Cluster Development Pushpalatha Chithradurga
ಪುಷ್ಪಲತಾ , ಹಿರಿಯ ಉಪನ್ಯಾಸಕರು,
ಜಿಲ್ಲಾ ಶಿಕ್ಷ ಣ ಮತ್ತು ತರಬೇತಿ ಸಂಸ್ಥೆ, ದಾವಣಗೆರೆ.
ಹೊನ್ನಾಳಿ ತಾಲ್ಲೂಕು ಬೆನಕನಹಳ್ಳಿ ಕ್ಲಸ್ಟರ್ ಸಬಲೀಕರಣ ಪ್ರಕ್ರಿಯೆ
ಹೊನ್ನಾಳೀ ತಾಲ್ಲೂಕು ಬೆನಕನಹಳ್ಳಿ ಕ್ಲಸ್ಟರ್ ಸಬಲೀಕರಣ ಪ್ರಕ್ರಿಯೆ ಯನ್ನು ಕೈಗೆತ್ತಿಕೊಂಡ ಪ್ರಕಲ್ಪಕಾರರಾದ ಶ್ರೀ ಕರಿಬಸಪ್ಪ , ಸಿ.ಆರ್.ಪಿ. ಹಾ ಗೂ ಷಣ್ಮುಖಪ್ಪ , ಸಿ.ಆರ್.ಪಿ. ಅವರುಗಳಿಗೆ ಮಾರ್ಗದರ್ಶನ ಮಾಡಲಾಯಿತು.
ಪ್ರಕಲ್ಪಕಾರರಲ್ಲಿ ಆತ್ಮವಿಶ್ವಾಸವನ್ನು ಗಟ್ಟಿಗೊಳೀಸಲು ಹಿಂದಿನ ಪ್ರಕಲ್ಪ ಪ್ರಕ್ರಿಯೆ ಗಳ ನಿದರ್ಶನ ವನ್ನು ನೀಡಲಾಗಿದ್ದು ಹೆಚ್ಚು ಪ್ರಭಾವವನ್ನು ಬೀರಿತು . ಉದಾಹರಣೆಗೆ ಚಿತ್ತದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಕೊಮ್ಮನ ಪಟ್ಟಿ ಸರ್ಕಾರಿ ಹಿರಿಯ ಪ್ರಾ. ಶಾಲೆಯ ಲ್ಲಿ ಕೈಗೊಂಡ ನಾಯಕತ್ವ ಸಬಲೀಕರಣ ಪ್ರಕಲ್ಪದಲ್ಲಿ ನ ಒಂದು ಅನುಭವ ಹೀಗಿದೆ:-
ಶಾಲೆಯ ಹಿಂಬಾಗದಲ್ಲಿ ದಾನಿಗಳಿಂದ ಕೊಡುಗೆಯಾದ ಮೂರುನಿವೇಶನಗಳಿದ್ದು ಒಂದು ಮತ್ತು ಮೂರನೇ ನಿವೇಶನಗಳನ್ನು ಶಾಲೆಗೆ ಬಿಟ್ಟುಕೊಡುವುದರಲ್ಲಿ ಯಾವುದೇ ತೊಂದರೆ ಇದ್ದಿರಲಿಲ್ಲ , ಆದರೆ ೨ನೇ ನಿವೇಶನ ವನ್ನು ಕೊಡಲು ಒಪ್ಪಿದ್ದ ಮಾಲಿಕರು ನಂತರ ದ ದಿನಗಳಲ್ಲಿ ನಿರಾಕರಿಸಿದ್ದಲ್ಲದೇ ಯಾರೂ ಸದರಿ ನಿವೇಶನದಮೂಲಕ ಓಡಾಢಬಾರದೆಂದು ನಿಭಂದನೆ ಹೇರಿದ್ದರು. ಈ ಕಾರಣ ಈ ಮೂರು ನಿವೇಶನಗಳನ್ನು ಬಳಸುವುದು ಕಷ್ಟಸಾಧ್ಯವಾಗಿತ್ತು . ಈ ಶಾಲೆಯಲ್ಲಿ ಪ್ರಕಲ್ಪ ತೆಗೆದು ಕೊಂಡ ಹಿನ್ನೆಲೆಯಲ್ಲಿ ನಿವೇಶನದ ಸಮಸ್ಯಯನ್ನು ಪ್ರಕಲ್ಪಕಾರರು ಮಾಲಿಕರನ್ನು ಭೇಟಿಯಾಗಿ ನಕಾರಾತ್ಮಕ ಪ್ರತಿಕ್ರಿಯೆಯನ್ನು ಅನುಭವಿಸಿ ಹಿಂದಿರುಗಿದ್ದರು. ಆ ಸಮಯದಲ್ಲಿ ಶೈಕ್ಷಣೀಕ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಕಲಿತ ಅಂಶಗಳನ್ನು ಅವರು ಅಳವಡಿಸಿಕೊಂಡದ್ದು ಇಲ್ಲಿ ಉಲ್ಲೇಖೀಸಲೇ ಭೇಕಾಗಿರುವ ಗಮನಾರ್ಹ ಅಂಶವಾಗಿದೆ, ನಾವು ಸರ್ಕಾರಿ ನೌಕರರು/ ಈಮಾಲಿಕನನ್ನು ಓಲೈಸುವುದು ಅಸಾಧ್ಯ / ನಮಗ್ಯಾಕೆ ಬೇಕು ಈ ಉಸಾಬರಿ ಎಂದು ಉಪೇಕ್ಷ ಮಾಡದೇ ಕಾರ್ಯಕ್ರಮದಿಂದ ಪ್ರೇರಿತರಾಗಿ - "ನೀವು ಗೆಲ್ಲಬಲ್ಲಿರಿ" “ಕ್ಷಣಹೊತ್ತು ಆಣಿಮುತ್ತು" ಪುಸ್ತಕಗಳ ಲ್ಲಿನ ಎಷ್ಟೋ ವಿಚಾರಗಳ ಪರಿಚಯ ಮಾನವಸಂಪನ್ಮೂಲ ಅಭಿವೃದಧಿಯ ವಿಚಾರಗಳ ಚರ್ಚೆ ಯಾದ ಹಿನ್ನೆಲೆಯಲ್ಲಿ -ತಾಳ್ಮೆ ಯಿಂದ ವರ್ತಿಸಿ ಹಿಮ್ಮಾಹಿತಿ ಪ್ರಕ್ರಿಯೆಯನ್ನು ಅನುಸರಿಸಿ ಮತ್ತು ಮಾಲಿಕರ ಮನೆಗೇ ಹೋಗಿ ಭೇಟಿಯಾಗಿ ಅವರ ಮನ ಓಲೈಸಿ ವಿನಂತಿಸಲಾಗಿ ಅವರು ಆ ನಿವೇಶನವನ್ನು ಸಂತೋಷದಿಂದ ಶಾಲೆಗೆ ಬಿಟ್ಟುಕೊಟ್ಟಿರುತ್ತಾರೆ.
ಇಂತಹ ಯಶೋಗಾಥೆಗಳ ಪ್ರೇರಣೆಯ ಹಿನ್ನೆಲೆಯಲ್ಲಿ ಸದರಿ ಸಿಆರ್.ಪಿಗಳು ಬೆನಕನಹಳ್ಳೀ ಕ್ಲಸ್ಟರ್ ನ ಸಬಲೀಕರಣಕಕ್ಕೆ ಮುಂದಾದರು. ಸರ್ಕಾರಿ. ಹಿ. ಪ್ರಾ. ಶಾಲೆ ಬೆನಕನಹಳ್ಳಿ ಯಲ್ಲಿ ಮುಖ್ಯಶಿಕ್ಷಕರು ,ಶಿಕ್ಷಕರು, ಎಸ್.ಡಿ.ಎಮ್,ಸಿ. ಯವರ ಸಭೆ ಕರೆದು- ಕ್ಲಸ್ಟರ್ ಸ್ಥಾಪನೆಯ ಉದ್ದೇಶ ಪರಿಚಯಿಸಿ,, ಕ್ಲಸ್ರ್ ಈಗಹೇಗಿದೆ, ? , ಹೇಗಿದ್ದರೆ ಉಪಯುಕ್ತ..... ಎಂಬುದನ್ನು ಅವರಿಂದಲೇ ಬುದ್ದಿಮಂಥನದ ಮೂಲಕ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಹೇಗಿರಬೇಕು ಎಂಬ ಬಗ್ಗೆ ನೀಡಿದ ಉಪಾಯಗಳನ್ನು ಪಟ್ಟಿಮಾಡಿ ಆದ್ಯತೆಗೊಳಿಸಲಾಯಿತು.
ಈ ಬುದ್ದಿ ಮಂಥನದ ಆದ್ಯತೀಕರಣ ಪಟ್ಟಿಗನುಗುಣವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ಪ್ರಾರಂಭಿಸಲಾಯಿತು, ನಿರಂತರವಾಗಿ ಶಿಕ್ಷಕರ ಸಹಕಾರ ಸಮುದಾಯದವರ ಸಹಕಾರ, ಕ್ಲಸ್ಟರ್ ನ ಇತರೆ ಶಾಲೆಗಳ ಸಹಕಾರ ಪಡೆಯಲು ಈ ಕಾರ್ಯಕ್ರಮದ ವಿವಿಧ ತಂಡನಿರ್ಮಾಣ ,ಚಟುವಟಿಕೆಗಳು, ಆಟಗಳು ಸಹಾಯಕವಾದವು, ಇದರೊಂದಿಗೆ ಪ್ರಕಲ್ಪಕಾ ರರು ತಮ್ಮ ಪ್ರಭಾವವಲಯವನ್ನು ಹೆಚ್ಚಿಸಿಕೊಂಡಿರುವುದು ಇಲ್ಲಿ ಯಶಸ್ಸಿಗೆ ಕಾರಣವಾಗಿದೆ,
ಇದರಿಂದಾಗಿ ಕಂಡುಕೊಳ್ಳಲಾದ ದನಾತ್ಮಕ ಬದಲಾವಣೆಗಳು ಈ ಕೆಳಗಿನಂತೆ ಇವೆ. -----
೧. ಸಿ. ಆರ್.ಸಿ. ಕೇಂದ್ರವನ್ನು ಸಮುದಾಯದ ಸಕಾರದೊಂದಿಗೆ ಉತ್ತಮವಾದ ಬಣ್ಣ ಗಳಿಂದ ಅಲಂಕರಿಸಲಾಗಿದೆ, ಪ್ರವೇಶದ ಗೋಡೆಯಲ್ಲಿ ಮಿಕ್ಕಿಮೌಸ್, ಚಿತ್ರ , ಉಳಿದಂತೆ ಆಕರ್ಷಕ ಹಾಗೂ ಶೈಕ್ಷಣಿಕ ಪರಿಣಾವಕಾರಿ ಚಿತ್ರಗಳು ಗಮನ ಸೆಳೆಯುವಂತೆ
೨. ಸಿ.ಆರ್.ಸಿ. ಕೇಂದ್ರದಲ್ಲಿ ಅವಶ್ಯಕ ಪೀಠೋಪಕರಣಗಳನ್ನು ಸಮುದಾಯದ ಸಹಕಾರದೊಂದಿಗೆ ಸಂಗ್ರಹಿಸಲಾಗಿದೆ.
೩. ಈ ಸಿ.ಆರ್.ಸಿ. ಕೇಂದ್ರದಲ್ಲಿ ಉತ್ತಮ ತೆರೆದ ಗ್ರಂಥಾಲಯವನ್ನು ಸ್ಥಾಪಿಸಗಿದೆ.
೪. ಶಿಕ್ಷಕರು ಈ ಕೇಂದ್ರಕ್ಕೆ ಭೇಟಿನೀಡಿದಾಗ ಅಪೇಕ್ಷಿಸುವ ಎಲ್ಲ ಕಲಿಕೋಪಕರಣ ಗಳನ್ನು ಶಿಕ್ಷಕರ ಸಹಾಯದೊಂದಿಗೆ ತಯಾರಿಸಿ ಸಂಗ್ರಹಿಸಲಾಯಿತು .
೫.ಕ್ಲಸ್ಟರ್ ಕೇಂದ್ರವನ್ನು ಉನ್ನತೀ ಕರಿಸುವುದರ ಜೊತೆಗೆ ಒಳಪಟ್ಟ ಶಾಲೆಗಳನ್ನೂ ಉನ್ನತೀಕರಿಸುವುದು ಗುರಿಯಾಗಿಟ್ಟು ಕೊಂಡು ಕಾರ್ಯ ನಿರ್ವಸಲಾಗಿದೆ. LINK BITWEEN THE SCHOOLS AND CLUSTER- ಎಂಬ ಪರಿಕ್ಲಪನೆಗೆ ಆದ್ಯತೆ ನೀಡಿದೆ.
೬. ಕ್ಲಸ್ಟರ್ ನಿವFಹಣೆ ಗಾಗಿ ಒಂದು ಕ್ಲಸ್ಟರ್ ನಿರ್ವಹಣಾ ಸಮಿತಿಯನ್ನು ರಚಿಸಿದ್ದು ಇದರಲ್ಲಿ ಆ ಕ್ಲಸ್ಟರ್ ನ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು ಸದಸ್ಯರಾಗಿದ್ದು ಕೆಂದ್ರ ಶಾಲೆಯ ಮುಖ್ಯಶಿಕ್ಷಕರು ಅಧ್ಯಕ್ಷಕಾಗಿರುತ್ತಾರೆ, ಸಿ.ಆರ್.ಪಿ. ಇಲ್ಲಿ ಕಾರ್ಯದಶಿF ಮಾತ್ರ. ಇದರಿಂದ ಸಿ.ಆರ್.ಪಿ ಬದಲಾದರೂ ಗುಣಾತ್ಮಕತೆ ಕಡಿಮೆಯಾಗದಂತೆ ನಿರ್ವಹಿಸಬಹುದಾಗಿದೆ.
೭. ಉತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ರಚಿತವಾದ ಸಿ.ಆರ್.ಜಿ.. ಗುಂಪು. ಇಲ್ಲಿ ಶಿಕ್ಷಕರ ಎಲ್ಲ ಶೈಕ್ಷಣೀಕ ಸಮಸ್ಯಗಳಿಗೆ ಇಲ್ಲಿ ಪರಿಹಾರ ದೊರೆಯಬಹುದೆಂಬ ವಿಶ್ವಾಸವನ್ನು ಉಂಟುಮಾಡಿತು.
೮. ಈ ಕ್ಲಸ್ಟರ್ ನಿರ್ವಹಣೆಗೆ ಕೇಂದ್ರೀಯ ಶಾಲೆಯ ದೈಹಿಕ ಶಿಕ್ಷಕರಿಗೆ ಜವಾಬ್ದಾರಿ ನೀಡಿ ಸಿ. ಆರ್.ಪಿ.ಯು- ಕೇಂದ್ರ ಸ್ಥಳದಲ್ಲಿ ಇಲ್ಲದಿರುವಾಗ ಶಿಕ್ಷಕರಿಗೆ 'ಕೇಂದ್ರ ಮುಚ್ಚಿದೆ ' ಎನ್ನುವ ಭಾವನೆ ಬರದಂತೆ ನಿವFಹಿಸಲು ಕ್ರಮ ಕೈಗೊಳ್ಳಲಾಗಿದೆ.
೯. ಕ್ಲಸ್ಟರ್ ಸಮಾಲೋಚನಾ ಸಭೇಗಳನ್ನು ಇಲಾಖಾ ನಿಯಮಾನುಸಾರ ವಿಷಯವಾರು ಮತ್ತು ನಲಿಕಲಿ ಪ್ರಾಧಾನ್ಯವಾಗಿ ನಿವFಹಿಸುವುದರೊಂದಿಗೆ ವಿಶೇಷವಾಗಿ ಶಿಕ್ಷಕರಲ್ಲಿ ಗುಣಾತ್ಮಕತೆ ಪರಿಕಲ್ಪನೆ ಬೆಳೆಸುವಂತಹ ,ಸಂವಾದ ಕಾರ್ಯಕ್ರಮಗಳನ್ನು ಅಂದರೆ ತೊತ್ತೊಚಾನ ಪುಸ್ತಕ ಕುರಿತ ಸಂವಾದ , NCF 2005 ಗೆ ಸಂಬಂಧಿಸಿದ ಚರ್ಚೆಗಳು ಮುಂತಾದವನ್ನು ನಿರ್ವಹಿಸಲಾಗುತ್ತಿದೆ.
೧೦. ಕ್ಲಸ್ಟರ್ ಕೇಂದ್ರ ವು ಆ ಕ್ಲಸ್ಟರ್ನ ಎಲ್ಲ ಶಾಲೆಗಳ ಶಿಕ್ಷಕರು ತಮ್ಮ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ಸಂಪಕಿFಸುವಂತೆ ಹಾಗೂ ತಮಗೆ ಅವಶ್ಯವಾದ ಕಲಿಕೋಪಕರಣಗಳ ಮಾಹಿತಿ ಪಡೆಯಲು ಸದಾ ಸಿದ್ದವಿರುವಂತೆ ಇದ್ದು. ಮಾದರಿ ಯಾಗಿದೆ, ಇದಕ್ಕೆ ಅಲ್ಲಿಯ ಎಲ್ಲಾ ಶಿಕ್ಷಕರು, ಸಮುದಾಯದವರು . ಮುಖ್ಯಶಿಕ್ಷಕರು, ಗಳಲ್ಲಿ ಉಂಟಾದ ತಂಡನಿರ್ಮಾಣ ಮನೋಭಾವನೆ, ಹಾಗೂ ಬದ್ದತೆ ಕಾರಣವಾಗಿದೆ. ಇದು ELDP CONSEPT ನಿಂದ ಸಾಧ್ಯವಾಯಿತು.
- pushpalatha's blog
- Log in to post comments