"ಅಜ್ಜಯ್ಯನ ಅಭ್ಯಂಜನ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೯ ನೇ ಸಾಲು: | ೯ ನೇ ಸಾಲು: | ||
=ಕಲಿಕೋದ್ದೇಶಗಳು= | =ಕಲಿಕೋದ್ದೇಶಗಳು= | ||
*ಅಭ್ಯಂಜನ ಪದದ ಅರ್ಥ ತಿಳಿಯುವನು | *ಅಭ್ಯಂಜನ ಪದದ ಅರ್ಥ ತಿಳಿಯುವನು | ||
− | *”ಆರೋಗ್ಯವೇ ಭಾಗ್ಯ” ಎಂಬ ನಾಣ್ನುಡಿಗೆ ಅಭ್ಯಂಜನ ಸ್ನಾನದ ಪ್ರಾಮುಖ್ಯತೆ | + | *”ಆರೋಗ್ಯವೇ ಭಾಗ್ಯ” ಎಂಬ ನಾಣ್ನುಡಿಗೆ ಅಭ್ಯಂಜನ ಸ್ನಾನದ ಪ್ರಾಮುಖ್ಯತೆ ಎಂತಹುದು ಎಂಬುದನ್ನು ಅರಿಯುವನು. |
*ಹೊಸ ಪದಗಳ ಅರ್ಥ ತಿಳಿದು ,ಅರ್ಥೈಸುವನು. | *ಹೊಸ ಪದಗಳ ಅರ್ಥ ತಿಳಿದು ,ಅರ್ಥೈಸುವನು. | ||
*ಆರೋಗ್ಯದ ಕಡೆ ಗಮನ ನೀಡುವನು. | *ಆರೋಗ್ಯದ ಕಡೆ ಗಮನ ನೀಡುವನು. | ||
*ಅವಿಭಕ್ತ ಪದ್ಧತಿಯ ಸಾಧಕ-ಬಾಧಕಗಳ ಬಗ್ಗೆ ಅರಿಯುವನು. | *ಅವಿಭಕ್ತ ಪದ್ಧತಿಯ ಸಾಧಕ-ಬಾಧಕಗಳ ಬಗ್ಗೆ ಅರಿಯುವನು. | ||
− | *ಜ್ಞಾನಪೀಠ ಪ್ರಶಸ್ತಿ ವಿಜೇತರ | + | *ಜ್ಞಾನಪೀಠ ಪ್ರಶಸ್ತಿ ವಿಜೇತರ ಚಿತ್ರಗಳ ಪಟ್ಟಿಯಲ್ಲಿ ಕುವೆಂಪುರವರ ಭಾವಚಿತ್ರವನ್ನುಗುರುತಿಸುವನು. |
− | *ಕುವೆಂಪುರವರ ಜೀವನ ಹಾಗೂ | + | *ಕುವೆಂಪುರವರ ಜೀವನ ಹಾಗೂ ಸಾಹಿತ್ಯ ಸೇವೆಯ ಬಗ್ಗೆ ಅರಿತುಕೊಳ್ಳುವನು |
=ಕವಿ ಪರಿಚಯ = | =ಕವಿ ಪರಿಚಯ = |
೦೯:೪೨, ೨೦ ಜುಲೈ ೨೦೧೫ ನಂತೆ ಪರಿಷ್ಕರಣೆ
ಪರಿಕಲ್ಪನಾ ನಕ್ಷೆ
<mm>Flash</mm>
ಹಿನ್ನೆಲೆ/ಸಂದರ್ಭ
'ಅನ್ನಕ್ಕಿಂತಲೂ ಅಭ್ಯಂಜನವೇ ಶ್ರೇಷ್ಠ' ಎನ್ನುವುದು ನಮ್ಮ ಹಿರಿಯರ ಧ್ಯೇಯೋಕ್ತಿಯಾಗಿತ್ತು. ಅಭ್ಯಂಜನ ಮಾಡಿ ಮಾಡಿ ದೇಹ ಸ್ವಲ್ಪ ಸ್ಥೂಲತೆಯ ಕಡೆಗೆ ಒಲೆದಿತ್ತು. ವಾರಕ್ಕೊಂದು ಅಭ್ಯಂಜನ ಮಾಡುತ್ತಿದ್ದರೆ ಅಮೃತತ್ವ ಲಭಿಸುವುದೆಂದು ಅವರು ತಿಳಿದಿದ್ದಂತೆ ತೋರುತ್ತದೆ.ಅಂತಹ ಒಂದು ವಿಷಯವನ್ನು ಕುವೆಂಪುರವರು ತಮ್ಮ ಲಲಿತ ಪ್ರಬಂಧದ ಒಂದು ಉದಾಹರಣೆಯೊಂದಿಗೆ ಸುಲಲಿತವಾಗಿ ವಿವರಿಸಿದದ್ದಾರೆ.
ಅತ್ತ ಆಳುಗಳು ಅಭ್ಯಂಜನದ ನಾಟಕಕ್ಕೆ ಬೇಕಾದ ಸಲಕರಣೆಗಳನ್ನು ಸಿದ್ಧ ಮಾಡುತ್ತಿರಲು, ಇತ್ತ ಪಾತ್ರದಾರರು ಎಣ್ಣೆ ಹಚ್ಚಿಕೊಳ್ಳುತ್ತಿರುವುದೊಂದು ಸುಮನೋಹರ ದೃಶ್ಯ. ಮಸಿಯಲ್ಲಲ್ಲ, ಹರಳೆಣ್ಣೆಯಲ್ಲಿ ಅದನ್ನು ಬರೆದರೂ ಆ ವರ್ಣನೆ ಸರಿಯಾಗಿ ಆವಿರ್ಭವಿಸುವುದು ಅಸಾಧ್ಯ. ಪ್ರಿನ್ಸಿಪಾಲರಾದ ನಮ್ಮ ಐಗಳು ಕಿರಿಯರಿಗೆ ಎಣ್ಣೆ ಹಚ್ಚಿ ಹಚ್ಚಿ ಬಿಡುತ್ತಿರುವರು. ಹುಡುಗರ ಗುಂಪಿನಲ್ಲಿ ಹೀಗೆ ಘಟನೆಗಳ ಮೇಲೆ ಘಟನೆಗಳು ಪ್ರಾಪ್ತವಾಗುತ್ತಿರಲಾಗಿ ದೊಡ್ಡವರ ಮೈಗೆ ಆಳುಗಳು ಎಣ್ಣೆ ಉಜ್ಜುತ್ತಿದ್ದಾರೆ. ಕೆಲವರು ಗರಡಿಯಲ್ಲಿ ಕಸರತ್ತು ಮಾಡುವವರಂತೆ ಹುಂ!,ಉಸ್!, ಹುಂ!, ಉಸ್!, ಎನ್ನುತ್ತಿದ್ದಾರೆ. ಅಜ್ಜಯ್ಯ ದೂರದಲ್ಲಿ ಕುಳಿತು ಎಣ್ಣೆ ಉಜ್ಜಿಸಿಕೊಳ್ಳುತ್ತಿದ್ದಾರೆ. ಅವರ ಮೈಯೆಲ್ಲ ತೈಲಮಯ. ಆಳು ತಲೆಗೆ ಎಣ್ಣೆ ಹಾಕಿ ಪಟ್ ಪಟ್ ಎಂದು ಮದ್ದಲೆ ಬಡಿಯುವಂತೆ ಬಿಡುವಿಲ್ಲದೆ ಬಡಿಯುತ್ತಿದ್ದಾನೆ. ಆ ಏಟಿಗೆ ಅಭ್ಯಾಸವಿಲ್ಲದವರಾಗಿದ್ದರೆ ಮೆದುಳು ಕದಡಿ ಹೋಗುತ್ತಿದ್ದರು ಆದರೆ ಅಜ್ಜಯ್ಯ ಅಚಲದಂತೆ ಧೀರವಾಗಿ ಕುಳಿತಿದ್ದಾರೆ.
ಕಲಿಕೋದ್ದೇಶಗಳು
- ಅಭ್ಯಂಜನ ಪದದ ಅರ್ಥ ತಿಳಿಯುವನು
- ”ಆರೋಗ್ಯವೇ ಭಾಗ್ಯ” ಎಂಬ ನಾಣ್ನುಡಿಗೆ ಅಭ್ಯಂಜನ ಸ್ನಾನದ ಪ್ರಾಮುಖ್ಯತೆ ಎಂತಹುದು ಎಂಬುದನ್ನು ಅರಿಯುವನು.
- ಹೊಸ ಪದಗಳ ಅರ್ಥ ತಿಳಿದು ,ಅರ್ಥೈಸುವನು.
- ಆರೋಗ್ಯದ ಕಡೆ ಗಮನ ನೀಡುವನು.
- ಅವಿಭಕ್ತ ಪದ್ಧತಿಯ ಸಾಧಕ-ಬಾಧಕಗಳ ಬಗ್ಗೆ ಅರಿಯುವನು.
- ಜ್ಞಾನಪೀಠ ಪ್ರಶಸ್ತಿ ವಿಜೇತರ ಚಿತ್ರಗಳ ಪಟ್ಟಿಯಲ್ಲಿ ಕುವೆಂಪುರವರ ಭಾವಚಿತ್ರವನ್ನುಗುರುತಿಸುವನು.
- ಕುವೆಂಪುರವರ ಜೀವನ ಹಾಗೂ ಸಾಹಿತ್ಯ ಸೇವೆಯ ಬಗ್ಗೆ ಅರಿತುಕೊಳ್ಳುವನು
ಕವಿ ಪರಿಚಯ
- ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪ - ನವೆಂಬರ್ ೧೧, ೧೯೯೪) –
- ಕನ್ನಡದ ಅತ್ಯುತ್ತಮ ಕವಿ,
- ಎರಡನೆ ರಾಷ್ಟ್ರಕವಿ.
- ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಕನ್ನಡದಪ್ರ ಪ್ರಥಮ ವ್ಯಕ್ತಿ.
- 'ವಿಶ್ವ ಮಾನವ' ಪರಿಕಲ್ಪನೆಯನ್ನೂ ಸಾಹಿತ್ಯದ ಮೂಲಕ ಸಮಾಜಕ್ಕೆ ತಲುಪಿಸಿದವರು.
- ಕನ್ನಡ ಸಾಹಿತ್ಯಕ್ಕೆ ಇವರ ಕಾಣಿಕೆ ಅಪಾರ.
- ಕುವೆಂಪುರವರ ಮೊದಲ ಕಾವ್ಯನಾಮ:-"ಕಿಶೋರ ಚಂದ್ರವಾಣಿ" –
- ಕಾವ್ಯನಾಮ :-ಕುವೆಂಪು
ಶಿಕ್ಷಕರಿಗೆ ಟಿಪ್ಪಣಿ
ಸಾರಾಂಶ
ಪರಿಕಲ್ಪನೆ ೧
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಚಟುಟವಟಿಕೆ-೨
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಪರಿಕಲ್ಪನೆ ೨
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಭಾಷಾ ವೈವಿಧ್ಯತೆಗಳು
ಶಬ್ದಕೋಶ
- ಅಭ್ಯಂಜನ -ಎಣ್ಣೆ ಸ್ನಾನ
- ಸುಡು ನೀರು -ಬಿಸಿಯಾದ ನೀರು
- ಕಢಾಯಿ - ಅಗಲ ಬಾಯಿಯ ಪಾತ್ರೆ
- ಲಲಾಟ - ಹಣೆ
- ಐಗಳು -ಪಾಠ ಹೇಳು ವ ಗು ರು ಗಳು
- ಉಚ್ಚಳಿಸು -ಚಿಮ್ಮು
ವ್ಯಾಕರಣ
ಅನುಕರಣಾವ್ಯಯ ,ಜೋಡಿಪದ ಮತ್ತು ದ್ವಿರುಕ್ತಿಗಳ ವ್ಯತ್ಯಾಸದ ಬಗ್ಗೆ ತಿಳಿ ಹೇಳುತ್ತಾ ಮಾಹಿತಿ ನೀಡುವುದು.
- ಅನುಕರಣಾವ್ಯಯːಪಟ-ಪಟ, ರಫ್-ರಫ್, ಸರ-ಸರ
- ಜೋಡಿಪದː ಹಣ್ಣು-ಹಂಪಲು,ಕಸ-ಕಡ್ಡಿ, ತೀರ್ಥ-ಪ್ರಸಾದ
- ದ್ವಿರುಕ್ತಿ ː ಮುಂದೆ-ಮುಂದೆ, ಹೌದು- ಹೌದು, ತುತ್ತ ತುದಿ
ಮೌಲ್ಯಮಾಪನ
ಭಾಷಾ ಚಟುವಟಿಕೆಗಳು/ ಯೋಜನೆಗಳು
- ವಿಭಕ್ತ ಮತ್ತು ಅವಿಭಕ್ತ ಕುಟುಂಬಗಳಲ್ಲಿ ಹಬ್ಬಗಳ ಆಚರಣೆಯ ಕುರಿತಾದ ಚರ್ಚೆ.
- ಆರೋಗ್ಯದ ಗುಟ್ಟೇ ಅಭ್ಯಂಜನ ಸ್ನಾನ ಎಂಬ ವಿಷಯದ ಕುರಿತು ಭಾಷಣ ಏರ್ಪಡಿಸುವುದು.