ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ಇವರ ಆದೇಶದಂತೆ ಕಮಲಾಪೂರ ಡಯಟ್ನಲ್ಲಿ ಅಫಜಲಪೂರ ತಾಲೂಕಿನ ಎಲ್ಲಾ ಸರಕಾರಿ ಪ್ರೌಢ ಶಾಲೆಗಳ ಮುಖ್ಯ ಗುರುಗಳಿಗೆ ಹೆಚ್ ಟಿ ಎಪ್ ತರಬೇತಿ ಯಶಸ್ವಿಯಾಗಿ ನಡೆಯುತ್ತಿದೆ.
+
+
ತರಬೇತಿಯ ಮೊದಲನೆಯ ದಿನದ ವರದಿ ಈ ರೀತಿಯಾಗಿದೆ, ಅಫಜಲಪೂರ ತಾಲೂಕಿನ ಮುಖ್ಯ ಗುರುಗಳು ೧೦-೩೦ ಗಂಟೆಗೆ ತರಬೇತಿಯ ಕೋಣೆಗೆ ಹಾಜರಾಗಿದ್ದರು. ನಂತರ ತರಬೇತಿಯ ಉದ್ಘಾಟನೆಯನ್ನು ಶ್ರೀ ರಾಯಪ್ಪ ರೆಡ್ಡಿ ಸರ್ ನೊಡಲ್ ಅಧಿಕಾರಿಗಳು ನಡೆಸಿಕೊಟ್ಟರು ಅವರು ಈ ತರಬೇತಿಯ ಗುರಿ ಹಾಗೂ ಉದ್ದೇಶಗಳನ್ನು ಕುರಿತು ಮಾತನಾಡಿದರು. ಅದೇ ರೀತಿ ಶ್ರೀ ಗುಂಡಪ್ಪ ಸರ್ ಕಿರಿಯ ಉಪನ್ಯಾಸಕರು ಡಯಟ್ ಕಮಲಾಪೂರ ಇವರು ತರಬೇತಿಯನ್ನು ಉದ್ದೇಶಿಸಿ ಮಾತನಾಡಿದರು. ನಂತರ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾದ ಮಲ್ಲಿನಾಥ ಸಜ್ಜನ ಇವರು ಐದು ದಿನದ ತರಬೇತಿಯ ಸಂಪೂರ್ಣ ಮಾಹಿತಿ ನೀಡಿದರು ಹಾಗೂ ಅಬೊಂಟು ತಂತ್ರಜ್ಞಾನದ ಬಗ್ಗೆ ವಿವರಿಸಿದರು .
+
+
ಪ್ರಥಮವಾಗಿ ನಮಗೆ ಇ-ಮೇಲ್ ಅಕೌಂಟ್ ಯಾವ ರೀತಿ ರಚಿಸಬೇಕು ಎಂಬುದನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿದರು ಜೊತೆಗೆ ಎಲ್ಲರೂ ತಮ್ಮ ತಮ್ಮ ಇ-ಮೇಲ್ ರಚಿಸಲು
+
ತಿಳಿಸಿದರು. ಚಹಾ ವಿರಾಮದ ನಂತರ ನಮಗೆ ಪ್ರತ್ಯೇಕವಾಗಿ ಸಿಸ್ಟಮ್ ನೀಡಿ ನಮ್ಮ ಶಾಲೆಯ ಜಿ-ಮೇಲ್ ರಚಿಸಲು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು ಅದೇ ರೀತಿಯಾಗಿ ಜಿ-ಮೇಲ್ ರಚಿಸಲು ಎಲ್ಲಾ ಸಿಬ್ಬಂದಿ ಜಿವೈಯಕ್ತಿಕವಾಗಿ ಮಾರ್ಗದರ್ಶನ ನೀಡಿದರು. ಹಾಗೂ ಕಂಪ್ಯೂಟರ್ ನಲ್ಲಿ ಪಠ್ಯ ರಚಿಸುವ ಬಗ್ಗೆ ನಮಗೆ ಕೀ ಬೋರ್ಡ ಮಾಹಿತಿ ನೀಡಿದರು.
+
+
ಊಟದ ವಿರಾಮದ ನಂತರ ಜಿ-ಮೆಲ್ ನಲ್ಲಿರುವ ಎಲ್ಲಾ ಆಯ್ಕೆಗಳನ್ನು ಪ್ರಾಯೋಗಿಕವಾಗಿ ಪರಿಚಯಿಸಿ ಮಾಹಿತಿ ನೀಡಿದರು. ನಾವು ತಯಾರಿಸಿದ ಎಲ್ಲಾ ಶಾಲೆಗಳ ಜಿ- ಮೆಲ್ ಗಳನ್ನು ಅವರು ಪಡೆದರು. ನಾವು ಎಲ್ಲಾ ಮಾಹಿತಿಯನ್ನು ಯಶಸ್ವಿಯಾಗಿ ಪಡೆದು ೫-೦೦ ಗಂಟೆಗೆ ತರಬೇತಿಯ ಹಾಲಿನಿಂದ ನಿರ್ಗಮಿಸಿದೆವು.