Anonymous

Changes

From Karnataka Open Educational Resources
17,160 bytes added ,  15:40, 19 January 2015
Line 131: Line 131:  
===Workshop short report===
 
===Workshop short report===
 
Upload workshop short report here (in ODT format), or type it in day wise here
 
Upload workshop short report here (in ODT format), or type it in day wise here
 +
 +
== 13/01/2015 ==
 +
ತಂಡ ಕುವೆಂಪು
 +
ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು
 +
ಕಾಮನ ಬಿಲ್ಲನು ಕಾಣು ವ ಕವಿವೊಲು  ತೆಕ್ಕನೆ ಮನ ಮೈ ಮರೆಯುವುದು 
 +
ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು  ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ
 +
    ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು  ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ  ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ  ಚಾಲನೆ ನೀಡಿದರು.  11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ  ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು  ತಂಡಗಳ ರಚನೆ ಮಾಡಿ, ಕಾರ್ಯ  ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ  ರಂಗನಾಥ ವಾಲ್ಮೀಕಿಯವರು  ಎಸ್.ಟಿ. ಎಫ್. ಉದ್ದೇಶ  ಅದರ  ಮಹತ್ವ  ಹಾಗೂ  ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ  ಮತ್ತು  ಕೋಯರ್  ಮಹತ್ವ  ಮತ್ತು  ಅದರ  ಉಪಯೋಗವನ್ನು  ಸವಿವರವಾಗಿ ನೀಡಿದರು. . ನಂತರ ಒಂದು  ಗಂಟೆಗೆ ಶ್ರೀ  ಬಸವರಾಜ  ಪೂಜಾರ್    ಶಿಕ್ಷಕರು  ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು  ತಿಳಿಸಿದರು . ನಂತರ ಒಂದು  1:45  ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು.
 +
ಊಟದ ನಂತರ 2:15 ರಿಂದ ಶ್ರೀ  ಬಸವರಾಜ  ಪೂಜಾರ್    ಗುರುಗಳು    ಕಂಪ್ಯೂಟರ್ ಕುರಿತಾಗಿ ಇನ್ನಷ್ಟು  ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್  ಐಡಿ  ಹೊಂದಿರಲೇಬೇಕೆಂದು  ತಿಳಿಸಿ  ಅದರ  ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ  ಇ-ಮೇಲ್  ಐಡಿ  ತಯಾರು  ಮಾಡಲು  ಮಾರ್ಗದರ್ಶನ  ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ  ಸಂತೋಷ  ಗುಣಾರಿಯವರಯ  ಪೈಲ್  ನಿರ್ವಹಣೆ ಕುರಿತು  ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ  ದಿನದ  ತರಬೇತಿಗೆ  ವಿದಾಯ  ಹೇಳಲಾಯಿತು.
 +
 +
== 14/01/2015 ==
 +
 +
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ  ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ  ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ  ಇವರು  ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ  ಬಿ  ವಿ  ಸೊರಟೂರ್  ಶಿಕ್ಷಕರು  ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ  ಇವರು  ಸಮಯದ  ಮಹತ್ವವನ್ನು  ಕುರಿತು  ಮಾತನಾಡಿದರು . ನಂತರ ಶ್ರೀ  ರಂಗನಾಥ  ಎನ್  ವಾಲ್ಮೀಕಿ  ಸಂಪನ್ಮೂ ಲ ಶಿಕ್ಷಕರು  ಕಲಿಕಾ ಸಂಪನ್ಮೂಲವಾಗಿ ಅಂತರ್‌ಜಾಲ ಬಳಕೆ ಕುರಿತು  ಪ್ರತಿ ತಂಡಕ್ಕೂ  ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ  ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ  ಸಂಪನ್ಮೂಲವನ್ನು ಅಂತರ್‌ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ  ಬಗ್ಗೆ  ತಿಳಿಸಿ  ಎಲ್ಲಾ  ಶಿಬಿರಾರ್ಥಿಗಳಿಗೆ  ವಿಷಯ    ಸಂಪನ್ಮೂಲ ಸಂಗ್ರಹಿಸಲು  ಶ್ರೀ  ಬಸವರಾಜ ಪೂಜಾರ್  ಸಂಪನ್ಮೂಲ
 +
ಶಿಕ್ಷಕರು  ತಿಳಿಸಿಕೊಟ್ಟರು
 +
    ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ  ಸಂತೋಷ  ಗುಣಾರೆಯವರು  ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ  ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು  ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ  ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ  ಪ್ರಾಯೋಗಿಕವಾಗಿ  ತಿಳಿಸಿ  ಎಲ್ಲರಿಗೂ  ಧ್ವನಿ  ಮುದ್ರಣ ಪ್ರಯೋಗ ಮಾಡಲು  ಹೇಳಿದರು ಎಲ್ಲರೂ  ಆನಂದದಿಂದ  ಭಾಗವಹಿಸಿದರು  .
 +
    ಅಲ್ಪಉಪಹಾರ ಮತ್ತು  ಚಹಸೇವಿಸಲು  ಲಘು ವಿರಾಮ  ನೀಡಲಾಯಿತು  . ನಂತರ ಶ್ರೀ  ಗುಣಾರಿಯವ ರು  ಆಡಿಯೋಸಿಟಿ ಯಲ್ಲಿ  ಧ್ವನಿ ಮುದ್ರಣದ  ಬಗ್ಗೆ  ಪ್ರಾಯೋಗಿಕವಾಗಿ  ಶಿಕ್ಷಕರೊಬ್ಬರ  ಧ್ವನಿ  ಮುದ್ರಿಸಿ  ತೋರಿಸಿದರು  .
 +
ತಂಡದ ಹೆಸರು :_ ದ ರಾ  ಬೇಂದ್ರೆ
 +
 +
== 15/01/2015 ==
 +
                                                                                                                                                                ಮೂರನೆ ದಿನದ ತರಬೇತಿ ಕಾರ್ಯಾಗಾರವು  ಬೇಂದ್ರೆ ತಂಡದ  ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ  ಚಿಂತನ ಶ್ರೀಮತಿ  ರಾಜೇಶ್ವರಿ  ಎಂ  ಪಾಟೀಲ  ಇವರ  ಮೂಲಕ  ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ  ಶ್ರೀ  ರಂಗನಾಥ  ವಾಲ್ಮೀಕಿಯವರು  ಸ್ಕೀನ್  ಶಾಟ್  ಮೂಲಕ  ಚಿತ್ರ  ಸಂಗ್ರಹಣೆ  ಹೇಗೆ  ಮಾಡಬೇಕು  ಎಂಬುದನ್ನು ಪ್ರಾಯೋಗಿಕವಾಗಿ  ತಿಳಿಸಿದರು..  ನೆಟ್  ಮೂಲಕದಿಂದಲು  ಚಿತ್ರ  ಸಂಗ್ರಹಣೆ  ಮಾಡುವುದನ್ನು  ಹೇಳಿದುರು
 +
ಶ್ರೀ  ಬಸವರಾಜ್  ಪೂಜಾರ್  ಸಂಪನ್ಮೂಲ  ವ್ಯಕ್ತಿಗಳು  ಉಬಂಟು    ಸಾಫ್ಟವೇರ್ ನ  ಬಳಕೆ ಅದರ  ಪರಿಚಯ  ಹಾಗೂ  ಬಳಕೆಯ  ಮಹತ್ವ  ತಿಳಿಸಿದರು  .ಶ್ರೀ  ಸಂತೋಷ್  ಗುಣಾರಿ  ಸಂಪನ್ಮೂ ಲ  ವ್ಯಕ್ತಿಗಳು  ಪರಿಕಲ್ಪನಾ ನಕ್ಷೆಯ  ಅವಶ್ಯಕತೆಯ ಕುರಿತು  ಹೇಳಿದರು .. ಶಿಬಿರಾರ್ಥಿಗಳಿಂದ  ಪ್ರಾಯೋಗಿಕವಾಗಿ  ಮಾಡಿಸಿದರು .ವರದಿ ವಾಚಕರು  ಶ್ರೀಮತಿ  ಪಿ.ಜಿ. ಮುಂಜಿ  .
 +
 +
== 16/01/2015 ==
 +
                                                                                                                                                            ವರದಿ ಮಾಡಿದ ತಂಡದ ಹೆಸರು : ಡಾ: ವಿ ಕೃ ಗೋಕಾಕ್.
 +
ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ  ಶ್ರೀ ಗುಣಾರಿ  ಸಂಪನ್ಮೂ ಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು  ವಿವರವಾಗಿ  ಹೇಳಿದರು  ಈ  ಆಪ್ಷನ್ನಲ್ಲಿ ನಾವು ಟೈಪಿಂಗನ್ನು  ಸುಲಭವಾಗಿ  ರೂಢಿಮಾಡಬಹು ದೆಂದು  ಪ್ರಾಯೋಗಿಕವಾಗಿ  ವಿವರಿಸಿದರು  ಮತ್ತು  ಶಿಬಿರಾರ್ಥಿಗಳಿಂದ  ಅದನ್ನು    ಪ್ರಾಕ್ಟೀಸ್  ಮಾಡಿಸಿ  ಶಿಬಿರಾರ್ಥಿಗಳಲ್ಲಿ  ಆಸಕ್ತಿ  ಕುದುರಿಸಿದರು.
 +
    ಎರಡನೆ ಅವಧಿಯಲ್ಲಿ  ಲಿಬಿರೆ ಆಫೀಸ್  ರೈಟರ್  ಕುರಿತು  ಆರ್. ಎನ್. ವಾಲ್ಮೀಕಿ  ಸಂಪನ್ಮೂಲ ಶಿಕ್ಷಕರು  ವಿವರಿಸಿದರು . ಇದರಲ್ಲಿರುವ  ಅಪ್ಲಿಕೇಶನ್ ಮೂಲಕ  ಪತ್ರ  ಲೇಖನ  ಬರೆಯುವ  , ಅಂಡರ್ ಲೈನ್  ಮಾಡುವ  ವಿಧಾನ  ಕಲರಿಂಗ್  ಮಾಡುವ  ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ  ಮನದಟ್ಟು  ಮಾಡಿದರು  .
 +
    ಮೂರನೆ ಅವಧಿ ಯಲ್ಲಿ  ಸ್ಪ್ರೆಡ್ ಶೀಟ್ ಕುರಿತು  ಶ್ರೀ ಬಸವರಾಜ್  ಪೂಜಾರ್  ಸಂಪನ್ಮೂ ಲ ವ್ಯಕ್ತಿಗಳು  ವಿವರಿದರು .  ಈ ಸ್ಪ್ರೇಡ್  ಶೀಟ್  ಅಪ್ಲಿಕೇಶನ್  ಬಗ್ಗೆ  ಇರುವ  ಮಹತ್ವ  ಮತ್ತು  ವ್ಯಾಪಕತೆಯನ್ನು  ವಿವರಿಸಿರು        . ನಾಲ್ಕನೆ  ಅವಧಿಯಲ್ಲಿ  ಉಬಂಟು  ಸಾಫ್ಟವೇರ್ ಬಗ್ಗೆ  ಶ್ರೀ ಬಸವರಾಜ್  ಪೂಜಾರ್ ರವರು  ಹೇಳುತ್ತಾ  ಇದು  ಸಾರ್ವಜನಿಕರಿಗಾಗಿ  ಉಚಿತವಾಗಿ  ಬಳಸಿಕೊಳ್ಳಲು  ಇರುವ  ಸಾಫ್ಟವೇರ್  ಎಂಬುದನ್ನು  ತಿಳಿಸಿದರು ಖಾಸಗಿ ಕಂಪನಿಯವರಿಗೆ  ನಾವು  ಸಂದಾಯ ಮಾಡಬೇಕಾದ  ವೆಚ್ಚದ  ಬಗ್ಗೆ  ಮನವರಿಕೆ  ಮಾಡಿಕೊಡುತ್ತಾ  ಉಬಂಟು  ಸಾಫ್ಟವೇರ್ ನ್ನು  ದಾರಳವಾಗಿ  ನಾವು  ಬಳಸಕೊಳ್ಳಬಹುದೆಂಬುದರ  ಮಹತ್ವವನ್ನು  ವಿವರಿಸಿದರು . 
 +
 +
 +
== 17/01/2015 ಐದನೆ ದಿನದ ವರದಿ ==
 +
 +
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ  ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು  ಮುಂಜಾನೆ  9:30 ಗಂಟೆ ಗೆ  ಶ್ರೀ ಎಸ್  ವಿ  ಪತ್ತಾರ ಶಿಕ್ಷಕರ ಚಿಂತನ ದೊಂದಿಗ  ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು  ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ  ಮೊದಲನೆ ಅವಧಿಯು  ಜಿಂಪ್  ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ  ವ್ಯಕ್ತಿಗಳಾದ ಶ್ರೀ  ಬಿ ವಿ ಪೂಜಾರರವರು ತಂತ್ರಜ್ಞಾನದ  ಮೂಲಕ  ಶಿಬಿರಾರ್ಥಿಗಳೊಳಡಗೂಡಿ  ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ.
 +
ಎರಡನೆ  ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು  ಸ್ಲೈಡ್ ಶೋ ಕುರಿತು  ಪ್ರಾಯೋಗಿಕ್  ಚಟುವಟಿಕೆಯನ್ನು  ಶಿಬಿರಾರ್ಥಿ ಗಳಲ್ಲಿ  ಪರಿಣಾಮಕಾರಿ  ಪಾಠ  ಬೋಧನೆ  ಕುರಿತು ತಿಳಿಸಿದರು.
 +
ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು  ಟೆಂಪ್ಲೇಟ್  ಫೀಡಿಂಗ್  ಕುರಿತು ಅಂತರಜಾಲದ ಮೂಲಕ ನಮೂನೆಯನ್ನು  ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ  ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು.
 +
ಊಟದ ನಂತರ  ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ  ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ  ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ  ಪ್ರತೀ ತಂಡದ  ಒಬ್ಬ  ಶಿಬಿರಾರ್ಥಿಗಳಿಂದ  ಮಂಡನೆ  ಮಾಡಲಾಯಿತು.
 +
      ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು  ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು.
 +
    ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ  ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ  ಮಾತನಾಡುತ್ತಾ  ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು  ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ  ತರಗತಿಯಲ್ಲಿ  ತಂತ್ರಜ್ಞಾನ ಆಧಾರಿತ  ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು  ಸಂಪನ್ಮೂಲ  ಸಂಪಾದಿಸಿ  ಕನ್ನಡ  ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು .
 +
"ಸೇವೆ ಸಮಾಧಿಯಾಗದಿರಲಿ  ನೆನೆಪಿನಂಗಳದ ಬುನಾದಿಯಾಗಿರಲಿ"
 +
ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .
 +
ಜೈ ಕನ್ನಡ ಮಾತೆ.
 +
 +
[[Category:Assessments]
    
==Batch 3==
 
==Batch 3==