ಇಂದು ದಿನಾಂಕ 13-01-2015 ರ ಮಂಗಳವಾರದಂದು ಬೆಳಿಗ್ಗೆ 10:30 ಗಂಟೆಗೆ ತರಬೇತಿಯು ಆರಂಭವಾಯಿತು. ತರಬೇತಿಯನ್ನು ಪ್ರಾರ್ಥನೆ ಗೀತೆ ಹಾಡುವ ಮೂಲಕ ಚಾಲನೆ ನೀಡಲಾಯಿತು. ತರಬೇತಿಯ ಆರಂಭವಾದ ನಂತರ ನಿನ್ನೆ ದಿನ ನಡೆದ ತರಬೇತಿ ವಿಷಯಗಳ ಕುರಿತು ಹಿಮ್ಮಾಹಿತಿ ಪಡೆಯಲಾಯಿತು. ನಿನ್ನೆ ನಮಗೆಲ್ಲಾ ಹೇಳಿಕೊಡಲಾದ ವಿಷಯಗಳ ಕುರಿತು ಮನನ ಮಾಡಿಕೊಳ್ಳಲಾಯಿತು. ಇಂದಿನ ದಿನದ ತರಬೇತಿಯಲ್ಲಿ ನಮಗೆ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಗಳು ಹಾಜರಿರಲಿಲ್ಲ ಕಾರಣ ಅವರು ಚುನಾವಣಾ ತರಬೇತಿಯ ಪ್ರಯುಕ್ತ ಕಲಬುರಗಿಗೆ ತೆರಳಿದ್ದರು. ಇಂದಿನ ದಿನ ನಾವು ಡಯಟ್ ಕಮಲಾಪೂರದ ಉಪನ್ಯಾಸಕರಾದ ಶ್ರೀ ರಾಯಪ್ಪರೆಡ್ಡಿ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದುಕೊಂಡೆವು. ಇಂದಿನ ದಿನದ ತರಬೇತಿಯಲ್ಲಿ ನಾವು ನಮ್ಮ ಈ ಮೇಲ್ ಖಾತೆಗಳಿಗೆ ಬಂದಿರುವ ಮೇಲ್ ಗಳನ್ನು ತೆರೆಯುವುದು ಮತ್ತು ಬಂದಿರುವ ಮೇಲ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವುದನ್ನು ಜೊತೆಗೆ ಮೇಲ್ ಗಳಿಗೆ ರಿಪ್ಲೇ ಮಾಡುವುದನ್ನು ಕಲಿತುಕೊಂಡೆವು. ತದನಂತರ ತರಬೇತಿಯಲ್ಲಿ ಮುಂದುವರೆದು ಕೊಯರ್ ನ ಬಗ್ಗೆ ಮಾಹಿತಿಯನ್ನು ಪಡೆದುಕೊಂಡೆವು. ಇಲ್ಲಿಗೆ ತರಬೇತಿಯಲ್ಲಿ ಊಟದ ವಿರಾಮ ನೀಡಲಾಯಿತು. ಊಟದ ನಂತರ ತರಬೇತಿ ಮತ್ತೆ ಮುಂದುವರೆಯಿತು ಈ ಅವಧಿಯಲ್ಲಿ ತರಬೇತಿಯಲ್ಲಿ ನೆರೆದ ಎಲ್ಲಾ ಶಿಬಿರಾರ್ಥಿಗಳಿಗೆ ಇನ್ನು ಈ ಮೇಲ್ ಖಾತೆಯನ್ನು ತೆರೆಯದೆ ಇರುವವರಿಗೆ ಈ ಮೇಲ್ ಖಾತೆ ತೆರೆಯುವ ಕುರಿತು ತಿಳಿಸಲಾಯಿತು. ಎಲ್ಲಾ ಶಿಬಿರಾರ್ಥಿಗಳಿಗೆ ಈ ಅವಧಿಯಲ್ಲಿ ಪ್ರಾಯೋಗಿಕವಾಗಿ ಕಂಪ್ಯೂಟರ್ ಗಳನ್ನು ಕೊಟ್ಟು ಅವರಿಂದಲೇ ಅವರ ಈ ಮೇಲ್ ಖಾತೆಗಳನ್ನು ತೆರೆಸಲಾಯಿತು.