Anonymous

Changes

From Karnataka Open Educational Resources
13,933 bytes added ,  15:59, 1 January 2014
Line 114: Line 114:     
==Workshop short report==
 
==Workshop short report==
Upload workshop short report here (in ODT format)
      +
== '''ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ  ಟಿ.ಬಿ.ಪಿ. ಮುನಿರಾಬಾದ್ ,ತಾ.ಜಿ.ಕೊಪ್ಪಳ''' ==
 +
<br>
 +
 +
== '''ಕೊಪ್ಪಳ ಜಿಲ್ಲಾ ವಿಜ್ಞಾನ ಡಿಜಿಟಲ್  ರಿಸೋರ್ಸ್  ಕ್ರಿಯೆಶನ್  ತರಬೇತಿ - 2013-14 ಮೊದಲನೇ ಬ್ಯಾಚ್ತ ರಬೇತಿ ಅವಧಿ 03-12-2013 ರಿಂದ  07-12-2013 ರವರೆಗೆ''' ==<br>
 +
 +
ಮೊದಲನೇ ದಿನದ ವರದಿ :  ದಿನಾಂಕ :03-12-2013 ಸಮಯ:10.00 ಗಂಟೆಗೆ<br>
 +
ದಿನಾಂಕ :03-12-2013 ರಂದು ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ  ಟಿ.ಬಿ.ಪಿ.ಮುನಿರಾಬಾದ್ ನಲ್ಲಿ ಸರಿಯಾದ 10.00ಗಂಟೆಗೆ  ಎಸ್.ಟಿ.ಎಫ್.ತರಬೇತಿಯ ನೊಡಲ್ ಅಧಿಕಾರಿಗಳು ಹಾಗೂ ಡಯಟ್ ನ ಹಿರಿಯ ಉಪನ್ಯಾಸಕರು ಆದ ಮಾನ್ಯಶ್ರೀ ಬಸವರಾಜ ಪಾರಿಯವರು  ಪ್ರೋಜೆಕ್ಟರ್ ಗುಂಡಿ ಒತ್ತುವ ಮೂಲಕ ಮೊದಲನೇ ದಿನದ ಕೊಪ್ಪಳ ಜಿಲ್ಲಾ ಡಿಜಿಟಲ್  ರಿಸೋರ್ಸ್  ಕ್ರಿಯೆಶನ್  ಎಸ್.ಟಿ.ಎಫ್. ತರಬೇತಿಯನ್ನು ಚಾಲನೆಗೊಳಿಸಿ ಈ ತರಬೇತಿಯ ಸದುಪಯೋಗವನ್ನು  ಎಲ್ಲಾ ಶಿಕ್ಷಕರು ಪಡೆದು  ವೈಯುಕ್ತಿಕ  ಅಭಿವೃದ್ಧಿಯ ಜೊತೆಗೆ ಗುಣಮಟ್ಟದ ಶಿಕ್ಷಣಕ್ಕೆ ಅಂತರ್ಜಾಲದ ಮಾಹಿತಿ.ಕಂಪ್ಯೂಟರ್ ನ್ನು  ಬೋಧನಕಾರ್ಯಕ್ಕೆ ಬಳಸಿ ವಿದ್ಯಾರ್ಥಿಗಳ ಪ್ರಗತಿಗೆ ಹೆಚ್ಚು ಶ್ರಮವಹಿಸಿ ಆಧುನಿಕ ವಿಜ್ಞಾನ-ತಂತ್ರಜ್ಞಾನಕ್ಕೆ  ಶಿಕ್ಷಕರು ಬದಲಾಗಬೇಕು ಎಂದು ಕರೆ ನೀಡಿದರು.ಡಯಟ್ ನ ಉಳಿದ ಹಿರಿಯ ಉಪನ್ಯಾಸಕರಾದ ಶ್ರೀ ನಾಗರಾಜರವರು ,,ಶ್ರೀ ವಿರುಪಾಕ್ಷಯ್ಯ ರವರು , ಜಿಲ್ಲಾ ಎಸ್.ಟಿ.ಎಫ್.ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮುರಳಿಧರ ಶಿಂಗ್ರಿ , ಶ್ರೀ ರಮೇಶ ಶಿಲ್ಪಿ  ಹಾಗೂ ತರಬೇತಿ ಪಡೆಯಲು 30 ಜನ ಸಹಶಿಕ್ಷಕರುಗಳು ಹಾಜರಿದ್ದರು.ಕಾರ್ಯಕ್ರಮವನ್ನು  ಶ್ರೀ ರೇವಣಸಿದ್ಧಯ್ಯ ಚೆನ್ನಿನಾಯ್ಕರ್  ನಿರೂಪಿಸಿ  ವಂದಿಸಿದರು..<br>
 +
ಬೆಳಿಗಿನ ಅವಧಿಯಲ್ಲಿ ಶ್ರೀ ಮುಳಿಧರ ಸಿಂಗ್ರಿಯವರು  ತರಬೇತಿಯಲ್ಲಿ ಹಾಜರಿದ್ದ ಎಲ್ಲಾ ಶಿಕ್ಷಕರ ವೈಯುಕ್ತಿಕ ಪರಿಚಯ  ಮಾಡಿಕೊಳ್ಳುವುದರ ಜೊತೆಗೆ ಇ-ಮೇಲ್ ಐಡಿಯನ್ನು ರಚಿಸುವ ವಿಧಾನ ಪ್ರೋಜೆಕ್ಟರ್ ಮೂಲಕ ತೋರಿಸಿ ,ಎಲ್ಲಾ ಶಿಕ್ಷಕರು ತಮ್ಮ ತಮ್ಮ ಇ-ಮೇಲ್ ಐಡಿಯನ್ನು  ರಚಿಸುವ ಸಾಮರ್ಥ್ಯ ಬೆಳಿಸಿದರು.ಕಲಿಕಾರ್ಥಿಗಳ ಮಾಹಿತಿಯನ್ನು ತುಂಬುವ ವಿಧಾನವನ್ನು  ಹಾಗೂ ಕೊಯರ್ ಬಗ್ಗೆ ಮಾಹಿತಿ ಯನ್ನು ಸವಿವರವಾಗಿ ವಿವರಿಸಿದರು.<br>
 +
ಮಧ್ಯಾಹ್ನದ ಅವಧಿಯಲ್ಲಿ  ಶ್ರೀ ರಮೇಶ ಶಿಲ್ಪಿ ಯವರು ಪ್ರಸೆಂಟೇಶನ್ ಬಳಸಿ  ಇಂಟರ್ ನೆಟ್ ವಿಕಾಸ ,ವಿಕಿಪೀಡಿಯ ,ಕೊಯರ್  ಉದ್ಧೇಶಗಳು ಮತ್ತು ತತ್ವಗಳು  ,ಹಿನ್ನಲೆ ಬಗ್ಗೆ ಸವಿವರವಾದ ಮಾಹಿತಿ ನೀಡಿ ಮೆಲ್ ಕಳುಹಿಸುವ ಮತ್ತು  ಕೊಯರ್ ಸಂಪೂರ್ಣ ವೀಕ್ಷಣೆ ನೋಡಲು ಹ್ಯಾಂಡ್ಸ್ ಆನ್ ನೀಡಿ 5.30ಗಂಟೆಗೆ ಮೊದಲೇ ದಿನದ ತರಬೇತಿಗೆ ಪೂರ್ಣವಿರಾಮ ನೀಡಿದರು. <br> 
 +
ಎರಡನೇ ದಿನದ ವರದಿ :  ದಿನಾಂಕ :04-12-2013 ಸಮಯ:10.00 ಗಂಟೆಗೆ<br>
 +
ಬೆಳಿಗಿನ ಅವಧಿಯಲ್ಲಿ ಶ್ರೀ ಮುಳಿಧರ ಸಿಂಗ್ರಿಯವರು  ತರಬೇತಿಯಲ್ಲಿ ಹಾಜರಿದ್ದ ಎಲ್ಲಾ ಶಿಕ್ಷಕರಿಗೆ ಕನ್ನಡ ಟೈಪಿಂಗ್ , ಪೋಲ್ಡರ್ ರಚನೆ, ಇಮೇಜ್ ಡೌನಲೋಡಿಂಗ , ವಿಡಿಯೋ ಡೌನಲೋಡಿಂಗ್ ಮಾಡುವ ವಿಧಾನಗಳನ್ನು ತಿಳಿಸಿ ಪ್ರಾಕ್ಟಿಕಲ್ ತರಗತಿಗೆ (ಹ್ಯಾಂಡ್ಸ ಆನ್ ) ಅವಕಾಶ ನೀಡಲಾಯಿತು.<br>
 +
ಮಧ್ಯಾಹ್ನದ ಅವಧಿಯಲ್ಲಿ  ಶ್ರೀ ರಮೇಶ ಶಿಲ್ಪಿ ಯವರು ತಮ್ಮದೇ ಆದ ಎಲಿಮೆಂಟ್ಸ  ಮೈಂಡ್ ಮ್ಯಾಪ , ಹಾಗೂ ದಿನ ನಿತ್ಯ ಜೀವನದಲ್ಲಿ ರಸಾಯನಿಕಗಳು ಮೇಲೆ ಕನ್ನಡದಲ್ಲಿ ಮೈಂಡ್ ಮ್ಯಾಪ್ ಮಾಡುವ ವಿಧಾನ ,ಹಂತಗಳನ್ನು ಶಿಬಿರಾರ್ಥಿಗಳಿಗೆ  ಪ್ರಾತ್ಯಕ್ಷಿಕೆ ತೋರಿಸಿದರು.ನಂತರ ಸಂಪನ್ಮೂಲ ವ್ಯಕ್ತಿಗಳಾದ ಮುರಳಿಧರ ಶಿಂಗ್ರಿಯವರು ಅವರದೇ ಆದ ಮೈಂಡ್ ಮ್ಯಾಪ ಜೀವ ವಿಕಾಸದ ವಿಷಯದ ಮೇಲೆ ಕೊಯರ್ ನಲ್ಲಿ ಪ್ರಕಟವಾದ ಎಲ್ಲಾ  ವಿಷಯಗಳನ್ನು  ಸವಿವರವಾಗಿ ತಿಳಿಸಿ ಡಿಜಿಟಲ್ ರಿಸೋರ್ಸ ಕ್ರಿಯೆಶನ್ ಮಾಡುವ ವಿಧಾನಗಳನ್ನು  ಸಂಪೂರ್ಣವಾಗಿ ಕೊಯರ್ ನಲ್ಲಿರುವ ಬೆಳಕು ,ಆಹಾರದ ವಿಷಯಗಳನ್ನು ತೋರಿಸಿ ಶಿಬಿರಾರ್ಥಿಗಳಿಗೆ ಮನವರಿಕೆ ಮಾಡಿದ ನಂತರ  ಹ್ಯಾಂಡ್ಸ್ ಆನ್ ನೀಡಿ 6.00ಗಂಟೆಗೆ ಎರಡನೇ  ದಿನದ ತರಬೇತಿಗೆ ಪೂರ್ಣವಿರಾಮ ನೀಡಿದರು.  <br>
 +
ನಾಲ್ಕನೇ ದಿನದ ವರದಿ : ದಿನಾಂಕ :06-12-2013 ಸಮಯ:10.00 ಗಂಟೆಗೆ<br>
 +
ವಿಜ್ಞಾನ ಮೌಲ್ಯಮಾಪನ ಮಾಡುವ ಬಗೆ ಹೇಗೆ ? ಇನ್ನಿತರ ಪ್ರಮುಖ ಆಂಶಗಳನ್ನು  ಕೊಯರ್ ನಲ್ಲಿರುವ Assessment Framework Science - Karnataka Open Educational Resources ಸಂಪನ್ಮೂಲವನ್ನು ಬಳಸಿ  ಶಿಬಿರಾರ್ಥಿಗಳಿಗೆ  ಮನಮುಟ್ಟವಂತೆ  ಸವಿವರವಾಗಿ ಚರ್ಚಿಸುತ್ತಾ ವಿಷಯಗಳನ್ನು  ಸ್ಪಷ್ಟಪಡಿಸಿದರು.ಶಿಬಿರಾರ್ಥಿಗಳ  ಪ್ರಶ್ನೆಗಳ  ಬಾಣಕ್ಕೆ  ತತ್ ಕ್ಷಣ  ಪ್ರತಿಬಾಣ ಹೂಡಿ ಎಲ್ಲರ ಅಚ್ಚರಿಗೆ  ಪಾತ್ರರಾದರು. ಇವೆನ್ನವುಗಳ ಮಧ್ಯ ಮೂಡನಂಬಿಕೆ ಮತ್ತು ಅಂಧ ಆಚರಣೆಗಳ ನಡುವಿನ  ವ್ಯತ್ಯಾಸದ ಬಗ್ಗೆ ಮಾತನಾಡುವಾಗ "ನಾಳೆ ಬಾ" ಎಂಬ ವಿಷಯ ಪ್ರಸ್ತಾಪ ಮಾಡಿದ ತಕ್ಷಣ  ಮುರುಳಿಧರ ಶಿಂಗ್ರಿ ಸರ್ " ಟೀ ಗೆ ಹೋಗಿ ಬಾ " ಎಂದು ಎಲ್ಲರಿಗೂ ಹೇಳುವ ಮೂಲಕ ಟೀ ಬ್ರೇಕ್ ನೀಡಿದರು.<br>
 +
ಟೀ ವಿರಾಮದ ನಂತರ Assessment Framework Science - Karnataka Open Educational Resources ನ್ನಲಿರುವ ಮೈಂಡ್ ಮ್ಯಾಪ ಬಳಸಿ ವಿಜ್ಞಾನದ ಮೌಲೀಕರಣ  ಹೇಗೆ ? ಮತ್ತು  ಏಕೆ ? ಮೌಲ್ಯಮಾಪನ ಮಾಡುವ ಬಗೆ , ವಿಧಾನ , ಏನನ್ನು  ಮೌಲ್ಯಮಾಪನ ಮಾಡಬೇಕು ? ಎಂಬ ಅನೇಕ ವಿಚಾರ ಹಂದರವನ್ನು ತೆರದಿಟ್ಟ ಶಿಲ್ಪಿ ಸರ್ ರವರು ನಮ್ಮಲ್ಲಿಯ  ಅನೇಕ  ಪ್ರಶ್ನೆಗಳನ್ನು  ಉಂಟಾಗುವಂತೆ ಮಾಡಿ ಅವುಗಳಿಗೆ ತಮ್ಮದೇ ದಾಟಿಯಲ್ಲಿ ಉತ್ತರಿಸಿ , ಇನ್ನು ಕೆಲವೊಂದಷ್ಟನ್ನು  ಶಿಬಿರಾರ್ಥಿಗಳ ಆಲೋಚನೆಗೆ ಬಿಟ್ಟು  ಸಂಪನ್ಮೂಲ ವ್ಯಕ್ತಿಗಳು ವಿಷಯಾಂತರವಾಗದಂತೆ  ನೋಡಿಕೊಂಡು ಜಾಣ್ಮೆ ಮೆರೆದರು. ಅದೇ ಸಮಯದಲ್ಲಿ  ಶಿಂಗ್ರಿ ಸರ್ ರವರು  ಸಾಂಪ್ರದಾಯಿಕ ಆಚರೆಣೆಗಳ  ಹಿಂದಿರುವ ವೈಜ್ಞಾನಿಕ  ವಿಚಾರಗಳನ್ನು  ಅರಿತುಕೊಳ್ಳಲು  ಸಂಸ್ಥೆಯೊಂದನ್ನು  ಸ್ಥಾಪಿಸಿದ್ದು  ಅಲ್ಲಿ ತಮ್ಮ  ವಿಚಾರಗಳನ್ನು ಚರ್ಚಿಸಿದರೆ  ಸೂಕ್ತ ಎಂದು ತಿಳಿಸುವುದರೊಂದಿಗೆ ಅವರ ವಿಜ್ಞಾನದ ಮೇಲಿನ ನಿಜವಾದ ಕಾಳಜಿ ವ್ಯಕ್ತವಾಯಿತು.ಇದೆಲ್ಲಾ ಆಗುವ ವೇಳೆಗೆ ಹೊಟ್ಟೆ ಹಸಿವಿನ ಸಮಯವಾಗಿ ಊಟದ ವಿರಾಮ ನೀಡಲಾಯಿತು.<br>
 +
ಮಧ್ಯಾಹ್ನದ ಅವಧಿಯಲ್ಲಿ  ಪ್ರಾಯೋಗಿಕವಾಗಿ ಎಲ್ಲ ಶಿಬಿರಾರ್ಥಿಗಳು ಡಿಜಿಟಲ್ ಸಂಪನ್ಮೂಲ ತಯಾರಿಯಲ್ಲಿ ನಿರಂತರವಾಗಿ ನಿರತರಾಗಿದ್ದರು.ಇಮೇಜ್ ಡೌನಲೋಡಿಂಗ್ , ಮೈಂಡಮ್ಯಾಪ , ವಿಷಯದ ಸಂಪನ್ಮೂಲ ಕ್ರೋಢೀಕರಣ  ಇಂಟರನೆಟ್ ಜಾಲತಾಣದಲ್ಲಿ ವಿಷಯ ಸಂಗ್ರಹಿಸುವಲ್ಲಿ ಸುಂದರವಾದ ಡಿಜಟಲ್ ಸಂಪನ್ಮೂಲ ಕ್ರೋಢೀಕರಿಸುವುದು ಅತಿ ಸುಲಭ ಎಂಬಂತೆ ಕಾರ್ಯನಿರತಾಗಿದ್ದರು. ಇದಾದ ನಂತರ ಮತ್ತೆ ಟೀ ವಿರಾಮ.<br>
 +
            ಕೊನೆಯ ಅವಧಿಯ ಅಂತ್ಯದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ  ಮುನಿರಬಾದ್ ನ ಸಲಹಾ ಸಮಿತಿಯ ಸದಸ್ಯರು ಹಾಗೂ ಕೊಪ್ಪಳ ಜಿಲ್ಲೆಯ ಖ್ಯಾತ ಸಾಹಿತಿ ,ಹೋರಾಟಗಾರರು ಆದ ಶ್ರೀ ಅಲ್ಲಮ ಪ್ರಭು ಬೆಟ್ಟದೂರು ಕನ್ನಡ ಪ್ರಾಧ್ಯಾಪಕರು ಶಿಬಿರಾರ್ಥಿಗಳನ್ನು  ಉದ್ಧೇಶಿಸಿ ವಿಜ್ಞಾನವನ್ನು  ಜನಸಾಮಾನ್ಯರ  ಅಚ್ಚುಮೆಚ್ಚುವಾಗುವಂತೆ  ಜನಪ್ರಿಯಗೊಳಿಸುವಲ್ಲಿ , ವಿಜ್ಞಾನದಲ್ಲಿ  ಇಂಗ್ಲೀಷ್  ಪದಗಳ  ಬಳಕೆ ಬದಲಾಗಿ ಕನ್ನಡ ಪದಗಳನ್ನು ಹೆಚ್ಚು  ಬಳಸಿ , ಇಂಗ್ಲೀಷ್  ವಿಷಯದ ವಿಜ್ಞಾನವನ್ನು  ಕನ್ನಡಕ್ಕೆ  ಭಾಷಾಂತರಿಸಿ ವಿದ್ಯಾರ್ಥಿಗಳಲ್ಲಿ  ವಿಜ್ಞಾನ ಕಲಿಕೆಯಲ್ಲಿ  ಹೆಚ್ಚು ಆಸಕ್ತಿ ಮೂಡುವಂತೆ ಮಾಡಬೇಕು ಎಂದು ಕರೆ ನೀಡಿದರು.  ಪ್ರತಿಯೊಬ್ಬ ವಿದ್ಯಾರ್ಥಿಯು  ವಿಜ್ಞಾನಿಯಾಗಿ  ಸೃಷ್ಟಿಯಾಗಬೇಕಾದರೆ  ಮಾತೃಭಾಷೆಯಿಂದಲೇ ಮಾತ್ರ ಸಾಧ್ಯ ಅದು ಕನ್ನಡದಲ್ಲಿ.. ಇದಕ್ಕೆ ಎಲ್ಲರ ಸಹಕಾರ ,ಅಭಿಮಾನ ,ತ್ಯಾಗ ಹಾಗೂ ಶ್ರಮ ಅಗತ್ಯವೆಂದು ಪ್ರತಿಪಾದಿಸಿದರು.<br>
 +
            ಅವರು ತೆರಳಿದ ನಂತರ ಎಲ್ಲ ಮನಸ್ಸು ಎಸ್.ಟಿ.ಎಫ್. ತರಬೇತಿಯ ವಿಷಯವಾದ ಡಿಜಿಟಲ್ ರಿಸೋರ್ಸ್  ಕ್ರಿಯೆಶನ್  ಡಾಕುಮೆಂಟನಲ್ಲಿ  ಹೆಡರ್ , ಪೂಟರ್ , ಪುಟ ಸಂಖ್ಯೆ , ಹಾಗೂ  ಚೆಂಜ್ಸ್ ರೆಕಾರ್ಡ್ಡಸ ಬಗ್ಗೆ , ಕಾಮೆಂಟ್ ಹಾಕುವುದು, ರಿವೀವ್ಹ ಮಾಡುವುದು  ಹೇಗೆ ಎಂಬುದನ್ನು ಶ್ರೀ ರಮೇಶ ಶಿಲ್ಪಿ ಯವರು ತಿಳಿಸಿದರು. ಇದಾದ ನಂತರ ಪ್ರತಿಯೊಂದು ತಂಡದ ತಮ್ಮ ಪಕ್ಕದ ತಂಡಕ್ಕೆ ತಾವು ಮಾಡಿದ ಡಿಜಿಟಲ್ ಸಂಪನ್ಮೂಲವನ್ನು ರಿವೀವ್ಹ್  ಮಾಡಬೇಕು ಎಂದು ತಿಳಿಸಿದರು. ಅದರಂತೆ  ಅದಲುಬದಲು ಮಾಡಿ ರಿವೀವ್ಹ ಮಾಡಿದರು. ಅಷ್ಟೊತ್ತಿಗೆ  6.00ಗಂಟೆ ಆದಾಗ ನಾಲ್ಕನೇ  ದಿನದ ತರಬೇತಿಗೆ ಪೂರ್ಣವಿರಾಮ ನೀಡಿದರು. <br>
    
=Social Science=
 
=Social Science=
11

edits