"Test ಕನ್ನಡಿಗರ ತಾಯಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೯೩ ನೇ ಸಾಲು: ೯೩ ನೇ ಸಾಲು:
 
#'''ಮೌಲ್ಯಮಾಪನ ಪ್ರಶ್ನೆಗಳು ;'''
 
#'''ಮೌಲ್ಯಮಾಪನ ಪ್ರಶ್ನೆಗಳು ;'''
  
===ಅವಧಿ-3ರ ಮೌಲ್ಯಮಾಪನ===
+
===ಅವಧಿ ೩ರ ಮೌಲ್ಯಮಾಪನ===
  
 
===ಚಟುಟವಟಿಕೆ-1-===
 
===ಚಟುಟವಟಿಕೆ-1-===

೦೭:೪೧, ೭ ಅಕ್ಟೋಬರ್ ೨೦೧೬ ನಂತೆ ಪರಿಷ್ಕರಣೆ

ಪಠ್ಯದ ಗುರಿ ಮತ್ತು ಉದ್ದೇಶ

ಮಕ್ಕಳಲ್ಲಿ ಕನ್ನಡನಾಡಿನ ಪರಂಪರೆ, ಹಿರಿಮೆ ಮತ್ತು ಮಹತ್ವನ್ನು ಬಿತ್ತುವ ಉದ್ದೇಶದಿಂದ ನೀಡಲಾಗಿದೆ, ಅಲ್ಲದೆ ಕನ್ನಡದ ಮೊದಲ ರಾಷ್ಟ್ರಕವಿ ಗೋವಿಂದ ಪೈ ರವರ ಹಿರಿಮೆಯನ್ನು ಸಹ ಪರಿಚಯಿಸುವುದೇ ಆಗಿದೆ.ನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದ ಮಹಾ ರಾಜರು , ಸಂತರು, ದಾಸರು ಶರಣರು ಸಾಮ್ರಾಜ್ಯಗಳ ಮೂಲಕ ತಿಳಿಸಲು ಮಾಧ್ಯಮವಾಗಿ ಬಳಸಿಕೊಳ್ಳಲಾಗಿದೆ. ರಾಜ್ಯ ಉಗಮದ ಕಾಲದಲ್ಲಿ ರಚಿಸಿದರೂ ಅದರ ಪ್ರಸ್ತುತತೆ ಅಮೋಘವಾಗಿದೆ.

ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ /ಸಾಹಿತ್ಯ ಘಟ್ಟ ಪರಿಚಯ

  • ಕನ್ನಡದ ನವೋದಯ*

ನವೋದಯ ಎಂದರೆ ಹೊಸ ಹುಟ್ಟು/ಹೊಸದು. ಬ್ರಿಟಿಷ್ ಆಳ್ವಿಕೆಯ ಪ್ರಾರಂಭಿಕ ಹಂತಗಳಲ್ಲಿ ಹೆಚ್ಚು ಬೆಳಕು ಕಾಣದೆ ಇದ್ದ ಕನ್ನಡ ಸಾಹಿತ್ಯ, ೧೯ನೇ ಶತಮಾನದ ಕೊನೆಗೆ ಹಾಗು ಇಪ್ಪತ್ತನೆ ಶತಮಾನದ ಆರಂಭದಲ್ಲಿ ಹೊಸ ಹುಟ್ಟು ಪಡೆಯಿತು. ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಗೆ ಕಾರಣವಾಯಿತು. ಈ ಹಂತದಲ್ಲಿ ಬಿ.ಎಂ.ಶ್ರೀ, ಕುವೆಂಪು, ಬೇಂದ್ರೆ, ಶಿವರಾಮ ಕಾರಂತ ಮೊದಲಾದ ಶ್ರೇಷ್ಠ ಲೇಖಕರು ಬೆಳಕಿಗೆ ಬಂದರು.
ಈ ಕಾಲದ ಸಾಹಿತ್ಯ ಪ್ರಕಾರಗಳು ರೊಮ್ಯಾಂಟಿಕ್ ಇಂಗ್ಲಿಷ್ ಕಾವ್ಯ ಮತ್ತು ಗ್ರೀಕ್ ರುದ್ರನಾಟಕಗಳಿಂದ ಪ್ರಭಾವಿತವಾಯಿತು. ಈ ಘಟ್ಟದ ಬೆಳವಣಿಗೆಯನ್ನು ತಂದವರು ಬಿ.ಎಂ.ಶ್ರೀ, ತಮ್ಮ ಇಂಗ್ಲಿಷ್ ಗೀತಗಳು ಪುಸ್ತಕದೊಂದಿಗೆ. ಅನೇಕ ಸುಶಿಕ್ಷಿತ ಕನ್ನಡಿಗರು, ಮುಖ್ಯವಾಗಿ ಶಿಕ್ಷಕ ವೃತ್ತಿಯಲ್ಲಿದ್ದವರು, ತಮ್ಮ ಮಾತೃಭಾಷೆಯಲ್ಲಿ ಬರೆಯುವುದರ ಮಹತ್ವವನ್ನು ಕಂಡುಕೊಂಡು ಕನ್ನಡ ಸಾಹಿತ್ಯಕ್ಕೆ ಪ್ರೇರಣೆಯನ್ನೊದಗಿಸಿದರು.
ಇದಕ್ಕೆ ಉದಾಹರಣೆಯಾಗಿ ಕುವೆಂಪು - ತಮ್ಮ ಒಬ್ಬ ಶಿಕ್ಷಕರಿಂದ (ಬ್ರಿಟಿಷ್ ಮೂಲದವರು) ಕನ್ನಡದಲ್ಲಿ ಬರೆಯುವುದರ ಮಹತ್ವವನ್ನು ಕಂಡುಕೊಂಡು ಮುಂದೆ ರಾಷ್ಟ್ರಕವಿ ಬಿರುದಿಗೆ ಪಾತ್ರರಾದರು. ಅವರ ಪ್ರಕೃತಿಪ್ರೇಮ, ಮಾನವನ ಉನ್ನತಿಯಲ್ಲಿ ನಂಬಿಕೆ ಮತ್ತು ಪ್ರಕೃತಿ ಮತ್ತು ದೇವರ ಸಮ್ಮಿಶ್ರಣವನ್ನು ಕಾಣುವ ಅವರ ಮನಸ್ಸು ಅವರನ್ನು ಕನ್ನಡದ ಉಚ್ಚ ಕವಿಗಳಲ್ಲಿ ಒಬ್ಬರನ್ನಾಗಿ ಮಾಡಿವೆ. ಅವರ ಅತಿ ಪ್ರಸಿದ್ಧ ಕೃತಿ ಶ್ರೀ ರಾಮಾಯಣ ದರ್ಶನಂ.
ಇದಕ್ಕೆ ಉದಾಹರಣೆಯಾಗಿ ನಿಂತಿರುವ ಮತ್ತೊಬ್ಬ ಲೇಖಕರೆಂದರೆ ಶಿವರಾಮ ಕಾರಂತ - ಅತ್ಯಂತ ಬುದ್ಧಿಮತ್ತೆಯ, ಆಳವಾದ ಆದರ್ಶಗಳುಳ್ಳ ವ್ಯಕ್ತಿತ್ವ, ಹಾಗೂ ಅಷ್ಟೇ ಆಳವಾದ ಸಾಮಾಜಿಕ ಕಳಕಳಿಯಿದ್ದ ಲೇಖಕರು. ಅವರ ಶಕ್ತಿಶಾಲಿ ಸಾಮಾಜಿಕ ಕಾದಂಬರಿಗಳಲ್ಲಿ ಪ್ರಸಿದ್ಧವಾದವು ಮರಳಿ ಮಣ್ಣಿಗೆ ಮತ್ತು ಮೂಕಜ್ಜಿಯ ಕನಸುಗಳು.
ಈ ಕಾಲದ ಪ್ರಸಿದ್ಧ ಕವಿಗಳು: ಕುವೆಂಪು, ಬಿ.ಎಂ.ಶ್ರೀ, ದ.ರಾ.ಬೇಂದ್ರೆ, ಪು ತಿ ನ, ಕೆ.ಎಸ್. ನರಸಿಂಹಸ್ವಾಮಿ, ಎಂ.ಗೋಪಾಲಕೃಷ್ಣ ಅಡಿಗ, ಪ್ರೊ.ನಿಸಾರ್ ಅಹಮದ್, ಚೆನ್ನವೀರ ಕಣವಿ ಮೊದಲಾದವರು.
ಈ ಕಾಲದ ಪ್ರಸಿದ್ಧ ಕಾದಂಬರಿಕಾರರು: ಕುವೆಂಪು, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಐಯ್ಯಂಗಾರ್, ಅ.ನ.ಕೃ, ಯು.ಆರ್.ಅನಂತಮೂರ್ತಿ, ಡಾ.ಚಂದ್ರಶೇಖರ್ ಕಂಬಾರ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಮುಂತಾದವರು. ಈ ಕಾಲದ ಪ್ರಸಿದ್ಧ ನಾಟಕಕಾರರು: ಟಿ.ಪಿ.ಕೈಲಾಸಂ, ಶ್ರೀರಂಗ, ಕುವೆಂಪು, ಬಿ.ಎಂ.ಶ್ರೀ, ಗಿರೀಶ್ ಕಾರ್ನಾಡ್, ಬಿ. ವಿ. ಕಾರಂತ್ ಮೊದಲಾದವರು.

ಕವಿ ಪರಿಚಯ


Govinda pai.jpeg

ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಪೈ ಅವರ ತಂದೆ ಮಂಗಳೂರಿನವರು,ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು.'ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ' ಎಂದು ಬರೆದವರು ಎಂ. ಗೋವಿಂದ ಪೈ. ಮುಂದುವರಿದು-ಕನ್ನಡನಾಡಿನಲ್ಲಿ ಹುಟ್ಟಿದೀನಲ್ಲ? ಕನ್ನಡದಲ್ಲಿ ಪದ್ಯ ಬರೀತೀನಲ್ಲ? ನಾನೇ ಪುಣ್ಯವಂತ ಎಂದು ಹೇಳಿಕೊಂಡು ಖುಷಿಪಡುತ್ತಿದ್ದರು ಗೋವಿಂದ ಪೈ. ಆದರೆ, ನ.1ರಂದು ಕರ್ನಾಟಕದ ಏಕೀಕರಣವಾದಾಗ ಅವರಿಗೆ ತುಂಬ ಬೇಸರವಾಗುವಂಥ ಘಟನೆ ನಡೆದುಹೋಯಿತು. ಕರ್ನಾಟಕದ ಕಾಸರಗೋಡು ಕೇರಳಕ್ಕೆ ಸೇರಿ ಹೋಯಿತು. ಜತೆಗೆ ಮಂಜೇಶ್ವರ ಕೂಡ!ಈ ಸುದ್ದಿ ತಿಳಿದ ಗೋವಿಂದ ಪೈ ಅವರು ಗಳಗಳನೆ ಅತ್ತೇಬಿಟ್ಟರಂತೆ. ನಂತರ ನವೆಂಬರ್ ಒಂದನೇ ತಾರೀಖು ನನ್ನ ಪಾಲಿಗೆ ಶ್ರಾದ್ಧದ ದಿನ. ಏಕೆಂದರೆ, ಅವತ್ತು ನನ್ನ ಕನ್ನಡ ನಾಡಿಗೆ ಅನ್ಯಾಯವಾಗಿದೆ. ಅವಮಾನ ಮಾಡಲಾಗಿದೆ. ಕನ್ನಡಮ್ಮನ ಮನೆಯ ಒಂದು ಭಾಗವನ್ನೇ ಕತ್ತರಿಸಿ ಬೇರೆಯವರಿಗೆ ಕೊಟ್ಟರೆ ಅದನ್ನು ಸಹಿಸುವುದು ಹೇಗೆ ಎಂದರು. ಮುಂದುವರಿದು- 'ನಾನು ಹುಟ್ಟಿದ್ದು ಕನ್ನಡನಾಡಿಗೆ ಸೇರಿದ್ದ ಮಂಜೇಶ್ವರದಲ್ಲಿ. ಆದರೆ ಈಗ ಮಂಜೇಶ್ವರ ಕೇರಳಕ್ಕೆ ಸೇರಿಹೋಗಿದೆ. ನಾನು ಕನ್ನಡದ ನೆಲದಲ್ಲೇ, ಅಂದರೆ ಮಂಗಳೂರಿನಲ್ಲೇ ಸಾಯಲು ಇಷ್ಟಪಡುತ್ತೇನೆ' ಎಂದರು. ಮುಂದೆ 1963ರಲ್ಲಿ ಅವರು ಕೊನೆಯುಸಿರೆಳೆದದ್ದು ಮಂಗಳೂರಿನ ಬಂಧುಗಳ ಮನೆಯಲ್ಲೇ!.

  1. ಎಂ ಗೋವಿಂದ ಪೈ ರವರ ಹೆಚ್ಚಿನ ಮಾಹಿತಿಗಾಗಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಷಯ ವಿಶ್ವಕೋಶದಲ್ಲಿನ ಮಾಹಿತಿ

ನೀಡಿರುವ ಪದ್ಯಭಾಗದ ಹಿನ್ನಲೆ

'ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ' ಎಂದು ಬರೆದವರು ಎಂ. ಗೋವಿಂದ ಪೈ. ಇವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಇವರು ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ರಚಿಸಿದರು.

ಪ್ರಸ್ತುತ ಪದ್ಯಕ್ಕೆ ಪೀಠಿಕೆ

ಕನ್ನಡದ ಪ್ರತಿಯೊಬ್ಬ ಕವಿಯೂ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ತಮ್ಮ ನಾಡು ನುಡಿಗೆ ಅಕ್ಷರಗಳ ಮೂಲಕ ನಮನವನ್ನು ಸಲ್ಲಿಸಿ ಕೃತಜ್ಞತೆಯನ್ನು ತೋರಿರುತ್ತಾರೆ. ಇದಕ್ಕೆ ಕುವೆಂಪು ರವರ "ಜಯ ಭಾರತ ಜನನಿಯ ತನುಜಾತೆ" ಕರ್ಕಿ ರವರ "ಹಚ್ಚೆವು ಕನ್ನಡದ ದೀಪ" ರಾಜರತ್ನಂ ರವರ 'ಕನ್ನಡ್ ಪದಗೊಳ್' ಇತ್ಯಾದಿ ಇಂತಹ ಪದ್ಯಗಳನ್ನು ಕಲಿಸುವ ಮೂಲಕ ಮಕ್ಕಳಲ್ಲಿ ನಾಡು ನುಡಿಯ ಮೇಲೆ ಪ್ರೀತಿ ಮತ್ತು ಅಭಿಮಾನವನ್ನು ಮೂಡಿಸುವುದು,

ಈ ಪದ್ಯಭಾಗದಿಂದ ಉಗಮಿಸುವ ವಿಚಾರಗಳು

<mm>Flash</mm>

ಪ್ರಸ್ತುತ ಮಾಡಬೇಕಾದ ಪದ್ಯದ ವಿವರ

ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ!
ಹರಸು ತಾಯೆ ಸುತರ ತಾಯೆ ನಮ್ಮ ಜನ್ಮದಾತೆಯೆ!
ನಮ್ಮ ತಪ್ಪನೆನಿತ ತಾಳ್ವೆ,
ಅಕ್ಕರೆಯಿಂದೆಮ್ಮನಾಳ್ವೆ
ನೀನೆ ಕಣಾ ನಮ್ಮ ಬಾಳ್ವೆ,
ನಿನ್ನ ಮರೆಯಲಮ್ಮೆವು!
ತನು ಕನ್ನಡ, ಮನ ಕನ್ನಡ ನುಡಿ ಕನ್ನಡವೆಮ್ಮವು.

ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ
ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡಕುವ!
ಕನ್ನಡ ಕಸ್ತೂರಿಯನ್ನ
ಹೊಸತು ಸಿರಿಂ ತೀಡದನ್ನ
ಸುರಭಿ ಎಲ್ಲಿ? ನೀನದನ್ನ
ನವಶಕ್ತಿಯಿನೆಬ್ಬಿಸು-,
ಹೊಸ ಸುಗಂಧದೊಸಗೆಯಿಂದ ಜಗದಿ ಹೆಸರ ಹಬ್ಬಿಸು!

ಪದ್ಯದ ಬೆಳವಣಿಗೆ

ಹಿನ್ನಲೆ>ಪ್ರಸ್ತುತ>ನಂತರ ಈ ಪದ್ಯದಲ್ಲಿ ಕನ್ನಡನಾಡಿನ ಹೆಸರನ್ನು ಉತ್ತುಂಗಕ್ಕೆರಿಸಿದ ರಾಜರು,ಕವಿಗಳು, ಯತಿ-ಮುನಿಗಳು-ಪ್ರಾದೇಶಿಕತೆಯ ವರ್ಣನೆ

ಪಾಠದ ಬೆಳವಣಿಗೆ

ಅವಧಿ-೧

ಪಠ್ಯ ಪುಸ್ತಕದಲ್ಲಿನ ಪಠ್ಯಭಾಗ-1

ವಿವರಣೆ

ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿ ತೋರಿದ ಕಡೆ ಬಳಸಬಹುದು)

ಶಬ್ದಕೋಶ/ಪದ ವಿಶೇಷತೆ

ವ್ಯಾಕರಣಾಂಶ

ಚಟುವಟಿಕೆ

  1. ಚಟುವಟಿಕೆಯ ಹೆಸರು ;ನಮ್ಮ ಹಿರಿಯರ ದೃಷ್ಟಿಯಲ್ಲಿ ಕನ್ನಡ ಸಾಹಿತ್ಯ
  2. ಸಮಯ ;೨೦ ನಿಮಿಷ
  3. ಸಾಮಗ್ರಿಗಳು/ಸಂಪನ್ಮೂಲಗಳು ;
  4. ವಿಧಾನ/ಪ್ರಕ್ರಿಯೆ ;
  • ಶಿಕ್ಷಕರು ಈ ಪದ್ಯವನ್ನು ಮಾಡುವ ಹಿಂದಿನ ದಿನ ಈ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದು. ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡುವುದು ಪ್ರತಿಯೊಂದು ಗುಂಪಿನವರು ತಮ್ಮ ಮನೆಯಲ್ಲಿ ಅವರ ಪಾಲಕರು ಮತ್ತು ಅಜ್ಜಿ ಮತ್ತು ತಾತ ಅವರ ಜೊತೆ ಚರ್ಚೆ ಮಾಡಲು ಹೇಳುವುದು. 'ಅಥವ ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಗುಂಪಿನಲ್ಲೂ ಮೂರು ರೀತಿಯ ಮಕ್ಕಳು ಇರುವಂತೆ ನೋಡಿಕೊಳ್ಳುವುದು. ಅದರಲ್ಲಿ ಬರೆಯಲು ಬರದೆ ಇರುವ ಮಕ್ಕಳು ತಮ್ಮ ಮನೆಯಲ್ಲಿ ಚರ್ಚೆ ಮಾಡಿದ ಅಂಶಗಳನ್ನು ಅದೇ ಗುಂಪಿನ ಮಕ್ಕಳಿಗೆ ಹೇಳಿದರೆ ಅವರು ಪಟ್ಟಿ ಮಾಡುವರು ಮತ್ತು ತಾವು ಚರ್ಚೆ ಮಾಡಿದ ಅಂಶಗಳನ್ನು ಸೇರಿಸುವರು.
  • ಎಲ್ಲಾ ಮ್ಕಕಳಿಗೆ ಈ ಚಟುವಟಿಕೆಯನ್ನು ನೀಡಿ ಚರ್ಚೆ ಮಾಡಿದ ಅಂಶಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬರವಣೆಗೆ ರೂಪದಲ್ಲಿ, ಚಿತ್ರಗಳ ರೂಪದಲ್ಲಿ ಅಥಾವ ತರಗತಿಯಲ್ಲಿ ಹೇಳುವುದುರ ಮೂಲಕ ಪೂರ್ಣ ಮಾಡುವುದು. ನಂತರ ಶಿಕ್ಷಕರು ಈ ಎಲ್ಲಾ ಬರವಣಿಗೆಗಳನ್ನು ಸಾರಾಂಶೀಕರಿಸಿ, ಕನ್ನಡ ನಾಡಿನ ಬಗೆಗಿನ ಚಿತ್ರಣ ವನ್ನು ಮೂಡಿಸುವ ಸಂಪನ್ಮೂಲಗಳನ್ನು ಬಳಸಿ, ಮಕ್ಕಳಿಗೆ ಕನ್ನಡ ನಾಡಿನ ಕೆಲವು ಸಂಗತಿಗಳನ್ನು ತಿಳಿಸುವುದು
  1. ಚರ್ಚಾ ಪ್ರಶ್ನೆಗಳು ;
  2. ವೃದ್ದಿಗೊಳ್ಳುವ ಸಾಮರ್ಥ್ಯಗಳು ;ಮಾತನಾಡುವುದು ಪ್ರಶ್ನೆ ಕೇಳುವುದು, ಸಾಮಾಜೀಕರಣ
  3. ಮೌಲ್ಯಮಾಪನ ಪ್ರಶ್ನೆಗಳು ;
  • ನಮ್ಮ ನಾಡನ್ನು ಏಕೆ ಗೌರವಿಸ ಬೇಕು?
  • ಭಾಷಾ ಹೆಗ್ಗಳಿಕೆಗಳ ಮೇಲಿನ ಜಗಳ ಎಷ್ಟು ಸರಿ?

೧ನೇ ಅವಧಿ ಮೌಲ್ಯಮಾಪನ

ಅವಧಿ -೨

ಪಠ್ಯ ಪುಸ್ತಕದಲ್ಲಿನ ಪಠ್ಯಭಾಗ-೨

ವಿವರಣೆ

ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿತೋರಿದ ಕಡೆ ಬಳಸಬಹುದು)

ಶಬ್ದಕೋಶ/ಪದ ವಿಶೇಷತೆ

ವ್ಯಾಕರಣಾಂಶ

ಚಟುವಟಿಕೆ

  1. ಚಟುವಟಿಕೆಯ ಹೆಸರು ;
  2. ಸಮಯ ;
  3. ಸಾಮಗ್ರಿಗಳು/ಸಂಪನ್ಮೂಲಗಳು ;
  4. ವಿಧಾನ/ಪ್ರಕ್ರಿಯೆ ;
  5. ಚರ್ಚಾ ಪ್ರಶ್ನೆಗಳು ;
  6. ವೃದ್ದಿಗೊಳ್ಳುವ ಸಾಮರ್ಥ್ಯಗಳು ;
  7. ಮೌಲ್ಯಮಾಪನ ಪ್ರಶ್ನೆಗಳು ;

೨ನೇ ಅವಧಿಯ ಮೌಲ್ಯಮಾಪನ

ಅವಧಿ -೩

ವಿವರಣೆ

ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿತೋರಿದ ಕಡೆ ಬಳಸಬಹುದು)

ಶಬ್ದಕೋಶ/ಪದ ವಿಶೇಷತೆ

ವ್ಯಾಕರಣಾಂಶ

ಚಟುವಟಿಕೆ

  1. ಚಟುವಟಿಕೆಯ ಹೆಸರು ;
  2. ಸಮಯ ;
  3. ಸಾಮಗ್ರಿಗಳು/ಸಂಪನ್ಮೂಲಗಳು ;
  4. ವಿಧಾನ/ಪ್ರಕ್ರಿಯೆ ;
  5. ಚರ್ಚಾ ಪ್ರಶ್ನೆಗಳು ;
  6. ವೃದ್ದಿಗೊಳ್ಳುವ ಸಾಮರ್ಥ್ಯಗಳು ;
  7. ಮೌಲ್ಯಮಾಪನ ಪ್ರಶ್ನೆಗಳು ;

ಅವಧಿ ೩ರ ಮೌಲ್ಯಮಾಪನ

ಚಟುಟವಟಿಕೆ-1-

1. ಕನ್ನಡ ನಾಡಿನ ಸಾಹಿತ್ಯವನ್ನು ನಮ್ಮ ಮನೆಯ ತಲೆಮಾರಿನಲ್ಲಿ ಆದ ಬದಲಾವಣೆಯೊಂದಿಗೆ ತಿಳಿಸುವುದು.

  1. ವಿಧಾನ/ಪ್ರಕ್ರಿಯೆ: ಶಿಕ್ಷಕರು ಈ ಪದ್ಯವನ್ನು ಮಾಡುವ ಹಿಂದಿನ ದಿನ ಈ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದು. ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡುವುದು ಪ್ರತಿಯೊಂದು ಗುಂಪಿನವರು ತಮ್ಮ ಮನೆಯಲ್ಲಿ ಅವರ ಪಾಲಕರು ಮತ್ತು ಅಜ್ಜಿ ಮತ್ತು ತಾತ ಅವರ ಜೊತೆ ಚರ್ಚೆ ಮಾಡಲು ಹೇಳುವುದು. 'ಅಥಾವಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಗುಂಪಿನಲ್ಲೂ ಮೂರು ರೀತಿಯ ಮಕ್ಕಳು ಇರುವಂತೆ ನೋಡಿಕೊಳ್ಳುವುದು. ಅದರಲ್ಲಿ ಬರೆಯಲು ಬರದೆ ಇರುವ ಮಕ್ಕಳು ತಮ್ಮ ಮನೆಯಲ್ಲಿ ಚರ್ಚೆ ಮಾಡಿದ ಅಂಶಗಳನ್ನು ಅದೇ ಗುಂಪಿನ ಮಕ್ಕಳಿಗೆ ಹೇಳಿದರೆ ಅವರು ಪಟ್ಟಿ ಮಾಡುವರು ಮತ್ತು ತಾವು ಚರ್ಚೆ ಮಾಡಿದ ಅಂಶಗಳನ್ನು ಸೇರಿಸುವರು.
  • ಎರಡನೇ ವಿಧಾನ :ಎಲ್ಲಾ ಮ್ಕಕಳಿಗೆ ಈ ಚಟುವಟಿಕೆಯನ್ನು ನೀಡಿ ಚರ್ಚೆ ಮಾಡಿದ ಅಂಶಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬರವಣೆಗೆ ರೂಪದಲ್ಲಿ, ಚಿತ್ರಗಳ ರೂಪದಲ್ಲಿ ಅಥಾವ ತರಗತಿಯಲ್ಲಿ ಹೇಳುವುದುರ ಮೂಲಕ ಪೂರ್ಣ ಮಾಡುವುದು. ನಂತರ ಶಿಕ್ಷಕರು ಈ ಎಲ್ಲಾ ಬರವಣಿಗೆಗಳನ್ನು ಸಾರಾಂಶೀಕರಿಸಿ, ಕನ್ನಡ ನಾಡಿನ ಬಗೆಗಿನ ಚಿತ್ರಣ ವನ್ನು ಮೂಡಿಸುವ ಸಂಪನ್ಮೂಲಗಳನ್ನು ಬಳಸಿ, ಮಕ್ಕಳಿಗೆ ಕನ್ನಡ ನಾಡಿನ ಕೆಲವು ಸಂಗತಿಗಳನ್ನು ತಿಳಿಸುವುದು
  1. ಸಮಯ:೨೦ ನಿಮಿಷ
  2. ಸಾಮಗ್ರಿಗಳು/ಸಂಪನ್ಮೂಲಗಳು
  3. ಚರ್ಚಾ ಪ್ರಶ್ನೆಗಳು: ಮಕ್ಕಳು ಬೇರೆ ಬೇರೆ ಭಾಷೆಯಿಂದ ಬಂದಿರುವುದರಿಂದ ಅವರ ಪಾಲಕರ ಜೊತೆ ಸಮಾಜದಲ್ಲಿ ಆದ ಬದಲಾವಣೆಗಳ ಆಧಾರವನ್ನು ಚರ್ಚೆ ಮಾಡುವಂತೆ ತಿಳಿಸುವುದು, ಮಕ್ಕಳು ತರಗತಿಯಲ್ಲಿ ಪ್ರಸ್ತುತ ಪಡಿಸಿದ ನಂತರ ಶಿಕ್ಷಕರು ಸಮಾಜದ ಬದಲಾವಣೆಗೆ ಅನುಗುಣವಾಗಿ ಸಾಹಿತ್ಯದಲ್ಲಿ ಆದ ಬದಲಾವಣೆಯನ್ನು ಚರ್ಚೆ ಮಾಡುವರು.
  4. ಅವರ ಪದ್ಧತಿ ಮತ್ತು ಸಮಾಜದಲ್ಲಿ ಆದ ಬದಲಾವಣೆಗಳ ಬಗ್ಗೆ ಚರ್ಚೆ ಮಾಡುವುದು
  5. ಸಮಾಜದಲ್ಲಿ ಆದ ಬದಲಾವಣೆಗೆ ಅನುಗುಣವಾಗಿ ಸಾಹಿತ್ತಯದಲ್ಲಿ ಬದಲಾವಣೆಗಳು ಆದವು ಮತ್ತು ಕವಿಗಳ ಬರವಣಿಗೆಗಳು ಅವರ ಸಮಾಜಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡರು ಎಂದು ತಿಳಿಸುವುದು.

ಚಟುಟವಟಿಕೆ-2-

ಗುಂಪು ೧&೨

  • ಕನ್ನಡ ನಾಡನ್ನು ವರ್ಣಿಸಿ ರಚಿತವಾದ ಪದ್ಯಗಳ ಸಂಗ್ರಹ
  • ಕರ್ನಾಟಕ ಏಕೀಕರಣ ಪ್ರಮುಖ ಕಾರಣಕರ್ತರು ಸಂದರ್ಭ, ಅಗತ್ಯತೆ ಬಗ್ಗೆ ಭಾಷಣ /ಪ್ರಬಂಧ ಬರವಣಿಗೆ
  • ನವೋದಯ ಸಂದರ್ಭದ ಕವಿಗಳು ಪ್ರಸಿದ್ಧ ಕವನ ಸಂಕಲನಗಳು
  • ಕನ್ನಡದ ಕವಿಗಳ ಮಾಹಿತಿ ಕಲೆ ಹಾಕುವುದು

ಈ ಪಧ್ಯದಲ್ಲಿ ಬಳಸಿರುವ ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಅವುಗಳನ್ನು ಬಿಡಿಸಿ ಬರೆಯಲು ತಿಳಿಸುವುದು. ಗುಂಪು-೩ ಈ ಪಧ್ಯದಲ್ಲಿ ಬಂದಿರುವ ಪ್ರಾಸ ಪದಗಳನ್ನು ಗುರತಿಸಿ ಅವುಗಳಿಗೆ ಅರ್ಥ ಬರೆಯಿರಿ ಈ ಪಧ್ಯದಲ್ಲಿ ಬಳಸಲಾಗಿರುವ ಕಠಿಣ ಪದಗಳನ್ನು ಆಯ್ದುಕೊಂಡು, ಪ್ರತಿ ಪದದ ಅರ್ಥವನ್ನು ವಾಕ್ಯರೂಪದಲ್ಲಿ ಬರೆಯಲು ತಿಳಿಸುವುದು. ಈ ಪಧ್ಯದಲ್ಲಿ ಬಳಸಿರುವ ವ್ಯಕ್ತಿಗಳ ಹೆಸರುಗಳು(ನಾಮಪದಗಳನ್ನು) ಗುರುತಿಸಿ ಬರೆಯುವುದು. ಈ ಪಧ್ಯದಲ್ಲಿ ಬಳಸಲಾಗಿರುವ ಸ್ವಜಾತಿ ಒತ್ತಕ್ಷರ ಮತ್ತು ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಬರೆಯಲು ತಿಳಿಸುವುದು.

ವ್ಯಾಕರಣ/ಛಂದಸ್ಸು/ಅಲಂಕಾರ

ತತ್ಸಮ - ತದ್ಭವ ತತ್ಸಮ-ತಧ್ವವ ಪದದ ಪರಿಕಲ್ಪನೆಯನ್ನು ಅರ್ಥೈಸಬೇಕು. ಸಂಸ್ಕೃತ ಪದದ ಮೂಲವನ್ನು ನಾವು ತತ್ಸಮ ಎನ್ನುತ್ತೇವೆ. ಸಂಸ್ಕೃತ ರೂಪದ ಪದವನ್ನು ಕನ್ನಡದ ಅರ್ಥದಲ್ಲಿ ನೋಡುವುದೇ ತದ್ಭವ. ಮೊಗ -ಮುಖ , ಜನ್ಮ- ಜನುಮ ,ದಿವ-ದಿವ್ , ಮೃಗ-ಮಿಗ ,ಕಸ್ತೂರಿ-ಕತ್ತುರಿ , ಶ್ರೀ- ಸಿರಿ , ಶಕ್ತಿ- ಸಕುತಿ, ಮೂರ್ತಿ- ಮೂರುತಿ, ಕೀರ್ತಿ-ಕೀರುತಿ

ದ್ವಿರುಕ್ತಿ ಒಂದೇ ಪದವನ್ನು ಒಟ್ಟಿಗೆ ವಾಕ್ಯದಲ್ಲಿ ಬಳಸುವುದು. ಪರಿ ಪರಿ,

ಪ್ರಾಸ ಪದಗಳು ತಾಳ್ವೆ-ನಾಳ್ವೆ- ಬಾಳ್ವೆ ಮರೆಯಲಮ್ಮೆವು- ಕನ್ನಡವೆಮ್ಮವು ಮರಂಗಳೊ -ತರತರಂಗಳೊ ಸುಂದರಂ -ಬಂಧುರಂ ಹುಡುಕುವ-ಮಿಡುಕುವ

ಉಪಸಂಹಾರ

ಇಷ್ಟೊಂದು ಸುಧೀರ್ಘ ಪರಂಪರೆಯ ಹಿನ್ನಲೆಯಲ್ಲಿ ಮಕ್ಕಳಲ್ಲಿ ನಮ್ಮ ಮೇಲಿರುವ ಜವಾಬ್ಧಾರಿಗಳನ್ನು ಅರಿತುಕೊಳ್ಳಲು ಕಲಿಸಬೇಕು . ಅದನ್ನು ಉಳಿಸಿ ಬೆಳೆಸಬೇಕು.ನಾಡು,ನುಡು ಪರಂಪರೆಯನ್ನು ಗೌರವಿಸ ಬೇಕು.ಎಂಬ ನೀತಿಗಳನ್ನು ಮಕ್ಕಳಲ್ಲಿ ಮೊಳೆಯುವಂತೆ ಮಾಡಬೇಕು.

ಮೌಲ್ಯಮಾಪನ

  • ಕನ್ನಡ ಒಂದು ಭಾಷೆಯಲ್ಲ ಸಂಸ್ಕ್ರತಿ ಹೇಗೆ?
  • ಭಾಷೆಯ ವಿಷಯದಲ್ಲಿ ಮೇಲು ಕೀಳಿಲ್ಲ, ಹೇಗೆ?