Changes

Jump to navigation Jump to search
Line 29: Line 29:  
'ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ' ಎಂದು ಬರೆದವರು ಎಂ. ಗೋವಿಂದ ಪೈ. ಇವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಇವರು ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ರಚಿಸಿದರು.
 
'ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ' ಎಂದು ಬರೆದವರು ಎಂ. ಗೋವಿಂದ ಪೈ. ಇವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಇವರು ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ರಚಿಸಿದರು.
 
=ಪ್ರಸ್ತುತ ಪದ್ಯಕ್ಕೆ ಪೀಠಿಕೆ=
 
=ಪ್ರಸ್ತುತ ಪದ್ಯಕ್ಕೆ ಪೀಠಿಕೆ=
ಕನ್ನಡದ ಪ್ರತಿಯೊಬ್ಬ ಕವಿಯೂ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ತಮ್ಮ  ನಾಡು ನುಡಿಗೆ ಅಕ್ಷರಗಳ ಮೂಲಕ ನಮನವನ್ನು ಸಲ್ಲಿಸಿ ಕೃತಜ್ಞತೆಯನ್ನು ತೋರಿರುತ್ತಾರೆ. ಇದಕ್ಕೆ ಕುವೆಂಪು ರವರ "ಜಯ ಭಾರತ ಜನನಿಯ ತನುಜಾತೆ" ಕರ್ಕಿ ರವರ "ಹಚ್ಚೆವು ಕನ್ನಡದ ದೀಪ" ರಾಜರತ್ನಂ ರವರ 'ಕನ್ನಡ್ ಪದಗೊಳ್' ಇತ್ಯಾದಿ ಇಂತಹ ಪದ್ಯಗಳನ್ನು ಕಲಿಸುವ ಮೂಲಕ ಮಕ್ಕಳಲ್ಲಿ ನಾಡು ನುಡಿಯ ಮೇಲೆ ಪ್ರೀತಿ ಮತ್ತು ಅಭಿಮಾನವನ್ನು ಮೂಡಿಸುವುದು,
+
ಪ್ರಸ್ತುತ ಹರಿಹರನ ನಂಬಿಯಣ್ಣನ ರಗಳೆಯ ಕಥಾಸಾರದಂತೆ ಈತ ಪರಶಿವನ ಮಾನಸಪುತ್ರ. ಈತನನ್ನು ಪುಷ್ಪದತ್ತನೆಂದು ಕರೆದು ಪೂಜೆಗೆ ಹೂಗಳನ್ನು ಎತ್ತುವ ಕಾಯಕಕ್ಕೆ ನಿಯೋಜಿಸಲಾಗಿತ್ತು, ಒಮ್ಮೆ ಪುಷ್ಪದತ್ತ ಪಾರ್ವತಿಯ ಪೂಜೆಗಾಗಿ ಹೂ ತಿರಿಯುತ್ತಿದ್ದ ವಿಳಾಸಿನಿಯರಿಬ್ಬರನ್ನು ಕಂಡು ಮೋಹಗೊಂಡ. ಅವರೂ ಈತನಲ್ಲಿ ಅನುರಾಗ ಹೊಂದಿದರು. ಇದನ್ನು ಕಂಡ ಪಾರ್ವತೀಪರಮೇಶ್ವರರು ಭೂಲೋಕಕ್ಕೆ ಹೋಗಿ ಸಕಲಸುಖಗಳನ್ನೂ ಅನುಭವಿಸಿ ಬರುವಂತೆ ಹೇಳಿ ಆ ಮೂವರನ್ನೂ ಕಳಿಸಿಕೊಟ್ಟರು. ಅದರಂತೆ ತಿರುನಾವಲೂರಿನ ಜಡೆಯ ನಾಯನ್ನಾರ್ ಹಾಗೂ ಯಸ್ಯಜ್ಞಾನದೇವಿಯರಿಗೆ ನಂಬಿ ಎಂಬ ಹೆಸರಿನಿಂದ ಪುಷ್ಪದತ್ತ ಮಗನಾಗಿ ಹುಟ್ಟಿದ. ನಂಬಿ ಒಂದು ದಿನ ಓರಗೆಯವರೊಡನೆ ಆಟವಾಡುತ್ತಿದ್ದಾಗ ಅರಮನೆಯ ಆನೆ ಬಂದು ಆತನಿಗೆ ಪ್ರದಕ್ಷಿಣೆಯನ್ನು ಮಾಡಿ ಹಿಂತಿರುಗಿತು. ಈ ವಾರ್ತೆಯನ್ನು ಕೇಳಿದ ರಾಜ ನಂಬಿಯ ತಂದೆತಾಯಿಗಳನ್ನು ಕರೆಸಿ ಕಾರಣಿಕ ಶಿಶುವಾದ ನಂಬಿಯನ್ನು ಅಪುತ್ರವಂತನಾದ ತನಗೆ ಕೊಡಬೇಕೆಂದು ಕೇಳಿಕೊಂಡ. ಇದಕ್ಕೆ ನಂಬಿಯ ತಂದೆಯ ತಾಯಿಗಳು ಸಮ್ಮತಿಸಲಾಗಿ ನಂಬಿ ಅರಮನೆಯನ್ನು ಸೇರಿ ಕ್ರಮೇಣ ಸರ್ವಶಾಸ್ತ್ರಗಳಲ್ಲೂ ಕಲೆಗಳಲ್ಲೂ ಪರಿಣತನಾದ.
 +
 
 +
ವಿವಾಹಯೋಗ್ಯನಾದ ಈತನಿಗೆ ಯೋಗ್ಯ ಕನ್ಯೆಯನ್ನು ಗೊತ್ತು ಮಾಡಿದರು. ಮದುವೆಗೆ ಎಲ್ಲ ಸಿದ್ಧತೆಗಳೂ ನಡೆದು ಮದುವೆಯ ದಿಬ್ಬಣವೂ ಹೊರಟಿತು. ಈ ಸಮಯದಲ್ಲಿ ಸಂಸಾರ ಬಂಧನದಲ್ಲಿ ಅನುವಾಗಿರ್ದ ನಂಬಿಯನ್ನು ಎಚ್ಚರಿಸಲು ಶಿವ ಒಂದು ಆಟವನ್ನು ಹೂಡಿದ. ವೃದ್ಧ ಮಾಹೇಶ್ವರನ ವೇಷ ಧರಿಸಿ ವಿವಾಹ ಮಂಟಪಕ್ಕೆ ನೇರವಾಗಿ ಬಂದು, ಅಲ್ಲಿ ನೆರೆದಿದ್ದವರೆಲ್ಲರ ದೃಷ್ಟಿಯನ್ನು ತನ್ನತ್ತ ಕೇಂದ್ರೀಕರಿಸಿಕೊಂಡು ನಂಬಿ ತನ್ನ ತೊತ್ತಿನ ಮಗ ಎಂದು ಸಾರಿ ಹೇಳಿ ಮದುವೆಗೆ ವಿಘ್ನವನ್ನುಂಟು ಮಾಡಿದ. ಆದರೆ ಅಷ್ಟಕ್ಕೇ ತೃಪ್ತನಾಗದೆ ಕೈಯಲ್ಲಿ ಹಿಡಿದುಕೊಂಡಿದ್ದ ಊರುಗೋಲಿಂದ ಅಲ್ಲಿದ್ದ ಕುಂಭಗಳನ್ನೆಲ್ಲ ಒಡೆದು ರಾದ್ಧಾಂತಮಾಡಿದ. ತನ್ನ ತೊತ್ತಿನ ಮಗ ಎಂಬುದಕ್ಕೆ ಸಾಕ್ಷಿಯಾಗಿ ಪತ್ರವುಂಟು ಎಂದ. ಇದನ್ನೆಲ್ಲ ಕೇಳಿ ಬಹಳವಾಗಿ ಕೋಪಗೊಂಡ ನಂಬಿ ಆ ವೃದ್ಧನನ್ನು ಆಚೆಗೆ ನೂಕುವಂತೆ ಆಜ್ಞೆ ಮಾಡಿದ. ಆದರೇನು ನಂಬಿಯ ಮದುವೆ ನಿಂತುಹೋಯಿತು. ಮಂತ್ರಿ ಆ ಪ್ರಮಾಣಪತ್ರವನ್ನು ವೃದ್ಧನಿಂದ ಪಡೆದು ಅದು ನಿಜವಾದ ಪತ್ರವೆಂದು ಖಚಿತಪಡಿಸಿಕೊಂಡು ರಾಜನಿಗೆ ಸಂಗತಿಯನ್ನು ತಿಳಿಸಿದ. ಆ ಪತ್ರದ ಬಗೆಗೆ ಸಂಶಯಗೊಂಡ ನಂಬಿ ಆದರ ಸಾಕ್ಷಿಗಳಿಂದ ಋಜುವಾತು ಪಡೆಯಬೇಕೆಂದು ತಿರುವಣ್ಣಿನಲ್ಲೂರಿಗೆ ಹೊರಟ. ಅಲ್ಲಿ ಆ ವೃದ್ಧ ಪತ್ರದಲ್ಲಿನ ಸಾಕ್ಷಿಗಳ ಪೂರ್ವಾಪರವನ್ನೆಲ್ಲ ವಿವರಿಸಿದಾಗ ನಂಬಿಗೆ ಕೋಪಬಂದು ಆ ಪತ್ರವನ್ನು ಹರಿದು ಬಿಸುಟ. ಆಗ ಆ ಮುದುಕ ನೀನು ಹರಿದು ಹಾಕಿದ್ದು ನಕಲುಪ್ರತಿ. ಮೂಲಪ್ರತಿ ಬೇರೆ ಇದೆ ಎಂದಾಗ ನಂಬಿ ಆ ಮೂಲಪ್ರತಿಯನ್ನು ತೋರಿಸುವಂತೆ ಹೇಳಿ ಆ ವೃದ್ಧನನ್ನು ಹಿಂಬಾಲಿಸಿದ. ಆ ಊರ ಹೊರಗಿನ ಶಿವದೇವಾಲಯದೊಳಕ್ಕೆ ನಂಬಿಯನ್ನು ಕರೆದುಕೊಂಡು ಹೋದ ಆ ವೃದ್ಧ ಅಲ್ಲೇ ಅದೃಶ್ಯನಾದ. ಆಗ ಶಿವಪಾರ್ವತಿಯರು ಪ್ರತ್ಯಕ್ಷವಾಗಿ ನಂಬಿಗೆ ತಾಳಗಳನ್ನೂ ಮತಿಯನ್ನೂ ದನಿಯನ್ನೂ ಕರುಣಿಸಿ ಹಾಡುವಂತೆ ತಿಳಿಸಿದರು. ನಂಬಿಗೆ ಆಗ ಪೂರ್ವಸ್ಮರಣೆಯುಂಟಾಗಿ ಅಂದಿನಿಂದ ಶಿವದೇವಾಲಯಗಳಿಗೆ ಹೋಗಿ ಶಿವನನ್ನು ಸ್ತುತಿಸಿ ಸಹಸ್ರ ಹೊನ್ನುಗಳನ್ನು ಸಂಪಾದಿಸುತ್ತಿದ್ದ.
 +
 
 +
ಹೀಗೆ ಕಾಯಕ ಹೊತ್ತ ನಂಬಿ ತಿರುವಾಯೂರಿನ ದೇವಾಲಯಕ್ಕೆ ಹೋಗುತ್ತಿದ್ದಾಗ ಉಪ್ಪರಿಗೆಯಲ್ಲಿ ನಿಂತಿದ್ದ ಪರವೆ ಕಣ್ಣಿಗೆ ಬಿದ್ದಳು. ಕೂಡಲೇ ಪೂರ್ವವಾಸನೆ ಮರುಕಳಿಸಿ ಅವರಿಬ್ಬರಲ್ಲೂ ಪ್ರೇಮವಂಕುರಿಸಿತು. ಇಬ್ಬರೂ ಮದುವೆಯಾದರು. ನಂಬಿ ಶಿವನ ಅನುಗ್ರಹದಿಂದ ಪಂಗುನಿ ತಿರುನಾಳ್ ಹಬ್ಬವನ್ನು ವೈಭವದಿಂದ ಆಚರಿಸಿ ಪರವೆಗೆ ಸಂತೋಷವನ್ನುಂಟುಮಾಡಿದ. ಅನಂತರ ಉತ್ತರ ದಿಕ್ಕಿಗೆ ಪ್ರಯಾಣಮಾಡಿ ನಂಬಿ ತಿರುವತ್ತಾಯೂರಿಗೆ ಬಂದ. ಆ ಊರಿನ ದೇವಮಂದಿರದಲ್ಲಿ ಹೂ ಕಟ್ಟುತ್ತಿದ್ದ ಸಂಕಲಿಯನ್ನು ನೋಡಿದ. ಯಥಾಪ್ರಕಾರ ಪೂರ್ವವಾಸನೆಯಂತೆ ಅವರಲ್ಲಿ ಅನುರಾಗ ಬೆಳೆದು ಶಿವನಿಂದಲೇ ಕುಂಟಣೆ ಕೆಲಸವನ್ನು ಮಾಡಿಸಿ ಆಕೆಯನ್ನು ಮದುವೆಯಾದ.
 +
 
 +
ಕೆಲಕಾಲ ಕಳೆದ ಅನಂತರ ಪ್ರಾಪಂಚಿಕ ಭೋಗಲಾಲಸೆಗಳಲ್ಲೇ ಮುಳುಗಿ ಹೋಗಿದ್ದ ನಂಬಿಯನ್ನು ಶಿವ ಎಚ್ಚರಿಸಿದ. ನಂಬಿಗೆ ಪರವೆಯ ಜ್ಞಾಪಕ ಬಂದು ಸಂಕಲಿಯನ್ನು ತೊರೆದು ಹೊರಟ. ಇತ್ತ ಸಂಕಲಿ ಅಸುನೀಗಿದಳು. ಏತನ್ಮಧ್ಯೆ ನಂಬಿಯ ಕಣ್ಣುಗಳು ಇಂಗಿಹೋದವು. ಪಾರ್ವತಿಯನ್ನು ಸ್ತುತಿಸಿ ಮತ್ತೆ ದೃಷ್ಟಿ ಪಡೆದ.
 +
 
 +
ತಿರುವಾಯೂರಿಗೆ ಬಂದ ನಂಬಿ ಪರವೆಯ ಸಿಟ್ಟನ್ನು ನಿವಾರಿಸುವುದಕ್ಕೆ ಮಾರ್ಗ ಕಾಣದೆ ಪರವೆಯನ್ನು ಒಲಿಸಿಕೊಡಬೇಕೆಂದು ಶಿವನನ್ನೇ ಬೇಡಿದ. ಕೊನೆಗೆ ಶಿವನೇ ನಂಬಿ-ಪರವೆಯರ ಸಮಾಗಮವನ್ನುಂಟುಮಾಡಿಸಿದ.
 +
 
 +
ನಂಬಿಯ ಮಹಿಮೆಯನ್ನು ಕೇಳಿದ್ದ ಚೇರಮರಾಯ ಈತನನ್ನು ತನ್ನ ಮನೆಗೆ ಆಹ್ವಾನಿಸಿದ. ಚೇರಮನ ಅರಮನೆಯಲ್ಲಿ ಆರೋಗಣೆ ಮಾಡಿ ಮತ್ರ್ಯದ ಮಣಿಹವನ್ನು ನಂಬಿ ಮುಗಿಸಿದ. ಆ ಕಡೆ ಪರವೆ ಕೈಲಾಸವಾಸಿಯಾದಳು. ಶಿವ ನಂಬಿಗೆ ಹೇಳಿದ್ದ ತಿರುಮಜಕಳ ದೇವಾಲಯ ಗೋಚರವಾಯಿತು. ಅಲ್ಲಿಗೆ ಬಂದಾಗ ಒಂದು ರಾಯಸ ನಂಬಿಗಾಗಿ ಕಾದಿತ್ತು. ಅದರಲ್ಲಿ `ನರಲೋಕದೊಳಗಿರವು ತನಗೆ ಸಾಲ್ವುದು ನಂಬಿ. ಚರಿತದಿಂದ ಬರ್ಪುದೆಮ್ಮಂಘ್ರಿಯಲ್ಲಿಗೆ ನಂಬಿ, ಐರಾವತಂ ಬರ್ಪುದೇನೆ ಬರ್ಪುದು ನಂಬಿ ಎಂಬ ನಿರೂಪವಿತ್ತು. ಅದರಂತೆ ನಂಬಿ ಕೈಲಾಸವನ್ನು ಸೇರಿದ.
 +
 
 
=ಈ ಪದ್ಯಭಾಗದಿಂದ ಉಗಮಿಸುವ ವಿಚಾರಗಳು=
 
=ಈ ಪದ್ಯಭಾಗದಿಂದ ಉಗಮಿಸುವ ವಿಚಾರಗಳು=
 
<mm>[[Kannadigara Thayi.mm|Flash]]</mm>
 
<mm>[[Kannadigara Thayi.mm|Flash]]</mm>

Navigation menu