ಈ ದಿನ ಬೆಳಿಗ್ಗೆ ೧೦ ಗಂಟೆಗೆ ಸರಿಯಾಗಿ ಎಲ್ಲಾ ಶಿಬಿರಾರ್ಥಿಗಳಿಗೆ ಮತ್ತು ಸಂಪನ್ಮೂಲ ವ್ಯಕ್ತಿಗಳಿಗೆ ಶ್ರೀಯುತ ಲಿಂಗರಾಜೇಅರಸ್ ರವರು ಹಿರಿಯ ಉಪನ್ಯಾಸಕರು ಡಯಟ್ ಚಾಮರಾಜನಗರ ಸ್ವಾಗತ ಕೋರಿದರು. ನಂತರ ಎಸ್ ಟಿ ಎಫ್ ತರಬೇತಿಯನ್ನು ಕುರಿತು ಮಾಹಿತಿ ನೀಡಿದರು ಮತ್ತು ಕಂಪ್ಯೂಟರ್ ಬಳಸುವ ವಿಧಾನವನ್ನು ಸಾಂಕೇತಿಕವಾಗಿ ಶಿಬಿರದ ಉದ್ಘಾಟನೆ ಮಾಡಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರಿಯುತ ಮಾದೇಶ್ ರವರು ಎಸ್ ಟಿ ಎಫ್ ನ ಉದ್ದೇ ಮತ್ತು ಈ ಐದು ದಿನಗಳ ತರಬೇತಿಯಲ್ಲಿ ಕಲಿಯಬೇಕಾದ ವಿಷಯಗಳನ್ನು ಸ್ಥೂಲವಾಗಿ ಪರಿಚಯ ಮಾಡಿಕೊಟ್ಟರು .ನಂತರ ೧೧-೩೦ ಕ್ಕೆ ಟೀ ವಿರಾಮ ನೀಡಲಾಯಿತು.
−
ಟೀ ವಿರಾಮದ ನಂತರ ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು(ಕೊಯರ್) ಈ ವಿಷಯವನ್ನು ಕುರಿತು ಮಾಹಿತಿಯನ್ನು ಪೂರ್ಣವಾಗಿ ತಿಳಿಯಲು ಮಾರ್ಗದರ್ಶನ ನೀಡಲಾಯಿತು.
−
ಊಟದ ವಿರಾಮದ ನಂತರ ೨-೧೫ ಗಂಟೆಗೆ ಮಧ್ಯಾಹ್ನ ದ ಅವಧಿ ಆರಂಭವಾಯಿತು. ಈ ಅವಧಿಯಲ್ಲಿ ಮಾದೇಶ್ ರವರು ಎಲ್ಲರ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡಲು ತಿಳಿಸಿದರು.ಇಲ್ಲಿಗೆ ಮತ್ತೆ ಟೀ ವಿರಾಮ. ನಂತರ ಪ್ರತಿಯೊಬ್ಬರು ಜಿ-ಮೇಲ್ ಐ ಡಿ ತೆರೆಯಲು ಅನುವು ಮಾಡಿಕೊಟ್ಟರು .ಎಲ್ಲರು ತಮ್ಮ ತಮ್ಮ ಜಿ- ಮೇಲ್ ಐ ಡಿ ಗಳನ್ನು ತೆರೆದು ಖುಷಿ ಪಡುತ್ತ ಈ ದಿನದ ತರಬೇತಿ ಮುಕ್ತಾಯವಾಯಿತು.