"ಶ್ರೀ ಮಾಲಾ ಭಟ್ ರವರ ಕವನಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೨೩ ನೇ ಸಾಲು: ೨೩ ನೇ ಸಾಲು:
 
ಆದರೆ ಕೇಳುತ್ತಿದ್ದಾಳೆ ನಾನಿಲ್ಲವೇನು!.................?<br>
 
ಆದರೆ ಕೇಳುತ್ತಿದ್ದಾಳೆ ನಾನಿಲ್ಲವೇನು!.................?<br>
 
ನನ್ನ ಪಾಡಿಗೆ  ನನ್ನ  ಬಿಡುವೆಯೇನು..............?<br>
 
ನನ್ನ ಪಾಡಿಗೆ  ನನ್ನ  ಬಿಡುವೆಯೇನು..............?<br>
 +
'''3.ಆ ದಿನಗಳ ನೆನಪಲ್ಲಿ'''<br>
 +
ಅಂದು ನೀರೊಳಾಡಿದ ಆಟ!<br>
 +
ಹತ್ತಿದಗುಡ್ಡಬೆಟ್ಟ<br>
 +
ಇಂದಿಗೂ ಎದೆಯ ಗೂಡಲ್ಲಿ ಮಾಡುತಿದೆ ಚೆಲ್ಲಾಟ !<br>
 +
ಅಂದು ನಾ ನಡೆದ ದಾರಿಯ ಗಿಡಮರಗಳು<br>
 +
ಮನದ ಬಯಕೆಗಳ ಸರಿಸಿ ಮಾಡಿಕೊಡುತಿವೆ ದಾರಿ<br>
 +
ಎದೆಯಾಂತರಾಳದ ತನ್ನ ಬಾಲ್ಯದ ನೆನಪುಗಳ ನನ್ನೊಳಗೆ ತೂರಿ ತೂರಿ!<br>
 +
ಇಂದಿಗೂ ಬಾ ಮರಳಿ ಬಾ ನೆನಪೇ!<br>
 +
ಎಂತಹ ಮನಸ್ಸು! ಮಧು ಮಧುರವಿಹುದನೇ ಮೆಲಕುವದು!<br>
 +
ಘನಘೋರತರವಹುದನು ದೂರದೂರವೇ ಸರಿಸುವ<br>
 +
ಕಾಲನಿಗೆ ಅದೆಂತಹ ಶಕ್ತಿಯಿಹುದೋ<br>
 +
ಜೀವನದಲ್ಲಿ ಕಹಿಯುಣಿಸಿಯೂ ಬದುಕುವಾಸೆ<br>
 +
ಮೂಡಿಸುವನಲ್ಲ!<br>
 +
ಇದೇ ಏನು ಜೀವನ ಪ್ರೀತಿ!<br>
 +
ಇದೇ ಏನು ಜೀವನ ನೀತಿ..................!!<br>

೦೭:೪೦, ೨೩ ಸೆಪ್ಟೆಂಬರ್ ೨೦೧೬ ನಂತೆ ಪರಿಷ್ಕರಣೆ

ಶ್ರೀ ಮಾಲಾ ಭಟ್ ರವರ ಕವನಗಳು
1.'ನಗರ ಸುಂದರಿ'
ಈ ನಗರಿ ಅದೆಷ್ಟು ಸುಂದರಿ!
ಕುಸಿದ ಶೆಡ್ಡುಗಳಡಿಯ ಸಮಾಧಿಯ ಮೇಲೆ ಮೆರೆಯುವ ಅಪಾರ್ಟ್ಮೆಂಟುಗಳು!
ಅದೆಷ್ಟೋ ಹೆಂಗಳೆಯರ ಕಣ್ಣೀರನೇ ನೇಯ್ವ ಗಾರ್ಮೆಂಟುಗಳು!
ಊರು ಬಿಟ್ಟ ಮಾಣಿಗಳ ಅತೃಪ್ತ ಬಯಕೆಗಳಲಿ ಬೇಯ್ವ ಹೋಟೆಲ್ ಗಳು...
ಜನನ ಮರಣ ಲೆಕ್ಕಾಚಾರದ
ಹಾಸ್ಪಿಟಲ್ ಗಳು...
ಪ್ರಾಮಾಣಿಕತೆ,ಆದರ್ಶಗಳ ಪಾಠ ಓದಲು ಮತ್ತು ಕೇಳಲು ಮಾತ್ರ!!!!
ಎಂದು ಸಾರಿ ಹೇಳುವ ಕಛೇರಿಗಳು....
ಇದೊ... ನಗರ ಜೀವನದಾಟ!
ಇಲ್ಲಿ ಬದುಕು ಕಳೆದುಕೊಂಡವರು(+)ಬದುಕು ಕಟ್ಟಿಕೊಂಡವರು........!
2.ಪ್ರಕೃತಿ 'ಮಾತೆ'
ಪ್ರಕೃತಿ ನಿನ್ನ ಹೇಳಿ ಕೇಳಿ ಹೂ ಹಸಿರು ಹಚ್ಚಡ
ಹಾಸಿ ಗಂಧ ಗಾಳಿ ತೀಡಿತೇನು!
ಗಿಡಮರಬಳ್ಳಿ ಚಿಗುರಾಗಿ ಕಾಯಾಗಿ ಮಾಗುವಲ್ಲಿ ನಿನ್ನ ಹಂಬಲವೇನು!
ಹಳ್ಳಕೊಳ್ಳ ತೊರೆ ನದಿ ಝರಿಯಾಗಿ ಹರಿಹರಿದು ಸಾಗುವಲ್ಲಿ ನಿನ್ನ ಹೆಸರೇನು!
ಆ ಸೂರ್ಯ ಚಂದ್ರ ತಾರೆಗಳು ಬೇಕೆಂದಾಗ ಬೆಚ್ಚಗೆ
ದಣಿವಾದಾಗ ತಣ್ಣಗೆ ಜೋಪಾನ ಮಾಡಿಲ್ಲವೇನು?
ಅಂದು ಬರಿಗೈಲಿ ನೀ ಭೂತಾಯ ಮಡಿಲಿಗೆ ಬಂದು ಅಳುವಾಗ ಆಕೆ ಹೇಳಿದ್ದು!
ಅಳುವುದೇಕೆ ನಾನಿಲ್ಲವೇನು!..................
ಆದರೆ ಇಂದಿಗೂ ಅದೇ ಮಾತು ಆಕೆ ಹೇಳುತ್ತಿಲ್ಲ
ಆದರೆ ಕೇಳುತ್ತಿದ್ದಾಳೆ ನಾನಿಲ್ಲವೇನು!.................?
ನನ್ನ ಪಾಡಿಗೆ ನನ್ನ ಬಿಡುವೆಯೇನು..............?
3.ಆ ದಿನಗಳ ನೆನಪಲ್ಲಿ
ಅಂದು ನೀರೊಳಾಡಿದ ಆಟ!
ಹತ್ತಿದಗುಡ್ಡಬೆಟ್ಟ
ಇಂದಿಗೂ ಎದೆಯ ಗೂಡಲ್ಲಿ ಮಾಡುತಿದೆ ಚೆಲ್ಲಾಟ !
ಅಂದು ನಾ ನಡೆದ ದಾರಿಯ ಗಿಡಮರಗಳು
ಮನದ ಬಯಕೆಗಳ ಸರಿಸಿ ಮಾಡಿಕೊಡುತಿವೆ ದಾರಿ
ಎದೆಯಾಂತರಾಳದ ತನ್ನ ಬಾಲ್ಯದ ನೆನಪುಗಳ ನನ್ನೊಳಗೆ ತೂರಿ ತೂರಿ!
ಇಂದಿಗೂ ಬಾ ಮರಳಿ ಬಾ ನೆನಪೇ!
ಎಂತಹ ಮನಸ್ಸು! ಮಧು ಮಧುರವಿಹುದನೇ ಮೆಲಕುವದು!
ಘನಘೋರತರವಹುದನು ದೂರದೂರವೇ ಸರಿಸುವ
ಕಾಲನಿಗೆ ಅದೆಂತಹ ಶಕ್ತಿಯಿಹುದೋ
ಜೀವನದಲ್ಲಿ ಕಹಿಯುಣಿಸಿಯೂ ಬದುಕುವಾಸೆ
ಮೂಡಿಸುವನಲ್ಲ!
ಇದೇ ಏನು ಜೀವನ ಪ್ರೀತಿ!
ಇದೇ ಏನು ಜೀವನ ನೀತಿ..................!!