"ಸಪ್ತಾಕ್ಷರಿ ಮಂತ್ರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧ ನೇ ಸಾಲು: ೧ ನೇ ಸಾಲು:
=ಪರಿಕಲ್ಪನಾ ನಕ್ಷೆ=
+
===ಪರಿಕಲ್ಪನಾ ನಕ್ಷೆ===
=ಹಿನ್ನೆಲೆ/ಸಂದರ್ಭ=
+
===ಕಲಿಕೋದ್ದೇಶಗಳು===
=ಕಲಿಕೋದ್ದೇಶಗಳು=
 
  
 
==== ಪಾಠದ ಉದ್ದೇಶ ====
 
==== ಪಾಠದ ಉದ್ದೇಶ ====
೧೬ ನೇ ಸಾಲು: ೧೫ ನೇ ಸಾಲು:
 
#ಗದ್ಯದ ಪ್ರಕಾರವನ್ನು /ಪದ ಬಳಕೆ ಅರ್ಥೈಸುವುದು
 
#ಗದ್ಯದ ಪ್ರಕಾರವನ್ನು /ಪದ ಬಳಕೆ ಅರ್ಥೈಸುವುದು
  
=ಕವಿ ಪರಿಚಯ =
+
=== ಹಿನ್ನೆಲೆ/ಸಂದರ್ಭ ===
 +
ಎಷ್ಟೇ ಕಷ್ಟಗಳಿದ್ದರೂ ಮನಸ್ಸನ್ನೇ ಸುಡುವ ಚಿಂತೆಯಿದ್ದರೂ ನವಿರಾದ ಹಾಸ್ಯ ಅವುಗಳನ್ನು ಸ್ವಲ್ಪಕಾಲ ಮರೆಯುವಂತೆ ಮಾಡುತ್ತದೆ. ‘ನಗು’ ಮಾನವನನ್ನು ಗೆಲುವಿನ ಹಾದಿಗೆ ತರುವ ದಿವ್ಯ ಔಷಧ.
 +
 
 +
ಶ್ರೀರಾಮೇಶ್ವಮೇಧ’ ಕೃತಿಯಲ್ಲಿ ಮಡದಿ ಮನೋರಮೆ  (ನಿಜನಾಮ ಕಮಲಬಾಯಿ) ಯೊಡನೆ
 +
 
 +
ಸಂವಾದದಲ್ಲಿ ನಿರತನಾದಾಗ ವ್ಯಕ್ತವಾಗುವ ಮಾತುಗಳು ಮುದ್ದಣ್ಣನ ಕಷ್ಟಜೀವನದ ಪ್ರತೀಕವೇ ಆಗಿವೆ. ಪ್ರಕೃತ ಗದ್ಯಭಾಗದಲ್ಲಿ ಸಪ್ತಾಕ್ಷರಿ ಮಂತ್ರದ ಶ್ರೇಷ್ಠತೆಯ ನೆಪದೊಂದಿಗೆ ತನ್ನ ಹಾಗು ಅಂದಿನ ಕವಿಗಳ ದಾರಿದ್ರ್ಯವನ್ನು ಪರೋಕ್ಷವಾಗಿ ಮುದ್ದಣ ವ್ಯಕ್ತಪಡಿಸಿದ್ದಾನೆ. ಹೊರನೋಟಕ್ಕೆ ಕುತೂಹಲಕಾರಿಯೂ ಹಾಸ್ಯಮಯವೂ ಆಗಿದ್ದರೆ ಒಳಗೆ ದಾರುಣ್ಯ ವ್ಯಥೆಯ ಕಥೆ ಅಡಗಿಕೊಂಡು ಕರುಣಾರಣ ಅಂತರ್ಗತವಾಗಿ ಹರಿಯುವುದನ್ನು ಇಲ್ಲಿ ಕಾಣಬಹುದು
 +
 
 +
===ಕವಿ ಪರಿಚಯ ===
 
ಮುದ್ದಣ್ಣ ಎಂದು ಪ್ರಖ್ಯಾತರಾದ ನಂದಳಿಕೆ ಲಕ್ಷ್ಮೀ ನಾರಣಪ್ಪನವರು  ದಿನಾಂಕ 24 ಜನವರಿ 1870ರಂದು ಉಡುಪಿ ಮತ್ತು ಕಾರ್ಕಳದ ಮಧ್ಯದಲ್ಲಿರುವ ನಂದಳಿಕೆ ಗ್ರಾಮದಲ್ಲಿ ಜನಿಸಿದರು.ನಂದಳಿಕೆ ತಂದೆ ಪಾಠಾಳಿ ತಿಮ್ಮಪ್ಪಯ್ಯ, ತಾಯಿ ಮಹಾಲಕ್ಷ್ಮಮ್ಮ. ನಾರಣಪ್ಪನವರ ಪ್ರಾಥಮಿಕ ಶಿಕ್ಷಣ ನಂದಳಿಕೆಯಲ್ಲಿಯೇ ಆಯಿತು. ಮುಂದಿನ ವ್ಯಾಸಂಗಕ್ಕೆ ಉಡುಪಿಯ ಮಠವನ್ನು  ಆಶ್ರಯಿಸಿದರು. ಇಂಗ್ಲಿಷ್ ಶಾಲೆಗೆ ಸೇರಲು ಫೀಸು ಕೊಡಲಾರದೆ  ಕನ್ನಡ ಶಾಲೆಗೆ ಸೇರಿದರು. ಪ್ರೌಢ ಶಿಕ್ಷಣ ಮುಗಿಸಿ ಉಪಾಧ್ಯಾಯರ ತರಬೇತು ಪಡೆದರು.
 
ಮುದ್ದಣ್ಣ ಎಂದು ಪ್ರಖ್ಯಾತರಾದ ನಂದಳಿಕೆ ಲಕ್ಷ್ಮೀ ನಾರಣಪ್ಪನವರು  ದಿನಾಂಕ 24 ಜನವರಿ 1870ರಂದು ಉಡುಪಿ ಮತ್ತು ಕಾರ್ಕಳದ ಮಧ್ಯದಲ್ಲಿರುವ ನಂದಳಿಕೆ ಗ್ರಾಮದಲ್ಲಿ ಜನಿಸಿದರು.ನಂದಳಿಕೆ ತಂದೆ ಪಾಠಾಳಿ ತಿಮ್ಮಪ್ಪಯ್ಯ, ತಾಯಿ ಮಹಾಲಕ್ಷ್ಮಮ್ಮ. ನಾರಣಪ್ಪನವರ ಪ್ರಾಥಮಿಕ ಶಿಕ್ಷಣ ನಂದಳಿಕೆಯಲ್ಲಿಯೇ ಆಯಿತು. ಮುಂದಿನ ವ್ಯಾಸಂಗಕ್ಕೆ ಉಡುಪಿಯ ಮಠವನ್ನು  ಆಶ್ರಯಿಸಿದರು. ಇಂಗ್ಲಿಷ್ ಶಾಲೆಗೆ ಸೇರಲು ಫೀಸು ಕೊಡಲಾರದೆ  ಕನ್ನಡ ಶಾಲೆಗೆ ಸೇರಿದರು. ಪ್ರೌಢ ಶಿಕ್ಷಣ ಮುಗಿಸಿ ಉಪಾಧ್ಯಾಯರ ತರಬೇತು ಪಡೆದರು.
 
ನಾರಾಣಪ್ಪನವರ  ದೇಹದಾರ್ಢ್ಯ ನೋಡಿ ವ್ಯಾಯಾಮ ಶಿಕ್ಷಕ ತರಬೇತಿಗಾಗಿ ಅವರನ್ನು ಮದರಾಸಿಗೆ ರವಾನೆ ಮಾಡಲಾಯಿತು. ತರಬೇತಿ ಮುಗಿಸಿ ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ ವ್ಯಾಯಾಮ ಶಿಕ್ಷಕರಾದರು. ಇದೇ ಶಾಲೆಯಲ್ಲಿದ್ದ ಮಳಲಿ ಸುಬ್ಬರಾಯರ ಸಾಹಿತ್ಯ ಮಾರ್ಗದರ್ಶನದ ಸೌಭಾಗ್ಯ ನಾರಣಪ್ಪನವರಿಗೆ ಲಭಿಸಿತು. ಬಾಲ್ಯದ ಆಸಕ್ತಿಗನುಗುಣವಾಗಿ ಯಕ್ಷಗಾನ ನಾಟಕಗಳ ರಚನೆಯಲ್ಲಿ ತೊಡಗಿಕೊಂಡರು.
 
ನಾರಾಣಪ್ಪನವರ  ದೇಹದಾರ್ಢ್ಯ ನೋಡಿ ವ್ಯಾಯಾಮ ಶಿಕ್ಷಕ ತರಬೇತಿಗಾಗಿ ಅವರನ್ನು ಮದರಾಸಿಗೆ ರವಾನೆ ಮಾಡಲಾಯಿತು. ತರಬೇತಿ ಮುಗಿಸಿ ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ ವ್ಯಾಯಾಮ ಶಿಕ್ಷಕರಾದರು. ಇದೇ ಶಾಲೆಯಲ್ಲಿದ್ದ ಮಳಲಿ ಸುಬ್ಬರಾಯರ ಸಾಹಿತ್ಯ ಮಾರ್ಗದರ್ಶನದ ಸೌಭಾಗ್ಯ ನಾರಣಪ್ಪನವರಿಗೆ ಲಭಿಸಿತು. ಬಾಲ್ಯದ ಆಸಕ್ತಿಗನುಗುಣವಾಗಿ ಯಕ್ಷಗಾನ ನಾಟಕಗಳ ರಚನೆಯಲ್ಲಿ ತೊಡಗಿಕೊಂಡರು.
೨೮ ನೇ ಸಾಲು: ೩೪ ನೇ ಸಾಲು:
 
ವಿಕಿಪೀಡಿಯಾದಲ್ಲಿರುವ [https://kn.wikipedia.org/wiki/ಮುದ್ದಣ ಮುದ್ದಣ್ಣನ ಮಾಹಿತಿ]
 
ವಿಕಿಪೀಡಿಯಾದಲ್ಲಿರುವ [https://kn.wikipedia.org/wiki/ಮುದ್ದಣ ಮುದ್ದಣ್ಣನ ಮಾಹಿತಿ]
  
=ಶಿಕ್ಷಕರಿಗೆ ಟಿಪ್ಪಣಿ=
+
===ಶಿಕ್ಷಕರಿಗೆ ಟಿಪ್ಪಣಿ===
=ಹೆಚ್ಚುವರಿ ಸಂಪನ್ಮೂಲ=
+
===ಹೆಚ್ಚುವರಿ ಸಂಪನ್ಮೂಲ===
 
'ಕನ್ನಡ ದೀವಿಗೆ'ಯಲ್ಲಿನ 'ಅಂತರಾಳ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ [http://kannadadeevige.blogspot.in/2013/11/8.html ಇಲ್ಲಿ ಕ್ಲಿಕ್ ಮಾಡಿರಿ]
 
'ಕನ್ನಡ ದೀವಿಗೆ'ಯಲ್ಲಿನ 'ಅಂತರಾಳ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ [http://kannadadeevige.blogspot.in/2013/11/8.html ಇಲ್ಲಿ ಕ್ಲಿಕ್ ಮಾಡಿರಿ]
 
{{Youtube|8LqhvhOdhqs&t}}
 
{{Youtube|8LqhvhOdhqs&t}}
  
=ಸಾರಾಂಶ=
+
===ಸಾರಾಂಶ===
 
ಸರಳ ಗಧ್ಯಾನುವಾದಕ್ಕೆ ಕನ್ನಡ ದೀವಿಗೆಯ ಸಹಾಯ ಪಡೆಯಲಾಗಿದೆ
 
ಸರಳ ಗಧ್ಯಾನುವಾದಕ್ಕೆ ಕನ್ನಡ ದೀವಿಗೆಯ ಸಹಾಯ ಪಡೆಯಲಾಗಿದೆ
  

೦೭:೧೦, ೩ ಅಕ್ಟೋಬರ್ ೨೦೧೯ ನಂತೆ ಪರಿಷ್ಕರಣೆ

ಪರಿಕಲ್ಪನಾ ನಕ್ಷೆ

ಕಲಿಕೋದ್ದೇಶಗಳು

ಪಾಠದ ಉದ್ದೇಶ

  1. ಗದ್ಯ ಸಾಹಿತ್ಯವನ್ನು ಅರ್ಥೈಸುವುದು
  2. ಗದ್ಯ ಸಾಹಿತ್ಯ ಪರಿಚಯದ ಮೂಲಕ ಮಾನವನ ಸಾಮಾನ್ಯ ಕೌಟುಂಬಿಕ ಪರಿಸರವನ್ನು ತಿಳಿಯುವುದು
  3. ಅನ್ನ ಹಣ ಮತ್ತು ಸರಳ ಜೀವನದ ಮಹತ್ವವನ್ನು ಅರಿಯುವುದು
  4. ಗದ್ಯ ಗುಣ ಲಕ್ಷಣಗಳನ್ನು ಅರ್ಥೈಸುವುದು

ಭಾಷೆ/ಛಂದಸ್ಸಿನ ಉದ್ದೇಶಗಳು

  1. ಮಾತುಗಾರಿಕೆ ಮತ್ತು ಚರ್ಚೆಯ ಮೂಲಕ ಗದ್ಯದ ಅರ್ಥವನ್ನು ತಿಳಿಯುವುದು
  2. ಕಠಿಣ ಪದಕ್ಕೆ ಅರ್ಥ ಹುಡುಕುವ ಮೂಲಕ ಅದರ ಸ್ವಂತವಾಕ್ಯ ರಚನೆಯನ್ನು ಕಲಿಯುವುದು
  3. ಅರ್ಥೈಸಿಕೊಂಡ ಗಧ್ಯಭಾಗವನ್ನು ಸಹವರ್ತಿಗಳೊಂದಿಗೆ ಸಂವಹನ ಮಾಡುವುದು
  4. ನಡುಗನ್ನಡವನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
  5. ಗದ್ಯ ಸಾಹಿತ್ಯದ ಇತರೆ ಸಾಹಿತ್ಯಗಳನ್ನು ಓದಿ ಅರ್ಥೈಸುವುದು
  6. ಗದ್ಯದ ಪ್ರಕಾರವನ್ನು /ಪದ ಬಳಕೆ ಅರ್ಥೈಸುವುದು

ಹಿನ್ನೆಲೆ/ಸಂದರ್ಭ

ಎಷ್ಟೇ ಕಷ್ಟಗಳಿದ್ದರೂ ಮನಸ್ಸನ್ನೇ ಸುಡುವ ಚಿಂತೆಯಿದ್ದರೂ ನವಿರಾದ ಹಾಸ್ಯ ಅವುಗಳನ್ನು ಸ್ವಲ್ಪಕಾಲ ಮರೆಯುವಂತೆ ಮಾಡುತ್ತದೆ. ‘ನಗು’ ಮಾನವನನ್ನು ಗೆಲುವಿನ ಹಾದಿಗೆ ತರುವ ದಿವ್ಯ ಔಷಧ.

ಶ್ರೀರಾಮೇಶ್ವಮೇಧ’ ಕೃತಿಯಲ್ಲಿ ಮಡದಿ ಮನೋರಮೆ (ನಿಜನಾಮ ಕಮಲಬಾಯಿ) ಯೊಡನೆ

ಸಂವಾದದಲ್ಲಿ ನಿರತನಾದಾಗ ವ್ಯಕ್ತವಾಗುವ ಮಾತುಗಳು ಮುದ್ದಣ್ಣನ ಕಷ್ಟಜೀವನದ ಪ್ರತೀಕವೇ ಆಗಿವೆ. ಪ್ರಕೃತ ಗದ್ಯಭಾಗದಲ್ಲಿ ಸಪ್ತಾಕ್ಷರಿ ಮಂತ್ರದ ಶ್ರೇಷ್ಠತೆಯ ನೆಪದೊಂದಿಗೆ ತನ್ನ ಹಾಗು ಅಂದಿನ ಕವಿಗಳ ದಾರಿದ್ರ್ಯವನ್ನು ಪರೋಕ್ಷವಾಗಿ ಮುದ್ದಣ ವ್ಯಕ್ತಪಡಿಸಿದ್ದಾನೆ. ಹೊರನೋಟಕ್ಕೆ ಕುತೂಹಲಕಾರಿಯೂ ಹಾಸ್ಯಮಯವೂ ಆಗಿದ್ದರೆ ಒಳಗೆ ದಾರುಣ್ಯ ವ್ಯಥೆಯ ಕಥೆ ಅಡಗಿಕೊಂಡು ಕರುಣಾರಣ ಅಂತರ್ಗತವಾಗಿ ಹರಿಯುವುದನ್ನು ಇಲ್ಲಿ ಕಾಣಬಹುದು

ಕವಿ ಪರಿಚಯ

ಮುದ್ದಣ್ಣ ಎಂದು ಪ್ರಖ್ಯಾತರಾದ ನಂದಳಿಕೆ ಲಕ್ಷ್ಮೀ ನಾರಣಪ್ಪನವರು ದಿನಾಂಕ 24 ಜನವರಿ 1870ರಂದು ಉಡುಪಿ ಮತ್ತು ಕಾರ್ಕಳದ ಮಧ್ಯದಲ್ಲಿರುವ ನಂದಳಿಕೆ ಗ್ರಾಮದಲ್ಲಿ ಜನಿಸಿದರು.ನಂದಳಿಕೆ ತಂದೆ ಪಾಠಾಳಿ ತಿಮ್ಮಪ್ಪಯ್ಯ, ತಾಯಿ ಮಹಾಲಕ್ಷ್ಮಮ್ಮ. ನಾರಣಪ್ಪನವರ ಪ್ರಾಥಮಿಕ ಶಿಕ್ಷಣ ನಂದಳಿಕೆಯಲ್ಲಿಯೇ ಆಯಿತು. ಮುಂದಿನ ವ್ಯಾಸಂಗಕ್ಕೆ ಉಡುಪಿಯ ಮಠವನ್ನು ಆಶ್ರಯಿಸಿದರು. ಇಂಗ್ಲಿಷ್ ಶಾಲೆಗೆ ಸೇರಲು ಫೀಸು ಕೊಡಲಾರದೆ ಕನ್ನಡ ಶಾಲೆಗೆ ಸೇರಿದರು. ಪ್ರೌಢ ಶಿಕ್ಷಣ ಮುಗಿಸಿ ಉಪಾಧ್ಯಾಯರ ತರಬೇತು ಪಡೆದರು. ನಾರಾಣಪ್ಪನವರ ದೇಹದಾರ್ಢ್ಯ ನೋಡಿ ವ್ಯಾಯಾಮ ಶಿಕ್ಷಕ ತರಬೇತಿಗಾಗಿ ಅವರನ್ನು ಮದರಾಸಿಗೆ ರವಾನೆ ಮಾಡಲಾಯಿತು. ತರಬೇತಿ ಮುಗಿಸಿ ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ ವ್ಯಾಯಾಮ ಶಿಕ್ಷಕರಾದರು. ಇದೇ ಶಾಲೆಯಲ್ಲಿದ್ದ ಮಳಲಿ ಸುಬ್ಬರಾಯರ ಸಾಹಿತ್ಯ ಮಾರ್ಗದರ್ಶನದ ಸೌಭಾಗ್ಯ ನಾರಣಪ್ಪನವರಿಗೆ ಲಭಿಸಿತು. ಬಾಲ್ಯದ ಆಸಕ್ತಿಗನುಗುಣವಾಗಿ ಯಕ್ಷಗಾನ ನಾಟಕಗಳ ರಚನೆಯಲ್ಲಿ ತೊಡಗಿಕೊಂಡರು.

ಮುದ್ದಣನವರ ಪ್ರಥಮಕೃತಿ ‘ರತ್ನಾವತೀ ಕಲ್ಯಾಣ’. ನಂತರದಲ್ಲಿ ಮೂಡಿದ್ದು ‘ಕುಮಾರ ವಿಜಯ’(ಯಕ್ಷಗಾನ ಕೃತಿಗಳು). ತಮ್ಮ ಮಾರ್ಗದರ್ಶಕ ಗುರುಗಳಾದ ಸುಬ್ಬರಾಯರಿಗೆ ಕುಂದಾಪುರಕ್ಕೆ ವರ್ಗಾವಣೆಯಾದಾಗ ಅವರ ಸಾನಿಧ್ಯ ಬಯಸಿದ ಮುದ್ದಣ್ಣ ತಾವೂ ವರ್ಗ ಮಾಡಿಸಿಕೊಂಡರು.ಮುಂದೆ ಸಂಸ್ಕೃತ ಕಲಿಯಲು ಪ್ರಾರಂಭಿಸಿದರು. ಅದ್ಭುತ ರಾಮಾಯಣವನ್ನು ಹೇಳಿಸಿಕೊಂಡು ಹಳಗನ್ನಡದಲ್ಲಿ ರಚನೆ ಮಾಡಿದರು. ಮೈಸೂರಿನ ‘ಕಾವ್ಯಮಂಜರಿ ಪತ್ರಿಕೆ’ಯ ಸಂಪಾದಕರಲ್ಲಿ ಪ್ರಕಟಣೆಯ ಕೋರಿಕೆ ಸಲ್ಲಿಸಿ ಕರ್ತೃ ಗೊತ್ತಿಲ್ಲವೆಂದು ತಿಳಿಸಿದರು. ಈ ಕೃತಿ 1895ರಲ್ಲಿ ಪತ್ರಿಕೆಯಲ್ಲಿ ಪ್ರಕಟಗೊಂಡು ಸಂತೋಷ ಪಟ್ಟರು. ‘ಶ್ರೀರಾಮ ಪಟ್ಟಾಭಿಷೇಕಂ’ ಎಂಬ ಕೃತಿಯನ್ನು ಷಟ್ಪದಿಯಲ್ಲಿ ರಚಿಸಿದರು. ಮಹಾಲಕ್ಷ್ಮಿ ಎಂಬ ಕವಯಿತ್ರಿ ಹೆಸರಿನಲ್ಲಿ ಈ ಕೃತಿ ಪ್ರಕಟಣೆಗೊಂಡಿತು. ಎರಡೂ ಪುಸ್ತಕಗಳೂ ಮದರಾಸು ವಿಶ್ವವಿದ್ಯಾಲಯದ ಪರೀಕ್ಷೆಗಳಿಗೆ ಪಠ್ಯಪುಸ್ತಕಗಳಾದವು. ಕೃತಿಕಾರನ ಹೆಸರು ತಿಳಿಸದಿದ್ದುದರಿಂದ ಮುದ್ದಣನವರಿಗೆ ಇದಕ್ಕೆ ಸಲ್ಲಬೇಕಾದ ಹಣ ಮಾತ್ರ ಸಲ್ಲಲಿಲ್ಲವೆಂಬುದು ದುರಂತವೇ ಸರಿ.

‘ಓರ್ವ ಕನ್ನಡಿಗ’, ‘ಚಕ್ರಧಾರಿ’, ‘ರಂಗಭಟ್ಟನಾತ್ಮಜೆ’, ‘ಲಕ್ಷ್ಮೀನಾರಾಯಣ’ ಎಂಬ ಹೆಸರಿನಿಂದ ಮುದ್ದಣ್ಣ ಕೃತಿ ರಚನೆ ಮಾಡಿದರು. ‘ರಾಮಾಶ್ವಮೇಧ’ವನ್ನು ರಚಿಸುವಾಗ ಯಾವ ರೀತಿಯಲ್ಲಿ ಕಾವ್ಯವನ್ನು ರಚಿಸಲಿ 'ಪದ್ಯದಲ್ಲೋ ಗದ್ಯದಲ್ಲೋ' ಎಂದಾಗ ‘ಪದ್ಯವದ್ಯಂ, ಗದ್ಯ ಹೃದ್ಯಂ. ಹೃದ್ಯಮಪ ಗದ್ಯದೊಳೆ ಪೇಳ್ವುದು’ ಎಂದಾಗ ಮುದ್ದಣ-ಮನೋರಮ ಎಂಬ ನಲ್ಲ ನಲ್ಲೆಯರ ಸರಸ ಸಂಭಾಷಣೆಯ ಮೂಲಕ ಈ ಕೃತಿ ಅನಾವರಣಗೊಳ್ಳುವುದು ‘ಕನ್ನಡ ನವೋದಯದ ಮುಂಜಾನೆ ಕೋಳಿ’ ಎಂಬ ಕೀರ್ತಿಯನ್ನು ಮುದ್ದಣ್ಣನವರಿಗೆ ಸಲ್ಲಿವಂತೆಮಾಡಿದೆ. ಇದನ್ನೇ ‘ಸಾಮಾನ್ಯ ಚಿತ್ರಕ್ಕೆ ಸುವರ್ಣ ಚೌಕಟ್ಟು’ ಎಂದು ವಿದ್ವಾಂಸರಾದ ಎಸ್.ವಿ. ರಂಗಣ್ಣನವರು ಪ್ರಶಂಸಿಸಿದ್ದಾರೆ.

ಮುದ್ದಣ್ಣನವರು ಕ್ಷಯರೋಗ ತಗುಲಿದ ಕಾರಣ ತಮ್ಮ 32ನೇ ವಯಸ್ಸಿನಲ್ಲಿ (16-2-1901) ನಿಧನರಾದರು. ಇವರ 75ನೆಯ ವರ್ಷದ ಸ್ಮರಣೆಯ ನೆನಪಿಗಾಗಿ 1976ರಲ್ಲಿ ‘ಮುದ್ದಣ ಪ್ರಶಸ್ತಿ’ ಗ್ರಂಥವನ್ನು ಪ್ರಕಟಿಸಲಾಯಿತು.

ವಿಕಿಪೀಡಿಯಾದಲ್ಲಿರುವ ಮುದ್ದಣ್ಣನ ಮಾಹಿತಿ

ಶಿಕ್ಷಕರಿಗೆ ಟಿಪ್ಪಣಿ

ಹೆಚ್ಚುವರಿ ಸಂಪನ್ಮೂಲ

'ಕನ್ನಡ ದೀವಿಗೆ'ಯಲ್ಲಿನ 'ಅಂತರಾಳ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ


ಸಾರಾಂಶ

ಸರಳ ಗಧ್ಯಾನುವಾದಕ್ಕೆ ಕನ್ನಡ ದೀವಿಗೆಯ ಸಹಾಯ ಪಡೆಯಲಾಗಿದೆ

ಅಂತರಾಳ ಗದ್ಯಭಾಗದ ಸರಳ ಗದ್ಯಾನುವಾದ

ಹೀಗೆ ಬಂದೊದಗಿದ ಚಳಿಗಾಲದಲ್ಲಿ ರಾಘವನ ಯಜ್ಞಾಶ್ವವು ಅರಣ್ಯಕ ಎಂಬ ತಪಸ್ವಿಯ ಪವಿತ್ರ ಆಶ್ರಮಕ್ಕೆ ಪ್ರವೇಶಿಸುತ್ತಿರುವುದನ್ನು ಕಂಡು ಶತ್ರುಘ್ನ ಮೊದಲಾದವರು (ಜಾಂಬವ, ಹನುಮಂತ, ಸುಗ್ರೀವಾದಿ ಕಪಿವೀರರು ಮೊದಲಾದವರು) ಮುನಿಗಳ ದರ್ಶನಕ್ಕೆಂದು ಆಶ್ರಮದ ಒಳಗೆ ಹೋದರು. ತಪಸ್ವಿಗಳ ಕಾಲಿಗೆ ಬಿದ್ದು ನಮಸ್ಕರಿಸಿದರು. ಆಕಸ್ಮಿಕವಾಗಿ ಆಗಮಿಸಿದ ಈ ಅತಿಥಿಗಳನ್ನು ಅರಣ್ಯಕ ಮುನಿಗಳು ಬಹಳ ಗೌರವದಿಂದ ಬರಮಾಡಿಕೊಂಡು ತಮ್ಮ ಆತಿಥ್ಯದಿಂದ ಸತ್ಕರಿಸಿದರು. ನಂತರ ಶ್ರೀರಾಮನನ್ನು ಕುರಿತ ಸತ್ಕಥೆಯ ವಿನೋದವಾದ ಸಂಭಾಷಣೆಯಲ್ಲಿ...... [ಹೀಗೆ ಕಥೆ ಹೇಳುತ್ತಿದ್ದ ಮುದ್ದಣನು ಇನ್ನು ಮುಂದುವರಿದು ಏನೋ ಹೇಳಬೇಕೆಂದು ಮಾತು ಮುಂದುವರಿಸುತ್ತಿರುವಾಗ ಮನೋರಮೆಗೆ ಮಧ್ಯದಲ್ಲಿ ಸಂಶಯವುಂಟಾಗಿ ಮುದ್ದಣನನ್ನು ಮುಂದಿನಂತೆ ಕೇಳುತ್ತಾಳೆ. ಆಗ ಅವರಿಬ್ಬರ ಸಲ್ಲಾಪ ಆರಂಭವಾಗುತ್ತದೆ.]

ಮನೋರಮೆ :  ನನ್ನ ಚೆಲುವ! ಆತಿತ್ಯವೆಂದರೇನು? ಬರಿಯ ಬಾಯುಪಚಾರವೇ?

ಮುದ್ದಣ: ಅಲ್ಲ ಅಲ್ಲ, ಬರಿಯ ಬಾಯುಪಚಾರವಲ್ಲ. ಬಂದವರಿಗೆ ಕೈಗೆ, ಕಾಲಿಗೆ ನೀರುಕೊಟ್ಟು ಕುಳ್ಳಿರಿಸಿ, ಅವರಿಗೆ ರುಚಿಯಾದ ಊಟವನ್ನು ಉಣಬಡಿಸಿ, ಹೂವಿನಿಂದ ಅಲಂಕರಿಸಿ, ಪರಿಮಳಭರಿತವಾದ ಶ್ರೀಗಂಧವನ್ನು ಸಿಂಪಡಿಸಿ, ಜೊತೆಯಲ್ಲಿದ್ದು ಅವರೊಡನೆ ಹಿತವಾಗಿ ಮಾತನಾಡಿ, ಗೌರವಿಸುವುದು.

ಮನೋರಮೆ: ಹಾಗಿದ್ದರೆ, ಶತ್ರು ಸಂಹಾರಮಾಡುವಂತಹ ಸಾವಿರ ಸಾವಿರ ಲೆಕ್ಕದಲ್ಲಿದ್ದ ಅಷ್ಟೊಂದು ದೊಡ್ಡ ಸೈನ್ಯಕ್ಕೆ ಅನ್ನ-ನೀರು ಕೊಟ್ಟು (ಊಟಕೊಟ್ಟು) ತೃಪ್ತಿಪಡಿಸಿದನೆ?

ಮುದ್ದಣ: ಹೌದು ಹೌದು. ಸಾಕಷ್ಟು ರುಚಿಕರವಾದ ಭೋಜನದಿಂದ ಎಲ್ಲರನ್ನು ತೃಪ್ತಿಪಡಿಸಿದನು.

ಮನೋರಮೆ: ನನಗೆ ಇದು ಆಶ್ಚರ್ಯವೆನಿಸುತ್ತಿದೆ. ಅವನಿಗೆ (ಮುನಿಗೆ) ಇದು ಹೇಗೆ ಸಾಧ್ಯವಾಯಿತು?

ಮುದ್ದಣ: ಮತ್ತೇನು! ಮುನಿಗಳ ಒಂದು ಜಪ-ತಪ-ಮಂತ್ರದ ಶಕ್ತಿಯೇನು ಕಿರಿದೇ? ಬೇಡಿದ ದ್ರವ್ಯವನ್ನು (ವಸ್ತುವನ್ನು) ಕೂಡಲೆ ತಂದುಕೊಡುವುದು.

ಮನೋರಮೆ: ಅಷ್ಟೊಂದು ಶ್ರೇಷ್ಠವೇ! ಯಾವು ಆ ಮಂತ್ರ.

ಮುದ್ದಣ: ಯಾವುದೆಂದರೆ! ಏಕಾಕ್ಷರಿ(ಒಂದು ಅಕ್ಷರದ ಮಂತ್ರ –ಉದಾ: ಓಂ), ದ್ವ್ಯಕ್ಷರಿ (ಎರಡು ಅಕ್ಷರದ ಮಂತ್ರ. ಉದಾ: ರಾಮ ನಾಮ), ತ್ರ‍್ಯಕ್ಷರಿ (ಮೂರು ಅಕ್ಷರದ ಮಂತ್ರ. ಉದಾ: ಶಿವಾಯ), ಚತುರಾಕ್ಷರಿ (ಉದಾ: ನಾರಾಯಣ), ಪಂಚಾಕ್ಷರಿ (ಉದಾ: ನಮಃ ಶಿವಾಯ), ಷಡಕ್ಷರಿ (ಉದಾ: ಓಂ ನಮಃ ಶಿವಾಯ) ಮುಂತಾದ ಪ್ರಸಿದ್ಧ ಮಂತ್ರಗಳು ಇರುವವಲ್ಲವೇ.

ಮನೋರಮೆ: ಓಹೋ! ಇಷ್ಟೊಂದು ಜಪದ ಶಕ್ತಿಯ ಸಹಾಯ ಇರುವುದರಿಂದಲೇ ತಪಸ್ವಿಗಳು ಬೇರೊಂದರ ಚಿಂತೆಯಿಲ್ಲದಂತೆ ಇದ್ದಾರೆ.

ಮುದ್ದಣ: ಹೌದೌದು. ತಪ್ಪೇನು?

ಮನೋರಮೆ: ಅದು ಹಾಗಿರಲಿ(ಆ ಮಾತು ಹಾಗಿರಲಿ). ನಿನ್ನಂತಹ ಕವಿಗಳು ತಮ್ಮ ಮನೆ-ಸಂಸಾರದ ಬಗ್ಗೆ ಸ್ವಲ್ಪವೂ ಚಿಂತೆಮಾಡದೆ, ಸುಮ್ಮಸುಮ್ಮನೆ ಹಾಳು ಕಥೆ-ಕಾವ್ಯದಲ್ಲಿ ಭ್ರಮೆಗೊಂಡಿದ್ದಾರಲ್ಲಾ. ಅವರಿಗೇನು ಬಟ್ಟೆಯೋ, ಉಣ್ಣಲು-ತನ್ನಲು ಏನುಮಾಡುವುದು? ಆದ್ದರಿಂದ ನೀವು ಅಂತಹ ಒಂದು ಜಪವನ್ನು ಹಿರಿಯ ತಪಸ್ವಿಯಿಂದ ಉಪದೇಶ ಪಡೆದುಕೊಂಡರೆ ಆಗುವುದಿಲ್ಲವೇ?

ಮುದ್ದಣ: (ಮುಗುಳು ನಗೆಬೀರುತ್ತಾ) ಏನು! ನಮ್ಮವರ ರೀತಿಯ ಬಗ್ಗೆ ನಗುವೇ? ಆಹಾ! ನನ್ನಂತಹ ಕವಿಗಳಿಗೇನು ಕೊರತೆಯಾಗಿದೆ? ತಮ್ಮ ಒಂದೆ ಒಂದು ನುಡಿಯ ಸಾಮರ್ಥ್ಯದಿಂದ ಮೂರು ಜಗತ್ತನ್ನೆ ನಾಶಮಾಡುವ, ಹೊಗಳುವ, ತೆಗಳುವ, ಕೊಂಡುಕೊಳ್ಳುವ, ಆಳುವ, ಅನುಭವಿಸುವ,ನಾಶಪಡಿಸುವ, ಹೂತುಬಿಡುವ, ಆಜ್ಞೆಮಾಡುವ, ಬಾಳುವಂತೆ ಮಾಡುವ, ಶೃಂಗಾರಮಯವಾಗಿ ವರ್ಣಿಸುವ(ಸೊಗಸಾಗಿ ವರ್ಣಿಸುವ) ನಮ್ಮ ಕವಿಗಳ ರೀತಿಯನ್ನು ನೀನು ತಿಳಿದಿಲ್ಲ.

ಮನೋರಮೆ: (ಬಿಸವಂದಗೊಂಡು=ವಿಸ್ಮಯಗೊಂಡು) ನಿಮ್ಮವರಿಗೆ ಹಾಗಾದರೆ ಮಂತ್ರ ಸಿದ್ಧಿ ಮಾಡಿಕೊಳ್ಳವುದು ಗೊತ್ತೇ?

ಮುದ್ದಣ: ಅದಕ್ಕೆ ತಡೆಯೇನಿದೆ! ಹೆದರಿಕೆ ಏನಿದೆ!

ಮನೋರಮೆ: ನಿನ್ನಲ್ಲಿಯೂ ಇದೆಯೇ?

ಮುದ್ದಣ: ನನ್ನಲ್ಲಿ ಇದು ಹಾಸು ಹೊಕ್ಕಾಗಿದೆ. (ಸಾಕಷ್ಟಿದೆ)

ಮನೋರಮೆ: ಆಹಾ! ನೀನು ಬಹಳ ಮಹಿಮೆಗಾರ. ನಿನಗೆ ಯಾರ ಕಡೆಯಿಂದ ಉಪದೇಶವಾಯಿತು?

ಮುದ್ದಣ: ಗುರುವಿನ ಕಡೆಯಿಂದ; ಚಿಕ್ಕಂದಿನಲ್ಲೆ.

ಮನೋರಮೆ: ನನ್ನ ಪ್ರಿಯನೇ! ಅದು ಯಾವುದೋ ಆ ಮಂತ್ರವನ್ನು ನನಗೆ ಹೇಳಾ.

ಮುದ್ದಣ: ಎಲೆ ಹೆಣ್ಣೆ! ನೀನು ಯಾರಲ್ಲೂ ಎಂದೆಂದಿಗೂ ಹೇಳಬಾರದು, ಜೋಕೆ!

ಮನೋರಮೆ: ಎಂದಿಗೂ ಹೇಗೂ ಯಾರೊಡನೆಯೂ ಹೇಳುವುದಿಲ್ಲ.

ಮುದ್ದಣ: ಹಾಗಾದರೆ ಈ ರೀತಿ ಇದು. ಕೇಳು.... ಭ....ವ... (ಮಧ್ಯೆ ನಿಲ್ಲಿಸಿ) ಬೇರೆಯವರಿಗೆ ಇದನ್ನು ಹೇಳುವುದಿಲ್ಲವೆಂದು ನಂಬುವ ಹಾಗೆ ಪ್ರಮಾಣಮಾಡು.

ಮನೋರಮೆ: (ಮುದ್ದಣನ ಕೈಮೇಲೆ ಕೈ ಇಟ್ಟು ಪ್ರಮಾಣಮಾಡುತ್ತಾ) ಇದೆ. ಹಿಡಿ ಪ್ರಮಾಣ ಮಾಡುತ್ತೇನೆ. ನಿನ್ನಾಣೆ, ಕುಲದೇವರ ಮೇಲಾಣೆ! ಎಂದಿಗೂ ಬೇರೆಯವರಲ್ಲಿ ಹೇಳುವುದಿಲ್ಲ.

ಮುದ್ದಣ್ಣ: ಉಂ! .......ಭವತಿ.......ಭಿ...... (ಅಂದು ಮತ್ತೊಮ್ಮೆ ಹೇಳುವುದನ್ನು ಅರ್ಧಕ್ಕೆ ನಿಲ್ಲಿಸಿ) ನೀನು ಹೇಗಾದರೂ ಮರೆತು ಬೇರೆಯವರೊಡನೆ ಹೇಳಿ ಗುಟ್ಟನ್ನು ಬಿಟ್ಟುಕೊಟ್ಟರೆ ನಮ್ಮಿಬ್ಬರ ಬಾಳು ಪಾಳಾಗುತ್ತದೆ(ಹಾಳಾಗುತ್ತದೆ).

ಮನೋರಮೆ: (ಹುಸಿ ಮುನಿಸಿನಿಂದ) ನಾನೇನು ದಡ್ಡಿಯೇ! ಹೋಗು! ತನ್ನ ಆಣೆ, ಕಣ್ಣಿನ ಆಣೆ, ನೀನು ಹೇಳಿದಂತೆ ಕೇಳುತ್ತೇನೆ.

ಮುದ್ದಣ: (ಎಕ್ಕಟಿಯೊಳ್- ಹಾಸ್ಯದಿಂದ) ’ಭವತಿ ಭಿಕ್ಷಾಂ ದೇಹಿ’ ಎಂಬುವುದು ಇದೇ ಕವಿಗಳಿಗೆ ಸಿದ್ಧಿಸಿರುವ ಹೆಮ್ಮೆಯ ಸಪ್ತಾಕ್ಷರಿ ಮಂತ್ರವಾಗಿದೆ. ಇದನ್ನು ಯಾರ ಬಳಿಯೂ ಹೇಳಬೇಡ.

ಮನೋರಮೆ: (ಅರೆಮುನಿಸಿನಿಂದ) ಹೋಗು. ಬಿಡು ಎಲೆ ನನ್ನ ರಮಣ! ನಿನ್ನ ನುಡಿಯನ್ನು ಸಹಜ(ನಿಜ), ನಿಶ್ಚಿತ ಎಂದೇ ತಿಳಿದ. ಈ ರೀತಿಯ ಮಾಟದ, ಮೋಸದ, ಕೊಂಕು ನುಡಿ ಎಂಬುದನ್ನು ತಿಳಿದುಕೊಳ್ಳದಾದೆ. ನೀನು ಕವಿಯೋ ಇಲ್ಲ ಹಾಸ್ಯಗಾರನೊ! ನಿನ್ನ ಈ ಕಾವ್ಯದ ಸೊಗಸು ನಮ್ಮಂತಹ ಜಾಣರಲ್ಲದ (ದಡ್ಡರಾದ) ಹೆಣ್ಣುಗಳೇ ಕೊಂಡಾಡಬೇಕು(ಹೊಗಳಬೇಕು). ಅದಲ್ಲದೇ ತಿಳಿದವರು(ಬುದ್ಧಿವಂತರು) ಇಷ್ಟಪಡುವರೇ?

ಮುದ್ದಣ: ಸಾಕು ಈ ವಿನೋದ(ಚೇಷ್ಟೆ). ಮುಂದಿನ ಕಥೆಯನ್ನು ಕೇಳು. (ಎಂದು ಕಥೆಯನ್ನು ಮುಂದುವರೆಸುತ್ತಾನೆ)

ಸಪ್ತಾಕ್ಷರಿ ಪಾಠದ ಮಕ್ಕಳ ವಾಚನ


ಮುದ್ದಣ್ಣ ಮನೋರಮೆಯರ ಸಂವಾದದ ಗಮಕ ವಾಚನ

ಪರಿಕಲ್ಪನೆ ೧

ಚಟುವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಚಟುವಟಿಕೆ-೨

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ

ಮೌಲ್ಯಮಾಪನ

ಭಾಷಾ ಚಟುವಟಿಕೆಗಳು/ ಯೋಜನೆಗಳು

ಪಠ್ಯ ಬಗ್ಗೆ ಹಿಮ್ಮಾಹಿತಿ