"ಕನ್ನಡ ಪ್ರಥಮ ಭಾಷೆ : ಪ್ರಶ್ನೆ ಪತ್ರಿಕೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: ಮಾದರಿ ಪ್ರಶ್ನೆ ಪತ್ರಿಕೆ ೧ ಪ್ರಥಮ ಭಾಷೆ ಕನ್ನಡ ೧೦ ನೇ ತರಗತಿ ಗರಿಷ್ಠ ಅ...)
 
(ಪುಟದ ಮಾಹಿತಿ ತಗೆದು 'ಮಾದರಿ ಪ್ರಶ್ನೆ ಪತ್ರಿಕೆ ೧ ಪ್ರಥಮ ಭಾಷೆ ಕ...' ಎಂದು ಬರೆಯಲಾಗಿದೆ)
೧ ನೇ ಸಾಲು: ೧ ನೇ ಸಾಲು:
 
ಮಾದರಿ ಪ್ರಶ್ನೆ ಪತ್ರಿಕೆ ೧     
 
ಮಾದರಿ ಪ್ರಶ್ನೆ ಪತ್ರಿಕೆ ೧     
 
ಪ್ರಥಮ ಭಾಷೆ ಕನ್ನಡ        ೧೦ ನೇ ತರಗತಿ  
 
ಪ್ರಥಮ ಭಾಷೆ ಕನ್ನಡ        ೧೦ ನೇ ತರಗತಿ  
ಗರಿಷ್ಠ ಅಂಕ: ೧೦೦                  ಅವಧಿ : ೩ ಗಂಟೆಗಳು
+
[recent:///723d13b377e48a52ab66097054919935]
ಭಾಗ -'ಎ'
 
ಪಠ್ಯಗಳ ಅಧ್ಯಯನ (ಗದ್ಯ , ಪದ್ಯ, ಪೋಷಕ ಅಧ್ಯಯನ )೬೭ ಅಂಕಗಳು
 
ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. ೧೧*೧=೧೧
 
೧. ಶಾಲೆಗೆ ಹೋದ ಕೆಲಸದ ಬಗ್ಗೆ ಗೊರೂರರಿಗೆ ಯಾವಾಗ ಜ್ಞಾನೋದಯವಾಯಿತು ?
 
೨. ಅಮರಿಕ ವಿದ್ಯಾರ್ಥಿಗಳನ್ನು ರಂಜಿಸಿದ ಕನ್ನಡಸಾಹಿತ್ಯ ಭಾಗಗಳು ಯಾವುವು?
 
೩. ಮನೆ ಮಂಚಮ್ಮ ಯಾರು ?
 
೪. ಧರ್ಮಾಧಿಕರಣರು ವಿಸ್ಮಯ ಹೊಂದಲು ಕಾರಣವೇನು?
 
೫.  ಶಾನುಭೋಗರ ಬ್ರಹ್ಮಾಸ್ತ್ರ ಯಾವುದು ?
 
೬.  ಮುಧೋಳ ಹತ್ತಿರ ಸೇರಿದ ಹಲಗಲಿ ಬೇಡರು ಕೈಗೊಂಡ ನಿರ್ಧಾರವೇನು ?
 
೭.  ಯಾವುದರ ನಡುವೆ ಸೇತುವೆಯಾಗಬೇಕೆಂದು ಕವಿ ಹೇಳಿದ್ದಾರೆ 
 
೮.  ಮುನಿಸುತರು ಹೆದರಲು ಕಾರಣವೇನು ?
 
೯.  ಕವಿ ರನ್ನ ಶ್ರವಣಬೆಳಗೊಳದ ಚಿಕ್ಕಬೆಟ್ಟದ ವಿಸ್ತಾರದ ಹಿನ್ನೆಲೆಯಲ್ಲಿ ಯಾವ ಹೆಸರನ್ನು ಕೆತ್ತಿಸಿದ್ದಾನೆ ?
 
೧೦. ''ಅನ್ ಟು ದಿ ಲಾಸ್ಟ್ '' ಕೃತಿಯನ್ನು ರಚಿಸಿದವರು ಯಾರು ?
 
೧೧. ಪಾರವಾಳಗಳ ಜೋಡಿ ಪ್ರೀತಿಯಿಂದ ಹಿಗ್ಗಲು ಕಾರಣವೇನು ?
 
 
 
ಈ ಕೆಳಗಿನವುಗಳಿಗೆ ಮೂರು -ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ.  ೯*೨ =೧೮
 
೧೨.  ಗೊರೂರರು  ಅಮೆರಿಕದ ವಿದ್ಯಾರ್ಥಿಗಳಿಗೆ ಗಾಂಧೀಜಿಯವರ ಕುರಿತು ಏನು ಹೇಳಿದರು ?
 
೧೩. ಸಾಧಕನ ಯೋಗಕ್ಷೇಮವನ್ನು ಸಮಾಜ ಹೇಗೆ ನಿರ್ವಹಿಸುತ್ತಿತ್ತು ?
 
೧೪. ಸಹಾನುಭೂತಿಗಾಗಿ ಇರಬೇಕಾದ ಎರಡು ಕಣ್ಣುಗಳು ಯಾವುವು ?
 
೧೫. ವಚನಧರ್ಮದ ಬಗ್ಗೆ ದೇವನೂರರ ಅಭಿಪ್ರಾಯವೇನು ?
 
೧೬.  ಕಾಲಚಕ್ರದ ಎದುರಿನಲ್ಲಿ ಎಲ್ಲರೂ ತಲೆಬಾಗಲೇ ಬೇಕೆಂದು ಕವಿ ಬೇಂದ್ರೆ ಹೇಗೆ ವಿವರಿಸಿದ್ದಾರೆ. ?
 
೧೭. ಹೊಸಗಾಲದ ಹಸುಮಕ್ಕಳನ್ನು ಹಕ್ಕಿ ಹೇಗೆ ಹರಸಿದೆ ?
 
೧೮. ದಂಡು ಹಲಗಲಿಯ ಮೇಲೆ ಹೇಗೆ ದಾಳಿ ನಡೆಸಿತು?
 
೧೯. ಸಮಾಜ ಸುಧಾರಣೆ ಯಾವಾಗ ಸಾಧ್ಯವೆಂದು ಲೇಖಕರು ಹೇಗೆ ವಿವರಿಸಿದ್ದಾರೆ ?
 
೨೦. ಒಗಟುಗಳಿಂದ ವಿದ್ಯಾರ್ಥಿಗಳಾದ ನಿಮಗಾಗುವ ಪ್ರಯೋಜನವನ್ನು ತಿಳಿಸಿ.
 
ಈ ಕೆಳಗಿನ ಹೇಳಿಕೆಗಳಿಗೆ ಸಂದರ್ಭ ಮತ್ತು ಸ್ವಾರಸ್ಯಗಳನ್ನು ಬರೆಯಿರಿ.  ೪*೩=೬
 
೨೧. '' ಮಿಕ್ಕ ಹೊನ್ನಿಂಗೆ ಜೀರ್ಣ ಜಿನಾಲಯಂಗಳಿಗೆ ಸೊದೆಯನಿಕ್ಕುವುದು .''
 
೨೨. '' ದೇವರೆ , ಮರ ಹತ್ತುವಷ್ಟು ಅವಕಾಶ ಕರುಣಿಸು ''
 
೨೩. ''ಗಡಿಯೂ ಇಲ್ಲ,ಆಚೆ ಈಚೆಯೂ ಇಲ್ಲ.''
 
೨೪. ''ಮಾರಿಗೌತಣವಾಯ್ತು ನಾಳಿನ ಭಾರತವು "
 
ಈ ಸಾಹಿತಿಗಳ ಸ್ಥಳ ,ಕಾಲ, ಕೃತಿಗಳನ್ನು ಕುರಿತು ಬರೆಯಿರಿ.  ೨*೩=೬
 
೨೫. ದುರ್ಗಸಿಂಹ
 
೨೬. ಲಕ್ಷ್ಮೀಶ
 
೨೭.ಈ ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿರಿ೧*೪=೪
 
ನೀನುಳ್ಳೊಡೆ -----------------
 
------------------------
 
-------------------
 
--------------------ನಂದಿದೊಡೇಂ
 
ಅಥವಾ
 
ತೆಗೆದು----------------
 
-----------------------
 
------------------- ----
 
---------------------
 
---------------------
 
-------------------ನಿಂತಿರ್ದನು 
 
 
 
೨೮.ಈ ಕೆಳಗಿನ ಪದ್ಯಭಾಗವನ್ನು ಓದಿಕೊಂಡು ಪ್ರಶ್ನೆಗಳಿಗೆ ಉತ್ತರ ಬರೆಯಿರಿ.  ೪*೧=೪
 
ನುಡಿದರೆ ಮುತ್ತಿನ ಹಾರದಂತಿರಬೇಕು
 
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
 
ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು
 
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು
 
ನುಡಿಯೊಳಗಾಗಿ ನಡೆಯದಿದ್ದರೆ
 
ಕೂಡಲಸಂಗಮದೇವನೆಂತೊಲಿವನಯ್ಯ
 
 
 
೧.  ಈ ವಚನಭಾಗದ ಯಾವ ಸಾಲುಗಳನ್ನು ನೀವು ಮೆಚ್ಚುವಿರಿ ?ಏಕೆ?
 
೨.  ನುಡಿದರೆ ಮುತ್ತಿನಹಾರದಂತಿರಬೇಕು  ಎಂದರೆ ಏನೆಂದು ಅರ್ಥೈಸುವಿರಿ ?
 
೩. ನುಡಿಯನ್ನು ಯಾರು ಮೆಚ್ಚುವ ಹಾಗಿರಬೇಕು ?
 
೪. ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೊಲಿಯಲಾರ ಏಕೆ ?
 
 
 
ಈ ಕೆಳಗಿನ ಪ್ರಶ್ನೆಗಳಲ್ಲಿ ಯಾವುದಾದರೂ ಎರಡು ಪ್ರಶ್ನೆಗಳಿಗೆ ಎಂಟು ಅಥವಾ ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ. ೨*೪=೮
 
 
 
೨೯.ಶಬರಿಯ ಸಡಗರ ,ಸಂತೋಷ ಮೇಳದವರ ಹಾಡಿನಲ್ಲಿ ಹೇಗೆ ವರ್ಣಿತವಾಗಿದೆ ?
 
ಅಥವಾ
 
ನಂಬಿ ಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ಹೇಗೆ ನಿಜವಾಗಿದೆ ?
 
 
 
೩೦. ಪಾಂಡವರು ಸೋದರರೆಂದು ತಿಳಿದಾಗ ಕರ್ಣನ ಮನಸ್ಥಿತಿಯನ್ನು ತಿಳಿಸಿ.
 
ಅಥವಾ
 
ಕರ್ಣನಿಗೆ ಶ್ರೀಕೃಷ್ಣನು ಒಡ್ಡಿದ ಆಮಿಷಗಳೇನು ?
 
 
 
೩೧.  ಈ ಕೆಳಗಿನ ಗದ್ಯಭಾಗವನ್ನು ಓದಿಕೊಂಡು, ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.. ೪=೨+೨
 
 
 
ವಿಶ್ವೇಶ್ವರಯ್ಯ ಅವರು ಮೂರು ವರ್ಷಗಳ ಕಾಲ ಮೈಸೂರು ಸಂಸ್ಥಾನದಲ್ಲಿ ಮುಖ್ಯ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದರು.ಕಾವೇರಿ ನದಿಗೆ ಕನ್ನಂಬಾಡಿ ಜಲಾಶಯ ನಿರ್ಮಾಣ ಯೋಜನೆ ಪ್ರಾರಂಭ ,ರೈಲು ಮಾರ್ಗಗಳ ವಿಸ್ತರಣೆಗೆ ಕ್ರಮ, ತಾಂತ್ರಿಕ ಶಿಕ್ಷಣದ ಅಭಿವೃದ್ಧಿಗೆ ಯೋಜನೆ, ಮಾರಿ ಕಣಿವೆ ಜಲಾಶಯದ ನೀರು ಹಂಚಿಕೆ ಪುನರ್ವವಸ್ಥೆ , ಸಣ್ಣ ನೀರಾವರಿ ವ್ಯವಸ್ಥೆಗೆ ಮರು ಜೀವ , ಇವೆಲ್ಲ ಅವರ ಅಭಿವೃದ್ಧಿ ಕಾರ್ಯಗಳ ಕುರುಹು .ಇವುಗಳಿಗೂ ಮಿಗಿಲಾಗಿಇಲಾಖೆಯಲ್ಲಿ ಕ್ರಮಬದ್ಧ ಕಾರ್ಯನೀತಿ ,ಸಂಸ್ಥಾನದಲ್ಲಿ ಶಿಸ್ತಿನ ಆಡಳಿತ ,ಜನರಿಗೆ ಆಧುನಿಕ ಜೀವನ ವ್ಯವಸ್ಥೆಗೆ ಪೂರ್ವ ಸಿದ್ಧತೆ ಹೇಗಿರಬೇಕೆಂಬ ತಿಳುವಳಿಕೆ ನೀಡಿದ್ದು , ಇವು ಇವರು ಉಂಟು ಮಾಡಿದ ಆಡಳಿತ ಮತ್ತು ನೈತಿಕ ಪ್ರಭಾವಗಳು.
 
 
 
೧. ವಿಶ್ವೇಶ್ವರಯ್ಯ ಅವರ ಅಭಿವೃದ್ದಿ ಕಾರ್ಯಗಳ ಕುರುಹುಗಳು ಯಾವುವು ತಿಳಿಸಿ.
 
೨.ವಿಶ್ವೇಶ್ವರಯ್ಯ ಅವರು ಉಂಟು ಮಾಡಿದ ಆಡಳಿತ ಮತ್ತು ನೈತಿಕ ಪ್ರಭಾವಗಳು ಯಾವುವು ?
 
ಭಾಗ – 'ಬಿ'
 
ಅನ್ವಯಿಕ ವ್ಯಾಕರಣ, ಅಲಂಕಾರ, ಛಂದಸ್ಸು -೨೦ ಅಂಕಗಳು
 
 
 
ಈ ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ಸೂಚಿಸಲಾಗಿದೆ
 
. ಅವುಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ ಉತ್ತರದ ಕ್ರಮಾಕ್ಷರದೊಂದಿಗೆ ಪೂರ್ಣ ಉತ್ತರವನ್ನು ಬರೆಯಿರಿ. ೧೦*೧=೧೦
 
೩೨. 'ದಿಗ್ಭ್ರಮೆ ' ಪದವು ಈ ಸಂಧಿಗೆ ಉದಾಹರಣೆಯಾಗಿದೆ .
 
    (ಎ)  ಗುಣಸಂಧಿ  (ಬಿ) ವೃದ್ಧಿಸಂಧಿ  (ಸಿ)ಜಶ್ತ್ವ ಸಂಧಿ  (ಡಿ)ಆದೇಶ ಸಂಧಿ
 
೩೩. 'ಋಷಿ' ಪದದ ತದ್ಭವ ರೂಪ ------
 
    (ಎ) ರಿಸಿ  (ಬಿ) ಮಹರ್ಷಿ  (ಸಿ) ತಪಸ್ವಿ  (ಡಿ) ರುಷಿ
 
೩೪. 'ಆ ಹುಲಿ' ಪದವು ಈ ಸಮಾಸದ ಉದಾಹರಣೆಯಾಗಿದೆ--
 
    (ಎ) ಗಮಕ ಸಮಾಸ  (ಬಿ) ಕ್ರಿಯಾ ಸಮಾಸ  (ಸಿ)ತತ್ಪುರುಷ ಸಮಾಸ (ಡಿ)ದ್ವಿಗು ಸಮಾಸ
 
೩೫. 'ಹೊಳೆಯಲಿ ' ಈ ಕ್ರಿಯಾಪದವನ್ನು ಸಂಭಾವನಾರ್ಥಕ ರೂಪಕ್ಕೆ ಪರಿವರ್ತಿಸಿದಾಗ ಆಗುವ ರೂಪ:
 
    (ಎ) ಹೊಳೆಯದು  (ಬಿ)  ಹೊಳೆದೀತು  (ಸಿ) ಹೊಳೆಯುತ್ತದೆ (ಡಿ)ಹೊಳೆಯಿತು
 
೩೬.  ಕೆಳಗಿನವುಗಳಲ್ಲಿನ ಅನ್ವರ್ಥಕ ನಾಮಪದಕ್ಕೆ ಉದಾಹರಣೆ :
 
      (ಎ) ಸಾವಿತ್ರಿ  (ಬಿ) ಕಾಡು  (ಸಿ) ಮೈಸೂರು  (ಡಿ) ವ್ಯಾಪಾರಿ
 
೩೭.  ನನಗೇ ಗುಡಿ ಮನೆ ಕಟ್ತಾ ಇದ್ದೀರೋ  ಈ ವಾಕ್ಯದ ಕೊನೆಯಲ್ಲಿರಬೇಕಾದ ಲೇಖನ ಚಿಹ್ನೆ
 
  (ಎ) ಆಶ್ಚರ್ಯ ಸೂಚಕ  (ಬಿ) ಪ್ರಶ್ನಾರ್ಥಕ  (ಸಿ) ವಾಕ್ಯವೇಷ್ಠನ  (ಡಿ) ಪೂರ್ಣವಿರಾಮ
 
೩೮. 'ಶಿವಂಗೆ ' ಪದದಲ್ಲಿರುವ ವಿಭಕ್ತಿ -
 
    (ಎ ) ಪ್ರಥಮಾ  (ಬಿ) ದ್ವಿತೀಯಾ  (ಸಿ) ಚತುರ್ಥಿ  (ಡಿ)  ಪಂಚಮಿ
 
೩೯. ಕೊಟ್ಟಿರುವ ಪದಗಳಲ್ಲಿ  ಪಾರ್ಸಿ ಭಾಷೆಯ ಪದವಿದು ----
 
    (ಎ) ಸ್ಯಾನಿಟರಿ  (ಬಿ) ದಿವಾನ ( ಸಿ) ಅಜಮಾಯಿಸಿ. (ಡಿ)ಕಾಗದ
 
೪೦.''ಹುಲಿ ಈಗ ಎಷ್ಟು ಹಸಿದಿರಬೇಕು '' ಎಂಬ ಯೋಚನೆ ಬಂದಾಗ ಅವರ ವದನಾರವಿಂದದಲ್ಲಿ ಮುಗುಳುನಗು ಮೂಡಿತ; ಊಟದ ರುಚಿ ಇಮ್ಮಡಿಯಾಯಿತು . ಈ ವಾಕ್ಯವು :
 
  (ಎ)ನಿಷೇಧಾರ್ಥಕ ವಾಕ್ಯ  (ಬಿ) ಸಾಮಾನ್ಯ ವಾಕ್ಯ  (ಸಿ) ಸಂಯೋಜಿತ ವಾಕ್ಯ  (ಡಿ) ಮಿಶ್ರ ವಾಕ್ಯ
 
೪೧. ವಿಶ್ವೇಶ್ವರಯ್ಯ ನವರು ೧೮೬೦ ,ಸೆಪ್ಟೆಂಬರ್ ೧೫ ರಂದು ಶ್ರೀನಿವಾಸಶಾಸ್ತ್ರಿ ಮತ್ತು ವೆಂಕಟಲಕ್ಷಮ್ಮ ಅವರ ಎರಡನೆಯ ಮಗನಾಗಿ ಜನಿಸಿದರು.  ಈ ವಾಕ್ಯದಲ್ಲಿರುವ ಸಂಖ್ಯಾವಾಚಕ ಪದವಿದು :
 
    (ಎ) ಸೆಪ್ಟೆಂಬರ್ ೧೫  (ಬಿ)೧೮೬೦  (ಸಿ)ಜನಿಸಿದರು  (ಡಿ)ಎರಡನೆಯ
 
 
 
 
 
ಈ ಕೆಳಗಿನ ಮೊದಲೆರಡು ಪದಗಳಿಗೆ ಇರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿ ಸಂಬಂಧ ಹೊಂದುವ ಪದವನ್ನು ಬರೆಯಿರಿ.೪*೧=೪
 
೪೨.  ಓಡಿ : ಕೃದಂತಾವ್ಯಯ : : ಓಡಿದ : –
 
೪೩.  ನಾವು : ಉತ್ತಮ ಪುರುಷ ಸರ್ವನಾಮ : : ತಾವು :----
 
೪೪.  ಸಿರಿತನ: ತದ್ಧಿತಾಂತ ಭಾವನಾಮ ::ಸಿರಿವಂತ : ----
 
೪೫.  ನಟ್ಟ ನಡುವೆ : ದ್ವಿರುಕ್ತಿ : : ಅಲ್ಪಸ್ವಲ್ಪ :----
 
 
 
೪೬. ಈ ಕೆಳಗಿನ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ ,ಗಣ ವಿಭಾಗ ಮಾಡಿ ,ಛಂದಸ್ಸಿನ ಹೆಸರು ಬರೆಯಿರಿ.೧*೩=೩
 
ಇನ ತನೂಜನ ಕೂಡೆ ಮೈದುನ
 
ತನದ ಸರಸವನೆಸಗಿ ರಥದೊಳು
 
ದನುಜರಿಪು ಬರಸೆಳೆದು ಕುಳ್ಳಿರಿಸಿದನು ಪೀಠದಲಿ
 
ಅಥವಾ
 
ಎನಗಂ ಪಾಂಡುಗಮಿಲ್ಲ ಭೇದಮಿಳೆಯಂ ಪಚ್ಛಾಳ್ವಮಾ ಪಾಂಡುನಂ
 
೪೭.ಈ ಕೆಳಗಿನ ಪದ್ಯಭಾಗದಲ್ಲಿರುವ ಅಲಂಕಾರವನ್ನು ಹೆಸರಿಸಿ,ಲಕ್ಷಣದೊಂದಿಗೆ ಸಮನ್ವಯಿಸಿ.೧*೩
 
 
 
'ಬೆಕ್ಕಿನಂತೆ ದೇಹವನ್ನು ಹುದುಗಿಸಿಕೊಂಡು ಹುಲಿ'
 
ಅಥವಾ
 
'ಪ್ರೀತಿಯ ಹಣತೆ'
 
 
 
 
 
ಭಾಗ -'ಸಿ'
 
ವಾಕ್ಯರಚನೆ ಹಾಗೂ ಬರವಣಿಗೆ ಕೌಶಲ ೧೩ ಅಂಕಗಳು.
 
 
 
೪೮. ಈ ಕೆಳಗೆ ಕೊಟ್ಟಿರುವ ಗಾದೆಗಳಲ್ಲಿ ಯಾವುದಾದರೂ ಒಂದನ್ನು ವಿಸ್ತರಿಸಿ ಬರೆಯಿರಿ.  ೧*೩=೩
 
 
 
* ದೇಶ ಸುತ್ತಿ ನೋಡು ಕೋಶ ಓದಿ ನೋಡು.
 
* ಕಟ್ಟುವುದು ಕಠಿಣ ಕೆಡವುದು ಸುಲಭ
 
* ಅತಿಯಾಸೆ ಗತಿಗೇಡು
 
 
 
೪೯.ನೀವು  ಮಂಡ್ಯದ 'ವಿಜಯಪುರ' ನಿವಾಸಿ ಕೀರ್ತನಾ \ ವಿಜಯ್  ಎಂದು ಭಾವಿಸಿ ಕಾರವಾರದ 'ವಿದ್ಯಾನಗರ' ದಲ್ಲಿ ವಾಸಿಸುತ್ತಿರುವ ನಿಮ್ಮ ಗೆಳೆಯ \ಗೆಳತಿ  (ಮನು \ಮನ್ವಿತ ) ಗೆ ನಿಮ್ಮ ಶಾಲೆಯಲ್ಲಿ ಆಚರಿಸಿದ ಶಾಲಾ ವಾರ್ಷಿಕೋತ್ಸವದ ಕುರಿತು ಒಂದು ಪತ್ರ ಬರೆಯಿರಿ .
 
 
 
ಅಥವಾ
 
 
ನಿಮ್ಮ ಬೇರೆ ಊರಿಗೆ ಹೋಗಿ ನೆಲೆಸಬೇಕಾದ ಕಾರಣ ನಿಮ್ಮ ವರ್ಗಾವಣೆ ಪತ್ರವನ್ನು ಕೊಡುವಂತೆ ಕೋರಿ ನಿಮ್ಮ ಶಾಲೆಯ ಮುಖ್ಯೋಪಾಧ್ಯಾಯರಿಗೆ ವಿನಂತಿ ಪತ್ರ ಬರೆಯಿರಿ. ೧*೫=  ೫
 
 
 
೫೦. ಈ ಕೆಳಗಿನ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಕುರಿತು ಹದಿನೈದು ವಾಕ್ಯಗಳಿಗೆ ಕಡಿಮೆಯಿಲ್ಲದಂತೆ ಪ್ರಬಂಧ ಬರೆಯಿರಿ.೧*೫=೫
 
*ಇಂದಿನ ಶಿಕ್ಷಣ
 
* ಗ್ರಂಥಾಲಯದ ಪ್ರಯೋಜನಗಳು
 
* ಅಂತರ್ಜಾಲದ ಮಹತ್ವ
 

೧೪:೫೫, ೧೭ ಡಿಸೆಂಬರ್ ೨೦೧೪ ನಂತೆ ಪರಿಷ್ಕರಣೆ

ಮಾದರಿ ಪ್ರಶ್ನೆ ಪತ್ರಿಕೆ ೧ ಪ್ರಥಮ ಭಾಷೆ ಕನ್ನಡ ೧೦ ನೇ ತರಗತಿ [recent:///723d13b377e48a52ab66097054919935]