"ಇತರೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(೨೧ intermediate revisions by ೨ users not shown)
೧ ನೇ ಸಾಲು: ೧ ನೇ ಸಾಲು:
[ಹಾಸಿಗೆ ಇದ್ದಷ್ಟು ಕಾಲು ಚಾಚು
 
  
ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು  ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು . ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ  ನೀಡಿ ನಮ್ಮ ಬಾಳನ್ನು ಹಸನು ಗೊಳಿಸುತ್ತವೆ. ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಮೇಲಿನ ಗಾದೆಯೂ ಒಂದಾಗಿದೆ.
 
ಮೇಲಿನ ಗಾದೆ ಮಾತು ಜೀವನದ ಇತಿಮಿತಿಯನ್ನು ಸೂಚಿಸುತ್ತದೆ.
 
ಹಾಸಿಗೆಯ ಅಳತೆಗೆ ತಕ್ಕಂತೆ ಕಾಲು ಚಾಚಿ ಮಲಗಬೇಕು .ಇಲ್ಲವಾದರೆ ಕಾಲು ಹಾಸಿಗೆಯಿಂದ ಆಚೆ ಬಂದು ನೆಲ ಮುಟ್ಟಿ  ಶೀತ ಬಾಧೆ ಬಂದೀತು . ಹಾಗಾಗಿ ಹಾಸಿಗೆ ಅಷ್ಟು ಉದ್ದವಿಲ್ಲದಿದ್ದರೆ ,ಮೊಟಕಾಗಿದ್ದರೆ ಕಾಲನ್ನು ಮಡಚಿಕೊಳ್ಳುತ್ತೇವೆ. ಹಾಗೆಯೇ ನಮ್ಮ ಮಿತಿಯನ್ನು ಅರಿತು ಬಾಳಬೇಕು .ಯಾವುದೇ ಕೆಲಸಕ್ಕೆ  ಕೈ ಹಾಕಿದರೂ ನಮ್ಮ ಶಕ್ತಿ,ಸಾಮರ್ಥ್ಯ ,ಸೌಕರ್ಯಗಳನ್ನು ಗಮನಿಸಬೇಕು. ಅದಕ್ಕೆ ತಕ್ಕಂತೆ ಖರ್ಚು  ಮಾಡಬೇಕು. ಸಾಲ ಮಾಡಿ ತುಪ್ಪ ತಿನ್ನುವ ಜಾಯಮಾನ ನಮ್ಮದಾಗಬಾರದು. ನಮ್ಮ ಆದಾಯಕ್ಕೆ ತಕ್ಕ ಹಾಗೆ ಖರ್ಚು ಮಾಡಬೇಕು. ಆದಾಯ ಕಡಿಮೆ ಖರ್ಚು ಅತಿಯಾದರೆ ಜೀವನದಲ್ಲಿ ನಾವೇ ಸಂಕಟಪಡಬೇಕಾಗುತ್ತದೆ. ದುಃಖ ,ಗೊಂದಲ ನಮ್ಮನ್ನು ಅವಲಂಬಿಸಿರುವವರಿಗೂ ಸಮಸ್ಯೆಗಳುಂಟಾಗುತ್ತವೆ.
 
ಬುದ್ಧ ಹೇಳುವಂತೆ ಆಸೆಯೇ ದುಃಖಕ್ಕೆ ಮೂಲ; ಆಸೆಯ ನಾಶವೇ ಸಂತೋಷದ ಮೂಲವಾಗಿದೆ. ಆದ್ದರಿಂದ ಇರುವುದರಲ್ಲಿ ತೃಪ್ತಿಕರವಾದ ,ಆರೋಗ್ಯಕರವಾದ ಜೀವನವನ್ನು ನಡೆಸಬೇಕು.ಮಿತಿಯನ್ನು ಅರಿತು ಬಾಳು ಎಂಬುದು ಮೇಲಿನ ಗಾದೆ ಮಾತಿನ ಸಂದೇಶವಾಗಿದೆ.
 
  
ಕೈ ಕೆಸರಾದರೆ ಬಾಯಿ ಮೊಸರು
+
=ಪತ್ರಲೇಖನ =
ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು  ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು . ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ ನೀಡಿ ನಮ್ಮ ಬಾಳನ್ನು ಹಸನು ಗೊಳಿಸುತ್ತವೆ. ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಮೇಲಿನ ಗಾದೆಯೂ ಒಂದಾಗಿದೆ
+
=ಪೀಠಿಕೆ =
ಈ ಗಾದೆಯ ಮಾತಿನ ಅರ್ಥವೆಂದರೆ ಕಷ್ಟ ಪಟ್ಟರೆ ಸುಖ ಎಂಬುದನ್ನು  ಸೂಚಿಸುತ್ತದೆ. ಕನಕದಾಸರು ''ಎಲ್ಲಾರು ಮಾಡುವುದು ಹೊಟ್ಟೆಗಾಗಿ  ಗೇಣು ಬಟ್ಟೆಗಾಗಿ '' ಪ್ರತಿಯೊಬ್ಬರೂ ಜೀವನೋಪಾಯಕ್ಕಾಗಿ ಒಂದೊಂದು ಕೆಲಸವನ್ನು ಅವಲಂಬಿಸಬೇಕಾಗುತ್ತದೆ. ಉಳುವ ಕೆಲಸವನ್ನು ರೈತರು, ನೆಯ್ಯುವ ಕಾರ್ಯವನ್ನು ನೇಕಾರರು ಹೀಗೆ ಪ್ರತಿಯೊಬ್ಬರು ತಮ್ಮ ತಮ್ಮ ಜೀವನ ನಿರ್ವಹಣೆಗೆ ಒಂದೊಂದು ಕೆಲಸವನ್ನು  ಮಾಡುವಾಗ ಆ ಕೆಲಸದಲ್ಲಿ ಪ್ರತಿಫಲ ಇರುವ ಹಾಗೆಯೇ ಸಾಕಷ್ಟು ಕಷ್ಟ ನಷ್ಟಗಳೂ ಇರುತ್ತವೆ. ಆದರೆ  ಕಷ್ಟಗಳು ಬರುವವೆಂದು ಕೆಲಸ ಮಾಡದೇ ಬದುಕಲಾಗದು. ಕೈ ಕೆಸರಾಗುವುದೆಂದು ರೈತ ಬೆಳೆಯನ್ನು ಬೆಳೆಯದಿರಲಾದೀತೇ ? ಬೆಳೆ ಇಲ್ಲದೇ ಊಟ ಮಾಡುವುದು ಹೇಗೆ ? ರೈತ ಕೈ ಕೆಸರನ್ನು ಗಮನಿಸದೇ ಮುಂದೆ ಸಿಗುವ ಪ್ರತಿಫಲದ ನಿರೀಕ್ಷೆಯು ಅವನನ್ನು ಕಷ್ಟ ಪಡಲು ಪ್ರೇರೇಪಿಸುತ್ತದೆ.
+
ನಮ್ಮ ಎದುರಿಗೆ ಇರುವವರ ಜೊತೆ ಸಂಭಾಷಣೆ ನಡೆಸಿದಂತೆ ದೂರದಲ್ಲಿರುವ (ಬೇರೆಡೆಯಲ್ಲಿ ವಾಸಿಸುತ್ತಿರುವ)ವ್ಯಕ್ತಿಗಳ ಜೊತೆ ಮಾತುಕತೆಗೆ ,ಪರಸ್ಪರ ವಿಚಾರ ವಿನಿಮಯಕ್ಕೆ  ಬಳಕೆಯಾಗುವ ಪರಿಣಾಮಕಾರಿ ಸಾಧನ ಪತ್ರ. ಪತ್ರಲೇಖನ ಒಂದು ಕಲೆ . ಹಿಂದೊಮ್ಮೆ ಇದು ಬಹಳ ಪರಿಣಾಮಕಾರಿಯಾದ ಸಂಪರ್ಕ ಸಾಧನವಾಗಿತ್ತು. ಪುರಾಣ ,ಕಾವ್ಯಗಳಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂದೇಶ ಕಳಿಸುವಾಗ ಪಾರಿವಾಳಗಳ ಮೂಲಕ ಕಳಿಸುವ ಪರಿಪಾಠವಿತ್ತು. ಕಾಳಿದಾಸನ ಮೇಘ ಸಂದೇಶ ಕಾವ್ಯದಲ್ಲಿ ಸಂದೇಶವನ್ನು ಕಳಿಸಲು ಮೇಘಗಳನ್ನು ಬಳಸಿದ್ದನ್ನು ನೋಡಬಹುದು. ಕಾಲಾನಂತರದಲ್ಲಿ ಸಂದೇಶಗಳನ್ನು ಕಳಿಸಲು ದೂತರು ಕುದುರೆಯ ಮೇಲೆ ಸಾಗುತ್ತಿದ್ದರು. ಎಲೆಗಳ ಮೇಲೆ ಬರೆಯುತ್ತಿದ್ದ ಸಂದೇಶಗಳು ಕ್ರಮೇಣ ಕಾಗದಗಳ ಮೇಲೆ ಬರೆಯಲ್ಪಟ್ಟು    ಅಂಚೆ ಇಲಾಖೆಗಳ ಮೂಲಕ ಪತ್ರದ ರೂಪ ತಾಳಿ ಪತ್ರವ್ಯವಹಾರ ಪ್ರಾರಂಭವಾಯಿತು.
ಬಸವಣ್ಣನವರು ಹೇಳುವಂತೆ ಕಾಯಕವೇ ಕೈಲಾಸವಾಗಿದೆ. ಪರಿಶ್ರಮದಿಂದ ಮಾತ್ರವೇ ವಿದ್ಯೆ ಎಂದು ಸಂತ ಕಬೀರದಾಸರು ಹೇಳಿದ್ದಾರೆ.
 
ದುಡಿತವೇ ದುಡ್ಡಿನ ತಾಯಿ ಆದ್ದರಿಂದ ಪ್ರತಿಯೊಬ್ಬರೂ ಕಷ್ಟಪಟ್ಟು ದುಡಿಯಬೇಕು .ಉದ್ಯೋಗಿಯಾದರೆ ಮಾತ್ರ ಸಂಪತ್ತು ದೊರೆಯಲು ಸಾಧ್ಯ . ಆದ್ದರಿಂದ ಪ್ರತಿಯೊಬ್ಬರೂ ತಮ್ಮ ತಮ್ಮ ಕಾರ್ಯವನ್ನು ನಿಷ್ಠೆಯಿಂದ ಮಾಡಿದರೆ ಫಲ ದೊರೆಯಲು ಸಾಧ್ಯ .  
 
  
ತುಂಬಿದ ಕೊಡ ತುಳುಕುವುದಿಲ್ಲ
+
ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು . ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ ನೀಡಿ ನಮ್ಮ ಬಾಳನ್ನು ಹಸನು ಗೊಳಿಸುತ್ತವೆ. ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಮೇಲಿನ ಗಾದೆಯೂ ಒಂದಾಗಿದೆ.  
+
ಇಂದು  ದೂರವಾಣಿ ,ಮೊಬೈಲ್ ,ಗಣಕಯಂತ್ರ ಗಳು ಬಂದ ಮೇಲೆ ಪತ್ರವ್ಯವಹಾರವು ತನ್ನ ಮೊದಲಿನ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ. ಇಂದು ಅಂತರ್ಜಾಲ ಸೌಲಭ್ಯದಿಂದಾಗಿ ಹೆಚ್ಚಿನ ಸಂದೇಶಗಳು  ಮಿಂಚಂಚೆಯ (mail) ಮೂಲಕ ರವಾನೆಯಾಗುತ್ತಿವೆ. ಮೊಬೈಲ್‌ನಲ್ಲಿ ಎಷ್ಟೋ ದೂರದಲ್ಲಿರುವವರಿಗೆ  whatsapp ,hike ,telegram ಇವೇ ಮೊದಲಾದ ವ್ಯವಸ್ಥೆಗಳ ಮೂಲಕ ಕ್ಷಣ ಮಾತ್ರದಲ್ಲಿ ಸಂದೇಶವನ್ನು ರವಾನಿಸಬಹುದಾಗಿದೆ. ಹಾಗಾಗಿ ಇಂದು ಪತ್ರ ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ.  
ಕೊಡ ತುಂಬಿದ್ದರೆ ಸಾಧಾರಣಕ್ಕೆ  ತುಳುಕುವ ಕಾರಣವಿಲ್ಲ . ಅರ್ಧಮರ್ಧ ಇರುವಾಗ ನಾವು ಸಹಜವಾಗಿ ಎತ್ತಿದರೆ ನೀರು ಮೇಲೆ ಚಿಮ್ಮಿ ನಮ್ಮ ಮುಖಕ್ಕೆ ಸಿಂಪಡಿಸಿದಂತಾಗುವುದು. ಈ ಗಾದೆಯನ್ನು ಜ್ಞಾನಿಗೂ ಅರೆಬರೆ ತಿಳಿದವನಿಗೂ ಇರುವ ವ್ಯತ್ಯಾಸ ತಿಳಿಸಲು ಬಳಸುತ್ತಾರೆ.  
+
ಆದರೂ ಕೂಡ ಪತ್ರಲೇಖನವು ಒಂದು ಕಲೆ. ತನ್ನಲ್ಲಿನ ವಿಚಾರವನ್ನು ಇನ್ನೊಬ್ಬರಿಗೆ ಹೇಳಲು ಇರುವ ಪರಿಣಾಮಕಾರಿ ವಿಧಾನವೇ. ಇಲ್ಲಿ ಪತ್ರ ಬರವಣಿಗೆಯ ಆಕರ್ಷಣೆ ಪ್ರಧಾನವಾದುದುಬರವಣಿಗೆ ಸುಂದರವಾಗಿರಬೇಕು ಎನ್ನುವುದರ ಜೊತೆಗೆ ಪದಗಳ ಬಳಕೆ ಸೊಗಸಾಗಿರಬೇಕು ಎನ್ನುವುದು ಮುಖ್ಯವಾಗಿರುತ್ತದೆ. ಅದು ಕಾಗದದಲ್ಲಿ ನೀಡುವ ಒಂದು ಭೇಟಿ. ಬರಹ ರೂಪದಲ್ಲಿ ಕಣ್ಣಿಗೆ ಕಾಣುವ ಸಾಧನ . ಹಲವು ಕಾಲ ಇರಿಸಿಕೊಂಡು ಮತ್ತೆ ಮತ್ತೆ ಓದಬಹುದು. ಗಾಂಧೀಜಿಯವರ ಪತ್ರಗಳು ,ನೆಹರೂರವರು ತಮ್ಮ ಮಗಳು ಇಂದಿರಾ ಪ್ರಿಯದರ್ಶಿನಿಗೆ ಬರೆದ ಪತ್ರಗಳು ಇಂದಿಗೂ ವಿಶ್ವವಿಖ್ಯಾತವಾಗಿರುವಂತವು.
ನಿಜವಾದ ಜ್ಞಾನಿಯಾದವನು ತನ್ನ ಜ್ಞಾನ ,ಹೆಸರು ,ಗೌರವವನ್ನು ತಾನೇ ಪ್ರಚಾರ ಮಾಡಿಕೊಳ್ಳಲು ಹೋಗುವುದಿಲ್ಲ . ಆದರೆ ಅರೆಬರೆ ಕಲಿತ ವ್ಯಕ್ತಿಗಳು ತಮ್ಮನ್ನು ಮಾಹಾ ಜ್ಞಾನಿಗಳು .ತಾನೇ ಸರ್ವ ಶ್ರೇಷ್ಠ ಎಂಬಂತೆ ಸಮಾಜದಲ್ಲಿ ವರ್ತಿಸುತ್ತಾರೆ. ರಾಮಕೃಷ್ಣ ಪರಹಂಸರಂತವರು ಆಲ್ಬರ್ಟ್ ಐನ್ ಸ್ಟೈನ್ ನಂತಹ ಮಹಾನ್ ವ್ಯಕ್ತಿಗಳಿಗೆ ತಮ್ಮನ್ನು ಪ್ರಚಾರಕ್ಕೆ ಒಳಪಡಿಸಿಕೊಳ್ಳಬೇಕಾದ ಆವಶ್ಯಕತೆಯೇ ಇರುವುದಿಲ್ಲ.ಸಂದರ್ಭ ಬಂದಾಗಲೆಲ್ಲ ಮಹಾತ್ಮರ ವ್ಯಕ್ತಿತ್ವ ತಾನೇ ತಾನಾಗಿ ವ್ಯಕ್ತವಾಗುತ್ತದೆ. ಅಲ್ಪವಿದ್ಯಾ ಮಹಾಗರ್ವಿಗಳು ಅರ್ಧ ತುಂಬಿದ ಕೊಡದ ಹಾಗೆ ಕೊಡವನ್ನೆತ್ತಿದ್ದರೆ ನೀರು ತುಳುಕುವಂತೆ ಆವಶ್ಯಕತೆ ಇಲ್ಲದಿದ್ದರೂ ತಮ್ಮನ್ನು ಪ್ರಚಾರಕ್ಕೆ ಒಳಪಡಿಸಿಕೊಳ್ಳುತ್ತಾರೆ.
 
ಯಾವುದೇ ವಿಷಯದಲ್ಲಿ ಪೂರ್ಣ ಜ್ಞಾನ ಪಡೆಯಲು ಪ್ರಯತ್ನಿಸಬೇಕು .ಅರ್ಧ ಬೆಂದ ಇಟ್ಟಿಗೆಯಾಗಬಾರದು .ಸ್ವ ಪ್ರದರ್ಶನ ಮಾಡಿಕೊಳ್ಳುವುದು ,ಆತ್ಮ ಪ್ರಶಂಸೆ ಮಾಡಿಕೊಳ್ಳುವುದು ದೊಡ್ಡಸ್ತಿಕೆಯ ಲಕ್ಷಣವಲ್ಲ.
 
ಪೂರ್ಣ ವಿಚಾರವನ್ನು ಅರಿತವರು ಪ್ರಚಾರಪ್ರಿಯರಾಗಿರುವುದಿಲ್ಲ.ಸಂಯುಮ ವುಳ್ಳವರಾಗಿರುತ್ತಾರೆ. ಆದರ್ಶಪ್ರಾಯರಾಗಿರುತ್ತಾರೆ.ಅರ್ಧ ತಿಳಿದುಕೊಂಡವರ ಮಾತಿನಲ್ಲಿ,ನಡೆನುಡಿಗಳಲ್ಲಿ ಸಂಯುಮವಿರಲಾರದು. ಈ ಗಾದೆ ಮಾತಿನಲ್ಲಿ  ಜ್ಞಾನಿಗಳನ್ನು, ತುಂಬಿದ ಕೊಡಕ್ಕೂ      ಅರ್ಧ ತಿಳಿದು ಪ್ರಚಾರ ಪ್ರಿಯರಾಗಿರುವವರನ್ನು ಅರ್ಧ ತುಂಬಿದ ಕೊಡಕ್ಕೂ ಹೋಲಿಸಲಾಗಿದೆ.  
 
  
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ?
+
=ಪತ್ರಲೇಖನ -ವಿಧಗಳು =
ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು  ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು . ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ  ನೀಡಿ ನಮ್ಮ ಬಾಳನ್ನು ಹಸನು ಗೊಳಿಸುತ್ತವೆ. ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಮೇಲಿನ ಗಾದೆಯೂ ಒಂದಾಗಿದೆ.
+
*
ಗಿಡ ಚಿಕ್ಕದಾಗಿರುವಾಗ ಅದನ್ನು ಬಾಗಿಸಬಹುದು .ಅದೇ ಅದು ಬೆಳೆದು ಗಟ್ಟಿಯಾಗಿ ಮರವಾದ ಮೇಲೆ ಅದನ್ನು ಬಗ್ಗಿಸಲು ಸಾಧ್ಯವಾಗುವುದಿಲ್ಲ.ಮನೆಯ ಮುಂದೆ ಅಲಂಕಾರಿಕವಾಗಿ ಬೆಳೆಸಬೇಕಾದ ಗಿಡವನ್ನು ಅದು ಚಿಕ್ಕದಿರುವಾಗಲೇ ನಮಗೆ ಬೇಕಾದ ಆಕಾರಕ್ಕೆ ಬಗ್ಗಿಸಬೇಕು .ಅದು ದೊಡ್ಡದಾದ ಮೇಲೆ ನಮಗೆ ಬೇಕಾದ ಆಕಾರಕ್ಕೆ ತರಲು ಆಗುವುದಿಲ್ಲ.
+
=ಸಾಮಾನ್ಯವಾಗಿ ಪತ್ರ ವ್ಯವಹಾರದಲ್ಲಿ ಎರಡು ವಿಧಗಳು =
ಹಾಗೆಯೇ ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಬೇಕಾದ ಮಕ್ಕಳಿಗೆ ಚಿಕ್ಕವರಿರುವಾಗಲೇ ಜೀವನ ಮೌಲ್ಯಗಳನ್ನು ರೂಢಿಸುವ ಕಾರ್ಯವಾಗಬೇಕು. ಅವರಿಗೆ ಚಿಕ್ಕವರಿರುವಾಗಲೇ ಬುದ್ಧಿ ಹೇಳಬೇಕು ,ತಪ್ಪು ಮಾಡಿದರೆ  ತಿದ್ದಿ  ತಿಳುವಳಿಕೆ ನೀಡಬೇಕು. ಆದರೆ ಅವರು ಚಿಕ್ಕವರು ಎನ್ನುವ ಕಾರಣಕ್ಕೆ ಅವರ ತಪ್ಪುಗಳನ್ನು ತಿದ್ದದೇ ಹಾಗೆ ಬೆಳೆಯಲು ಬಿಟ್ಟರೆ ಮುಂದೆ ದೊಡ್ಡವರಾದಂತೆ ಅದೇ ತಪ್ಪುಗಳೇ ಅವರ ಪಾಲಿಗೆ ಒಪ್ಪುಗಳಾಗಿ ಮಾರ್ಪಟ್ಟು ಮುಂದೆ ತಿದ್ದ ಹೊರಟರೂ ಪ್ರಯೋಜನವಾಗುವುದಿಲ್ಲ. ಮನೆಯಲ್ಲಿ ಮಕ್ಕಳನ್ನು ಎಷ್ಟು ಪ್ರೀತಿಸಿದರೂ ಮುದ್ದಿಸಿದರೂ ಸರಿ ತಪ್ಪುಗಳ ಪ್ರಶ್ನೆ ಬಂದಾಗ ಅವರಿಗೆ ಅವರ ತಪ್ಪುಗಳನ್ನು ಮನಗಾಣಿಸಿ ಅವರನ್ನು ತಿದ್ದುವುದು ದೊಡ್ಡವರ ಆದ್ಯ ಕರ್ತವ್ಯವಾಗಿದೆ.
+
*ಖಾಸಗಿ ಪತ್ರಗಳು ಅಥವಾ ವೈಯಕ್ತಿಕ ಪತ್ರಗಳು    (ಔಪಚಾರಿಕ ಪತ್ರಗಳು )
ಮಗುವಿನ ತಪ್ಪುನಡುವಳಿಕೆಯನ್ನು ಕೆಟ್ಟ ಸಹವಾಸಗಳನ್ನು  ಬಾಲ್ಯದಿಂದಲೇ ತಿಳಿಸಿ ಸರಿಪಡಿಸಬೇಕು .ಇಲ್ಲವಾದರೆ ದೊಡ್ಡವರಾದ ಮೇಲೆ ಅವರು ಸಮಾಜದಲ್ಲಿ ಯಾವುದೇ ಪ್ರಯೋಜನಕ್ಕೆ ಬಾರದವರಾಗಿ ಬಾಳಬೇಕಾಗುತ್ತದೆ ಆಮೇಲೆ ಅವರನ್ನು ಸರಿ ಪಡಿಸಲು ಸಾದ್ಯವಾಗದೇ  ಪಶ್ಚಾತ್ತಾಪ ಪಡುವ  ಕಷ್ಟ  ದೊಡ್ಡವರದಾಗುತ್ತದೆ ಎನ್ನುವುದು ಮೇಲಿನ ಗಾದೆ ಮಾತಿನ ಅರ್ಥವಾಗಿದೆ.  
+
*ವ್ಯಾವಹಾರಿಕ ಪತ್ರಗಳು ಅಥವಾ ಮನವಿ ಪತ್ರಗಳು  (ಅನೌಪಚಾರಿಕ ಪತ್ರಗಳು )
 +
*ಪತ್ರಲೇಖನದಲ್ಲಿ ಅರಿಯಬೇಕಾದ ಮುಖ್ಯವಾದ ಸಂಗತಿಯೆಂದರೆ ಪತ್ರದ ಪ್ರಾರಂಭ, ಸಂಬೋಧನೆ, ವಿಷಯವಿವರಣೆ, ಅಂತ್ಯ ಈ ಅಂಶಗಳಲ್ಲಿ ವೈಯಕ್ತಿಕ ಮತ್ತು ವ್ಯಾವಹಾರಿಕ ಪತ್ರಗಳಲ್ಲಿ ಹೇಗೆ ಬಳಕೆ ಮಾಡಬೇಕು ಎಂಬುದರ ಅರಿವಿರಬೇಕು. ವ್ಯತ್ಯಾಸ ಅರಿತಿರಬೇಕು.
  
 +
=ಪತ್ರದ ಅಂಗಗಳು  =
 +
ಸಾಮಾನ್ಯವಾಗಿ ಪತ್ರ ಲೇಖನವು  ಐದು ಅಂಗಗಳನ್ನು ಹೊಂದಿರಬೇಕು . ಇದನ್ನು ಪತ್ರದ ಚೌಕಟ್ಟು  ಎಂದು ಕರೆಯಬಹುದು. ಖಾಸಗಿ ಪತ್ರವೇ ಆಗಿರಲಿ ಅಥವಾ  ವ್ಯಾವಹಾರಿಕ ಪತ್ರವಾಗಿರಲಿ ಅದರಲ್ಲಿ ಈ ಕೆಳಗಿನ ಅಂಶಗಳು ಇರಬೇಕು.
 +
*ಪತ್ರ ಶೀರ್ಷಿಕೆ (ಪತ್ರದ ಪ್ರಾರಂಭ ) 
 +
*ಸಂಬೋಧನೆ 
 +
*ಪತ್ರದ ಒಡಲು (ವಿಷಯವಿವರಣೆ)
 +
*ಮುಕ್ತಾಯ (ಪತ್ರದ ಅಂತ್ಯ )
 +
*ಸಹಿ ಮತ್ತು  ಹೊರವಿಳಾಸ
  
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ
+
= ಪತ್ರ ಶೀರ್ಷಿಕೆ  (ತಲೆಬರಹ  ಅಥವಾ ಪತ್ರದ ಆದಿಭಾಗ )=
ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು . ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ  ನೀಡಿ ನಮ್ಮ ಬಾಳನ್ನು ಹಸನು ಗೊಳಿಸುತ್ತವೆ. ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಮೇಲಿನ ಗಾದೆಯೂ ಒಂದಾಗಿದೆ.
+
ಯಾರು ಪತ್ರ ಬರೆಯುತ್ತಿದ್ದಾರೋ ಅವರ ಪೂರ್ಣ ವಿಳಾಸವನ್ನು ಪತ್ರದ ಮೇಲೆ ಬಲ ಭಾಗದಲ್ಲಿ ಬರೆಯಬೇಕು . ಹೀಗೆ ಬರೆಯುವುದರಿಂದ ಯಾರು ಪತ್ರ ಬರೆಯುತ್ತಿದ್ದಾರೆ? ಎಲ್ಲಿಂದ ಬರೆಯುತ್ತಿದ್ದಾರೆ ? ಇತ್ಯಾದಿ ಅಂಶಗಳು ತಿಳಿಯುತ್ತವೆ.  
ಬೆಟ್ಟವನ್ನು ದೂರದಿಂದ ನೋಡಿದಾಗ ಅಲ್ಲಿರುವ ಕಲ್ಲು ಮುಳ್ಳುಗಳಾಗಲೀ ಏರು ತಗ್ಗುಗಳಾಗಲೀ ಓರೆ ಕೋರೆಗಳಾಗಲೀ ಯಾವುದೂ ನಮ್ಮ ಗಮನಕ್ಕೆ  ಬರಲಾರದು .ದೂರದಿಂದ ಕಾಣುವ ಅದರ ಸೌಂದರ್ಯ ಮಾತ್ರ ನಮ್ಮ ಗಮನವನ್ನು ಸೆಳೆಯುತ್ತದೆ.  ದೂರದಿಂದ ವರ್ಣರಂಜಿತವಾಗಿ ,ನುಣುಪಾಗಿ ,ಆಕರ್ಷಕವಾಗಿ ಕಾಣುವ ಬೆಟ್ಟವು ತನ್ನೊಳಗೆ ಕಲ್ಲು ಮುಳ್ಳುಗಳನ್ನು ,ಬಂಡಗಳನ್ನು  ಹೊಂದಿರುತ್ತದೆ. ಬೆಟ್ಟದ ದೂರದ  ಸೌಂದರ್ಯಕ್ಕೆ ಮರುಳಾಗಿ ಹತ್ತಿರ ಹೋಗಿ ನೋಡಿದಾಗ  ಅಲ್ಲಿರುವ ಬೆಟ್ಟದ ನಿಜವಾದ ಚಿತ್ರಣವು ನಮ್ಮಲ್ಲಿ ನಿರಾಸೆಯನ್ನು , ಅಲ್ಲಿನ ಕಲ್ಲುಮುಳ್ಳುಗಳಲ್ಲಿ ನಡೆದಾಡುವಾ ಗ ಆಗುವ ಸಮಸ್ಯೆಯನ್ನು,  ಏರು ತಗ್ಗುಗಳು ಎದುರಾದಾಗ ನಡೆದಾಡಬೇಕಾದ ಎಚ್ಚರಿಕೆಯನ್ನು ಸೂಚಿಸಿ  ದೂರದಿಂದ ನೋಡಿ ತೀರ್ಮಾನಿಸಿದುದರ ಬಗ್ಗೆ ನಮಗೇ ನಾಚಿಕೆಯನ್ನು ಮೂಡಿಸಬಹುದು.  
+
*ಒಂದರ ಕೆಳಗೆ ಒಂದರಂತೆ ಕ್ರಮವಾಗಿ ಬರೆಯುವುದು ಸೂಕ್ತ
ಅಂತೆಯೇ ಜೀವನದಲ್ಲಿ ನಮಗೆ ಬೇರೆ ಬೇರೆ ಮನೋಭಾವದ ಜನರು ಪರಿಚಿತರಾಗಬಹುದು . ಅವರ ಬಾಹ್ಯವಾದ ಸೌಂದರ್ಯಕ್ಕೆ ಮರುಳಾಗಿ ಗೆಳೆತನ ಮಾಡಬಾರದು ಅಥವಾ ಹೊರನೋಟದಿಂದ ಮಾತ್ರವೇ ವ್ಯಕ್ತಿಯನ್ನು ಅಳೆಯಲಾಗದು . ಅವರೊಂದಿಗಿನ ಒಡನಾಟದಿಂದ  ಹಲವು ದಿನಗಳ ಪರಿಚಯಾತ್ಮಕ ಅಧ್ಯಯನದಿಂದ ಮಾತ್ರ ಅವರು ಹೇಗೆ ಎಂದು ಹೇಳಲು ಸಾದ್ಯ .ಬೆಟ್ಟದ ನಿಜವಾದ ಸೌಂದರ್ಯ ಅಥವಾ ನ್ಯೂನತೆ ಅದನ್ನು ಒಳ ಹೊಕ್ಕು ನೋಡಿದಾಗ ಮಾತ್ರವೇ ಗೊತ್ತಾಗುವಂತೆ ಯಾರನ್ನೇ ಆಗಲಿ  ಒಮ್ಮೆ ನೋಡಿ ತೀರ್ಮಾನಕ್ಕೆ ಬರದೇ  ಅಧ್ಯಯನದಿಂದ ಮಾತ್ರವೇ ಅವರ ಕುರಿತು ತೀರ್ಮಾನಿಸಬೇಕು .ಇದು ಕೇವಲ ವ್ಯಕ್ತಿಗಳ ಸ್ನೇಹ ವಿಚಾರಕ್ಕೆ ಅಷ್ಟೇ ಸೀಮಿತವಾಗಿರದೇ ನಾವು ಯೋಚಿಸದೇ ತೆಗೆದುಕೊಳ್ಳುವ ತೀರ್ಮಾನಕ್ಕೂ ಅನ್ವಯವಾಗುತ್ತದೆ.  
+
*ದಿನಾಂಕವನ್ನು ಬರೆಯುತ್ತಿರುವವ ವಿಳಾಸದ ಕೆಳಗೆ ನಮೂದಿಸುವುದು ಸೂಕ್ತ.  
 +
*ವ್ಯಾವಹಾರಿಕ ಪತ್ರವಾಗಿದ್ದರೆ ಇಂದ ವಿಳಾಸದ ನಂತರ ಸ್ವಲ್ಪ ಅಂತರ ಉಳಿಸಿ ಪತ್ರದ ಎಡಭಾಗದಲ್ಲಿ ಯಾರಿಗೆ ಬರೆಯುತ್ತಿದ್ದೇವೆಯೋ ಅವರ ವಿಳಾಸವನ್ನು ನಮೂದಿಸಬೇಕಾಗುತ್ತದೆ.
  
ಕುಂಬಾರನಿಗೆ ವರುಷ ,ದೊಣ್ಣೆಗೆ ನಿಮಿಷ
+
=ಸಂಬೋಧನೆ  (ಗೌರವಯುತ  ಸಂಬೋಧನೆ ,ಒಕ್ಕಣೆ )=
  
ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು . ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ ನೀಡಿ ನಮ್ಮ ಬಾಳನ್ನು  ಹಸನುಗೊಳಿಸುತ್ತವೆ. ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಮೇಲಿನ ಗಾದೆಯೂ ಒಂದಾಗಿದೆ.
+
*ಇದು ಯಾರಿಗೆ ಪತ್ರವನ್ನು ಬರೆಯುತ್ತದ್ದೇವೆಯೋ ಅವರಿಗೆ ಸಲ್ಲಿಸುವ  ಮರ್ಯಾದಾಸೂಚಕ ಮಾತು  ಅಥವಾ ಗೌರವಯುತ ಅಭಿವಂದನೆ ಅಥವಾ ಶುಭಾಶಯ .ಇದು ಪತ್ರ ಬರೆಯುವವನಿಗೂ ಬರೆಯಿಸಿಕೊಳ್ಳುತ್ತಿರುವ ವ್ಯಕ್ತಿಗೂ ನಡುವಿನ ಸಂಬಂಧವನ್ನು ಅವಲಂಬಿಸಿರುತ್ತದೆ.  
ಕಟ್ಟುವುದು ಕಠಿಣ ಕೆಡಿಸುವುದು ಸುಲಭ ಎಂಬ  ಇನ್ನೊಂದು ಗಾದೆಯ ಮಾತನ್ನು  ಈ ಗಾದೆಯ ಮಾತು ಪ್ರತಿನಿಧಿಸುತ್ತದೆ. ಕುಂಬಾರನು ಬಹಳ ಶ್ರಮ ವಹಿಸಿ ಒಂದು ಮಡಿಕೆಯನ್ನು ಮಾಡುವನು .ಈ ಗಡಿಗೆ ಮಾಡಲು ಅವನು ಎರೆಮಣ್ಣನ್ನು ತಂದು ಅದರಲ್ಲಿರುವ ಕಲ್ಲು ಮರಳುಗಳನ್ನು ಬೇರ್ಪಡಿಸಿ ಮತ್ತೆ ಅದಕ್ಕೆ ನೀರು ಬೆರೆಸಿ ಕಲಸಿ ತುಳಿದು ಹದ ಮಾಡಿ  ಕೈ ಕಾಲುಗಳಿಗೆ ಕೆಸರು ಮೆತ್ತಿಸಿಕೊಂಡು  ಹದಗೊಂಡ ಮಣ್ಣನ್ನು  ತಿಗುರಿಯ ಮೇಲಿಟ್ಟು ತಿರುಗಿಸಿ ಮಡಿಕೆಯ ಆಕಾರಕ್ಕೆ  ತರಬೇಕಾಗುತ್ತದೆ. ಮತ್ತೆ ನೀರಿನ ಪಸೆ ಆರಿದ ಮೇಲೆ ಬಿಸಿಲಲ್ಲಿಟ್ಟು ಒಣಗಿಸಬೇಕು .ಮತ್ತೆ ಜೋಡಿಸಿಡಬೇಕು . ಇಷ್ಟೆಲ್ಲ ಕಷ್ಟಪಟ್ಟು ತಯಾರಿಸಿದ 
+
*ಈ ಸಂಬೋಧನೆ ಆಯಾ ವ್ಯಕ್ತಿಗಳ ಅನುಸಾರ ಬೇರೆ ಬೇರೆಯಾಗಿರುತ್ತದೆ.  
  ಮಡಿಕೆಯನ್ನು ಒಡೆದು ಹಾಕಲು ಒಂದು ಕ್ಷಣ ಸಾಕು .ದೊಣ್ಣೆಯನ್ನು  ಬಳಸಿ ಮಡಿಕೆಯನ್ನು ಒಂದೇ ಕ್ಷಣದಲ್ಲಿ ಹಾಳುಗೆಡವಬಹುದು
+
'''ಹಿರಿಯರಿಗೆ ಗೌರವ ಸೂಚಕ ಶಬ್ದಗಳು'''
ಎತ್ತರವಾಗಿ ಬೆಳೆದ ಮರವನ್ನು  ಒಂದೆರಡು ಗಂಟೆಗಳಲ್ಲಿ ಕೊಡಲಿಯಿಂದ ಉರುಳಿಸಬಹುದು.  
+
*ತಂದೆಗೆ : ತೀರ್ಥರೂಪುರವರಿಗೆ /ಪೂಜ್ಯ ತಂದೆಯವರಿಗೆ    ----- ಸಾಷ್ಟಾಂಗ ನಮಸ್ಕಾರಗಳು /ಬೇಡುವ ಆಶೀರ್ವಾದಗಳು .  
ಉತ್ತಮ ಗುಣಗಳು ದುರ್ಜನರ ಸಹವಾಸದಿಂದ ಮರೆಯಾಗಬಹುದು.  
+
*ತಾಯಿಗೆ :ಮಾತೃಶ್ರೀಯವರಿಗೆ / ಪೂಜ್ಯತಾಯಿಯವರಿಗೆ ------ಸಾಷ್ಟಾಂಗ ನಮಸ್ಕಾರಗಳು /ಬೇಡುವ ಆಶೀರ್ವಾದಗಳು .
ಅದರಂತೆಯೇ ಯಾವುದೇ ಮಹತ್ಕಾರ್ಯದ ಈಡೇರಿಕೆಗೆ ನಿರಂತರ ಪರಿಶ್ರಮ ಅಗತ್ಯ .ಆದರೆ ಸ್ವಲ್ಪ ನಿರ್ಲಕ್ಷ ತೋರಿದರೂ  ಮಾಡಿದ ಕಾರ್ಯವು ಹೊಳೆಯಲ್ಲಿ ಹೋಮ ಮಾಡಿದಷ್ಟೇ ನಿರರ್ಥಕವಾಗಿ ಬಿಡಬಹುದು.  
+
*ಚಿಕ್ಕಪ್ಪ,ದೊಡ್ಡಪ್ಪ ,ಮಾವ ,ಅಣ್ಣ ಇತ್ಯಾದಿ ಹಿರಿಯರಿಗೆ : ತೀರ್ಥರೂಪ ಸಮಾನರಾದ …. ಅವರಿಗೆ ಅಥವಾ ಪೂಜ್ಯರಾದ …. ಅವರಿಗೆ ------- ಸಾಷ್ಟಾಂಗ ನಮಸ್ಕಾರಗಳು ಅಥವಾ ಅವರಲ್ಲಿ ಬೇಡುವ ಆಶೀರ್ವಾದಗಳು .  
ಯಾವುದನ್ನೇ ಆಗಲಿ ಹಾಳುಗೆಡವುವುದು ತುಂಬಾ ಸುಲಭ ,ರೂಪಿಸುವುದು ಕಷ್ಟ ; ಹಾಳು  ಮಾಡಿದ್ದನ್ನು ಮತ್ತೆ ಸರಿಪಡಿಸುವುದೂ ಅಷ್ಟು ಸುಲಭವಲ್ಲ. ಆದ್ದರಿಂದ ಯೋಚಿಸಿ ಕಾರ್ಯ ಮಾಡಬೇಕು ಎಂಬುದು ಮೇಲಿನ ಗಾದೆಯ ಅರ್ಥವಾಗಿದೆ.  .]
+
*ಚಿಕ್ಕಮ್ಮ ,ದೊಡ್ಡಮ್ಮ ,ಅತ್ತೆ,ಅಕ್ಕ -ಮುಂತಾದ ಹಿರಿಯರಿಗೆ : ಮಾತೃಶ್ರೀ ಸಮಾನರಾದ-----ಅವರಿಗೆ ಸಾಷ್ಟಾಂಗ ನಮಸ್ಕಾರಗಳು /ಬೇಡುವ ಆಶೀರ್ವಾದಗಳು.  
 +
*ತಮ್ಮನಿಗೆ(ಕಿರಿಯರಿಗೆ) :ಪ್ರೀತಿಯ ತಮ್ಮನಿಗೆ /ಚಿರಂಜೀವಿ ಸಹೋದರನಿಗೆ ಆಶೀರ್ವಾದಗಳು
 +
ತಂಗಿ,ಮಗಳು ,ಸೊಸೆ ಮೊದಲಾದವರಿಗೆ :ಚಿರಂಜೀವಿ ಸೌಭಾಗ್ಯವತಿ ---- ಅಥವಾ ಪ್ರೀತಿಯ ಸಹೋದರಿ,------ ಆಶೀರ್ವಾದಗಳು .
 +
*ಸಂಬಂಧಿಕರಲ್ಲದ ಹಿರಿಯರಿಗೆ :ಶ್ರೀಯುತರಾದ ----ಅಥವಾ ಶ್ರೀಮಾನ್ ರವರಿಗೆ ಗೌರವಪೂರ್ವಕ ಪ್ರಣಾಮಗಳು ಅಥವಾ ಮಾಡುವ ವಿಜ್ಞಾಪನೆಗಳು .
 +
*ಗುರುಗಳಿಗೆ (ಶಿಕ್ಷಕರಿಗೆ ):ಪೂಜ್ಯರಾದ ಅಧ್ಯಾಪಕರಿಗೆ /ಗುರುಗಳಿಗೆ --ಸಾದರ ನಮಸ್ಕಾರಗಳು,ಪ್ರಣಾಮಗಳು.  
 +
*ಗೆಳೆಯರಿಗೆ : ಪ್ರಿಯ /ಆತ್ಮೀಯ/ನಲ್ಮೆಯ /ಸ್ನೇಹಿತನಿಗೆ --- ವಂದನೆಗಳು .
 +
*ಬಂಧುಗಳಿಗೆ : ಪ್ರಿಯ ಬಂಧುಗಳಿಗೆ ----ಮಾಡುವ ನಮಸ್ಕಾರಗಳು .
 +
*ಅಧಿಕಾರಿಗಳಿಗೆ :ಅವರವರ ಸ್ಥಾನಗಳಿಗೆ -ಅರ್ಹತೆಗಳಿಗೆ ಅನುಸರಿಸಿ ಇರಬೇಕು
 +
ಉದಾ : ಮಾನ್ಯ ಮುಖ್ಯೋಪಾಧ್ಯಾಯರು, ಮಾನ್ಯ ಅಧ್ಯಕ್ಷರು ,ಮಾನ್ಯ ನಿರ್ದೇಶಕರು,ಮಾನ್ಯ ಜಿಲ್ಲಾಧಿಕಾರಿಯವರು
 +
*ಪತ್ರಿಕಾ ಸಂಪಾದಕರಿಗೆ : ಮಾನ್ಯ ಸಂಪಾದಕರು    ------ ನಮಸ್ಕಾರಗಳು.
  
ತಾಳಿದವನು ಬಾಳಿಯಾನು
+
=ವಿಷಯ (ಒಡಲು)=
ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು . ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ ನೀಡಿ ನಮ್ಮ ಬಾಳನ್ನು   ಹಸನುಗೊಳಿಸುತ್ತವೆ. ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಮೇಲಿನ ಗಾದೆಯೂ ಒಂದಾಗಿದೆ.
+
ಪತ್ರದ ಮುಖ್ಯವಾದ ಭಾಗವಿದು .
 +
ಖಾಸಗಿ ಪತ್ರಗಳಲ್ಲಿ  ಇದು ಕ್ಷೇಮ ಸಮಾಚಾರದ ಮಹತ್ವವನ್ನು ಒಳಗೊಂಡಿರುತ್ತದೆ.
 +
ಏನಾಗಿದೆ? ಏನಾಗಬೇಕು, ಇತ್ಯಾದಿ ವಿವರಗಳನ್ನು  ಬೇರೆ ಬೇರೆ ವಾಕ್ಯ ವೃಂದಗಳಲ್ಲಿ  ಸ್ಪಷ್ಟವಾಗಿ ಅರ್ಥವಾಗುವಂತೆ ಬರೆಯಬೇಕು .ಓದುಗರಿಗೆ ಪತ್ರ ಬರೆದವರು ಯಾಕೆ ಬರೆದಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿಯುವಂತಿರಬೇಕು .
 +
ವ್ಯಾವಹಾರಿಕ ಪತ್ರಗಳಲ್ಲಿ ಪತ್ರ ಬರೆಯುತ್ತಿರುವ ಉದ್ದೇಶವನ್ನು ಒಂದು  ಚಿಕ್ಕ ವಾಕ್ಯದಲ್ಲಿ ಮೊದಲು ಹೇಳಿ ಅದರ ಕೆಳಗೆ ಅದರ ಸ್ಪಷ್ಟವಾದ ವಿವರಣೆ ನೀಡಬೇಕು. ವಿವರಣೆಯಲ್ಲಿ ಪತ್ರದ ಉದ್ದೇಶವನ್ನು ಸ್ಪಷ್ಟವಾಗಿ ವಿವರಿಸಬೇಕು.
 +
 
 +
=ಪತ್ರದ ಅಂತ್ಯ  (ಮುಕ್ತಾಯ )=
 +
ಪತ್ರದ ವಿವರ ಮುಕ್ತಾಯವಾದ ಮೇಲೆ  ಪತ್ರದ ಸಂಬೋಧನೆಯಲ್ಲಿ ಬಳಸಿದ ಹಾಗೆ ನಮಸ್ಕಾರಗಳು /ಪ್ರಣಾಮಗಳು /ವಂದನೆಗಳು /ಬೇಡುವ ಆಶೀರ್ವಾದಗಳು  ಹೀಗೆ ಒಕ್ಕಣೆಯನ್ನು ಬಳಸಬೇಕು.
 +
ವಿವರಣೆ  ಮುಕ್ತಾಯವಾದಮೇಲೆ  ಪತ್ರದ  ಎಡಭಾಗದಲ್ಲಿ  ಇಂತಿ ತಮ್ಮ ವಿಶ್ವಾಸಿ ----- ಒಕ್ಕಣೆಯಲ್ಲಿ ಪ್ರಾರಂಭದಲ್ಲಿ ತಮ್ಮನ್ನು ಕರೆದುಕೊಂಡ ಹಾಗೆ ಬರೆಯುವುದು ಸೂಕ್ತ .
 +
*ತಂದೆಗೆ /ತಾಯಿಗೆ : ಇಂತಿ ತಮ್ಮ ಪುತ್ರ -ಪುತ್ರಿ
 +
*ಹಿರಿಯ ಬಂಧುಗಳಿಗೆ : ಇಂತಿ ತಮ್ಮ  ಪ್ರೀತಿಯ 
 +
*ಅಧಿಕಾರಿಗಳಿಗೆ : ಇಂತಿ ತಮ್ಮ ವಿಶ್ವಾಸಿ /ಇಂತಿ ತಮ್ಮ ನಂಬುಗೆಯ
 +
*ಗುರುಗಳಿಗೆ : ಇಂತಿ ತಮ್ಮ ವಿಧೇಯ /ಇಂತಿ ತಮ್ಮ ಪ್ರೀತಿಯ ಶಿಷ್ಯ
 +
*ಗೆಳೆಯ/ಗೆಳತಿ : ಇತಿ  ನಿನ್ನ ಪ್ರೀತಿಯ /ನಲ್ಮೆಯ  ಗೆಳೆಯ/ಗೆಳತಿ
 +
*ಕಿರಿಯರಿಗೆ : ಇತಿ  ನಿನ್ನ ಶ್ರೇಯೋಭಿಲಾಷಿ /ಹಿತಚಿಂತಕ
 +
*ವ್ಯಾಪಾರಿಗೆ :ಇತಿ ನಿಮ್ಮ ವಿಶ್ವಾಸಿ /ಗ್ರಾಹಕ
 +
=ಸಹಿ ಮತ್ತು ಹೊರವಿಳಾಸ =
 +
ವಂದನಾ ಪೂರ್ವಕ ಮುಕ್ತಾಯದ ಕೆಳಗೆ ಪತ್ರ ಬರೆದವರು ತಮ್ಮ ಸಹಿ ನಮೂದಿಸಬೇಕು   
 +
ಪತ್ರದ ಎಡಭಾಗದಲ್ಲಿ ಕೆಳಗೆ  ಯಾರಿಗೆ ಪತ್ರ ತಲುಪಬೇಕಿದೆಯೋ ಅವರ ವಿಳಾಸ ನಮೂದಿಸಬೇಕು .ಅವರ ಹೆಸರು ,ಮನೆನಂಬರ್,ಬೀದಿ ,ವಿಭಾಗ ,ಊರು ,ಜಿಲ್ಲೆ  ಇವುಗಳ ವಿವರ ವಿಳಾಸದ ಜೊತೆ ಇರಬೇಕು
 +
 
 +
=ಖಾಸಗಿ /ವೈಯಕ್ತಿಕ ಪತ್ರಗಳ ಮಾದರಿ =
 +
ಖಾಸಗಿ ಪತ್ರಗಳು  ನಮ್ಮ ತಂದೆ//ತಾಯಿ, ಅಣ್ಣ /ತಮ್ಮ ,ಅಕ್ಕ /ತಂಗಿ ,ಗೆಳೆಯ /ಗೆಳತಿ ಮತ್ತು  ಹತ್ತಿರದ ಬಂಧುಗಳಿಗೆ  ಬರೆಯುವ ಪತ್ರಗಳು .
 +
 
 +
*ಪ್ರಶ್ನೆ : ನಿಮ್ಮ ವಿದ್ಯಾಭ್ಯಾಸ ಪ್ರಗತಿ ತಿಳಿಸಿ  ಕೊಡಗಿನ ವಿರಾಜಪೇಟೆಯಲ್ಲಿರುವ ನಿಮ್ಮ ತಾಯಿ ಭಾಗ್ಯಳಿಗೆ ಪತ್ರ ಬರೆಯಿರಿ.
 +
 
 +
ಕ್ಷೇಮ                                                                        ಶ್ರೀ                                                                                                                                                                                                                  ಸವಿತಾ                                                                                                                                                                                                                                                                                                          ೧೦ ನೇ ತರಗತಿ                                                                                                                                                                                                                                                                                                  ನೂತನ ವಿದ್ಯಾ ಮಂದಿರ                                                                                                                                                                                                                                                                                                ಧಾರವಾಡ .
 +
            ಮಾತೃಶ್ರೀಯವರ ಪಾದಾರವಿಂದಗಳಲ್ಲಿ ನಿಮ್ಮ ಮಗಳಾದ ಸವಿತಾಳು ಮಾಡುವ ಸಾಷ್ಟಾಂಗ ನಮಸ್ಕಾರಗಳು ಮತ್ತು ಬೇಡುವ ಆಶಿರ್ವಾದಗಳು .ಇಲ್ಲಿ ನಾನು ಆರೋಗ್ಯವಾಗಿದ್ದೇನೆ ಮತ್ತು ನೀವೂ ಸಹ ಆರೋಗ್ಯದಿಂದಿರುವಿರೆಂದು ಭಾವಿಸುವೆ ಮತ್ತು ತಮ್ಮ ಕ್ಷೇಮ ಸಮಾಚಾರ ಪತ್ರದ ನಿರೀಕ್ಷೆಯಲ್ಲಿದ್ದೇನೆ.
 +
ನಾನು ಚೆನ್ನಾಗಿ ಓದುತ್ತಿದ್ದೇನೆ. ಇಲ್ಲಿಯವರೆಗೆ ನಡೆದ ಎಲ್ಲ ಸಾಧನಾ ಪರೀಕ್ಷೆಗಳಲ್ಲಿಯೂ ನಾನು ಚೆನ್ನಾಗಿ ಅಂಕ ಪಡೆದಿರುತ್ತೇನೆ. ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ನನ್ನ ಎಲ್ಲ ವಿಷಯಗಳ ಶೇಕಡಾವಾರು ಅಂಕ ೯೨ ಇರುತ್ತದೆ.
 +
ಈಗ ಬರಲಿರುವ ಪೂರ್ವ ಸಿದ್ಧತಾ ಪರೀಕ್ಷೆಗೆ ನಾನು ಚೆನ್ನಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ನಮ್ಮ ಶಿಕ್ಷಕರೆಲ್ಲರೂ ಚೆನ್ನಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಏಪ್ರಿಲ್‌ನಲ್ಲಿ ನಡೆಯುವ ವಾರ್ಷಿಕ ಪರೀಕ್ಷೆಯಲ್ಲಿ ಕಡೆಯ ಪಕ್ಷ   ೯೫% ಮೇಲೆ  ಅಂಕಗಳಿಸಿ ಜಿಲ್ಲೆಗಾದರೂ ಪ್ರಥಮ ಸ್ಥಾನ ಪಡೆಯಬೇಕೆಂಬ ಅಭಿಲಾಷೆ ನನ್ನದು .
 +
ಈ ವಿಚಾರವನ್ನು ತೀರ್ಥರೂಪು ತಂದೆಯವರಿಗೂ ತಿಳಿಸಿ ಅವರ ಆಶಿರ್ವಾದ ಕೇಳಿರುವೆನೆಂದು ತಿಳಿಸಿರಿ.ಮನೆಯಲ್ಲಿನ ಎಲ್ಲ ಹಿರಿಯರಿಗೆ ನನ್ನ ಪ್ರಣಾಮಗಳು. ಕಿರಿಯರಿಗೆ ಆಶಿರ್ವಾದ ತಿಳಿಸಿರಿ. ಏಪ್ರಿಲ್ ಪರೀಕ್ಷೆ ಮುಗಿದ ಮೇಲೆ ಊರಿಗೆ ಬರುತ್ತೇನೆ.  
 +
                                    ಪ್ರಣಾಮಗಳೊಂದಿಗೆ                 
 +
ನಿಮ್ಮ ಪ್ರೀತಿಯ ಮಗಳು
 +
ಸವಿತಾ
 +
ಗೆ :
 +
ಭಾಗ್ಯ
 +
#೩೨ , ೩ ನೇ ಮುಖ್ಯ ರಸ್ತೆ ,೨ ನೇ ಅಡ್ಡ  ರಸ್ತೆ
 +
ಕಯ್ಯಾರ ನಗರ 
 +
ವಿರಾಜಪೇಟೆ  , ಕೊಡಗು

೦೯:೫೭, ೨೪ ಫೆಬ್ರುವರಿ ೨೦೧೭ ದ ಇತ್ತೀಚಿನ ಆವೃತ್ತಿ


ಪತ್ರಲೇಖನ

ಪೀಠಿಕೆ

ನಮ್ಮ ಎದುರಿಗೆ ಇರುವವರ ಜೊತೆ ಸಂಭಾಷಣೆ ನಡೆಸಿದಂತೆ ದೂರದಲ್ಲಿರುವ (ಬೇರೆಡೆಯಲ್ಲಿ ವಾಸಿಸುತ್ತಿರುವ)ವ್ಯಕ್ತಿಗಳ ಜೊತೆ ಮಾತುಕತೆಗೆ ,ಪರಸ್ಪರ ವಿಚಾರ ವಿನಿಮಯಕ್ಕೆ ಬಳಕೆಯಾಗುವ ಪರಿಣಾಮಕಾರಿ ಸಾಧನ ಪತ್ರ. ಪತ್ರಲೇಖನ ಒಂದು ಕಲೆ . ಹಿಂದೊಮ್ಮೆ ಇದು ಬಹಳ ಪರಿಣಾಮಕಾರಿಯಾದ ಸಂಪರ್ಕ ಸಾಧನವಾಗಿತ್ತು. ಪುರಾಣ ,ಕಾವ್ಯಗಳಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂದೇಶ ಕಳಿಸುವಾಗ ಪಾರಿವಾಳಗಳ ಮೂಲಕ ಕಳಿಸುವ ಪರಿಪಾಠವಿತ್ತು. ಕಾಳಿದಾಸನ ಮೇಘ ಸಂದೇಶ ಕಾವ್ಯದಲ್ಲಿ ಸಂದೇಶವನ್ನು ಕಳಿಸಲು ಮೇಘಗಳನ್ನು ಬಳಸಿದ್ದನ್ನು ನೋಡಬಹುದು. ಕಾಲಾನಂತರದಲ್ಲಿ ಸಂದೇಶಗಳನ್ನು ಕಳಿಸಲು ದೂತರು ಕುದುರೆಯ ಮೇಲೆ ಸಾಗುತ್ತಿದ್ದರು. ಎಲೆಗಳ ಮೇಲೆ ಬರೆಯುತ್ತಿದ್ದ ಸಂದೇಶಗಳು ಕ್ರಮೇಣ ಕಾಗದಗಳ ಮೇಲೆ ಬರೆಯಲ್ಪಟ್ಟು ಅಂಚೆ ಇಲಾಖೆಗಳ ಮೂಲಕ ಪತ್ರದ ರೂಪ ತಾಳಿ ಪತ್ರವ್ಯವಹಾರ ಪ್ರಾರಂಭವಾಯಿತು.


ಇಂದು ದೂರವಾಣಿ ,ಮೊಬೈಲ್ ,ಗಣಕಯಂತ್ರ ಗಳು ಬಂದ ಮೇಲೆ ಪತ್ರವ್ಯವಹಾರವು ತನ್ನ ಮೊದಲಿನ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ. ಇಂದು ಅಂತರ್ಜಾಲ ಸೌಲಭ್ಯದಿಂದಾಗಿ ಹೆಚ್ಚಿನ ಸಂದೇಶಗಳು ಮಿಂಚಂಚೆಯ (mail) ಮೂಲಕ ರವಾನೆಯಾಗುತ್ತಿವೆ. ಮೊಬೈಲ್‌ನಲ್ಲಿ ಎಷ್ಟೋ ದೂರದಲ್ಲಿರುವವರಿಗೆ whatsapp ,hike ,telegram ಇವೇ ಮೊದಲಾದ ವ್ಯವಸ್ಥೆಗಳ ಮೂಲಕ ಕ್ಷಣ ಮಾತ್ರದಲ್ಲಿ ಸಂದೇಶವನ್ನು ರವಾನಿಸಬಹುದಾಗಿದೆ. ಹಾಗಾಗಿ ಇಂದು ಪತ್ರ ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೂ ಕೂಡ ಪತ್ರಲೇಖನವು ಒಂದು ಕಲೆ. ತನ್ನಲ್ಲಿನ ವಿಚಾರವನ್ನು ಇನ್ನೊಬ್ಬರಿಗೆ ಹೇಳಲು ಇರುವ ಪರಿಣಾಮಕಾರಿ ವಿಧಾನವೇ. ಇಲ್ಲಿ ಪತ್ರ ಬರವಣಿಗೆಯ ಆಕರ್ಷಣೆ ಪ್ರಧಾನವಾದುದು. ಬರವಣಿಗೆ ಸುಂದರವಾಗಿರಬೇಕು ಎನ್ನುವುದರ ಜೊತೆಗೆ ಪದಗಳ ಬಳಕೆ ಸೊಗಸಾಗಿರಬೇಕು ಎನ್ನುವುದು ಮುಖ್ಯವಾಗಿರುತ್ತದೆ. ಅದು ಕಾಗದದಲ್ಲಿ ನೀಡುವ ಒಂದು ಭೇಟಿ. ಬರಹ ರೂಪದಲ್ಲಿ ಕಣ್ಣಿಗೆ ಕಾಣುವ ಸಾಧನ . ಹಲವು ಕಾಲ ಇರಿಸಿಕೊಂಡು ಮತ್ತೆ ಮತ್ತೆ ಓದಬಹುದು. ಗಾಂಧೀಜಿಯವರ ಪತ್ರಗಳು ,ನೆಹರೂರವರು ತಮ್ಮ ಮಗಳು ಇಂದಿರಾ ಪ್ರಿಯದರ್ಶಿನಿಗೆ ಬರೆದ ಪತ್ರಗಳು ಇಂದಿಗೂ ವಿಶ್ವವಿಖ್ಯಾತವಾಗಿರುವಂತವು.

ಪತ್ರಲೇಖನ -ವಿಧಗಳು

ಸಾಮಾನ್ಯವಾಗಿ ಪತ್ರ ವ್ಯವಹಾರದಲ್ಲಿ ಎರಡು ವಿಧಗಳು

  • ಖಾಸಗಿ ಪತ್ರಗಳು ಅಥವಾ ವೈಯಕ್ತಿಕ ಪತ್ರಗಳು (ಔಪಚಾರಿಕ ಪತ್ರಗಳು )
  • ವ್ಯಾವಹಾರಿಕ ಪತ್ರಗಳು ಅಥವಾ ಮನವಿ ಪತ್ರಗಳು (ಅನೌಪಚಾರಿಕ ಪತ್ರಗಳು )
  • ಪತ್ರಲೇಖನದಲ್ಲಿ ಅರಿಯಬೇಕಾದ ಮುಖ್ಯವಾದ ಸಂಗತಿಯೆಂದರೆ ಪತ್ರದ ಪ್ರಾರಂಭ, ಸಂಬೋಧನೆ, ವಿಷಯವಿವರಣೆ, ಅಂತ್ಯ ಈ ಅಂಶಗಳಲ್ಲಿ ವೈಯಕ್ತಿಕ ಮತ್ತು ವ್ಯಾವಹಾರಿಕ ಪತ್ರಗಳಲ್ಲಿ ಹೇಗೆ ಬಳಕೆ ಮಾಡಬೇಕು ಎಂಬುದರ ಅರಿವಿರಬೇಕು. ವ್ಯತ್ಯಾಸ ಅರಿತಿರಬೇಕು.

ಪತ್ರದ ಅಂಗಗಳು

ಸಾಮಾನ್ಯವಾಗಿ ಪತ್ರ ಲೇಖನವು ಐದು ಅಂಗಗಳನ್ನು ಹೊಂದಿರಬೇಕು . ಇದನ್ನು ಪತ್ರದ ಚೌಕಟ್ಟು ಎಂದು ಕರೆಯಬಹುದು. ಖಾಸಗಿ ಪತ್ರವೇ ಆಗಿರಲಿ ಅಥವಾ ವ್ಯಾವಹಾರಿಕ ಪತ್ರವಾಗಿರಲಿ ಅದರಲ್ಲಿ ಈ ಕೆಳಗಿನ ಅಂಶಗಳು ಇರಬೇಕು.

  • ಪತ್ರ ಶೀರ್ಷಿಕೆ (ಪತ್ರದ ಪ್ರಾರಂಭ )
  • ಸಂಬೋಧನೆ
  • ಪತ್ರದ ಒಡಲು (ವಿಷಯವಿವರಣೆ)
  • ಮುಕ್ತಾಯ (ಪತ್ರದ ಅಂತ್ಯ )
  • ಸಹಿ ಮತ್ತು ಹೊರವಿಳಾಸ

ಪತ್ರ ಶೀರ್ಷಿಕೆ (ತಲೆಬರಹ ಅಥವಾ ಪತ್ರದ ಆದಿಭಾಗ )

ಯಾರು ಪತ್ರ ಬರೆಯುತ್ತಿದ್ದಾರೋ ಅವರ ಪೂರ್ಣ ವಿಳಾಸವನ್ನು ಪತ್ರದ ಮೇಲೆ ಬಲ ಭಾಗದಲ್ಲಿ ಬರೆಯಬೇಕು . ಹೀಗೆ ಬರೆಯುವುದರಿಂದ ಯಾರು ಪತ್ರ ಬರೆಯುತ್ತಿದ್ದಾರೆ? ಎಲ್ಲಿಂದ ಬರೆಯುತ್ತಿದ್ದಾರೆ ? ಇತ್ಯಾದಿ ಅಂಶಗಳು ತಿಳಿಯುತ್ತವೆ.

  • ಒಂದರ ಕೆಳಗೆ ಒಂದರಂತೆ ಕ್ರಮವಾಗಿ ಬರೆಯುವುದು ಸೂಕ್ತ
  • ದಿನಾಂಕವನ್ನು ಬರೆಯುತ್ತಿರುವವ ವಿಳಾಸದ ಕೆಳಗೆ ನಮೂದಿಸುವುದು ಸೂಕ್ತ.
  • ವ್ಯಾವಹಾರಿಕ ಪತ್ರವಾಗಿದ್ದರೆ ಇಂದ ವಿಳಾಸದ ನಂತರ ಸ್ವಲ್ಪ ಅಂತರ ಉಳಿಸಿ ಪತ್ರದ ಎಡಭಾಗದಲ್ಲಿ ಯಾರಿಗೆ ಬರೆಯುತ್ತಿದ್ದೇವೆಯೋ ಅವರ ವಿಳಾಸವನ್ನು ನಮೂದಿಸಬೇಕಾಗುತ್ತದೆ.

ಸಂಬೋಧನೆ (ಗೌರವಯುತ ಸಂಬೋಧನೆ ,ಒಕ್ಕಣೆ )

  • ಇದು ಯಾರಿಗೆ ಪತ್ರವನ್ನು ಬರೆಯುತ್ತದ್ದೇವೆಯೋ ಅವರಿಗೆ ಸಲ್ಲಿಸುವ ಮರ್ಯಾದಾಸೂಚಕ ಮಾತು ಅಥವಾ ಗೌರವಯುತ ಅಭಿವಂದನೆ ಅಥವಾ ಶುಭಾಶಯ .ಇದು ಪತ್ರ ಬರೆಯುವವನಿಗೂ ಬರೆಯಿಸಿಕೊಳ್ಳುತ್ತಿರುವ ವ್ಯಕ್ತಿಗೂ ನಡುವಿನ ಸಂಬಂಧವನ್ನು ಅವಲಂಬಿಸಿರುತ್ತದೆ.
  • ಈ ಸಂಬೋಧನೆ ಆಯಾ ವ್ಯಕ್ತಿಗಳ ಅನುಸಾರ ಬೇರೆ ಬೇರೆಯಾಗಿರುತ್ತದೆ.

ಹಿರಿಯರಿಗೆ ಗೌರವ ಸೂಚಕ ಶಬ್ದಗಳು

  • ತಂದೆಗೆ : ತೀರ್ಥರೂಪುರವರಿಗೆ /ಪೂಜ್ಯ ತಂದೆಯವರಿಗೆ ----- ಸಾಷ್ಟಾಂಗ ನಮಸ್ಕಾರಗಳು /ಬೇಡುವ ಆಶೀರ್ವಾದಗಳು .
  • ತಾಯಿಗೆ :ಮಾತೃಶ್ರೀಯವರಿಗೆ / ಪೂಜ್ಯತಾಯಿಯವರಿಗೆ ------ಸಾಷ್ಟಾಂಗ ನಮಸ್ಕಾರಗಳು /ಬೇಡುವ ಆಶೀರ್ವಾದಗಳು .
  • ಚಿಕ್ಕಪ್ಪ,ದೊಡ್ಡಪ್ಪ ,ಮಾವ ,ಅಣ್ಣ ಇತ್ಯಾದಿ ಹಿರಿಯರಿಗೆ : ತೀರ್ಥರೂಪ ಸಮಾನರಾದ …. ಅವರಿಗೆ ಅಥವಾ ಪೂಜ್ಯರಾದ …. ಅವರಿಗೆ ------- ಸಾಷ್ಟಾಂಗ ನಮಸ್ಕಾರಗಳು ಅಥವಾ ಅವರಲ್ಲಿ ಬೇಡುವ ಆಶೀರ್ವಾದಗಳು .
  • ಚಿಕ್ಕಮ್ಮ ,ದೊಡ್ಡಮ್ಮ ,ಅತ್ತೆ,ಅಕ್ಕ -ಮುಂತಾದ ಹಿರಿಯರಿಗೆ : ಮಾತೃಶ್ರೀ ಸಮಾನರಾದ-----ಅವರಿಗೆ ಸಾಷ್ಟಾಂಗ ನಮಸ್ಕಾರಗಳು /ಬೇಡುವ ಆಶೀರ್ವಾದಗಳು.
  • ತಮ್ಮನಿಗೆ(ಕಿರಿಯರಿಗೆ) :ಪ್ರೀತಿಯ ತಮ್ಮನಿಗೆ /ಚಿರಂಜೀವಿ ಸಹೋದರನಿಗೆ ಆಶೀರ್ವಾದಗಳು

ತಂಗಿ,ಮಗಳು ,ಸೊಸೆ ಮೊದಲಾದವರಿಗೆ :ಚಿರಂಜೀವಿ ಸೌಭಾಗ್ಯವತಿ ---- ಅಥವಾ ಪ್ರೀತಿಯ ಸಹೋದರಿ,------ ಆಶೀರ್ವಾದಗಳು .

  • ಸಂಬಂಧಿಕರಲ್ಲದ ಹಿರಿಯರಿಗೆ :ಶ್ರೀಯುತರಾದ ----ಅಥವಾ ಶ್ರೀಮಾನ್ ರವರಿಗೆ ಗೌರವಪೂರ್ವಕ ಪ್ರಣಾಮಗಳು ಅಥವಾ ಮಾಡುವ ವಿಜ್ಞಾಪನೆಗಳು .
  • ಗುರುಗಳಿಗೆ (ಶಿಕ್ಷಕರಿಗೆ ):ಪೂಜ್ಯರಾದ ಅಧ್ಯಾಪಕರಿಗೆ /ಗುರುಗಳಿಗೆ --ಸಾದರ ನಮಸ್ಕಾರಗಳು,ಪ್ರಣಾಮಗಳು.
  • ಗೆಳೆಯರಿಗೆ : ಪ್ರಿಯ /ಆತ್ಮೀಯ/ನಲ್ಮೆಯ /ಸ್ನೇಹಿತನಿಗೆ --- ವಂದನೆಗಳು .
  • ಬಂಧುಗಳಿಗೆ : ಪ್ರಿಯ ಬಂಧುಗಳಿಗೆ ----ಮಾಡುವ ನಮಸ್ಕಾರಗಳು .
  • ಅಧಿಕಾರಿಗಳಿಗೆ :ಅವರವರ ಸ್ಥಾನಗಳಿಗೆ -ಅರ್ಹತೆಗಳಿಗೆ ಅನುಸರಿಸಿ ಇರಬೇಕು

ಉದಾ : ಮಾನ್ಯ ಮುಖ್ಯೋಪಾಧ್ಯಾಯರು, ಮಾನ್ಯ ಅಧ್ಯಕ್ಷರು ,ಮಾನ್ಯ ನಿರ್ದೇಶಕರು,ಮಾನ್ಯ ಜಿಲ್ಲಾಧಿಕಾರಿಯವರು

  • ಪತ್ರಿಕಾ ಸಂಪಾದಕರಿಗೆ : ಮಾನ್ಯ ಸಂಪಾದಕರು ------ ನಮಸ್ಕಾರಗಳು.

ವಿಷಯ (ಒಡಲು)

ಪತ್ರದ ಮುಖ್ಯವಾದ ಭಾಗವಿದು . ಖಾಸಗಿ ಪತ್ರಗಳಲ್ಲಿ ಇದು ಕ್ಷೇಮ ಸಮಾಚಾರದ ಮಹತ್ವವನ್ನು ಒಳಗೊಂಡಿರುತ್ತದೆ. ಏನಾಗಿದೆ? ಏನಾಗಬೇಕು, ಇತ್ಯಾದಿ ವಿವರಗಳನ್ನು ಬೇರೆ ಬೇರೆ ವಾಕ್ಯ ವೃಂದಗಳಲ್ಲಿ ಸ್ಪಷ್ಟವಾಗಿ ಅರ್ಥವಾಗುವಂತೆ ಬರೆಯಬೇಕು .ಓದುಗರಿಗೆ ಪತ್ರ ಬರೆದವರು ಯಾಕೆ ಬರೆದಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿಯುವಂತಿರಬೇಕು . ವ್ಯಾವಹಾರಿಕ ಪತ್ರಗಳಲ್ಲಿ ಪತ್ರ ಬರೆಯುತ್ತಿರುವ ಉದ್ದೇಶವನ್ನು ಒಂದು ಚಿಕ್ಕ ವಾಕ್ಯದಲ್ಲಿ ಮೊದಲು ಹೇಳಿ ಅದರ ಕೆಳಗೆ ಅದರ ಸ್ಪಷ್ಟವಾದ ವಿವರಣೆ ನೀಡಬೇಕು. ವಿವರಣೆಯಲ್ಲಿ ಪತ್ರದ ಉದ್ದೇಶವನ್ನು ಸ್ಪಷ್ಟವಾಗಿ ವಿವರಿಸಬೇಕು.

ಪತ್ರದ ಅಂತ್ಯ (ಮುಕ್ತಾಯ )

ಪತ್ರದ ವಿವರ ಮುಕ್ತಾಯವಾದ ಮೇಲೆ ಪತ್ರದ ಸಂಬೋಧನೆಯಲ್ಲಿ ಬಳಸಿದ ಹಾಗೆ ನಮಸ್ಕಾರಗಳು /ಪ್ರಣಾಮಗಳು /ವಂದನೆಗಳು /ಬೇಡುವ ಆಶೀರ್ವಾದಗಳು ಹೀಗೆ ಒಕ್ಕಣೆಯನ್ನು ಬಳಸಬೇಕು. ವಿವರಣೆ ಮುಕ್ತಾಯವಾದಮೇಲೆ ಪತ್ರದ ಎಡಭಾಗದಲ್ಲಿ ಇಂತಿ ತಮ್ಮ ವಿಶ್ವಾಸಿ ----- ಒಕ್ಕಣೆಯಲ್ಲಿ ಪ್ರಾರಂಭದಲ್ಲಿ ತಮ್ಮನ್ನು ಕರೆದುಕೊಂಡ ಹಾಗೆ ಬರೆಯುವುದು ಸೂಕ್ತ .

  • ತಂದೆಗೆ /ತಾಯಿಗೆ : ಇಂತಿ ತಮ್ಮ ಪುತ್ರ -ಪುತ್ರಿ
  • ಹಿರಿಯ ಬಂಧುಗಳಿಗೆ : ಇಂತಿ ತಮ್ಮ ಪ್ರೀತಿಯ
  • ಅಧಿಕಾರಿಗಳಿಗೆ : ಇಂತಿ ತಮ್ಮ ವಿಶ್ವಾಸಿ /ಇಂತಿ ತಮ್ಮ ನಂಬುಗೆಯ
  • ಗುರುಗಳಿಗೆ : ಇಂತಿ ತಮ್ಮ ವಿಧೇಯ /ಇಂತಿ ತಮ್ಮ ಪ್ರೀತಿಯ ಶಿಷ್ಯ
  • ಗೆಳೆಯ/ಗೆಳತಿ : ಇತಿ ನಿನ್ನ ಪ್ರೀತಿಯ /ನಲ್ಮೆಯ ಗೆಳೆಯ/ಗೆಳತಿ
  • ಕಿರಿಯರಿಗೆ : ಇತಿ ನಿನ್ನ ಶ್ರೇಯೋಭಿಲಾಷಿ /ಹಿತಚಿಂತಕ
  • ವ್ಯಾಪಾರಿಗೆ :ಇತಿ ನಿಮ್ಮ ವಿಶ್ವಾಸಿ /ಗ್ರಾಹಕ

ಸಹಿ ಮತ್ತು ಹೊರವಿಳಾಸ

ವಂದನಾ ಪೂರ್ವಕ ಮುಕ್ತಾಯದ ಕೆಳಗೆ ಪತ್ರ ಬರೆದವರು ತಮ್ಮ ಸಹಿ ನಮೂದಿಸಬೇಕು ಪತ್ರದ ಎಡಭಾಗದಲ್ಲಿ ಕೆಳಗೆ ಯಾರಿಗೆ ಪತ್ರ ತಲುಪಬೇಕಿದೆಯೋ ಅವರ ವಿಳಾಸ ನಮೂದಿಸಬೇಕು .ಅವರ ಹೆಸರು ,ಮನೆನಂಬರ್,ಬೀದಿ ,ವಿಭಾಗ ,ಊರು ,ಜಿಲ್ಲೆ ಇವುಗಳ ವಿವರ ವಿಳಾಸದ ಜೊತೆ ಇರಬೇಕು

ಖಾಸಗಿ /ವೈಯಕ್ತಿಕ ಪತ್ರಗಳ ಮಾದರಿ

ಖಾಸಗಿ ಪತ್ರಗಳು ನಮ್ಮ ತಂದೆ//ತಾಯಿ, ಅಣ್ಣ /ತಮ್ಮ ,ಅಕ್ಕ /ತಂಗಿ ,ಗೆಳೆಯ /ಗೆಳತಿ ಮತ್ತು ಹತ್ತಿರದ ಬಂಧುಗಳಿಗೆ ಬರೆಯುವ ಪತ್ರಗಳು .

  • ಪ್ರಶ್ನೆ : ನಿಮ್ಮ ವಿದ್ಯಾಭ್ಯಾಸ ಪ್ರಗತಿ ತಿಳಿಸಿ ಕೊಡಗಿನ ವಿರಾಜಪೇಟೆಯಲ್ಲಿರುವ ನಿಮ್ಮ ತಾಯಿ ಭಾಗ್ಯಳಿಗೆ ಪತ್ರ ಬರೆಯಿರಿ.

ಕ್ಷೇಮ ಶ್ರೀ ಸವಿತಾ ೧೦ ನೇ ತರಗತಿ ನೂತನ ವಿದ್ಯಾ ಮಂದಿರ ಧಾರವಾಡ .

            ಮಾತೃಶ್ರೀಯವರ ಪಾದಾರವಿಂದಗಳಲ್ಲಿ ನಿಮ್ಮ ಮಗಳಾದ ಸವಿತಾಳು ಮಾಡುವ ಸಾಷ್ಟಾಂಗ ನಮಸ್ಕಾರಗಳು ಮತ್ತು ಬೇಡುವ ಆಶಿರ್ವಾದಗಳು .ಇಲ್ಲಿ ನಾನು ಆರೋಗ್ಯವಾಗಿದ್ದೇನೆ ಮತ್ತು ನೀವೂ ಸಹ ಆರೋಗ್ಯದಿಂದಿರುವಿರೆಂದು ಭಾವಿಸುವೆ ಮತ್ತು ತಮ್ಮ ಕ್ಷೇಮ ಸಮಾಚಾರ ಪತ್ರದ ನಿರೀಕ್ಷೆಯಲ್ಲಿದ್ದೇನೆ. 

ನಾನು ಚೆನ್ನಾಗಿ ಓದುತ್ತಿದ್ದೇನೆ. ಇಲ್ಲಿಯವರೆಗೆ ನಡೆದ ಎಲ್ಲ ಸಾಧನಾ ಪರೀಕ್ಷೆಗಳಲ್ಲಿಯೂ ನಾನು ಚೆನ್ನಾಗಿ ಅಂಕ ಪಡೆದಿರುತ್ತೇನೆ. ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ನನ್ನ ಎಲ್ಲ ವಿಷಯಗಳ ಶೇಕಡಾವಾರು ಅಂಕ ೯೨ ಇರುತ್ತದೆ. ಈಗ ಬರಲಿರುವ ಪೂರ್ವ ಸಿದ್ಧತಾ ಪರೀಕ್ಷೆಗೆ ನಾನು ಚೆನ್ನಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ನಮ್ಮ ಶಿಕ್ಷಕರೆಲ್ಲರೂ ಚೆನ್ನಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಏಪ್ರಿಲ್‌ನಲ್ಲಿ ನಡೆಯುವ ವಾರ್ಷಿಕ ಪರೀಕ್ಷೆಯಲ್ಲಿ ಕಡೆಯ ಪಕ್ಷ ೯೫% ಮೇಲೆ ಅಂಕಗಳಿಸಿ ಜಿಲ್ಲೆಗಾದರೂ ಪ್ರಥಮ ಸ್ಥಾನ ಪಡೆಯಬೇಕೆಂಬ ಅಭಿಲಾಷೆ ನನ್ನದು . ಈ ವಿಚಾರವನ್ನು ತೀರ್ಥರೂಪು ತಂದೆಯವರಿಗೂ ತಿಳಿಸಿ ಅವರ ಆಶಿರ್ವಾದ ಕೇಳಿರುವೆನೆಂದು ತಿಳಿಸಿರಿ.ಮನೆಯಲ್ಲಿನ ಎಲ್ಲ ಹಿರಿಯರಿಗೆ ನನ್ನ ಪ್ರಣಾಮಗಳು. ಕಿರಿಯರಿಗೆ ಆಶಿರ್ವಾದ ತಿಳಿಸಿರಿ. ಏಪ್ರಿಲ್ ಪರೀಕ್ಷೆ ಮುಗಿದ ಮೇಲೆ ಊರಿಗೆ ಬರುತ್ತೇನೆ.

                                    ಪ್ರಣಾಮಗಳೊಂದಿಗೆ                   

ನಿಮ್ಮ ಪ್ರೀತಿಯ ಮಗಳು ಸವಿತಾ ಗೆ : ಭಾಗ್ಯ

  1. ೩೨ , ೩ ನೇ ಮುಖ್ಯ ರಸ್ತೆ ,೨ ನೇ ಅಡ್ಡ ರಸ್ತೆ

ಕಯ್ಯಾರ ನಗರ ವಿರಾಜಪೇಟೆ , ಕೊಡಗು