ಪ್ರವೇಶದ್ವಾರ:ಕನ್ನಡ/ಸುದ್ದಿ
Jump to navigation
Jump to search
ಕನ್ನಡದ ಬಗ್ಗೆ ನಾವೆಲ್ಲ ತಿಳಿಯಬೇಕಿರುವ ವಿಶೇಷತೆಗಳು
- ಕನ್ನಡ ಪ್ರಪಂಚದಲ್ಲಿಯೇಹಳೆಯ ಪ್ರಾಚಿನ ಭಾಷೆಗಳಲ್ಲೊಂದಾಗಿದ್ದು ಸುಮಾರು ೨೦೦೦ ಸಾವಿರ ವರ್ಷಗಳಷ್ಟು ಹಳೆಯ ಭಾಷೆಯಾಗಿದೆ.
- ಕನ್ನಡ ಎರಡು ಸಾವಿರ ಹಳೆಯದಷ್ಟೇ ಅಲ್ಲ, ನೀವು ಮಾತಡುವದನ್ನ ಬರೆಯಬಹುದು, ಬರೆದುದ್ದನ್ನ ಓದಬಹುದಾದ ಭಾಷೆ. ಈ ವಿಶಿಷ್ಟತೆ ಹಲವಾರು ಭಾಷೆಗಳಲ್ಲಿ ಅವಕಾಶವಿಲ್ಲ.
- ಕನ್ನಡ ಪ್ರತಿಶತ ೯೯.೯೯ ರಷ್ಟು ವೈಜ್ಞಾನಿಕ ಹಾಗು ತರ್ಕಬದ್ಧವಾದ ಭಾಷೆ.
- ಕನ್ನಡಕ್ಕೆ ಇದುವರೆಗೂ ಸಂದಿರುವುದು ೮ ಜ್ಞಾನಪೀಠ ಪ್ರಶಸ್ತಿಗಳು. (ಬೇರೆಯವುಗಳಿಗೆ ಹೋಲಿಸಿದರೆ ಹಿಂದಿ - ೬, ತೆಲಗು - ೨, ಮಲಯಾಳಂ - ೩, ತಮಿಳು - ೨)
- ಈವರೆಗೆ ಎಂಟು ಕನ್ನಡ ಸಾಹಿತಿಗಳು ಜ್ಞಾನಪೀಠ_ಪ್ರಶಸ್ತಿ ಪ್ರಶಸ್ತಿಯಿಂದ ಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಹೆಸರು | ವರ್ಷ | ಕೃತಿ |
---|---|---|
ಕುವೆಂಪು | ೧೯೬೭ | ಶ್ರೀ ರಾಮಾಯಣ ದರ್ಶನಂ |
ದ. ರಾ. ಬೇಂದ್ರೆ | ೧೯೭೩ | ನಾಕುತಂತಿ |
ಶಿವರಾಮ ಕಾರಂತ | ೧೯೭೭ | ಮೂಕಜ್ಜಿಯ ಕನಸುಗಳು |
ಮಾಸ್ತಿ ವೆಂಕಟೇಶ ಅಯ್ಯಂಗಾರ್ | ೧೯೮೩ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಚಿಕವೀರರಾಜೆಂದ್ರ |
ವಿ. ಕೃ. ಗೋಕಾಕ | ೧೯೯೦ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಭಾರತ ಸಿಂಧುರಶ್ಮಿ |
ಯು. ಆರ್. ಅನಂತಮೂರ್ತಿ | ೧೯೯೪ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಸಂಸ್ಕಾರ |
ಗಿರೀಶ್ ಕಾರ್ನಾಡ್ | ೧೯೯೮ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು |
ಚಂದ್ರಶೇಖರ ಕಂಬಾರ | ೨೦೧೦ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ |
- ಶ್ರೀಯುತ ವಿನೋಭಾ ಭಾವೆ ಅವರನ್ನು 'ವಿಶ್ವ ಲಿಪಿಗಳ ರಾಣಿ' ಎಂದು ಕರೆಯಾಲಾಗುತ್ತದೆ.
- ಕ್ರಿಸ್ತಶಕ ೪೫೦ರಲ್ಲಿ ರಚಿತವಾದ ಕನ್ನಡ ಮೊಟ್ಟ ಮೊದಲ ಶಾಸನ ಹನ್ಮಿಡಿ ಶಾಸನ (ಹಲ್ಮಿಡಿ ಶಾಸನವೆಂದು ಪ್ರಸಿದ್ದಿ)
- ಕನ್ನಡದ ಬಗೆಗಿನ ಪ್ರಾಚಿನ ಬರಹ ದಾಖಲೆ ಎಂದರೆ ಅಶೋಕನ ಬ್ರಹ್ಮಗಿರಿ ಶಾಸನ (ಕ್ರಿಸ್ತಪೂರ್ವ ೨೩೦)
- ವಿದೇಶಿಯನೋಬ್ಬನಿಂದ ಶಬ್ದಕೋಶದ ರಚನೆಯಾಗಿರುವುದು ಕನ್ನಡದಲ್ಲಿ ಮಾತ್ರ. (ಕಿಟಲ್'ನ ಶಬ್ದಕೋಶ)
- ರಗಳೆ ಸಾಹಿತ್ಯ ಎಂಬುದು ಕನ್ನಡಲ್ಲಿ ಮಾತ್ರ ಕಾಣಬಹುದಾದ ವಿಶಿಷ್ಟ ಹಾಗು ಅಪರೂಪವಾದ ಸಾಹಿತ್ಯವಾಗಿದೆ.
- ಕುವೆಂಪು ಪಡೆದಿರುವ ಸಾಹಿತ್ಯ ಪ್ರಶಸ್ತಿಗಳನ್ನು ಬೇರಾವ ಭಾರತಿಯ ಸಾಹಿತಿಗಾರನಿಗೂ ಬಂದಿಲ್ಲ.
- ಚಂದಸ್ಸು(ಷಟ್ಪದಿ)ನ್ನು ಬೇರಾವ ಭಾಷೆಯಲ್ಲಿ ನೀವು ಕಾಣಲಾರಿರಿ.