ವಿಜಯನಗರ ರಾಜ್ಯವಾಳಿದ ದೊರೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೪:೫೧, ೬ ನವೆಂಬರ್ ೨೦೧೭ ರಂತೆ KOER admin (ಚರ್ಚೆ | ಕಾಣಿಕೆಗಳು) ಇವರಿಂದ (Text replacement - "|Flash]]</mm>" to "]]")
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಚಿತ್ರ:Vijayanagara Rulers.mm

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

  1. ವಿಜಯ ನಗರದ ಅ೦ತರಜಾಲ ಮಾಹಿತಿ
  2. ವಿಜಯ ನಗರದ ಇತಿಹಾಸದ ಕುರಿತು ಮುಖ್ಯ ಅ೦ಶಗಳನ್ನು ನೋಡಲು ಇಲ್ಲಿ ಕ್ಲಿಕಿಸಿರಿ
  3. ಸಾಮ್ರಾಜ್ಯ ‘ವೈಭವ’ದ ಮೂಲಾಧಾರಗಳನ್ನು ತಿಳಿಯಲು ಇಲ್ಲಿ ಕ್ಲಿಕಿಸಿರಿ
  4. ವಿಜಯನಗರದ ವೈಭವ ನೋಡಲು ಇಲ್ಲಿ ಕ್ಲಿಕಿಸಿರಿ

ಸಂಬಂಧ ಪುಸ್ತಕಗಳು

೧)ಕನಾ೯ಟಕದ ಇತಿಹಾಸ ೨)ಮಧ್ಯಕಾಲಿನ ಭಾರತದ ಇತಿಹಾಸ ೩)ಕನಾ೯ಟಕದ ಗತವೈಭವ.

ಬೋಧನೆಯ ರೂಪರೇಶಗಳು

ಪ್ರಮುಖ ಪರಿಕಲ್ಪನೆಗಳು #

ಕಲಿಕೆಯ ಉದ್ದೇಶಗಳು

ಶಿಕ್ಷಕರ ಟಿಪ್ಪಣಿ

ತುಳುವ ವಂಶ

  1. ವೀರ ನರಸಿಂಹ - 1503 – 1505
  2. 2 ನೇ ನರಸಿಂಹ - 1050 – 1509
  3. ಕೃಷ್ಮದೇವರಾಯ - 1509 – 1529
  4. ಅಚ್ಚುತ ರಾಯ - 1529 – 1542
  5. 1 ನೇ ವೆಂಕಟರಾಯ - 1542
  6. ಸದಾಶಿವರಾಯ - 1542 – 1570

ಕೃಷ್ಣದೇವರಾಯ

ಕೃಷ್ಣದೇವರಾಯ ಕ್ರಿ.ಶ.೧೫೦೯ ರಿ೦ದ ೧೫೨೯ ರ ವರೆಗೆ ಆಳಿದ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ.ತುಳುವ ರಾಜವಂಶದ ಮೂರನೆಯ ಅರಸ. ವಿಜಯನಗರ ಸಾಮ್ರಾಜ್ಯ ಈತನ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಕ್ಕೇರಿತು.ಕನ್ನಡ ನಾಡಿನಲ್ಲಿ "ಮೂರುರಾಯರಗಂಡ", "ಕನ್ನಡರಾಜ್ಯ ರಮಾರಮಣ" ಎಂದೂ, ಆಂಧ್ರದಲ್ಲಿ "ಆಂಧ್ರಭೋಜ" ಎಂದೂ ಬಿರುದಾಂಕಿತನಾದ ಈತನ ಕಾಲದ ವೈಭವ ಇಂದೂ ಮನೆಮಾತಾಗಿದೆ.

ಹಿನ್ನೆಲೆ

ಕೃಷ್ಣದೇವರಾಯನ ತಂದೆ ತುಳುವ ನರಸ ನಾಯಕ. ತಾಯಿ ನಾಗಲಾಂಬಿಕೆ . ಸಾಳುವ ನರಸದೇವರಾಯನ ಸೇನೆಯಲ್ಲಿ ಅಧಿಕಾರಿಯಾಗಿದ್ದ ನರಸನಾಯಕನು , ಸಂಪೂರ್ಣ ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡು ತುಳುವ ಸಾಮ್ರಾಜ್ಯವನ್ನು ಸ್ಥಾಪಿಸಿದನು. ನರಸನಾಯಕನ ನಂತರ ಕೃಷ್ಣಜನ್ಮಾಷ್ಟಮಿಯಂದು ಪಟ್ಟವೇರಿದ ಕೃಷ್ಣದೇವರಾಯನು ರಾಜಧಾನಿಯಾದ ವಿಜಯನಗರದ ಉಪನಗರವಾಗಿ ನಾಗಲಾಪುರ ಎಂಬ ಸುಂದರ ನಗರವನ್ನು ಕಟ್ಟಿಸಿದನು. ಕೃಷ್ಣದೇವರಾಯನು ತನ್ನ ತಂದೆಯ ಸ್ಥಾನದಲ್ಲಿಟ್ಟು ಗೌರವಿಸುತ್ತಿದ್ದ ತಿಮ್ಮರಸು, ಆತನು ಪಟ್ಟವೇರಲು ಕಾರಣೀಭೂತನಾಗಿದ್ದಷ್ಟೇ ಅಲ್ಲ , ಅವನ ರಾಜ್ಯಭಾರದ ಕಾಲದಲ್ಲಿ ಪ್ರಧಾನಾಮಾತ್ಯನಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದನು. ಮಟ್ಟಸ ಎತ್ತರದವನಾಗಿದ್ದ ಕೃಷ್ಣದೇವರಾಯನಿಗೆ , ದಿನವೂ ಸಾಮು ಮಾಡಿದ್ದರ ಪರಿಣಾಮವಾಗಿ ಕಲ್ಲಿನಂತಹ ದೇಹಧಾರ್ಡ್ಯವಿತ್ತು. ಹಸನ್ಮುಖಿಯಾದರೂ , ಶೀಘ್ರಕೋಪಿಯೂ ಆಗಿದ್ದ ಎಂದೂ ಹೇಳಲಾಗಿದೆ. ಪರದೇಶದ ಪ್ರವಾಸಿಗಳಿಗೆ ಗೌರವ ತೋರಿಸುತ್ತಿದ್ದ. ಸಮರ್ಥ ಆಡಳಿತಗಾರನಾಗಿದದ್ದು ಕಾನೂನು ಪಾಲನೆಯಲ್ಲಿ ಕಟ್ಟರ ಶಿಸ್ತು ಪಾಲಿಸುತ್ತಿದ್ದ. ಅತ್ಯುತ್ತಮ ಸೇನಾನಾಯಕನೂ ಆಗಿದ್ದ ಆತನು, ಸ್ವತಃ ಸೇನೆಯ ಮುಂದಾಳುತ್ವ ವಹಿಸುವದಷ್ಟೇ ಅಲ್ಲ, ಗಾಯಗೊಂಡವರಿಗೆ ಕೈಯಾರೆ ಶುಶ್ರೂಷೆಯನ್ನೂ ಮಾಡುತ್ತಿದ್ದ ಎಂದೂ ಹೇಳಲಾಗಿದೆ. ಕೃಷ್ಣದೇವರಾಯನ ಆಡಳಿತದ ಬಗೆಗಿನ ಬಹಳಷ್ಟು ಮಾಹಿತಿ ಅವನ ಕಾಲದಲ್ಲಿ ಭಾರತಕ್ಕೆ ಬಂದ ಪೋರ್ಚುಗೀಸ್ ಯಾತ್ರಿಕರಾದ ಡೊಮಿಂಗೋ ಪಾಯಸ್ ಮತ್ತು ಫೆರ್ನಾವ್ ನೂನೀಜ್ ಅವರ ಬರಹಗಳಿ೦ದ ತಿಳಿದುಬರುತ್ತದೆ

ರಾಜ್ಯವಿಸ್ತಾರ

ಸಿಂಹಾಸನಕ್ಕೇರಿದ ಆರು ತಿಂಗಳುಗಳಲ್ಲಿಯೇ ಯೂಸುಫ್ ಆದಿಲ್ ಖಾನ್ ಮತ್ತು ಬೀದರಿನ ಸುಲ್ತಾನ ಮಹಮೂದ್ ಅನ್ನು ಕೃಷ್ಣದೇವರಾಯನು ಸೋಲಿಸಿದನೆಂದು ತಿಳಿದುಬರುತ್ತದೆ. ೧೫೧೦ರಲ್ಲಿ ಉತ್ತರದ ರಾಯಚೂರಿಗೆ ಮುತ್ತಿಗೆ ಹಾಕಿ ಗುಲ್ಬರ್ಗ ಮತ್ತು ಬೀದರ್ ಕಡೆಗೆ ಹೆಜ್ಜೆ ಹಾಕಿದ. ಹೀಗೆ ಉತ್ತರದಲ್ಲಿ ತನ್ನ ಸಾಮ್ರಾಜ್ಯವನ್ನು ಗಟ್ಟಿಗೊಳಿಸಿದ ನಂತರ ದಕ್ಷಿಣದಲ್ಲಿ ಶ್ರೀರಂಗಪಟ್ಟಣದ ಕೇಂದ್ರವಾದ ರಾಜ್ಯಭಾಗವನ್ನು ಸೃಷ್ಟಿಸಿದ. ನಂತರ ಪೂರ್ವಕ್ಕೆ ತಿರುಗಿ ಪ್ರತಾಪರುದ್ರ ಎಂಬ ಸ್ಥಳೀಯ ನಾಯಕನನ್ನು ಸೋಲಿಸಿ ಕೃಷ್ಣಾ ನದಿಯವರೆಗಿನ ಭಾಗಗಳನ್ನು ಗೆದ್ದನು. ಕೃಷ್ಣದೇವರಾಯನ ಅತಿ ಮುಖ್ಯ ವಿಜಯ ಬಂದದ್ದು ಮೇ ೧೯, ೧೫೨೦ ರಲ್ಲಿ ಬಿಜಾಪುರದ ಇಸ್ಮಾಯಿಲ್ ಆದಿಲ್ ಷಾ ನಿ೦ದ ರಾಯಚೂರನ್ನು ಗೆದ್ದಾಗ. ಒಟ್ಟು ಸಾವಿರಾರು ಸೈನಿಕರು, ೩೨,೬೦೦ ಕುದುರೆ ಸವಾರರು ಮತ್ತು ೫೫೧ ಆನೆಗಳು ಪಾಲ್ಗೊಂಡ ಯುದ್ಧದಲ್ಲಿ ಸುಮಾರು ೧೬,೦೦೦ ವಿಜಯನಗರದ ಸೈನಿಕರು ಮೃತಪಟ್ಟರು. ಕೊನೆಯ ಯುದ್ಧದಲ್ಲಿ ಬಹಮನಿ ಸುಲ್ತಾನರ ಮೊದಲ ರಾಜಧಾನಿಯಾದ ಗುಲ್ಬರ್ಗದ ಕೋಟೆ ನೆಲಸಮವಾಯಿತು. ಡೊಮಿಂಗೋ ಪಯಸ್ ನ ವಿವರಣೆಯಂತೆ ಅಂದಿನ ವಿಜಯನಗರ ರೋಮ್ ನಗರದಷ್ಟಾದರೂ ದೊಡ್ಡದಿದ್ದು , ಐದು ಲಕ್ಷ ಜನಸಂಖ್ಯೆಯನ್ನು ಹೊಂದಿದ್ದೀತು. ತಾನು ಕಂಡ ಅತ್ಯಂತ ಶ್ರೀಮಂತ ನಗರವೆಂದೂ ಪಯಸ್ ವಿಜಯನಗರವನ್ನು ವರ್ಣಿಸಿದ್ದಾನೆ.

ವಿದೇಶಾಂಗ ವ್ಯವಹಾರಗಳು

ವಿಜಯನಗರ ಇತಿಹಾಸದಲ್ಲಿಯೇ ಅತಿ ಹೆಚ್ಚು ಸೇನಾಯಶಸ್ಸು ಸಿಕ್ಕದ್ದು ಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ. ಹಠಾತ್ತನೆ ಯುದ್ಧ ತಂತ್ರವನ್ನು ಬದಲಾಯಿಸಿ , ಸೋಲುವ ಪರಿಸ್ಥಿತಿಯಲ್ಲೂ ಗೆಲುವು ಸಾಧಿಸುವ ಚಾಕಚಕ್ಯತೆ ಅವನಿಗಿತ್ತು. ಆತನ ಆಳ್ವಿಕೆ ಮೊದಲ ದಶಕದಲ್ಲಿ ಆಕ್ರಮಣ, ರಕ್ತಪಾತ ಮತ್ತು ಗೆಲುವುಗಳನ್ನು ಕಾಣುತ್ತೇವೆ. ಅವನ ಶತ್ರುಗಳಲ್ಲಿ ಮುಖ್ಯರೆಂದರೆ, ಐದು ವಿಭಾಗವಾಗಿದ್ದರೂ ಹಗೆ ಸಾಧಿಸಿದ ಬಹಮನಿ ಸುಲ್ತಾನರು , ಸಾಳುವ ನರಸಿಂಹರಾಯನ ಕಾಲದಿಂದಲೂ ಸಂಘರ್ಷದಲ್ಲಿ ತೊಡಗಿದ್ದ ಒರಿಸ್ಸಾದ ಗಜಪತಿ, ಹಾಗೂ ತಮ್ಮ ಪ್ರಬಲ ನೌಕಾಪಡೆಯ ಕಾರಣದಿಂದ ಕಡಲ ವ್ಯಾಪಾರವನ್ನು ನಿಯಂತ್ರಿಸುತ್ತಿದ್ದ, ಹಾಗೂ ದಿನೇ ದಿನೇ ಬಲಕಾಯಿಸುತ್ತಿದ್ದ ಪೋರ್ಚುಗೀಸರು. ಇವರಲ್ಲದೇ, ಉಮ್ಮತ್ತೂರು ಪಾಳೆಯಗಾರ, ಕೊಂಡವೀಡಿನ ರೆಡ್ಡಿರಾಜು ಮತ್ತು ಭುವನಗಿರಿಯ ವೇಲಮರೊಂದಿಗೂ ಆಗಾಗ ಕಾಳಗಗಳಾಗುತ್ತಿದ್ದವು.

ದಕ್ಖನಿನಲ್ಲಿ ಜಯ


ದಕ್ಖನ್ ಸುಲ್ತಾನರಿಂದ ವರ್ಷಕ್ಕೊಮ್ಮೆಯಂತೆ ನಡೆಯುತ್ತಿದ್ದ, ವಿಜಯನಗರದ ಹಳ್ಳಿ, ಪಟ್ಟಣಗಳ ಮೇಲಿನ ಧಾಳಿ, ಲೂಟಿ ಇತ್ಯಾದಿಗಳು ಈತನ ಕಾಲದಲ್ಲಿ ಕೊನೆಗೊಂಡವು. ೧೫೦೯ರಲ್ಲಿ, ದಿವಾನಿ ಎಂಬಲ್ಲಿ ನಡೆದ ಯುದ್ಧದಲ್ಲಿ ಬಿಜಾಪುರದ ಸುಲ್ತಾನ್ ಮಹಮೂದ್ ತೀವ್ರವಾಗಿ ಗಾಯಗೊಂಡು ಸೋಲೊಪ್ಪಿದನು. ಯೂಸುಫ್ ಆದಿಲ್ ನನ್ನು ಕೊಂದು ಅವನ ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳಲಾಯಿತು.ಈ ವಿಜಯದಿಂದ ಸ್ಪೂರ್ತಿಗೊಂಡು ಮತ್ತು ಬಹಮನಿ ಸುಲ್ತಾನರ ಒಳಜಗಳದ ಲಾಭ ಪಡೆದ ಕೃಷ್ಣದೇವರಾಯನು ಬೀದರ್, ಗುಲ್ಬರ್ಗ ಮತ್ತು ಬಿಜಾಪುರಗಳ ಮೇಲೆ ಧಾಳಿ ಮಾಡಿದನು. ಅಲ್ಲಿ ಸುಲ್ತಾನ್ ಮಹಮೂದನನ್ನು ಬಿಡುಗಡೆ ಮಾಡಿ ಆತನನ್ನು , ಅಲ್ಲಿಯ ವಸ್ತುತಃ ಆಡಳಿತಗಾರನಾಗಿ ಮಾಡಿ "ಯವನ ಸಾಮ್ರಾಜ್ಯ ಪ್ರತಿಷ್ಠಾಪಕ" ಎಂಬ ಬಿರುದನ್ನು ಗಳಿಸಿದನು. ಗೊಲ್ಕೊಂಡಾ ಸುಲ್ತಾನ ಕುಲಿ ಕುತ್ಬ್ ಷಾನನ್ನು ಕೃಷ್ಣದೇವರಾಯನ ಪ್ರಧಾನಿ ತಿಮ್ಮರಸು ಸೋಲಿಸಿದನು.

ಸಾಮಂತರ ಜೊತೆ ಯುದ್ಧ


ಸ್ಥಳೀಯ ಪಾಳೆಯಗಾರರು ಮತ್ತು ಭುವನಗಿರಿಯ ವೇಲಮನ ಮೇಲೆ ಆಕ್ರಮಣ ಮಾಡಿ ಗೆದ್ದು , ತನ್ನ ರಾಜ್ಯವನ್ನು ಕೃಷ್ಣಾ ನದಿಯವರೆಗೂ ವಿಸ್ತರಿಸಿದನು. ಕಾವೇರಿ ದಡದಲ್ಲಿ ನಡೆದ ಯುದ್ಧದಲ್ಲಿ ಉಮ್ಮತ್ತೂರಿನ ದೊರೆ ಗಂಗರಾಜನನ್ನು ಸೋಲಿಸಿದನು. ೧೫೧೨ರಲ್ಲಿ ಗಂಗರಾಜನು ಕಾವೇರಿಯಲ್ಲಿ ಮುಳುಗಿ ಅಸುನೀಗಿದ. ಈ ಪ್ರದೇಶ ಶ್ರೀರಂಗಪಟ್ಟಣ ಪ್ರಾಂತ್ಯದ ಒಂದು ಭಾಗವಾಯಿತು. ೧೫೧೬-೧೭ರಲ್ಲಿ ಅವನ ರಾಜ್ಯ ದ ಗಡಿಯು ಗೋದಾವರಿ ನದಿಯನ್ನು ದಾಟಿತು.

ಕಳಿಂಗ ಯುದ್ಧ


ಗಜಪತಿಗಳ ರಾಜ್ಯ ವಿಶಾಲವಾಗಿದ್ದು ಇಂದಿನ ಆಂಧ್ರ ಮತ್ತು ತೆಲಂಗಾಣ ಪ್ರದೇಶ ಹಾಗೂ ಸಂಪೂರ್ಣ ಒರಿಸ್ಸಾವನ್ನು ಒಳಗೊಂಡಿತ್ತು. ಉಮ್ಮತ್ತೂರಿನ ಯಶಸ್ಸಿನಿಂದ ಉತ್ತೇಜಿತನಾದ ಕೃಷ್ಣದೇವರಾಯನು ಗಜಪತಿ ಪ್ರತಾಪ ರುದ್ರದೇವನ ಸ್ವಾಧೀನದಲ್ಲಿದ್ದ ತೆಲಂಗಾಣ ಪ್ರದೇಶದತ್ತ ತನ್ನ ದೃಷ್ಟಿಯನ್ನು ತಿರುಗಿಸಿದನು. ವಿಜಯನಗರ ಸೈನ್ಯವು ೧೫೧೨ರಲ್ಲಿ ಉದಯಗಿರಿ ಕೋಟೆಗೆ ಮುತ್ತಿಗೆ ಹಾಕಿತು. ಒಂದು ವರ್ಷದವರೆಗೂ ನಡೆದ ಈ ಮುತ್ತಿಗೆಯಲ್ಲಿ ಕೊನೆಗೂ ಗಜಪತಿಯ ಸೈನ್ಯ ಹಸಿವಿನಿಂದ ಶಿಥಿಲವಾಗತೊಡಗಿತು. ಇದೇ ಸಮಯದಲ್ಲಿ ಕೃಷ್ಣದೇವರಾಯನು ಪತ್ನಿಯರಾದ ತಿರುಮಲಾ ದೇವಿ ಮತ್ತು ಚಿನ್ನಮ ದೇವಿಯರೊಂದಿಗೆ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಮಾಡಿದನು. ಇದರ ನಂತರ ಗಜಪತಿಯ ಸೇನೆ ಕೊಂಡವೀಡುರಾಜು ಎಂಬಲ್ಲಿ ವಿಜಯನಗರ ಸೇನೆಗೆ ಎದುರಾಯಿತು. ಕೆಲವು ತಿಂಗಳುಗಳಿಂದ ಮುತ್ತಿಗೆ ಹಾಕಿದ್ದ್ದರೂ, ಕೆಲವು ಮೊದಮೊದಲ ಸೋಲುಗಳ ನಂತರ ವಿಜಯನಗರ ಸೇನೆ ರಣರಂಗದಿಂದ ಹಿಂದೆಗೆಯಲಾರಂಭಿಸಿತು. ಅದೇ ಸಮಯದಲ್ಲಿ ತಿಮ್ಮರಸು ಕಂಡುಹಿಡಿದ ಕಾವಲಿಲ್ಲದ ಪೂರ್ವದ ದ್ವಾರದ ರಹಸ್ಯಒಳದಾರಿಯ ಮೂಲಕ ಒಳನುಗ್ಗಿದ ವಿಜಯನಗರದ ಸೇನೆ ಕೋಟೆಯನ್ನು ಗೆದ್ದು, ಆಕಾಲದ ಅತಿಸಮರ್ಥ ಕತ್ತಿವರಸೆಗಾರ ಎಂದು ಹೆಸರಾಗಿದ್ದ , ಪ್ರತಾಪರುದ್ರದೇವನ ಮಗ, ಯುವರಾಜ ವೀರಭದ್ರನನ್ನು ಸೆರೆಹಿಡಿಯಿತು. ಈ ವಿಜಯದ ನಂತರ ತಿಮ್ಮರಸು ಕೊಂಡವೀಡು ಪ್ರಾಂತದ ಮಾಂಡಲೀಕನಾಗಿ ನೇಮಕಗೊಂಡ. ಮುಂದೆ ವಿಜಯನಗರ ಸೇನೆಯು ಕೊಂಡಪಲ್ಲಿ ಪ್ರದೇಶದಲ್ಲಿ ಗಜಪತಿ ಸೇನೆಯನ್ನು ಮತ್ತೊಮ್ಮೆ ಮುತ್ತಿತು. ಉತ್ಕಲ-ಕಳಿಂಗದ ಮೇಲೆ ನೇರ ಧಾಳಿ ಮಾಡಿ ವಶಪಡಿಸಿಕೊಳ್ಳಬೇಕೆಂದಿದ್ದ ಕೃಷ್ಣದೇವರಾಯನ ರಣತಂತ್ರಕ್ಕೆ ಪ್ರತಿಯಾಗಿ ಪ್ರತಾಪರುದ್ರ ದೇವನು ಕೃಷ್ಣದೇವರಾಯನನ್ನು ಅವನ ಸೇನೆಯೊಂದಿಗೆ ಹೀನಾಯವಾಗಿ ಸೋಲಿಸುವ ಪ್ರತಿಯೋಜನೆ ಹಾಕಿದನು. ಈ ಯೋಜನೆಯ ಪ್ರಕಾರ ಇವೆರಡು ಸೇನೆಗಳು ಕಳಿಂಗಾನಗರದಲ್ಲಿ ಸಂಧಿಸಬೇಕಾಗಿತ್ತು. ಆದರೆ , ಈ ಮಾಹಿತಿಯನ್ನು ಚಾಣಾಕ್ಷ ತಿಮ್ಮರಸು ಪ್ರತಾಪರುದ್ರದೇವನ ಪಕ್ಷ ತ್ಯಜಿಸಿದ ತೆಲುಗು ಭಾಷಿಕನೊಬ್ಬನಿಗೆ ಲಂಚ ಕೊಟ್ಟು ಸಂಪಾದಿಸಿದನು. ಪ್ರತಾಪರುದ್ರನ ಯೋಜನೆ ನಡೆಯದೆ, ಆತ ತನ್ನ ರಾಜಧಾನಿಯತ್ತ ಹಿಮ್ಮೆಟ್ಟಬೇಕಾಯಿತು. ಕೊನೆಗೂ ಆತ ವಿಜಯನಗರ ಸೇನೆಗೆ ಶರಣಾಗಿ , ತನ್ನ ಮಗಳನ್ನು ಕೃಷ್ಣದೇವರಾಯನಿಗೆ ಕೊಟ್ಟು ಮದುವೆಮಾಡಿದ. ಇದರ ನಂತರ ಭಾರತದ ಎರಡು ಪ್ರಬಲ ಹಿಂದೂ ಸಾಮ್ರಾಜ್ಯಗಳ ನಡುವೆ ಶಾಂತಿ ಸಾಮರಸ್ಯ ನೆಲೆಸಿ ಸನಾತನ ಧರ್ಮ ಸುರಕ್ಷಿತವಾಯಿತು. ೧೫೧೦ರಲ್ಲಿ ಗೋವಾದಲ್ಲಿ ಡೊಮಿನಿಯನ್ ಸ್ಥಾಪಿಸಿದ ಪೋರ್ಚುಗೀಸರೊಂದಿಗೆ ಕೃಷ್ಣದೇವರಾಯನು ಸ್ನೇಹ ಸಂಬಂಧಗಳನ್ನು ಬೆಳೆಸಿದನು. ಪೋರ್ಚುಗೀಸ್ ವ್ಯಾಪಾರಿಗಳಿಂದ ಬಂದೂಕು ಮತ್ತು ಅರಬ್ಬೀ ಕುದುರೆಗಳನ್ನು ಪಡೆದುಕೊಂಡದ್ದಷ್ಟೇ ಅಲ್ಲದೆ . ಪೋರ್ಚುಗೀಸ್ ಪರಿಣತಿಯನ್ನು ಉಪಯೋಗಿಸಿಕೊಂಡು ವಿಜಯನಗರ ನಗರಕ್ಕೆ ನೀರು ಸರಬರಾಜು ಯೋಜನೆಯ ಸುಧಾರಣೆ ಮಾಡಿದನು.

ಅಂತಿಮ ಸಂಘರ್ಷ


ಕನ್ನಡ ಶಾಸನ ಹಂಪಿ ಬಳಿ ಅನಂತಶಯನಗುಡಿ (Anathasayanagudi) ರಲ್ಲಿ ಅನಂತಶಯನ (Anathasayana) ದೇವಸ್ಥಾನದಲ್ಲಿ ಕೃಷ್ಣದೇವರಾಯ ಆಫ್ 1524 AD, ದಿನಾಂಕ. ದೇವಾಲಯದ ತನ್ನ ರೋಗಗ್ರಸ್ಥ ಮಗನ ನೆನಪಿಗಾಗಿ ನಿರ್ಮಿಸಲಾಯಿತು ಸಾಮ್ರಾಜ್ಯದ ಸಂಕೀರ್ಣ ಮೈತ್ರಿಗಳು ಮತ್ತು ಐದು ಡೆಕ್ಕನ್ ಸುಲ್ತಾನ್ ಅವರು ಈ ಕಾರ್ಯಾಚರಣೆಯನ್ನು ರಲ್ಲಿ, ಯುದ್ಧದ ಸಮಯದಲ್ಲಿ ನಿರಂತರವಾಗಿ ಎಂದು ಅರ್ಥ, ಅವರು ಗೊಲ್ಕೊಂಡಾ ಸೋಲಿಸಿ ಮುಹಮ್ಮದ್ ತನ್ನ ಕಮಾಂಡರ್ Madurul-ಮುಲ್ಕ್, ಪುಡಿಮಾಡಿದ ಬಿಜಾಪುರ ಮತ್ತು ಅದರ ಸುಲ್ತಾನ್ ಇಸ್ಮಾಯಿಲ್ ಆದಿಲ್ ಷಾ ಮತ್ತು ಪುನಸ್ಸಂಪಾದಿತ ಬಹಮನಿ ಸುಲ್ತಾನರ ವಶಪಡಿಸಿಕೊಂಡಿತು ಷಾ. ತನ್ನ ವಿಜಯಕ್ಕೆ ಪ್ರಮುಖ ಅವರು 16,000 ವಿಜನಗರ ಸೈನಿಕರು ಕೊಲ್ಲಲ್ಪಟ್ಟರು ಸಂದರ್ಭದಲ್ಲಿ ಕಷ್ಟ ಮುತ್ತಿಗೆ ನಂತರ ಬಿಜಾಪುರದ ಇಸ್ಮಾಯಿಲ್ ಆದಿಲ್ ಶಾ ರಾಯಚೂರು ಕೋಟೆಯನ್ನು ಪಡೆದುಕೊಂಡನು ಅಲ್ಲಿ ಮೇ 19, 1520 ರಂದು ನಡೆಯಿತು. ರಾಯಚೂರು ಯುದ್ಧದ ಸಮಯದಲ್ಲಿ ಮುಖ್ಯ ಸೇನಾ ಕಮಾಂಡರ್ ಪೆಮ್ಮಸಾನಿ ರಾಮಲಿಂಗ ನಾಯುಡು, ಬಗೆಗೆ ಸೂಕ್ತವಾದ ಕೃತಜ್ಞರಾಗಿರಬೇಕು ಚಕ್ರವರ್ತಿ ಅದಕ್ಕೆ ಬಹುಮಾನ ದೊರೆಯಿತು. ರಾಯಚೂರು ವಿರುದ್ಧ ಅಭಿಯಾನದ ಸಮಯದಲ್ಲಿ, ಇದು 703.000 ಕಾಲ್ದಳ, 32.600 ಅಶ್ವದಳ ಮತ್ತು 551 ಆನೆಗಳು (ರಾಯಚೂರು ಯುದ್ಧ ನೋಡಿ) ಬಳಸಲಾಗುತ್ತದೆ ಎಂದು ಹೇಳಲಾಗುತ್ತದೆ. ಅಂತಿಮವಾಗಿ, ತನ್ನ ಕೊನೆಯ ಯುದ್ಧದಲ್ಲಿ ಅವರು ನೆಲಕ್ಕೆ ಗುಲ್ಬರ್ಗಾ, ಬಹಮನಿ ಸುಲ್ತಾನರು ಆರಂಭಿಕ ಬಂಡವಾಳ ಕೋಟೆಯನ್ನು ನೆಲಸಮವಾಗಿ. ತನ್ನ ಸಾಮ್ರಾಜ್ಯ ದಕ್ಷಿಣ ಭಾರತದ ಸಂಪೂರ್ಣ ಮೇಲೆ ವಿಸ್ತರಿಸಲಾಯಿತು. ಯುವರಾಜ ಸಮಯದವರೆಗೆ ಉಳಿಯಲಿಲ್ಲ ಆದಾಗ್ಯೂ 1524 ರಲ್ಲಿ ಅವರು ತಮ್ಮ ಮಗ ತಿರುಮಲ ರಾಯ ಯುವರಾಜ ಮಾಡಿದ. ಅವರು ಸಾವಿಗೆ ವಿಷ ಮಾಡಲಾಯಿತು. ತಿಮ್ಮರುಸು(Timmarusu) ತೊಡಗಿರುವ ಅನುಮಾನಿಸಿದ ಕೃಷ್ಣದೇವ ರಾಯ ತನ್ನ ನಂಬಿಕಸ್ತ ದಂಡನಾಯಕ ಮತ್ತು ಸಲಹೆಗಾರ ಬ್ಲೈಂಡೆಡ್. ಅದೇ ಸಮಯದಲ್ಲಿ, ಕೃಷ್ಣದೇವರಾಯ ಆದಿಲ್ ಷಾ ಬಳಿ ಎಂದು ಬೆಳಗಾವಿ ಮೇಲೆ ದಾಳಿ ಸಿದ್ಧರಾಗುತ್ತಿದ್ದರು; ಕೃಷ್ಣದೇವರಾಯ ಅನಾರೋಗ್ಯ ತೆಗೆದುಕೊಂಡಿತು. ಅವರು 1529 ರಲ್ಲಿ ನಂತರ ನಿಧನರಾದರು. ಅವರ ಸಾವಿಗೆ ಮುನ್ನ, ಅವರ ಉತ್ತರಾಧಿಕಾರಿಯಾಗಿ ತನ್ನ ಸಹೋದರ, (Achyuta)ಅಚ್ಯುತರಾಯ ನಾಮನಿರ್ದೇಶನಗೊಂಡಿದೆ. ಕೃಷ್ಣದೇವರಾಯ ಆಳ್ವಿಕೆ ಹಂಪಿಯಲ್ಲಿನ ಅವಶೇಷಗಳು ಆ ಪ್ರಬಲ ಸಾಮ್ರಾಜ್ಯದ ಅದ್ಭುತ ಕಥೆ ಹೇಳುವ ವಿಜಯನಗರ ಚಕ್ರವರ್ತಿ. ಇವತ್ತುಗೆ ಇತಿಹಾಸದಲ್ಲಿ ಒಂದು ಅಮೋಘ ಅಧ್ಯಾಯವಾಗಿ ಉಳಿದಿದೆ. [ಬದಲಾಯಿಸಿ] ಆಂತರಿಕ ವ್ಯವಹಾರಗಳ ಪೇಸ್ ಶಿಕ್ಷೆಯನ್ನು ಕಾನೂನು ಮತ್ತು ಸುವ್ಯವಸ್ಥೆ ವಿಷಯಗಳಿಗೆ ರಾಜ ಧೋರಣೆಯನ್ನು ಸಂಕ್ಷಿಪ್ತವಾಗಿ, "ರಾಜ ಕೊಲ್ಲುವ ಮೂಲಕ ಕಾನೂನು ನಿರ್ವಹಿಸುತ್ತದೆ." ಆಸ್ತಿ (ಸ್ಥಿರತೆಯನ್ನು ಉಳಿಸಿಕೊಳ್ಳುವ ವಿನ್ಯಾಸ) ವಿರುದ್ಧ ಮತ್ತು ಕೊಲೆಯ ಅಪರಾಧಗಳು ಕಳ್ಳತನ ಮತ್ತು ಕೊಲೆಯ ಶಿರಚ್ಛೇದವು (ದ್ವಂದ್ವ ಪರಿಣಾಮವಾಗಿ ಸಂಭವಿಸುವ ಹೊರತುಪಡಿಸಿ) ಒಂದು ಕಾಲು ಮತ್ತು ಕೈ ಕತ್ತರಿಸುವ ರಷ್ಟಿದೆ. ಅವರ ದೃಷ್ಟಿಕೋನ ಬೆಟ್ಟಗಳ ಅಸ್ಪಷ್ಟವಾಗಿದೆ ಆದರೆ ನಗರದ ರೋಮ್ ಕಡೇಪಕ್ಷ ದೊಡ್ಡ ಎಂದು ಅಂದಾಜಿಸಲಾಗಿದೆ ಎಂದು ಪೇಸ್ (Vijaynagar)ವಿಜಯನಗರದ ಗಾತ್ರವು ಅಂದಾಜು ಮಾಡಲಾಗಿಲ್ಲ. ಇದಲ್ಲದೆ, ಅವರು ಅರ್ಧ ಮಿಲಿಯನ್ ಕಡಿಮೆ ಮಾಡುವ ಜನಸಂಖ್ಯೆ ವಿಜನಗರ "ವಿಶ್ವದ ಅತ್ಯುತ್ತಮ ಒದಗಿಸಿದ ನಗರ" ಎಂದು ಪರಿಗಣಿಸಲಾಗಿದೆ. ಸಾಮ್ರಾಜ್ಯದ ಹೆಚ್ಚಾಗಿ ರಾಯಲ್ ಕುಟುಂಬದ ಸದಸ್ಯರು ಅಡಿಯಲ್ಲಿ ಮತ್ತು ಮತ್ತಷ್ಟು ಉಪವಿಭಾಗಗಳು ಆಗಿ ಪ್ರಾಂತ್ಯಗಳ ಅನೇಕ ವಿಭಜಿಸಲಾಗಿದೆ. ನ್ಯಾಯಾಲಯದ ಅಧಿಕೃತ ಭಾಷೆ ಕನ್ನಡ ಇತ್ತು. ನಾನು ಕೃಷ್ಣ ರಾಯ ಕಾನೂನುರೀತ್ಯಾ ಒಂದು ರಾಜನ ಕೇವಲ, ಆದರೆ ಅವರು ವ್ಯಾಪಕ ಅಧಿಕಾರಗಳನ್ನು ಮತ್ತು ಬಲವಾದ ವೈಯಕ್ತಿಕ ಪ್ರಭಾವ ಒಂದು ವಸ್ತುತಃ ಸಾರ್ವಭೌಮ ಎಂದು ರಿಮಾರ್ಕ್ಸ್ Sewe. ಪ್ರಧಾನಿ Timmarusu ಸಕ್ರಿಯ ಸಹಕಾರದೊಂದಿಗೆ ಅವರು ಚೆನ್ನಾಗಿ ಕಿಂಗ್ಡಮ್ ಆಡಳಿತ ಭೂಮಿ ಉಳಿಸಿಕೊಳ್ಳುವುದು ಶಾಂತಿ ಮತ್ತು ಜನರ ಅಭ್ಯುದಯ ಹೆಚ್ಚಳ ಸಾಮ್ರಾಜ್ಯದ ಆಡಳಿತ ತನ್ನ ಅಮುಕ್ತಮಾಲ್ಯದ ಸೂಚಿಸಿರುವ ಹಳಿಗಳ ಮೇಲೆ ನಡೆಸಲಾಯಿತು. ಅವರು ಕಿಂಗ್ ಯಾವಾಗಲೂ ಧರ್ಮ ಕಡೆಗೆ ಒಂದು ಕಣ್ಣಿಟ್ಟು ವಿಧಿಸಬೇಕೆಂದು ಅಭಿಪ್ರಾಯವನ್ನು ಆಗಿತ್ತು. ಜನರ ಕ್ಷೇಮಕ್ಕಾಗಿ ತನ್ನ ಕಾಳಜಿ ವ್ಯಾಪಕವಾಗಿ ಎಲ್ಲಾ ಸಾಮ್ರಾಜ್ಯದ ಮೇಲೆ ತಮ್ಮ ವ್ಯಾಪಕ ವಾರ್ಷಿಕ ಪ್ರವಾಸಗಳು ನೀಡಿದರು ಇದೆ, ಈ ಅವಧಿಯಲ್ಲಿ ಅವರು ವೈಯಕ್ತಿಕವಾಗಿ ಎಲ್ಲವನ್ನೂ ಅಧ್ಯಯನ ಮತ್ತು ಜನರ ಕುಂದುಕೊರತೆಗಳನ್ನು ನಿವಾರಿಸಲು ಮತ್ತು ದುಷ್ಟ ಮಾಡುವವರನ್ನು ಶಿಕ್ಷಿಸಲು ಪ್ರಯತ್ನಿಸಿದರು. ಪೋರ್ಚುಗೀಸ್ ಚರಿತ್ರೆ ಡೊಮಿಂಗೊ ಪೇಸ್ "ಅತ್ಯಂತ ಭಯ ಮತ್ತು ಪರಿಪೂರ್ಣ ಕಿಂಗ್ ... ಹೆಚ್ಚು ನ್ಯಾಯದ ಒಂದು ಶ್ರೇಷ್ಠ ರಾಜ ಮತ್ತು ಒಂದು ಮ್ಯಾನ್", ಎಂದು ಕೃಷ್ಣ ರಾಯ ಹೊಗಳುತ್ತಾನೆ. ವೈಷ್ಣವ ಅನುಯಾಯಿ ಆದರೂ ಎಲ್ಲ ಪಂಥಗಳು ಸಂಬಂಧಿಸಿದಂತೆ ತೋರಿಸಿತು, ಮತ್ತು ಸಣ್ಣ ಧಾರ್ಮಿಕ ಪೂರ್ವಾಗ್ರಹ ಉಡುಗೊರೆಗಳನ್ನು ನೀಡುವ ಅಥವಾ ಸಹಚರರು ಮತ್ತು ಅಧಿಕಾರಿಗಳು ತಮ್ಮ ಆಯ್ಕೆಯ ರೂಪದಲ್ಲಿ ಅವನನ್ನು ಪ್ರಭಾವ ಇಲ್ಲ. ಬಾರ್ಬೋಸಾ ಪ್ರಕಾರ, "ಕಿಂಗ್ ಯಾವುದೇ ಕಿರಿಕಿರಿಗೆ ಬಳಲುತ್ತಿರುವ ಇಲ್ಲದೆ, ಪ್ರತಿ ವ್ಯಕ್ತಿ ಬಂದು ಹೋಗಿ, ತನ್ನ ಮತ ಪ್ರಕಾರ ಜೀವಿಸಬಹುದಾಗಿದೆ ಅಂದರೆ ಸ್ವಾತಂತ್ರ್ಯ ನೀಡುತ್ತದೆ".

ಚಟುವಟಿಕೆಗಳು #

ಪ್ರವಾಸ ಕೈಗೊಳ್ಳುವದು

  • ಅಂದಾಜು ಸಮಯ : ೨ ದಿನಗಳು
  • ಬೇಕಾಗುವ ಪದಾರ್ಥಗಳು ಅಥವಾ ಸಂಪನ್ಮೂಲಗಳು : ಪ್ರವಾಸಕ್ಕೆ ಹೋಗುವ ಎಲ್ಲ ಸೌಕರ್ಯಗಳನ್ನು ಮಾಡಿಕೊಳ್ಳಬೇಕು
  • ಪೂರ್ವಾಪೇಕ್ಷಿತ/ ಸೂಚನೆಗಳು : ಸಾಲಾಗಿ ಹೋಗುವದು ಸರಿಯಾಗಿ ಪರಿವೀಕ್ಷಣೆ ಮಾಡುವದು
  • ಬಹುಮಾಧ್ಯಮ ಸಂಪನ್ಮೂಲಗಳು :ಇಲ್ಲ
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು : ಇಲ್ಲ
  • ವಿಧಾನ : ಪ್ರವಾಸ ಮಾಡುವದು
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  1. ಪ್ರವಾಸದಲ್ಲಿ ನೋಡಿದ ಸ್ಥಳಗಳನ್ನು ದಾಖಲಿಸಿಕೊಳ್ಳಿ
  2. ಎನಾದರು ಆರೋಗ್ಯ ಸಮಸ್ಯೆ ಎದುರಾದರೆ ಹೇಳಿ
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  1. ಪ್ರವಾಸದ ಅನುಭವಗಳನ್ನು ದಾಖಲಿಸಿಕೊಂಡು ಚರ್ಚಿಸಿ ನಿರ್ಣಯಕ್ಕೆ ಬರುವದು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು