ಎಸ್.ಟಿ.ಎಫ್ ತರಬೇತಿಯ ಸಂಯೋಜಕರು,ಡಯಟ್ ನ ಹಿರಿಯ ಉಪನ್ಯಾಸಕರು ಆಗಿರುವ ಶ್ರೀಯುತ ರಂಗಧಾಮಪ್ಪರವರಿಂದ ಸ್ವಾಗತದೊಂದಿಗೆ ಎರಡನೇ ದಿನದ ತರಬೇತಿ ಪ್ರಾರಂಭಗೊಂಡಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ಸದಾನಂದ ಬೈಂದೂರರವರ ಚಿಂತನ ಡಾ.ಸುಕುಮಾರ ಗೌಡರವರ ಲೇಖನ ಮಗು ಶಿಕ್ಷಕರಿಗೆ ಬರೆದಂತ "ಗುರುವಿಗೊಂದು ಮನವಿ" ಆಧರಿಸಿದ್ದು ಎಲ್ಲರನ್ನು ಚಿಂತನೆಗೆ ಹಚ್ಚಿತು. ತದನಂತರದಲ್ಲಿ ಶಿಕ್ಷಕಿ ಶ್ರೀಮತಿ ಶಾಲಿನಿ ಶೆಟ್ಟಿ ಯವರು ಮೊದಲನೆ ದಿನದ ತರಬೇತಿಯ ಸಮಗ್ರ ಮಾಹಿತಿಯನ್ನು ಚಾಚು ತಪ್ಪದೆ ವರದಿ ರೂಪದಲ್ಲಿ ಮಂಡಿಸಿದರು. ವರದಿಯ ನಂತರದಲ್ಲಿ ಶ್ರೀ ರಂಗಧಾಮಪ್ಪ ಸರ್ ರವರು ಮನೋನಕ್ಷೆ ತಯಾರಿ ಹಾಗೂ ನಾಲ್ಕಾರು ಮನೋನಕ್ಷೆಗಳನ್ನು ಹೈಪರ್ ಲಿಂಕ್ ಮಾಡುವುದಕ್ಕಾಗಿ ಶಿಕ್ಷಕರನ್ನು ಹತ್ತು ಗುಂಪುಗಳನ್ನಾಗಿ ಮಾಡಿ ೮ನೇ ತರಗತಿಯ ಸಮಾಜವಿಜ್ಞಾನದ ೧೦ ಪಾಠಗಳನ್ನು ಹಂಚಿಕೆ ಮಾಡಿದರು.ಸಂಪನ್ಮೂಲ ಶಿಕ್ಷಕರಾದ ಶ್ರೀ ಮಹಾಬಲೇಶ್ವರ ಭಾಗವತರವರು ಸ್ಥಳೀಯ ಸರಕಾರ ಪಾಠವನ್ನು ತೆಗೆದುಕೊಂಡು ಹಲವು ಮನೋನಕ್ಷೆಗಳನ್ನು ತಯಾರಿಸಿ ಹೈಪರ್ ಲಿಂಕ್ ಮಾಡಿ,ನಾವೂ ಕೂಡ ಮಾಡುವಂತೆ ಮಾಡಿಸಿದರು. ಎಲ್ಲಾ ಶಿಕ್ಷಕರು ತಾವು ಮಾಡಿದ ಸ್ಥಳೀಯ ಸರ್ಕಾರದ ಮನೋನಕ್ಷೆಗಳನ್ನು ಶ್ರೀರಂಗಧಾಮಪ್ಪ ಸರ್ ರವರಿಗೆ ಮೇಲ್ ಮಾಡಿದರು.ಚಹ ವಿರಾಮದ ನಂತರ ಅದೇ ಪಾಠಕ್ಕೆ ಸಂಬಂಧಪಟ್ಟ ಹಾಗೆ ನಾಲ್ಕಾರು ಮನೋನಕ್ಷೆಗಳನ್ನು ತಯಾರಿಸಿ ಹೈಪರ್ಲಿಂಕ್ ಮಾಡುವ ಬಗ್ಗೆ ಹಾಗು ಲಿಂಕ್ ತೆಗೆಯುವ ವಿಧಾನವನ್ನು ತಿಳಿಸಿಕೊಟ್ಟರು.ಭೋಜನ ವಿರಾಮದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸದಾನಂದರವರು ಕೋಯರ್ ಅಂದರೆ ಕರ್ನಾಟಕ ಮುಕ್ತ ವಿಷಯ ಸಂಪನ್ಮೂಲಗಳು ಇದರ ಬಗ್ಗೆ ವಿವರಣಾತ್ಮಕವಾದ ಮಾಹಿತಿಯನ್ನು ತಿಳಿಸಿಕೊಟ್ಟರು.ಕೊಯರ್ ನಲ್ಲಿರುವ ವಿಷಯಸಂಪನ್ಮೂಲಗಳನ್ನು ಶಿಕ್ಷಕರು ಬೋಧನೆಯಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಟ್ಟರು.ಶಿಕ್ಷಕರು ಕೊಯರ್ ನಲ್ಲಿ ಬೇರೆ ಬೇರೆ ರಾಜ್ಯಗಳ ಪಠ್ಯವಿಷಯಗಳನ್ನು, ೮ ಹಾಗು ೯ನೇ ತರಗತಿಯ ಪಾಠಗಳ ಬಗೆಗಿರುವ ಮಾಹಿತಿಯ ಹುಡುಕಾಟ ನಡೆಸಿದರು. ಮಧ್ಯಾಹ್ನದ ಚಹ ವಿರಾಮದ ನಂತರದಲ್ಲಿ ಶಿಕ್ಷಕರು ಫ್ರಿಮೈಂಡ್ ನಲ್ಲಿ ಕನ್ನಡ ಟೈಪಿಂಗ್ ಮಾಡುವುದನ್ನುನ ಕಲಿತು, ಆರಿಸಿಕೊಂಡಂತ ಪಾಠವಿಷಯಗಳ ಕುರಿತು ಮನೋನಕ್ಷೆಗಳನ್ನು ತಯಾರಿಸುವಲ್ಲಿನ ತಲ್ಲೀನತೆಯು ಎರಡನೇಯ ದಿನದ ತರಬೇತಿಯ ಸಫಲತೆಯನ್ನು ಸೂಚ್ಯವಾಗಿ ತಿಳಿಸಿತ್ತು. '''ವರದಿ''' '''ಶ್ರೀಮತಿ ಜ್ಯೋತಿ,ಸಹಶಿಕ್ಷಕಿ ಸ.ಪ.ಪೂ.ಕಾಲೇಜು,ಶಂಕರನಾರಾಯಣ.ಕುಂದಾಪುರ | ಎಸ್.ಟಿ.ಎಫ್ ತರಬೇತಿಯ ಸಂಯೋಜಕರು,ಡಯಟ್ ನ ಹಿರಿಯ ಉಪನ್ಯಾಸಕರು ಆಗಿರುವ ಶ್ರೀಯುತ ರಂಗಧಾಮಪ್ಪರವರಿಂದ ಸ್ವಾಗತದೊಂದಿಗೆ ಎರಡನೇ ದಿನದ ತರಬೇತಿ ಪ್ರಾರಂಭಗೊಂಡಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ಸದಾನಂದ ಬೈಂದೂರರವರ ಚಿಂತನ ಡಾ.ಸುಕುಮಾರ ಗೌಡರವರ ಲೇಖನ ಮಗು ಶಿಕ್ಷಕರಿಗೆ ಬರೆದಂತ "ಗುರುವಿಗೊಂದು ಮನವಿ" ಆಧರಿಸಿದ್ದು ಎಲ್ಲರನ್ನು ಚಿಂತನೆಗೆ ಹಚ್ಚಿತು. ತದನಂತರದಲ್ಲಿ ಶಿಕ್ಷಕಿ ಶ್ರೀಮತಿ ಶಾಲಿನಿ ಶೆಟ್ಟಿ ಯವರು ಮೊದಲನೆ ದಿನದ ತರಬೇತಿಯ ಸಮಗ್ರ ಮಾಹಿತಿಯನ್ನು ಚಾಚು ತಪ್ಪದೆ ವರದಿ ರೂಪದಲ್ಲಿ ಮಂಡಿಸಿದರು. ವರದಿಯ ನಂತರದಲ್ಲಿ ಶ್ರೀ ರಂಗಧಾಮಪ್ಪ ಸರ್ ರವರು ಮನೋನಕ್ಷೆ ತಯಾರಿ ಹಾಗೂ ನಾಲ್ಕಾರು ಮನೋನಕ್ಷೆಗಳನ್ನು ಹೈಪರ್ ಲಿಂಕ್ ಮಾಡುವುದಕ್ಕಾಗಿ ಶಿಕ್ಷಕರನ್ನು ಹತ್ತು ಗುಂಪುಗಳನ್ನಾಗಿ ಮಾಡಿ ೮ನೇ ತರಗತಿಯ ಸಮಾಜವಿಜ್ಞಾನದ ೧೦ ಪಾಠಗಳನ್ನು ಹಂಚಿಕೆ ಮಾಡಿದರು.ಸಂಪನ್ಮೂಲ ಶಿಕ್ಷಕರಾದ ಶ್ರೀ ಮಹಾಬಲೇಶ್ವರ ಭಾಗವತರವರು ಸ್ಥಳೀಯ ಸರಕಾರ ಪಾಠವನ್ನು ತೆಗೆದುಕೊಂಡು ಹಲವು ಮನೋನಕ್ಷೆಗಳನ್ನು ತಯಾರಿಸಿ ಹೈಪರ್ ಲಿಂಕ್ ಮಾಡಿ,ನಾವೂ ಕೂಡ ಮಾಡುವಂತೆ ಮಾಡಿಸಿದರು. ಎಲ್ಲಾ ಶಿಕ್ಷಕರು ತಾವು ಮಾಡಿದ ಸ್ಥಳೀಯ ಸರ್ಕಾರದ ಮನೋನಕ್ಷೆಗಳನ್ನು ಶ್ರೀರಂಗಧಾಮಪ್ಪ ಸರ್ ರವರಿಗೆ ಮೇಲ್ ಮಾಡಿದರು.ಚಹ ವಿರಾಮದ ನಂತರ ಅದೇ ಪಾಠಕ್ಕೆ ಸಂಬಂಧಪಟ್ಟ ಹಾಗೆ ನಾಲ್ಕಾರು ಮನೋನಕ್ಷೆಗಳನ್ನು ತಯಾರಿಸಿ ಹೈಪರ್ಲಿಂಕ್ ಮಾಡುವ ಬಗ್ಗೆ ಹಾಗು ಲಿಂಕ್ ತೆಗೆಯುವ ವಿಧಾನವನ್ನು ತಿಳಿಸಿಕೊಟ್ಟರು.ಭೋಜನ ವಿರಾಮದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸದಾನಂದರವರು ಕೋಯರ್ ಅಂದರೆ ಕರ್ನಾಟಕ ಮುಕ್ತ ವಿಷಯ ಸಂಪನ್ಮೂಲಗಳು ಇದರ ಬಗ್ಗೆ ವಿವರಣಾತ್ಮಕವಾದ ಮಾಹಿತಿಯನ್ನು ತಿಳಿಸಿಕೊಟ್ಟರು.ಕೊಯರ್ ನಲ್ಲಿರುವ ವಿಷಯಸಂಪನ್ಮೂಲಗಳನ್ನು ಶಿಕ್ಷಕರು ಬೋಧನೆಯಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಟ್ಟರು.ಶಿಕ್ಷಕರು ಕೊಯರ್ ನಲ್ಲಿ ಬೇರೆ ಬೇರೆ ರಾಜ್ಯಗಳ ಪಠ್ಯವಿಷಯಗಳನ್ನು, ೮ ಹಾಗು ೯ನೇ ತರಗತಿಯ ಪಾಠಗಳ ಬಗೆಗಿರುವ ಮಾಹಿತಿಯ ಹುಡುಕಾಟ ನಡೆಸಿದರು. ಮಧ್ಯಾಹ್ನದ ಚಹ ವಿರಾಮದ ನಂತರದಲ್ಲಿ ಶಿಕ್ಷಕರು ಫ್ರಿಮೈಂಡ್ ನಲ್ಲಿ ಕನ್ನಡ ಟೈಪಿಂಗ್ ಮಾಡುವುದನ್ನುನ ಕಲಿತು, ಆರಿಸಿಕೊಂಡಂತ ಪಾಠವಿಷಯಗಳ ಕುರಿತು ಮನೋನಕ್ಷೆಗಳನ್ನು ತಯಾರಿಸುವಲ್ಲಿನ ತಲ್ಲೀನತೆಯು ಎರಡನೇಯ ದಿನದ ತರಬೇತಿಯ ಸಫಲತೆಯನ್ನು ಸೂಚ್ಯವಾಗಿ ತಿಳಿಸಿತ್ತು. '''ವರದಿ''' '''ಶ್ರೀಮತಿ ಜ್ಯೋತಿ,ಸಹಶಿಕ್ಷಕಿ ಸ.ಪ.ಪೂ.ಕಾಲೇಜು,ಶಂಕರನಾರಾಯಣ.ಕುಂದಾಪುರ |