ಸರ್ಕಾರಿ ಉರ್ದು ಪ್ರೌಢಶಾಲೆ ಟ್ಯಾಂಕ್ ಗಾರ್ಡನ್ ಬೆಂಗಳೂರು ಶಾಲೆಯ 9 ನೇ ತರಗತಿಯ ಉರ್ದು ಮಾಧ್ಯಮ ವಿದ್ಯಾರ್ಥಿಗಳಿಗೆ ಎಸ್.ಟಿ.ಎಫ್.ನ ಸಹಾಯದಿಂದ ಭಾಷಾ ತರಗತಿಗಳನ್ನು ಕಳೆದ 5 ತಿಂಗಳುಗಳಿಂದ ನಡೆಸಲಾಗುತ್ತಿದೆ.ಉರ್ದು ಶಾಲೆಯ ವಿದ್ಯಾರ್ಥಿಗಳಿಗೆ ಮೂಲಭೂತವಾಗಿ ಭಾಷಾ ಸಮಸ್ಯೆಗಳಿರುವುದರಿಂದ ಮೂರು ಭಾಷೆಗಳನ್ನು ಆಯ್ಕೆ ಮಾಡಲಾಯಿತು.ಕನ್ನಡ ,ಇಂಗ್ಲೀಷ್ ,ಉರ್ದು ಭಾಷಾ ಪರಿಕಲ್ಪನೆಗಳಲ್ಲಿ ಜ್ಞಾನ, ಗ್ರಹಿಕೆ ,ಅಭಿವ್ಯಕ್ತಿ, ಪ್ರಶಂಸೆಗಳನ್ನು ಗಮನದಲ್ಲಿಟ್ಟುಕೊಂಡು ಡಿಜಿಟಲ್ ಚಿತ್ರಗಳ ವೀಕ್ಷಣೆ ಹಾಗು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುವಿಕೆಯಿಂದ ಆರಂಭಿಸಲಾಯಿತು.ಇನ್ನೂ ಗ್ರಹಿಕೆಯನ್ನು ಉತ್ತಮಪಡಿಸಲು ಪ್ರಾಣಿ,ಪಕ್ಷಿಗಳು ಅವುಗಳ ಧ್ವನಿ ಗುರುತಿಸುವ ಅಭ್ಯಾಸ ಮಾಡಿಸಲಾಯಿತು.ತದನಂತರ ಬರೆವಣಿಗೆಯ ಅಭ್ಯಾಸ,ಅದಾದ ನಂತರ ಚಿಕ್ಕ ಚಿಕ್ಕ ಕಥಾ ಚಿತ್ರಸರಣಿಯನ್ನು ತಯಾರಿಸುವಲ್ಲಿ ಆಸಕ್ತಿಯನ್ನು ಮೂಡಿಸಲಾಗುತ್ತಿದೆ. | ಸರ್ಕಾರಿ ಉರ್ದು ಪ್ರೌಢಶಾಲೆ ಟ್ಯಾಂಕ್ ಗಾರ್ಡನ್ ಬೆಂಗಳೂರು ಶಾಲೆಯ 9 ನೇ ತರಗತಿಯ ಉರ್ದು ಮಾಧ್ಯಮ ವಿದ್ಯಾರ್ಥಿಗಳಿಗೆ ಎಸ್.ಟಿ.ಎಫ್.ನ ಸಹಾಯದಿಂದ ಭಾಷಾ ತರಗತಿಗಳನ್ನು ಕಳೆದ 5 ತಿಂಗಳುಗಳಿಂದ ನಡೆಸಲಾಗುತ್ತಿದೆ.ಉರ್ದು ಶಾಲೆಯ ವಿದ್ಯಾರ್ಥಿಗಳಿಗೆ ಮೂಲಭೂತವಾಗಿ ಭಾಷಾ ಸಮಸ್ಯೆಗಳಿರುವುದರಿಂದ ಮೂರು ಭಾಷೆಗಳನ್ನು ಆಯ್ಕೆ ಮಾಡಲಾಯಿತು.ಕನ್ನಡ ,ಇಂಗ್ಲೀಷ್ ,ಉರ್ದು ಭಾಷಾ ಪರಿಕಲ್ಪನೆಗಳಲ್ಲಿ ಜ್ಞಾನ, ಗ್ರಹಿಕೆ ,ಅಭಿವ್ಯಕ್ತಿ, ಪ್ರಶಂಸೆಗಳನ್ನು ಗಮನದಲ್ಲಿಟ್ಟುಕೊಂಡು ಡಿಜಿಟಲ್ ಚಿತ್ರಗಳ ವೀಕ್ಷಣೆ ಹಾಗು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುವಿಕೆಯಿಂದ ಆರಂಭಿಸಲಾಯಿತು.ಇನ್ನೂ ಗ್ರಹಿಕೆಯನ್ನು ಉತ್ತಮಪಡಿಸಲು ಪ್ರಾಣಿ,ಪಕ್ಷಿಗಳು ಅವುಗಳ ಧ್ವನಿ ಗುರುತಿಸುವ ಅಭ್ಯಾಸ ಮಾಡಿಸಲಾಯಿತು.ತದನಂತರ ಬರೆವಣಿಗೆಯ ಅಭ್ಯಾಸ,ಅದಾದ ನಂತರ ಚಿಕ್ಕ ಚಿಕ್ಕ ಕಥಾ ಚಿತ್ರಸರಣಿಯನ್ನು ತಯಾರಿಸುವಲ್ಲಿ ಆಸಕ್ತಿಯನ್ನು ಮೂಡಿಸಲಾಗುತ್ತಿದೆ. |