ಜನಪದ ಚರಿತ್ರೆಯ ಸ್ವರೂಪ ಮತ್ತು ಲಕ್ಷಣಗಳು ಚಟುವಟಿಕೆ 2

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)

ಚಟುವಟಿಕೆ ಹೆಸರು- ಬರಗಾಲ ಕುರಿತು ಜನಪದ ಗೀತೆ ವಿವರಣೆ

ಅಂದಾಜು ಸಮಯ

೨೦ ನಿಮಿ‍‍ಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು


ಬರಗಾಲ ಕುರಿತಾದ ಜಾನಪದ ಗೀತೆ

ಮುಂಗಾರು ಗುಡುಗಿಲ್ಲ ಮಾಡಲು ಸ್ವಾನೇಳ್ಲಿಲ್ಲ
ಹಸ್ತೆ ಚಿತ್ತೇ ಮಳೆ ಸುತ್ಗಿಟ್ಟಿ ಬರಲಿಲ್ಲ
ತುಂಗಭದ್ರೆ ಹೊಳೆ ತುಂಬಿ ಹಾಯಲಿಲ್ಲ
ಮಘೆ ಹುಬ್ಬೆಮಳೆ ಬಗೆಯ ತಿಳಿಯಲಿಲ್ಲ
ಇಂಥಾ ಹಸ್ತದ ಮಳೆ ಹೋದ್ಮೇಲೆ ಕಷ್ಟ ಬಂದಾವೋ ಜನ್ಮ
ಉತ್ತರ ದೇಶದಿಂದ ಉರುವತ ಬಂದಳು ದುರಗಿ
ಬಿತ್ತಿದ ಪೈರೆಲ್ಲ ಬಿಸಿಲಿಗೆ ಬಾಡುತ
ಹೆತ್ತಂತ ಮಕ್ಕಳ ಹೆರವರಿಗೆ ಕೊಡಲವ್ವ
ಕದರು ಕಡ್ಡೀ ಹಂಗೆ ಕೈಕಾಲು ನಾಗುತ
ಬಿದಿರು ಪುಟ್ಟೀ ಹಂಗೆ ಹೊಟ್ಟೆಗಳಾಗುತ
ಮಜ್ಜಿಗೆ ಬೇಡೊಂದ ಅಲ್ಲಲ್ಲಿಗೆ ಸಾವುತ
ಎಂಥಾ ಬಾಳ್ಯವ ಕಾಲ್ಪಂತೋ ನಮ್ಮಣ್ಣಾ ||
ಬಂಗಾರದ ಕೊಳಗ ಬಲಗೈಲಿ ತಕ್ಕೊಂಡು
ಬತ್ತ ಅಳೆದನೋ ಬಡವರಿಗೆ | ಅಣ್ಣಯ್ಯ
ರಾಶಿ ಅಳೆಯೋದು ಬೆಳಗಾದೊ

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಗೀತೆಯನ್ನು ಹಾಡುವುದು ಮತ್ತು ಅರ್ಥಪೂರ್ಣವಾಗಿ ಓದುವುದು.ನಂತರ ಗೀತೆಯಲ್ಲಿ ಮೂಡಿ ಬಂದಿರುವ ಬರಗಾಲದ ಚಿತ್ರಣ ನೀಡುವುದು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಬರಗಾಲದ ಚಿತ್ರಣ ಜನಪದ ಗೀತೆಯಲ್ಲಿ ಹೇಗೆ ಮೂಡಿಬಂದಿದೆ?
  2. ಬರಗಾಲವನ್ನು ಜನಸಾಮನ್ಯರು ಹೇಗೆ ನೋಡುತ್ತಾರೆ?
  3. ಬರಗಾಲದಿಂದಾಗುವ ಪರಿಣಾಮಗಳೇನು?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಮೌಖಿಕ_ಚರಿತ್ರೆ