ರಚನಾ ಸಮಾಜ ವಿಜ್ಞಾನ 9 ಅರ್ಥಶಾಸ್ತ್ರ ವಿಭಾಗ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

12. (ಇ) ಅರ್ಥಶಾಸ್ತ್ರ ವಿಭಾಗ

ಉದಾಹರಣೆ- 1

1) ಪಾಠದ ಹೆಸರು : ಆಕ ರಚನೆ

2) ಜ್ಞಾನ ರಚನೆಗೆ ಇರುವ ಅವಕಾಶಗಳು:

  • ಆಕ ಪರಿಕಲ್ಪನೆ ಅರಿಯುವುದು
  • ಪುರಾತನ ಅರ್ಥವ್ಯವಸ್ಥೆ, ಲಕ್ಷಣಗಳು
  • ಸಾಂಪ್ರದಾಯಿಕ ಅರ್ಥವ್ಯವಸ್ಥೆ ಲಕ್ಷಣಗಳು
  • ವರಮಾನ ಮತ್ತು ಉದ್ಯೋಗ ಇವುಗಳ ಮೌಲ್ಯವನ್ನು ಅರ್ಥೈಸಿಕೊಳ್ಳುವುದು.
  • ಆಕತೆಯ ಲಕ್ಷಣಗಳನ್ನು ಗ್ರಹಿಸಿಕೊಳ್ಳುವುದು.
  • ಸ್ವಾವಲಂಬಿ ಅರ್ಥವ್ಯವಸ್ಥೆ ಹಿನ್ನಲೆಯಲ್ಲಿ ಭಾರತವನ್ನು ತಿಳಿದುಕೊಳ್ಳುವುದು.
  • ಪುರಾತನ ಮತ್ತು ಆಧುನಿಕ ಅರ್ಥವ್ಯವಸ್ಥೆ ನಡುವಿನ ವ್ಯತ್ಯಾಸವನ್ನು ಅರಿಯುವುದು.

3) ವಿಮರ್ಶಾತ್ಮಕ ಶಿಕ್ಷಣಕ್ರಮ ಅಳವಡಿಕೆಗೆ ಇರುವ ಅವಕಾಶಗಳು

  • ಮಾನವ ಜೀವನ ಶೈಲಿ ಆತನ ಆಕ ವ್ಯವಸ್ಥೆಯನ್ನು ಅವಲಂಬಿಸಿರುತ್ತದೆ ಎಂಬುದನ್ನು ಆತನ ಹಣಕಾಸಿನ ಆದಾಯದ ಹಿನ್ನಲೆಯಲ್ಲಿ ವಿಶ್ಲೇಶಿಸುವುದು.
  • ಮಾನವ ವಿವಿಧ ಬಗೆಯ ಆಕ ಚಟುವಟಿಕೆಗಳು ಯಾವುವು ಎಂಬುದನ್ನು ಉದ್ಯೋಗ ಸ್ವರೂಪದ ಸಂದರ್ಭದಲ್ಲಿ ಅರ್ಥೈಸಿಕೊಳ್ಳುವುದು.
  • ಮನುಷ್ಯನು ಒಬ್ಬ ಮಾನಸಿಕ ಮತ್ತು ಭೌತಿಕ ಬಂಡವಾಳ, ಹೇಗೆಂಬುದನ್ನು ಚರ್ಚಾತ್ಮಕವಾಗಿ ವಿಶ್ಲೇಷಿಸುವುದು.
  • ಇತ್ತೀಚೆಗೆ ಕೃಷಿ ವಲಯದ ಆದಾಯ ಪ್ರಮಾಣ ಕಡಿಮೆಯಾಗಲು ಕಾರಣವೇನೆಂಬುದನ್ನು ತಾರ್ಕಿಕವಾಗಿ ಚರ್ಚಿಸುವುದು.
  • ಇಂದಿನ ನಗರೀಕರಣ ವ್ಯವಸ್ಥೆ ಹೆಚ್ಚಾಗುತ್ತಿರಲು ಕಾರಣಗಳನ್ನು ತಿಳಿದುಕೊಳ್ಳುವುದು.
  • ಹಳ್ಳಿಗಳು ಬರಿದಾಗುತ್ತಿರಲು ನಗರೀಕರಣವೇ ಕಾರಣ ಹೇಗೆ? ಚರ್ಚಿಸುವರು.
  • ಕೃಷಿಯಲ್ಲಿ ವಾಣಿಜ್ಯ ಬೆಳೆಗಳ ಪ್ರಭಾವ ಅಧಿಕವಾಗುತ್ತಿದೆ. ಏಕೆ? ಎಂಬುದನ್ನು ಅರ್ಥೈಸಿಕೊಳ್ಳುವರು.
  • ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿಯಿಂದ ಆದಂತಹ ಪರಿಣಾಮ ಮತ್ತು ಪ್ರಭಾವ ಕುರಿತು ಚರ್ಚಿಸುತ್ತಾ, ಇದು ಭಾರತೀಯ ಸಮಾಜದ ಮೇಲೆ ಯಾವ ರೀತಿಯ ವ್ಯವಸ್ಥೆಗೆ ಕಾರಣವಾಗಿದೆ ಎಂಬುದನ್ನು ತಿಳಿಯುವರು.
  • ಇತ್ತೀಚೆಗೆ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ ಎಂಬುದನ್ನು ಒಪ್ಪಿಕೊಳ್ಳಲು ಚರ್ಚೆ ಮಾಡಿ ತೀರ್ಮಾನಿಸುವುದು.
  • ಗೃಹ ಟಕ ಮತ್ತು ಉದ್ಯಮ ಟಕಗಳ ನಡುವಿನ ವ್ಯತ್ಯಾವನ್ನು ಅರ್ಥೈಸಿಕೊಳ್ಳುವರು.
  • ಆಕ ಚಟುವಟಿಕೆಗಳಲ್ಲಿ ಉತ್ಪಾದನಾಂಗಗಳು ಯಾವುವು? ಎಂಬುದನ್ನು ವಿಶ್ಲೇಷಿಸುವರು.
  • ಆಕ ಚಟುವಟಿಕೆಗಳಲ್ಲಿ ಸರ್ಕಾರ ಮಧ್ಯ ಪ್ರವೇಶದ ಮಹತ್ವವನ್ನು ಗ್ರಹಿಸಿಕೊಳ್ಳುವರು.
  • ಆಕ ವ್ಯವಸ್ಥೆಯಲ್ಲಿ ಉದ್ಯೋಗ ಮೂಲಗಳು ಯಾವುವು? ಎಂಬುದನ್ನು ಉದ್ಯೋಗವಕಾಶಗಳ ಹಿನ್ನಲೆಯಲ್ಲಿ ಕಂಡುಕೊಳ್ಳುವರು.
  • ಕೃಷಿ ವಲಯ ಮತ್ತು ಕೈಗಾರಿಕಾ ವಲಯಗಳ ನಡುವಿನ ವ್ಯತ್ಯಾಸವನ್ನು ಗಮನಿಸುವರು.
  • ಕೌಶಲ್ಯಾಧಾರಿತ ಉದ್ಯೋಗದ ಪರಿಕಲ್ಪನೆಯಲ್ಲಿ ಆದಾಯವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳುವರು.
  • ಸ್ಥಿರಾತ್ಮಕ ಮತ್ತು ಚಲನಾತ್ಮಕ ಅರ್ಥಶಾಸ್ತ್ರದ ವ್ಯತ್ಯಾಸಗಳನ್ನು ವಿಮರ್ಶಾತ್ಮಕವಾಗಿ ಗ್ರಹಿಸುವರು.
  • ಸ್ವಾತಂತ್ರ್ಯಾನಂತರ ಭಾರತದ ಅರ್ಥವ್ಯವಸ್ಥೆಯ ಸ್ಥಿತಿ-ಗತಿಗಳನ್ನು ಕುರಿತು ಚರ್ಚಿಸುವರು.

4) ಜ್ಞಾನ ಪುನರ್ರಚನೆಗಿರುವ ಅವಕಾಶ

  • ಒಂದು ದೇಶದ ಆಕ ಚಟುವಟಿಕೆಗಳು ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳನ್ನು ಹೊಂದಿದ್ದು, ಈ ಮೂರೂ ಚಟುವಟಿಕೆಗಳು ಹಣಕಾಸಿನ ಮೂಲವಾದ ಉತ್ಪಾದನೆ, ಆದಾಯ, ಮತ್ತು ಉದ್ಯೋಗಗಳನ್ನು ಅವಲಂಬಿಸಿದೆ ಎಂಬ ಜ್ಞಾನವನ್ನು ಕಟ್ಟಿಕೊಳ್ಳುವರು.
  • ಪ್ರತಿಯೊಂದು ಆಕ ಚಟುವಟಿಕೆಯು ತನ್ನ ನಿರಂತರ ಬದಲಾವಣೆಯನ್ನು ಉದ್ಯೋಗ, ಉತ್ಪಾದನೆಯ ಪ್ರಮಾಣ, ಆದಾಯ ಮತ್ತು ಬಳಸಲಾಗಿರುವ ತಂತ್ರಜ್ಞಾನದ ಸ್ವರೂಪವನ್ನು ಅವಲಂಬಿಸಿರುತ್ತದೆ ಎಂಬ ಅಂಶವನ್ನು ತಿಳಿದುಕೊಳ್ಳುವರು.

ಉದಾ: - ಐ.ಟಿ. ಬಿ.ಟಿ. ಕಂಪನಿಗಳ ಪ್ರಾರಂಭ.

  • ವೈಜ್ಞಾನಿಕ ಕೃಷಿ
  • ಸಾರಿಗೆ, ಸಂಪರ್ಕ (ಮೊಬೈಲ್, ಇಂಟರ್ನೆಟ್ ಇತ್ಯಾದಿ)
  • ಇಂದು ನಗರೀಕರಣ ಬೆಳೆಯುತ್ತಿರಲು ಕಾರಣ, ಮಳೆಯ ಅಭಾವ, ಕೃಷಿಯಲ್ಲಿನ ಬೆಳೆಗಳಿಗೆ ಬೆಲೆ ಕಡಿಮೆಯಾಗುತ್ತಿರುವುದು ಬಹುಮುಖ್ಯ ಕಾರಣವಾಗಿದ್ದು, ಇದರಿಂದ ನಗರೀಕರಣವನ್ನು ತಡೆಯಲು ಗುಡಿ ಕೈಗಾರಿಕೆಗಳಿಗೆ ನೀರಾವರಿ ಸೌಕರ್ಯಗಳಿಗೆ ಹೆಚ್ಚು ಒತ್ತು ಕೊಡಬೇಕೆಂಬ ತೀರ್ಮಾನಕ್ಕೆ ಬರುವರು.
  • ಜನರ ಬಯಕೆಗಳು ಕಡಿಮೆಯಾಗಿ, ಬದುಕು ಸರಳವಾಗಿರುವುದರಿಂದ ಪ್ರತಿಯೊಬ್ಬರು ಸಮೃದ್ಧಿಯ ಜೀವನವನ್ನು ನಡೆಸಲು ಸಾಧ್ಯ ಎಂಬ ಸತ್ಯವನ್ನು ತಮ್ಮದಾಗಿಸಿಕೊಳ್ಳುವರು.
  • ಕೃಷಿ ಚಟುವಟಿಕೆಯು ಪುರಾತನ ಕಾಲದ ಮಾನವನ ಜೀವನ ನಿರ್ವಹಣೆಗೆ ಬದಲಾಗಿ, ಬರುಬರುತ್ತಾ ವಾಣಿಜ್ಯ ಬೆಳೆಯಲು ಪ್ರಾರಂಭಿಸಿ, ವ್ಯಾಪಾರೀಕರಣಗೊಂಡುದರಿಂದ ಹೊಸ ಹೊಸ ಉದ್ಯಮಗಳು ಬೆಳೆಯಲು ಪ್ರಾರಂಭವಾಯಿತು. ಇದರಿಂದ ನಗರೀಕರಣವೂ ಬೆಳೆಯತೊಡಗಿತು.

ಉದಾ: ಸಕ್ಕರೆ ಕಾರ್ಖಾನೆ, ಬಟ್ಟೆ ಕೈಗಾರಿಕೆ, ಸೆಣಬಿನ ಕೈಗಾರಿಕೆ.

  • ಯೂರೋಪಿನಲ್ಲಿ 18ನೇ ಶತಮಾನದಲ್ಲಾದ ವಿಜ್ಞಾನದ ಬೆಳವಣಿಗೆ ಕೈಗಾರಿಕಾ ಕ್ರಾಂತಿಗೆ ಕಾರಣವಾಯಿತು. ಇದು ಸಮಾಜದ ಎಲ್ಲಾ ವಲಯಗಳ ಆಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿತು. ಇದರಿಂದ ಬಂಡವಾಳವರ್ಗ ಹೆಚ್ಚಾಗಿ, ಉದ್ಯೋಗವಕಾಶಗಳು, ಆದಾಯದ ಪ್ರಮಾಣ ಹೆಚ್ಚಾಯಿತು. ಅಂದರೆ ಉದ್ಯೋಗವಕಾಶಗಳು ಹೆಚ್ಚಲು ಕೈಗಾರಿಕೆಗಳು ಕಾರಣ ಎಂಬ ತೀರ್ಮಾನಕ್ಕೆ ಬರುವರು.

ಉದಾ : ಮುದ್ರಣಯಂತ್ರ, ಉಗಿ ಬಂಡಿ ತಯಾರಿಕೆ, ರಾಕೆಟ್, ವಿಮಾನ, ನೂಲುವ ಯಂತ್ರ ಇತ್ಯಾದಿ.

  • ಆಧುನಿಕ ಅರ್ಥವ್ಯವಸ್ಥೆಯು ಮಾನವನ ಜೀವನವನ್ನು ಮಾರ್ಪಡಿಸುತ್ತಿದೆ ಎಂಬ ಸತ್ಯವನ್ನು ತಿಳಿಯುವರು.
  • ಯಾವುದೇ ಮಾನವ ನಿರ್ಮಿತ ಆಕ ಚಟುವಟಿಕೆಯು ಲಾಭವಿಲ್ಲದೆ (ಪ್ರತಿಫಲ) ರೂಪುಗೊಳ್ಳುವುದಿಲ್ಲ ಎಂದು ಅರ್ಥೈಸಿಕೊಳ್ಳುವರು.

ಉದಾ: ಭೂಮಿ, ಪಸಲು, ಶ್ರಮ, ಕೂಲಿ, ಕೈಗಾರಿಕೆ, ಉತ್ಪಾದನೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ.

  • ಪ್ರತಿಯೊಂದು ಆಕ ಚಟುವಟಿಕೆಯಲ್ಲಿ ಸರ್ಕಾರದ ಮಧ್ಯಪ್ರವೇಶವಿದ್ದು, ತೆರಿಗೆಯನ್ನು ವಿಧಿಸುವ ಮೂಲಕ ಆದಾಯವನ್ನು ಸಂಗ್ರಹಿಸಿ, ಜನರಿಗೆ ಶಿಕ್ಷಣ, ಆರೋಗ್ಯ, ವಸತಿ, ಸಾರಿಗೆ, ನೀರು, ವಿದ್ಯುತ್ತನ್ನು ಪೂರೈಕೆ ಮಾಡುತ್ತದೆ ಎಂಬ ವಾಸ್ತವ ಜ್ಞಾನವನ್ನು ಅರಿಯುವರು.
  • ಪ್ರತಿಯೊಬ್ಬ ಮಾನವನು ಜೀವನ ನಿರ್ವಹಣೆಗೆ ಯಾವುದಾದರೂ ದುಡಿಮೆ ಅನಿವಾರ್ಯ ಎಂಬ ತೀರ್ಮಾನಕ್ಕೆ ಬರುವರು ಹಾಗೂ ತಮ್ಮಿಷ್ಟದ ಉದ್ಯೋಗ ಪಡೆಯಲು ವಿದ್ಯಾರ್ಹತೆಯನ್ನು ಪಡೆಯುವರು.

ಉದಾ: ಶಿಕ್ಷಕ, ಕಾರ್ಮಿಕ, ವೈದ್ಯ, ಚಾಲಕ ಇತ್ಯಾದಿ.

  • ಅರ್ಥವ್ಯವಸ್ಥೆಯಲ್ಲಿನ ಕೈಗಾರಿಕೆ ಮತ್ತು ಸೇವಾ ವಲಯಗಳಿಗೆ ಕೌಶಲ್ಯವುಳ್ಳ ಮಾನವಶಕ್ತಿ ಅನಿವಾರ್ಯವಾಗಲಾಗಿ, ಕೌಶಲ್ಯ ತರಬೇತಿ ವ್ಯವಸ್ಥೆ ಹುಟ್ಟಲು ಕಾರಣವಾಯಿತು. ಆದರೆ ಕೃಷಿಯಲ್ಲಿ ಮಾತ್ರ ಕೌಶಲ್ಯರಹಿತ ಕಾರ್ಮಿಕರೇ ಮುಂದುರೆಯಿತ್ತಿರುವುದರ ಕಾರಣಕ್ಕೆ ಪರಿಹಾರವನ್ನು ಕಂಡುಕೊಳ್ಳಲೆತ್ನಿಸುವರು.

ಉದಾ: ಐಟಿಐ ತರಬೇತಿ - ಕೈಗಾರಿಕೆ

  • ಡಿಪ್ಲಮೋ ತರಬೇತಿ - ಕೈಗಾರಿಕೆ
  • ಶಿಕ್ಷಕರ ತರಬೇತಿ - ಶಾಲಾ ಕಾಲೇಜುಗಳಿಗೆ
  • ಚಾಲಕ ತರಬೇತಿ - ಸಾರಿಗೆ
  • ಇತ್ತೀಚೆಗೆ (B.Sc., Ag,, ಕೃಷಿ ವಿ.ವಿ. ವಿದ್ಯಾಲಯಗಳು, ತೋಟಗಾರಿಕಾ ತರಬೇತಿ ಇತ್ಯಾದಿ)
  • ಪೌಷ್ಟಿಕ ಆಹಾರ ಮತ್ತು ಆರೋಗ್ಯ ಸೌಲಭ್ಯಗಳ ಕೊರತೆ ಜನಸಂಖ್ಯಾ ಬೆಳವಣಿಗೆಗೆ ಮಾರಕವಾಗುತ್ತದೆ ಎಂದು ತಿಳಿದುಕೊಳ್ಳುವರು.

ಉದಾ: ಹಿಂದಿನ ಪ್ಲೇಗ್ರೋಗ, ಸಿಡುಬುರೋಗ, ಇತ್ತೀಚಿನ ಪೋಲಿಯೋ, ಕುರುಡುತನ, ಬುದ್ಧಿಮಾಂದ್ಯರು ಇತ್ಯಾದಿ.

  • ಚಲನಾತ್ಮಕ ಅರ್ಥವ್ಯವಸ್ಥೆಯು ಬದಲಾವಣೆಯ ಸಂಕೇತವಾಗಿದ್ದು, ಇಂದಿನ ನವೀನ ತಂತ್ರಜ್ಞಾನವು ಬದಲಾಗುತ್ತಿರುವ ಅರ್ಥವ್ಯವಸ್ಥೆಗೆ ಕಾರಣ ಎಂದು ಅರ್ಥೈಸಿಕೊಂಡು ಚಲನೆಯೇ ಆಧುನಿಕ ಅರ್ಥ ವ್ಯವಸ್ಥೆಗೆ ಮೂಲ ಎಂಬ ಜ್ಞಾನವನ್ನು ತಿಳಿದುಕೊಳ್ಳುವರು.

ಉದಾ: - ದೂರವಾಣಿ ಕ್ಷೇತ್ರದ ಬದಲಾವಣೆ

  • ರೈಲುಗಾಡಿ ತಯಾರಿಕೆಯಲ್ಲಾಗಿರುವ ಬದಲಾವಣೆ.
  • ಸ್ವಾಂತಂತ್ರ್ಯಾನಂತರ ಭಾರತದ ಅರ್ಥವ್ಯವಸ್ಥೆಯಲ್ಲಿನ ಪ್ರಗತಿದಾಯಕ ಬದಲಾವಣೆಗೆ ವೈಜ್ಞಾನಿಕತೆಯೇ ಕಾರಣ ಎಂದು ಒಪ್ಪಿಕೊಳ್ಳುವರು. ಹಾಗೂ ಸಮಾಜಮುಖಿ ವಿಜ್ಞಾನದ ಬಳಕೆಗೆ ತೀರ್ಮಾನಿಸುವರು.

5) ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ರಚನೆಗೆ ಇರುವ ಅವಕಾಶಗಳು

  • ಆಕ ಚಟುವಟಿಕೆಗಳ ಪಟ್ಟಿ ತಯಾರಿಕೆ.
  • ಉತ್ಪಾದಕ ಮತ್ತು ಅನುತ್ಪಾದ ಆಕ ವಲಯಗಳ ನಡುವಿನ ವ್ಯತ್ಯಾಸ ಸಂಗ್ರಹ.
  • ನಗರೀಕರಣ ಹೆಚ್ಚಾಗಲು ಕಾರಣ ಹುಡುಕುವುದು.
  • ವಸ್ತು ವಿನಿಮಯ ಪದ್ಧತಿ ಮತ್ತು ಹಣ ವಿನಿಮಯ ಪದ್ಧತಿಗಳನ್ನು ಕುರಿತು ಚರ್ಚೆ.
  • ಆಧುನಿಕ ಅರ್ಥವ್ಯವಸ್ಥೆಯಲ್ಲಿ ಕೃಷಿ ವಾಣಿಜ್ಯೀಕರಣಗೊಳ್ಳಲು ಕಾರಣವನ್ನು ವಿಮರ್ಶಿಸುವುದು.
  • ಗೃಹ ಕೈಗಾರಿಕೆಗಳ ನಾಶಕ್ಕೆ ಕೈಗಾರಿಕಾ ಕ್ರಾಂತಿಯೇ ಕಾರಣ ಹೇಗೆ? ಪ್ರಬಂಧ ಮಂಡನೆ.
  • ಯುರೋಪಿನ ಊಳಿಗಮಾನ್ಯ ಪದ್ಧತಿಯ ಕಾಲದ ಭೂ ಒಡೆಯರು ಕೈಗಾರಿಕೆಗಳಿಗೆ ಬಂಡವಾಳವನ್ನು ಹೂಡಲು ಮುಂದೆ ಬಂದಿದ್ದರಿಂದ ಆದಂತಹ ಪರಿಣಾಮ-ಗುಂಪು ಚರ್ಚೆ.
  • ಗೇಣಿ, ಕೂಲಿ, ಬಡ್ಡಿ, ಲಾಭ ಇವುಗಳ ನಡುವಿನ ವ್ಯತ್ಯಾಸವನ್ನು ಆಕ ಚಟುವಟಿಕೆಯ ಹಿನ್ನಲೆಯಲ್ಲಿ ಅರ್ಥೈಸಿರಿ- ಅಭಿಪ್ರಾಯ ಸಂಗ್ರಹ.
  • ಪುರಾತನ ಅರ್ಥವ್ಯವಸ್ಥೆ, ಆಧುನಿಕ ಅರ್ಥವ್ಯವಸ್ಥೆಯಾಗಿ ಮಾರ್ಪಡುತ್ತಿದೆ. ಇದರ ಅರ್ಥವನ್ನು ವಿವರಿಸಿರಿ.
  • ಅರ್ಥ ವ್ಯವಸ್ಥೆಯ ಸೇವಾ ಟಕಗಳನ್ನು ಪಟ್ಟಿ ಮಾಡಿರಿ.

6) ಕಲಿಕೆಯನ್ನು ಅನುಕೂಲಿಸುವ ವಿಧಾನಗಳು

  • ಕೃಷಿ ಕೇಂದ್ರ, ಕೈಗಾರಿಕಾ ವಲಯಗಳಿಗೆ ಭೇಟಿ ನೀಡಿ ಅಲ್ಲಿನ ವಿವಿಧ ಚಟುವಟಿಕೆಗಳನ್ನು ಗಮನಿಸುವುದು.
  • ರೈತ ಮಿತ್ರ ಕೇಂದ್ರಗಳಿಗೆ ಭೇಟಿ.
  • ಜಿಲ್ಲಾ ಕೈಗಾರಿಕಾ ಸಲಹಾ ಕೇಂದ್ರಗಳಿಗೆ (ಡಿ.ಐ.ಸಿ.) ಭೇಟಿ.
  • ಪುರಾತನ ಕೃಷಿ ಪದ್ಧತಿಯಲ್ಲಿ ಬೆಳೆಯುತ್ತಿದ್ದ ಬೆಳೆಗಳ ಪಟ್ಟಿ.
  • ಕೃಷಿಯಾಧಾರಿತ ಕೈಗಾರಿಕೆಗಳ ಉತ್ಪಾದನಾಂಗಳನ್ನು ಕುರಿತಂತೆ ಮಾರುಕಟ್ಟೆ, ಸಾರಿಗೆ, ಬ್ಯಾಂಕಿಂಗ್ ಸೇವೆ ಇವುಗಳ ನಡುವಿನ ಸಂಬಂಧ ಕುರಿತು ಚರ್ಚೆ, ತೀರ್ಮಾನ.
  • ಗ್ರಾಮೀಣ ಪರಿಸರ ಮತ್ತು ನಗರ ಪರಿಸರಗಳ ನಡುವಿನ ಅಂತರ, ವ್ಯತ್ಯಾಸ, ಸಾಧಕ ಬಾಧಕಗಳ ಗುಂಪು ಚರ್ಚೆ.
  • ಕೈಗಾರಿಕಾ ಕ್ರಾಂತಿಗೆ ಕಾರಣ, ಪರಿಣಾಮ ಕುರಿತ ಕಲಿಕಾ ನಿಲ್ದಾಣಗಳ ಮೂಲಕ ವಿಶ್ಲೇಷಣೆ.
  • ಕೃಷಿಯಾಧಾರಿತ ಮಾರುಕಟ್ಟೆಗೆ ಭೇಟಿ.
  • ಯಶಸ್ವಿ ರೈತನೊಬ್ಬನ ಸಂದರ್ಶನ.
  • ಮಾಲೀಕ ಮತ್ತು ಕಾರ್ಮಿಕರ ಕುಂದುಕೊರತೆಗಳ ಪಟ್ಟಿ.
  • ಆಕವಾಗಿ ಬಡ ಕುಟುಂಬ ಮತ್ತು ಶ್ರೀಮಂತ ಕುಟುಂಬಗಳಿಗೆ ಭೇಟಿ ನೀಡಿ ಜೀವನ ಮಟ್ಟದಲ್ಲಿನ ವ್ಯತ್ಯಾಸ ಗುರುತಿಸುವುದು.
  • ನಿಮ್ಮ ಕುಟುಂಬದಲ್ಲಿರುವವರ ಸಂಖ್ಯೆ ಇವರಲ್ಲಿ ದುಡಿಯುವವರು, ಆದಾಯ, ಖರ್ಚು, ಕುಟುಂಬದ ಜೀವನ ವಿಧಾನ ಕುರಿತು, ಪ್ರಬಂಧ ರಚನೆ.
  • ಗೃಹ ಮತ್ತು ಉದ್ಯಮ ಟಕಗಳನ್ನು ವಿಂಗಡಿಸುವುದು.
  • ನಿಮಗೆ ತಿಳಿದಿರುವ ಉದ್ಯೋದವಕಾಶಗಳನ್ನು ಒಂದು ಕಡೆ ಸಂಗ್ರಹಿಸಿರಿ.
  • ಬ್ಯಾಂಕು, ಸಹಕಾರ ಸಂಗಳು ಸ್ತ್ರೀಶಕ್ತಿ ಸಂಗಳು, ಅಂಚೆ ಕಛೇರಿ, ಜೀವ ವಿಮಾ ನಿಗಮಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯ ವೈಖರಿಯನ್ನು ವೀಕ್ಷಿಸುವುದು.
  • ಜಾಗತಿಕ ಮಟ್ಟದಲ್ಲಿ ಭಾರತೀಯ ವಸ್ತುಗಳು ಪೇಟೆಂಟ್ ಪಡೆಯುವಲ್ಲಿ ಅನುಭವಿಸಿದ ಹಿನ್ನಡೆ ಕುರಿತು ವಿಷಯ ಸಂಗ್ರಹ.

7) ಸಂಪನ್ಮೂಲಗಳ ಕ್ರೂಡೀಕರಣ

  • 9ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕ.
  • ಪದವಿ ಪೂರ್ವ ಮತ್ತು ಪದವಿ ತರಗತಿಗಳ ಅರ್ಥಶಾಸ್ತ್ರ ಪಠ್ಯಗಳು.
  • ಅಂತರ್ಜಾಲ ಬಳಕೆ (ಕೃಷಿ, ಕೈಗಾರಿಕೆ, ಬ್ಯಾಂಕಿಂಗ್, ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದಂತೆ)
  • ಮಾರುಕಟ್ಟೆಯ ಚಾರ್ಟ್ ತಯಾರಿಕೆ.
  • ಬ್ಯಾಂಕಿಂಗ್ ವ್ಯವಹಾರದಲ್ಲಿ ಬಳಸುವ ನಮೂನೆಗಳ ಸಂಗ್ರಹ.

ಉದಾ: ಡಿ.ಡಿ. ಚೆಕ್, ಪಾಸ್ ಬುಕ್ ಇತ್ಯಾದಿ.

  • ಬಸ್, ರೈಲ್ವೆ, ವಿಮಾನ ಟಿಕೆಟ್ಗಳ ಸಂಗ್ರಹ.
  • ನಾಣ್ಯಗಳು ಮತ್ತು ಕರೆನ್ಸಿಗಳ ಸಂಗ್ರಹ.
  • ವಾಣಿಜ್ಯ ಬೆಳೆಗಳು ಮತ್ತು ಆಹಾರದ ಬೆಳೆಗಳ ಪಟ್ಟಿ.
  • ಗೃಹ ಟಕಗಳು, ಉದ್ಯಮ ಟಕಗಳ ಚಾರ್ಟ್ ತಯಾರಿಕೆ.
  • ವಾಣಿಜ್ಯ ತೆರಿಗೆ ಅಧಿಕಾರಿಗಳಿಂದ ತೆರಿಗೆ ಪದ್ಧತಿ ಕುರಿತು ಮಾಹಿತಿ ತಿಳಿಯಲು ಅವರನ್ನು ಆಹ್ವಾನಿಸುವುದು.
  • ಕೃಷಿಯಲ್ಲಿ ವಿಜ್ಞಾನದ ಬಳಕೆಯಿಂದ ಆಗಿರುವ ಹೊಸ ಆವಿಷ್ಕಾರಗಳನ್ನು ಕುರಿತ ವಸ್ತು ಪ್ರದರ್ಶನ.
  • ಪೌಷ್ಠಿಕ ಆಹಾರಗಳನ್ನು ಪಟ್ಟಿ ಮಾಡಿಕೊಳ್ಳುವುದು.
  • ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ಆರೋಗ್ಯ ಸೇವೆಗಳನ್ನು ಗಮನಿಸುವುದು.
  • ಕುಟುಂಬವೊಂದರ ಆದಾಯದ ಮೂಲ ತಿಳಿಯಲು ಭೇಟಿ ನೀಡುವುದು.

8) ಬೋಧನೋಪಕರಣಗಳು

  • ಮಾರುಕಟ್ಟೆಯಲ್ಲಿನ ವಸ್ತು ವಿನಿಮಯ ಪದ್ಧತಿ ಕುರಿತ ಚಾರ್ಟ್.
  • ಕೃಷಿ ವಲಯ ಪ್ರದೇಶದ ಚಿತ್ರ.
  • ದೂರದರ್ಶನದ `ಕೃಷಿ ದರ್ಶನ' ವೀಕ್ಷಣೆ, ಅನ್ನದಾತ, (ಕಾರ್ಯಕ್ರಮ).
  • ಕೈಗಾರಿಕಾ ವಲಯದ ಚಾರ್ಟ್
  • ಆಹಾರ ಬೆಳೆ, ವಾಣಿಜ್ಯ ಬೆಳೆಗಳ ಪ್ರದರ್ಶನ.
  • ಗೃಹ ಟಕಗಳು ಮತ್ತು ಉದ್ಯಮ ಟಕಗಳ ನಡುವಿನ ಸಂಬಂಧ ಕುರಿತು ಚಾರ್ಟ್.
  • ಅಂತರ್ಜಾಲ ವೀಕ್ಷಣೆ (ಕೃಷಿ, ಕೈಗಾರಿಕೆ, ಸಾರಿಗೆ, ಬ್ಯಾಂಕ್ ಸೌಲಭ್ಯ ಕುರಿತಂತೆ)
  • ನಗರೀಕರಣದ ಸಮಸ್ಯೆ ಬಿಂಬಿಸುವ ಚಾರ್ಟ್.

9) ಮನನ ಮಾಡಿಕೊಳ್ಳಲೇ ಬೇಕಾದ ಅಂಶಗಳು

  • ದುಡಿಮೆಯೇ ದೇವರು
  • ಕೈ ಕೆಸರಾದರೆ ಬಾಯಿ ಮೊಸರು
  • ಆಕ ಚಟುವಟಿಕೆಗಳಲ್ಲಿ ಬಯಕೆಯೇ ಮೂಲ.
  • ರೈತ ದೇಶದ ಬೆನ್ನೆಲುಬು
  • ಶಿಕ್ಷಣದಿಂದ ಮಾತ್ರ ಕೌಶಲ್ಯಾಭಿವೃದ್ಧಿ ಸಾಧ್ಯ.
  • ಕೈಗಾರಿಕೆಯಿಂದ ಉದ್ಯೋಗವಕಾಶಗಳು ಹೆಚ್ಚುತ್ತವೆ.
  • ನಗರೀಕರಣದಿಂದ ಹಳ್ಳಿಗಳು ಬರಿದಾಗುತ್ತಿವೆ.
  • ಕೈಗಾರಿಕಾ ಕ್ರಾಂತಿ ಗುಡಿ ಕೈಗಾರಿಕೆಗಳ ಅವನತಿಗೆ ನಾಂದಿ ಹಾಡಿತು.
  • ಕುಟುಂಬ ಸಮಾಜದ ಬಹುಮುಖ್ಯ ಆಕ ಟಕ.
  • ಗೃಹ ಮತ್ತು ಉದ್ಯಮ ಟಕಗಳು ಪರಸ್ಪರ ಪೂರಕ.
  • ಆರೋಗ್ಯವಂತ ಕಾರ್ಮಿಕರೇ ದೇಶದ ಆಸ್ತಿ.
  • ಸ್ವಚ್ಛ ಆಕ ವ್ಯವಸ್ಥೆ ಸುಸಂಸ್ಕೃತಿಯ ಲಕ್ಷಣ.
  • ಸೋಮಾರಿತನವೇ ಬಡತನಕ್ಕೆ ಕಾರಣ.
  • ಉದಾರೀಕರಣ ಜಾಗತೀಕರಣ ಮತ್ತು ಖಾಸಗೀಕರಣಗಳು ಭಾರತದ ಅರ್ಥವ್ಯವಸ್ಥೆಯನ್ನು ಬದಲಿಸುತ್ತಿವೆ.

ಉದಾಹರಣೆ: 2

1) ಪಾಠದ ಹೆಸರು : ಶ್ರಮ ಮತ್ತು ಉದ್ಯೋಗ

2) ಜ್ಞಾನ ರಚನೆಗೆ ಇರುವ ಅವಕಾಶಗಳು:

  • ಶ್ರಮದ ಅರ್ಥವನ್ನು ತಿಳಿದುಕೊಳ್ಳುವುದು.
  • ಶ್ರಮದ ಪ್ರಾಮುಖ್ಯತೆಯನ್ನು ಅರ್ಥೈಸುವುದು.
  • ಶ್ರಮದ ವಿಧಗಳನ್ನು ಅರಿಯುವುದು.
  • ಶ್ರಮದ ಲಕ್ಷಣಗಳನ್ನು ಅದರ ಅರ್ಥ ಮತ್ತು ಪ್ರಾಮುಖ್ಯತೆಯ ಹಿನ್ನಲೆಯಲ್ಲಿ ಅರ್ಥೈಸಿಕೊಳ್ಳುವುದು.
  • ಶ್ರಮದ ಮಹತ್ವದ ಸಂದರ್ಭದಲ್ಲಿ ಶ್ರಮ ವಿಭಜನೆಯ ಅನುಕೂಲ ಅನನುಕೂಲಗಳನ್ನು ತಿಳಿಯುವುದು.
  • ಭಾರತದಲ್ಲಿ ಸ್ತ್ರೀ ಪುರುಷರ ಅಸಮಾನತೆಗೆ ಕಾರಣಗಳನ್ನು ತಿಳಿಯುವುದು.
  • ಜೀತ ಕಾರ್ಮಿಕರು ಮತ್ತು ಬಾಲ ಕಾರ್ಮಿಕ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ತಿಳಿಯುವುದು.
  • ಉದ್ಯೋಗ, ನಿರುದ್ಯೋಗ ಪದಗಳ ಅರ್ಥವ್ಯತ್ಯಾಸವನ್ನು ಗಮನಿಸುವುದು.
  • ನಿರುದ್ಯೋಗದ ವಿಧಗಳನ್ನು ಅರ್ಥೈಸಿಕೊಳ್ಳುವುದು.

3) ವಿಮರ್ಶಾತ್ಮಕ ಶಿಕ್ಷಣಕ್ರಮ ಅಳವಡಿಕೆಗೆ ಇರುವ ಅವಕಾಶಗಳು

  • ವಸ್ತುವಿನ ಉತ್ಪಾದನೆಯಲ್ಲಿ ಬಂಡವಾಳದ ಜೊತೆಗೆ ಮಾನವ ಶ್ರಮ ಅದರ ಮಹತ್ವ ಮತ್ತು ಅಗತ್ಯತೆಯನ್ನು ಉತ್ಪಾದನಾಂಗವಾಗಿ ಶ್ರಮ ಎಂಬ ಮಾತಿನ ಹಿನ್ನಲೆಯಲ್ಲಿ ಚರ್ಚಿಸುವರು.
  • ಮಾನವ ಶ್ರಮವನ್ನು ಪ್ರಾಣಿಗಳ ಶ್ರಮಕ್ಕಿಂತ ಭಿನ್ನವಾಗಿ ಗುರುತಿಸಲು ಕಾರಣವಾದ ಅಂಶಗಳನ್ನು ಅರ್ಥೈಸಿಕೊಳ್ಳುವರು.
  • ಒಬ್ಬ ತಾಯಿಯು ತನ್ನ ರೋಗಿಷ್ಟ ಮಗುವಿನ ಆರೈಕೆಗಾಗಿ ಮಾಡುವ ಸೇವೆಯನ್ನು ಶ್ರಮವೆಂದು ಏಕೆ ಪರಿಗಣಿಸಲಾಗುವುದಿಲ್ಲ ಎಂಬುದನ್ನು ಚರ್ಚಿಸುವರು.
  • ಶ್ರಮದ ಪ್ರಮುಖ ಲಕ್ಷಣಗಳನ್ನು ಶ್ರಮದ ಅರ್ಥ ಮತ್ತು ವ್ಯಾಪ್ತಿಯ ಹಿನ್ನಲೆಯಲ್ಲಿ ಚರ್ಚಿಸುವುದು.
  • ಶ್ರಮವು ಒಂದು ಉತ್ಪನ್ನ ಉತ್ಪಾದನಾಂಗವಾಗಿದ್ದು, ಈ ಶ್ರಮಶಕ್ತಿಯ ಗಾತ್ರವನ್ನು ಆ ದೇಶದಲ್ಲಿನ 15 ರಿಂದ 60 ವರ್ಷಗಳ ನಡುವಿನ ವಯೋಗುಂಪಿನಲ್ಲಿರುವವರ ಒಟ್ಟು ಸಂಖ್ಯೆಯಿಂದ ನಿರ್ಧರಿಸಲ್ಪಡುತ್ತದೆ ಎಂಬ ಅಂಶವನ್ನು ವಿಶ್ಲೇಷಿಸಿ ಒಪ್ಪಿಕೊಳ್ಳುವರು.
  • ಶ್ರಮದ ವಿಧಗಳನ್ನು ಉದಾಹರಣೆಗಳೊಂದಿಗೆ ವಿಮರ್ಶಿಸುವುದು.
  • ಉತ್ಪಾದನಾ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿನ ಕೆಲಸಗಾರರ ವಿಭಜನಾತ್ಮಕ ಶ್ರಮದಿಂದಾಗಿ ಉತ್ಪಾದನಾ ಮಾರ್ಗ ಚಮತ್ಕಾರಯುತವಾಗಿ ಮುನ್ನಡೆಯುತ್ತದೆ ಎಂಬ ಅಂಶವನ್ನು ಉದಾಹರಣೆಯ ಮೂಲಕ ಚರ್ಚಿಸಿ ಒಪ್ಪಿಕೊಳ್ಳುವರು.

ಉದಾ: - ಗುಂಡು ಪಿನ್ನು ತಯಾರಿಕೆ

  • ಸಿದ್ಧ ಉಡುಪುಗಳ ತಯಾರಿಕೆ
  • ಪುರುಷರು ಭೇಟಿಯಾಡುವುದು
  • ಮಹಿಳೆಯರು ಅಡಿಗೆ ಮಾಡುವುದು, ಬಟ್ಟೆ ತಯಾರಿಸುವುದು, ಇತ್ಯಾದಿ.
  • ಶ್ರಮ ವಿಭಜನೆಯಿಂದಾಗಿ ದಕ್ಷತೆ, ಗುಣಮಟ್ಟ, ಲಾಭ, ಸಂಶೋಧನೆ ಮತ್ತು ಅಭಿವೃದ್ಧಿ ಪ್ರಮಾಣ ಹೆಚ್ಚಾಗಿ ವಸ್ತುಗಳ ಉತ್ಪಾದನೆಗೆ ತಗಲುವ ಸರಾಸರಿ ವೆಚ್ಚವು ಕಡಿಮೆಯಾಗುತ್ತದೆ ಎಂಬುದನ್ನು ಸ್ಮರಿಸಿಕೊಳ್ಳುವರು.

ಉದಾ: - ಗಡಿಯಾರ ತಯಾರಿಕೆ (ಬೆಂಗಳೂರು, ತುಮಕೂರು)

  • ಸೈಕಲ್ ತಯಾರಿಕೆ (ಲೂದಿಯಾನ)
  • ಶ್ರಮವಿಭಜನೆಯಿಂದಾಗಿ, ಕೆಲಸಗಾರರಲ್ಲಿ ಏಕತಾನತೆ, ಜವಾಬ್ದಾರಿಯ ಕೊರತೆ, ಪರಾವಲಂಬನೆ, ನಿರುದ್ಯೋಗ, ವರ್ಗಕಲಹ ಎಂಬಿತ್ಯಾದಿ ಅನನುಕೂಲಗಳು ಉಂಟಾಗುತ್ತವೆ ಎಂಬುದನ್ನು ತಿಳಿದುಕೊಂಡು, ಶ್ರಮವಿಭಜನೆ ಬಗ್ಗೆ ಸಕಾರಾತ್ಮಕ ಭಾವನೆ ತಳೆಯುವರು.

ಉದಾ: ಸರ್ಕಾರಿ ಒಡೆತನದ/Army Base Work Shop (ಅಲಸೂರು) ಕೈಗಾರಿಕಾ ಕೇಂದ್ರಕ್ಕೆ ಭೇಟಿ.

  • ಇತ್ತೀಚೆಗೆ ಮಹಿಳೆಯರನ್ನು ಸಮಾಜದ ಎಲ್ಲಾ ವಲಯಗಳಲ್ಲೂ ದುಡಿಯುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಆದರೂ ಅವರ ಆಕ ಸ್ಥಿತಿಗತಿ ಉತ್ತಮವಾಗಿಲ್ಲ. ಮಹಿಳೆಯರು ಒಂದಲ್ಲಾ ಒಂದು ವಿಧದ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂಬ ಅಂಶವನ್ನು ಚರ್ಚಿಸಿ ಮಹಿಳಾ ಸಮಾನತೆಯ ಬಗ್ಗೆ ತೀರ್ಮಾನಿಸುವರು.
  • ಮಾನವನ ಉತ್ಪಾದಕ ಶ್ರಮ ಮಾತ್ರ ಆತನಿಗೆ ಆದಾಯವನ್ನು ಕೊಡುವಲ್ಲಿ ಯಶಸ್ವಿಯಾಗುತ್ತದೆ, ಆದರೆ ಇತರರ ಸಂಪತ್ತನ್ನು ದೋಚಲು ಪ್ರಯತ್ನಿಸುವುದು ಉತ್ಪಾದಕ ಶ್ರಮ ಎನ್ನಿಸಿಕೊಳ್ಳುವುದಿಲ್ಲ. ಎಂಬ ಅಂಶವನ್ನು ಹೋಲಿಸಿ ಅರ್ಥೈಸಿಕೊಳ್ಳುವರು.

ಉದಾ : - ಆಸ್ತಿ ಸಂಪಾದನೆ ಭ್ರಷ್ಟಾಚಾರ, ಗಣಿಗಾರಿಕೆ, ಅಕ್ರಮ ಆಸ್ತಿ

  • ವಾಹನ ಕೊಳ್ಳುವಿಕೆ ಲಂಚ
  • ಆಭರಣಗಳ ಖರೀದಿ ಲಾಭ, ಕಳ್ಳತನ. ಇವುಗಳ ವ್ಯತ್ಯಾಸ
  • ಪುನರುತ್ಪಾದನ ಶ್ರಮದಲ್ಲಿ ಮಹಿಳೆಯರನ್ನು ಶೋಷಣೆಗೆ ಗುರಿಮಾಡಲಾಗುತ್ತಿದೆ ಎಂಬ ವಿಚಾರವನ್ನು ಗಂಭೀರವಾಗಿ ಚರ್ಚಿಸಿ, ಮಹಿಳೆಯರ ಮನೆಕೆಲಸವನ್ನು ಕೂಲಿರಹಿತ ಕೆಲಸ ಎಂದು ಕರೆಯಲು ಕಾರಣವೇನೆಂಬುದನ್ನು ಚರ್ಚಿಸಿ ಒಪ್ಪಿಕೊಳ್ಳುವುದು.

ಉದಾ: - ಮಕ್ಕಳಿಗೆ ಜನ್ಮ ನೀಡುವುದು

  • ಮಕ್ಕಳ ಲಾಲನೆ ಪಾಲನೆ ಮಾಡುವುದು
  • ಅಡಿಗೆ ಮಾಡುವುದು, ಇತ್ಯಾದಿ.
  • ನಿಗದಿತ ಹಣದ ಮೊತ್ತಕ್ಕೆ, ನಿಗದಿತ ಅವಧಿಯವರೆಗೆ ಮಾಡಿದ ಸಾಲವನ್ನು ಜಮೀನುದಾರರಿಗೆ ಹಿಂತಿರುಗಿಸುವವರೆಗೆ, ಆತನ ಜಮೀನಿನಲ್ಲಿ ಕೆಲಸ ಮಾಡಲು ಬದ್ಧನಾಗಿದ್ದವನನ್ನು ಜೀತ ಕಾರ್ಮಿಕ ಎಂದು ಅರ್ಥೈಸಿಕೊಂಡು ಈ ಜೀತ ಪದ್ಧತಿಯ ಲೋಪದೋಷಗಳನ್ನು ಚರ್ಚಿಸುವುದು.
  • ಬಾಲಕಾರ್ಮಿಕರು ಎಂದರೆ ಯಾರು? ಈ ಪದ್ಧತಿಗೆ ಕಾರಣಗಳೇನು? ಭಾರತದ ಮಟ್ಟಿಗೆ ಬಾಲಕಾರ್ಮಿಕ ಪದ್ಧತಿ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳೇನು? ಎಂಬುದನ್ನು ಸೋದಾಹರಣವಾಗಿ ಚರ್ಚಿಸಿ ತಿಳಿದುಕೊಳ್ಳುವರು.
  • ಉದ್ಯೋಗ ಮತ್ತು ನಿರುದ್ಯೋಗಗಳಿಗಿರುವ ಅರ್ಥ ವ್ಯತ್ಯಾಸವನ್ನು ಅವಲೋಕಿಸುವರು.
  • ಭಾರತದಲ್ಲಿ ನಿರುದ್ಯೋಗದ ಸ್ಥಿತಿ ಕಂಡುಬರುವ ವಿವಿಧ ಸಂದರ್ಭಗಳನ್ನು ಉದಾಹರಣೆಗಳೊಂದಿಗೆ ತಿಳಿದುಕೊಳ್ಳುವರು.

(ಸಾಮಾನ್ಯ ಸ್ಥಿತಿ, ವಾರದ ಸ್ಥಿತಿ, ನಂದಿನ ಸ್ಥಿತಿಗಳಿಗೆ ಸಂಬಂಧಿಸಿದಂತೆ)

  • ನಿರುದ್ಯೋಗದ ವಿಧಗಳನ್ನು ಅವು ಕಂಡು ಬರುವ ಕಾಲಮಾನದ ಸಂದರ್ಭವನ್ನು ಉದಾಹರಣೆಗಳ ಮೂಲಕ ತಿಳಿದುಕೊಳ್ಳುವರು.

ಉದಾ: ಮರೆಮಾಚಿದ ನಿರುದ್ಯೋಗ - ಅಗತ್ಯಕ್ಕಿಂತ ಹೆಚ್ಚು ಕೆಲಸಗಾರರು

  • ಋತುಮಾನದ ನಿರುದ್ಯೋಗ - ಕೃಷಿ ಚಟುವಟಿಕೆ
  • ಐಚ್ಛಿಕ ನಿರುದ್ಯೋಗ - ಕೆಲಸ ಮಾಡಲು ಇಚ್ಚಿಸದವರು
  • ಬಂಡವಾಳಗಾರ
  • ಅಗತ್ಯ ಕೂಲಿ ಸಿಗದಿದ್ದಾಗ
  • ಆಸ್ತಿಯ ವರಮಾನ ಹೆಚ್ಚಾಗಿದ್ದಾಗ.

4) ಜ್ಞಾನ ಪುನರ್ರಚನೆಗೆ ಇರುವ ಅವಕಾಶಗಳು