Guidelines

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ವಿಷಯ ಶಿಕ್ಷಕರವೇದಿಕೆ ಕಾರ್ಯಕ್ರಮ 2015-16 ಮಾರ್ಗಸೂಚಿಗಳು ಡೌನ್‌ಲೋಡ್ ಮಾಡಲು ಇಲ್ಲಿ ಒತ್ತಿರಿ

ವಿಷಯ: 2015-16 ನೇ ಸಾಲಿನ ವಿಷಯ ಶಿಕ್ಷಕರ ವೇದಿಕೆ ಕಾರ್ಯಕ್ರಮ ಅನುಷ್ಟಾನಕ್ಕಾಗಿ ಸೂಚಿಸಲಾಗಿರುವ ಕೆಲವು ಮಾರ್ಗಸೂಚಿಗಳು

ಕಳೆದ ನಾಲ್ಕು ವರ್ಷಗಳಿಂದಲೂ DSERT, RMSA ಸಹಯೋಗದೊಂದಿಗೆ ವಿಷಯ ಶಿಕ್ಷಕರ ವೇದಿಕೆ (ಎಸ್.ಟಿ.ಎಪ್') ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲಾಗುತ್ತಿದೆ.. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿಕ್ಷಕರುಗಳು ತಮ್ಮ ಬೋಧನಾ/ಕಲಿಕಾ ಪ್ರಕ್ರಿಯೆಯಲ್ಲಿ ಐ.ಸಿ.ಟಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಸ್ವಕಲಿಕೆ ಮತ್ತು ಸಹವರ್ತಿ ಕಲಿಕೆಯಲ್ಲಿ ತೊಡಗಲು ಅವಕಾಶವಾಗಿದೆ. 'ಎಸ್.ಟಿ.ಎಪ್' ಕಾರ್ಯಕ್ರಮದ ಮೂಲಕ ರಚನೆಯಾಗುವ ಮತ್ತು ವೇದಿಕೆಯಲ್ಲಿನ ಶಿಕ್ಷಕರು ಬಳಸುತ್ತಿರುವ ಭೋದನಾ ಕಲಿಕಾ ಸಂಪನ್ಮೂಲಗಳನ್ನು ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ (ಕೊಯರ್) ಪುಟದಲ್ಲಿ ದಾಖಲಿಸಲಾಗುತ್ತಿದೆ.ಈ ಪ್ರಸಕ್ತ ಸಾಲಿನಲ್ಲಿಯೂ 'ಎಸ್.ಟಿ.ಎಪ್' ಕಾರ್ಯಕ್ರಮವನ್ನು ಮುಂದುವರೆಸಲಾಗುತ್ತಿದೆ..

2015-16 ನೇ ಸಾಲಿನಲ್ಲಿ ಅನುಷ್ಟಾನಗೊಳ್ಳಲಿರುವ ವಿಷಯ ಶಿಕ್ಷಕರ ವೇದಿಕೆ ಕಾರ್ಯಗಾರಗಳ ಮಾಹಿತಿ

  1. ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ - ಎಲ್ಲಾ ಜಿಲ್ಲೆಗಳ ಎಲ್ಲಾ ವಿಜ್ಞಾನ ಶಿಕ್ಷಕರಿಗೆ,'ಈ ಕಾರ್ಯಕ್ರಮದಲ್ಲಿ ವಿಜ್ಞಾನ ಪ್ರಯೋಗಾಲಯವನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ವಿಜ್ಞಾನ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು'.
  2. ಕನ್ನಡ ವಿಷಯ ಶಿಕ್ಷಕರ ವೇದಿಕೆ - 2014-15 ನೇ ಸಾಲಿನಲ್ಲಿ ಪೂರ್ಣಗೊಳ್ಳದ 20 ಜಿಲ್ಲೆಗಳು ಎಲ್ಲಾ ಕನ್ನಡ ಭಾಷಾ ಶಿಕ್ಷಕರಿಗೆ .(ಬಾಗಲಕೋಟೆ, ಬೆಂ.ಗ್ರಾಮಾಂತರ,ಬಳ್ಳಾರಿ, ಬೀದರ್, ಬಿಜಾಪುರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಗದಗ,ಕಲಬುರ್ಗಿ, ಹಾಸನ, ಹಾವೇರಿ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು-ಮಧುಗಿರಿ, ಉತ್ತರಕನ್ನಡ-ಶಿರಸಿ)
  3. ಹಿಂದಿ ವಿಷಯ ಶಿಕ್ಷಕರ ವೇದಿಕೆ- 2014-15 ನೇ ಸಾಲಿನಲ್ಲಿ ಕನ್ನಡ ವಿಷಯ ಶಿಕ್ಷಕರ ವೇದಿಕೆ ಅನುಷ್ಟಾನಗೊಂಡ 10 ಜಿಲ್ಲೆಗಳಲ್ಲಿ

(ಬೆಂ.ನಗರ,ಬೆಳಗಾವಿ-ಚಿಕ್ಕೋಡಿ,ಚಿಕ್ಕಬಳ್ಳಾಪುರ, ಚಿತ್ರದುರ್ಗ, ಯಾದಗಿರಿ, ಕೊಪ್ಪಳ, ರಾಯಚೂರು, ಉಡುಪಿ, ದಕ್ಷಿಣ ಕನ್ನಡ, ಧಾರವಾಡ)

  1. ಗಣಿತ ಮತ್ತು ವಿಜ್ಞಾನ ಕೊಯರ್ ಕಾರ್ಯಗಾರ - 9 ಮತ್ತು10 ನೇ ತರಗತಿಯ ಗಣಿತ-ವಿಜ್ಞಾನ ದ ಎಲ್ಲಾ ಅಧ್ಯಾಯಗಳಿಗೆ ಸಂಪನ್ಮೂಲ ಪೂರ್ಣಗೊಳಿಸುವುದು.
  2. ವಿಜ್ಞಾನ, ಕನ್ನಡಮತ್ತು ಹಿಂದಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರಗಳು ರಾಜ್ಯಮಟ್ಟದಲ್ಲಿ ನಡೆಯಲಿವೆ..

ಈ ಕಾರ್ಯಕ್ರಮದ ಯಶಸ್ವಿ ಅನುಷ್ಟಾನಕ್ಕಾಗಿ ಕೆಲವು ಮಾರ್ಗಸೂಚಿಗಳನ್ನು ಈ ಕೆಳಗೆ ನೀಡಲಾಗಿದೆ

  1. ರಾಜ್ಯ ಮಟ್ಟದಲ್ಲಿ ನಡೆಯುವ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರಗಳಿಗೆ, ತಮ್ಮ ಜಿಲ್ಲೆಯಿಂದ ಸೂಕ್ತ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿ, ಡಿ.ಎಸ್.ಇ.ಆರ್.ಟಿ ಸೂಚಿಸಿದ ದಿನಾಂಕಗಳಂದು ಕಾರ್ಯಗಾರಗಳಿಗೆ ನಿಯೋಜಿಸುವುದು. ವಿಷಯ ಪರಿಣಿತಿ ಹೊಂದಿರುವ ಮತ್ತು ತಂತ್ರಜ್ಞಾನ ಬಳಕೆಯಲ್ಲಿ ಉತ್ತಮ ಕೌಶಲ ಹೊಂದಿರುವ ಶಿಕ್ಷಕರನ್ನು ಮಾತ್ರ ಸಂಪನ್ಮೂಲ ವ್ಯಕ್ತಿಗಳಾಗಿ ಆಯ್ಕೆ ಮಾಡಿ ನಿಯೋಜಿಸತಕ್ಕದ್ದು.
  2. ಜಿಲ್ಲಾ ಹಂತದಲ್ಲಿ ಈ ಕಾರ್ಯಕ್ರಮದ ಯಶಸ್ವಿ ಅನುಷ್ಟಾನಕ್ಕಾಗಿ ಆಯಾ ಡಯಟ್ ಅಥವಾ ಸಿ.ಟಿ.ಇ ವತಿಯಿಂದ ನೋಡಲ್ ಅಧಿಕಾರಿಯನ್ನು ನೇಮಿಸುವುದು. ನೋಡಲ್ ಆಧಿಕಾರಿಗಳು ಜಿಲ್ಲಾ ಹಂತದ ಕಾರ್ಯಗಾರಗಳ ಮಾಹಿತಿಯನ್ನು ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ (ಕೊಯರ್) ಪುಟದಲ್ಲಿ ದಾಖಲಿಸುವುದು.
  3. ಡಯಟ್ ಗಳಲ್ಲಿನ ಆರ್.ಎಂ.ಎಸ್.ಎ ನೋಡಲ್ ಅಧಿಕಾರಿಗಳು ತಮ್ಮ ಜಿಲ್ಲಾ ಹಂತದಲ್ಲಿ ನಡೆಯುವ ಎಲ್ಲಾ ಆರ್.ಎಂ.ಎಸ್.ಎ ತರಬೇತಿ ಕಾರ್ಯಾಗಾರಗಳ ಮೊದಲ ದಿನ ಗೂಗಲ್ ಡಾಕ್ ನ http://goo.gl/forms/WyvBgcEzG4 ಮೂಲಕ ಕಾರ್ಯಗಾರದ ಬಗೆಗಿನ ಮಾಹಿತಿಯನ್ನು ದಾಖಲಿಸಬೇಕು. ಪ್ರತೀವಾರ ಜಿಲ್ಲಾ ಹಂತದಲ್ಲಿ ನಡೆಯುವ ಕಾರ್ಯಗಾರಗಳನ್ನು ಮಾರ್ಗದರ್ಶನ ಮಾಡಲು ಈ ಮಾಹಿತಿಯು ಅವಶ್ಯಕವಾಗಿದ್ದು, ಡಯಟ್ ನೋಡಲ್ ಆಧಿಕಾರಿಗಳು ಈ ಮಾಹಿತಿ ತುಂಬುವುದು ಕಡ್ಡಾಯವಾಗಿರುತ್ತದೆ.ಈ ಮಾಹಿತಿಯನ್ನು ಇಂಟರ್‌ನೆಟ್‌ ಸಂಪರ್ಕ ಹೊಂದಿರುವ ಕಂಪ್ಯೂಟರ್ ಅಥವಾ ಮೊಬೈಲ್ ಪೋನ್ ಮೂಲಕವೂ ದಾಖಲಿಸಬಹುದು.
  4. ಎಲ್ಲಾ ಡಯಟ್‌ಗಳೂ ಹೊಸ ಉಬುಂಟು (ಕಲ್ಪವೃಕ್ಷ) ತಂತ್ರಾಂಶವನ್ನು ತಮ್ಮ ಲ್ಯಾಬ್‌ಗಳಲ್ಲಿ ಅನುಸ್ಥಾಪಿಸಬೇಕು. ಹೊಸ ಉಬುಂಟು ತಂತ್ರಾಂಶವು ಈ ವರ್ಷದ ಕನ್ನಡ ಮತ್ತು ಹಿಂದಿ ವಿಷಯ ಶಿಕ್ಷಕರ ವೇದಿಕೆ ಕಾರ್ಯ ಕ್ರಮದಲ್ಲಿ ಬಳಸಲು ಅನುಕೂಲವಾಗುವಂತೆ , ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಅನ್ವಯಕಗಳನ್ನು ಹೊಂದಿದೆ. ಪ್ರತೀ ಡಯಟ್ ನೋಡಲ್ ಅಧಿಕಾರಿಗಳು ಕಾರ್ಯಗಾರಗಳನ್ನು ಆರಂಭಿಸುವ ಮೊದಲು ನವೀಕರಿಸಲಾಗಿರುವ ಹೊಸ ಉಬುಂಟು ತಂತ್ರಾಂಶವನ್ನು ಪಡೆದು ತಮ್ಮ ಲ್ಯಾಬ್‌ಗಳಲ್ಲಿನ ಕಂಪ್ಯೂಟರ್ ಗೆ ಇನ್‌ಸ್ಟಾಲ್ ಮಾಡುವುದು ಕಡ್ಡಾಯವಾಗಿರುತ್ತದೆ. ಕನ್ನಡ ಮತ್ತು ವಿಜ್ಞಾನ ವಿಷಯಶಿಕ್ಷಕರ ವೇದಿಕೆ ಸಂಪನ್ಮೂಲ ವ್ಯಕ್ತಿಗಳು ಈಗಾಗಲೇ ನವೀಕರಿಸಿರುವ ಹೊಸ ಉಬುಂಟು ತಂತ್ರಾಂಶದ ಡಿವಿಡಿ ಹೊಂದಿದ್ದು ಅವರಿಂದಲೂ ಸಹ ಪಡೆದುಕೊಳ್ಳಬಹುದು.ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಡಯಟ್ ನೋಡಲ್ ಅಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಐಟಿ ಫಾರ್ ಚೇಂಜ್ ನ ಶ್ರೀಯುತ ರಾಕೇಶ್ ರವರನ್ನು (97315 22202 ಅಥವಾ Rakesh@itforchange.net) ಸಂಪರ್ಕಿಸಬಹುದು.
  5. 'ಎಸ್.ಟಿ.ಎಪ್' ತರಭೇತಿಯು ಸಂಪೂರ್ಣ ತಂತ್ರಜ್ಞಾನಾಧಾರಿತ ತರಭೇತಿಯಾಗಿರುವುದರಿಂದ , ಆಯಾ ಜಿಲ್ಲೆಗಳ ಡಯಟ್ ಮತ್ತು ಸಿ.ಟಿ.ಇ ಗಳು ತಮ್ಮ ಐ.ಸಿ.ಟಿ. ಲ್ಯಾಬ್ ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಶಿಕ್ಷಕರಿಗೆ ತಲುಪಿಸುವುದು. ಐ.ಸಿ.ಟಿ ಲ್ಯಾಬ್ ಗಳಲ್ಲಿ ಗಣಕಯಂತ್ರಗಳ ವ್ಯವಸ್ಥೆ, , ಪ್ರೊಜೆಕ್ಟರ್, ಮೌಸ್, ಕೀಬೋರ್ಡ್, ಉಬುಂಟು ತಂತ್ರಾಂಶ, ವಿದ್ಯುತ್ ಸಂಪರ್ಕ, ಯು.ಪಿ.ಎಸ್. ಬ್ಯಾಟರಿ ಮತ್ತು ಉತ್ತಮ ಇಂಟರ್ ನೆಟ್ ಸಂಪರ್ಕದ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ಜವಾಬ್ದಾರಿ ಆಯಾ ಜಿಲ್ಲೆಯ ಡಯಟ್ ಮತ್ತು ಸಿ.ಟಿ.ಇ ಗಳದ್ದಾಗಿರುತ್ತದೆ

ಕಂಪ್ಯೂಟರ್ ಲ್ಯಾಬ್‌ನ ಕೆಲವು ಅಗತ್ಯತೆಗಳು

    1. ಉತ್ತಮ ಕಾರ್ಯಸ್ಥಿತಿಯಲ್ಲಿರುವ ಕನಿಷ್ಟ 20 ಕಂಪ್ಯೂಟರ್‌ಗಳು (ಕೆಲವು ಸಾಮನ್ಯ ದುರಸ್ತಿ, ಮೌಸ್, ಕೀಬೋರ್ಡ್ ಪರಿಶೀಲನೆ`ಮುಂತಾದವು)
    2. ಉನ್ನತೀಕರಿಸಿರುವ ಉಬುಂಟು ತಂತ್ರಾಂಶವನ್ನು ತಮ್ಮ ICT ಲ್ಯಾಬ್ ಗಳಲ್ಲಿ ಅನುಸ್ಥಾಪಿಸುವುದು ,
    3. ಇಂಟರ್‌ನೆಟ್ ಸಂಪರ್ಕ ಕನಿಷ್ಟ 8MBPS ವೇಗದೊಂದಿಗೆ

̯##ಕಂಪ್ಯೂಟರ್ ಲ್ಯಾಬ್ ಗೆ UPS ವ್ಯವಸ್ಥೆ

  1. ಎಸ್.ಟಿ.ಎಪ್' ಕಾರ್ಯಗಾರಗಳಲ್ಲಿ ಶಿಕ್ಷಕರು ಮತ್ತು ಗಣಕಯಂತ್ರಗಳು 1:1 ಅನುಪಾತದಲ್ಲಿರುವುದು ಕಡ್ಡಾಯವಾಗಿರುತ್ತದೆ.
  2. 2014-15 ನೇ ಸಾಲಿನಲ್ಲಿ ತರಬೇತಿ ಪಡೆದಿರುವ ಗಣಿತ ಮತ್ತು ಕನ್ನಡ ವಿಷಯ ಶಿಕ್ಷಕರ ವೇದಿಕೆ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು, ಕಳೆದ ಸಾಲಿನಲ್ಲಿ ಗಣಿತ ಮತ್ತು ಕನ್ನಡ ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರದ ಭಾಗವಹಿಸದ ಶಿಕ್ಷಕರಿಗೆ ಜಿಲ್ಲಾ ಹಂತದ ಕಾರ್ಯಗಾರಗಳನ್ನು ಪ್ರಾರಂಭಿಸುವುದು.
  3. ಹೆಚ್ಚು ಶಾಲೆಗಳನ್ನು ಹೊಂದಿರುವ ಜಿಲ್ಲೆಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಲಭ್ಯವಿರುವ ಇಂಜಿನಿಯರಿಂಗ್ ಕಾಲೇಜು ಅಥವಾ ಇತರೆ ಸಂಸ್ಥೆಗಳ ಲ್ಯಾಬ್ ಗಳನ್ನು ಬಳಸಬಹುದು.
  4. ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರಗಳು ಜೂನ್ ಮಧ್ಯಂತರ ವಾರದಿಂದ ಆರಂಭಗೊಳ್ಳಲಿದ್ದು, ಜುಲೈ ಅಂತ್ಯದಿಂದಲೇ ಜಿಲ್ಲಾ ಮಟ್ಟದ ಕಾರ್ಯಗಾರಗಳು ಪ್ರಾರಂಭಗೊಳ್ಳಲಿವೆ.ಇಲಾಖಾ ಆದೇಶದಂತೆ ಆಗಸ್ಟ್-ಸೆಪ್ಟಂಬರ್ ಮಾಹೆಯೊಳಗೆ ಜಿಲ್ಲಾ ಮಟ್ಟದಲ್ಲಿ ಎಲ್ಲಾ ಕಾರ್ಯಗಾರಗಳನ್ನು ಪೂರ್ಣಗೊಳಿಸಲೇಬೇಕಿದೆ.
  5. ಜಿಲ್ಲಾ ಹಂತದ ಕಾರ್ಯಾಗಾರಗಳಲ್ಲಿ ತಮ್ಮ ಜಿಲ್ಲೆಯ ಶಿಕ್ಷಕರ ಸಂಖ್ಯೆಗನುಸಾರವಾಗಿ ತಂಡಗಳನ್ನು ರಚನೆ ಮಾಡಿತೊಂಡು ಕಾರ್ಯಗಾರ ನಡೆಸಬೇಕಿದೆ.
  6. ಜಿಲ್ಲಾ ಹಂತದ ವಿಜ್ಞಾನ ಕಾರ್ಯಗಾರಳನ್ನು ಆಯೋಜಿಸುವಾಗ 3ನೇ ದಿನ ಹತ್ತಿರದ ಸರ್ಕಾರಿ ಶಾಲೆಯ ವಿಜ್ಞಾನ ಪ್ರಯೋಗಾಲಯವನ್ನು ಬಳಸುವುದು, ಇದಕ್ಕಾಗಿ ಡಯಟ್ ವತಿಯಿಂದ ಕಾರ್ಯಗಾರಕ್ಕೆ ಮೊದಲೇ ಒಂದು ಉತ್ತಮ ವಿಜ್ಞಾನ ಪ್ರಯೋಗಾಲಯ ಹೊಂದಿರುವ ಸರ್ಕಾರಿ ಶಾಲೆಯನ್ನು ಗುರುತಿಸಿಕೊಳ್ಳತಕ್ಕದ್ದು. ಈ ಭೇಟಿಯ ಸಮಯದಲ್ಲಿ ವಿಜ್ಞಾನ ಪ್ರಯೋಗಗಳನ್ನು ನಡೆಸಲಾಗುವುದು, ಇದಕ್ಕಾಗಿ ಸಂಪನ್ಮೂಲ ವ್ಯಕ್ತಿಗಳು ಪಟ್ಟಿ ಮಾಡಿಕೊಂಡಿರುವ ಪ್ರಯೋಗಗಳಿಗೆ ಪೂರಕವಾದ ಸಾಮಗ್ರಿಗಳನ್ನು ಮುಂಚಿತವಾಗಿಯೇ ಹೊಂದಿಸಿಕೊಳ್ಳತಕ್ಕದ್ದು.

ಈ ಮೇಲಿನ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಎಲ್ಲಾ ಜಿಲ್ಲೆಗಳ ಡಯಟ್ ಮತ್ತು ಸಿ.ಟಿ.ಇ ಗಳು ಈ ಕಾರ್ಯಕ್ರಮವನ್ನು ಜಿಲ್ಲಾ ಹಂತದಲ್ಲಿ ಯಶಸ್ವಿಯಾಗಿ ಶಿಕ್ಷಕರಿಗೆ ತಲುಪಿಸಲು ಯೋಜನೆ ರೂಪಿಸಿ, ಆಯಾ ಕಾರ್ಯಗಾರಾಗಳ ವರದಿಯನ್ನು ಡಯಟ್ ಮತ್ತು ಸಿ.ಟಿ.ಇ ನೋಡಲ್ ಅಧಿಕಾರಿಗಳು ವೇದಿಕೆಯೊಡನೆ ಹಂಚಿಕೊಳ್ಳಲು ಸೂಚಿಸಿದೆ.

"https://karnatakaeducation.org.in/KOER/index.php?title=Guidelines&oldid=14344" ಇಂದ ಪಡೆಯಲ್ಪಟ್ಟಿದೆ