಸ್ವರೂಪದ ಸಂದರ್ಭದಲ್ಲಿ ಅರ್ಥೈಸಿಕೊಳ್ಳುವುದು.
  • ಮನುಷ್ಯನು ಒಬ್ಬ ಮಾನಸಿಕ ಮತ್ತು ಭೌತಿಕ ಬಂಡವಾಳ, ಹೇಗೆಂಬುದನ್ನು ಚರ್ಚಾತ್ಮಕವಾಗಿ ವಿಶ್ಲೇಷಿಸುವುದು.
  • ಇತ್ತೀಚೆಗೆ ಕೃಷಿ ವಲಯದ ಆದಾಯ ಪ್ರಮಾಣ ಕಡಿಮೆಯಾಗಲು ಕಾರಣವೇನೆಂಬುದನ್ನು ತಾರ್ಕಿಕವಾಗಿ ಚರ್ಚಿಸುವುದು.
  • ಇಂದಿನ ನಗರೀಕರಣ ವ್ಯವಸ್ಥೆ ಹೆಚ್ಚಾಗುತ್ತಿರಲು ಕಾರಣಗಳನ್ನು ತಿಳಿದುಕೊಳ್ಳುವುದು.
  • ಹಳ್ಳಿಗಳು ಬರಿದಾಗುತ್ತಿರಲು ನಗರೀಕರಣವೇ ಕಾರಣ ಹೇಗೆ? ಚರ್ಚಿಸುವರು.
  • ಕೃಷಿಯಲ್ಲಿ ವಾಣಿಜ್ಯ ಬೆಳೆಗಳ ಪ್ರಭಾವ ಅಧಿಕವಾಗುತ್ತಿದೆ. ಏಕೆ? ಎಂಬುದನ್ನು ಅರ್ಥೈಸಿಕೊಳ್ಳುವರು.
  • ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿಯಿಂದ ಆದಂತಹ ಪರಿಣಾಮ ಮತ್ತು ಪ್ರಭಾವ ಕುರಿತು ಚರ್ಚಿಸುತ್ತಾ, ಇದು ಭಾರತೀಯ ಸಮಾಜದ ಮೇಲೆ ಯಾವ ರೀತಿಯ ವ್ಯವಸ್ಥೆಗೆ ಕಾರಣವಾಗಿದೆ ಎಂಬುದನ್ನು ತಿಳಿಯುವರು.
  • ಇತ್ತೀಚೆಗೆ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ ಎಂಬುದನ್ನು ಒಪ್ಪಿಕೊಳ್ಳಲು ಚರ್ಚೆ ಮಾಡಿ ತೀರ್ಮಾನಿಸುವುದು.
  • ಗೃಹ ಟಕ ಮತ್ತು ಉದ್ಯಮ ಟಕಗಳ ನಡುವಿನ ವ್ಯತ್ಯಾವನ್ನು ಅರ್ಥೈಸಿಕೊಳ್ಳುವರು.
  • ಆಕ ಚಟುವಟಿಕೆಗಳಲ್ಲಿ ಉತ್ಪಾದನಾಂಗಗಳು ಯಾವುವು? ಎಂಬುದನ್ನು ವಿಶ್ಲೇಷಿಸುವರು.
  • ಆಕ ಚಟುವಟಿಕೆಗಳಲ್ಲಿ ಸರ್ಕಾರ ಮಧ್ಯ ಪ್ರವೇಶದ ಮಹತ್ವವನ್ನು ಗ್ರಹಿಸಿಕೊಳ್ಳುವರು.
  • ಆಕ ವ್ಯವಸ್ಥೆಯಲ್ಲಿ ಉದ್ಯೋಗ ಮೂಲಗಳು ಯಾವುವು? ಎಂಬುದನ್ನು ಉದ್ಯೋಗವಕಾಶಗಳ ಹಿನ್ನಲೆಯಲ್ಲಿ ಕಂಡುಕೊಳ್ಳುವರು.
  • ಕೃಷಿ ವಲಯ ಮತ್ತು ಕೈಗಾರಿಕಾ ವಲಯಗಳ ನಡುವಿನ ವ್ಯತ್ಯಾಸವನ್ನು ಗಮನಿಸುವರು.
  • ಕೌಶಲ್ಯಾಧಾರಿತ ಉದ್ಯೋಗದ ಪರಿಕಲ್ಪನೆಯಲ್ಲಿ ಆದಾಯವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳುವರು.
  • ಸ್ಥಿರಾತ್ಮಕ ಮತ್ತು ಚಲನಾತ್ಮಕ ಅರ್ಥಶಾಸ್ತ್ರದ ವ್ಯತ್ಯಾಸಗಳನ್ನು ವಿಮರ್ಶಾತ್ಮಕವಾಗಿ ಗ್ರಹಿಸುವರು.
  • ಸ್ವಾತಂತ್ರ್ಯಾನಂತರ ಭಾರತದ ಅರ್ಥವ್ಯವಸ್ಥೆಯ ಸ್ಥಿತಿ-ಗತಿಗಳನ್ನು ಕುರಿತು ಚರ್ಚಿಸುವರು.

4) ಜ್ಞಾನ ಪುನರ್ರಚನೆಗಿರುವ ಅವಕಾಶ

  • ಒಂದು ದೇಶದ ಆಕ ಚಟುವಟಿಕೆಗಳು ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳನ್ನು ಹೊಂದಿದ್ದು, ಈ ಮೂರೂ ಚಟುವಟಿಕೆಗಳು ಹಣಕಾಸಿನ ಮೂಲವಾದ ಉತ್ಪಾದನೆ, ಆದಾಯ, ಮತ್ತು ಉದ್ಯೋಗಗಳನ್ನು ಅವಲಂಬಿಸಿದೆ ಎಂಬ ಜ್ಞಾನವನ್ನು ಕಟ್ಟಿಕೊಳ್ಳುವರು.
  • ಪ್ರತಿಯೊಂದು ಆಕ ಚಟುವಟಿಕೆಯು ತನ್ನ ನಿರಂತರ ಬದಲಾವಣೆಯನ್ನು ಉದ್ಯೋಗ, ಉತ್ಪಾದನೆಯ ಪ್ರಮಾಣ, ಆದಾಯ ಮತ್ತು ಬಳಸಲಾಗಿರುವ ತಂತ್ರಜ್ಞಾನದ ಸ್ವರೂಪವನ್ನು ಅವಲಂಬಿಸಿರುತ್ತದೆ ಎಂಬ ಅಂಶವನ್ನು ತಿಳಿದುಕೊಳ್ಳುವರು.

ಉದಾ: - ಐ.ಟಿ. ಬಿ.ಟಿ. ಕಂಪನಿಗಳ ಪ್ರಾರಂಭ.

  • ವೈಜ್ಞಾನಿಕ ಕೃಷಿ
  • ಸಾರಿಗೆ, ಸಂಪರ್ಕ (ಮೊಬೈಲ್, ಇಂಟರ್ನೆಟ್ ಇತ್ಯಾದಿ)
  • ಇಂದು ನಗರೀಕರಣ ಬೆಳೆಯುತ್ತಿರಲು ಕಾರಣ, ಮಳೆಯ ಅಭಾವ, ಕೃಷಿಯಲ್ಲಿನ ಬೆಳೆಗಳಿಗೆ ಬೆಲೆ ಕಡಿಮೆಯಾಗುತ್ತಿರುವುದು ಬಹುಮುಖ್ಯ ಕಾರಣವಾಗಿದ್ದು, ಇದರಿಂದ ನಗರೀಕರಣವನ್ನು ತಡೆಯಲು ಗುಡಿ ಕೈಗಾರಿಕೆಗಳಿಗೆ ನೀರಾವರಿ ಸೌಕರ್ಯಗಳಿಗೆ ಹೆಚ್ಚು ಒತ್ತು ಕೊಡಬೇಕೆಂಬ ತೀರ್ಮಾನಕ್ಕೆ ಬರುವರು.
  • ಜನರ ಬಯಕೆಗಳು ಕಡಿಮೆಯಾಗಿ, ಬದುಕು ಸರಳವಾಗಿರುವುದರಿಂದ ಪ್ರತಿಯೊಬ್ಬರು ಸಮೃದ್ಧಿಯ ಜೀವನವನ್ನು ನಡೆಸಲು ಸಾಧ್ಯ ಎಂಬ ಸತ್ಯವನ್ನು ತಮ್ಮದಾಗಿಸಿಕೊಳ್ಳುವರು.
  • ಕೃಷಿ ಚಟುವಟಿಕೆಯು ಪುರಾತನ ಕಾಲದ ಮಾನವನ ಜೀವನ ನಿರ್ವಹಣೆಗೆ ಬದಲಾಗಿ, ಬರುಬರುತ್ತಾ ವಾಣಿಜ್ಯ ಬೆಳೆಯಲು ಪ್ರಾರಂಭಿಸಿ, ವ್ಯಾಪಾರೀಕರಣಗೊಂಡುದರಿಂದ ಹೊಸ ಹೊಸ ಉದ್ಯಮಗಳು ಬೆಳೆಯಲು ಪ್ರಾರಂಭವಾಯಿತು. ಇದರಿಂದ ನಗರೀಕರಣವೂ ಬೆಳೆಯತೊಡಗಿತು.

ಉದಾ: ಸಕ್ಕರೆ ಕಾರ್ಖಾನೆ, ಬಟ್ಟೆ ಕೈಗಾರಿಕೆ, ಸೆಣಬಿನ ಕೈಗಾರಿಕೆ.

  • ಯೂರೋಪಿನಲ್ಲಿ 18ನೇ ಶತಮಾನದಲ್ಲಾದ ವಿಜ್ಞಾನದ ಬೆಳವಣಿಗೆ ಕೈಗಾರಿಕಾ ಕ್ರಾಂತಿಗೆ ಕಾರಣವಾಯಿತು. ಇದು ಸಮಾಜದ ಎಲ್ಲಾ ವಲಯಗಳ ಆಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿತು. ಇದರಿಂದ ಬಂಡವಾಳವರ್ಗ ಹೆಚ್ಚಾಗಿ, ಉದ್ಯೋಗವಕಾಶಗಳು, ಆದಾಯದ ಪ್ರಮಾಣ ಹೆಚ್ಚಾಯಿತು. ಅಂದರೆ ಉದ್ಯೋಗವಕಾಶಗಳು ಹೆಚ್ಚಲು ಕೈಗಾರಿಕೆಗಳು ಕಾರಣ ಎಂಬ ತೀರ್ಮಾನಕ್ಕೆ ಬರುವರು.

ಉದಾ : ಮುದ್ರಣಯಂತ್ರ, ಉಗಿ ಬಂಡಿ ತಯಾರಿಕೆ, ರಾಕೆಟ್, ವಿಮಾನ, ನೂಲುವ ಯಂತ್ರ ಇತ್ಯಾದಿ.

  • ಆಧುನಿಕ ಅರ್ಥವ್ಯವಸ್ಥೆಯು ಮಾನವನ ಜೀವನವನ್ನು ಮಾರ್ಪಡಿಸುತ್ತಿದೆ ಎಂಬ ಸತ್ಯವನ್ನು ತಿಳಿಯುವರು.
  • ಯಾವುದೇ ಮಾನವ ನಿರ್ಮಿತ ಆಕ ಚಟುವಟಿಕೆಯು ಲಾಭವಿಲ್ಲದೆ (ಪ್ರತಿಫಲ) ರೂಪುಗೊಳ್ಳುವುದಿಲ್ಲ ಎಂದು ಅರ್ಥೈಸಿಕೊಳ್ಳುವರು.

ಉದಾ: ಭೂಮಿ, ಪಸಲು, ಶ್ರಮ, ಕೂಲಿ, ಕೈಗಾರಿಕೆ, ಉತ್ಪಾದನೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ.

  • ಪ್ರತಿಯೊಂದು ಆಕ ಚಟುವಟಿಕೆಯಲ್ಲಿ ಸರ್ಕಾರದ ಮಧ್ಯಪ್ರವೇಶವಿದ್ದು, ತೆರಿಗೆಯನ್ನು ವಿಧಿಸುವ ಮೂಲಕ ಆದಾಯವನ್ನು ಸಂಗ್ರಹಿಸಿ, ಜನರಿಗೆ ಶಿಕ್ಷಣ, ಆರೋಗ್ಯ, ವಸತಿ, ಸಾರಿಗೆ, ನೀರು, ವಿದ್ಯುತ್ತನ್ನು ಪೂರೈಕೆ ಮಾಡುತ್ತದೆ ಎಂಬ ವಾಸ್ತವ ಜ್ಞಾನವನ್ನು ಅರಿಯುವರು.
  • ಪ್ರತಿಯೊಬ್ಬ ಮಾನವನು ಜೀವನ ನಿರ್ವಹಣೆಗೆ ಯಾವುದಾದರೂ ದುಡಿಮೆ ಅನಿವಾರ್ಯ ಎಂಬ ತೀರ್ಮಾನಕ್ಕೆ ಬರುವರು ಹಾಗೂ ತಮ್ಮಿಷ್ಟದ ಉದ್ಯೋಗ ಪಡೆಯಲು ವಿದ್ಯಾರ್ಹತೆಯನ್ನು ಪಡೆಯುವರು.

ಉದಾ: ಶಿಕ್ಷಕ, ಕಾರ್ಮಿಕ, ವೈದ್ಯ, ಚಾಲಕ ಇತ್ಯಾದಿ.

  • ಅರ್ಥವ್ಯವಸ್ಥೆಯಲ್ಲಿನ ಕೈಗಾರಿಕೆ ಮತ್ತು ಸೇವಾ ವಲಯಗಳಿಗೆ ಕೌಶಲ್ಯವುಳ್ಳ ಮಾನವಶಕ್ತಿ ಅನಿವಾರ್ಯವಾಗಲಾಗಿ, ಕೌಶಲ್ಯ ತರಬೇತಿ ವ್ಯವಸ್ಥೆ ಹುಟ್ಟಲು ಕಾರಣವಾಯಿತು. ಆದರೆ ಕೃಷಿಯಲ್ಲಿ ಮಾತ್ರ ಕೌಶಲ್ಯರಹಿತ ಕಾರ್ಮಿಕರೇ ಮುಂದುರೆಯಿತ್ತಿರುವುದರ ಕಾರಣಕ್ಕೆ ಪರಿಹಾರವನ್ನು ಕಂಡುಕೊಳ್ಳಲೆತ್ನಿಸುವರು.

ಉದಾ: ಐಟಿಐ ತರಬೇತಿ - ಕೈಗಾರಿಕೆ

  • ಡಿಪ್ಲಮೋ ತರಬೇತಿ - ಕೈಗಾರಿಕೆ
  • ಶಿಕ್ಷಕರ ತರಬೇತಿ - ಶಾಲಾ ಕಾಲೇಜುಗಳಿಗೆ
  • ಚಾಲಕ ತರಬೇತಿ - ಸಾರಿಗೆ
  • ಇತ್ತೀಚೆಗೆ (B.Sc., Ag,, ಕೃಷಿ ವಿ.ವಿ. ವಿದ್ಯಾಲಯಗಳು, ತೋಟಗಾರಿಕಾ ತರಬೇತಿ ಇತ್ಯಾದಿ)
  • ಪೌಷ್ಟಿಕ ಆಹಾರ ಮತ್ತು ಆರೋಗ್ಯ ಸೌಲಭ್ಯಗಳ ಕೊರತೆ ಜನಸಂಖ್ಯಾ ಬೆಳವಣಿಗೆಗೆ ಮಾರಕವಾಗುತ್ತದೆ ಎಂದು ತಿಳಿದುಕೊಳ್ಳುವರು.

ಉದಾ: ಹಿಂದಿನ ಪ್ಲೇಗ್ರೋಗ, ಸಿಡುಬುರೋಗ, ಇತ್ತೀಚಿನ ಪೋಲಿಯೋ, ಕುರುಡುತನ, ಬುದ್ಧಿಮಾಂದ್ಯರು ಇತ್ಯಾದಿ.

  • ಚಲನಾತ್ಮಕ ಅರ್ಥವ್ಯವಸ್ಥೆಯು ಬದಲಾವಣೆಯ ಸಂಕೇತವಾಗಿದ್ದು, ಇಂದಿನ ನವೀನ ತಂತ್ರಜ್ಞಾನವು ಬದಲಾಗುತ್ತಿರುವ ಅರ್ಥವ್ಯವಸ್ಥೆಗೆ ಕಾರಣ ಎಂದು ಅರ್ಥೈಸಿಕೊಂಡು ಚಲನೆಯೇ ಆಧುನಿಕ ಅರ್ಥ ವ್ಯವಸ್ಥೆಗೆ ಮೂಲ ಎಂಬ ಜ್ಞಾನವನ್ನು ತಿಳಿದುಕೊಳ್ಳುವರು.

ಉದಾ: - ದೂರವಾಣಿ ಕ್ಷೇತ್ರದ ಬದಲಾವಣೆ

  • ರೈಲುಗಾಡಿ ತಯಾರಿಕೆಯಲ್ಲಾಗಿರುವ ಬದಲಾವಣೆ.
  • ಸ್ವಾಂತಂತ್ರ್ಯಾನಂತರ ಭಾರತದ ಅರ್ಥವ್ಯವಸ್ಥೆಯಲ್ಲಿನ ಪ್ರಗತಿದಾಯಕ ಬದಲಾವಣೆಗೆ ವೈಜ್ಞಾನಿಕತೆಯೇ ಕಾರಣ ಎಂದು ಒಪ್ಪಿಕೊಳ್ಳುವರು. ಹಾಗೂ ಸಮಾಜಮುಖಿ ವಿಜ್ಞಾನದ ಬಳಕೆಗೆ ತೀರ್ಮಾನಿಸುವರು.