ದಿನಾಂಕ 20/2/2015 ರಂದು ತರಬೇತಿಯು ಕುಮಾರಿ ಸವಿತಾ ಕರಬನ್ನವರ ಗುರುಮಾತೆಯಿಂದ ಪ್ರಾರ್ಥನೆಯೊಂದಿಗೆ ಆರಂಭವಾಯಿತು .ಶ್ರೀ ಎಸ್ ಎಮ್ ಕಾಂಬಳೆಯವರು 19/02/2015 ರ ವರದಿಯನ್ನು ಮಂಡಿಸಿದರು. ಶ್ರೀ ಪೈಗಂಬರ ಕಳಾವಂತ ತರಬೇತಿದಾರರು ಜಿಮೇಲ್ ಅಕೌಂಟ ಆರಂಭಿಸುವ ಹಾಗೂ ಸೈನ್ ನೀಡುವದನ್ನು ತಿಳಿಸಿದರು. ಎಲ್ಲ ಶಿಕ್ಷಕರು ತಮ್ಮ ಜಿಮೇಲ್ ಖಾತೆಯನ್ನು ತೆರೆದು ಪುನ: ಸಂದೆಶಗಳನ್ನು ರವನಿಸಲು ಯಶಸ್ವಿಯಾದರು. ಮಧ್ಯಾಹ್ನದ ಅವದಿಯಲ್ಲಿ ಕನ್ನಡ ನುಡಿಯ ಬಗ್ಗೆ ತರಬೇತಿ ನಿಡಲಾಯಿತು. ಹಿರಿಯ ಉಪನ್ಯಾಸಕರಾದ ಶ್ರೀ ಎಸ್ ಡಿ ಗಾಂಜಿಯವರು ಎಲ್ಲ ತರಬೇತುದಾರರಲ್ಲಿ ಗಣಕಯಂತ್ರದ ಬಗ್ಗೆ ಹಾಡಿನ ಮುಖಾಂತರ ಆತ್ಮ ವಿಶ್ವಾಸ ಮೂಡಿಸಿದರು. ಇದರೊಂದಿಗೆ ಮೂರನೆಯ ದಿನದ ತರಬೇತಿಯು ಮುಕ್ತಾಯವಾಯಿತು.