"ವಚನಾಮೃತ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೨೮೩ ನೇ ಸಾಲು: ೨೮೩ ನೇ ಸಾಲು:
 
[[ವರ್ಗ:ಪದ್ಯ]]
 
[[ವರ್ಗ:ಪದ್ಯ]]
 
[[ವರ್ಗ:೮ನೇ ತರಗತಿ]]
 
[[ವರ್ಗ:೮ನೇ ತರಗತಿ]]
 +
[[ವರ್ಗ:ಪ್ರಥಮ ಭಾಷೆ]]

೦೮:೪೬, ೨೩ ಜುಲೈ ೨೦೨೦ ನಂತೆ ಪರಿಷ್ಕರಣೆ

ಪರಿಕಲ್ಪನಾ ನಕ್ಷೆ

ಕಲಿಕೋದ್ದೇಶಗಳು

ಪದ್ಯದ ಉದ್ದೇಶ

  • ವಚನ ಸಾಹಿತ್ಯವನ್ನು ಅರ್ಥೈಸುವುದು
  • ವಚನ ಸಾಹಿತ್ಯ ಪರಿಚಯದ ಮೂಲಕ ಜೀವನ ಸತ್ಯದ ಅರ್ಥೈಸುವುದು
  • ಮಾನವನ ನೈಜ ಜೀವನವನ್ನು ಪರಿಚಯಿಸುವುದು

ಭಾಷಾ ಕಲಿಕಾ ಗುರಿಗಳು

  • ಚಿತ್ರ ಸಂಪನ್ಮೂಲ ಬಳಸಿ (ಪ್ರಸ್ತುತಿ)ವ್ಯಕ್ತಿ ಪರಿಚಯ ಮತ್ತು ಸಂವಹನ ಮಾಡುವುದು
  • ಇಂಡಿಕ್‌ ಅನಾಗ್ರಾಮ್ ಅನ್ವಯಕದ ಜೊತೆ ಪದ ಸಂಪತ್ತನ್ನು ಹೆಚ್ಚಿಸಲು, ಪದಪಟ್ಟಿ ರಚನೆ ಮತ್ತು ಪದದ ಅರ್ಥವನ್ನು ತಿಳಿಯಲು ಕಾರ್ಯ ನಿರ್ವಹಿಸುವುದು.
  • ಡಿಜಿಡಲ್ ಶಬ್ಧಕೋಶ ಬಳಸಿ ಕಠಿಣ ಪದಕ್ಕೆ ಅರ್ಥ ಹುಡುಕುವುದು
  • ಧ್ವನಿ (ವಚನ) ಕೇಳುವುದರ ಮೂಲಕ ಮಾತುಗಾರಿಕೆ ಮತ್ತು ಚರ್ಚೆ, ಮಾತುಗಾರಿಕೆ
  • ಪುಸ್ತಕವನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
  • ವಾಕ್ಯ ರಚನೆಯನ್ನು ಶ್ರೀಮಂತಗೊಳಿಸಲು, ಪದ ಸಂಪತ್ತನ್ನು ಹೆಚ್ಚಿಸುವುದು

ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ ಪರಿಚಯ/ಸಾಹಿತ್ಯ ಘಟ್ಟ ಪರಿಚಯ

ಪ್ರಸ್ತುತ ಪದ್ಯ ಪೀಠಿಕೆ /ಹಿನ್ನೆಲೆ/ಸಂದರ್ಭ

ತಂದೆ ತಾಯಿ ಗುರುಗಳಿಗೆ ದೈವದ ಸ್ಥಾನಮಾನ ನೀಡುವ ಸಂಸ್ಕೃತಿ ನಮ್ಮದು. ಗುರುವಿನ ಸ್ಥಾನ ಬಹಳ ಪವಿತ್ರವಾದದ್ದು. ಗುರುವಿಗೆ ಸೃಷ್ಟಿ ಸ್ಥಿತಿ ಲಯಕಾರಕರಾದ ಬ್ರಹ್ಮ ವಿಷ್ಣು ಮಹೇಶ್ವರರ ಸ್ಥಾನವನ್ನು ನೀಡಿ ಗೌರವಿಸಲಾಗಿದೆ. ಏಕೆಂದರೆ ಶಿಷ್ಯರಿಗೆ ಸಂಸ್ಕಾರ ವಿದ್ಯೆ ವಿನಯ ಹಾಗು ಬದುಕಿನ ಮಾರ್ಗವನ್ನು ನೀಡುವವನು ಗುರು. ಪರಿವರ್ತನರ ಜಗದ ನಿಯಮ. ಕಾಲಗತಿಯಲ್ಲಿ ಎಲ್ಲವೂ ಪರಿವರ್ತನೆಗೊಳ್ಳುತ್ತದೆ ಎಂಬುದನ್ನು ಗುರುವಿನ ಸ್ಥಾನ ಹಾಗು ಶಿಷ್ಯನ ಕಲಿಕಾ ಪ್ರವೃತ್ತಿಗಳು ನಾಲ್ಕು ಯುಗಗಳಲ್ಲಿ ಹೇಗೆ ಪರಿವರ್ಥನೆಯಾಗಿದೆ ಎಂಬುದನ್ನು ಮಾರ್ಮಿಕವಾಗಿ ಈ ವಚನದಲ್ಲಿ ಬಿಂಬಿತವಾಗಿದೆ.

ಕವಿ ಪರಿಚಯ

ಅಲ್ಲಮ ಪ್ರಭು - ಗುರು ಶಿಷ್ಯ-ಶಿಕ್ಷಣ

ಮಾರಯ್ಯ - ಕಾಯಕ

ರಾಯಮ್ಮ - ಭಕ್ತಿ

ಲಿಂಗಮ್ಮ - ಶರಣ ಚಟುವಟಿಕೆಗಳ ಲಿಂಕ್‌

ಪಾಠದ ಬೆಳವಣಿಗೆ

ಪರಿಕಲ್ಪನೆ ಭಾಗ-1 - ಅಲ್ಲಮ ಪ್ರಭು - ಗುರು ಶಿಷ್ಯ-ಶಿಕ್ಷಣ

ಪಠ್ಯಭಾಗ - 1 - ಪರಿಕಲ್ಪನಾ ನಕ್ಷೆ

ವಿವರಣೆಬೋಧನೋಪಕರಣಗಳು

ಚಟುವಟಿಕೆಗಳು

ಚಟುವಟಿಕೆ - ೧

  1. ಚಟುವಟಿಕೆ ಹೆಸರು: ವಚನಕಾರರ ಪರಿಚಯ
  2. ಉದ್ದೇಶ ;
    1. ಚಿತ್ರ ಸಂಪನ್ಮೂಲ ಬಳಸಿ (ಪ್ರಸ್ತುತಿ) ವ್ಯಕ್ತಿ ಪರಿಚಯ ಮತ್ತು ಸಂವಹನ ಮಾಡುವುದು
    2. ವಚನಗಳನ್ನು ಕುರಿತು ಮಾತನಾಡುವುದು
    3. ವಚನಕಾರರ ಚಿತ್ರವನ್ನು ನೋಡುವುದು ಮತ್ತು ಅರ್ಥೈಸುವ
  3. ಸಾಮಗ್ರಿಗಳು/ಸಂಪನ್ಮೂಲಗಳು ; ಪ್ರಸ್ತುತಿ, ಕಪ್ಪು ಹಲಗೆ, ಪ್ರೊಜೆಕ್ಟರ್
  4. ಸಮಯ : ೧೦ ನಿಮಿಷ
  5. ಉದ್ದೇಶಿತ ಸಾಮರ್ಥ್ಯಗಳು ; ಮಾತನಾಡುವುದು
  6. ವಿಧಾನ/ಪ್ರಕ್ರಿಯೆ :
    1. ಗುಂಪು ಚಟುವಟಿಕೆ - ಪ್ರಸ್ತುತಿ ವೀಕ್ಷಣೆ ಮತ್ತು ಓದು
    2. ಒಂದು ತಂಡದವರು ಒಬ್ಬ ವಚನಕಾರರನ್ನು ಓದಬೇಕು ಮತ್ತು ಪರಿಚಯಿಸಬೇಕು
  7. ಹಂತಗಳು : ಹಂತ – 1 ಮಕ್ಕಳಿಗೆ ಪ್ರಸ್ತುತಿಯನ್ನು ವೀಕ್ಷಿಸಲು ಅವಕಾಶ ನೀಡುವುದು ಮತ್ತು ಗಮನವಿರಿಸಿ ಕೇಳಲು ಮತ್ತು ನೋಡಲು ತಿಳಿಸುವುದು. ಶಿಕ್ಷಕರ ಪ್ರಶ್ನೆಗಳನ್ನು ಆಲೋಚಿಸಿ ಉತ್ತಸುವರು. ಮೌಲ್ಯಮಾಪನ ಪ್ರಶ್ನೆಗಳು
    1. ಅಲ್ಲಮನ ತಂದೆ ತಾಯಿಯ ಹೆಸರೇನು? ಈ ಹೆಸರುಗಳೇಕೆ ವಿಬಿನ್ನವಾಗಿದೆ?
    2. ಅಯ್ದಕ್ಕಿ ಮಾರಯ್ಯನ ಕಾಯಕ ಯಾವುದು?
    3. ರಾಯಮ್ಮನ ವಚನದಲ್ಲಿ ಪ್ರಾಣಿ ಪಕ್ಷಿಗಳ ಮಹತ್ವವೇನು?
  8. ಮನೆಗೆಲಸ
  • ನಿಮಗೆ ಇಷ್ಟವಾದ ಒಬ್ಬರು ವಚನಕಾರರ ಬಗ್ಗೆ ಲೇಖನ ಬರೆದುಕೊಂಡು ಬನ್ನಿರಿ

ಚಟುವಟಿಕೆ-೨

  1. ಚಟುವಟಿಕೆ ಹೆಸರು: ನಾಲ್ಕೂ ಯುಗಗಳಲ್ಲಿ ಆದ ಬದಲಾವಣೆಯ ಚಿತ್ರವನ್ನು ಬರೆಯಿರಿ
  2. ಉದ್ದೇಶ ;
    1. ಚಿತ್ರ ರಚನೆ ಮತ್ತು ಕಲ್ಪಿಸಲು,ಮಾತನಾಡಲು ಅವಕಾಶ
    2. ಚಿತ್ರ ರಚನೆಯ ಮೂಲಕ ಅರ್ಥೈಸಲು ಮತ್ತು ವಿಶ್ಲೇಷಿಸಲು ಅವಕಾಶ
  3. ಸಾಮಗ್ರಿಗಳು/ಸಂಪನ್ಮೂಲಗಳು ; ಮಕ್ಕಳು ರಚಿಸಿದ ಮೇಲೆ ಪೋಟೋ ತೆಗೆದುಕೊಳ್ಳಲಾಗುವುದು
  4. ಸಮಯ : ೧೫ ನಿಮಿಷ
  5. ವಿಧಾನ/ಪ್ರಕ್ರಿಯೆ :
    1. ಶಿಕ್ಷಕರ ಸಹಾಯದಿಂದ ವಿವಿಧ ಯುಗಗಳ ಪರಿಚಯ ಮತ್ತು ಅದಕ್ಕೆ ಪೂರಕವಾದ ಚಿತ್ರ ಬರೆಯುವರು - ಮೊದಲು ಚಿತ್ರವನ್ನು ಬರೆಯಲು ಇರುವ ಸಾಧ್ಯತೆಯ ಚರ್ಚೆ - ನಂತರ ಚಿತ್ರ ಬರೆದು ಸಂದರ್ಭವನ್ನು ವಿವರಿಸುವರು ಮೌಲ್ಯಮಾಪನ ಪ್ರಶ್ನೆಗಳು (ಮನೆಯಲ್ಲಿ ಬರೆದುಕೊಂಡುಬನ್ನಿ ) ತಂದೆ -ತಾಯಿ - ಅಜ್ಜ ಕೇಳಿ ಅವರ ಶಿಕ್ಷಣದ ಅನುಭವವನ್ನು ಬರೆಯಿರಿ? ವಿವಿಧ ಶಿಕ್ಷಣದ ಅನುಭವವನ್ನು ಬರೆಯಿರಿ? . .ಸೈಕಲ್‌, ನಾಟ್ಯ ಇತ್ಯಾದಿ

ಶಬ್ದಕೋಶ / ಪದ ವಿಶೇಷತೆ

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು

೧ನೇ ಅವಧಿ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಪರಿಕಲ್ಪನೆ ೨ -ಮಾರಯ್ಯ - ಕಾಯಕ

ಪಠ್ಯಭಾಗ -೨ - ಪರಿಕಲ್ಪನಾ ನಕ್ಷೆ

ವಿವರಣೆ

ಈತನು ರಾಯಚೂರು ಜಿಲ್ಲೆಯ ಲಿಂಗಸೂರ ತಾಲೂಕಿನ ಅಮರೇಶ್ವರದವನು.ಅಧಿದೈವ ಅಮರೇಶ್ವರ. ಕಾಲ ಸುಮಾರು ಕ್ರಿ.ಶ ೧೧೬೦. ತನ್ನ ಹೆಂಡತಿ ಲಕ್ಕಮ್ಮನೊಂದಿಗೆ ಕಲ್ಯಾಣಕ್ಕೆ ಬಂದನು.ಕಲ್ಯಾಣಕ್ಕೆ ಬಂದ ಈತನ ಕಾಯಕ ಬೀದಿಯಲ್ಲಿ ಬಿದ್ದ ಅಕ್ಕಿಯನ್ನು ಆಯುವುದು. ಕಾಯಕ-ದಾಸೋಹ ನಿಷ್ಠ ಶರಣರಲ್ಲಿ ಅಗ್ರಗಣ್ಯ. "ಕಾಯಕವೇ ಕೈಲಾಸ" ಎ೦ಬುದು ಇವನ ಬದುಕಿನ ಮುಖ್ಯ ಸಿದ್ವಾಂತ. 'ಅಮರೇಶ್ವರಲಿಂಗ' ಆಂಕಿತದಲ್ಲಿ ವಚನಗಳನ್ನು ರಚಿಸಿದ್ದಾನೆ. ಸದ್ಯ ದೊರೆತ ೩೨ ವಚನಗಳಲ್ಲಿ ಕಾಯಕತ್ವದ ವಿಚಾರವೇ ಪ್ರಧಾನವಾಗಿದೆ. ಶಿವ ಭಕ್ತನಾದ ಈತನಿಗೆ ಬೇರೇನೂ ಕಾಯಕ ದೊರೆಯದಿರಲು ಭತ್ತದ ಒರಳುಗಳ ಸುತ್ತಮುತ್ತ ಸಿಡಿದು ಬಿದ್ದ ಅಕ್ಕಿಯನ್ನು ಆಯ್ದು ತಂದು ಜಂಗಮರಿಗೆ ನೀಡಿ ತಾನೂ ತಿನ್ನುತ್ತದ್ದನು. ಈತನಕಷ್ಟವನ್ನು ಕಂಡ ಬಸವಣ್ಣ ಮಾರಯ್ಯ ಅಕ್ಕಿ ಆಯಲು ಹೋಗುವ ಕಡೆಗಳಲ್ಲಿ ಹೇರಳವಾಗಿ ಅಕ್ಕಿಯನ್ನು ಚೆಲ್ಲಿಸಿದನು. ಇದರಿಂದಾಗಿ ಮಾರಯ್ಯ ಮೂರುದಿನಗಳಿಗೆ ಆಗುವಷ್ಟು ಅಕ್ಕಿಯನ್ನು ಆರಿಸಿ ತಂದನು. ಇದನ್ನು ಕಂಡ ಅವನ ಹೆಂಡತಿ ತಮ್ಮನ್ನು ನಿರ್ಗತಿಕರೆಂದು ಭಾವಿಸಿ ಬಸವಣ್ಣನೀವು ಅಕ್ಕಿ ಆಯಲು ಹೋಗುವ ಕಡೆ ಹೆಚ್ಚು ಅಕ್ಕಿಯನ್ನು ಚೆಲ್ಲಿಸಿದ್ದಾನೆ. ಇದು ಶಿವನಿಗೆ, ನಮ್ಮ ಕಾಯಕಕ್ಕೆ ಅವಮಾನ. ಆದುದರಿಂದ ಈ ಅಕ್ಕಿಯನ್ನೆಲ್ಲಾ ಬಸವಣ್ಣನ ಅಂಗಳದಲ್ಲಿ ಚೆಲ್ಲಿ ಲಕ್ಷ ತೊಂಭತ್ತಾರು ಸಾವಿರ ಜಂಗಮರನ್ನು ದಾಸೋಹಕ್ಕೆ ಕರೆದು ಬನ್ನಿ ಎಂದಳು. ದಿನದಂತೆ ದೊರೆತ ಅಕ್ಕಿಯಲ್ಲಿಯೇ ಲಕ್ಕಮ್ಮ ಅವರೆಲ್ಲರಿಗೂ ಬಗೆಬಗೆಯ ಅಡುಗೆ ಮಾಡಿ ತೃಪ್ತಿ ಪಡಿಸಿದಳು. ಈ ದಂಪತಿಗಳ ಭಕ್ತಿಗೆ ಶಿವ ಪ್ರತ್ಯಕ್ಷನಾಗಲೂ ಅವರು ಅವನಲ್ಲಿ ಐಕ್ಯವಾದರು. ಆಯ್ದಕ್ಕಿ ಮಾರಯ್ಯನ ಪ್ರಸಂಗ ಕಥಾಸಾಗರ, ಭೈರವೇಶ್ವರ ಕಥಾಸೂತ್ರ ರತ್ನಾಕರ, ಶಿವ ತತ್ವ ಚಿಂತಾಮಣಿ, ಚನ್ನಬಸವ ಪುರಾಣ, ಸಿಂಗಿರಾಜ ಪುರಾಣ, ಶರಣಲೀಲಾ ಮೃತ, ಬಸವೇಶ್ವರ ಷಟ್‌ಸ್ಥಲ ವಚನ ಕಥಾ ಸಾಗರ, ಅಮರಗಣಾಧೀಶ್ವರರ ಚರಿತ್ರೆಗಳು. ಶಿವ ಶರಣರ ಚರಿತ್ರೆಗಳು, ಗುರುರಾಜ ಚಾರಿತ್ರ, ಪ್ರಭುದೇವ ಪುರಾಣ, ಶರಣ ಚರಿತಾಮೃತ ಗ್ರಂಥಗಳಲ್ಲಿ ದೊರೆಯುತ್ತದೆ.

ಬೋಧನೋಪಕರಣಗಳು

ಚಟುವಟಿಕೆಗಳು

ಚಟುವಟಿಕೆ-೧

  1. ಚಟುವಟಿಕೆ ಹೆಸರು: ಗ್ರಾಮೀಣ ವೃತ್ತಿಗಳ ಚಿತ್ರ ಗುರುತಿಸಿ ಹೇಳಿ
  2. ಉದ್ದೇಶ ;
    1. ಚಿತ್ರ ಸಂಪನ್ಮೂಲ ಬಳಸಿ (ಪ್ರಸ್ತುತಿ) ಗ್ರಾಮೀಣ ವೃತ್ತಿಗಳ ಪರಿಚಯ ಮತ್ತು ಸಂವಹನ ಮಾಡುವುದು
    2. ವಚನಕಾರರ ಕಾಯಕ ಕುರಿತು ಮಾತನಾಡುವುದು
    3. ವೃತ್ತಿಯ ಚಿತ್ರವನ್ನು ನೋಡುವುದು ಮತ್ತು ಅರ್ಥೈಸುವ
  3. ಸಾಮಗ್ರಿಗಳು/ಸಂಪನ್ಮೂಲಗಳು ; ಚಿತ್ರಗಳು, ಕಪ್ಪು ಹಲಗೆ, ಪ್ರೊಜೆಕ್ಟರ್
  4. ಸಮಯ : ೧೦ ನಿಮಿಷ
  5. ಉದ್ದೇಶಿತ ಸಾಮರ್ಥ್ಯಗಳು ; ಮಾತನಾಡುವುದು
  6. ವಿಧಾನ/ಪ್ರಕ್ರಿಯೆ : ತಂಡದಲ್ಲಿ ಚರ್ಚಿಸಿ ಒಬ್ಬರು ಚಿತ್ರವನ್ನು ಗುರುತಿಸುವರು. ಆವೃತ್ತಿಯ ಮಹತ್ವವನ್ನು ವಿವರಿಸುವರು
  7. ಮೌಲ್ಯಮಾಪನ ಪ್ರಶ್ನೆಗಳು
    1. ನಿಮ್ಮ ಜೀವನದಲ್ಲಿ ಮುಂದೆ ಯಾವ ವೃತ್ತಿಯನ್ನು ಆಯ್ಕೆಮಾಡಿಕೊಳ್ಳಬೇಕೆಂದಿರುವಿರಿ? ಯಾಕೆ

ಚಟುವಟಿಕೆ ೨

ಶಬ್ದಕೋಶ / ಪದ ವಿಶೇಷತೆ

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು

೨ನೇ ಪರಿಕಲ್ಪನೆಯ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಪರಿಕಲ್ಪನೆ ೩ - ರಾಯಮ್ಮ - ಭಕ್ತಿ

ಪಠ್ಯಭಾಗ -೩ – ಪರಿಕಲ್ಪನಾ ನಕ್ಷೆ

ವಿವರಣೆ

ಅಮುಗೆ ರಾಯಮ್ಮ ಅಮುಗೆ ರಾಯಮ್ಮ ಸೊನ್ನಲಿಗೆ(ಈಗಿನ ಸೊಲ್ಲಾಪುರ) ಊರಿನವಳು,ಇವಳ ಕಾಲವನ್ನು ಸುಮಾರು ಕ್ರಿ.ಶ ೧೧೬೦ ಎಂಬುದಾಗಿ ವಿದ್ವಾಂಸರು ನಿರ್ಧರಿಸಿದ್ದಾರೆ.ಅಮುಗೆ ದೇವಯ್ಯನ ಧರ್ಮಪತ್ನಿ ಹಾಗು ಇವಳ ವಚನಗಳ ಅಂಕಿತನಾಮ 'ಅಮುಗೇಶ್ವರಲಿಂಗ'. ಈ ಗಂಡಹೆಂಡಿರು ಸೊನ್ನಲಾಪುರದಲ್ಲಿ ನೇಯ್ಗೆಯ ಕಾಯಕಮಾಡಿಕೊಂಡಿದ್ದವರು. ಇವಳ ಮೊದಲ ಹೆಸರು ವರದಾನಿಯಮ್ಮ. ಶರಣೆ ಅಕ್ಕಮ್ಮಳಂತೆ ಈಕೆಯೂ ಆಚಾರಶೀಲೆ. ಸಮಾಜದ ಓರೆಕೋರೆಗಳ ಬಗ್ಗೆ ತೀಕ್ಷ್ಣವಾಗಿ ವಿಮರ್ಶಿಸಿದ್ದಾಳೆ. ಹಲವಾರು ವಚನಗಳಲ್ಲಿ ಆತ್ಮನಿರೀಕ್ಷೆಯೂ ಕಂಡುಬರುತ್ತದೆ. ಅಲ್ಲದೆ ಕೆಚ್ಚು, ಧ್ಯೆರ್ಯ,ಛಲ, ನಿಷ್ಟುರತೆ, ಆಧ್ಯಾತ್ಮ ಅಭಿಮಾನ, ವಿಡಂಬನೆ, ವಿರಾಗಿಗಳ ಕಟುಟೀಕೆ ಇತ್ಯಾದಿ ಮೂಡಿ ಬಂದಿವೆ. ಇವಳ ಲಿಂಗನಿಷ್ಠೆ ಗಾಢವಾದುದು. ಈಕೆಯ ಪಾಲಿಗೆ ಗುರು, ಲಿಂಗ, ಪತಿ ಮೂರು ಒಂದೇ.ಅಮುಗೆ ರಾಯಮ್ಮನ ಸುಮಾರು ೧೧೫ ವಚನಗಳು ದೊರೆತಿವೆ. . ಬದುಕಿನ ವಿವರ ಹೆಚ್ಚು ತಿಳಿಯದು. ಅಮುಗೆ ರಾಯಮ್ಮ ಎಂಬ ಹೆಸರಿನ ಇನ್ನೊಬ್ಬ ವಚನಕಾರ್ತಿ, ರಾಯಸದ ಮಂಚಣ್ಣನ ಹೆಂಡತಿ ಕೂಡ ಇದ್ದಾಳೆ. ಈ ಹೆಸರಿನವರು ಇಬ್ಬರೋ ಒಬ್ಬರೋ ಅನ್ನುವ ಬಗ್ಗೆ ವಿದ್ವಾಂಸರಲ್ಲಿ ಚರ್ಚೆ ನಡೆದಿದೆ. ರಾಯಮ್ಮ ಎಂಬ ಹೆಸರಿನ ಇನ್ನೂ ಇಬ್ಬರು ವಚನಕಾರ್ತಿಯರು ಇದ್ದಾರೆ.

ಬೋಧನೋಪಕರಣಗಳು

ಚಟುವಟಿಕೆಗಳು

ಚಟುವಟಿಕೆ -೧

    1. ಚಟುವಟಿಕೆ ಹೆಸರು: ವಚನವನ್ನು ಕೇಳಿಸುವುದು ಮತ್ತು ಹಾಡಿಸುವುದು
    2. ಉದ್ದೇಶ ;
      1. ಧ್ವನಿ ಸಂಪನ್ಮೂಲದ ಬಳಸಿ ವಚನದ ಪರಿಚಯ (ಕಾಗೆಯ ಮರಿ) ಮತ್ತು ಸಂವಹನ ಮಾಡುವುದು
      2. ವಚನಕಾರರು ಪ್ರಾಣಿ ಪಕ್ಷಿಗಳ ಪ್ರತಿಮೆಯನ್ನು ಬಳಕೆಯ ಬಗ್ಗೆ ಮಾತನಾಡುವುದು
    3. ಸಾಮಗ್ರಿಗಳು/ಸಂಪನ್ಮೂಲಗಳು ;'ಗಾನ'ದಲ್ಲಿರುವ ವಚನವನ್ನು ಕೇಳಲು ಈ ಲಿಂಕ್‌ ಕ್ಲಕ್‌ಮಾಡಿರಿ - ಸ್ಪೀಕರ್‌, ಪ್ರೋಜೆಕ್ಟರ್‌
    4. ಸಮಯ: ೧೦ ನಿಮಿಷ
    5. ಉದ್ದೇಶಿತ ಸಾಮರ್ಥ್ಯಗಳು ; ಕೇಳಿಸಿಕೊಳ್ಳುವುದು ಮತ್ತು ಮಾತನಾಡುವುದು
    6. ವಿಧಾನ/ಪ್ರಕ್ರಿಯೆ :
      1. ತರಗತಿಯ ಎಲ್ಲರಿಗೂ ಕೇಳಿಸಿ ನಂತರ ಉಳಿದ ವಚನಗಳಿಗೆ ಯಾರಾದರು ವಿದ್ಯಾರ್ಥಿಯನ್ನು ಹಾಡಲು ತಿಳಿಸುವುದು. ರೆಕಾರ್ಡ್‌ ಮಾಡಿಕೊಳ್ಳುವುದು
    7. ಮೌಲ್ಯಮಾಪನ ಪ್ರಶ್ನೆಗಳು
      1. ನಿಮಗೆ ತಿಳಿದಿರುವ ಯಾವುದಾದರು ವಚನವನ್ನು ಹಾಡಿರಿ ಅಥವ ಹೇಳಿರಿ

ಚಟುವಟಿಕೆ -೨

    1. ಚಟುವಟಿಕೆ ಹೆಸರು: ಪ್ರಾಣಿ ಪಕ್ಷಿಗಳ ಚಿತ್ರ ಗುರುತಿಸಿ ಹೇಳಿ
    2. ಉದ್ದೇಶ ;
      1. ಚಿತ್ರ ಸಂಪನ್ಮೂಲದ ಬಳಸಿ (ಪ್ರಸ್ತುತಿ) ಪಕ್ಷಿಗಳ ಮತ್ತುಪ್ರಾಣಿಗಳ ಸ್ವಭಾವ ಪರಿಚಯ.
      2. ವಚನಕಾರರ ಜೀವಿಗಳ ಪ್ರತಿಮೆ ಬಳಸಿಕೊಂಡಿವ ಬಗ್ಗೆ ಅರಿವು
      3. ಜೀವಿಗಳ ಚಿತ್ರವನ್ನ ನೋಡುವುದು ಮತ್ತು ಅರ್ಥೈಸುವ
    3. ಸಾಮಗ್ರಿಗಳು/ಸಂಪನ್ಮೂಲಗಳು ; - ಸಂಪನ್ಮೂಲ : ಸ್ಪೀಕರ್‌, ಪ್ರೋಜೆಕ್ಟರ್‌
    4. ಸಮಯ : ೧೦ ನಿಮಿಷ
    5. ಉದ್ದೇಶಿತ ಸಾಮರ್ಥ್ಯಗಳು ; ಚಿತ್ರ ವೀಕ್ಷಣೆ ಮತ್ತು ಮಾತನಾಡುವುದು
    6. ವಿಧಾನ/ಪ್ರಕ್ರಿಯೆ :
      1. ತರಗತಿಯ ಎಲ್ಲರಿಗೂ ಜೀವಿಗಳ ವೀಕ್ಷಣೆಯ ನಂತರ ಚಿತ್ರದಲ್ಲಿರುವ ಪ್ರಾಣಿ ಮತ್ತು ಪಕ್ಷಿಗಳನ್ನು ಗುರುತಿಸಿ ಮತ್ತು ಅದರ ವಿಶೇಷ ಗುಣವನ್ನು ಮಾನವನಿಗೆ ಹೋಲಿಸಿ ಹೇಳಿರಿ
      2. ನಿಯತ್ತು,ಬುದ್ದಿವಂತಿಕೆ, ದಡ್ಡ, ಮೋಸ, ಸೂಕ್ಷ್ಮ, ಸುಂದರ,ವಿಕಾರ, ಬಲಿಷ್ಟ ಪದಗಳಿಗೆ ಸರಿ ಹೊಂದುವ ಪ್ರಾಣಿಗಳ ಚಿತ್ರ ಬರೆಯಿರಿ
    7. ಮೌಲ್ಯಮಾಪನ ಪ್ರಶ್ನೆಗಳು
      1. ನಿಮ್ಮ ಮನೆಯಲ್ಲಿರುವ ಸಾಕುಪ್ರಾಣಿಯ ಬಗ್ಗೆ ಲೇಖನ ಬರೆಯಿರಿ

ಶಬ್ದಕೋಶ ಪದ ವಿಶೇಷತೆ

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು

ವಿವಿಧ ಶರಣರ ಭಾವಚಿತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿಸಿ
ವಿವಿಧ ಶರಣೆಯರ ಭಾವಚಿತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿಸಿ

ಅಮುಗೆ ರಾಯಮ್ಮನ ವಚನಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ
ಈಜೀಪುರ ಶಾಲೆಯ ವಿದ್ಯಾರ್ಥಿನಿ ಪ್ರತಿಮಾಳ ಧ್ವನಿ ಮುದ್ರಿತ ಅಕ್ಕನ ವಚನದ ಹಾಡುಕೇಳಲು ಇಲ್ಲಿ ಕ್ಲಿಕ್ಕಿಸಿರಿ

೩ನೇ ಪರಿಕಲ್ಪನೆಯ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಪರಿಕಲ್ಪನೆ - ೪ ಲಿಂಗಮ್ಮ - ಶರಣ

ಪಠ್ಯಭಾಗ - ೪ - ಪರಿಕಲ್ಪನಾ ನಕ್ಷೆ

ವಿವರಣೆ

ಬೋಧನೋಪಕರಣಗಳು

ಚಟುವಟಿಕೆಗಳು

ಚಟುವಟಿಕೆ-೧

ಚಟುವಟಿಕೆ -೨

ಚಟುವಟಿಕೆಯ ಹೆಸರು :

ವಿಧಾನ/ಪ್ರಕ್ರಿಯೆ :

ಸಮಯ : ೧೫ ನಿಮಿಷಗಳು

ಸಾಮಗ್ರಿಗಳು/ಸಂಪನ್ಮೂಲಗಳು :

ಹಂತಗಳು :

ಚರ್ಚಾ ಪ್ರಶ್ನೆಗಳು :

ಶಬ್ದಕೋಶ ಪದ ವಿಶೇಷತೆ

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು

೩ನೇ ಪರಿಕಲ್ಪನೆಯ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಪರಿಕಲ್ಪನೆ ೪ -

ಪಠ್ಯಭಾಗ - ೪ - ಪರಿಕಲ್ಪನಾ ನಕ್ಷೆ

ವಿವರಣೆ

ಬೋಧನೋಪಕರಣಗಳು

ಚಟುವಟಿಕೆಗಳು

ಚಟುವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಚಟುವಟಿಕೆ - ೨ -

ಶಬ್ದಕೋಶ ಪದ ವಿಶೇಷತೆ

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು

ಅಕ್ಕ ಮಹಾದೇವಿ

ಭಾರತದ ಇತಿಹಾಸವನ್ನು ಒಮ್ಮೆ ಮೆಲುಕು ಹಾಕಿದರೆ ಭಾರತ ಮಾತೆಯು ಹೆಣ್ಣಾದರೂ ಹೆಚ್ಚಾಗಿ ಕಂಡು ಬರುವವರು ಪುರುಷ ದಾರ್ಶನಿಕರು. ಉತ್ತರದಲ್ಲಿ ಮೀರಾ ಬಾಯಿ, ಶಾರದಾ ದೇವಿ ಮತ್ತು ಸಿಸ್ಟರ್ ನಿವೇದಿತಾ ಕಂಡು ಬರುತ್ತಾರೆ. ನಮ್ಮ ಕನ್ನಡ ನಾಡಿನಲ್ಲಿ ಅದಕ್ಕೇನು ಬರವಿಲ್ಲ. ಭಕ್ತಿ ವೈರಾಗ್ಯ ಮತ್ತು ದೇವರ ಸ್ಮರಣೆ ಕೇವಲ ಗಂಡಿನಿಂದ ಮಾತ್ರ ಸಾಧ್ಯ ಅಲ್ಲ ಹೆಣ್ಣಿನಿಂದಲೂ ಸಹ ಸಾಧ್ಯ ಎಂದು ೧೨ನೆ ಶತಮಾನದಲ್ಲಿ ತೋರಿದ ಕನ್ನಡದ ಮಹಿಳೆ ಅಕ್ಕ ಮಹಾದೇವಿ. ಆಕೆ ಶಿವಭಕ್ತೆಯಾಗಿ, ಕವಯತ್ರಿಯಾಗಿ ನಾಡವರ ನೆನಪಿನಲ್ಲಿ ಚಿರವಾಗಿದ್ದಾಳೆ. ಆಕೆಯ ನಡೆ ನುಡಿ ಎಲ್ಲರ ಗೌರವಕ್ಕೂ ಪಾತ್ರವಾಗಿದೆ.

ಇಂದಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿ ಗ್ರಾಮದಲ್ಲಿ ನಿರ್ಮಲ ಮತ್ತು ಸುಮತಿ ಎಂಬ ಶಿವಭಕ್ತರ ಮಗಳಾಗಿ ಜನಿಸಿದರು ಮಹಾದೇವಿ. ವ್ಯಾಪಾರಿಯಾದ ನಿರ್ಮಲ ಹೆಸರಿಗೆ ತಕ್ಕಂತೆ ವ್ಯಾಪಾರದಲ್ಲಿ ನಿರ್ಮಲನಾಗಿದ್ದ. ಸುಮತಿಯು ಸಹ ಅಪ್ರತಿಮ ಬುದ್ಧಿವಂತೆಯಾಗಿದ್ದಳು. ಬಸವಣ್ಣನನವರ ನುಡಿಮುತ್ತಾದ ‘ ಕಾಯಕವೇ ಕೈಲಾಸ ‘ ಎಂದು ತಮ್ಮ ಕಾರ್ಯದಲ್ಲಿ ಶಿವನನ್ನು ಕಾಣುತ್ತಾ ಇದ್ದರು.

ನಿರ್ಮಲ ಮತ್ತು ಸುಮತಿಯರಿಗೆ ಮಕ್ಕಳ ಕೊರತೆ ಇತ್ತು. ಊರಲ್ಲಿದ್ದ ಮಲ್ಲಿಕಾರ್ಜುನ ದೇವಾಲಯದಲ್ಲಿ ಹೆಣ್ಣು ಮಗುವಿಗಾಗಿ ಪ್ರತಿದಿನವೂ ಪ್ರಾರ್ಥಿಸುತ್ತಿದ್ದರು.ಒಮ್ಮೆ ಪ್ರಾರ್ಥನೆಯಲ್ಲಿ ತೊಡಗಿದ್ದಾಗ ಪಾರ್ವತಿಯ ಮುಡಿಯಿಂದ ಪುಷ್ಪದ ಪ್ರಸಾದವಾಯಿತು. ಅದನ್ನೇತ್ತಿ ಕೊಂಡ ದಂಪತಿಗಳಿಗೆ ಸ್ವಲ್ಪ ಸಮಯದಲ್ಲಿ ಹೆಣ್ಣು ಮಗುವಾಯಿತು. ಅದಕ್ಕೆ ಮಹಾ ದೇವಿ ಎಂದು ಹೆಸರು ಇಟ್ಟರು. ಮುದ್ದಾದ ಮಗು ಶಿವನ ಹೆಸರು ಕೇಳಿದರೆ ಸಾಕು ಕಣ್ಣನ್ನು ಅರಳಿಸುತ್ತಿತ್ತು. ಅಕ್ಕ ಮಹಾದೇವಿ

ಚಿಕ್ಕಂದಿನಿಂದಲೂ ಶಿವನ ಮೇಲೆ ಅಪಾರ ಭಕ್ತಿ. ಕಾಲಕ್ರಮೇಣ ಬಂಗಾರದ ಹೂವಿಗೆ ಪರಿಮಳ ಕೂಡಿದಂತೆ ಮಹಾದೇವಿಯ ಚೆಲುವೆಗೆ ಯೌವನ ಸೇರಿ ಗುಣ ರೂಪಗಳಲ್ಲಿ ಸರಿಸಮನಾರು ಇಲ್ಲದಂತೆ ಉಡುತಡಿಯಲ್ಲಿ ಬೆಳೆದಳು. ಆ ಗ್ರಾಮದ ದೊರೆ ಕೌಶಿಕ ಒಮ್ಮೆ ಲಾವಣ್ಯವತಿಯಾದ ಮಹಾದೇವಿಯನ್ನು ನೋಡಿ ಮದುವೆಯಾಗ ಬೇಕೆಂದು ಬಯಸಿದ . ಮದುವೆಯ ಪ್ರಸ್ತಾಪವನ್ನು ಮಹಾದೇವಿಯ ಪೋಷಕರ ಮುಂದೆ ಇಟ್ಟರು. ಚಿಕ್ಕಂದಿನಿಂದ ಮಹಾದೇವಿ ‘ ಮಲ್ಲಿಕಾರ್ಜುನನೇ ನನ್ನ ಗಂಡ ‘ ಎಂದು ಹೇಳಿಕೊಂಡು ಬಂದಿದ್ದಳು ಹಾಗು ಕೌಶಿಕನು ಶಿವ ಭಕ್ತನಾಗಿರಲಿಲ್ಲ. ರಾಜನು ಕೋಪಿಯು ಮತ್ತು ನಿಷ್ಟುರನು ಆಗಿದ್ದರಿಂದ ಮಹಾದೇವಿಯ ಮನ ಒಲಿಸಲು ಯತ್ನಿಸಿದರು. ಕಡೆಗೆ ಹೆತ್ತವರಿಗೆ ದುಃಖವಾಗಬಾರದೆಂದು ಮಹಾದೇವಿ ಮೂರು ಷರತ್ತುಗಳನ್ನು ಮುಂದಿಟ್ಟು ಮದುವೆ ಯಾದಳು. ಮೂರು ತಪ್ಪುಗಳಾದರೆ ಮದುವೆಯ ಬಂಧನದಿಂದ ಮುಕ್ತಳಾಗುತ್ತೇನೆ ಎಂಬ ಶರತ್ತಿನ ಮೇಲೆ ಆಕೆಯ ಮುದುವೆ ಯಾಯಿತು. ಅರಮನೆಯನ್ನು ಸೇರಿದ ಮಹಾದೇವಿ ಶಿವಪೂಜೆಯಲ್ಲಿ ಮಗ್ನಳಾದಳು. ಕೌಶಿಕನು ಮಹಾದೇವಿಯ ಶಿವಪೂಜೆಯನ್ನು ತಡೆದ , ಶಿವಭಕ್ತರು ಮಹಾದೇವಿಯನ್ನು ನೋಡಲು ತಡೆದ, ಮತ್ತೊಮ್ಮೆ ಆಕೆಯ ಪೂಜೆಗೆ ಭಂಗ ಮಾಡಿದ. ಹೀಗೆ ಮೂರು ತಪ್ಪು ಗಳಾದ ಮೇಲೆ ಮಹಾದೇವಿ ಆಕೆಯ ಮೈಮೇಲಿದ್ದ ವೈಭವದ ಒಡವೆ, ವಸ್ತ್ರಗಳನ್ನು ಕಳಚಿ ಹೇಗಿದ್ದಳೋ ಹಾಗೆಯೇ ಅರಮನೆಯನ್ನು ತೊರೆದು ತನ್ನ ಆರಾಧ್ಯ ದೈವನಲ್ಲಿಗೆ ಹೆಜ್ಜೆ ಹಾಕಿದಳು.

ಅರಮನೆಯಿಂದ ಹೊರಟ ಮಹಾದೇವಿಯು ತನ್ನ ಆರಾಧ್ಯ ದೈವ ಚೆನ್ನ ಮಲ್ಲಿಕಾರ್ಜುನನನ್ನು ಕಾಣಲು ಶ್ರೀ ಶೈಲಕ್ಕೆ ಹೊರಟರು, ಮಾರ್ಗ ಮಧ್ಯದಲ್ಲಿ ಚಾಲುಕ್ಯರ ಕಲ್ಯಾಣ ನಗರವನ್ನು ಸೇರಿ ಬಸವಣ್ಣನವರ ಅನುಭವ ಮಂಟಪವನ್ನು ಸಂದರ್ಶಿಸುತ್ತಾರೆ.

ಅನುಭವ ಮಂಟಪದಲ್ಲಿ ಆಕೆಗೆ ಮತ್ತು ಅಲ್ಲಮ ಪ್ರಭುಗಳಿಗೆ ಆದ ಸಂವಾದ ಆಕೆಯನ್ನು ಅಕ್ಕ ಅನ್ನುವ ನಾಮಾಂಕಿತವನ್ನು ತಂದುಕೊಟ್ಟಿತು.

ಅಲ್ಲಮ: ನೀನು ಇಲ್ಲಿಗೇಕೆ ಬಂದೆ. ನಿನ್ನ ಗಂಡನ ಗುರುತು ಹೇಳಿ ಮಂಟಪದ ಒಳಕ್ಕೆ ಬಂದು ಕೂರು

ಅಕ್ಕ: ಚೆನ್ನಮಲ್ಲಿಕಾರ್ಜುನನೆ ನನ್ನ ಗಂಡ. ಮಿಕ್ಕ ಲೋಕದ ಗಂಡಸರೊಡನೆ ನನಗೆ ಸಂಬಂಧವಿಲ್ಲ

ಅಲ್ಲಮ: ನೀನು ವಿರಕ್ತರಾಗಿದ್ದರು ದೇಹದ ಮೇಲಿನ ಮೋಹ ಮರೆತಂತಿಲ್ಲ

ಅಕ್ಕ: ಕಾಯ ಕರ್ರನೆ ಕಂಡಿದರೇನು? ಮಿರ್ರನೆ ಮಿಂಚಿದರೇನು? ಅಂತರಂಗ ಶುದ್ಧ ವಾದ ಬಳಿಕ, ಮಲ್ಲಿಕಾರ್ಜುನ ಒಲಿದ ಕಾಯ ಹೇಗಿದ್ದರೇನಯ್ಯ?

ಅಲ್ಲಮ: ನಿನ್ನ ಭಾವ ಶುದ್ಧ ವಾಗಿದ್ದರೆ ದೇಹವನ್ನು ಕೂದಲಲ್ಲಿ ಏಕೆ ಮುಚ್ಚಿಕೊಂಡಿರುವೆ

ಅಕ್ಕ: ಫಲ ಒಳಗೆ ಪಕ್ವ ವಾಗಿದೆಯಲ್ಲದೆ, ಹೊರಗಣ ಸಿಪ್ಪೆ ಒಪ್ಪಗೆಡದು. ದೇಹ ಕಂಡು ನಿಮಗೆ ನೋವಾದೀತೆಂದು ಮುಚ್ಚಿದೆ.

ಅಲ್ಲಮ ಪ್ರಭುಗಳು ಸೇರಿದಂತೆ ಸುತ್ತಲು ನೆರೆದಿದ್ದ ಅನುಭವ ಮಂಟಪದ ಶರಣ ಶರಣೆಯರು ಮಹಾದೇವಿಯ ಜ್ಞಾನಕ್ಕೆ ಮೆಚ್ಚುಗೆ ಮತ್ತು ತಮ್ಮ ಗೌರವ ಸೂಚಿಸುತ್ತಾರೆ. ಅಕ್ಕನ ದೃಷ್ಟಿ ವಿಸ್ತಾರವಾದವು. ತನ್ನ ಹೃದಯದಲ್ಲಿಯೇ ನೆಲೆಸಿದ ಮಲ್ಲಿಕಾರ್ಜುನನನ್ನು ಅರಿಯುವಂತಾಯಿತು. ಇನ್ನು ಹೆಚ್ಚು ಕಾಲ ಕಳೆಯದೆ ಶ್ರೀಶೈಲ ದತ್ತ ಪ್ರಯಾಣ ಬಳಸಿದಳು. ಆಕೆಯ ಅನನ್ಯ ಭಕ್ತಿ ಯಿಂದ ಸಂಪ್ರೀತನಾದ ಮಲ್ಲಿಕಾರ್ಜುನನ ಜೊತೆ ಆಕೆ ಒಂದಾದಳು.

4 ನೇ ಅವಧಿ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ/ಅಲಂಕಾರ/ಛಂದಸ್ಸು

ಮೌಲ್ಯಮಾಪನ

ಪೂರ್ಣ ಪಾಠದ ಉಪಸಂಹಾರ

ಪೂರ್ಣ ಪಾಠದ ಮೌಲ್ಯಮಾಪನ

ಮಕ್ಕಳ ಚಟುವಟಿಕೆ

ಸೂಚನೆ: ಸಮಯ ನೋಡಿಕೊಂಡು ವಚನಕಾರರ ಚಿತ್ರ ಪ್ರದರ್ಶಿಸಿ - ಅವರ ಮಹತ್ವ ಮತ್ತು ಕಾಯಕವನ್ನು ಮಕ್ಕಳಿಗೆ ತಿಳಿಸಬಹುದು

  • ಚಿತ್ರ ನೋಡಿ - ವಿಷಯ - ಮಕ್ಕಳು ವಚನವನ್ನು ರಚನೆಮಾಡಬೇಕು - ನಗರ ಶಾಲೆ ಶಿಕ್ಷಣ
  • ವಚನವನ್ನು ಓದಿ - ಹಿಮ್ಮಾಹಿತಿ - ಭಿತ್ತಿ ಆರಂಭಿಸಿಬೇಕು - ಸಮ್ಮೇಳನ - ವಚನದ ಧ್ವನಿ ಮುದ್ರಣ
  • ವಚನಗಳ ಬಿಟ್ಟ ಸ್ಥಳ ತುಂಬಿರಿ - ಕಂಠಪಾಠದ ವಚನ