ವಸಾಹತು ಆಳ್ವಿಕೆಯಲ್ಲಿ ಕನ್ನಡ ಮಾತನಾಡುವ ಪ್ರದೇಶಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಮತ್ತಷ್ಟು ಮಾಹಿತಿ

ಕರ್ನಾಟಕ ಪಠ್ಯಪುಸ್ತಕ

ವಸಾಹತು ಆಳ್ವಿಕೆಯಲ್ಲಿ ಕನ್ನಡ ಮಾತನಾಡುವ ಪ್ರದೇಶಗಳು

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

Hyd-Karnataka-Liberation-Operation-Polo (3).jpg

ಹೈದರಾಬಾದ್ ಕರ್ನಾಟಕ ವಿಮೋಚನೆಯ ವೀಡಿಯೋ ಮತ್ತು ಚಿತ್ರ

ಸಂಬಂಧ ಪುಸ್ತಕಗಳು

ಹೆಚ್ ಆರ್ ಕೆ -ಭಾರತದ ಇತಿಹಾಸ -ಸಪ್ನ ಪಬ್ಲಿಕೇಷನ್ಸ್

ಸಮಗ್ರ ಭಾರತದ ಇತಿಹಾಸ-ಎಚ್.ಎನ್.ಕೆ

ಕರ್ನಾಟಕದ ಇತಿಹಾಸ-ಚಂದ್ರಶೇಖರಪ್ಪ

ಬೋಧನೆಯ ರೂಪರೇಶಗಳು

ಬ್ರಿಟಿಷ್ ಆಡಳಿತದಲ್ಲಿ ದೇಶೀಯ ರಾಜ್ಯಗಳ ಪರಿಸ್ಥಿತಿ ತಿಳಿಯುವುದು.

ವಸಾಹತು ಆಳ್ವಿಕೆಯಲ್ಲಿ ಕನ್ನಡ ಮಾತನಾಡುವ ಪ್ರದೇಶಗಳ ಹಂಚಿಕೆ

ವಸಾಹತು ವಿರೋಧಿಸಿ ಹೈದರಾಬಾದ್ -ಕರ್ನಾಟಕದ ಭಾಗದ ಪ್ರತಿಭಟನೆ

ಮದ್ರಾಸ್ ಕರ್ನಾಟಕ ಭಾಗದ ಪ್ರತಿಭಟನೆ

ಮುಂಬೈ ಕರ್ನಾಟಕ ಭಾಗದ ಪ್ರತಿಭಟನೆ

ಕೊಡಗು ಭಾಗದ ಪ್ರತಿಭಟನೆ


ಪರಿಕಲ್ಪನೆ #1

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಪರಿಕಲ್ಪನೆ #2

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

೧. ಬ್ರಿಟಿಷ್ ಆಡಳಿತದ ಅವಧಿಯಲ್ಲಿನ ಭಾರತದ ಅಂದವದ ನಕಾಶೆ ಬರೆದು ಕನ್ನಡ ಮಾತನಾಡುವ ಪ್ರದೇಶಗಳನ್ನು ಗುರುತಿಸಿ ಸಂಕ್ಷಿಪ್ತ ಮಾಹಿತಿ ಸಂಗ್ರಹಿಸಿ. ೨. ಆಂಗ್ಲೋ ಮೈಸೋರ ಯುದ್ಧಗಳ ಕಾರಣ ಪರಿಣಾಮಗಳನ್ನು ಪಟ್ಟಿ ಮಾಡಿರಿ.

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು

ಪ್ರಶ್ನೆ ಕೋಶ

  1. ಅಧ್ಯಾಯ ೦೨ ವಸಾಹತು ಆಳ್ವಿಕೆಯಲ್ಲಿ ಕನ್ನಡ ಮಾತನಾಡುವ ಪ್ರದೇಶಗಳು

ಮುಖ್ಯಾಂಶಗಳು: • ಮೊದಲನೆ ಆಂಗ್ಲೋ-ಮೈಸೂರು ಯುದ್ಧ ಮದ್ರಾಸ ಒಪ್ಪಂದದೊಂದಿಗೆ ಮುಕ್ತಾಯವಾಯಿತು. • ಪ್ರೆಂಚರ ವಸಾಹತು ಮಾಹೆ • ಎಂಟು ಶತಮಾನಗಳ ಕಾಲ ಕೊಡಗನ್ನು ಆಳಿದವರು ಚೆಂಗಾಳ್ವರು • 17ನೇ ಶತಮಾನದ ಪ್ರಾರಂಬದಲ್ಲಿ ದಕ್ಷಿಣ ಕನ್ನಡವನ್ನು ಇಕ್ಕೇರಿಯ ವೆಂಕಟಪ್ಪ ನಾಯಕನು ವಶಪಡಿಸಿಕೊಂಡನು. • ಮೊದಲ ಆಂಗ್ಲೋ-ಮೈಸೂರು ಯುದ್ಧ : ಮದ್ರಾಸ ಒಪ್ಪಂದ : : 2ನೇ ಆಂಗ್ಲೋ-ಮೈಸೂರು ಯುದ್ಧ : ಮಂಗಳೂರು ಒಪ್ಪಂದ • ಕ್ರಿಶ 1781 ರಲ್ಲಿ ಸರ್ ಐರ್‍ಕೂಟ್ ನೇತೃತ್ವದ ಇಂಗ್ಲಿಷ ಸೈನ್ಯವು ಹೈದರಾಲಿಯನ್ನು ಸೋಲಿಸಿತು. • ಮಂಗಳೂರ ಒಪ್ಪಂದ : 1784 : : ಶ್ರೀರಂಗಪಟ್ಟಣ ಒಪ್ಪಂದ : ಕ್ರಿಶ 1792 • ಮೂರನೇ ಆಂಗ್ಲೋ-ಮೈಸೂರು ಯುದ್ದಕ್ಕೆ ಕಾರಣ. ಟಿಪ್ಪು ಇಂಗ್ಲಿಷರ ಸ್ನೇಹಿತ ತಿರುವಾಂಕೂರಿನ ಅರಸನ ಮೇಲೆ ದಾಳಿಮಾಡಿದ್ದು. • ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವರು ಲಾರ್ಡ ವೆಲ್ಲಸ್ಲಿ • ಟಿಪ್ಪುವಿನ ನಂತರ ಮೈಸೂರಿನಲ್ಲಿ ಅಧಿಕಾರಕ್ಕೆ ಬಂದ ಒಡೆಯರು ಮುಮ್ಮಡಿ ಕೃಷ್ನರಾಜ ಒಡೆಯರು. • ಮೈಸೂರು ಒಡೆಯರ ಆಳ್ವಿಕೆಯನ್ನು ಆರಂಭಿಸಿದವರು ಯದುರಾಯ & ಕೃಷ್ಣರಾಯ • ಮೈಸೂರು ಸಂಸ್ಥಾನದ ಕೊನೆಯ ಒಡೆಯರು ಜಯಚಾಮರಾಜ ಒಡೆಯರು • ಮದ್ರಾಸ ಪ್ರಾಂತ್ಯದ ಆಳ್ವಿಕೆಗೆ ಒಳಪಟ್ಟಿದ್ದ ಕನ್ನಡ ಪ್ರದೇಶಗಳು ಬಳ್ಳಾರಿ & ದಕ್ಷಿಣ ಕನ್ನಡ • ಭಾರತದ ಹೊರಗೆ ಕಾಲಿಟ್ಟ ಮೊದಲ ದೇಶಿಯ ದೊರೆ ಕೊಡಗಿನ ಚಿಕ್ಕ ವೀರರಾಜ

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ. 1. ಟಿಪ್ಪು ಯುದ್ದಕ್ಕೆ ಸಜ್ಜುಗೊಂಡ ಬಗೆಯನ್ನು ತಿಳಿಸಿ. ಟಿಪ್ಪು ಯುದ್ಧಕ್ಕೆ (3 ಅಥವಾ 4 ನೇ ಆಂಗ್ಲೋ-ಮೈಸೂರು ಯುದ್ಧ) ಸಿದ್ದಗೊಂಡ ಬಗೆ : • ರಾಜದಾನಿಯ ರಕ್ಷಣೆಯನ್ನು ಬಲಪಡಿಸಿದನು. • ಟಿಪ್ಪುವು ಪ್ರೆಂಚರಿಂದ ತನ್ನ ಸೈನ್ಯಕ್ಕೆ ತರಬೇತಿ ಕೊಡಿಸಿದನು. & ಶಸ್ತ್ರಾಸ್ತ್ರ ಸಂಗ್ರಹಿಸಿದನು. • ಪರ್ಷಿಯಾ, ಅಫಘಾನಿಸ್ತಾನ, ಟರ್ಕಿ, ಪ್ರಾನ್ಸ್ ಇತ್ಯಾದಿ ದೇಶಗಳಿಗೆ ಸಹಾಯ ಯಾಚಿಸಿ ರಾಯಭಾರಿಗಳನ್ನು ಕಳಿಸಿದನು.

2. ಮೊದಲನೇ ಆಂಗ್ಲೋ – ಮೈಸೂರು ಯುದ್ಧಕ್ಕೆ ಕಾರಣ & ಪರಿಣಾಮಗಳೇನು? • 1767 ರಲ್ಲಿ ಮರಾಠರು ಹಾಗೂ ಹೈದರಾಬಾದಿನ ನಿಜಾಮನೊಂದಿಗೆ ಇಂಗ್ಲಿಷರು ಸೇರಿ ಮೈಸೂರಿನ ಹೈದರಾಲಿಯ ಮೇಲೆ ಆಕ್ರಮಣ ನಡೆಸಿದರು. • ಹೈದರಾಲಿಯು ಚಾಣಾಕ್ಷತನದಿಂದ ಮರಾಠರನ್ನು ಹಾಗೂ ಹೈದರಾಬಾದಿನ ನಿಜಾಮನನ್ನು ತನ್ನ ಕಡೆಗೆ ಒಲಿಸಿಕೊಳ್ಳುವಲ್ಲಿ ಸಫಲನಾದನು. • ಹೈದರಾಲಿಯು ಮದ್ರಾಸನ್ನು ವಶಪಡಿಸಿಕೊಂಡಾಗ ಇಂಗ್ಲಿಷರು ಮದ್ರಾಸ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದು ಅನಿವಾರ್ಯವಾಯಿತು. ಈ ಒಪ್ಪಂದದೊಂದಿಗೆ ಮೊದಲನೇ ಆಂಗ್ಲೋ – ಮೈಸೂರು ಯುದ್ಧವು ಕೊನೆಗೊಂಡಿತು.

3. ಎರಡನೇ ಆಂಗ್ಲೋ - ಮೈಸೂರು ಯುದ್ಧಕ್ಕೆ ಕಾರಣ & ಪರಿಣಾಮಗಳೇನು? • ಹೈದ್ರಾಲಿಯ ನಿಯಂತ್ರಣದಲ್ಲಿದ್ದ ಪ್ರೆಂಚರ ವಸಾಹತು ಮಾಹೆಯನ್ನು ಇಂಗ್ಲಿಷರು ವಶಪಡಿಸಿಕೊಂಡಾಗ 2ನೇ ಆಂಗ್ಲೋ-ಮೈಸೂರು ಯುದ್ಧ ನಡೆಯಿತು. • 1781 ರಲ್ಲಿ ಐರ್‍ಕೂಟನು ನೇತೃತ್ವದ ಇಂಗ್ಲಿಷರ ಸೈನ್ಯವು ಹೈದರಾಲಿಯನ್ನು ಸೋಲಿಸಿತು. • 1782 ರಲ್ಲಿ ಹೈದರಾಲಿಯು ಖಾಯಿಲೆಯಿಂದ ಮರಣ ಹೊಂದಿದ ನಂತರ ಟಿಪ್ಪು ಯುದ್ದ ಮುಂದುವರೆಸಿದನು. • ಈ ಯುದ್ದವು ಮಂಗಳೂರು ಒಪ್ಪಂದದೊಂದಿಗೆ 1784 ರಲ್ಲಿ ಕೊನೆಗೊಂಡಿತು.

4. ಶ್ರೀರಂಗಪಟ್ಟಣ ಒಪ್ಪಂದವು ಟಿಪ್ಪುವಿಗೆ ಅನಿವಾರ್ಯವಾಗಿತ್ತು. ವಿಮರ್ಶಿಸಿ. ಅಥವಾ 3ನೇ ಆಂಗ್ಲೋ - ಮೈಸೂರು ಯುದ್ಧಕ್ಕೆ ಕಾರಣ & ಪರಿಣಾಮಗಳೇನು? • ಟಿಪ್ಪು ಇಂಗ್ಲಿಷರ ಸ್ನೇಹಿತನಾದ ತಿರುವಾಂಕೂರಿನ ದೊರೆಯ ಮೇಲೆ ದಾಳಿಮಾಡಿದಾಗ 3ನೇ ಆಂಗ್ಲೋ-ಮೈಸೂರು ಯುದ್ಧವು ಆರಂಭವಾಯಿತು. • ಟಿಪ್ಪುವನ್ನು ಸೋಲಿಸಲು ಬ್ರಿಟಿಷರು ಹೈದರಬಾದಿನ ನಿಜಾಮ ಮತ್ತು ಮರಾಠರ ಸಹಾಯದಿಂದ • ಟಿಪ್ಪುವಿನ ಅನೇಕ ಪ್ರದೇಶಗಳನ್ನು ವಶಪಡಿಸಿಕೊಂಡರು. • ಅಂತಿಮವಾಗಿ ಕ್ರಿಶ 1791 ರಲ್ಲಿ ಇಂಗ್ಲಿಷರ ಗವರ್ನರ್ ಲಾರ್ಡ ಕಾರ್ನವಾಲಿಸ್‍ನು ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡನು. • ಆಗ ಅನಿವಾರ್ಯವಾಗಿ ಟಿಪ್ಪು 1792 ರಲ್ಲಿ ಶ್ರೀರಂಗಪಟ್ಟಣ ಒಪ್ಪಂದಕ್ಕೆ ಸಹಿ ಹಾಕಿದನು.

5. ಇಂಗ್ಲಿಷರ & ಇಕ್ಕೇರಿಯ ವೆಂಕಟಪ್ಪ ನಾಯಕರ ಬಾಂಧವ್ಯವನ್ನು ವಿವರಿಸಿ. • ಇಕ್ಕೇರಿಯ ವೆಂಕಟಪ್ಪ ನಾಯಕನು ಬಿದನೂರನ್ನು ತನ್ನ ರಾಜದಾನಿಯನ್ನಾಗಿ ಮಾಡಿಕೊಂಡು ಸುಮಾರು ಅರ್ಧ ಶತಮಾನ ಕಾಲ ಆಳಿದನು. • ಈತನು ಇಂಗ್ಲಿಷರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದನು. • ಇಂಗ್ಲಿಷರು ಬಿದನೂರಿನ ರಾಜನಿಂದ ವ್ಯಾಪಾರಿ ಅನುಕೂಲಗಳನ್ನು ಪಡೆದುದಲ್ಲದೇ, ಮೆಣಸು & ಏಲಕ್ಕಿಯ ವ್ಯಾಪಾರದಲ್ಲಿಯೂ ಏಕಸ್ವಾಮ್ಯತೆಯನ್ನು ಕೆಲವು ಪ್ರದೇಶಗಳಲ್ಲಿ ಪಡೆದುಕೊಂಡು ಪ್ರಭಲರಾದರು.

6. ಹೈದ್ರಾಬಾದ್ ಕರ್ನಾಟಕದ ಪ್ರದೇಶಗಳಾವವು?

 ಹೈದ್ರಾಬಾದ ನಿಜಾಮನ ಆಳ್ವಿಕೆ ಒಳಪಟ್ಟಿದ್ದ ಇಂದಿನ ಬೀದರ್, ಗುಲ್ಬರ್ಗಾ, ಯಾದಗಿರಿ, ಕೊಪ್ಪಳ, ರಾಯಚೂರು & ಬಳ್ಳಾರಿ ಜಿಲ್ಲೆಗಳನ್ನು ಹೈದರಾಬಾದ ಕರ್ನಾಟಕದ ಪ್ರದೇಶಗಳೆಂದು ಗುರುತಿಸಲಾಗಿದೆ.

7. ಮುಂಬೈ ಪ್ರಾಂತ್ಯದ ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶಗಳಾವವು?

 ಬೆಳಗಾವಿ, ಬಿಜಾಪುರ, ಧಾರವಾಡ ಹಾಗೂ ಉತ್ತರಕನ್ನಡದ ಭಾಗಗಳು ಮುಂಬೈ ಪ್ರಾಂತ್ಯದ ಆಳ್ವಿಕೆಗೆ ಒಳಪಟ್ಟಿದ್ದವು.

8. ಕೊಡಗಿನ ದಂಗೆಯಲ್ಲಿ ಗುಡ್ಡೇಮನೆ ಅಪ್ಪಯ್ಯಗೌಡರ ಪಾತ್ರವನ್ನು ವಿವರಿಸಿ. • ಕೊಡಗಿನಲ್ಲಿ ಇಂಗ್ಲಿಷರ ವಿರುದ್ಧ ಗುಡ್ಡೇಮನೆ ಅಪ್ಪಯ್ಯಗೌಡರು ಹೋರಾಟದ ನೇತೃತ್ವವನ್ನು ವಹಿಸಿದರು. • ಈ ಹೋರಾಟವನ್ನು ಇಂಗ್ಲಿಷರು ತಮ್ಮ ಕೊಡಗು ದಿವಾನರ ಮೂಲಕ ಹತ್ತಿಕ್ಕಿದರು. • ಮದ್ರಾಸಿನಿಂದ ಬಂದ ಸೈನ್ಯವು ಮಂಗಳೂರಿನಿಂದ ಹೋರಾಟಗಾರರನ್ನು ಹಿಮ್ಮೆಟ್ಟಿಸಿತು. • ಹೋರಾಟಗಾರರಲ್ಲಿ ಅಪ್ಪಯ್ಯಗೌಡರನ್ನು ಒಳಗೊಂಡು ಕೆಲವರನ್ನು ನೇಣು ಹಾಕಲಾಯಿತು. ಮತ್ತೆ ಕೆಲವರನ್ನು ಗಡಿಪಾರು ಮಾಡಲಾಯಿತು.

9. ಮುಂಬೈ ಕರ್ನಾಟಕವು ಹೇಗೆ ಬ್ರಿಟಿಷರ ವಶವಾಯಿತು? • ಬೆಳಗಾವಿ, ಬಿಜಾಪೂರ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಮುಂಬೈ – ಕರ್ನಾಟಕದ ಪ್ರಾಂತ್ಯಗಳೆಂದು ಕರೆಯಲ್ಪಡುತ್ತವೆ. • 17 & 18 ನೇ ಶತಮಾನದಲ್ಲಿ ಮೊಗಲರ & ಮರಾಠರ ವಶದಲ್ಲಿದ್ದವು. ನಂತರ ಹೈದರಾಲಿ & ಟಿಪ್ಪುವಿನ ವಶವಾದವು. • ಸೊಂದಾ, ಹೊನ್ನಾವರಗಳು ಟಿಪ್ಪುವಿನ ನಂತರ ಇಂಗ್ಲಿಷರ ವಶವಾದವು. • ಧಾರವಾಡ, ಬೆಳಗಾವಿ, ನರಗುಂದ ಮುಂತಾದ ಭಾಗಗಳು ಮರಾಠರ ಪತನದ ನಂತರ ಇಂಗ್ಲಿಷರ ಮುಂಬೈ ಪ್ರಾಂತ್ಯಕ್ಕೆ ಸೇರಿದವು.

10. ಕೊಡಗಿನ ದೊರೆ ಚಿಕ್ಕ ವೀgರ Áಜನನ್ನು ಬ್ರಿಟಿಷರ ಅಧಿಕಾರದಿಂದ ಕೆಳಗಿಳಿಸಲು ಕಾರಣವೇನು?

  ಚಿಕ್ಕ ವೀರರಾಜನು ಕ್ರೂರಿಯೂ, ಪ್ರಜಾಪೀಡಕನೂ ಆಗಿದ್ದರಿಂದ ಇಂಗ್ಲಿಷರ ಇವನನ್ನು ಪದಚ್ಯುತಗೊಳಿಸಿ ಗಡಿಪಾರು ಮಾಡಿದರು.

11. ಶ್ರೀರಂಗಪಟ್ಟಣ ಒಪ್ಪಂದದ ಶರತ್ತುಗಳೇನು?

  3ನೇ ಆಂಗ್ಲೋ-ಮೈಸೂರು ಯುದ್ದದಲ್ಲಿ ಸೋತ ಟಿಪ್ಪುವು ಕ್ರಿಶ 1792ರಲ್ಲಿ ಶ್ರೀರಂಗಪಟ್ಟಣ ಒಪ್ಪಂದಕ್ಕೆ ಸಹಿ ಹಾಕಿದನು. ಈ ಒಪ್ಪಂದದ ಶರತ್ತುಗಳೆಂದರೆ –

• ತನ್ನ ಅರ್ದs ರಾಜ್ಯವನ್ನು ಬ್ರಿಟಿಷ್ ಮಿv್ರÀಪಡೆಗಳಿಗೆ ಬಿಟ್ಟು ಕೊಡಬೇಕು. • ಯುದ್ದ ಪರಿಹಾರವಾಗಿ 330 ಲಕ್ಷ ರೂಪಾಯಿಗಳನ್ನು ಕೊಡಬೇಕು. • ಯುದ್ದ ಪರಿಹಾರ ಕೊಡುವವರೆಗೆ ಟಿಪ್ಪುವಿನ ಇಬ್ಬರು ಮಕ್ಕಳನ್ನು ಇಂಗ್ಲಿಷರ ಒತ್ತೆಯಾಳಾಗಿ ಇಟ್ಟುಕೊಂಡರು.