| + | ದಿ: ೦೫/೦೨/೨೦೧೫ ರಂದು ಮುಂಜಾನೆ ೧೦ ಗಂಟೆಗೆ ಶ್ರೀಮತಿ ವಾಣಿಶ್ರೀ, ಮತ್ತು ಶ್ರೀಮತಿ ಬೋರಮ್ಮ ಇವರುಗಳ ಪ್ರಾರ್ಥನೆಯೊಂದಿಗೆ ತರಬೇತಿ ಪ್ರಾರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಸವರಾಜ .ಹೆಚ್.ರವರು KOER ವೆಬ್ ಕುರಿತು ಮನಮುಟ್ಟುವಂತೆ ಪರಿಚಯಿಸಿದರು. ಸಂಪನ್ಮೂಲಗಳನ್ನು ಬೋಧನೆಯಲ್ಲಿ ಯಶಸ್ವಿಯಾಗಿ ಉಪಯೋಗಿಸಿಕೊಳ್ಳಲು ಪ್ರಾಯೋಗಿಕವಾಗಿ ವಿವರಿಸಿದರು. ವಿಷಯ ಮತ್ತು ಭಾವಚಿತ್ರಗಳನ್ನು ಕಾಪಿ ಮಾಡಿ ,ಅಟ್ಯಾಚ್ ಫೈಲ್ ಮಾಡಿ ಮಿಂಚಂಚೆ ಮೂಲಕ ರವಾನಿಸುವ ಬಗೆಯನ್ನು ತಿಳಿಸಿ, ನಮ್ಮಿಂದ ಪ್ರಾಯೋಗಿಕ ಕಾರ್ಯ ನಿರ್ವಹಿಸುವಂತೆ ಮಾಡಿದರು. ಮದ್ಯಾಹ್ನ ಸಿಹಿ ಭೋಜನದ ನಂತರ ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಆಂಜನೇಯ ಅವರು ಪರಿಕಲ್ಪನಾ ನಕ್ಷೆಯನ್ನು ಕುವೆಂಪು ಅವರ ಉದಾಹರಣೆಯೊಂದಿಗೆ ವಿವರಿಸಿದರು. ನಾವು ರನ್ನ ಕವಿಯ ಪರಿಕಲ್ಪನಾ ನಕ್ಷೆಯನ್ನು ತಯಾರಿಸಿ, ಮಿಂಚಂಚೆ ಮೂಲಕ ಕನ್ನಡ ಎಸ್ ಟಿ ಎಫ್ ಗುಂಪಿಗೆ ರವಾನಿಸಿ ಸಂತಸ ಪಟ್ಟೆವು. ೪ನೆ ದಿನದ ತರಬೇತಿ ಎಲ್ಲರಿಗೂ ಉಪಯುಕ್ತವಾಯಿತು. |